ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣನು ನೆಲಸಿರಲು ನಾಕದ ಸಿರಿಯ ನಿರಾಕರಿಸುವ ಸಿರಿತಾಹರ್ಷದೊಳು1 ಮೋಹಿಸಿ ಮನದಿ ಪತಿ ಭಾವದಿ ನೋಡುತ ಭರದಿ 2 ಕಾಮಿಸಿ ಕಾಡಲು ಕಾಕುತ್ಸ್ಥನು ಬಲರಾಮ ಸಹಜನವತಾರದಲಿ ಕಾಮಿತವಹದೆನೆ ಕಾಮಿನಿ ರಾಧಾ ನಾಮದಿ ಜನಿಸಿರೆ ಗೋಕುಲದಿ 3 ಒಂದಾನೊಂದಿನ ನಂದಾದಿಗಳಾ ನಂದಾನ್ವಿತಮತಿ ವೃತ್ತಿಯಲಿ ಒಂದಾಗಿ ಧರಾ ವೃಂದಾರಕರನುವಿಂದಾರಾಧಿಪ ಭಕ್ತಿಯಲಿ 4 ಬಂದರು ವರಕಾಳಿಂದಿಯ ತೀರದಿ ನಂದನದಂತಿಹ ವನದೆಡೆಗೆ ಮುಕುಂದನ ಧ್ಯಾನಿಸುತಡಿಗಡಿಗೆ 5 ಗೋಧನ ದಾನದಲ್ಲಿ ಬಲ್ಲಿದ ಭೋಜನದಲ್ಲಿ ದಣಿಸಿ ಸುಖದಲ್ಲಿರುತಿರಲಾಸಮಯದಲಿ 6 ಸುಜನ ಸ್ತುತದಿನಕರ ನೈದಿರಲು ನಿಸ್ತುಲತಮದಿ ಸಮಸ್ತರದೃಷ್ಟಿಗಳಸ್ತಗೊಳಿಸೆ ಜನಭಯಗೊಳಲು 7 ರಾಧೆಯತಾನೋಡಿ ಕಂದನ ನೀನೇ ಮಂದಿರಕೈದಿಸು ಎಂದರೆ ಬಂದಳು ನಗೆಗೂಡಿ 8 ಬಾ ಕಮಲಾಸನನ ತೊರುವೆ ಶಶಿವದನಾ 9 ನೀನೊಲಿದುದನು ಬೇಡನಿನ್ನನೆ ಕೂಡಿಹೆನು 10 ತನ್ನಯಮನದೊಳಗೆ ಚರಿತ್ರನು ಕಾಮಿನಿಗೆ11 ಬಲು ಸಡಗರದಿ ವೃತ್ತಕುಚಗಳಿಂದೊತ್ತಿಮನೊಭವನರ್ಥಿಗೆ ಸೊಕ್ಕುವ ಕಾತರದಿ 12 ಕರುಣನಾದೊಡೀಗಲೇ ಬೆರೆದು ಬರುತಿರ್ದಳು ನಲಿದು 13
--------------
ಸರಗೂರು ವೆಂಕಟವರದಾರ್ಯರು
ಕ್ಷೀರಾಬ್ಧಿಜಾರಮಣ ಕ್ಷೀರಾಂಬುನಿಧಿಶಯನ ಸದನ ಗರುಡಗಮನ ಕಾಕುತ್ಸ್ಥವಂಶಾಬ್ಧಿ ರಾಕೇಂದು ಗುಣನಿಧೀ ಪಾಕಾರಿಮುಖದೇವ ನಿಕರಜೀವ ನಿಟಿಲಾಕ್ಷನುತನಾಮ ಜಟಾವಲ್ಕಲಧಾಮ ತಾಟಕಾಂತಕರಾಮ ಸಮರಭೀಮ ಇಂದುಸನ್ನಿಭವದನ ಕುಂದಕುಟ್ಮಲರದನ ಇಂದೀವರ ಸುನಯನ ಕನಕವಸನ ಕವಿಜನಮನೋಲ್ಲಾಸ ಶಶಿಸುಹಾಸ ಸೇವ್ಯ ದೇವದೇವ ಭವಭೀತಿಹರ ಶೇಷಶೈಲನಿಲಯ ಸುವಿಮಲಯಶಶ್ಚಂದ್ರ ರಾಘವೇಂದ್ರ
--------------
ನಂಜನಗೂಡು ತಿರುಮಲಾಂಬಾ
ನಿತ್ಯ ಶುಭ ಮಂಗಳಂ ಪ. ಸರಸೀರುಹಾಕ್ಷಾಯ ದುರುಳಮದಶಿಕ್ಷಾಯ ಸುರಮೌನಿ ಪಕ್ಷಾಯಾಧೋಕ್ಷಜಾಯ ಶರಣನ ರಕ್ಷಾಯ ಕರುಣಾಕಟಾಕ್ಷಾಯ ಧರಣಿಜಾರಮಣಾಯ ರಾಮಭದ್ರಾಯ 1 ಕ್ರತು ಪಾಲಕಗೆ ಶಶಿವದನೆ ಜಾನಕಿಯ ಕೈಪಿಡಿದವಂಗೆ ಶಶಿಮೌಳಿಚಾಪಮಂ ಮುರಿದ ಅಸಮಬಲನಿಗೆ ದಶಕಂಠಕಾಲಂಗೆ ರಾಘವೇಂದ್ರನಿಗೇ 2 ಕಾಕುತ್ಸ್ಥಕುಲಮಂಡನಗೆ ಕಮಲಾಪ್ತ ಕುಲದೀಪಂಗೆ ಸಾಕೇತನಗರಾಧಿಪಗೆ ಲೋಕೇಶನಿಗೆ ಪಾಕಶಾಸನಮುಖ್ಯ ನಾಕಪೂಜಿತಚರಣ ವೈಕುಂಠನಾಯಕ ಶ್ರೀ ಶೇಷಗಿರಿವರಗೆ 3
--------------
ನಂಜನಗೂಡು ತಿರುಮಲಾಂಬಾ
ನೀನಾರು ಪೇಳೆನಗೆ ನಿರುಪಮ ಬಲಪೂರ್ಣ ಮಾನವರೊಳೀ ಪರಿಯ ಶೌರ್ಯವುಂಟೆ ಪ ದಾನವಂತಕನೆಂದು ಮಾನಸಕೆ ತೋರುತಿದೆ ಪ್ರಾಣಿಗಳಿಗೆಲ್ಲಾ ನೀ ತ್ರಾಣದಾಯಕನೆ ಅ.ಪ. ಆಕಾರದಲಿ ನೋಡೆ ನರವೇಷಧಾರಿ ಪ ರಾಕ್ರಮದಿ ಪರಿಕಿಸಲು ಪರಮಪುರುಷ ಶ್ರೀಕಂಠಚಾಪವನು ಖಂಡಿಸಿದ ಕಡುಧೀರ ಕಾಕುತ್ಸ್ಥ ಶ್ರೀರಾಮನೆಂದು ತೋರುವುದೆನಗೆ 1 ಕೋದಂಡಧರ ನಿನ್ನ ಕ್ರೋಧಾಗ್ನಿಗಂಜುತ ಮ ಪಥ ಬಿಡಲು ಲಂಕೆಗೈದಿ ಆ ದಶಾಸ್ಯನ ಕಂಠಪಂಕ್ತಿಯನು ಕಳಚಿಸಿದ ಆ ದಾಶರಥಿಯು ನೀನಲ್ಲದೆ ಬೇರಿಲ್ಲ 2 ಲೋಕಕಾರಣ ನೀನೆ ಲೋಕೇಶ ಲೋಕಧರ ಲೋಕಾಂತರಾತ್ಮಕನು ಲೋಕಜನಕ ಲೋಕರಕ್ಷಕ ಸಕಲ ಲೋಕನಿಯಾಮಕನು ಏಕಮೇವಾದ್ವಿತೀಯನು ಕರಗಿರೀಶನು ನೀನೆ 3
--------------
ವರಾವಾಣಿರಾಮರಾಯದಾಸರು
ನೀನೆ ಕೃಪಾಳು ಶ್ರೀ ಚನ್ನಕೇಶವನೇ ಜ್ಞಾನಿಗಳನ್ನು ಕಾವ ಸನಕವಂದಿತನೆ ಪ ಶರಣರ ಪೊರೆಯುವ ಪ್ರಣವ ಸ್ವರೂಪನೆ ಸ್ಮರಿಸುವ ದಾಸರ ಮರೆಯ ಬೇಡಯ್ಯ ಅ.ಪ. ದೀನರ ಸಲಹುವ ಭಕ್ರವತ್ಸಲನೇ ಮಾನಿನಿ ದ್ರೌಪದಿ ಮಾನ ಕಾಯ್ದವನೇ ಮೌನದಿಂದಲಿ ನಿಂನ ಧ್ಯಾನ ತತ್ವರನಾದೇ ಪನ್ನಗಶಯನನೇ ಸಲಹೊ ಕರುಣದಲೀ1 ಸನ್ನುತ ಹರಿ ನಿಂನ ಕೀರ್ತನೆ ಪಾಡುವೆ ಜಾನ್ಹಕಿ ರಮಣ ಶ್ರೀ ಕಾಕುತ್ಸ್ಥರಾಮಾ ಹೀನನ ಮಾತನ್ನು ನಲಿಯುತ್ತ ಕೇಳಿ ನೀ ಸಾನುರಾಗದಿ ಕಾಯಾ ಧೇನು ಪಾಲಕನೇ2 ಪಂಕಜನೇತ್ರ ಶ್ರೀ ಪರಮ ಪಾವನನೇ ಲಂಕೇಶನಿಗೆ ಯಮನಾದ ಶ್ರೀಧರನೇ ಶಂಕೆಯಿಲ್ಲದೆ ಕಾಯೊ ದೂರ್ವಾಪುರೇಶನೆ ಅಮಿತ ಸದ್ಗುಣಿಯೇ 3
--------------
ಕರ್ಕಿ ಕೇಶವದಾಸ
ಶ್ರೀಕರಮಾಗಿಹ ಗೋಕುಲದಲಿ ಕರು ಣಾಕರ ಕೃಷ್ಣನು ನೆಲೆಸಿರಲು ಸಿರಿ ತಾ [ಕರೆಯುವ] ಹರ್ಷದೊಳು 1 ಲಾವಣ್ಯಕೆ ಮೋಹಿಸಿ ಮನದಿ ಭಾವಜನಸ್ತ್ರದ ಬಾಧೆಯಿಂದ ಪತಿ ಭಾವದಿ ನೋಡುತ ಭರದಿ 2 ಕಾಮಿಸಿ ಕಾಡಲು ಕಾಕುತ್ಸ್ಥನು ಬಲ ರಾಮ ಸಹಜನವತಾರದಲಿ ಕಾಮಿತವಹದೆನೆ ಕಾಮಿನಿ ರಾಧಾ ನಾಮದಿ ಜನಿಸಿರೆ ಗೋಕುಲದಿ 3 ಒಂದಾನೊಂದಿನನಂದಾದಿಗಳಾ ನಂದಾನ್ವಿತಮತಿವೃತ್ತಿಯಲಿ ಒಂದಾಗಿ ಧರಾವೃಂದಾರಕರನು ವಿಂದಾರಾಧಿಪ ಭಕ್ತಿಯಲಿ 4 ನಂದನದಂತಿಹ ವನದೆಡೆಗೆ ಬಂಧುಗಳೊಂದಿಗೆ ಬಂಡಿಯನೇರಿ ಮು ಕುಂದನ ಧ್ಯಾನಿಸುತಡಿಗಡಿಗೆ 5 ಅಲ್ಲಿಗೆ ಭೂಸುರರೆಲ್ಲ ಬರಲು ಮಿತಿ ಯಿಲ್ಲದೆ ಗೋಧನ ದಾನದಲಿ ಬಲ್ಲಿದ ಭೋಜನದಲ್ಲಿ ದಣಿಸಿ ಸುಖ ದಲ್ಲಿರುತಿರಲಾ ಸಮಯದಲಿ 6 ಅಸ್ತಮಹೀಧರ ಮಸ್ತಕವನು ಸುಜ ನಸ್ತುತ ದಿನಕರನೈದಿರಲು ನಿಸ್ತುಲಮದಿ ಸಮಸ್ತರ ದೃಷ್ಟಿಗಳ ಸ್ತಗೊಳಿಸೆ ಜನ ಭಯಗೊಳಲು7 ನೆಂದು ರಾಧೆಯ ತಾ ನೋಡಿ ಎಂದರೆ ಬಂದಳು ನಗೆಗೂಡಿ 8 ಕಂದ ಬಾರೋ ಗೋವಿಂದ ಬಾ ಯದು ನಂದನ ಬಾ ಕಮಲಾಸನನ ನಂದವ ತೋರುವೆ ಶಶಿವದನಾ 9 ನೋಡಿಸುವೆನು ನೀನೊಲಿದುದನು ಬೇಡ ನಿನ್ನನೆ ಕೂಡಿಹೆನು 10 ರಾಧೆಯ ನುಡಿಗಳನಾದರಿಸುತ ಮಧು ಸೂದನ ತನ್ನಯ ಮನದೊಳಗೆ ಮೋದಚರಿತ್ರನು ಕಾಮಿನಿಗೆ 11 ಮುತ್ತನಿತ್ತು ಬಲು ಮುದ್ದಿಸಿ ಬಾಲಕ ನೆತ್ತಿಕೊಂಡು ಬಲು ಸಡಗರದಿ ನರ್ಥಿಗೆ ಸೊಕ್ಕುವ ಕಾತರದಿ 12 ಕರುಣನಾದೊಡೀಗಲೆ ಬೆರೆದು ಹರುಷದಿ ಬರುತಿರ್ದಳು ನಲಿದು 13
--------------
ವೆಂಕಟವರದಾರ್ಯರು
ದೇವಕಿಯುದರ ಸಂಜಾತನೆ ತ್ರುವಿಕಾವನ ಪಿತ ಕಮಲಾಕ್ಷನೆ ತ್ರುವಿಶ್ರೀ ವೈಭವಸಚ್ಚಿದಾನಂದ ತ್ರುವಿಭಾವಕಿಗೋಪಿಯ ಕಂದನೆ ತ್ರುವಿ......... ತ್ರುವಿ1ಮಧುರೆಯೊಳುದಿಸಿದ ಮಹಿಮನೆ ಜೋ ಜೋಯದುಕುಲ ತಿಲಕ ಯಾದವರಾಯ ಜೋ ಜೋ ||ಮಧುಕೈಟಭ ಮುರಮರ್ದನ ಜೋ ಜೋಚದುರನಾಗಿ ತುರುಗಳ ಕಾಯ್ದೆ ಜೋ ಜೋ 2ಗೋಕುಲಪಾಲಕ ಗೋವಿಂದ ತ್ರುವಿಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ||ಪಾಕ ಶಾಸನ ಮುಖ್ಯ ಸುರವಂದ್ಯ ತ್ರುವಿಲೋಕವೀರೇಳ ಪೆತ್ತಾತನೆ ತ್ರುವಿ ........... ತ್ರುವಿ 3ಶ್ರುತಿಚೋರ ಸಂಹಾರಕ ದೇವ ಜೋ ಜೋಜತನದಿ ಸುರರಿಗಮೃತವಿತ್ತೆ ಜೋ ಜೋ ||ಕ್ಷಿತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋಮತಿಯುತ ಬಾಲಕನತಿ ರಕ್ಷ ಜೋ ಜೋ 4ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿಯತಿವಂಶ ಜನನಭಾರ್ಗವರೂಪ ತ್ರುವಿ ||ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವಿರತಿಪತಿಪಿತಸುರನುತ ಕೃಷ್ಣ ತ್ರುವಿ ......... ತ್ರುವಿ5ಗೋಪಿಕಾನಂದ ಮುಕುಂದನೆ ಜೋ ಜೋಭೂಪರೊಳ್ಕಾದಿ ಬಳಲಿದನೆ ಜೋ ಜೋಶ್ರೀ ಪುರುಷೋತ್ತಮ ನರಸಿಂಹ ಜೋ ಜೋಅಪಾರ ಮಹಿಮಾರ್ಣವ ದೇವ ಜೋ ಜೋ........ಜೋ ಜೋ 6ಮಣ್ಣೊಳಗಾಡಿ ನೀ ಬಂದೆಯ ತ್ರುವಿಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿಚಿಣ್ಣಸುಮ್ಮನೆ ಇರು ಶ್ರೀ ಕೃಷ್ಣ ತ್ರುವಿ ............ ತ್ರುವಿ7ತಾರಕ ಸತಿವ್ರತಹಾರಕ ಜೋ ಜೋವಾರಣ ಹಯವೇರಿ ಮೆರೆದನೆ ಜೋ ಜೋ ||ಸಾರಿದವರ ಸಂತೈಸುವ ಜೋ ಜೋಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ.......ಜೋ ಜೋ 8ಶರಣಾಗತ ವಜ್ರಪಂಜರ ತ್ರುವಿಕರುಣಾಕರ ಕಮಲಾಕ್ಷನೆ ತ್ರುವಿ ||ಧರಣಿಧರಶಾಯಿ ಶ್ರೀವರ ತ್ರುವಿ ||ವರದ ಶ್ರೀ ಪುರಂದರವಿಠಲನೆ ತ್ರುವಿ ........... ತ್ರುವಿ 9
--------------
ಪುರಂದರದಾಸರು
ಭೂರಿಕರುಣಿ ಹನುಮ ಪಾಲಿಸುಪ.ಬೀರಕಬ್ಬಿಯ ಕೃಷ್ಣಾತೀರನಿವಾಸಭಾರತಮಲ್ಲ ಬುಧರ ಪರಿತೋಷ ಅ.ಪ.ಕರ್ತನ ನೇಮದಿ ಕಡಲ ಕಾಲುವೆ ಮಾಡಿಅರ್ತಿಲಿ ದಾಟಿ ರಕ್ಕಸರ ಪಟ್ಟಣದಿಕೀರ್ತಿಯ ಬೆಳಗಿದೆ ವನವ ಕಿತ್ತು ವಿನೋದಮೂರ್ತಿಬಲ್ಲಿದರಾಮನ ಬಂಟನಹುದೊ1ಭೀಕರಅಕ್ಷಮೊದಲಾದರೊದೆದುಏಕಜ್ವಾಲೆಯಲಿ ಲಂಕೆಯ ಸುಟ್ಟು ನಲಿದುಕಾಕುತ್ಸ್ಥನಿಗೆ ಸೀತೆ ಕುಶಲವ ಮುಟ್ಟಿಸಿದೆ ಮೂಲೋಕದಿ ನಿನಗೊಬ್ಬ ಸಮನೆನ್ನಬಹುದೆ 2ಅತಿ ಘಾತಿಸಿಕೊಂಡು ಕಪಿಗಳು ರಣದಲಿಮೃತ ವಿಕ್ರಮರಾಗಿ ಹರಣಗುಂದಿರಲುಮೃತ ಸಂಜೀವನವ ತಂದು ರಕ್ಷಿಸಿದೆ ಅಪ್ರತಿಮ ಪ್ರಸನ್ವೆಂಕಟೇಶಗರ್ಪಿಸಿದೆ 3
--------------
ಪ್ರಸನ್ನವೆಂಕಟದಾಸರು
ಮಂಗಳ ಮಾರಮಣಗೆ ಮಂಗಳ ಜಯಮಂಗಳ ಭೂರಮಣಗೆ ಮಂಗಳ ಪ.ಮುಕುಟಕೆ ಮಂಗಳ ಮತ್ಸ್ಯಾವಾತಾರಗೆಮುಖಕೆ ಮಂಗಳ ಮುದ್ದು ಕೂರ್ಮನಿಗೆ ||ಸುಕಂಠಕೆ ಮಂಗಳ ಸೂಕರರೂಪಗೆನಖಕೆ ಮಂಗಳ ಮುದ್ದು ನರಸಿಂಹಗೆ 1ವಕ್ಷಕೆ ಮಂಗಳ ವಟವಾಮನನಿಗೆಪಕ್ಷಕೆ ಮಂಗಳ ಭಾರ್ಗವಗೆ ||ಕಕ್ಷಕೆ ಮಂಗಳ ಕಾಕುತ್ಸ್ಥರಾಮನಿಗೆಕುಕ್ಷಿಗೆ ಮಂಗಳ ಶ್ರೀ ಕೃಷ್ಣಗೆ 2ಉರುಗಳಿಗೆ ಮಂಗಳ ಉತ್ತಮ ಬುದ್ಧಗೆಚರಣಕ್ಕೆ ಮಂಗಳ ಚೆಲ್ವ ಕಲ್ಕಿಗೆ ||ಪರಿಪರಿ ರೂಪಗೆಪರಮ ಮಂಗಳಪುರಂದರವಿಠಲಗೆ ಶುಭಮಂಗಳ 3
--------------
ಪುರಂದರದಾಸರು