ಒಟ್ಟು 11 ಕಡೆಗಳಲ್ಲಿ , 7 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಿವನು ಈಗ ಬರಲಿದಕೆ ಬಗೆಯೇನುಚೆನ್ನಾಗಿ ಪೇಳೆ ರಮಣಿ ಪ ಮನ್ನಿಸಿ ಮಮತೆಯಲಿ ಮನವ ಸೆಳಕೊಂಡೊಯ್ದುಅನ್ಯರನು ಕೂಡುವನೆ ಕೆಳದಿ ಅ.ಪ. ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳಚಿನ್ನದ ಶ್ರೀರೇಖೆ ಸೀರೆಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣಕರ್ಪೂರ ಕಾಚಿನುಂಡೆಕಣ್ಣಿಗಿಂಪಾದ ಕಡು ಚೆಲ್ವ ಮಲ್ಲಿಗೆ ಮೊಗ್ಗೆ ಉನ್ನತವಾದ ದಂಡೆಇನ್ನು ಈ ಪರಿಮಳವು ಬಗೆಬಗೆಯ ಆಭರಣರನ್ನ ಕೆತ್ತಿಸಿದ ಗೊಂಡೆಮುನ್ನ ಸಿಂಗರ ಮಾಡಿ ಎದೆಹಿಡಿದು ಬಿಗಿಯಪ್ಪಿನಿನ್ನ ಈ ವೇಳೆ ಕೂಡಿದೆ ದೃಢದೆ 1 ಈಗಾಗು ಬಾಹನೆಂತಿರುವೆ ತಾನೂರಿದ್ದಉಗುರು ಗುರುತನು ನೋಡುತಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದುಬೇಗ ನಟನೆಯ ಮಾಡುತರಾಗದಿಂದದಲಿ ರವಿಕೆ ನೆರಿಯನು ಬದಲುಟ್ಟುಭೋಗಕ್ಕೆ ಅನುವಾಗುತಹಿಂಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆಹೇಗೇ ಸೈರಿಪೆ ಕೂಡದೆ ಮುಂದೆ 2 ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆಕಂದರ್ಪ ಕಾಡುತಿಹನೆತಂದು ತೋರಿಸು ತನ್ನ ತಂದೆಯನೆಂದು ಪೂ-ವಿಂದ ಬಾಣವ ಎಸೆವನೆಇಂದುಬಿಂಬವು ಮಂದ ಮಾರುತವು ಸುಮದ ಮಳೆ-ಯಿಂದ ಸೆಕೆಗಾನಾರೆನೆಒಂದು ನಿಮಿಷದಲಿ ಶ್ರೀರಂಗ ವಿಠ್ಠಲನನ್ನುಹೊಂದಿಸೆನ್ನಗಲದಂತೆ ಕಾಂತೆ 3
--------------
ಶ್ರೀಪಾದರಾಜರು
ಅನಿಮಿಷ ರೂಪದಿಂದಾಗಮವನು ತಂದ ರಾಮಚಂದ್ರ ಘನಕೂರ್ಮರೂಪದಿಂ ಗಿರಿಯ ಬೆನ್ನೊಳಗಾಂತ ರಾಮಚಂದ್ರ ಕನಕಾಕ್ಷನನು ಕೊಂದ ಧರಿಣಿದೇವಿಯ ರಮಣ ರಾಮಚಂದ್ರ ಹಿರಣ್ಯಕನ ಕರುಳನು ಕೊರಳೊಳು ಧರಿಸಿದ ರಾಮಚಂದ್ರ ತರಳ ಪ್ರಹ್ಲಾದನ ಕರೆದಾದರಿಸಿದ ರಾಮಚಂದ್ರ ವಟುರೂಪದಿಂ ಬಂದು ವಸುಧೆಯ ಬೇಡಿದ ರಾಮಚಂದ್ರ ದಾನಕೊಟ್ಟವಗೆ ಪಾತಾಳ ಪಟ್ಟವ ಕಟ್ಟಿದ ರಾಮಚಂದ್ರ ಕ್ಷತ್ರಿಯರ ಕುಲಬೇರ ಕತ್ತರಿಸಿದ ದೇವ ರಾಮಚಂದ್ರ ಧರಿತ್ರಿಯ ಭಾರವ ಪರಿಹರಿಸಿದ ದೇವ ರಾಮಚಂದ್ರ ವಸುದೇವನಂದನನೆಂದೆನಿಸಿ ಮೆರೆದೆಯೋ ರಾಮಚಂದ್ರ ಮತ್ತೆಕಾಮಿನಿಯರ ಚಿತ್ತವ ಕಲಕಿದ ರಾಮಚಂದ್ರ ಉತ್ತಮಾಶ್ವವನೇರಿ ಕಲ್ಕಿಯೆನಿಸಿದ ರಾಮಚಂದ್ರ ಆದಿಮಧ್ಯಾಂತ ಸ್ವರೂಪ ಸುಂದರರೂಪ ರಾಮಚಂದ್ರ ವೇದವೇದ್ಯನೆ ನಿನ್ನ ಪಾದವೇ ಗತಿಯೆನಗೆ ರಾಮಚಂದ್ರ ರಘುಕುಲತಿಲಕನೆ ರಮ್ಯಚರಿತ್ರನೆ ರಾಮಚಂದ್ರ ಅಘಹರ ಪುರವೈರಿ ಸಂಸ್ತುತಿಪಾತ್ರನೆ ರಾಮಚಂದ್ರ ಮಾನಾಭಿಮಾನ ನಿನ್ನಾಧೀನಮೆಂಬೆನೈ ರಾಮಚಂದ್ರ ಏನೊಂದನರಿಯದ ಅಜ್ಞಾನಿ ನಾನಯ್ಯ ರಾಮಚಂದ್ರ ನೀನಲ್ಲದೆ ಮತ್ತನ್ಯರಾರಿಹರೈ ರಾಮಚಂದ್ರ ದೀನಪಾಲಕ ನಿನ್ನುಳಿದಾರ ನೆರೆಯೆ ರಾಮಚಂದ್ರ ವರಶೇಷಗಿರಿದೊರೆ ಮರೆಹೊಕ್ಕು ಬೇಡುವೆ ರಾಮಚಂದ್ರ ಕರುಣಾಳು ನೀನೆಂಬ ಬಿರುದುಳಿಸೆನ್ನುವೆ ರಾಮಚಂದ್ರ
--------------
ನಂಜನಗೂಡು ತಿರುಮಲಾಂಬಾ
ಅವತಾರ ಸಿರಿವರ ಘನ ಕರುಣಾಕರ ಪೊರೆಯೈ ಪ. ನಿಗಮಚೋರನನ್ನು ಕೊಂದು ನಗವಪೊತ್ತನೆ ವಿಗಡದೈತ್ಯನನ್ನ ಸೀಳಿ ಜಗವನಾಂತನೇ 1 ಘುಡುಘುಡಿಸಿ ಕಂಬವನು ಒಡೆದುಬಂದನೆ ಪಿಡಿದು ಖಳನ ಕರುಳಬಗೆದು ಕೊರಳೊಳಾಂತನೆ2 ಇಂದ್ರಗನುಜನಾಗಿ ದಾನವೇಂದ್ರ ಗೊಲಿದು ನೀಂ ನಿಂದು ಬಾಗಿಲಕಾವ ಗೊಲ್ಲನಂದಮೇನಿದೈ 3 ಹಡೆದತಾಯ ಶಿರವಪಿಡಿದು ಕಡೆದ ಭಾರ್ಗವ ಮಡದಿಚೋರನನ್ನು ಕೊಂದ ಒಡೆಯ ರಾಘವ 4 ಮಾವ ಕಂಸನ ಕೊಂದ ವಸುದೇವನಂದನ ಮಾಧವ 5 ಮತ್ತೆ ತ್ರಿಪುರ ಸತಿಯರ ಚಿತ್ತಕಲಕಿದ ಉತ್ತಮಾಶ್ವವನ್ನೆ ಹತ್ತಿ ಕಲ್ಕಿಯೆನಿಸಿದ 6 ಉರಗಶಯನ ಗರುಡಗಮನ ಪರಮಪಾವನ ವರದ ಶೇಷಶಿಖರಧಾಮ ಶ್ರೀನಿಕೇತನ 7
--------------
ನಂಜನಗೂಡು ತಿರುಮಲಾಂಬಾ
ತಾಳು ತಾಳೆಲೊ ಕೋಪ ಜಾಲಮಾಡದೆ ಭೂಪ ಕೇಳಿಕೊಂಬೆನು ನಿನ್ನ ಕಾಲಪಿಡಿವೆನೊ ಪ. ಫಾಲಲೋಚನನುತ ಶ್ರೀಲೋಲ ನಿನ್ನನೇ ಕೇಳಿಕೊಂಬೆನು ಮಾತಕೇಳೋ ಕಾಳುಮಾಡದೆ ಮಾತ 1 ದುರುಳತನದಲಿ ನಿನ್ನ ತೆರೆದಕಣ್ಣಳನೆಂದು ಜರಿದು ಪೇಳಿದೆನೋ ತಿರುಗಿ ನಾ ನಿನ್ನ ಗಿರಿಯ ಬೆನ್ನೊಳು ಪೊತ್ತು ಮೆರೆಯುವ ದಡ್ಡನೆಂದೊರೆದ ಕಾರಣದಿಂದ 2 ಕೋರೆಯೊಳ್ ಕೊರೆದು ಕೊನ್ನಾರಿಗೆಡ್ಡೆಯ ತಿಂದು ಳೀರಡಿ ಮಾಡಿದೆ ಘೋರವಿಕ್ರಮನೆಂದು ದೂರಿದೆನದರಿಂದ3 ಹೆತ್ತತಾಯಿಯ ಕೊಂದು ಮತ್ತೆ ಕಪಿಗಳ ಕೂಡಿ ಚಿತ್ತವಸೆರೆಗೈದ ಮತ್ತನೆಂದೆನಲಾಗಿ 4 ಉತ್ತಮಸತಿಯರ ಚಿತ್ತವ ಕಲಕಿದ ಮತ್ತನೆಂದಾಡಿದೆನೋ ಮತ್ತೆ ಕುದುರೆಯನೇರಿ ಕತ್ತಿಯ ಪಿಡಿದೆತ್ತಿ ಸುತ್ತುವನಿವನುನ್ಮತ್ತನೆಂದುದರಿಂದ 5 ಪಿತ್ತವು ತಲೆಗೇರಿ ಮತ್ತೆ ಮತ್ತೆ ನಾನಿನ್ನ ಒತ್ತೊತ್ತಿಜರಿದೆನೊ ಚಿತ್ತಜಪಿತನೆ ಮತ್ತೊಮ್ಮೆ ಬೇಡುವೆ ಗತಿನೀನೆ ನಮಗೆಂದು ಪತಿಕರಿಸೆನ್ನಪರಾಧವ ಮನ್ನಿಸಿ 6 ಕಂದನಿವಗೈದ ಕುಂದುಗಳೆಣಿಸದೆ ತಂದೆ ಸಲಹಯ್ಯ ಶ್ರೀ ಶೇಷಗಿರಿವರ 7
--------------
ನಂಜನಗೂಡು ತಿರುಮಲಾಂಬಾ
ನೀಲವರ್ಣ ಗೋಪಾಲನು ಎಲ್ಲೆ ಕಾಣಿರೇನೇ ವ್ರಜದ ಒಳಗೆ ಲೀಲಿ(ಲೆ ಇ?) ದೇನೆ ನಮ್ಮ ಸಂಗಡ ಹೇಳೇ ಗೋಪ್ಯಮ್ಮ 1 ಚಿಣ್ಣಿಕೋಲು ಚೆಂಡು ಬುಗುರಿ ವೇಣುಕೊಳಲಧ್ವನಿಯ ಆಲಿಸಿ ಓಣಿ ಓಣಿ ಹುಡುಕಲು ನಂದ- ಸೂನು ಎಲ್ಲಿಹನೆ 2 ಗೋಪಿ ಗೋಪಾಲ ಕೂಡಿ ಧಾಳಿ ಮಾಡ್ವುದು ದಾರಿಗೆ ತರವೆ ಗೂಳಿಮಾಡಿದಿ ಗೋಕುಲದೊಳು ನಿನ- ಗ್ಹೇಳುವುದಿನ್ನೇನೆ 3 ನವನೀತ ದಧಿ ಘೃತ ಸುರಿದೋಡಲು ನೀ ಸುಮ್ಮನೆ ಬಿಟ್ಟು ಯಾತಕೆ ಹಿಡಿತಾರದೆ ದೂರ್ಹೇಳುವಿ ಈ ಮಾತು ನಿರ್ಧಾರವೇನೆ 4 ಹೆತ್ತತಾಯಿ ನೀ ಬಳಲುವಿ ಎಂದು ಸಿಕ್ಕೊರಳಿಗೆ ಕಟ್ಟಿಸಿ ಕೊಂಡೆಳೆದು ಸಿಕ್ಕುವುದುಂಟೇನೆ 5 ವಜ್ರದ್ಹಾರ ಪದಕ ಹÉೂನ್ನರಳೆಲೆ ಗೆಜ್ಜೆ ಕಾಲಂದಿಗೆ ಝಳಿ ಝಳಿಸುತ ಮೂರ್ಜಗದೊಳು ಮುದ್ದಿರಲೀಕೂಸ್ಹೊರ- ಗ್ಹೆಜ್ಜೆನಿಡುವುದೇನೆ 6 ಶಿಶುವೇನೇ ಅಸುವ್ಹೀರಿ ಪೂತನಿ ಕೇಶಿ ಧೇನು ತೃಣಾವರ್ತ ಶಗಟಾಸುರ ಬಕನ ಕೊಂದವಗೆಂತು ನೀ ಅರ್ಭಕ- ನೆಂತಾಡುವಿಯೆ 7 ಹೆಡೆಯ ತುಳಿದ ಕಾಳಿಂಗನ ಮಡುವ ಕಲಕಿದ ಕಡುವಿಷಕಂಜದೆ ಹುಡುಗರ ಕಾರ್ಯವಿದೇನೆ ಬಿಡು ನಿನ್ನ ಬಡಿವಾರವು ಸಾಕೆ 8 ಕಾಡುಕಿಚ್ಚನು ನುಂಗಿದ ನಿನಸುತ ಬೇಡಿಯಜ್ಞದೊಳುಂಡನ್ನವನು ಸಾಲದೆ ಇಂದ್ರನ ಪುರವುಂಡ್ಹೊಟ್ಟೆ ಗಿ- ನ್ನೀಡೆಲ್ಲಿಹುದ್ಹೇಳೆ 9 ಶಕÀ್ರನ ಬಲಿ ಅನ್ನವ ದಕ್ಕಿಸಲವ ಸಿಟ್ಟಲಿ ಸಪ್ತದಿನ ಮಳೆಕರೆಯೆ ಎತ್ತಿ(ದ) ಗೋವರ್ಧನಗಿರಿ ನಮ್ಮದಾರಿ- ಚ್ಚೆಗೆ(?) ಸಲಹುವನೆ 10 ಕಾತ್ಯಾಯಿನಿ ವ್ರತಮಾಡೋ ಸ್ತ್ರೀಯರ ವಸ್ತ್ರಗಳನೆ ಕದ್ದು ಮರನೇರಿದ ಬತ್ತಲೆ ಚಪ್ಪಾಳಿಕ್ಕುತ ತಿರುಗಲಿನ್ನೆ- ಷ್ಟಂತ್ಹೇಳುವೋಣೆ 11 ಚೋರತನವೊಂದಲ್ಲದೆ ಕಲಿತಿಹ ಜಾರತನ ಕೇಳರಿಯೆ ಯಶೋದ ನೀರುತಿದ್ದುವ ಎಲ್ಲರ ಒಗತನಕಿವ ಪಾರುಗಾಂಬುವುದ್ಹ್ಯಾಗೆ 12 ಗಂಡರುಳ್ಳ ಗರತಿಯೇರೆನ್ನದೆ ಪುಂಡೆಬ್ಬಿಸಿ ಬೃಂದಾವನದೊಳಗೆ ಬಂದಮ್ಮನ ಹಿಂದಡಗಲು ನಿನಗೆ ಮುದ್ದಿನ್ಯಾರಿಗೆ ಹೇಳೆ 13 ಮಾಧವ ತಾ ಕೊಳಲೂದು- ತಿರೆ ನಾವು ಮೋಹಿತರಾಗಿ ಹೋದ ಸುದ್ದಿಗಳೊಂದ್ಹೇಳೆ ಲಜ್ಜೆ ಬಾ- ಹೋದೆ ನಮಗಿನ್ನು 14 ಬಳೆ ಬಾಪುರಿ ಕಂಕಣ ಚೂಡ್ಯ ಗಳನು ತೊಡೆಗÉೀರಿಸಿ ಕಾಲಂದಿಗೆ ಕರದಿ ಕಾಲುಂಗುರ ಕಿವಿಗಿಟ್ಟು ಬಾವುಲಿ ಪಾದದಿ ರಚಿಸಿದೆವೆ 15 ಹೊನ್ವಾಲೆ ಹೊಸಕೊಪ್ಪು ಮೂಗುತಿ ಚಿನ್ನದ ಒಡ್ಯಾಣದ ನಡುವಿಟ್ಟು ಕಣ್ಣಿಗೆ ಕಸ್ತೂರಿಬಟ್ಟು ಕುಂಕುಮ ಕಾಡಿಗೆ ನೊಸಲಿಗೆ ರಚಿಸಿ 16 ಬಿಟ್ಟಮಂದೆ ಕಟ್ಟದೆ ಕರುಗಳ ತೊಟ್ಟಿಲೊಳಗಿಟ್ಟು ಶಿಶುವಿಗೆ ಕಣ್ಣ ್ಹ(ಣ್ಣಿ ಹ?)ಚ್ಚಿ ನಾವೆಚ್ಚರಿಕಿಲ್ಲದೆ ಪೋದೆವೆ ಅಚ್ಚುತನಿದ್ದೆಡೆಗೆ 17 ಬಂದವರನೆ ಮನ್ನಿಸದೆ ನಿನಸುತ ಅ- ಲ್ಲಿಂದೊಬ್ಬಳ ಹೆಗಲೇರಿಸಿ ಪೋಗೆ ಹಿಂದಾಲ್ಪರಿದ್ವನವನಿತೆಯರ್ಕೂಡಿ ಬಂದೆವ್ಯಮುನೆ ದಡಕೆ18 ಇಬ್ಬರಿಬ್ಬರ ನಡುವೆ ನಿನಸುತ ಒಬ್ಬನಾಗಿ ಜಲದ ಒಳಗೆ ಅಬ್ಬರದಿಂದಾಡಲು ಜಲಕ್ರೀಡೆ ಕ- ಣ್ಗ ್ಹಬ್ಬವಾಗಿರೆ ಜನಕÉ 19 ಗೋಪಿ ಗೀತವಿದೆಂದು ನಿನಸುತ ಖ್ಯಾತಿ ಮಾಡಿದ ಜಗದ ಒಳಗೆ ಯಾತಕೆ ಕೂಸೆಂದಾಡುವೆ ತಿಳಿ ನಿನ್ನ ಪ್ರೀತಿ ಮೋಹಗಳೆಂದು 20 ಅಂಕದಲ್ಯಾರೋಪಿತನಾಗೆ ಶÀಂಕಿಲ್ಲದೆ ಹಾರ ಭಾರವನೆ ತಾಳಿದೆ ಬಿಂಕವ ಬಿಡು ಮಗನೆಂದಾಡುವುದು ಈ ಮಂಕು ಬುದ್ಧಿಗಳಿನ್ನು 21 ಮಗುವೇನೆ ಹೃದಯದೊಳ್ಹದಿನಾಲ್ಕು ಜಗವ ಕಂಡು ನೀ ತೆಗೆಯದೆ ನೇತ್ರ ಜಗಜಗಿಸುವ ಚಂದ್ರಮನಂಗೈಯಲಿ ಈ ಬಗೆ ನಿನಗರಿಕಿಲ್ಲೆ 22 ಗೋಪಾಂಗನೆಯರಾಡುವ ಮಾತು ಕೋಪದಿ ಕೇಳುತಲೆಶೋದೆ ಗೋಪಾಲಕೃಷ್ಣ ನಿನ್ನೆಲ್ಲಿ ಕಳುಹಲೆಂದಳು 23 ದುಷ್ಟ ಕಾಲನೇಮಿ ಕಂಸನು ನಿನ್ನ ಕರೆಯಕಳುಹಲು ಕರಕರೆಯಾಕೋ ನಾರಾಯಣ ನಿನ್ನಟ್ಟುವೆ(ವು) ಮಧುರೆಗೆ ನಾವೆಲ್ಲರು ಕೂಡಿ 24 ದುಷ್ಟತನವ ಬಿಡೋ ಭೀಮೇಶ- <ಈಔಓಖಿ s
--------------
ಹರಪನಹಳ್ಳಿಭೀಮವ್ವ
ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ| ಗೋಪಿಯ ಕಂದಾ ಅಂತವ ದೋರಗುಡನೆ ಪ ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ| ಮುಗುದೆಯ ಪ್ರಾಣ ಹೀರಿದಾ 1 ವಿಷಮಡು ಕಲಕಿದನೆ|ಕಾಳಿಂಗನಾ| ವಸುಧೆಗೆ ಎಳೆತಂದನೆ 2 ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ| ನಿಸಿದಿನಿ ಮರುಳಹರು3 ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ| ದೋರಿದ ಜನ ಬೆದರೆ 4 ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು ಒಂದೆರಡೆಂದು ಲೀಲೆಯ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿ ಶ್ರೀ ಹರಿಪೂಜಿ ಮಾಡುದು ಬಿಡಿ ಮನಕೃತ ವಾಜಿ ಧ್ರುವ ಮಂಗಳಕರಸುಖ ಕಂಗಳಗಿದಿರಿಡುತದನೇಕ ಮುಂಸಗುಡಿಯಲಿ ಮೂಡಿ ರಂಗದೋರುವ ಘನಕೌತುಕ 1 ತಾಳ ಮೃದಂಗ ಘನ ಭೇರಿ ಫಳಗುಡುತದೆ ಪರೋಪರಿ ತಿಳಿದವನಧಿಕಾರಿ ಕೇಳಲ್ಹೋಗುದು ಭವಭಯ ಹಾರಿ 2 ಹೇಳಲೆನ್ನಳವಲ್ಲ ಹೊಳೆವುತಿಹುದು ಮೂಜಗವೆಲ್ಲ ಕೇಳಿ ಸವಿಯ ಸೊಲ್ಲ ತಿಳಿದ ಮಹಿಮ ತಾನೆ ಬಲ್ಲ 3 ಅಜಪ ಸುಜಪ ಮಂತ್ರ ರಾಜಿಸುತಿಹುದು ಬಾಹ್ಯಾಂತ್ರ ತ್ರಿಜಗ ಮಾಡುವ ಪವಿತ್ರ ಸುಜನ ನೋಡುವ ಸುಚರಿತ್ರ 4 ಸ್ವಹಿತ ಸುಖದ ಸಾರ ಶ್ರೀಹರಿಪೂಜಿ ನಿರಂತರ ಮಹಿಪತಿ ಮನೋಹರ ಸಾಹ್ಯ ಸಕಲಕಿದೆ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು
ಗೋವಿಂದ ನಮೋ ಗೋವಿಂದಹರಿಗೋವಿಂದಂ ನಮೋ ಗೋವಿಂದ ಪಗೋವಿಂದಂ ನಮೋ ಗೋವಿಂದೆಂದೊಡೆಬಂದ ಜರಾಮರಣ್ಹರಿದುಪೋಪುದು ಅ.ಪಶರಧಿಮುಳುಗಿದ ಗೋವಿಂದಂ ನಮೋಶರಧಿಈಸಿದ ಗೋವಿಂದಕರಿಕೆಯನು ಮೆದ್ದ ಗೋವಿಂದಂ ನಮೋನರಮೃಗಾಕಾರ ಗೋವಿಂದಪರಶು ಧರಿಸಿದ ಗೋವಿಂದಂ ನಮೋಧರೆಯ ಬೇಡಿದ ಗೋವಿಂದಶರಧಿಹೂಳಿದ ಗಿರಿಯನೆತ್ತಿದಪುರವ ಭಂಗಿಸಿದ ತುರಗವೇರಿದ 1ಸಿಂಧುಕಲಕಿದ ಗೋವಿಂದಂ ನಮೋಸಿಂಧುಮಂದಿರ ಗೋವಿಂದಮಂದರೋದ್ಧಾರ ಗೋವಿಂದಂ ನಮೋಇಂದಿರೆಯ ಪ್ರಿಯ ಗೋವಿಂದಬಂದ ಭುವನಕೆ ಗೋವಿಂದಂ ನಮೋನಿಂದ ಗಿರಿಯಲಿ ಗೋವಿಂದಬಂದ ಭಕುತರ ಬಂಧ ಕಳೆದಾನಂದ ನೀಡುತ ಚೆಂದದಾಳುವ 2ದನುಜಸಂಹರ ಗೋವಿಂದಂ ನಮೋಚಿನುಮಯಾತ್ಮಕ ಗೋವಿಂದಮ(ನುಮುನಿಯಾ) ನಂದಗೋವಿಂದಂ ನಮೋಚಿನುಮಯಾತ್ಮಕ ಗೋವಿಂದವಿನಮಿತಾಗಮ ಗೋವಿಂದಂ ನಮೋಜನಕಜೆಯವರಗೋವಿಂದವನಜಸಂಭವವಿನುತ ವಿಶ್ವೇಶಜನಕ ಜಾಹ್ನವೀಸುಜನಶುಭಕರ3ನೀಲಶ್ಯಾಮಹರಿಗೋವಿಂದಂ ನಮೋಲೋಲಗಾನ ಸಿರಿಗೋವಿಂದಕಾಲಕುಜ(ನ) ಕುಲ ಗೋವಿಂದಂ ನಮೋಪಾಲಮೂಲೋಕ ಗೋವಿಂದಮಾಲಕೌಸ್ತುಭ ಗೋವಿಂದಂ ನಮೋಮೇಲುಆಲಯಗೋವಿಂದಕಾಳಿಮದ್ರ್ನ ಕಾಲಭಯಹರಲೀಲಸಮ ವಿಶಾಲಮಹಿಮ 4ಸತ್ಯ ಸಂಕಲ್ಪ ಗೋವಿಂದಂ ನಮೋಸತ್ಯಸನ್ನುತಗೋವಿಂದಭಕ್ತವತ್ಸಲ ಗೋವಿಂದಂ ನಮೋನಿತ್ಯನಿರ್ಮಲ ಗೋವಿಂದಚಿತ್ತಜನಪಿತ ಗೋವಿಂದಂ ನಮೋಮೃತ್ಯು ಸಂಹರ ಗೋವಿಂದಭಕ್ತಜನರಾಪತ್ತು ಪರಿಹರಮುಕ್ತಿದಾಯಕಕರ್ತುಶ್ರೀರಾಮ5
--------------
ರಾಮದಾಸರು
ತೋಳು ತೋಳು ತೋಳು ಕೃಷ್ಣ-ತೋಳನ್ನಾಡೈ |ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈಪಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋ-|ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋ-|ನೆಲುವು ನಿಲುಕದೆಂದೊರಳ ತಂದಿಡುವನೆ ತೋ-|ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋ- 1ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋ-|ಕಟ್ಟದ ಕರಡೆಯ ಕರುವೆಂದೆಳೆವನೆ ತೋ-||ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋ-|ಬಟ್ಟಲ ಹಾಲನು ಕುಡಿದು ಕುಣಿವನೆ ತೋ- 2ಅಂಬೆಗಾಲಿಲೊಂದೊರಳನ್ನೆಳೆವನೆ ತೋ-|ತುಂಬಿದ ಬಂಡಿಯ ಮುರಿಯಲೊದ್ದವನೆ ತೋ-|ಕಂಬದಿಂದಲವತರಿಸಿದವನೆ ನೀ ತೋ-|ನಂಬಿದವರನುಹೊರೆವಕೃಷ್ಣ ತೋ3ಕಾಲಕೂಟದ ವಿಷವ ಕಲಕಿದ ತೋ-|ಕಾಳಿಂಗನ ಹೆಡೆಯನು ತುಳಿದ ತೋ-||ಕಾಳೆಗದಲಿ ದಶಕಂಠನ ಮಡುಹಿದ ತೋ-|ಶಾಲಕ ವೈರಿಯೆ ಕರುಣಿಗಳರಸನೆ ತೋ 4
--------------
ಪುರಂದರದಾಸರು
ಹಣ್ಣು ತಾ ಬೆಣ್ಣೆ ತಾರೆ - ಗೋಪಮ್ಮ-|ಹಣ್ಣು ತಾ ಬೆಣ್ಣೆ ತಾರೆ ಪಅಡವಿಯೊಳಗೆ ಅಸುರನ ಕೊಂದ ಕೈಗೆ |ಮಡುವಿನೊಳಗೆ ಮಕರನ ಸೀಳ್ದ ಕೈಗೆ ||ಪೊಡಿವಿಯೊಳಗೆ ಚೆಂಡನಾಡಿದ ಕೈಗೆ |ಸಡಗರದಲಿ ಭೂಮಿ ಬೇಡಿದ ಕೈಗೆ 1ಶಂಖ ಚಕ್ರಗಳ ಪಿಡಿದಂಥ ಕೈಗೆ |ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ||ಬಿಂಕದಿಂದಲಿ ಕೊಳಲೂದುವ ಕೈಗೆ |ಪಂಕಜಮುಖಿಯರ ಕುಣಿಸುವ ಕೈಗೆ 2ದಿಟ್ಟತನದಲಿಬೆಟ್ಟವೆತ್ತಿದ ಕೈಗೆ|ಸೃಷ್ಟಿಯ ದಾನವ ಬೇಡಿದ ಕೈಗೆ ||ದುಷ್ಟಭೂಪರನೆಲ್ಲ ಮಡುಹಿದ ಕೈಗೆ |ಕೆಟ್ಟ ದಾನವರನು ಸದೆಬಡಿದ ಕೈಗೆ 3ಕಾಳಿಯ ಮಡುವನು ಕಲಕಿದ ಕೈಗೆ |ಸೋಳಸಾಸಿರ ಗೋಪಿಯರಾಳಿದ ಕೈಗೆ ||ಮೇಳದ ಭಕ್ತರುದ್ಧರಿಸುವ ಕೈಗೆ |ಏಳು ಗೂಳಿಯ ಗೆದ್ದ ಯದುಪನ ಕೈಗೆ 4ಬಿಲ್ಲು - ಬಾಣಗಳನು ಪಿಡಿದಂಥ ಕೈಗೆ |ಮಲ್ಲಸಾಧನೆಯನು ಮಾಡಿದ ಕೈಗೆ ||ಎಲ್ಲ ದೇವರದೇವ ರಂಗನ ಕೈಗೆ |ಬಲ್ಲಿದಪುರಂದರವಿಠಲನ ಕೈಗೆ5
--------------
ಪುರಂದರದಾಸರು