ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವತಾರತ್ರಯ (1) ಕರುಣದೆನ್ನನು ಕಾಯಬೇಕಯ್ಯಾ ಕದರೂರ ರಾಯಕರುಣದೆನ್ನನು ಕಾಯಬೇಕ್ಕೆಹರಸುರಾದಿಗಳಿಂದ ವಂದ್ಯನೇದುರಿಥ ಪರಿಹರಿಸಿಹ ಪರಕೆ ನೀ-ನ್ಹರುಷದಲಿ ಸಾಧನ ಮಾಡಿ ಪ ಅಂಜನಿಯ ಗರ್ಭದಲ್ಲಿ ಜನಿಸಿದೆಯೊ ಶ್ರೀರಾಮನಂಘ್ರಿಕಂಜದಲ್ಲಿಹ ಭ್ರಮರನೆನಿಸಿಯಾಅಂಜದಂಬುಧಿಯ ದಾಟಿ ಸೀತೆಯ -ನಂಜಿಸುವ ರಾವಣನ ಬಲಗಳಭಂಜಿಸಿದಿ ಧರೆಯೊಳಗೆ ತೇಜಃಪುಂಜನಾಗಿಹ ಪ್ರಭುವೆ ಎನ್ನನು 1 ಅಖಿಳ ಕುರುಬಲಅಂತಕನಿಗೊಪ್ಪಿಸಿದಿ ಜಗದಾ -ದ್ಯಂತ ಸುಜನರಿಗಿತ್ತಿ ಸಂತಸಸಂತತೆನ್ನನು ಬಿಡದೆ ಪವನನೆ 2 ಮಧ್ಯಗೇಹನಲ್ಲಿ ಪುಟ್ಟಿದೆಯೊ ಸಚ್ಛಾಸ್ತ್ರ ಪಠಿಸಿ ಆ -ಪದ್ಧ ಮತದವರನ್ನು ಕುಟ್ಟಿದಿಯೊಉಧ್ವನುತ ರಮಾಪತಿ ವಿಠ್ಠಲನಸದ್ಯ ಮನದಲಿ ತೋರಿ ಕೊಟ್ಟೆ -ನ್ನುದ್ಧರಿಸಿ ಭವಕಡಲ ದಾಟಿಸೊಮಧ್ವಮುನಿ ಸಜ್ಜನತ್ಪ್ರಸಿದ್ಧನೆ 3
--------------
ರಮಾಪತಿವಿಠಲರು
ಪಾದ ನನ್ನದಯ್ಯಾ ಚನ್ನಕೇಶವ ಪ ಲಕ್ಷ್ಮೀಕಾಂತ ಜಾಜಿಪುರೀಶ ನೀನೆ ಕಾಯಬೇಕಯ್ಯಾ ಅ.ಪ ಮನೆಯಾಸೆ ಬಲು ಬಾಧಿಸುತಿದೆ ತನು ಮಡದಿಮಕ್ಕಳ ಮೋಹವೆಂದಿದೆ ಮನದ ಚಪಲತೆ ಸಾಧಿಸು ತಂದೆ ಇನಿತಾಸೆ ಬಿಡಿಸು ಬುದ್ಧನಂತೆ 1 ನಿನ್ನನೆ ನೆನೆವಂತೆ ಮಾಡು ಕೇಶವನೆ ಜನ್ಮವಿದು ಸಾಕು ಕರೆಯೋ ಮಾಧವನೆ ನಿನ್ನ ಪಾದದಲಿಟ್ಟು ಪಾಲಿಸು ಮಧುಸೂದ ನನೆ ಜಾಜಿಪುರಿಯ ಕೇಶವ ಶೆಲ್ವಪಿಳ್ಳೆ 2
--------------
ನಾರಾಯಣಶರ್ಮರು