ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಕಾದವನೇ ಹರಿದಾಸ ಪ ಏಕಾದಶಿ ಉಪವಾಸ ಮಾಡಿದರೆ ನಾಕಿಗಳಿಗೆ ಆಗದು ವಿಶ್ವಾಸ ಅ.ಪ ಏಕಾದಶಿಯೆ ಯೋಗಸಿದ್ಧಿ ಏಕಾದಶಿಯೆ ಭೋಗಪ್ರಾಪ್ತಿ ಏಕಾದಶಿಯಲಿ ಎರೆಡು ಕಾರ್ಯಲ- ಕ್ಷೀಕಾಂತನ ಭಜನೆ ರಾತ್ರಿ ಜಾಗರವು 1 ಉಪವಾಸ ವ್ರತವೆ ವ್ರತವು ಜಪಶೀಲರ ತಪವೇ ಸುಖವು ಅಪರಿಮಿತವಾದ ಸತ್ಕರ್ಮಗಳೆಲ್ಲಾ ಚಪಲದಿ ಓಡುವುದುಪವಾಸದ ಹಿಂದೆ 2 ಅನ್ನಸಾರು ಕಾಯಿಪಲ್ಯ ಒಬ್ಬಟ್ಟು ತಿನ್ನುವುದೇ ಪ್ರತ್ಯಕ್ಷ ನರಕವು 3 ಘನಮೋದದಲಿ ಪವನಜನಾದ ಭೀ- ಮನೇ ಸ್ವೀಕರಿಸಿರುವನು ಪೂರ್ವದೊಳು 4 ವಿಕಳ ಬುದ್ಧಿಯಾಗದೆ ಸಮಯದಿ ತನ್ನ ಸುಕುಮಾರನ ಕಡಿಯಲೆತ್ನಿಸಿದನು 5 ನಿರಾಹಾರವು ನಡೆಯಲುತ್ತಮವು ಎರಡನೇಯದು ಮೇಲ್ಪೇಳಿದುದು ಪರಿಪರಿ ಅನ್ನೋತ್ಸವದಿ ಕೆಡುವನು 6 ಮಾನವ ಕರಾಮಲಕ ಮುಕ್ತಿಯಲಿ ಸುಖಪಡುವನು 7
--------------
ಗುರುರಾಮವಿಠಲ
ಶಿಸ್ತಿಗೆ ಅಲಂಕಾರವು ಪ ಗೃಹಸ್ಥರಲ್ಲಿ ವ್ಯಾಜ್ಯವು ನಾಸ್ತಿ ಭಕ್ಷ್ಯ ಭೋಜ್ಯವು ಅ.ಪ ನೀರು ತುಪ್ಪ ಬಡಿಸುತ 1 ಹಪ್ಪಳ ಮುರಿದು ಹಾಕಿಸಿ ಅತಿಥಿಗಳನು ನೂಕಿಸಿ ತುಪ್ಪದ ಸೌಟು ತೋರಿಸಿ ಉಪ್ಪು ಚಟ್ನಿ ಹೆಚ್ಚಿಸಿ 2 ಮೂರು ಗಂಟೆಯೂಟವು ಮೂಢತನದೋಡಾಟವು ವೋರೆ ವೋರೆ ನೋಟವು ಸಾರು ಅನ್ನಾ ಕಾಟವು 3 ಎಣ್ಣೆ ವಗ್ಗರಣೆ ಎಲ್ಲಕು ಅನ್ನ ಹೊತ್ತಿ ಇರುವುದು ಸನ್ನೆ ಸೈಯಿಗೆಯೇ ಬಲ 4 ಸಾಲದಡಿಗೆ ಕಾಯಿಪಲ್ಯ ಬೇಯಲಿಲ್ಲ ವೊಂದಾದರು ರಾಯ ಗುರುರಾಮವಿಠಲ ಬಲ್ಲ ಉ- ಪಾಯಗಾರರು ಬೀಗರು 5
--------------
ಗುರುರಾಮವಿಠಲ