ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರಣಿಗೆ ದೊರೆಯೆಂದು ನಂಬಿದೆ - ಇಂಥ - |ಪರಮಲೋಭಿಯೆಂದು ಅರಿಯೆ ಶ್ರೀ ಹರಿಯೆ ಪಕಾಡಿಬೇಡುವರಿಗೆ ಕೊಡಲಾರದೆ ಅಂಜಿ |ಓಡಿ ನೀರೊಳು ಸೇರಿಕೊಂಡೆ ಬೇಗ ||ಹೇಡಿಯ ತೆರದಲಿ ಮೋರೆಯ ತೋರದೆ |ಓಡಿ ಅರಣ್ಯದಿ ಮೃಗಗಳ ಸೇರಿದೆ 1ಬಡವರಬಿನ್ನಪ ಲಾಲಿಸದಲೆ ಹಲ್ಲ |ಕಡುಕೋಪದಲಿ ತೆರೆದಂಜಿಸಿದೆ ||ತಡೆಯದೆ ಭಿಕ್ಷುಕನಾದರು ಬಿಡರೆಂದು |ಕೊಡಲಿಯ ಪಿಡಿದುಕೋಡಗ ಹಿಂಡ ಕಾಯ್ದೆಯೊ2ಉತ್ತಮನೆಂದರೆ ಮತ್ತೆ ಚೋರನಾದೆ |ಬತ್ತಲೆ ನಿಂತು ತೇಜಿಯನೇರಿದೆ |ಎತ್ತಪೋದರು ಬಿಡೆ ಬಿಡೆ ನಿನ್ನ ಪಾದವ |ಚಿತ್ತಜ ಜನಕ ಶ್ರೀ ಪುರಂದರವಿಠಲನೆ3
--------------
ಪುರಂದರದಾಸರು
ಪತಿಭಕುತಿಯಿಲ್ಲದಿಹ ಸತಿಯ ಸಂಗವ್ರತಗೆಟ್ಟು ಸುಖ ಪಡೆಯಲಿಲ್ಲವೊ ರಂಗ ಪ.ಗಂಡ ಬಂದರೆ ಎದ್ದುನಿಲ್ಲದೆ ಆ ಕ್ಷಣದಿಕಂಡಾಡಿ ಏಕವಚನಂಗಳನಾಗಅಂಡಲೆದು ಮಾರ್ಮಲೆಂದು ಕಾಡಿಬೇಡುವ - ಇಂಥಭಂಡುದೊತ್ತಿನ ಕೂಟ ಏಳುನಾಗರ ಕಾಟ 1ಒಂದು ತಂದರೆ ಮನೆಗೆ ಹತ್ತಾಗಿ ಭಾವಿಸದೆತಂದರೆ ಹತ್ತು ಮನೆಯೊಳಗೊಂದ ಮಾಡಿಇಂದಿಗೆ ಇಲ್ಲವೆಂದು ಮುಖವ ತಿರುಹುತಲಿ ಮದದಿಂದ ಹೋಹಳು ನಾರಿ ಬಹು ದೊಡ್ಡಮಾರಿ2ಮಕ್ಕಳಿಗೆ ಇಡಲಿಲ್ಲ ಮರಿಗಳಿಗೆ ತುಡಲಿಲ್ಲಇಕ್ಕುವಡೆ ಬೆಳ್ಳಿ - ಬಂಗಾರವಿಲ್ಲಚಿಕ್ಕವಳು ನಾ ನಿನ್ನ ಕೈಪಿಡಿದು ಕೆಟ್ಟೆನೆಂಬಮೂರ್ಖ ತೊತ್ತಿನ ಸಂಗ ಕುಲಕೆಲ್ಲಭಂಗ3ತಾಯನು ಹೊರಡಿಸು ತಂದೆಯನು ತೆರಳಿಸುದಾಯಾದಿಯನು ಮನೆಯಲಿರಿಸಬೇಡಬಾಯಿನ್ನುಮನೆ ಕಟ್ಟಿ ಬೇರಿರುವ ನಾವೆಂಬಮಾಯಾಕಾತಿಯ ಸಂಗ ಅಭಿಮಾನಭಂಗ4ಇಷ್ಟನೆಲ್ಲವ ಬಿಟ್ಟು ಕೆಟ್ಟೆನೈ ನಾನಿಂದುಕಷ್ಟ ಸೆರೆಯೆನುವೆನೆ ಈ ಪರಿಯಲಿಸ್ಪಷ್ಟಿಗಾಧಿಕನಾದ ದಿಟ್ಟ ಶ್ರೀಪುರಂದರವಿಠಲ ಪಶ್ಚಿಮದ ರಂಗಧಾಮ 5
--------------
ಪುರಂದರದಾಸರು