ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಿನ್ನಯ ಪಾದಾ ವಂದಿಸುವೆ ನಾನು ಛಂದದಿಂದಾ ಪ. ಮಂದಾರೊದ್ಧರನ ಪಾದಾ ಸೇವಕರೆಂದೆನಿಸಿದಿ ದುರ್ಮಾಯವಾದಿಗಳನು ಜಯಸಿದಿ ಬ್ರಹ್ಮರಾಯನೆಂದೆನಿಸೀದಿ ಅ.ಪ. ಅಂಜನಿಸುತನೆಂದೆನಿಸಿದೆ ಸಂಜೀವನವ ತಂದಿ ಕಂಜಾಕ್ಷಿಮುಖಿಗೆ ಉಂಗುರವನ್ನಿತ್ತಿ ವನವ ಕಿತ್ತಿ ಸಂಜೀವರಾಯನೆ ದುರುಳ ರಾವಣನ ಸಂಹರಿಸಿದಿ ವಿಭೀಷಣನಿಗೆ ರಾಜ್ಯಭಾರದಲ್ಲಿ ನಿಲ್ಲಿಸಿದಿ ಅಯೋಧ್ಯನಗರಿಗೆ ತೆರಳಿದಿ 1 ಕುಂತಿಯಾ ಕಂದಾ ಕೌರವಾದಿಗಳ ಕೊಂದ ಯುದ್ಧದಲ್ಲಿ ಪ್ರಚಂಡಾ ಭಾರತಿಗೆ ಗಂಡಾ ಲಂಡದುಷ್ಯಾಸನನ ತುಂಡು ತುಂಡುಮಾಡಿ ಸೀಳಿದ ವಿರಾಟ ನಗರದಿ ಸಂಚರಿಸಿದಾ ಕೀಚಕಾದಿಗಳ ಸಂಹರಿಸಿದಾ ಪಾಂಚಾಲಿಗೆ ಸೌಗಂಧೀಕುಸುಮವನೆ ತಂದಾ ಆನಂದಾ 2 ಮಧ್ಯಗೇಹನಲ್ಲಿ ಉದ್ಭವಿಸಿದೆಯೋ ನೀ ಇಲ್ಲಿ ಅದ್ವೈತ ಮತವೆಲ್ಲಾ ಕಾಲಿಲೆ ವದ್ಯೋ ಗೆದ್ಯೋ ಮಧ್ವಮತವೆಲ್ಲ ಉದ್ಧಾರ ಮಾಡಿದಾ ಬದರಿಕಾಶ್ರಮಕೆ ಪುನರಪಿ ಪೋದಾ ವ್ಯಾಸಮುನಿ ಪಾದಕೆ ಅಭಿವಂದಿಸಿದಾ ಉಡುಪಿಯೊಳು ಕಾಳಿಮರ್ಧನಕೃಷ್ಣನು ನಿಲ್ಲಿಸಿದಾ 3
--------------
ಕಳಸದ ಸುಂದರಮ್ಮ
ನೋಡಿದೆ ಹರನಾ ನೋಡಿದೆ ಪ. ಹರನ ಕೊಂಡಾಡಿದೆ ಪಾದಪಾವನ್ನ ರೂಢಿಯೊಳಗೆ ಇಂಥಾ ಈಡಿಲ್ಲ ಶಿವನಾ ಜೋಡಿಶಿರವ ಬಾಗುವೆನಾ ಶಿರವಾ ಅ.ಪ. ಶುಕ ದೂರ್ವಾಸ ರೂಪದ ರುದ್ರಾ ನೀನು ಅವತಾರ ತಾಳಿದ್ಯೊ ವೀರಭದಾ ಮಥನವಾ ಮಾಡಲು ಸಮುದ್ರಾ ನೀನು ವಿಷಪಾನ ಮಾಡಿದ್ಯೊ ಆದ್ರ್ರಾ || ಆಹಾ|| ನೀಲಕಂಠನಾಮವು ಬಂದವು ನಿನ್ನ ನೋಡುವರ ಮನಕೆ ಆನಂದವ ಕೊಡುವುದು ಜಗಕೆ 1 ಕರದಲಿ ಡಮರು ತ್ರಿಶೂಲಗಳಿಂದಾ ನೀನು ಶೋಭಿಪಿಯೋ ಬಲುಛಂದಾ ಗಳದಲ್ಲಿ ದ್ರಾಕ್ಷಾಮಾಲೆಗಳಿಂದಾ ನಾಗಭೂಷಣಾಯಿಂದಾ || ಆಹಾ|| ಶಿರದಾ ಜಡಿಯೋಳು ಗಂಗಿಯ ಧರಿಸಿದ ಧೀರನು ಹರಿಯಾ ರೂಪಕೆ ಮರುಳಾದ ಶಂಕರನ 2 ಕೈಲಾಸಪುರಧೀಶ ವಾಸಾ ನೀನು ಸರ್ವರಮನಕೆ ಉಲ್ಲಾಸ ನೀನು ಸತಿಗೆ ತಾರಕ ಮಂಗಳ ಉಪದೇಶಾ ಸ್ಮಶಾನವನು ಕಾಯ್ದ ಹರಿದಾಸಾ || ಆಹಾ|| ನಂದಿವಾಹನನಾಗಿ ಆನಂದಾದಿ ಮೆರೆಯುವ ಸಿಂಧುಶಯನನ ಕಾಳಿಮರ್ಧನಕೃಷ್ಣನ ತಂದು ತೋರಿಸುವನ 3
--------------
ಕಳಸದ ಸುಂದರಮ್ಮ