ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಜಮುಖ ಗಣಪನಂಬುಜಪಾದಕ್ಕೆರಗುವೆ ನಿಜವಾದ ವರವ ನಾ ಬೇಡಿಕೊಂಬೆ ಅಜನರಸಿಗೆ ಅತಿ ಭಕ್ತಿಂದೆ ಭಜಿಸುವೆ ತ್ರಿಜಗವಂದಿತನ ಕತೆಯ ಪೇಳ್ವೆನು 1 ಗೋಕುಲದೊಳಗೆಲ್ಲ ಗೋಪಾಂಗನೇರು ಕೂಡಿ ಏಕವಾಗಿ ಮಾತನಾಡಿಕೊಂಡು ತಾವು ಅ- ನೇಕ ಸಂಭ್ರಮದಿಂದ ಆಡಿ ನೀರಾಟವ ಬೇಕಾದೂಟವನುಂಡು ಬರುವೋಣೆಂದು 2 ಘೃತ ಪರಮಾನ್ನವು ಚಕ್ಕುಲಿ ಗಿಲುಗಂಜಿ ಗುಳ್ಳೋರಿಗೆ ಬುಂದ್ಯ ಭಕ್ಷ್ಯ ಮಂಡಿಗೆ ಫೇಣಿ ಬುತ್ತಿ ಚಿತ್ರಾನ್ನ ಹಪ್ಪಳ ಸಂಡಿಗಂಬೋಡುಪ್ಪಿನಕಾಯಿಗಳು 3 ಕೇಸರಿ ಕುಂಕುಮರಿಷಿಣ ಅಚ್ಚಮಲ್ಲಿಗೆ ಶಾವಂತಿಗೆ ಸರವು ದಿವ್ಯ ಕರ್ಪೂರದಡಿಕೆ ಯಾಲಕ್ಕಿ ಎಲೆಯ ಸುಣ್ಣ ಪತ್ರೆ ಲವಂಗ ತಬಕಿಲೆ ತಂದರು 4 ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ ಅರಳು ಮಲ್ಲಿಗೆ ಸಂಪಿಗೆ ಮುಡಿದು ದಿವ್ಯ ಕೊರಳ ಕಟ್ಟಾಣಿ ಸರಿಗೆ ಚಂದ್ರಹಾರ ಪು- ತ್ಥಳಿ ಪಚ್ಚಪದಕಗಳ್ಹೊಳೆಯುತಲಿ 5 ಕಡಗ ಕಂಕಣ ದ್ವಾರ್ಯ ನಾಗಮುರಿಗೆ ವಂಕಿ ಬಿಡಿಮುತ್ತಿನ ಗೊಂಡ್ಯ ಬಾಜುಬಂದು ದೊಡ್ಡ ವಾಲೆ ಸರಪಳಿ ಮುತ್ತು ಬು- ಗುಡಿ ಚಂದರ ಬಾಳ್ಯ ಹೊಳೆಯುತಲಿ 6 ಮುದ್ದು ಮೋರೆಗೆ ತಕ್ಕ ಮುಕುರ್ಯ ಬುಲಾಕನಿಟ್ಟ ವ- ಜ್ರದ್ಹರಳು ಬಲಮೂಗಿನಲಿ ದಿವ್ಯ ತಿದ್ದಿ ಮುಂಗುರುಳು ಮುತ್ತಿನ ಬೊಟ್ಟು ಕುಂಕುಮ ಪದ್ಮದ್ಹೂವಿನ ಕುಬುಸಗಳ ತೊಟ್ಟು 7 ಹರದಿಯರೆಲ್ಲರು ಪರಮ ಸುಭ್ರಮದಿಂದ ಜರದ ಪೀತಾಂಬರ್ವಜ್ಜರದ ಪಟ್ಟಿನಿಟ್ಟು ಪರಿ ಬಣ್ಣ ಸೀರೆಗಳುಟ್ಟು ಕಾಲ- ಲಿ ರುಳಿ ಕಾಲುಂಗರ ಗೆಜ್ಜೆ ಪೈಜಣವು 8 ಚೆಲ್ವೆಯರೆಲ್ಲರು ಉಲ್ಲಾಸದಿಂದಲಿ ಘುಲ್ಲು ಘಲ್ಲೆಂದು ಹೆಜ್ಜನಿಡುತ ತಾವು ಮಲ್ಲೆ ಮಲ್ಲಿಗೆ ಪುನ್ನಾಗ ಸಂಪಿಗೆ ತೋಟ ಅಲ್ಲಲ್ಲೆ ನಿಂತು ನೋಡುತ ಬಂದರು 9 ಕುಂದ ಮಂದಾರ ಸುಗಂಧಿಕ ದವನವು ಬಂಗಾರದಂಥ ಕ್ಯಾದಿಗೆಯಮಲ ಚೊಕ್ಕ ದುಂಡುಮಲ್ಲಿಗೆ ಪಾರಿಜಾತ ತಾವರೆಮೊಗ್ಗು ಚೆಂದ ಚೆಂದದ ಶಾವಂತಿಗೆ ವನವು 10 ಹತ್ತಿ ಆಲದ ಮರ ಅಡಕೆ ತೆಂಗಿನ ಮರ ಅ- ಶ್ವತ್ಥ ಕಪಿತ್ಥ ಕಿತ್ತಳೆ ಹಲಸು ನೋಡು- ತ್ತತ್ತಿ ದ್ರಾಕ್ಷಿ ನೀರಲ ನಿಂಬೆ ದಾಳಿಂಬ್ರ ಪಕ್ವಾದ ಜಂಬು ಸೀತಾಫಲವು 11 ಎಲೆದೋಟದೊಳಗೆ ಯಾಲಕ್ಕಿಗೊನೆಯು ನೋಡೆ ಕಳಿತ ಮಾವಿನ ಹಣ್ಣು ಕದಳೀ ಫಲ ಬೋರೆ ಶ್ರೀತುಳಸಿ ವನಗಳಲ್ಲೆ ಅರಿಷಿಣಂಜೂರಿ ಔದುಂಬ್ರ ಫಲ 12 ಚಕೋರ ಚಾತಕ ಗಿಳಿ ಚಕ್ರವಾಕ ಪಕ್ಷಿ ಗಿಳಿಹಿಂಡು ಗಂಡೆರಳೆ ಗರುಡ ಹಂಸವು ನೋಡೆ ಹರಿ ಬ್ರಹ್ಮ ತಂದೆ ಮಕ್ಕಳು ಏರೋವಾಹನವು 13 ಕಸ್ತೂರಿಮೃಗ ಪುನುಗಿನ ಬೆಕ್ಕು ಪಾರ್ವಾಳ ಜಕ್ವಕ್ಕಿ ಕೊಳಲ್ಹಕ್ಕಿ ಸಾರಂಗವು ಚಾರಿ ಕುಕ್ಕುಟ ಭೈರುಂಡ ಎಡಖಗ ಬಲಕ್ಕಾಗಿ ಕೊಟ್ಟವು ಶಕುನ ಜಲಕ್ರೀಡೆಗೆ 14 ಕಾಳಿಮರ್ದನ ಕೃಷ್ಣ ಹಾರಿದ ಮಡುವಿದು ಕಾಳಿಂಗನೋಡಿಸಿ ಕಳೆದ ವಿಷ ಕೆಟ್ಟ ನೋಡೆ ಅಮೃತಕೆ ಮಿಗಿಲಾಗಿದೆ ಈ ಜಲ ಏನು ಪುಣ್ಯ ಮಾಡಿದ್ದಳೊ ಯಮುನಾ 15 ನೀಲ ಮಾಣಿಕ್ಯ ಮುತ್ತು ಕೂಡಿಸಿದಂತೆ ತ್ರಿವೇಣಿ ಆ- ದಳು ತಾ ಪ್ರಯಾಗದಲಿ ತ್ರಿವೇಣಿ ಭಾಗೀರಥಿ ಸರಸ್ವತಿ ಕೂಡಿ ಸಂಗಮಳಾಗಿ ಪೋಗೋಳು ಕಾಶಿ ಪಟ್ಟಣಕೆ 16 ಕಮಲಸಖನ ಪುತ್ರಿ ಕಾಮಿತ ಫಲಕೊಟ್ಟು ವರುಣನರ್ಧಾಂಗಿ ನೀ ವರವ ಕೊಡೆ ತಾಯೆ ಯಮಧರ್ಮರಾಯನ ಭಗಿನಿ ನಿಮ್ಮ ಸ್ನಾನ- ಫಲಕೊಟ್ಟು ಪಾಲಿಸೀಗೆಂದೆನುತ 17 ನೋಡುತ ನಗುತ ಮಾತಾಡುತ ನಿಂತರು ಓಡುತಾವೆ ಜಲ ಸೆಳವಿನಿಂದ ಆಹ ಮಾಡುವೋಣ್ಹ್ಯಾಗೆ ಸ್ನಾನವ ನಾವು ಎನುತಲಿ ಜೋಡಿಸಿ ತಮ್ಮ ್ಹಸ್ತ ಮುಗಿದರಾಗ 18 ಉಟ್ಟ ಸೀರೆಗಳನು ಬಿಟ್ಟು ಕುಪ್ಪಸ ಕಟ್ಟಿ ಇಟ್ಟರು ಉಸುಕಿನ ಮಿಟ್ಟಿಯಲ್ಲೇ ತಾವು ಮಿತ್ರೆಯರೆಲ್ಲ ತಮ್ಮ ಸ್ತನಗಳ್ಹಿಡಕೊಂಡು ಥಟ್ಟನೆ ಇಳಿದರು ನದಿಯೊಳಗೆ 19 ವಾರಿಗೆ ಗೆಳೆತೇರು ವರ ಮೋಹನಾಂಗೇರು ಮೋರೆಗೆ ಅರಿಷಿಣ ಕುಂಕುಮ್ಹಚ್ಚಿ ತಮ್ಮ ನೀರಜಾಕ್ಷಿಯರೆಲ್ಲ ನಿರ್ಮಲವಾಗಿದ್ದ ನೀರೊಳು ನಿಂತು ಮೈ ತೊಳೆದರಾಗ 20 ಭಾರಿ ಸೆಳವಿನೊಳು ಬತ್ತಲೋಲ್ಯಾಡುತ ಸಾರಸಮುಖಿಯರು ಸರಸದಿಂದ ಚೆಲ್ಲೆ ದ್ವಾರ್ಯ ಕಂಕಣಕರ ಬೊಗಸೆಲಿಂದ ನೀರು ತುಂಬಿ ಚೆಲ್ಲ್ಯಾಡುತಲಿ 21 ಸರ್ಪನಂಥ ಹೆರಳೊಲಿವುತ ನೀರೊಳು ಮುತ್ತಿನ ಸರಪದಕ್ಹೊಳೆಯುತಲಿ ಬುಕ್ಕ್ಹಿಟ್ಟು ಗಂಧ ಮಲ್ಲಿಗೆ ಪಾರಿಜಾತವು ತೆಪ್ಪದಂದದಲಿ ತೇಲಾಡುತಿರೆ22 ಅಂಬುಜಮುಖಿಯರು ಸಂಭ್ರಮದಿಂದಲಿ
--------------
ಹರಪನಹಳ್ಳಿಭೀಮವ್ವ
---------ದಾನು ಮುಕ್ತಿ ಭಕ್ತಿ --- ಪ -----------ಭಾರತನವು ಬಿಟ್ಟು 1 ಕಮಲ ರಥದಲ್ಲಿ ಧರಿಸಿ ಮೇಲುವಲ್ಲಿ ಹಣೆಯ ಕಟ್ಟಿ ಮೇಲೆ ಪಟ್ಟಿ ನಾಮಗಳಿಟ್ಟೂ 2 ನೀ ----------ದೇಹದಿಯಂಥ ವೇಗದಿಂದ ನಡೆದು ಸಂಸಾರ ಗೃಹಧರ್ಮ ಹಿಡಿದಾನಂತಕಾಲ---------ನೆಂದು 3 ಭಾರಮಾರ್ಗ ಹಿಡಿದು ಅತಿಧೀರನಾಗಿ ಗ್ರಾಮದೊಳಗೆ ಮೂರು ಎರಡು ಮನಿಗಳ ಬಿಟ್ಟು ಮೂರು ಮೂರು ಮನಿಗಳ್ಹಾದಿಲೆ 4 ಸ್ಥಿರಹೊನ್ನ ವಿಠ್ಠಲನ್ನ ದಿವ್ಯ ಚರಣದಲ್ಲಿ ಚಿತ್ತವಿಟ್ಟು ಪರಮ ಹರುಷದಿಂದ ಪಾಡುತ ಭಕ್ತಿ ಸಿದ್ಥಿಯಲ್ಲಿ 5
--------------
ಹೆನ್ನೆರಂಗದಾಸರು
ಏನೆಲೆ ಸಖಿ ವಾನರ ಮುಖಿ ನೀನು ಒಳ ಒಳಗೆ ಮಾಡಿದ ಯೋಚನೆ ಪ ಹಳೆಯ ಜೌಳಿಗಳು ಘಳಿಲನೆ ತಂದಿಟ್ಟು ಘನವ ಪೇಳಿಕೊಂಬೆ 1 ಭಕ್ಷ್ಯ ಭೋಜ್ಯ ನಿನ್ನ ಕುಕ್ಷಿ ತುಂಬಿದಾರು ಲಕ್ಷ್ಯವಿಲ್ಲದೆ ನಮ್ಮಾ- ನಾಕ್ಷೇಪಿಸುತ್ತಿರುವೆ 2 ಹಪ್ಪಳಾವು ಹತ್ತು ಹೋಳಿಗೆ ಇಪ್ಪತ್ತು ತಪ್ಲೇಲಿ ತಿಳಿ ತುಪ್ಪ ತಪ್ಪದೆ ಮಾಯವಾಯ್ತು 3 ಬಡವರಮ್ಮ ನಾವು ಬಡಿವಾರವೆಮಗಿಲ್ಲ ನಡುಬೀದಿಗೆ ಕಾಲ- ಚಾಚದಿರತ್ತಿಗೆ 4 ಜಲಜಾಕ್ಷ ಗುರುರಾಮ | ವಿ- ಠಲನಾ ಸ್ಮರಿಸುತ್ತಾ ಕಲಹಕಾರಿ ನೀನು ಎಲೆಯ ನೋಡಿವುಣ್ಣೆ 5
--------------
ಗುರುರಾಮವಿಠಲ
ಕೇಳಿರೋ ಕೇಳಿರೋ ಆಲಿಸಿ ಜನರು | ಕಲಿಯುಗದೊಳಗ ಒಡಿಯ ನಾಟವನು ಪ ಫುಲ್ಲನಾಭನ ಭಕ್ತಿ ಎಳ್ಳೆನಿತಿಲ್ಲಾ | ಹುಲ್ಲು ಕಲ್ಲು ದೈವಕ ಎರಗಿ ನಡೆವರು | ಬೆಲ್ಲವು ಕಹಿಯಾಗಿ ಸಿಹಿ ಬೇವಾಯಿತು | ಅಲ್ಲ-ಹುದೆಂಬುದು ಬಲ್ಲವರಾರು 1 ಸಾಧು ಸಂಗಕ ಕಾಲು ಏಳುವು ನೋಡಿ | ಸಾಧಿಸಿ ದುರ್ಜನರಾ ನೆರಿಯ ಸೇರುವರು | ಮಾಧವ ನಾಮ ಉಣ್ಣಲು ಮುಖರೋಗ | ಭೂದೇವಿ ನಿಸ್ಸಾರವಾದಳು ನೋಡಿ2 ನೀಚರಿಗುದ್ಯೋಗ ಊಚರಿಗಿಲ್ಲ | ಆಚಾರ ಸದ್ಗುಣ ಆಡವಿ ಸೇರಿದವು | ಯೋಚಿಸಿ ಒಬ್ಬರಿ ಗೊಬ್ಬರು ಕೇಡಾ | ಭೂಚಕ್ರದೊಳು ಎಲ್ಲಾ ತೀರಿ ತಿಂಬುರೈಯಾ3 ಇಲಿಯು ಹೆಗ್ಗಣ ಹೆಚ್ಚಿ ತೋಳ ಬಡಿದು | ದಾಳಿಯಿಟ್ಟವು ಲಂಕಾ ಯೋಧ್ಯದ ನಡುವೆ | ಇಳಿಯೊಳು ಹತ್ತೆಂಟು ಕಾಲ-ವೀಪರಿಯಾ | ತಲಿ ತಲಿಗಿನ್ನು ನಾಯಕರಾಗಿ ಇರಲು 4 ಮ್ಯಾಲೊಬ್ಬ ನಿಂದಲಿ ಸುಖದಲಿ-ರಲಿಕ್ಕೆ | ಕುಲ ಅನ್ಯ ಇಲ್ಲದ ರಾಜೇಶನಾ | ಕಾಲಿಲಿ ಸರ್ವ ಸಂಕರ ವಾಗುತಿರಲು | ಹೊಳೆವನು ಗುರುಮಹಿಪತಿ ಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕ್ಷಮಿಸೆನ್ನ ದೋಷಗಳ-ಕ್ಷಿಪ್ರದಿ ಹರಿ ಪ ಕ್ಷಮೆಯನ್ನು ಧರಿಸಿದ ಕಮಲಾ ನಿವಾಸನೆ ಅ.ಪ. ಕರಣ ತ್ರಯದಿ ಕಾಲ-ಹರಣವಿಲ್ಲದೆ ಪಾಪಾ ಚರಣೆಯಿಂದೋಷದ ಭರಣಿಯಾದೆನು ಹರಿ 1 ಮಾಡಬಾರದ ಪಾಪ ಮಾಡುವೆನನುದಿನ ಮೂಢನ ಸುಕೃತವ ನಾಡಿ ತೋರಿಸಲೇಕೆ 2 ಹರಿಗುರುಹಿರಿಯರ-ಜರಿದು ಸಜ್ಜನರನು ತೊರೆದು ದುರ್ಜನರೊಳು ಬೆರೆದು ಪಾಮರನಾದೆ 3 ಸರ್ವಂಸಹಾಧಿಪ ಸರ್ವಚೇತನ ದೀಪ ಸರ್ವಾಪರಾಧವ ನಿರ್ವಹಿಸುವ ಭೂಪ 4 ದುರಿತ ವೈರಿಯೆ ನಿನ್ನ-ಮೊರೆಹೊಕ್ಕಮನುಜಗೆ ದುರಿತದುಃಖಗಳುಂಟೆ-ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ಚರ್ಯಗಳಿಂದನಾ ಗ್ರಹಬಾಧನೆಯು ಎಲ್ಲಿನೋಡು ಪ ಗುರುಕರುಣಾಪೂರ್ಣರಾಗಿರುತ ನೀನಿರುತದಲಿ ಪರಮ ಪ್ರೀತಿ ನಿಷ್ಟ ಗರಿಷ್ಟರಾಗಿ ಪರಮ ಹರುಷದಿ ಇರುವ ಭಾವಜ್ಞರನ ಪೊರೆವ ಭಾವಗವೇ ಗ್ರಹಗಳಾಗಿ 1 ಗ್ರಹವೇ ನಿಮ್ಮನುಗ್ರಹವು ಇಹಪರಕ್ಕೆರಡಕ್ಕೂ ಸಹಾಜವಾಗಿ ತೋರುವವು ಶಬ್ಧಮಾತ್ರ ಮಹಾದೇವ ನಿಮ್ಮ ಕರುಣಮಹಿಮೆಯನ್ನು ಈ ಪರಿ ಮಹಿಯೊಳಗೆ ಚರಿಸುವಂಥಾ 2 ಆವನಾರನ ಗತಿಯು ಆವನಾರನ ರೀತಿಯು ಆವನಾರನ ಸ್ಥಿತಿಯು ಅರಿತು ಇರುವಾ ಭಾವ ಭಾವಗಳಿಂದ ಫಣಿಯ ಲಿಖಿತಗಳಂತೆ ಯಾವ ಕಾಲ-----ಇರುವಾ 3 ಸೂತ್ರಧಾರನು ನೀನು ಸಕಲವನು ಇನ್ನು ಈ ಗಾತ್ರಗಳಿಗೆಲ್ಲ ಕಾರಣ ಕರ್ತನಾಗಿ ಮಾತ್ರದಲಿ ಪ್ರಾಣಿಗಳನ್ಯತಾಥ್ಯ------- ಪಾತ್ರ ನೀನಲ್ಲವೇನೈ 4 ದೂರು-----ತ್ರವೆ ಅವರಿಗಾಧಾರ ನೀನಾಗಿ --------------------------- `ಹೊನ್ನವಿಠ್ಠಲ' ದನುಜಮರ್ದನದೇವ --------------------- 5
--------------
ಹೆನ್ನೆರಂಗದಾಸರು
ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ ಕಾರಣನೆಲ್ಲೂ ಭಾಮೆ ಇಚ್ಛೆಯಿಂದಲಿ ಬಂದನಿಲ್ಲೆ 1 ಮಚ್ಛಲೋಚನೆ ನಗುತ ಅಚ್ಚಮುತ್ತಿನ ದ್ವಾರ್ಯ ಮುಚ್ಚುಕದವ ತೆಗೆಯದೆ ಭಾಮೆ ಅಚ್ಚುತನ ಕೂಡ ವಿನಯದಿ 2 ಮದಗಜಗಮನೆ ಕೇಳೆ ಗಜವರದನು ನಾನೆ ಕದವ ತೆಗೆಯೆ ಕಮಲಾಕ್ಷಿ ಭಾಮೆ ಮುದದಿ ನೋಡೆನ್ನ ನಿರೀಕ್ಷೆ 3 ಗಜವರದನೆ ಗಜವ ವಧೆ ಮಾಡಿದವನು ನಿನ್ನ ನೆಲೆಯ ಬಲ್ಲವರು ನಾವಲ್ಲ ಕೃಷ್ಣ ಕದವ ತೆಗೆಯೋರ್ಯಾರಿಲ್ಲ4 ಉದಕÀದೊಳು ಮುಣುಗಿ ಬ್ಯಾಗ ಮದಕದಿಂದ್ಹಯನ ಕೊಂದು ತವಕದಿ ವೇದವ ತಂದೆ ನಾನು ಭಾಮೆ ಮತ್ಸ್ಯ ನಾನೆ 5 ಹೊಳೆವೊ ಮತ್ಸ್ಯನಾದರೆ ಶರಧಿ ಹುಡುಕುತ ಹೋಗೊ ನಿನಗಾವಾಸಸ್ಥಾನಯಿದಲ್ಲ ಕೃಷ್ಣ ಜಲವೆನ್ನ ಮನೆಯೊಳಗಿಲ್ಲ 6 ಅಂಬುಧಿ ಮಥಿಸಿ ಅಮೃತ ತಂದು ಸುರರಿಗಿಟ್ಟು ಮಂದರವ ಬೆನ್ನಲಿ ತಾಳಿದೆನೆ ಭಾಮೆ ಸುಂದರ ಕೂರ್ಮನು ನಾನೆ 7 ಸುರರಸುರರ ಯುದ್ಧ ಬಿಟ್ಟು ಮೋಹಿನ್ಯಾಗಲ್ಲಿ ನಡೆ ನಾ ಸ್ತ್ರೀರೂಪ ನೋಡೋಳಲ್ಲ ಕೃಷ್ಣ ಛಲದಿಂದ್ವಂಚಿಸು ಹೋಗವರನೆಲ್ಲ 8 ಮಣ್ಣು ಕೆದರುತಲ್ಹೋಗ್ಹಿ- ರಣ್ಯಾಕ್ಷನ್ನ ಸೀಳಿ ಮನ್ನಿಸ್ಯವನಿಯ ತಂದೆ ನಾನೆ ಭಾಮೆ ವರಾಹ ನಾ ಬಂದೀನೆ 9 ವರಾಹ ನೀನಾದರೆ ಗರಿಗಂಹರವ ಸೇರೊ ಮನೆಗೆ ಬರುವೋದುಚಿತಲ್ಲ ಕೃಷ್ಣ ಮೆಲುವ ಬೇರೆನ್ನ ಮನೆಯೊಳಿಲ್ಲ 10 ತರಳ ಕರೆಯಲು ಕಂಬ ಒಡೆದಸುರನ ಒಡಲ ಕಡು ಕೋಪವನ್ನು ತಾಳಿದನೆ ಭಾಮೆ ವರಲಕ್ಷ್ಮೀನರಸಿಂಹ ನಾನೆ 11 ಕರುಳಾಧಾರಕ ಕೇಳೊ ಕರಾಳವದನಕ್ಕಂಜುವೆನು ಕಡುಕೋಪ ಎನ್ನೊಳು ತರವಲ್ಲ ಕೃಷ್ಣ ತರಳರಂಜುವರು ಲಕ್ಷ್ಮೀನಲ್ಲ 12 ಅಂಜೋದ್ಯಾತಕೆ ಚಿಕ್ಕ ಕÀಂದ ವಟುವು ಚೆಲ್ವ ಸುಂದರ ವಾಮನನು ನೋಡೆ ಭಾಮೆ ಬಂದೆನ್ನ ಗುಣವ ಕೊಂಡಾಡೆ 13 ಕಪಟ ರೂಪದಿ ದಾನ ತ್ರಿಪಾದ ಭೂಮಿ ಬೇಡಿದ ವಿಪರೀತ ಮಾಯವ ಕಂಡವಳಲ್ಲ ಕೃಷ್ಣ ಅಪರ್ಮಿತ ಗುಣ ಬಲಿ ಬಲ್ಲ 14 ಸರಸಿಜಮುಖಿ ಕೇಳೆ ನಿರುತ ಜಪತಪಾಚರಿಸಿ ಪರಶುರಾಮನು ನಾ ಬಂದೆನೆ ಭಾಮೆ ಶರಥ ಮಾಡದಿರೆನ್ನೊಳು ನೀನೆ 15 ನಿರುತ ನಿಷ್ಠೆಯ ಬಲ್ಲೆ ಗುರುತು ಮಾತೆಯ ಕೊಂದೆ ಸರಸವಾಡುವೋಳು ನಾನಲ್ಲ ಕೃಷ್ಣ ಶರಥÀ ಕ್ಷತ್ರಿಯರಲ್ಲಿದು ಹೋಗೆಲ್ಲ 16 ಎರಡೈದು ಶಿರಗಳ ಕಡಿದು ಜಾನಕಿದೇವಿ ಒಡಗೊಂಡಯೋಧ್ಯವನಾಳಿದೆನೆ ಭಾಮೆ ಪೊಡವಿಗೊಡೆಯ ರಾಮ ನಾನೆ 17 ಅಡವಿ ಅರಣ್ಯ ತಿರುಗಿ ಮಡದಿಗಪನಿಂದ್ಯವ ಕಟ್ಟಿ ಅಡವಿಗಟ್ಟ್ಯಂತಃಕರಣವಿಲ್ಲ ಕೃಷ್ಣ ಬಿಡು ನಿನ್ನ ಸುಳ್ಳು ವಚನವಿದೆಲ್ಲ 18 ಯದುವಂಶದೊಳು ಜನಿಸಿ ವಧೆಮಾಡಿ ದೈತ್ಯರ ನಿರ್ಭಯದಿಂದ ಬೆಳೆದೆನೆ ಭಾಮೆ ಮಧು ಮುರಾಂತಕÀ ಕೃಷ್ಣ ನಾನೆ 19 ಕಲಹ ಮಾಡುತ ಕಾಲ- ಯಮನಿಂದಲೋಡಿ ಬಂದು ನಿರ್ಭಯದಿಂದ ಬೆಳೆಯಲು ನಿಂದೆಲ್ಲ ಕೃಷ್ಣ ಮಲಗಿದ ಮುಚುಕುಂದ ಬಲ್ಲ 20 ನಿಗಮ ನಿಂದ್ಯವ ಮಾಡಿ ಬಗೆಯಿಂದ ತ್ರಿಪುರರ ಚೆದುರೆಯರನು ಒಲಿಸಿದೆನೆ ಭಾಮೆ ಸುಗುಣ ಶರೀರ ಬೌದ್ಧ ನಾನೆ 21 ತ್ರಿಪುರ ಸತಿಯರನೆಲ್ಲ ವಶಮಾಡಿದಂಥ ಶೂರ ವಸನರಹಿತಾಗಿ ತಿರುಗೋದÀಲ್ಲ ಕೃಷ್ಣ ಶಶಿಮುಖಿಯರು ನಗುವರೆಲ್ಲ 22 ಚೆಲುವ ತುರುಗನೇರಿ ಹೊಳೆವೋ ಕತ್ತಿಯ ಶೂರ ಖಳರ ಮರ್ದನ ಮಾಡುವೆನೆ ಭಾಮೆ ಥಳಥಳಿಸುವ ಕಲ್ಕ್ಯ ನಾನೆ23 ಕಲಿಯ ಸಂಹಾರ ಕೇಳೊ ನಿನ್ನ ಕತ್ತಿಗಂಜುವರ್ಯಾರೊ ಕಟಿಪಿಟ್ಯೆನ್ನೊಳು ತರವಲ್ಲ ಕೃಷ್ಣ ಕಲಿಗಳೆನ್ನರಮನೆಯೊಳಿಲ್ಲ 24 ಜಾಂಬವಂತನ್ನ ಗೆದ್ದು ತಂದೆ <
--------------
ಹರಪನಹಳ್ಳಿಭೀಮವ್ವ