ಒಟ್ಟು 31 ಕಡೆಗಳಲ್ಲಿ , 20 ದಾಸರು , 31 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಷ್ಟ ಅದೃಷ್ಟದ ಬಲವು ನೊಡಿ ವಿಸ್ತಾರ ಸೃಷ್ಟಿಯಲಿ ಮುಟ್ಟಿ ಮುದ್ರಿಸಿದ ವಾಕ್ಯಂಗಳು ಕೇಳಿ ಆತ್ಮನಿಷ್ಠ ಜನರು 1 ದೃಷ್ಟಿ ಪುರುಷನ ಸೈನ್ಯಗಳು ಕೇಳಿ ಚಿತ್ತದಲಿ ಮಾನವರು ಅಜ್ಞಾನವೆಂಬಾಶ ಗತಿಯು ಮಾಯಾಮೋಹಕವೆಂಬ ಸುತರು 2 ಬಂಟ ಜನರು ಪ್ರಪಂಚ ಸೈನ್ಯಾಧಿಪತಿ ಸುಖ ದು:ಖದಳ ಭಾರಗಳು3 ಚಂಚಲವಂಚಲಶ್ವಗಳು ಅಹಂ ಮಮತಾ ಗಜಗಳು ಅವಸ್ಥೆಗಳು ಕಾಲಾಳುಗಳು ಮನ್ನೆವಾರರು ಕರಣಗಳು4 ಮೆರೆಯುತಿಹರು ಪಂಚೇಂದ್ರಿಯಗಳು ಸೂಸುತಲಿಹ ಬೇಹಿನವರು ಮೊದಲಾದ ದಶವಾಯುಗಳು 5 ಸುತ್ತಲಿಹ ಪರಿವಾರಗಳು ಸಪ್ತವ್ಯಸನ ಭೂಷಣಂಗಳು ಪಂಚಾಗ್ನಿಗಳು ಪಂಜಿನವರು ಅಷ್ಟಮದವು ಕಾವಲಿಗಳು 6 ಮೂರು ಪರಿಯ ತ್ರಿಗುಣಗಳು ಸೈನ್ಯದ ಪಾರುಪತ್ಯದವರು ಜಾಗ್ರಸ್ವಪ್ನ ಸುಷುಪ್ತಿಗಳು ಛತ್ರ ಚಾಮರ ಭೂಷಣಗಳು 7 ಸಪ್ತಧಾತುದ ಸುಖಾಸನವು ಪಂಚಾತ್ಮಗಳು ನಿಶ್ಯಾನಿಗಳು ತಾಮಸವೆಂಬ ಭೇರಿಗಳು ಅಹಂಕಾರವು ಕಹಳೆಗಳು 8 ಪರಿ ಚಂದ ಚಂದದಲಿ ಇಳಿದಿಹ ಸೈನ್ಯ ಭಾರಗಳು 9 ಜನನ ಮರಣದ ಮಂಟಪವು ಕಟ್ಟಿಹರು ವಿಸ್ತಾರದಲಿ ಚಿಂತಿ ಮುಪ್ಪಳಿಯು ಭ್ರಾಂತಿಗಳಲಿ ಸ್ಥಿತಿ ಸ್ಥಳಲಿಹ ದ್ವಾರಗಳು 10 ದುರ್ಮೋಹ ಬಲದಲಿ ತನುವೆಂಬ ದುರ್ಗಬಲದಲಿ ಕದನ ಮಾಡುವರನುದಿನದಲಿ 11 ಇನ್ನು ಅದೃಷ್ಟದ ಬಲವು ಕೇಳಿ ಚೆನ್ನಾಗಿ ಮನದಲಿ ಸಮ್ಯಜ್ಞಾನೆಂಬಾಶಗತಿಯ ಜ್ಞಾನ ವೈರಾಗ್ಯಸುತರು 12 ಬಂಟ ಜನರು ಬೋಧ ಸೈನ್ಯಾಧಿಪತಿಯ ದೃಢ ನಿಶ್ಚಯ ದಳ ಭಾರಗಳು 13 ನಿರ್ಮಳ ನಿಶ್ಚಳಶ್ವಗಳು ವಿವೇಕವೆಂಬ ಗಜಗಳು ಮಗುಟ ವರ್ಧನರು 14 ಶೂರತನದ ಪ್ರರಾಕ್ರಮರು ಸ್ಮರಣೆ ಚಿಂತನೆ ಧ್ಯಾನಗಳು ಸೂಸುತಲಿಹ ಬೇಹಿನವರು ಯೋಚನೆ ಅವಲೋಕನೆಗಳು 15 ಸುತ್ತಲಿಹ ಪರಿವಾರಗಳು ರತಿಪ್ರೇಮ ಸದ್ಭಾವನೆಗಳು ಲಯ ಲಕ್ಷ್ಯಗಳು ಪಂಜಿನವರು ಮೌನ್ಯ ಮೋನವೆ ಕಾವಲಿಗಳು 16 ನಾದ ಬಿಂದು ಕಳೆಯಗಳು ಸೈನ್ಯದ ಪಾರುಪತ್ಯವರು ಅನಿಮಿಷ ಛತ್ರ ಚಾಮರವು ಏಕಾಕಾರವೆ ನಿಶ್ಯಾನಿಗಳು 17 ಅನುಭವ ಸುಖಾಸನಗಳು ತೂರ್ಯಾವಸ್ಥೆಯ ಭೂಷಣಗಳು ಆನಂದಮಯವೆ ಭೇರಿಗಳು ನಿಶ್ಚಿಂತವೆ ಕಹಳೆಗಳು 18 ಸುಜ್ಞಾನದ ಮೊದಲಾದ ಅಂಗಡಿಯು ಇಳಿದಿಹ ಸಾಲವರಿಯಲಿ ಚಂದ ಚಂದ ಶೃಂಗಾರದಲಿ ಇಳಿದಿಹ ಸೈನ್ಯ ಭಾರಗಳು 19 ಸದ್ಗತಿ ಮುಕ್ತಿ ಮಂಟಪವು ಹೊಳೆಯುತಿಹದು ಸ್ಯೆನ್ಯದೊಳಲಿ ಶೋಭಿಸುವದು ಶೃಂಗಾರದಲಿ 20 ನಿರಾಶವೆಂಬ ಪ್ಯಾಟಿಯಲಿ ಇಳಿದಿಹದು ಸಂತೋಷದಲಿ ದೃಷ್ಟಿ ಪುರುಷನ ಅಟ್ಟಲೆಯ ಕೇಳಿ ನಡೆಯಿತು ಮಾರ್ಬಲವು 21 ಧಿಮಿ ಧಿಮಿಗುಡುತ ನಾದ ಮಾಡಿದರಾನಂದಲ ಗ್ಹೇಳೆನಿಸುತ್ತ ಕಹಳೆಗಳು ಭೋರ್ಗರೆಯುತಲಿ ನಡೆದರು 22 ನಡೆವರು ಅತಿಶಯ ಶೀಘ್ರದಲಿ ಬಾಣ ಬಾಣಗಳು ಮಾಡುತಲಿ ದಣಿದಣಿಸುತಲಿ ನಡೆದರು 23 ತುಂಬಿದ ಸೈನ್ಯ ಭಾರಗಳು ಉಬ್ಬು ಕೊಬ್ಬಿ ನಡೆದವು ನಗುತ ಗೆಲವಿಂದಶ್ವಗಳು ಏರಿ ಹಾರಿಸುತ ನಡೆದರು 24 ಮಗುಟ ವರ್ಧನರು ನಡೆದರು ಅತಿ ಹರುಷದಲಿ ಕಾಲಾಳುಗಳು ಮುಂದೆ ಮಾಡಿ ನಡೆಯಿತು ದಳ ಭಾರಗಳು 25 ಶೂರತನದ ಪರಾಕ್ರಮರು ಮುಂದಾಗಿ ಬ್ಯಾಗೆ ನಡೆದರು ಅಬ್ಬರಿಸುತಲಿ ಮಾರ್ಬಲವು ನಡೆಯಿತವರ ಸೈನ್ಯ ಮ್ಯಾಲೆ 26 ವಿವೇಕವೆಂಬ ಗಜಗಳು ವಾಲ್ಯಾಡುತಲಿ ನಡೆದರು ರಗಡಿಸುತ ಡೋಲಿಸುತಲಿ ನಡೆದರು ಪರಚಕ್ರ ಮ್ಯಾಲೆ 27 ನಡೆವ ಮಾರ್ಬಲದ ಧೂಳಿಗಳು ಮುಸುಕಿತು ಸುವಾಸನೆಗಳು ಗರ್ಜಿಸುವ ಧ್ವನಿಗೇಳಿ ಹೆದರಿತು ಶತ್ರು ಮಾರ್ಬಲವು 28 ಕಂಡು ದೃಷ್ಟರ ಸೈನ್ಯದವರು ಸಿದ್ದವಾದರು ಸಮಸ್ತದಲಿ ತಮ್ಮ ತಮ್ಮೊಳು ಹಾಕ್ಯಾಡುತಲಿ ನಡೆದುಬಂದರು ಸನ್ಮುಖಕೆ 29 ಚಿಂತಿಸುತಲಿ ಪರಾಕ್ರಮರು ಬಂದರು ವೀರ ಕಾಳಗಕೆ ಕಾಳಿ ಭೇರಿಗಳು ಬಾರಿಸುತ ಬಂದರು ಮಹಾಜನರು 30 ಕೂಗಿ ಚೀರುತ ಒದರುತಲಿ ಬಂದು ನಿಂದರು ಪರಾಕ್ರಮರು ಅಹಂ ಮಮತಾ ಗಜಗಳು ನಡೆದು ಬಂದವು ಎದುರಾಗ 31 ಕಾಲಾಳು ಸಹ ಕೂಡಿಕೊಂಡು ರಚಿಸಿ ಬಂದರಶ್ವಗಳು ಕೂಡಿತು ಉಭಯ ದಳವು 32 ಸುವಾಸನೆ ಧೂಳಿಯೊಳಗೆ ಅಡಗಿತು ದುರ್ವಾಸನೆಯು ಅಹಂ ಮಮತಾ ಗಜಗಳು ಕಂಡು ಓಡಿದವು ಹಿಂದಾಗಿ33 ಬೆನ್ನಟ್ಟಿ ವಿವೇಕ ಗಜವು ಹೊಡೆದು ಕೆಡವಿದವು ಧರೆಗೆ ಅವಸ್ಥೆಗಳು ಕಾಲಾಳುಗಳು ಜಗಳ ಮಾಡಿದವು ನಿಮಿಷವು 34 ವಿಚಾರ ಕಾಲಾಳು ಮುಂದೆ ಓಡಿದರು ದೆಸೆದೆಸೆಗೆ ಚಂಚಳವೆಂಚಳಶ್ವಗಳು ಏರಿ ಬಂದರು ರಾವುತರು 35 ಯುದ್ದಮಾಡಿದರರಗಳಿಗೆಯು ಶುದ್ಧಿ ಇಲ್ಲದೆ ಓಡಿದರು ನಿರ್ಮಳ ನಿಶ್ಚಳಶ್ವಗಳು ಏರಿ ಬೆನ್ನಟ್ಟಿ ನಡೆದರು 36 ಚಂಚಳ ವೆಂಚಳಶ್ವಗಳ್ಹರಿಗಡೆದರು ಕಾಲು ಬಲ ರಾಹುತರ ಸಹವಾಗಿ ಕಡೆದೊಟ್ಟಿದರು ಶಿರಸವನು 37 ವೀರರು ಕಾಮಕ್ರೋಧಗಳು ಬಂದರು ಅತಿಶಯಉಗ್ರದಲಿ ಶಮೆ ದಮೆ ವೀರಗಳೊಡನೆ ಕಾದಿ ಮಡಿದರು ಆ ಕ್ಷಣದಲಿ 38 ಬಂಟ ಜನರು ಬಂದರು ಸಿಟ್ಟು ಕೋಪದಲಿ ಭಾವ ಭಕ್ತಿಯ ಬಂಟರೊಡನೆ ಕಾದಿ ಕಾಲಾಳು ಮಡಿದರು 39 ಪ್ರಪಂಚ ಸೈನ್ಯಾಧಿಪತಿಯ ಕೈಸೆರೆಯಲಿ ಹಿಡಿದರು ಬೋಧ ಸೈನ್ಯಾಧಿಪತಿಯು ನಾದಘೋಷವು ಮಾಡಿಸಿದನು 40 ಉಲ್ಹಾಸವೆಂಬ ಸರವರಿಯು ಹಚ್ಚಿಸಿದರು ಸೈನ್ಯದೊಳಲ್ಲಿ ದಯ ಕರುಣ ಭಾಂಡಾರಗಳು ಒಡೆದು ಧರ್ಮ ಮಾಡಿದರು 41 ಪಂಚೇಂದ್ರಿಯಗಳ ಪರಾಕ್ರಮರ ಹಿಡಿದು ಕಟ್ಟಿದರು ಪಾಶದಲಿ ಸ್ಮರಣಿ ಚಿಂತನೆ ಪರಾಕ್ರಮರು ಉಬ್ಬಿದರು ಹರುಷದಲಿ 42 ದಶವಾಯುಗಳ ಬೇಹಿನವರ ಹಿಡಿದು ಬಂಧನವ ಮಾಡಿದರು ಅವಲೋಕನೆ ಬೇಹಿನವರ ಸದ್ಬ್ರಹ್ಮದಲಿ ಸುಖಿಸಿದರು 43 ಸಪ್ತವ್ಯಸನ ಪರಿವಾರಗಳು ರತಿಪ್ರೇಮರೊಡನೆ ಕೂಡಿದರು ಪಂಚಾಗ್ನಿಗಳು ಪಂಜಿನವರು ಪಂಚ ಪಾಲದಿ ಅಡಗಿದರು 44 ಲಯ ಲಕ್ಷಗಳು ಪಂಜಿನವರು ಸಂಜೀವದಂತೆ ಹೊಳೆವರು ಅಷ್ಟಮದವು ಕಾವಲಿಗಳು ಅಡಗಿದವು ಸ್ಥಳ ಸ್ಥಳಲಿ 45 ಮೌನ್ಯ ಮೋನವೆ ಕಾವಲೆಗಳು ತಾವೆ ತಾವಾಗಿ ದೋರಿದರು ತ್ರಿಗುಣರ ಪಾರುಪತ್ಯದವರು ಒಂದು ಸ್ಥಳದಲಿರಿಸಿದರು 46 ನಾದ ಬಿಂದು ಕಳೆಯಗಳು ಮುಟ್ಟಿ ಪಾರುಪತ್ಯ ಮಾಡುವರು ಶತ್ರುರಾಘನ ಭೂಷಣಗಳು ಸೆಳೆದುಕೊಂಡರು ಗಳಿಗೆಯೊಳು 47 ಅವಿದ್ಯ ಮೊದಲಾದಾಗದರಿಂದ ಚೋಳಿಯು ಮಾಡಿದರು ಜನನ ಮರಣದ ಮಂಪಟವು ಸುಟ್ಟು ಸಂಹಾರ ಮಾಡಿದರು 48 ಚಿಂತೆ ಭ್ರಾಂತಿಯ ದ್ವಾರಗಳು ಕಿತ್ತಿ ಬೀಸಾಟಿದರು ಆಶಾಪ್ಯಾಟಿಗೆ ಧಾಳಿನಿಕ್ಕಿ ಲೂಟಿಸಿದರು ನಿಮಿಷದಲಿ 49 ತನು ದುರ್ಗ ವಶಮಾಡಿಕೊಂಡು ಇಳಿಯಿತು ಸೈನ್ಯ ಸುಖದಲಿ ಸದ್ಗತಿ ಮುಕ್ತಿ ಮಂಟಪವು ಕೊಟ್ಟರು ಅಚಲದಲಿ 50 ಯೋಗ ಭೋಗದ ದ್ವಾರದಿಂದ ನಡೆದರು ಮಹಾ ಭಕ್ತಜನರು ಮನ್ನೆವಾರರು ಕರಣಗಳು ಅಭಯವ ಕೊಂಡು ನಡೆದರು 51 ಅಜ್ಞಾನವೆಂಬಾಶಾಗತಿಯು ಮುಕ್ತವಾದಳು ಸುಜ್ಞಾನz ಮಾಯವಾದರು ವೈರಾಗ್ಯದಲಿ52 ದೃಷ್ಟ ಪುರುಷನ ತಂದಿನ್ನು ಇಟ್ಟುಕೊಂಡರು ತಮ್ಮೊಳಲಿ ತನು ದುರ್ಗ ವಶಮಾಡಿಕೊಂಡು ಮುಂದೆನಡೆದರಾನಂದದಲಿ 53 ಅಧಾರ ಪುರ ಬೆನ್ನಮಾಡಿ ನಡೆದರು ಬ್ರಹ್ಮಾಂಡಪುರಕೆ ವಿಘ್ನಹರನ ಬಲಗೊಂಡು ಮ್ಯಾಲೆ ಮಣಿಪುರಕೆ ನಡೆದರು 54 ಅನಾಹತಪುರ ದಾಟಿ ಮುಂದೆ ನಡೆದರು ವಿಶುದ್ಧ ಪುರಕೆ ಸ್ಥಳ ಸ್ಥಳ ಹರುಷ ನೋಡುತಲಿ ನಡೆದರಗ್ನಿ ಚಕ್ರಪುರಕೆ 55 ಮ್ಯಾಲಿಹ ಬ್ರಹ್ಮಾಂಡ ಪುರವು ಹೊಳೆಯುತಿಹದು ಪರಿಪರಿಲಿ ಸಹಸ್ರದಳ ಕಮಲಗಲು ಥಳಥಳಿಸುವದದರೊಳು 56 ಘನ ಬೆಳಗಿನ ಪ್ರಭೆಯುಗಳು ಹೊಳಯುತಿಹುದು ಕಿರಣಗಳು ಹರಿ ಬ್ರಹ್ಮಾದಿಗಳು ವಂದಿಸುವ ಸ್ಥಳ ನೋಡಿ ಗುರು ಕರುಣದಲಿ 57 ಪಿಂಡ ಬ್ರಹ್ಮಾಂಡೈಕ್ಯಪುರದಿ ಒಳಗಿಹ ಹಂಸಾತ್ಮಗತಿಯು ಸಹಸ್ರ ರವಿಕೋಟಿ ತೇಜ ಭಾಸುವಾ ವಸ್ತುಗತಿಯು 58 ವಿಶ್ವ ವ್ಯಾಪಕನೆಂಬ ಸ್ಥಿತಿಯು ಮಹಿಮಾನಂದ ಸ್ಫೂರ್ತಿಯು 59 ದೃಷ್ಟಾದೃಷ್ಟಗತಿಯು ದೋರಿದ ಗುರು ಸದೃಷ್ಟದಲಿ ಗುರು ಕರುಣದ ಕಟಾಕ್ಷದಲಿ ಬೆರೆಯಿತು ಮನ ಹರುಷದಲಿ 60 ಕಂಡು ಮಹಿಪತಿಯ ಜೀವನವು ಧನ್ಯವಾಯಿತು ದೃಷ್ಟದಲಿ ಪರಮಾನಂದ ಸುಪಥದಲಿ ಜೀವನ ಮುಕ್ತ್ಯದರಲ್ಲಿ 61
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇ. ಶ್ರೀ ಹರಿಯ ಸ್ತುತಿ ತಿರುಪತಿ ಶ್ರೀನಿವಾಸ ದೇವರು ಎಡ್ಡಂ ತಿಡ್ಡಂ ಮಾತುಗಳಾಡುವಿದಡ್ಡನು ಶಾಣ್ಯಾನೋಗುಡ್ಡದಿ ಸೇರುತ ಬಡ್ಡಿ ಸಹಿತ ಪರದುಡ್ಡು ಸೆಳೆವರೇನೋ ಪ ಕೊಟ್ಟಾದನ್ನುಣ್ಣುತ ದೇಹವ ಪುಷ್ಟಿಸಿ ಕಾದಿರುಶಕಟ್ಟಿದ ಹಣವನು ಕಷ್ಟದಿ ಕೊಡದಿರೆ ಕುಟ್ಟಿ ಸೆಳೆದು ತರುವಿ ಚಾಳಿ ಕೆಟ್ಟದು ಕಲಿತಿರುವಿ 1 ಶಿಷ್ಟರು ಗುಡಿಯೊಳು ಬಂದರೆ ಅವರನು ಅಟ್ಟಿಸಿ ಹೊರಡಿಸುವಿಮೊಟ್ಟೆಯಲಿ ಹಣ ಕಟ್ಟಿದವರು ಬರೆ ದೃಷ್ಟಿಸಿ ಮನ್ನಿಸುವಿಚಾಳಿ ಕೆಟ್ಟದು ಕಲಿತಿರುವಿ 2 ಕಾಳಗ ನಡೆಸಿರುವಿಶ್ರೀಲೋಲನೆ ಮುಖತೋರಿಸು ಎಂದರೆ ಆಲಯಕ್ಹೋಗೆನುವಿಚಾಳಿ ಕೆಟ್ಟದು ಕಲಿತಿರುವಿ 3 ಹುಚ್ಚುನ ತೆರದೆಲೆ ಮಾತುಗಳಾಡುವಿ ನಿಶ್ಚಯ ಒಂದಿಲ್ಲಾತುಚ್ಛಿಸಿ ಎಲ್ಲವ ನಿನ್ನಲಿ ಬಂದರೆ ಮತ್ಸರ ನಡೆಸಿರುವಿಚಾಳಿ ಕೆಟ್ಟದು ಕಲಿತಿರುವಿ 4 ಶುಭ ದಾಸನಾಗಿದ್ದಿಈ ಸಮಯದೀತನು ಪೋಷಿಸಲು ವಿಷಯಾಸೆಯನಾಗಿದ್ದಿಧನರಾಸಿಯೊಳಗೆ ಬುದ್ಧಿ ಇಂದಿರೇಶನೆ ಕಲಿಸಿದ್ದಿ 5
--------------
ಇಂದಿರೇಶರು
ಈತನೆಂಥಮಹಿಮೆ ನೊಡಿರೆ ರಂಗಯ್ಯ ರಂಗ ಈತನೆಂಥ ಮಹಿಮ ನೋಡಿರೆ ಪ ಈತನೆಂಥ ಮಹಿಮ ಓರ್ವ ಮಾತೆಯುದರದಿ ಜನಿಸಿ ಮತ್ತೊಬ್ಬ ಮಾತೆಕೈಯಿಂದ ಬೆಳೆದು ಗೋಕುಲ ನಾಥ ನವನೀತಚೋರನೆನಿಸಿದ ಅ.ಪ ಕಾಳಕೂಟ ವಿಷವ ಕುಡಿಸಿದ ಆ ಮಾಯದೈತ್ಯಳ ಕಾಲನ ಆಲಯಕೆ ಕಳುಹಿದ ಮಡುವನ್ನು ಧುಮುಕಿ ಕಾಳಿ ಹೆಡೆಮೆಟ್ಟಿ ನಾಟ್ಯವಾಡಿದ ಗೋವುಗಳ ಕಾಯ್ದ ಬಾಲನೆಂದೆತ್ತೊಯ್ಯಲು ಬಂದ ಖೂಳ ಶಕಟನ ಸೀಳಿ ಒಗೆದು ಕಾಳಗದಿ ಧೇನುಕನ ತುಳಿದು ಬಾಲಲೀಲೆಯ ತೋರಿ ಮೆರೆದ 1 ಪರಿಪರಿಯ ಮಾಯದಿಂ ಕಾಡ್ವ ಭೂಭಾರಿಯಾಗಿ ಧರಣಿಜನರತಿಶಯದಿ ಬಳಲಿಸುವ ಪರಮಕಂಟಕ ದುರುಳ ಕಂಸನೆಂಬುವನ ಶಿರವ ತರಿದ ಮಾಧವ ಧರಣಿತಾಪವನ್ನೆ ಕಳೆದು ಸೆರೆಯ ಬಿಡಿಸಿದ ಜನನಿ ಜನಕರ ಮಹಿಮೆ ತೋರ್ದ 2 ಗೊಲ್ಲ ಬಾಲರ ಸಮೂಹವನು ನೆರೆಸಿ ಮನೆಯಲ್ಲಿ ಯಾರು ಇಲ್ಲದ ಸಮಯವನೆ ಸಾಧಿಸಿ ಮೆಲ್ಲಮೆಲ್ಲನೆ ಎಲ್ಲ ಬಾಲರ ಒಳಗೆ ತಾ ಹೊಗಿಸಿ ಪಾಲ್ಮೊಸರು ಸವಿಸಿ ಕಳ್ಳ ಕೃಷ್ಣೆಮ್ಮ ನಿಲ್ಲಗೊಡನೆಂದು ಗೊಲ್ಲಸ್ತ್ರೀಯರು ಗುಲ್ಲುಮಾಡಲು ನಿಲ್ಲದೋಡಿ ತಾ ಪುಲ್ಲನಾಭನು ಎಲ್ಲಿ ನೋಡಿದರಲ್ಲೆ ತೋರುವ 3 ಶಿಶುವು ಈತನೆಂದು ಮುದ್ದಿಸುವಾಗ ಕುಶಲದಿಂದಪ್ಪಿ ಅಧರ ಸವಿಯುವ ಎಂಥ ಶಿಶುವನೆ ಹಸುಮಗಾಗೆಳೆದೊಯ್ದು ರಮಿಸುವ ಮಿಸುಗಗೊಡನಿವ ಕಸಿದು ಭಾಂಡ ದೆಸೆದೆಸೆಗೆ ಎಳೆದು ವಸುಧೆಯೊಳು ತನ್ನ ಅಸಮ ಮಹಿಮೆಯ ಪಸರಿಸಿದ ಹರಿ4 ಮಣ್ಣು ತಿಂದು ತಾಯ ಬಳಿಗೈದಕಂದ ಏನಿದು ಮಣ್ಣು ತಿನ್ವರೆ ಉಗುಳೆಂದೆಶೋದೆ ಕಣ್ಣು ತಿರುವÀಲು ತನ್ನ ಬಾಯೊಳ್ಬ್ರಹಾಂಡ ತೋರಿದ ಭಿನ್ನವಿಲ್ಲದ ತನ್ನ ತಾನು ಅರಿಯದೆಶೋದಿನ್ನು ಈರೂಪವಡಗಿಸೆನ್ನಲು ಸಣ್ಣಮಗುವಾಗಿ ಚಿಣುಫಣುವಿಡಿದುನ್ನ - ತೋನ್ನತ ಆಟವಾಡಿದ 5 ಪರಿಪರಿಯಲಿ ಕಾಡ್ವ ಕೃಷ್ಣನ್ನ ವರದೇವಿ ತಡೆಯದೆ ಸರವೆನಡುವಿಗ್ಹಚ್ಚಿ ತರಳನ್ನ ಸರಸರನೆ ಬಿಗಿದು ಒರಳಿಗ್ಹಾಕಿ ಕಟ್ಟಿ ಮುರಹರನ ಮರೆಯಾಗಲಾಕ್ಷಣ ಊರುತಂಬೆಗಾಲು ಊರಬೀದಿಲಿ ಒರಳನೆಳೆಯುತ ಹೊರಗೆ ಹೋಗಿ ತರಗುಳಿರಕಿಲದೊರಳ ಸೇರಿಸಿ ಮುರಿದು ಶಾಪದಿಂ ಮುಕ್ತಮಾಡಿದ 6 ಪುಂಡತನದಿಂ ಸೊಕ್ಕಿಮರೆಯುವ ಆ ರುಗ್ಮನಿಡಿಕೈಯ ಬಂಡಿಗಾಲಿಗೆ ಕಟ್ಟಿ ಶ್ರೀಧರ ರುಗ್ಮಿಣಿಯನ್ನು ಕೊಂಡು ಗೋಕುಲ ಸೇರಿ ವೈಭವ ನಡೆಸಿ ಯಾದವ ರ್ಹಿಂಡಲಿಗೂಡಿಸಿ ಪುಂಡದೇವಿಯುದ್ದಂಡತನದಿ ಕೈ ಕೊಂಡ ಕಲ್ಯಾಣ ಗಂಡುಗಲಿಗಳ ಗಂಡನೆನಿಸಿದ ಹಿಂಡುದೇವರ ಸಾರ್ವಭೌಮ 7 ಚರಣದಾಸರ ಒಡೆಯ ತಾನಾದ ವರ್ಣಿಸಲಳವಲ್ಲ ಚರಣದಾಸರ ದಾಸನೆನಿಸಿದ ಪುಸಿಯಲ್ಲ ಕೇಳಿರಿ ನರನ ಕುದುರೆಯ ವಾಘೆಯನು ಪಿಡುದು ರಥವ ನಡೆಸಿದ ಕರೆಯಲೋಡಿದ ಸರಸಿಯಲ್ಲಿಗೆ ಭರದಿ ಒದಗಿದ ಕುರುಪಸಭೆಯಲ್ಲಿ ಪರಮ ನಿಗಮಗಳ್ಗಿರುವನಗೋಚರ ಸ್ಮರಿಸಿದವರಿಗೆ ಭರದಿ ನೆರವಾದ 8 ತಾಳಿಬಂದ ನಾರಾಯಣಾವತಾರ ಪಾಲಿಸಲು ಜಗವಂ ಬಾಲಗೋಪಾಲ ಭಕ್ತರಾಧಾರ ಗೊಲ್ಲನೆನಿಸಿ ಲೀಲೆನಡೆಸಿದ ಶಾಮಸುಂದರ ಭವಜಾಲಪರಿಹರ ಕಾಳರಕ್ಕಸರೊಳು ಕಾದಿ ನಿರ್ಮೂಲಮಾಡಿ ಜಗಪಾಲಿಸಿದ ತ್ರಿ ಜಾನಕಿಲೋಲ ಶ್ರೀರಾಮ 9
--------------
ರಾಮದಾಸರು
ಎನ್ನ ಹುಯಿಲು ಕೇಳಬಾರದೆ ಪ. ಸ್ವಾಮಿ ನಿನಗೆ ಎನ್ನ ಮೊರೆಯು ಕೇಳಬಾರದೆ ಪ್ರ-ಸನ್ನ ಚೆನ್ನಕೇಶವರಾಯ ನಿನಗೆ ಅ.ಪ. ಪಾಲಸಾಗರ ಮಧ್ಯದಲ್ಲಿ ಏಳು ಸುತ್ತಿನ ಎಸೆವ ಕೋಟೆನೀಲಮಾಣಿಕ್ಯ ವಜ್ರದಿಂದ ಗಾ[ರೆ]ನಿಕ್ಕಿದ ಸೆಜ್ಜೆ[ಗೃಹ]ಮೇಲೆ ಶೇಷನೊರಗು ಹಾಸಿಕೆ ಶ್ರೀರುಕ್ಮಿಣಿ ಸತ್ಯಭಾಮೆರೊಡನೆ ಸರಸ-ಸಲ್ಲಾಪನೆ ಸ್ವಾಮಿ ಕೇಳು ಸಾಮಗಾನವೇದಘೋಷಣೆ 1 ವಾಲಗ ಅಸುರರ ಕತ್ತರಿಸಿ ಕಡಿವ ಕಾಳಗಭಕ್ತಜನರಿಷ್ಟಾರ್ಥವನ್ನು ಕೊಡುವ ಊಳಿಗ2 ಮುನ್ನ ಈ ಭಾಗ್ಯ ಇದ್ದುದಿಲ್ಲವೆ ಸ್ವಾಮಿ ನಿಮಗೆಬನ್ನಬಟ್ಟು ಧರ್ಮನರಸಿ ಸಭೆಯಲೊದರಲು ಅಕ್ಷಯವೆಂದುಸನ್ನೆಯಿಂದ ಕರಿಯ ಸಲಹಿದೆ ಅಜಾಮಿಳನ್ನ ನಿನ್ನ ಪ-ಟ್ಟಣಕೆ ಕರೆಸಿದೆ ಹಯವದನ್ನ ಎನ್ನ ನೀನು ಸಲಹಲಾಗದೆ 3
--------------
ವಾದಿರಾಜ
ಏನು ಕರುಣವೊ ಸ್ವಾಮಿ | ಧೇನುಕ್ಹನನಾ ಪ ಮಾನ ನಿಧಿ ತೈಜಸನೆ | ಕಾಣಿಸಿದೆ ಪುಷ್ಕರವಾಅ.ಪ. ಮಾಧವ | ತ್ರಿವೇಣಿಯನೆ ಮೀಯುತ್ತಅಜ ಜನಕ ಶ್ರೀವ್ಯಾಸ | ಕಾಶಿ ನೋಡಿದೆವೋ 1 ವ್ರಜ ಸಾರಿ | ದೆಹಲಿ ಪುರವನು ಸೇರಿಭಯ ರಹಿತ ಕುರುಕ್ಷೇತ್ರ | ಸೇರಿ ಚಿಂತಿಸದೇ 2 ರೊಕ್ಕ ರೂಪನು ಹರಿಯ | ಅಕ್ಕರವ ಕಾಣದಲೆಪುಷ್ಕರ್ವೊರ್ಜಿತ ಮನದಿ | ಚಕ್ರಿಧ್ಯಾನದಿ ಮಲಗಿರೇ |ಚೊಕ್ಕ ತೈಜಸನನ್ನ | ಚಿಕ್ಕ ಲಿಂಗವು ಸ್ತಂಭಪುಷ್ಕರದಿ ಪೂಜಿಸುತ | ಸ್ನಾನ ಸೂಚಿಸಿದೇ 3 ಕಾಳಗ ಗೈದು | ವೀರ ಸ್ವರ್ಗವ ಸೇರ್ದೆಸ್ಮಾರಕಗಳಂ ತೋರ್ದೆ | ಶ್ರೀರಮಾಪತಿಯೇ 4 ಸೂರ್ಯ ಕುಂಡದಿ ಪಿತರ | ಕಾರ್ಯಗಳ ನಿರ್ವಹಿಸಿಆರ್ಯರುಕ್ತಿಯಗೊಂಡು | ಕಾರ್ಯ ಮುಂಬರಿಸೇ |ಪ್ರೇರ್ಯ ಪ್ರೇರಕ ಗುರು | ಗೋವಿಂದ ವಿಠ್ಠಲನ ವೀರ್ಯಗಳ ಸ್ತುತಿಸಿ ಮನ | ಸ್ಥೈರ್ಯ ಸಾಧಿಸಿದೇ 5
--------------
ಗುರುಗೋವಿಂದವಿಠಲರು
ಕುಟಿಲವನು ಕಳಿಯೋ ನಿಟಿಲ ನಯನಾ ಪ ದುರ್ವಿಷಯ ಲಂಪಟದಿ ಮುಳಿಗಿ ಘನ ಸಂಕಟಕೆ ಒಳಗಾದೆನೊ ಪ್ರಭುವೇ ಅ.ಪ. ಪಂಚಭೇದ ಜ್ಞಾನವನು ಪಂಚವಿಧ ತೋರೆಂದು ಬಿನ್ನೈಪೆ ಮಂಚಪದಯೋಗ್ಯಾ ವೈರಾಗ್ಯ 1 ಕಾಮಿನಿಯಳಾ ಇಟಕೊಂಡು ಅನ್ಯಳ ಕಾಮಿಸುವುದುಚಿತವೇ ರಾಯಾ ಕಾಮರೂಪದಿಂದೆನ್ನ ಕಡೆಗೆತ್ತಿ ಕಾಯದಿರೆ ಕಾಮಹರನೆಂಬ ಬಿರುದ್ಯಾತಕೊಕಾಮಪಿತನೇ ಕೇಳು ಕಾಲಕಾಲಕೆ ನಿನ್ನ ಕಾಲಿಗೆರಗುವಂತೆ ಮಾಡಿ 2 ಬಿಲ್ವಭಜಕನೆ ಕೇಳು ಮತ್ತೊಂದು ನಾನೊಲ್ಲೆಶಪಥ ಪೂರ್ವಕ ಪೇಳ್ವೆ ಮಿಥ್ಯಮತವೊಲ್ಲೆನೊಒಲ್ಲದ ಸುರನಿಗೆ ಚೆಲ್ವಿಯಾಗಿತ್ತು ಕಂಗೆಡಿಸಿ ಉಳಿಸಿದೆ ಬಿಲ್ಲುಗಾರನೆ ಮಗನ ಕಾಳಗದಿ ಕೆಡಹಿ ತಂದೆ-ವರದಗೋಪಾಲವಿಠಲನ ನೋಡಿ ತೋರಿದೇ 3
--------------
ತಂದೆವರದಗೋಪಾಲವಿಠಲರು
ಗಣಪತೇ - ಪಾಹಿ - ಗಣಪತೇ ಪ ಗಣಪತಿ ಪಾರ್ವತಿ ತನಯಾ | ಭಕ್ತಜನಕೆ ಕೊಡುವುದು ವಿನಯಾ | ಆಹಮನದೊಳು ನೀನಿಂತು | ಅನುಗಾಲ ಹರಿಗುಣಗಣಗಳ ಪೊಗಳುವ | ಮನವ ನೀ ಪಾಲಿಸೋ ಅ.ಪ. ಬಾಲೇಂದು ಮೌಳಿಯ ತನುಜ | ವರಶೈಲಜೆ ಶರೀರ ಮಲಜಾ | ಪುಟ್ಟಿಶ್ರೀಲೋಲ ಕೃಷ್ಣ ರುಕ್ಮಿಣಿಜ | ನೆಂದುಪೇಳುವರು ಮಾರನನುಜಾ | ಆಹಕಾಳಗದೊಳು ಬಲು | ಅಸುರರ ಅಸುಗಳಕೀಲಿಸುತಲಿ ಬಹು | ಭೂಭಾರ ನಿಳುಹಿದ 1 ಸುಜ್ಞ ಭಕ್ತಾಧೀನ ಗಣಪಾ | ಬಂದವಿಘ್ನಗಳ್ಹರಿಸುವೆ ಭೂಪ | ನೀನುಭಗ್ನ ಗೈಸೋ ಮನಸ್ತಾಪಾ | ಇಂಗಿತಜ್ಞ ಬೇಡುವೆ ತವ ಕೃಪಾ | ಆಹಮಗ್ನ ಮಾಡಿಸು ಮನ | ಮೊದಲಾದ ಕರುಣವಯಜ್ಞೇಶ ಶ್ರೀಹರಿ | ಪದದ್ವಯ ವನಜದಿ 2 ಸಿಂಧುರಾಸ್ಯನೆ ಬಹು ಗುಣ | ಪೂರ್ಣಮಂದರೋದ್ಧಾರಿಯೆ ಕರುಣ | ಪಾತ್ರನೆಂದು ಹೊಕ್ಕನೊ ತವ ಚರಣ | ಕಂದನೆಂದು ಕಾಯೆಲೊ ಬಹು ಕರುಣ | ಆಹನಂದ ನಂದನ ಗುರು | ಗೋವಿಂದ ವಿಠಲನಬಂಧುರ ಚರಣವಾ | ನಂದದಿ ತುತಿಪಂತೆ 3
--------------
ಗುರುಗೋವಿಂದವಿಠಲರು
ಚಿಂತಿಸೋ ಭಾರತವ ನೀ ಚಿಂತಿಸೊ ಪ. ಚಿಂತಿಸೊ ಭಾರತ ಮಹಿಮಾ | ಸಿರಿಕಾಂತನೆ ಉತ್ತಮೋತ್ತಮಾ | ಆಹಪಂಕ್ತಿಪಂಕ್ತಿಯೊಳಂತೆ | ಚಿಂತಿತ ಫಲದನಸಂಗ್ತಿ ಪೇಳುವ ಶ್ರುತಿ | ಅರ್ಥ ಭೋಧಿಪುದೆಂದು ಅ.ಪ. ಕಾಳಗ ಸರ್ವ | ಧೀಶನ ಮಹಿಮೆಯ 1 ಅಧಿಭೂತ ಅಧ್ಯಾತ್ಮ ಉಂಟು | ಮತ್ತೆಅಧಿದೈವವೆಂಬುದು ಉಂಟು | ಕೇಳುವಿದಿತವಾಗುವುದಲ್ಲ ಗಂಟು | ಗುರುಮುದದಿಂದ ಬಿಡಿಸಲೀ | ಗಂಟು | ಆಹಅದುಭುತಾರ್ಥಗಳೆಲ್ಲ | ವಿದಿತವಾಗುತ ಹರಿಹೃದಯಾಂತರಂಗನ | ನಿಧಿಧ್ಯಾಸನಕ್ಕವಕಾಶ 2 ಮೂರ್ಬಗೆ ಭಾಷೆಗಳಲ್ಲಿ | ಉಕ್ತಸಾರ ಪ್ರಮೆಯಂಗಳಲ್ಲಿ | ಹರಿ ಉ-ದಾರ ಗುಣಂಗಳು ಅಲ್ಲಿ | ಉಕ್ತಮೀರದೆ ಸ್ಪಷ್ಟತ್ವದಲ್ಲಿ | ಆಹನೇರವಾಗಿಯೆ ಪೇಳ್ದ | ಕಾರಣ ಕರೆವರುಮೂರರೊಳ ಗೊಂದು | ಸಾರಸಮಾಧ್ಯೆಂದು 3 ದರ್ಶನಾಂತರ ಸಿದ್ಧವಾದ | ವೈಷ್ಣ್ವದರ್ಶನ ಪ್ರತ್ಯುಕ್ತವಾದ | ಶೈವದರ್ಶನಾದಿ ಸಿದ್ಧವಾದ | ವಸ್ತುದರ್ಶಿತ ಶಿವನರ್ಚಿಸೀದ | ಆಹ ವಿ-ಮರ್ಶನ ಯೋಗ್ಯ ಸ | ದೃರ್ಶನ ದಿಂದಲಿದರ್ಶನ ಭಾಷೆ ದಿ | ಗ್ದರ್ಶನ ವಿದು ತಿಳಿ 4 ಶೂಲಾಟ್ಟ ಜನಪದವೆಂಬ | ಶಿವಶೂಲವು ಚತುಷ್ಪಥವೆಂಬ | ಕೇಶಶೂಲಿಗಳ್ಪ್ರಮದೇರು ಎಂಬ | ಯುಗಕಲಿಯೊಳಗಿಹರು ಎಂಬೆಂಬ | ಆಹಮೇಲಾದ ಗೂಢಾರ್ಥ | ಜಾಲಗಳೆಲ್ಲವುಓಲೈಸು ಗುಹ್ಯದ | ಭಾಷೆ ಎಂದೆನುತಲಿ 5 ಪರ ಪಾಂಡವಾದಿಗಳ್ಪೆಸರೆಂದು 6 ಸ್ವರವರ್ಣ ವಾಕ್ಯ ಭಾರತ | ಗ್ರಂಥಸರ್ವವು ಮುಖ್ಯ ಪ್ರವೃತ್ತ | ಹರಿಸರ್ವೋತ್ತಮನೆಂಬ ತತ್ವ | ಪೇಳೆಸಿರಿ ವೇದವ್ಯಾಸ ವಿರಚಿತ | ಆಹಪರಮ ಭಕ್ತರು ಪೃಥೆ | ವರ ಉದರೋದ್ಭವಧರ್ಮಾದ್ಯರ ಚರಿತೆ | ಅರುಹುವುದೆನುತಲಿ 7 ಗುಣಗಳು ಭಕ್ತ್ಯಾದಿ ದಶವು | ಇನ್ನುಕರ್ಣದಿಂ ಕೇಳ್ವುದೆಲ್ಲವು | ಹಾಗೆಗುಣಗಳು ಶೀಲ ವಿನಿಯಾವು | ಮತ್ತೆಗುಣಸುವುದು ಮೂರು ವೇದವು | ಆಹಮನು ಪದ ವಾಚ್ಯಗ | ಳೆನಿಸುವುದೀ ಪಂಚಗುಣಧರ್ಮ ವಾಚ್ಯರು | ಪಾಂಡವರೆನಿಪರು 8 ಅಭಿಮಾನಿ ಧರ್ಮಕ್ಕೆ ಎಂದು | ಮನುಅಭಿಧನು ಧರ್ಮಜನೆಂದು | ಇನ್ನುಅಭಿಮಾನಿ ಭಕ್ತ್ಯಾದಿಗೆಂದು | ಭೀಮನಭಿಧನಾಗಿಹನವ ಎಂದು | ಆಹಅಭಿಧನರ್ಜುನ ಶ್ರುತ | ಕಭಿಮಾನ ಎನುತಲಿಶುಭ ಶೀಲ ವಿನಯಕ್ಕೆ | ಅಭಿಮಾನಿಯಮಳರು 9 ಪರಿ ಪತಿ ಪರಿ ಜ್ಞಾನುಳ್ಳ | ಆ ಪೃಥೆ ಸುತರೆಲ್ಲನೀ ಪರಿಭಾವಿಸು | ಆಸ್ತೀಕರೆನುತಲಿ 10 ದ್ರುಪದಜೆ ಧರ್ಮಾದಿ ಐದು | ಜನಸುಪುಣ್ಯ ಶ್ಲೋಕರ ಕಥೆ ಇದು | ಇನ್ನುಉಪರಿಚರಾಭಿಧನೆಂದು | ವಿಷ್ಣುಸುಪ್ರತಿಪಾಧ್ಯನು ಎಂದು | ಆಹಇಪ್ಪರಿ ಮಹಿಮೆಯು | ಪೇತವು ಭಾರತಸುಪ್ರತಿಷ್ಠಿತವಿದು | ಅಬ್ಜಜಾಂಡದಲೆಂದು11 ಭಕ್ತಿವೈರಾಗ್ಯವು ಜ್ಞಾನಾ | ಮತ್ತೆಧೃತಿಯು ಸುಮೇಧಾ ಸುಪ್ರಜ್ಞಾ | ಇನ್ನುಸ್ಥಿತಿ ಬಲಯೋಗವು ಪ್ರಾಣಾ | ಭೀಮಹತ್ತು ಗುಣಾತ್ಮಕ ಮಾನಾ | ಆಹಉತ್ತಮ ಗುಣಿಪರ | ನಾತ್ಮನಾ ಅದರಿಂದತತ್ತನು ಎನಿಸೀಹ | ಪೃಥ್ವಿಪ ಭೀಮನು 12 ಮೂರ್ತಿ ಮೂರ್ತಿ | ಆಹಕರೆಸಿಹ ಶಕುನಿಯು | ಮೂರುತಿ ನಾಸ್ತಿಕ್ಯಸರ್ವದೋಷಾತ್ಮಕ | ರೆನಿಪರಂಧಜರೆಲ್ಲಾ 13 ಹರವನಾತರನು ಎಂದು | ದ್ರೌಣಿಕರೆಸುವನಹಂಕಾರನೆಂದು | ಇನ್ನುಕರಣಗಳ್ಪ್ರಾಣಾದಿ ಎಂದು | ಮತ್ತೆವರ ಸೈನ್ಯ ಪಾಪಗಳೆಂದು | ಆಹಅರಿವುದರ ಪುಣ್ಯ | ಪರವೆಂದು ಪಾಂಡವರಇರುತಿಹ ವಿಷ್ಣುವು | ಅವರ ನಿಯೋಜಕ 14 ಸರ್ವವು ಅಧ್ಯಾತ್ಮನಿಷ್ಟ | ಗ್ರಂಥದುರ್ವಿಜ್ಞೇಯ ಸರ್ವರ್ಗೆ ಎನುತ | ವ್ಯಾಸಸರ್ವಜ್ಞ ತಾನೆಲ್ಲ ಜ್ಞಾತ | ನಿಹಪೂರ್ವ ಮಾರುತ ಹರಿದೂತ | ಆಹಅರಿವ ಗುರು ಗೋವಿಂದ | ವಿಠಲಾನುಗ್ರಹದಿಂದಮರುತಾನುಗ್ರಹದಿಂದ | ಅರಿವರು ಇತರರು 15
--------------
ಗುರುಗೋವಿಂದವಿಠಲರು
ದೇವರಿಂದಲಿ ಭಕ್ತಧಿಕನು | ಭಾವ ಭಕುತಿಯಲಿ ಬಲ್ಲಿದನು ಪ ಅವನ ಉದರದಲಿ ಜಗವಿಹುದು | ಅವನ ತನ್ನೆದೆಯಲ್ಲಿ ನಿಲಿಸಿಹನು 1 ದಾವನಿಂದಲಿ ಜಗಹುಟ್ಟುತಲಿಹುದು | ಅವನ ಜನುಮಕಿವ ತಾರಿಸಿದನು 2 ಕಾಳಗದಲಿ ನಿಸ್ಸೀಮನ ದಾವನು | ಸೋಲಿಸಿದವನೆನು ನದಿಸುತನು 3 ಸಾಗರ ಜಲ ಘನ ತುಂಬಿಕೊಂಡಿಹುದು ಮೇಘ ಮುಖದಿ ಬೆಳೆಯಾಗುವದು 4 ಬಾಳಿಗಿಡವು ಸ್ವಾನಂದದಲಿಹುದು | ಬಾಳೆಹಣ್ಣವು ಜನ ನಲಿಸುವುದು 5 ಸಂಗರಹಿತ ಗುರು ಮಹಿಪತಿ ಸ್ವಾಮಿಯ | ಹಂಗಿಗನನು ತನ್ನ ಮಾಡಿದನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಬಗೆ ಬಗೆ ರೂಪಗಳ ಉರಗ ಶಯ್ಯ ರಂಗಯ್ಯಾ ಪ ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ ಶತಧೃತಿ ತಲೆವಾಗಿ ಚತುರತೆÉಯಿಂದಲಿ ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು ರಿತ ಪುಂಜದಾನವನ ತರಿದೊಟ್ಟಿ ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ 1 ಕೃತು ಭುಕು ದೇವಾರಿತತಿ ಸಂಗತಿಯಿಂದ ಮತಿ ಏಕರಾಗಿ ಸಂಮತದಿಂದ ನಡೆದು ಪ ರ್ವತವ ಕಿತ್ತಿ ತಂದು ಉ ನ್ನತವಾದ ಕ್ಷೀರೋದ ಪತಿಯೊಳಗಿಟ್ಟು ಅತಿಬಲದಿಂದ ನಗುತ ಮಥಿಸಲು ಮಹಾ ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ2 ಗತಮಂದ ಮಾರೀಚ ಸುತ ಹೇಮನೇತುರಾ ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧÀರ ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ 3 ಚತುರ ಮೊಗನವರನುತಿಸಿ ಪಡೆದು ಪ್ರಾಗ ರ್ವಿತನಾಗಿ ನೀಲಲೋಹಿತನ ಭಕುತಿಯಿಂದ ತತುವೇಶಜನರ ಶಕುತಿ ಕುಂದಿಸಿ ತಾನೆ ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ ಗತಿಯೆಂದು ವಂದಿಸಲೆ ಕಂಭದಿ ಬಂದು ಸುರರು ಪೂಮಳೆ ಚೆಲ್ಲೆ 4 ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ ಕೃತಕಾರ್ಯನಾಗಿರೆ ರಿತಮದದಲಿ ತಾ ನುತಿಸಲಾದಿತಿಯ ಗರ್ಭದಲ್ಲಿ ಜ ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ ತತಿ ವಿಕ್ರಮತೀರಿತವಾದ ದಯಾಸಿಂಧು 5 ಸೂನು ಪೂಜಿತನಾಗಿ ಮುನಿಯಿಂದ ಪಿತನಗೋಸುಗ ಉಗ ಳುತ ರೋಷ ಕಿಡಿಗಳಾದ ಈರೈದು ಬಾಹೋ ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ ರುತ ಸತ್ಯವತಿ ನಂದನಕುವರ ಪರುಶ ಪಾಣಿ ಮೃತ ಜೀವಿಗಳ ಬದುಕಿಸಿದ ಮಹಾಧೀರಾ 6 ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ ಅನುಜ ಸಹಿತ ಪೋಗಿ ಮುನಿಯ ವಾ ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ ಪುರವಸಾರಿ ಪಿತನಾಜ್ಞ ತಿಳಿದು ಮಾ ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ ಹಿತದಿಂದ ಭಕ್ತಗೆ ಪಟ್ಟಗಟ್ಟಿದÀ ನೋಡಿ 7 ಶತ್ರಪತ್ರಾರುಣ ದಳಾಯುತ ನಯನಾದೇವ| ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ | ಭಂಗ ಬಲಾ | ಚರಿತಪೂರ್ಣ ಕಂಸಾರಿ ಯುತ ಷೋಡಶಾಖ್ಯ ಯುವತಿಯರ ತಂದ ಅ| ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ | ಸಾರಥಿ ಎನಿಸಿ ಕಾಳಗದೊಳು | ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ | ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ 8 ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ | ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು | ಅಪ್ರಾಕೃತ ಕಾಯ ಶಿಶುವಾಗಿ || ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ | ಚಿತ ಮಾರ್ಗದ ಬಿಡಿಸಿ ನಿ | ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ 9 ವಿಹಿತ ಧರ್ಮ ಮರೆದು | ಮಮತೆ ಜಾತಿ ಸಂಕರ | ವ್ರತದಲ್ಲಿ ನಾನಾ ದುಷ್ಕøತ ತುಂಬಿರಲು ದೇವತೆಗಳು ಮರುಗಿ ಅ | ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ | ಸಿತ ಖಡ್ಗಧರಿಸಿ ರಾ ಶೌರಿ | ಸುಕೃತ ನೆನೆವವರಿಗೆ ಭವಸಾಗರ ತಾರಿ10 ಶ್ರುತಿ ಶೀರ್ಷ ಶ್ರುತಿ ಉಪ | ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ | ವತ ಮೂಲ ರಹಸ್ಯ | ತತುವಾದಿನಾಮನು | ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ | ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ ಪ್ಪುತ ಕೊಂಡಾಡುವರು ನಿಂದು | ಭಕುತಪೂ ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು11
--------------
ವಿಜಯದಾಸ
ನೋಡಿಕೊಳ್ಳಿ ಕರುಣವ ಬೇಡಿಕೊಳ್ಳಿ ವೈರಿಯನು ಚಂ- ಕರುಳ ತೆಗೆವುದ ಪ. ಭಯದಿ ನಡುಗಲು ಕೌರವಾನುಜರನು ಕೆಡಹಿ ರಿಪು ವೀರರೆದೆ ಝಲ್ಲೆನಲು ರಂಗದಿ ಹಾರಿ ಕುಣಿವುತ ಗದೆಯ ಕೈಕೊಂಡಾರುಭಟಿಸುವ ಸಿಂಹನಂದದಿ ಧೀರ ರುದರಾವತಾರ ಸಂಗರ ಧೀರ ಖಳ ಪರಿವಾರ ದಹನನ 1 ಘೋರರೊಂದಾಗೆಸೆದ ಪೂರ್ವದ ಕ್ರೂರ ವಾಗ್ಬಾಣಗಳ ತಿರುಹಿಸಿ ದಾರಧರ್ಷಕ ನೀಚನನು ಕೈ ದೋರಿ ಕರೆವುತ ಕಾಳಗಕೆ ಸುರ ವೈರಿಗಳ ಕಳೆಗುಂದುವಂದದಿ ಚೀರಿ ಚಪ್ಪಳಿಸುತ್ತ ಖಳನನು ಧಾರುಣಿಯ ಮೇಲಪ್ಪಳಿಸಿ ಬಹು ಧೀರತನದಿಂದೆಡೆಯ ಬಗೆವದ 2 ಅಪರಿಗಣ್ಯ ಗುಣಾಬ್ಧಿದನುಧಿಪಹಜಾನ ಮನದಲ್ಲಿ ನೆನೆವುತ ಪಂಕಜವ ನೋಡುತ ಕಪಟ ಸದೆದೆ ದೇವನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪರಿ ಸಾಧನವರ್ಗವಾ ಅರಿಷಡ್ವರ್ಗವೆಂಬ ದುರ್ಗವಾ ತನ್ನಯ ದಿವ್ಯಕರುಣಾರಸವೆಂಬ ಸ್ವರ್ಗವಾ ಕರೆದಿತ್ತಾ ಪರಿವುತ್ತಾ ಪರವುತ್ತಾ ಅರಿಸುತ್ತಾ 1ಕಾಳಗತ್ತಲೆಯ ಯೂಥವಾ ಮನದೊಳಿದ್ದಕೀಳು ಬುದ್ಧಿಯಪರಾಧವಾಮೂಳ ವಾಸನೆಯ ಮುಖವಾ ವೇದಾಂತ ಸಂಮೇಳದಿಂದ ಬಹ ಸುಖವಾಪೇಳುತ್ತಾ ಸೀಳುತ್ತಾ ತಾಳುತ್ತಾ ಕೀಳುತ್ತಾ 2ಸಾರ ಸತ್ಸಂಗದ ದಾರಿಯಾ ಮುಂದುಗಾಣಿಸದಕ್ರೂರ ಕರ್ಮಂಗಳ ಪರಿಯಾ ಘೋರ ಮಾಯೆಯೆಂಬ ತೊರೆಯಾ ಗೋಪಾಲಾರ್ಯಸಾರಾನಂದವೆಂಬ ಪುರಿಯಾತೋರಿಸುತಾ ಹೀರಿಸುತಾ ಹಾರಿಸುತಾ ಸೇರಿಸುತಾ 3
--------------
ಗೋಪಾಲಾರ್ಯರು
ಬಂದಿದೆ ದೂರು ಬರಿದೆ ಪಾಂಡವರಿಗೆ ಪ ಕೊಂದವರಿವರು ಕೌರವರನೆಂಬಪಕೀರ್ತಿ ಅ ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ 1 ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ 2 ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ3 ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ 4 ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ 5 ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ6 ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ 7
--------------
ಕನಕದಾಸ
ಭೀಮಸೇನ ಭಾಮಿನಿಯಾದನು ಪ. ಭೀಮಸೇನ ಭಾಮಿನಿಯಾಗಲುಪ್ರೇಮದ ಸತಿಯ ಕಾಮಿಸಿದವನಝಾಮರಾತ್ರಿಗೆ ಸೀಳುವೆನೆನ್ನುತಸಾಮಜವರದನ ಪಾಡುತಲಿ ಅ.ಪ. ರಾಜಾಧಿರಾಜನು ಗಜಪುರದಲ್ಲಿಜೂಜಾಡಿ ತಮ್ಮ ರಾಜ್ಯವನು ಸೋತುವಿಜಯಮುಖ್ಯ ಅನುಜರೊಡಗೂಡಿಭುಜಂಗಶಾಯಿಯ ಭಜಿಸುತ್ತಸೂಜಿಮೊನೆಯಷ್ಟು ಗೋಜಿಲ್ಲದೆ ಬೇರೆವ್ಯಾಜದಿಂದ ರೂಪಮಾಜಿಕೊಂಡು ಪೋಗೆರಾಜ ಮತ್ಸ್ಯನೊಳು ಭೋಜನ ಮಾಡುತ್ತಪೂಜಿಸಿಕೊಂಬೋ ಸೋಜಿಗವೇನಿದು1 ಮಾನಿನಿ ದ್ರೌಪದಿ ಶ್ರೇಣಿಯೊಳು ಬರುತ ತ್ರಾಣಿ ವಿರಾಟನ ರಾಣಿಯು ಕಾಣುತಧ್ಯಾನಿಸಿ ಯಾರೆಂದು ಮನ್ನಿಸಿ ಕೇಳಲುಮುನ್ನಿನ ಸಂಗತಿ ಪೇಳಿದಳುಆಣಿಮುತ್ತಿನಂಥಾ ವಾಣಿಯ ಕೇಳಲುಕ್ಷೋಣಿಲಿ ನಿನ್ನಂಥ ಜಾಣೆಯ ಕಾಣೆನುಪ್ರಾಣ ನೀನೆನಗೆ ವೇಣಿ ಹಾಕೆನುತಪಾಣಿ ಪಿಡಿದು ಕರೆತಂದಳಾಗ2 ಈಶ ಕೇಳೊ ಪರದೇಶದಿಂದೊಬ್ಬಳುಕೇಶಕಟ್ಟುವಂಥ ವೇಷದಿ ಬಂದಳುಸಾಸಿರಮುಖದ ಶೇಷನೀರೂಪವಲೇಶವು ತಾ ವರ್ಣಿಸಲರಿಯನುವಾಸಮಾಡುವೆನು ಮಾಸಯೀರಾರುಗ್ರಾಸವ ಕೊಟ್ಟೆನ್ನ ಪೋಷಿಸೆಂದಾ ನುಡಿದೋಸನು ಪೇಳಲು ಮೀಸೆಯ ತಿರುವುತಮೀಸಲೆನಗೆಂದು ತೋಷಿಸಿದ 3 ನಾರಿ ಅಕ್ಕನಲ್ಲಿ ಸೇರಿಕೊಂಡಿಹಳುಮೋರೆಯ ನೋಡಲು ಭಾರಿ ಗುಣವಂತೆತೋರುತಲಿದೆ ಎನ್ನ ಸೇರಿದ ಮೇಲನು-ಚಾರಿ ಎನಿಸುವೆ ಮೀರಿದ್ದಕ್ಕೆವಾರೆಗಣ್ಣಿಲೊಂದು ಸಾರಿ ನೋಡ್ಯಾಳೆಂದುಬಾರಿ ಬಾರಿಯಾಕೆ ಮೋರೆ ನೋಡುತಿರೆನೀರೆ ಆ ಕ್ರೂರನ್ನ ಘೋರರೂಪಕಂಜಿಮೋರೆ ತೋರದೆ ಗಂಭೀರದಿಂದಿರೆ 4 ಅಕ್ಕನಿಗೆ ಬಾಚಿ ಹಿಕ್ಕುವ ಸೇವೆಗೆಪುಕ್ಕಟೆ ಅನ್ನಕೆ ಸಿಕ್ಕುವರೆ ನೀನುಚಿಕ್ಕಪ್ರಾಯಕೆನ್ನ ಪಕ್ಕಕ್ಕೆ ಬಂದರೆಸಕ್ಕರೆದುಟಿಸವಿ ದಕ್ಕಿಸುವೆರಕ್ಕಸ ನಿನಗೆ ದಕ್ಕುವಳೆ ನಾನುಮುಕ್ಕಣ್ಣನಾದರು ಲೆಕ್ಕಿಸದಾ ಪತಿಗಕ್ಕನೆ ಬಂದರೆ ತಿಕ್ಕಿ ನಿನ್ನ ಕಾಯದಿಕ್ಕು ದಿಕ್ಕಿಗೆ ಬಲಿಯಿಕ್ಕುವರೊ 5 ಭಂಡಕೀಚಕನುದ್ದಂಡತನ ಕೇಳುಮಂಡೆ ಹಿಕ್ಕುವಳೆಂದು ಕಂಡಕಂಡ ಬಳಿಪುಂಡು ಮಾಡುವನು ಗಂಡಕಂಡರೆ ತಲೆಚಂಡನಾಡುವನು ಖಂಡಿತದಿಮಂಡಲಾಧಿಪನ ಹೆಂಡತಿ ನೀನಮ್ಮಉಂಡಮನೆಗೆ ಹಗೆಗೊಂಡಳೆನ್ನದಿರುಲಂಡನಿಗೆ ಬುದ್ಧಿ ದಂಡಿಸಿ ಪೇಳದೆಹಿಂಡಿಕೊಳ್ಳದಿರು ದುಂಡುಮುಖ 6 ತರಳ ನಿನ್ನಯ ದುರುಳತನದಬೆರಳ ಸನ್ನೆಯು ಗರಳವಾಯಿತೆಸರಳ ಗುರಿಗೆ ಕೊರಳ ಕೊಡದೆಪುರದೊಳಿರದೆ ತೆರಳೊ ನೀಅರಳಮೊಗ್ಗೆಯ ಹೆರಳಿಗ್ಹಾ ಕುತಕುರುಳು ತಿದ್ದುವ ತರಳೆಯ ಕಂಡುಇರಳು ಹಗಲು ಬಾರಳು ಎನ್ನುತಮರುಳುಗೊಂಡರೆ ಬರುವಳೆ 7 ನಿಷ್ಠೆ ಸೈರಂಧ್ರಿಯ ದೃಷ್ಟಿಸಿ ನೋಡಲುನಷ್ಟವಾಗುವುದು ಅಷ್ಟೈಶ್ವರ್ಯವುಭ್ರಷ್ಟ ನಿನಗೆ ನಾನೆಷ್ಟು ಪೇಳಲಿನ್ನುಕಟ್ಟಕಡೆಗೆ ನೀನು ಕೆಟ್ಟಿಕಂಡ್ಯಾಸೃಷ್ಟಿಲಿ ನನ್ನಂಥ ಗಟ್ಟಿಗನ್ಯಾರಕ್ಕದುಷ್ಟರ ಎದೆಯ ಮೆಟ್ಟಿ ಸೀಳುವೆನುಗುಟ್ಟಿಂದ ನಾರಿಯ ಕೊಟ್ಟುಕಳುಹಲುಪಟ್ಟದ ರಾಣಿಯೊಳಿಟ್ಟುಕೊಂಬೆ 8 ಕರವ ಬಾಚಿದನುಬಾಚಿ ಹಿಕ್ಕುವಂಥ ಪ್ರಾಚೀನವೇನಿದುವಾಚನಾಡು ಮೀನಲೋಚನೆ ಎನ್ನಲುಆಚರಿಸಿ ಮುಂದುತೋಚದೆ ಖಳನವಿಚಾರಿಸಿಕೊ ಶ್ರೀಚಕ್ರಪಾಣಿ 9 ಪೊಡವಿಪತಿಗಳ ಮಡದಿ ನಾನಾಗಿಬಡತನವು ಬಂದೊಡಲಿಗಿಲ್ಲದೆನಾಡದೊರೆಗಳ ಬೇಡುವುದಾಯಿತುಮಾಡುವುದೇನೆಂದು ನುಡಿದಳುಕೇಡಿಗ ಕೀಚಕ ಮಾಡಿದ ಚೇಷ್ಟೆಗೆಕಡಲಶಾಯಿ ಕಾಪಾಡಿದ ಎನ್ನನುಆಡಲಂಜಿಕೇನು ಷಡುರಸಾನ್ನದಅಡುಗೆ ರುಚಿಯ ನೋಡುವರೇ 10 ನಡುಗುವೊ ಧ್ವನಿ ಬಿಡುತ ಕಣ್ಣೀರಿಂ-ದಾಡುವ ಮಾತನು ಬಾಡಿದ ಮುಖವನೋಡಿದನಾಕ್ಷಣ ತೊಡೆದು ನೇತ್ರವಬಿಡುಬಿಡು ದುಃಖ ಮಾಡದಿರುಪುಡುಕಿ ನಿನ್ನನು ಹಿಡಿದವನನ್ನು ಬಡಿದು ಯಮಗೆ ಕೊಡುವೆ ನೋಡೀಗತಡವ ಮಾಡದೆ ಗಾಢದಿ ಪೋಗು ನೀಮಾಡಿದ ಚಿಂತೆ ಕೈಗೊಡಿತೆಂದು 11 ಶಶಿಮುಖಿ ಕೇಸರಿ ಗÀಂಧವದಾಸಿಯರಿಂದ ಪೂಸಿಕೊಂಡುಹಾಸುಮಂಚದಲ್ಲಿ ಬೀಸಿ ಕೊಳುತಲಿಗಾಸಿ ಪಡುತಿರೆ ಆ ಸಮಯದಲಿಲೇಸಾಗಿ ನಿನ್ನಭಿಲಾಷೆ ಸಲ್ಲಿಸುವೆಈಸು ಸಂಶಯ ಬೇಡ ಭಾಷೆ ಕೊಟ್ಟೆ 12 ನಳಿನಮುಖಿಯು ಪೇಳಿದ ಮಾತನುಕೇಳಿ ಹರುಷವ ತಾಳಿದನಾಕ್ಷಣಖಳನು ಹೊನ್ನಿನ ಜಾಳಿಗೆಯ[ತೊಟ್ಟಿನ್ನುಳಿಯದಲೆ] ರತಿಕೇಳಿಗಿನ್ನುಕಾಳಗದ ಮನೆಯೊಳಗೆ ಬಾರೆಂದುಪೇಳಿದ ಸುಳುವು ಪೇಳಲು ಭೀಮಗೆಖಳನ ಕಾಯವ ಸೀಳುವವೇಳೆ ಬಂತೆನ್ನುತ ತೋಳ ಹೊಯಿದ 13 ನಾರಿಯಿನ್ಯಾವಾಗ ಬರುವಳೋಯೆಂದುದಾರಿಯ ನೋಡುವ ಚೋರ ಕೀಚಕನುತೋರಿದ ಠಾವಿಲಿ ಸೇರುವ ಬೇಗನೆಊರೊಳಗಾರು ಅರಿಯದಂತೆಕ್ರೂರನು ಮೋಹಿಪತೆರದಿ ಎನಗೆನಾರಿಯ ರೂಪ ಶೃಂಗರಿಸು ನೀನೆಂದುವಾರಿಜಮುಖಿಯ ಮೋರೆಯ ನೋಡಲುನೀರೆ ದ್ರೌಪದಿ ತಾ ನಾಚಿದಳು14 ಬಟ್ಟ ಮುಖಕೆ ತಾನಿಟ್ಟಳು ಸಾದಿನಬಟ್ಟು ಫಣೆಯಲಿ ಇಟ್ಟು ಕಣ್ಣಕಪ್ಪಪಟ್ಟ್ಟೆಪೀತಾಂಬರ ಉಟ್ಟುಕೋ ನೀನೆಂದುಪುಟ್ಟಾಣಿ ಕುಪ್ಪಸ ಕೊಟ್ಟಳಾಗಕಟ್ಟಾಣಿ ಮುತ್ತು ತಾಕಟ್ಟಿ ಕೊರಳಿಗೆಗಟ್ಟ್ಯಾಗಿ ಚಿನ್ನದಪಟ್ಟಿಯುಡುದಾರದಿಟ್ಟನ ಬೆರಳಿಗಿಟ್ಟಳು ಉಂಗುರವಿಟಪುರುಷರ ದೃಷ್ಟಿತಾಕುವಂತೆ15 ಮುತ್ತಿನ ಮೂಗುತಿ ಕೆತ್ತಿದ ವಾಲೆಯುಇತ್ತೆರÀ ಬುಗುಡಿಯು ನೆತ್ತೀಗರಳೆಲೆಚಿತ್ರದ ರಾಕಟೆ ಉತ್ತಮಕ್ಯಾದಿಗೆಒತ್ತೀಲಿ ಶ್ಯಾಮಂತಿಗ್ಹ್ಹೂವು ಗೊಂಡ್ಯಾಹಸ್ತದ ಕಡಗವು ಮತ್ತೆ ಚೂಡ್ಯ ವಂಕಿಮುತ್ತಿನ ಹಾರವು ರತ್ನದ ಪದಕವುಅರ್ತಿಲಿ ನಾರಿಯು ಕುತ್ತಿಗ್ಗ್ಯೆಹಾಕಲುಹಸ್ತಿನಿಯೋ ಈಕೆ ಚಿತ್ತಿನಿಯೊ16 ಮುಡಿಗೆ ಮಲ್ಲಿಗೆ ಮುಡಿಸಿ ಸುಗಂಧತೊಡೆದು ತಾಂಬೂಲ ಮಡಿಸಿಕೊಡುತಪ್ರೌಢನ ಸ್ತ್ರೀರೂಪ ನೋಡಲು ಖಳನುಕೊಡದೆ ಪ್ರಾಣವ ಬಿಡನೆಂದಳುಮಾಡಿದ್ಯೋಚನೆ ಕೈಗೂಡಿತು ಇಂದಿಗೆನೋಡು ಆ ಕೃಷ್ಣನು ಹೂಡಿದ ಆಟವಮಡದಿ ನೀನೆನ್ನ ಒಡನೆ ಬಾರೆಂದುನಡೆದ ಖಳನ ಬಿಡಾರಕೆ 17 ಇಂದುಮುಖಿ ಅರವಿಂದನಯನದ ಮಂದಗಮನೆಯು ಬಂದಳು ಎನ್ನುತನಂದನತನಯನ ಕಂದನ ಬಾಧೆಗೆಕಂದಿ ಕುಂದಿ ಬಹು ನೊಂದೆನೆಂದಹಿಂದಿನ ಸುಕೃತದಿಂದಲಿ ನಿನ್ನೊಳಾ-ನಂದವಾಗಿಹುದು ಇಂದಿಗೆ ಕೂಡಿತುಕುಂದದಾಭರಣ ತಂದೆ ನಾ ನಿನಗೆಚಂದದಿಂದಿಟ್ಟು ನೀನಂದವಾಗೆ18 ಗುಲ್ಲುಮಾಡದಿರೊ ಮೆಲ್ಲಗೆ ಮಾತಾಡೊವಲಭರ್ತಾಕಂಡರೆ ಹಲ್ಲು ಮುರಿವರೊಬಲ್ಲವ ನಿನಗೆ ಸಲ್ಲದು ಈ ಕಾರ್ಯಗೆಲ್ಲಲರಿಯೆ ನೀ ಕೊಲ್ಲಿಸಿಕೊಂಬೆಚೆಲ್ವೆ ಕೇಳು ನಿನ್ನ ಹುಲ್ಲೆಗಣ್ಣ ನೋಟಕೊಲ್ವಬಗೆ ಗೆಲ್ಲಲಾರೆನೆಂದುಗಲ್ಲವ ಮುದ್ದಿಟ್ಟು ಮೈಯೆಲ್ಲ ಹುಡುಕಲುಕಲ್ಲೆದೆಯಲ್ಲ್ಲಿರೆ ಖೂಳ ನೊಂದ 19 ನಾರಿಯೊ ನೀನೇನು ಮಾರಿಯೊ ಇನ್ನೊಂದುಬಾರಿ ನೀ ಎನಗೆ ಮೋರೆ ತೋರಿಸೆಂದಧೀರನ ಸಮೀಪಬಾರದೆ ಓಡುವದಾರಿಯ ನೋಡುತಿರಲಾಗಬಾರದಂಥಾ ಪರದಾರರ ಮೋಹಿಪಕ್ರೂರಗೆ ಈ ರೂಪ ಘೋರವಾಗಿಹುದುಸಾರದ ಮಾತಿದು ಯಾರಾದರೇನೀಗಮಾರನ ತಾಪವ ಪರಿಹರಿಸುವೆ 20 ಸಮೀರಜ ಗುದ್ದಲು ಕೀಚಕಬಿದ್ದನು ಭೂಮಿಲಿ ಗೆದ್ದೆನೆನುತ ಅನಿ-ರುದ್ಧನ ಸ್ಮರಿಸುತಲೆದ್ದ ಭೀಮ 21 ಕೆಟ್ಟ ಕೀಚಕ ತಾ ತೊಟ್ಟ ಛಲದಿಂದಬೆಟ್ಟದಂಥ ದೇಹ ಬಿಟ್ಟಿನ್ನವನಪಟ್ಟಾಗಿ ತೋರುವೆ ದೃಷ್ಟಿಸು ಎನ್ನಲುಭ್ರಷ್ಟನ ನೋಡುವುದೇನೆಂದಳುಕೊಟ್ಟ ಭಾಷೆಯು ಈಗ ಮುಟ್ಟಿತು ನಿನಗೆಕೃಷ್ಣನ ದಯದಿ ಕಷ್ಟವು ಹಿಂಗಿತುಪಟ್ಟಣಕೀಸುದ್ದಿ ಮುಟ್ಟದ ಮುಂಚೆಗುಟ್ಟಲಿ ಪೋಗುವ ಥಟ್ಟನೆಂದ 22 ಅರಸಿ ನಿನ್ನೊಳು ಸರಸ ಬೇಕೆಂದಪುರುಷನ ಜೀವ ಒರೆಸಿ ಕೊಂದೆನುಹರುಷದೀ ಪುರದರಸು ನಮ್ಮನುಇರಿಸಿಕೊಂಡೊಂದೊರುಷವಾಯಿತುಬೆರೆಸಿದ ಸ್ನೇಹಕ್ಕೆ ವಿರಸ ಬಂತೆಂದುಸರಸಿಜಾಕ್ಷಿಯು ಕರೆಸಿ ನಿನ್ನೊಳಗಿರಿಸದಿದ್ದರೆ ಹಯವದನನಸ್ಮರಿಸಿ ಗದೆಯನು ಧರಿಸುವೆ23
--------------
ವಾದಿರಾಜ
ಮುನಿರಾಯರ ಸ್ಮರಣೆ ಮಾಡಿರೊ ಮಧ್ವ ಮುನಿರಾಯರ ಸ್ಮರಣೆ ಪ ಚರಣಕಮಲವ ಭರದಿ ಭಜಿಸುವ ಧರಣಿ ಸುರರಾದರದಿ ಪೊರೆಯುವ ತರಣಿ ಮಂಡಲಗಣವ ಗೆಲಿಯುವ ಹರಿಣವಾಹನನಂಶನಾದ ಅ.ಪ ಕಪಿರೂಪವÀ ಧರಿಸಿ ರಾಮನ ಆಜ್ಞೆಯನು ಶಿರದಲಿ ವಹಿಸಿ ವಾರಿಧಿಯನು ನಿಮಿಷ ಮಾತ್ರದಿ ಲಂಘಿಸಿ ದಶವದನನ ಅಶೋಕವನದಲಿ ಶಶಿಮುಖಿಯ ತಾ ಕಂಡು ವಂದಿಸಿ ದಶರಥ ಸುತನ ವಾರ್ತೆ ಪೇಳಿ ನಿಶಿಚರೇಶನ ಪುರವ ವಹಿಸಿದ 1 ಕುರುಕುಲದೊಳಗೆ ಪುಟ್ಟಿ ಮತ್ಸಾಧಿಪನ ನಗರದೊಳಗೆ ತಾ ಜಟ್ಟಿ ಕಾಳಗದಲ್ಲಿ ಮಲ್ಲರ ತಲೆಯ ಮೆಟ್ಟಿ ದುರುಳ ದುರ್ಯೋಧನನ ಸೇನೆಯು ಬರಲು ಪಶುಗಳ ಕದಿಬೇಕೆಂದು ತಿರುಗಿ ಓಡಿಸುವಂತೆ ಮಾಡಿದ 2 ಪರಬ್ರಹ್ಮ ಅಗುಣನೆಂದು ಜೀವೇಶರಿಗೆ ಬೇಧವೇ ಇಲ್ಲವೆಂದು ಪ್ರಪಂಚಕ್ಕೆ ಸತ್ಯತ್ವ ಯಾವುದೆಂದು ಜಗನ್ಮಿಥ್ಯಾವಾದಿ ಜನಗಳ ನಿಗಮ ಯುಕುತಿಗಳಿಂದ ಖಂಡಿಸಿ ಖಗವಾಹನ ನಾಮಗಿರಿ ಸಿರಿ ನೃಹರಿ ಮೂರುತಿಗರ್ಪಿಸಿದ 3
--------------
ವಿದ್ಯಾರತ್ನಾಕರತೀರ್ಥರು