ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಚತುರ ನಿನ್ನ ಮಗನು ಪ ಎಂಥ ವಂಚಕನೆ ಯಶೋದೆ ಅ.ಪ ಹೃದಯದಲ್ಲಿಹನೇ ಯಶೋದೆ 1 ಕಾರ್ಯಾಕಾರ್ಯ ಗಮನವಿಡದೆ ಧ್ಯೆರ್ಯದಲಿ ನುಡಿದ ಸರಸವ 2 ಮುಂದೆ ಗತಿಯ ಕೊಡುವೆ ನಿಮಗೆ ಎಂದು ಪೇಳಿದೆನೆ ಯಶೋದೆ 3 ಅಂದ ನುಡಿಗೆ ಮನವ ಜರಿದು ಸಂಧಿ ಮಾಡಿದೆನೆ ಯಶೋದೆ 4 ಕ್ಷಿಪ್ರದಲ್ಲಿ ತೋರೆ ಇವನ ಸುಪ್ರಸನ್ನಮುಖಿ ಯಶೋದೆ 5
--------------
ವಿದ್ಯಾಪ್ರಸನ್ನತೀರ್ಥರು
ತಂದೆ ವಿಜಯರಾಯ ವ್ಯಾಳಿಗೆಬಂದ್ಯೊ ವಿಜಯರಾಯ ||ಹಿಂದೇಸು ಜನ್ಮವು ಮುಂದೇಸು ಜನ್ಮವುಒಂದು ತಿಳಿಯದೆಂದಿಗು ಯೆನ್ನಯ ಪ ಸೂರ್ಯನ ಸುತನಂತೆ ಅಲ್ಲಿ ಮಹಶೌರ್ಯ ದೂತನಂತೆ ||ಕಾರ್ಯಾಕಾರ್ಯವು ತಿಳಿಯದೆ ನಿನ ಪರಿಚಾರ್ಯನ ಯೆಳೆತಿರೆ ಭಾರ್ಯಳು ಮೊರೆಯಿಡೆ 1 ಮೋದ ತೀರ್ಥರೆಂ-ದೊದರಿದಳೊದರಿದಳ್ ವಿಜಯರಾಯರೆಂದು 2 ಕರಗಳನೇ ಕಟ್ಟಿ ಯೆಳೆಯುತಿರೆದೊರೆಗಳನೇ ಮುಟ್ಟಿ ||ಸಿರಿ ಮೋಹನ ವಿಠಲನ ಪದವ ತೋರಿಧರಿಗೆ ತಂದುಬಿಟ್ಟೆ ಕರುಣಾಳುವೆ ಯೆನ್ನ 3
--------------
ಮೋಹನದಾಸರು