ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ಇವನು ನಿನ್ನಾ ಪ ಜಗವ ನಿರ್ಮಿಸಿ ಪಾಲಿಸಿ ಅಳಿಸುವ ಅಗಣಿತ ಸುಗುಣಾ ಭರಣನೆ ಇವನು ಅ.ಪ ಬೆಣ್ಣೆಯ ಕದ್ದನು ಸಣ್ಣವನಿಹ ಬಹು ಚಿಣ್ಣರ ಕೂಡುತ ಗೋಗಣ ಕಾಯುವ ಮನ್ಮನ ಪುಥ್ಥಳಿ ಕಳಿಸುವದಾಗದು ಎನ್ನುವ ನುಡಿಗಳ ಬದಿಗಿಡು ತಾಯಿ ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ ಉನ್ನತ ರಕ್ಕಸಿ ಪೂತಣಿಯನ್ನಿವ ಮಣ್ಣನು ಕಂಡರು ಕಂಸನದೂತರು ಪೂರ್ಣಾನಂದನು ಸರಿ ಇವನಮ್ಮ 1 ಜಾರ ಚೋರ ಸುಕುಮಾರನು ಸುಂದರ ನಾರೇರ ವಲಿಸಿ ಸೇರಿದ ನಿಶಿಯಲಿ ಪೋರನೆಂಬ ಮನ ದೂರವಗೈದುಗ ಭೀರ ಮಹಿಮ ಜಗ ಸಾರನೆಂದರಿಯೆ ಭಾರಿಗಿರಿಯನೆತ್ತಿ ಊರಿಗೆ ಊರನು ಸೇರಿಸಿ ಪೊರೆದಿಹಪಾರಮಹಿಮ ಜಂ ಭಾರಿದರ್ಪಹರ ಪೋರನೆ ಬಿಡುಬಿಡು ನಿಗಮ ಸಂಚಾರನೆ ಖರೆಯೆ 2 ಕಾಲ್ಗಳು ಸೋಕಲು ಶಕಟನು ಬಿದ್ದನು ಶೀಳುತ ಕೊಕ್ಕನು ಬಕನಂ ಕೊಂದನು ಕಾಳಿಯ ತುಳಿಯುತ ಗರ್ವವ ನಿಳಿಸಿದ ಲೀಲಾಜಾಲದಿ ಜ್ವಾಲೆಯ ನುಂಗಿದ ಬಾಲರು ಕೇಳಲು ಆಲಯತೋರಿದ ಪಾಲಿಸಿ ವರುಣನ ತಂದೆಯ ಕಂದನ ಲೋಲನೆ ಸರಿ ಜಗಮೂಲನು ಕೇಳೆ 3 ನೀರಜ ನಾಭಗೆ ಗೊಲ್ಲತಿಯ ಗಣ ಬೀರಲ್ ಸಾಧ್ಯವೆ ಮೋಹವ ನೆಂದಿಗು ಶ್ರೀರತಿದಾಯಕ ಕೊಳ್ಳುವನೇ ರತಿ ಭವ ತಾರಕ ಶುಭ ಶೃಂಗಾರ ಪೂರ್ಣ ಪರಿವಾರದಭೀಷ್ಠವ ಖರೆ ಭೂರಿದಯಾಮಯ ನಾರಾಯಣನಿವ ದೋಷ ವಿದೂರ 4 ಮೆಲ್ಲಗೆ ಬಾಯೊಳು ಎಲ್ಲವ ತೋರಿದ ಮಲ್ಲನು ಸರ್ವರ ವಲ್ಲಭ ಸಿದ್ಧವು ಗೊಲ್ಲನ ವೇಷದಿ ಇಲ್ಲಿಹನಮ್ಮ ಇಲ್ಲವೆ ಸಮರಿವಗೆಲ್ಲಿಯ ಸತ್ಯ ಮಲ್ಲರ ಮರ್ದಿಸಿ ಕೊಲ್ಲುತ ಕಂಸನ ನಿಲ್ಲಿಸಿ ಧರ್ಮವ ಕಾಯುವ ನಮ್ಮ ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ 5
--------------
ಕೃಷ್ಣವಿಠಲದಾಸರು
ಮುಮುಕ್ಷುಗಳನು ಉಪಚರಿಸುವವ ನೀನೆ ಹರಿಯೆ ಪ ಅಪ್ಪಾ ಮಾಂಗಿರಿ ರಂಗ ಅಪರಾಜಿತ ನೀನೆಂಬುದ ತಿಳಿದೂ [ಉಪಾಧಿಗೊಳಗಾದೆ ನಿನ್ನ ಮರೆತು] ಅ.ಪ ಇನ್ನೆವರ ಒಮ್ಮನದಿ ಯೋಚಿಸಿದ ಫಲವಾಗಿ ನಿನ್ನ ಮಹಿಮೆಯನರಿತೆ ಸಂಪೂರ್ಣವಾಗಿ 1 ರನ್ನಹಾರಗಳನ್ನು ಕಟ್ಟಿರುವೆ ಸಾಲಾಗಿ ನಿನ್ನ ಮೈಬಣ್ಣವನ್ನು ಮುಚ್ಚುವುದಕಾಗಿ 2 ಸಕಲಾಂಗಗಳು ಹೊಳೆವ ಮುತ್ತು ಮಾಣಿಕ್ಯಗಳು ಉಡಿಗೆಯಾಗಿರಲೇನು ಕಾಂಬುವಂಗಗಳು 3 ಅದರಿಂದ ನಿನ್ನ ಮೈ ಮುಖವು ಕೈಕಾಲ್ಗಳು ಕಪ್ಪು ಕಾಣಿಸದಿರದು ಹೇಳುವೆನು ಕೇಳಾ 4 ನೂರಾರು ಯೋಜನದ ದೇಹ ನಿನ್ನದು ತಾಯೆ ನಿನ್ನ ಕೆಲಸಗಳೆಲ್ಲಾ ಅತಿ ವಿಚಿತ್ರದ ಮಾಯೆ 5 ಬೆಳಕ ಬಾಯೊಳಗಿಟ್ಟು ಮತ್ತು ಉಗುಳುವೆ ತಾಯೆ ನಿನ್ನ ವಿಸ್ತೀರ್ಣವನು ನಾನಳೆಯಲರಿಯೆ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿ ವಿಮುಖನಾದ ಮನುಜಶ್ವಪಚ ಶ್ರೇಷ್ಠನು | ಹರಿವಲುಮೆ ಕಂಡ ನರನು ಪರಮ ಶಿಷ್ಠನು ಪ ಹರಿಯ ಕಾಣದ ಕಣ್ಣು ನೌಲಗರಿಯಾ ಕಣ್ಣವು | ಹರಿಯ ಕಥೆ ಕೇಳದ ಶ್ರವಣಾ ಬಧಿರ ಶ್ರವಣವು | ಹರಿಯ ನಿರ್ಮಾಲ್ಯ ಕೊಳದ ಘ್ರಾಣ ಲೆತ್ತಿ ಘ್ರಾಣವು | ಹರಿಗೆರಗದಂಗ ತ್ರಾಣ ಬೆಚ್ಚಿನ ತ್ರಾಣವು 1 ಹರಿಯನ್ನದ ಮುಖವು ರಾಜ ಬಿರದ ಮುಖಗಳು | ಹರಿಸೇವೆ ಮಾಡದ ಕೈಯ್ಯಾ ಕೀಲಿ ಕೈಗಳು | ಹರಿಯಾತ್ರೆ ಇಲ್ಲದ ಕಾಲು ಹೊರಸಿನ ಕಾಲ್ಗಳು | ಹರಿ ವಿಷಯ ವಿಲ್ಲದ ವಿದ್ಯೆದೊಂಬನ ವಿದ್ಯಗಳು 2 ಹರಿಗರ್ಪಣೆ ಅಲ್ಲದಯಜ್ಞ ವೇಷಿಕ ಕರ್ಮವು | ಬರುದೇ ಮೌನ ವೃತಗಳೆಲ್ಲ ಬಕನ ಧರ್ಮವು | ಹರಿಭಕ್ತಿರಹಿತ ತಪದಿ ಬಿಡದು ಜನ್ಮವು | ಗುರು ಮಹಿಪತಿಸ್ವಾಮಿ ಭೋಧಿಸಿದನು ಮರ್ಮವು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು