ಒಟ್ಟು 11 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದುಶೇಖರಾ ಮನ್ನಿಸೋ ದಯದಿಂದ ಶಂಕರಾ ಪಪಂಚವಕ್ತ್ರನೆ ಪಾಲಿಪುದು ತ್ರಿಪಂಚನೇತ್ರನೆಪಂಚಭೂತ ತನು'ದೆನಗೆ ಪಗೆಯಾಗಿದೆ ನೋಡಯ್ಯಾವಂಚಕನು ನೀನೆಂದೆನ್ನ ವಾರೆನೋಡಬೇಡಯ್ಯಾಸಂಚರಿಪ ಮನಕೆ ಮನುವ ತೋರಿ ನೋಡಬೇಡಯ್ಯಾಪಂಚಶಿರದ ನಾಮಾಧೀಶ ಪರಮ ಕೃಪೆಮಾಡಯ್ಯಾ 1ವ್ಯಾಳಭೂಷಣನೆ ಬಿನ್ನಪವನ್ನು ಕೇಳು ಈಶನೆಏಳು 'ಷಯ ವ್ಯಸನಾದಿಗಳಿಂದೇಳಿಗೆಯ ಘನವಾದಾಳಿವರಿದಾ ಕರಣಾತಡಿಗೆ ಧೈರ್ಯ ಕಲಿತನವಾತಾಳಲಾರೆನಯ್ಯಾ ಎನ್ನ ತನು'ನವಗುಣವಾಫಾಲನೇತ್ರ ಬಿಡಿಸೊ ನಿನ್ನ ನೆನ'ಗಿತ್ತಭಯವಾ 2ಕಾಮನಾಶನೆ ಕರುಣಿಸಯ್ಯಾ ವ್ಯೋಮಕೇಶನೆಹೇಮ ಭೂ'ು ಹೆಣ್ಣಿಗಾಗಿ ಹೇಳಲೇನ ನೊಂದೆನೈತಾಮಸಗುಣಂಗಳಿಂದ ತಾಪಹೆಚ್ಚಿ ಬೆಂದೆನೈಕಾ'ುನಿಯರೆಡೆಯೊಳೆನ್ನ ಕಾಡಬೇಡವೆಂದೆನೈನಾಮರೂಪಕ್ರಿಯಾರ'ತ ನೀನೆ ಗತಿಯೆಂದೆನೈ 3
--------------
ತಿಮ್ಮಪ್ಪದಾಸರು
ಇದೇ ಸೀತಾ ಮಹಾಮಂತ್ರ ಭವಾಬ್ದಿ ದಾಂಟುವಾ ಮಂತ್ರಾ ನಿತ್ಯ ಅನುದಿನಾ ಪಠಿಸುತಿರುವಾತಾ ಮುಕುತಿಪಂಥ ಪಡೆವ ನಿರುತಾ ಇದೇ ದೇಹದಲಿ ತಾನಿರುತಾ 1 ವಿರಾಗಿಯಾಗಿ ಮನದಲ್ಲಿ ಪರಾನಂದಾತ್ಮರೂಪವನು ತಿಳಿಯುವಾ ಚೈತನ್ಯರೂಪವನು ಇದೇ ಗೀತಾಪರಣಫಲ ತಾ ಪ್ರಶಾಂತಾಕಾಮನಾಗಿರುತಾ 2 ನಿಧಾನಾ ನೊಂದಮನನಿಗಿದೆ ಪ್ರಧಾನಾ ಶಾಸ್ತ್ರ ಸಂಚಯ ದೇ ಪ್ರಧಾನಾ ಷಟ್‍ಶಾಸ್ತ್ರ ಸಂಚಯದೇ ಸದಾ ಧ್ಯಾನಾ ಇದೇ ಮನನಾ ಮನುಜನೇ ಇದುವೆ ಸುಖತಾಣಾ 3 ತಿಳಿ ನೀ ಗೀತೆಯಾ ಬೋಧಾ ಅಳಿ ನೀ ಜೀವಪರ ಬೇಧಾ ತಿಳಿ ನೀ ಪರಮಾತ್ಮಪದ ಬೋಧಾ ಪಡೆವ ಮೋದಾ ಶ್ರವಣದಿಂದಾ ಇದೇ ಶ್ರೀ ಶಂಕರನ ಬೋಧಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಈ ಸುಖವ ಬಿಟ್ಟನ್ನು ಬೇರೆ ಸುಖವುಂಟೆ ವಾಸುದೇವನ ಭಜಿಸಿ ಸುಖಿಯಾಗು ಮನವೆ ಈ ಸುಖವ ಬಿಟ್ಟಿನ್ನು ಬೇರೆ ಸುಖವುಂಟೆ ಪ ಕಾಮಕ್ರೋಧಾದಿಗಳ ಕಡೆಗೊತ್ತಿ ನಿರತ ನಿ ಷ್ಕಾಮನಾಗಿಯೆ ತುಲಸಿ ಕುಸುಮಗಳ ತಂದು ಪ್ರೇಮಪೂರಿತನಾಗಿ ಸರ್ವಪರಿಪೂರ್ಣ ಶ್ರೀ ರಾಮಪೂಜೆಯಗೈದು ಸುಖಿಯಾಗು ಮನವೆ 1 ಸೂನು ಮನೆ ಮೊದಲಾದ ಮಮಕಾರವನು ಬಿಟ್ಟು ಧ್ಯಾನವನು ಶ್ರೀಹರಿಯ ಮೂರ್ತಿಯೊಳಗಿಟ್ಟು ಸಾನುರಾಗದಿ ಹರಿಯ ನಾಮಸುಧೆಯನು ನೀನು ಪಾನವನುದಿನ ಗೈದು ಸುಖಿಯಾಗು ಮನವೆ 2 ಧರೆಯೊಳತ್ಯಧಿಕವೆಂದೆನಿಪ ಚಿಕ್ಕನಾಗಾಖ್ಯ ಪುರದೊಳಗೆ ಮಹಿಮೆಯಿಂ ಭಕ್ತರನು ಪೊರೆವ ಗುರು ವಾಸುದೇವಾರ್ಯರೂಪ ವೆಂಕಟಪತಿಯ ಚರಣದಾಸ್ಯವ ಪಡೆದು ಸುಖಿಯಾಗು ಮನವೆ3
--------------
ನಾರಾಯಣದಾಸರು
ಏತಕೆ ನೀ ಚಿಂತಿಸುವೆ ಹೇಡಿ ಜೀವವೇ ಪ ವೀತಮೋಹರಾಗನಾಗಿ ವಿಧಿಪಿತ ದಾತತಾನೆಂದು ತಿಳಿಯಲು ಹೃತ್ತಾಪನಾಶನಾ ಅ.ಪ ಹೊನ್ನು ಹೆಣ್ಣು ಮಣ್ಣು ಮೂರು ನಂಬಬ್ಯಾಡಲೊ ನಿನ್ನೊಳಿರುವ ಮೂರ್ತಿಯನ್ನು ಅರಿತು ಬಾಳೆಲೊ 1 ವಂದಿಸುತ ಸಜ್ಜನರ ಕಂಡರಾನಂದ ಪೊಂದುತ ಸಂದೇಹಗಳೆಲ್ಲ ತೊರೆದು ಸತತ ನಲಿಯುತ 2 ಆತ್ಮವತ್ ಸರ್ವಭೂತನೆಂಬೊ ವಚನವು ಆತ್ಮನಲ್ಲಿ ಸಮರ್ಪಿಸಿದರೆ ಪಡೆವೆ ಸೌಖ್ಯವು 3 ಸಾಮಜೇಂದ್ರ ವರದ ಶ್ರೀ ಗುರುರಾಮವಿಠಲನ ಪ್ರೇಮದಿಂ ನಿಷ್ಕಾಮನಾಗಿ ಸೇವಿಸುನುದಿನ 4
--------------
ಗುರುರಾಮವಿಠಲ
ಭಾಮೆ ಲಕುಮಿ ಕೇಳಮ್ಮಾ ಪ. ಕಾಮಜನಕ ಪೂರ್ಣ ಕಾಮನಾಗಿಹನಮ್ಮ ಅಭೀಷ್ಟ ಕೊಡುವನಮ್ಮ ಅ.ಪ. ವೈಕುಂಠ ತೊರೆದನಮ್ಮಾ | ನಿನಗಲ್ಲಿ ಬ ಹು ಕಷ್ಟವೆಂಬೊನಮ್ಮಾ ನೀ ಕೊಲ್ಲಾಪುರಕೆ ಬರಲು ಖೇದಪಡುತಲಿ ಆ ಕೋಲಗಿರಿಯಲಿ ತಾನೆ ನೆಲಸಿದನಮ್ಮಾ 1 ಬಲುದಿನವಾಯಿತಂತೇ | ನಿನ್ನನು ನೋಡಿ ಛಲವಿನ್ನು ಬೇಡವಂತೆ ಲಲನೆ ಪದ್ಮಾವತಿ ದೂರದಲ್ಲಿಹಳಂತೆ ವಲಿದು ನೀ ವಕ್ಷ ಸ್ಥಳದಿ ನೆಲಸ ಬೇಕಂತೆ 2 ನೋಡಬೇಕೆಂಬೊನಮ್ಮಾ | ನಿನ್ನೊಡನೊಂದು ಆಡಬೇಕೆಂಬೊನಮ್ಮಾ ಮಾಡಿಸಿದೇಯಂತೆ ಪದ್ಮಿಣಿ ಲಗ್ನವ ಮಾಡಿದ ಉಪಕಾರ ಮರಿಯನಂತಮ್ಮ 3 ತಿಳಿದು ಮಾಡುವರ್ಯಾರಮ್ಮಾ ಲಲನೆ ನಿನ್ಹೊರತಿಲ್ಲ ಕೆÀಲಕಾಲ ಸೇವಿಪೆ ತಿಳಿದು ತಿಳಿದು ಇಲ್ಲಿ ನೆಲೆÉಸಿದೆÀ ಯಾಕಮ್ಮ 4 ವಡೆಯಳೆ ಭಾಗ್ಯವಂತೆ | ನೀ ತೊರೆಯಲು ಬಡತನ ಬಂದಿತಂತೆ ಕೊಡುವ ಜನರ ಕಪ್ಪಕೊಳುತ ದರ್ಶನವನ್ನು ಕೊಡದೆ ಹೊಡೆಸುವಂಥ ಕಡುಲೋಭ ಕಲಿತನೆ 5 ಅಷ್ಟ ಐಶ್ವರ್ಯ ಪ್ರದೆ | ಹೃದಯದಲಿರೆ ಎಷ್ಟು ವೈಭವವಿಹುದೆ ಬಿಟ್ಟೆ ನೀನೀಗೆಂದು ಎಷ್ಟು ಆಭರಣಗ ಳಿಟ್ಟು ಮೆರೆವೊನಮ್ಮ ದೃಷ್ಟಿ ಸಾಲದು ನೋಡೆ 6 ಎಷ್ಟು ಲೀಲೆಯೆ ನಿಮ್ಮದೂ | ವೈಕುಂಠವ ಬಿಟ್ಟು ಇಬ್ಬರು ಇಹುದೂ ಗುಟ್ಟು ಬಲ್ಲಂಥ ಹರಿದಾಸರಿಗೊಲಿಯುವ ಶ್ರೇಷ್ಠ ಶ್ರೀ ಗೋಪಾಲಕೃಷ್ಣ ವಿಠ್ಠಲನರಸಿ 7
--------------
ಅಂಬಾಬಾಯಿ
ಮೋಕ್ಷ ಪುಣ್ಯ ಫಲಾ ಮದನ ಗೋವಿಂದನ ಕರುಣವು ಪ ಆಕಾರಾಮೊದಲಾ ದಕ್ಷರದಲಿ ನೇಕಾ ಪರಿಯಲಿ ಕರೆದು ಸುವರ್ತಡದನಿಂದಾದಾ ಆದಿಮುನಿ ಗಣಸಹಿತಾ ಶ್ರೀ ಕರದಿಂದಾಲಾಶ್ರಿತ ಜನ ಪೋಷಕನ ನೀ ಕಾಮನಾದಿ ಪೂಜಿಸಿ ನಿಜಭಕುತಿ ಆಕಾಲದಲ್ಲಿ ಮಾಡಿದವರಿಗೆ ಎಲ್ಲಾ ಮುಕುತಿ ಲೋಕನಾಯಕನನುಗ್ರಹದಿಂದಲೇ 1 ನಾಯಕ ಪೂಜಿತನಾ ಸಾಸಿರನಾಮದ ಸರ್ವೇಶನ ದಾಸೋತ್ತುಮರಾದ ವರಿಗೆಲ್ಲಾ ವಾಸುದೇವಾನು ತನ್ನವರು ಎಂದು ಪಾಲಿಸಿ ಈಸು ಜನರಿಗಿತ್ತಾ ಇಹಪರವು 2 ಅಂದು ಚಂದ್ರಗೆ ಬಂದ ಶಾಪವು ಕಳೆದಾ ಅಜಮಿಳನಂತ್ಯ ಕಾಲಕೆ ಕಾಯ್ದ ಕಂದಾ ಕೂಗಲು ನೇರ ಕಂಭದೊಳಗೆ ಬಂದಾ ಮುಂದಾ ದನುಜನ ಸೀಳಿ ಮಗನಕಾಯ್ದ ಸಿಂಧುಶಯನ ತನ್ನ ಹೊಂದಿದವರನೆಲ್ಲಾ ಬಂಧು ಬಳಗ ಆಗಿಪೊರೆವಂಥಾ ಸ್ಮರಿಸುವ ಶರಣರಿಗೆ 3
--------------
ಹೆನ್ನೆರಂಗದಾಸರು
ಶಿವಸ್ತುತಿ ಫಾಲ ಭವ ಪ ರುಂಡಮಾಲ ಸರ್ವಭೂತಾಳಿ ಸೇವಿತ | ಶೂಲಪಾಣಿಹರ ಅ.ಪ ಭೀಮಬಲ ಸುತ್ರಾಮವಂದಿತ | ಕಾಮನಾಶ ಹರ 1 ನಾಗ ಚರ್ಮಧರ ಚಿನ್ಮಯ | ನಾಗ ಭೂಷವರ ಸರ್ವವೇ - ಯೋಗಿ ವಂದ್ಯ ಹರ 2 ಅನುದಿನ | ದಾಸರನು ಕಾವ - ಪಾಂಂ ಜೇಶನ ಪಿತ ಶ್ರೀಶ ಸಖ ಗಿ | ರೀಶ ಶರ್ವ ಹರ 3
--------------
ಬೆಳ್ಳೆ ದಾಸಪ್ಪಯ್ಯ
ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ ಪ ಘೋರ ಪಾತಕಾಂಬುಧಿಯ ದೂರ ಮಾಳ್ಪರ ಅ.ಪ ಮೋದತೀರ್ಥರ ಮತವ ಸಾಧಿಸುವರ | ಪಾದ ಸೇವ್ಯರ ದುರ್ಬೋಧ ಕಳೆವರ 1 ಭಾಷ್ಯತತ್ವ ಸುವಿಶೇಷ ಮಾಳ್ಪರ | ದೋಷ ದೂರರ ವಾಸವಾದಿ ರೂಪರ2 ಶ್ಯಾಮಸುಂದರ ಹರಿಗೆ ಪ್ರೇಮಪೂರ್ಣರÀ | ನೇಮನಿತ್ಯದ ನಿಷ್ಕಾಮನಾ ವರ 3 ಮೋಕ್ಷದಾತರ ಅಕ್ಷೋಭ್ಯತೀರ್ಥರ ಅ- | ಶಿಕ್ಷಿತಾದರ ಅಪೇಕ್ಷ ರಹಿತರ 4 ಅಂಘ್ರಿ ಭಜನೆ ಮಾಳ್ಪರ | ಕುಜನ ಭಂಜರ ದಿಗ್ವಿಜಯ ರಾಯರ5
--------------
ವಿಜಯದಾಸ
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ
ಪದುಮನಾಭನೆ ಏನೆಂತಾಡಿದ್ಯೊ |ವದಗಿ ಬಂದವರಿಗೆ ಎದೆಗಲ್ಲಿನಂತೆ ಪಸ್ವರ ಕೇಳಿದಾಕ್ಷಣಸ್ಮರಬಾಧೆ ಹೆಚ್ಚಿ ಜ- |ರ್ಝರಿತರಾದೆವೊ ಕೇಳೊ ತರುಣಿಯರೆಲ್ಲ 1ಯೋಗೇಶ ನಿನ ನೋಡ ವೇಗದಿಂ ಬಂದೆವೊ |ಹೋಗೆಂದು ನಿನ್ನ ನಾಲಿಗೀಗೆಂತು ಬಂತೋ 2ನಾರೆರಲಂಕಾರ ಸೀರಿ ಹಂಬಲ ಬಿಟ್ಟು |ಸಾರಿದರೆಂದು ವಿಚಾರಿಸಲಿಲ್ಲೆ 3ಪತಿಗಳು ಹುಡುಕೊರೆಂದತಿ ಕರುಣವರಲ್ಲೆ |ಚ್ಯುತನಾವೆ ನಿನಗೆ ಅಹಿತರಾದೆವೇನೋ 4ಆಗಾರತೊರೆದು ಸುಭೋಗವಿತ್ತೆವೋ ನಿ- |ನಗೀಗ ಮರದಿ ನಮ್ಮ ಕೈಗುಣವೇನೋ 5ವಾರಿಜಬಾಣಕ್ಕೆ ಆರಲಾರಿವೊ ದಯಾ |ವಾರಿಧಿಕಾಮನಾ ಪೂರತಿ ಮಾಡೋ 6ಪ್ರಾಣೇಶ ವಿಠಲ ನೀ ಮಾನವರಂತಲ್ಲ |ಪ್ರಾಣದ ಪದಕ ಈಗೇನು ಕಲ್ಲಾದ್ಯೊ 7
--------------
ಪ್ರಾಣೇಶದಾಸರು
ರಂಗ ಕೊಳಲನೂದುವ ಮಂಗಳಸ್ವರಕೆ ಮೂಜ-ಗಂಗಳೂ ಮೋಹಿಸುತಿಹವಲ್ಲೇ ನೋಡೆ ಏ ಸಖಿ ಪಗೋಕುಲದಂಗನೆಯರು ಮೈಮರೆದು ತಮ್ಮ ಮನೆ ಕದ |ಹಾಕದೇ ಹರಿಯೆಲ್ಲಿಹನೆಂದರಸುತ ಬಂದರು ||ಗೋ ಕರುವೇನೆಂದೊಬ್ಬಳು ಹಾಕುವಳೆತ್ತಿಗೆ ದಾಳಿ |ನೂಕು ನೂಕಾಗುತ್ತ ಹಲವಂಗನೆರೋಡಿದರು 1ಕಣ್ಣಿಗೆ ಕುಂಕುಮ ಫಣಿಯಲ್ಲಿ ಕಾಡಿಗೆ ಕೆಲವರು |ಬಣ್ಣದ ಸೀರೆಯ ಮಂಡೆಗೆ ಸುತ್ತುತ್ತ ಕೆಲವರು ||ಚಿನ್ನಗೆ ಹಾಲೆರೆವೆವೆಂದು ಗಂಡರ ಪಿಡಿದು ಒಲ್ಲೆ- |ನೆನ್ನೆ ಕೇಳದಲೆ ನೆಲಕಿಕ್ಕುವರು ಕೆಲವರು 2ಹರಿಯ ನೋಡುವ ಭರದಿಂದ ಆಕಳಿವೇಯೆಂದು |ಹರದೇರು ಅತ್ತೇರಿಗೆ ಕುಟ್ಟಿ ಕಣ್ಣಿಯಿಕ್ಕೊರು ||ಒರಲಿದರೆ ನಾವಾಕಳಲ್ಲವೆಂದು ಕೇಳದಲೆ |ತ್ವರದಿ ಮಾಧವನ ನೋಡಬೇಕೆಂದೋಡಿದರು 3ಕಾಲಿಕೆಕಟ್ಟಾಣಿಆಣಿಮೆಂಟು ಪಿಲ್ಯಾ ಸರ ಮಾಡಿ |ಮಾಲೆಯೆಂದು ಹಾಕುವರು ಕೊರಳಿಗೆ ಕೆಲವರು ||ಹಾಲಿಗೆ ಮೂಗುತಿ ಕಾನ ಬಾವುಲಿ ಮೂಗಿಗೆ ತಮ್ಮ |ಬಾಲೆರೆಂದಾಕಳ ಕರುವೆತ್ತಿಕೊಂಡೋಡುವರು 4ಹೇಳಿದರೆ ಮಾತುಕೇಳಿಕಳ್ಳ ಕೃಷ್ಣಾ ಸಿಕ್ಕೆಂದು ಮೈ |ಘಾಳಿಗೊಂಡಾಳುವರಾ ಕೈ ಕಂಭಕೆ ಕಟ್ಟುವರು ||ಕೀಲ ಕಂಕಣ ಬಾಗಿಲ ಬೀಗವೆಂಜೋಡಿಸಿ ಲಕ್ಷ್ಮೀ |ಲೋಲನಂಘ್ರಿಯ ಕಾಣಬೇಕೆಂದೆಲ್ಲರು ಓಡಿದರು 5ಎಲೆ ಯಶೋದೆಯಮ್ಮ ನಿನ್ನ ಮಗ ಮೊನ್ನೆ ನಿಶಿಯಲ್ಲಿ |ಮಲಗಂಟು ಬಿಚ್ಚಿ ಒಲ್ಲೆನೆನ್ನೆ ಕೇಳಾ ಥರವೆ ||ಬಲು ಶಬ್ದೆನೆಂದು ಕೇಳಲತ್ತೆಗೊಂದು ಪರಿಯಿಂದ |ತಿಳಿಸಿದೆನೆಂದೊಬ್ಬಳು ಅತ್ತೆಯ ಮುಂದೆ ಹೇಳುವಳು 6ಬೀದಿಯೊಳ್ ಹೇಳಿದಂತೆ ನಮ್ಮನಿಗೆ ಬಾಯೆಂದೊಬ್ಬಳು |ಮಾಧವನಿವನೆಂದು ತನ್ನ ಪುರುಷಘೇಳುವಳು ||ಆ ದಿನ ನಾವೇಕತ್ರದಲ್ಲಿರೆಗಂಡಬರಲು ಸ್ತ್ರೀ |-ಯಾದಿ ಸೈ ಸೈಯೆಂದೊಬ್ಬಳು ಪತಿಗೇ ಪೇಳುವಳು7ಬತ್ತಲೆ ಕೆಲವರು ಸೀರ್ಯುಟ್ಟವರ್ಕೆಲವರು ಉ- |ನ್ಮತ್ತರು ಕೆಲವರು ಪಾಡುತ್ತಲಿ ಕೆಲವರು ||ನೆತ್ತಿಹಿಕ್ಕುವರು ಕೆಲವರು ಹೂಸಿಕೊಂಡವರು |ತುತ್ತು ಬಾಯೊಳಿಟ್ಟವರೂ ತ್ವರದಿ ಓಡಿದರು 8ಒಂದಾಡುತೊಂದಾಡುವರುನಿಂದುನಿಂದಾಲಿಸುವರು |ಮಂದಿಗಂಜದಲೆ ಹರಿದು ಹರಿದು ಹೋಗುವರು ||ಕಂದಗಳೆತ್ತಿದವರು ಕರುಗಳೆತ್ತಿದವರು |ಚಂದಿರ ವದನೆಯರು ತವಕದಿ ಓಡುವರು 9ಹೆಂಣುಗಳಾ ಆವಾವ ಕೆಲಸದೊಳಿದ್ದಿರ್ಯಾ ಹ್ಯಾಂಗೆ |ಬನ್ನಿರೆನ್ನ ಬಳಿಗೆಂಬಂತೆವೇಣುಕೇಳಿಸುವುದು ||ಪನ್ನಗಶಯನನಾಜೆÕಯಂತೆ ಪ್ರವರ್ತಿಸಿದ ಮೇಲೆ |ಅನ್ಯಾಯವೇ ಸತಿಯರದು ಕೇಳಿರಿ ಕವಿಗಳು 10ಕರಿಸಿಂಹಗಳು ಹುಲಿತುರುತುರುಗಮಹಿಷಿ|ಮರೆದು ವೈರತ್ವ ಹರಿಸ್ವರ ಕೇಳುತಿಹವು ||ಕರಗುತಿಹವು ಕಲ್ಲು, ಸುರರಾಕಾಶದಿ ಪುಷ್ಪ |ಸುರಿಸುತಿಹರು, ಗಂಧರ್ವರು ಪಾಡುತಿಹರು11ಅಂಬುಜಾಕ್ಷಗೆ ಕೆಲವಂಗನೆರು ಆಲಿಂಗಿಸುವರು |ಚುಂಬಿಸುವರು ಕೆಲವರುನಿಂದುಪ್ರಾರ್ಥಿಸುವರು ||ಶಂಬುಪಾಣಿ ಕರುಣಿಸಿ ಇಬ್ಬರಿಗೊಬ್ಬೊಬ್ಬನಾಗಿ |ಹಂಬಲ ಪೂರೈಸುವಂತೆ ರಾಸಕ್ರೀಡೆಯಾಡಲು 12ಕಾಮನಾ ಪೂರ್ತಿ ಮಾಡುತಿರೆ ಹೆಂಗಳೆರು ಇಂಥ |ಸ್ವಾಮಿಯಮ್ಮ ಕೈ ಸೇರಿದ ನೋಡಿರೆಂದ್ಯೋಚಿಸಲು ||ಭಾಮಿನಿಯರಹಂಕಾರ ತಿಳಿದಾಕ್ಷಣವೊಬ್ಬಳ |ಪ್ರೇಮದಿ ಕೊಂಡೊಯ್ದು ಎಲ್ಲರಿಗೆ ಮಾಯವಾದನು13ಬಹುರೂಪದೊಳೊಮ್ಮಿಂದ ಒಮ್ಮೆ ಬಂದೂ ರೂಪವಿಲ್ಲ |ಮಹೀಪಾಲನೇನಾದನೋ ಆವಳನ ಕೊಂಡೊಯ್ದನು ||ಅಹಿವೇಣಿಯರೇ ನಿಮ್ಮ ನಿಮ್ಮ ಗುಂಪಿನೊಳಗೆ ಎ- |ಷ್ಟಿಹಿರೊ ನಾರೆರು ಎಣಿಸಿರೆ ಯಂದಾಳೊಬ್ಬಳು 14ಒಂದೆರಡು ನೂರಿನ್ನೂರೈನೂರು ಸಾವಿರೆಂದೆಣಿಸಿ |ಮಂದಗಮನೆಯೊಬ್ಬಳಿಲ್ಲವಮ್ಮ ನಮ್ಮೊಳೆಂದರು ||ಇಂದ್ರಜಾಲದವಳೇ ಆವನು ಅಂಥ ವಂಚಕನೆ |ಸಂಧಿಸಿತಿಬ್ಬರಿಗೆ ಮುಂದೇನುಪಾಯವೆಂದರು 15ಹರಿಹೋದಕಷ್ಟೊಂದು ಅವಳ ನಾ ವೈದ ದುಃಖೊಂದು |ಸ್ಮರಣೆದಪ್ಪಿ ಗಂಡರೊಡನೆ ಆಡಿದ್ದೊಂದು ||ಸ್ಮರನ ಬಾಣ ಬಾಧೆಯೊಂದು ಬೆರದಿತಿನಿತುಕ್ಲೇಶ|ಹರದೆರಚ್ಯುತನರಸುತವನಹೊಕ್ಕರು 16ಹರಿಒಬ್ಬಳ ಒಯ್ದನು ಕಂಡಿರಾ ಯಿದ್ದಿರ್ಯಾ ಎಂದು |ನರರೆಂಬೊ ಭ್ರಾಂತಿಯಿಂದ ಮರನ ಕೇಳುವರು ||ಸ್ಮರಣೆ ಬಂದಾಗ ವಮ್ಮೆ ಗಿಡ ಕೇಳುತಿಹವೆಲ್ಲೆ |ಹರಿಹರಿ! ಜೀವಿಸುವದೆಂತು ಹೇಳಿರೆಂಬೊರು 17ಅತ್ತ ಎಲ್ಲರ ವಂಚಿಸಿ ಯನ್ನ ರೂಪಾಧಿಕ ನೋಡಿ |ಎತ್ತಿಕೊಂಡು ಬಂದ ರಂಗನೆಂಬೊಳಾಕಿ ಮುದದಿ ||ಸತ್ಯ ಸಂಕಲ್ಪವಳ ಮನತಿಳಿದು ತಿಳಿಯದಂತೆ |ತೊತ್ತಿಗ ನಂದದಿ ಹೆಗಲೊಳಗಿಟ್ಟು ಪೋಗಲು 18ದಣಿದೆ ಹಸಿದೆ ನೀರಡಸಿದೆನೆಂದರವಳ |ಅಣುಗನಂದದಿಂದಿಳಿಸೇರಿಸಿ ಕೊಂಬುವನು ||ಗೊನೆ ಹಣ್ಣು ನಿಲಕದೆಂದರೆ ನೀಡಿ ಕೊಡುತಲಿ |ಘನಸುಖ ಬಡಿಸುತ ದಕ್ಕಿದಂತಿರುವನು 19ಸಾವಿರ ಪ್ರಕಾರಾ ಘೋರಿಸಿದರೂ ನಗುತಲೆ ಇಹ |ಕೇವಲ ದಕ್ಕಿದನೆಂದು ನಿಶ್ಚಯ ತಿಳಿದಳು ||ಮಾವಿರಿಂಚೇಶ ಜಂಭಾರಿಗಳನು ವಂಚಿಸುವಂಥ |ದೇವನು ಈ ನಾರಿ ಅಹಂಕಾರವ ತಾಳುವನೆ20ಸೊಕ್ಕು ಬಂತಿವಳಿಗಿನ್ನು ಶೀಘ್ರ ತಗ್ಗಿಸಬೇಕೆಂದು |ಚೊಕ್ಕ ಮಾವು ಪಿಡಿಸಿ ಅಪ್ರತ್ಯಕ್ಷವಾಗಲಿತ್ತಲು ||ತುಕ್ಕಿ ತುಕ್ಕ್ಯಾರಂಣ್ಯಾ ಹೆಜ್ಜೆ ಪಿಡಿದಿಲ್ಲಿಹ ಅಲ್ಲಿಹ |ರಕ್ಕಸಾರೆನುತ ಬಂದೆಲ್ಲರವಳನು ಕಂಡರು 21ಜಾರೆ ಚೋರೆ ಕುಲ್ಲೆ ಖೂಳೆ ಕುಲಕಂಟಿಕೆನವನೀತ|ಚೋರನೆಲ್ಲಡಗಿಸಿದ್ದೆ ತೋರೆಲೆ ತೋರೆಂದರು ||ಘೋರಪಾತಕಿಯ ಕುಟ್ಟಿರೆಂದು ಕೆನ್ನಿ ಕುಟ್ಟುವರು |ಗಾರುಮಾಡಿದರೆ ಬಟ್ಟಬವಣೆಹೇಳಿದಳು22ಸಮದುಃಖಿಗಳಾಗಿಹರಿಹರಿಯೆಂದೊದರಲು ಈ |ಶ್ರಮ ನೋಡಿ ಪ್ರಾಣೇಶ ವಿಠಲ ಬಂದಾಲಿಂಗಿಸಿ ||ಸುಮನಗಂಧಿಯರೆ ನಿಮ್ಮಹಂಕಾರ ಬಿಡಿರೆಂದು |ಅಮರೇಶಮುಂಚಿನಂತೆಲ್ಲರೊಳಾಡಿದನು 23
--------------
ಪ್ರಾಣೇಶದಾಸರು