ಒಟ್ಟು 718 ಕಡೆಗಳಲ್ಲಿ , 97 ದಾಸರು , 636 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವರಗಳೆ ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ ಜ್ಞಾನಿ |ಚಾಟಕನಾದರೆ ಜ್ಞಾನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ ಕಂಟಕ ಕಾಕು ಭಂಗ ಬ್ರಹ್ಮಜ್ಞಾನ ಯೋಗಿ ಬ್ರಹ್ಮಜ್ಞಾನ ಬ್ರಹ್ಮಜ್ಞಾನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||
--------------
ಸಿದ್ಧಗುರುತ್ರಿಪುರಾಂತಕ
ಹರ ಹರ ಹರ ಹರ ಶ್ರೀ ಗುರುನಾಥಾ | ಪರಿಹರಿಸುವ ಈ ಭವ ಭವಹರ ಪ ಕಾಮಿತ ಜನರನು ಕಂಡರೆ ಕರೆವ | ಕಾಮಿತ ಫಲ ಕಲ್ಪನೆಗಳ ಜರೆವ 1 ಶಿರದೊಳು ತನ್ನಯ ಕರಕಮಲಿಡುವ | ಮರಳಿ ಜನಿಸದ ಪದವಿಯ ಕೊಡುವ 2 ಭವ ಭಯ ಸಂಶಯ ಬೀಜವ ಹುರಿವ | ಭವತಾರಕನಾಗಿಳೆಯೊಳು ಬರುವ 3
--------------
ಭಾವತರಕರು
---ಮಾಡೋ ಏ ಮೂಢಾ ಪ ನಾಮ ಭಜನಿ ಮಾಡೋ ಪ್ರೇಮದಿ ----- ಸ್ವಾಮಿ ಜಗನ್ನಾಥಾ ರಾಮ ರಾಮಯೆಂದು 1 ಛಂದದಿ ಮನಸಲಿ ಶ್ರೀ ಕೃಷ್ಣನಾನಂದದಿ ನೀನೀಗೊ--------------- 2 ಹರಿಯ ಬಿಡದೆ ಚಿತ್ತ ಹರುಷದಿಸ್ಮರಣೀಯಾ ಚರಣ ಕಮಲದಲಿ ನಿರುತದಿ ನೀಇನ್ನೂ ಪಠಿಸುತ ಭಕುತಿಯಿಂದ ನೀ ಸದಾ 3 ಮಂಗಳಮೂರುತಿ ತ್ರಿಜಗತ್ಕರ್ತ ರಂಗನಾಕೀರುತಿ ಹಿಂಗದೆ ನಿಜ ಅಂತರಂಗ ಕೃಪಾಂಗನಾ ಗಂಗೆಯ ಜನಕನಾದ ಘನ 'ಹೊನ್ನ ವಿಠ್ಠಲನಾ’ 4
--------------
ಹೆನ್ನೆರಂಗದಾಸರು
ಎಲ್ಲ್ಯಾಡಿಲ್ಲಿಗೆ ಬಂದನೆ ಈತನು ಕೌ- ಸಲ್ಯಾದೇವಿಯ ಕಂದನೆ ಎಲ್ಲ್ಯಾಡಿಲ್ಲಿಗೆ ಬಂದ ಚೆಲ್ವೆ ಕೌಸಲ್ಯೆ ಕಂದ ಫÀುಲ್ಲಲೋಚನೆ ಜಾನಕಿ ಲಕ್ಷ್ಮಣರನೆ ಕೂಡಿ ಪ ಸನಕಾದಿ ಸುರರ್ವಂದಿತ ಮಾಣಿಕ್ಯ ರತ್ನ ಪದಕ ಪಚ್ಛದಿ ಭೂಷಿತ ಜನಕ ಜಾನ್ಹವಿ ಜಾನಕಿ ರಾಮರಿಬ್ಬರು ವನಕೆ ಬಂದ್ವಾರಿಧಿ ಕಟ್ಟಿ ವಾನರನ ಕೂಡೆಲ್ಯಾಡಿಲ್ಲಿಗೆ ಬಂದನೆ 1 ನಾಸಿಕ ಭಂಗ ಮಾಡಿ ಮಾರೀಚನ್ವಧೆ ಮಂಡೋದರೀಪತಿ ಮರ್ದಕನಾಗಿದ್ದ ಬಂದಯೋಧ್ಯವನಾಳಿ ಭಕ್ತರ ಸಲಹೊ ದಾತ್ಯೆಲ್ಲ್ಯಾಡಿಲ್ಲಿಗೆ ಬಂದನೆ 2 ಬಿಲ್ಲುಪಿಡಿದು ನಿಂತನೆ ಭೀಮೇಶಕೃಷ್ಣ ಬಲ್ಲಿದ ಬಲವಂತನೆ ಕಲ್ಲ್ಹೆಣ್ಣು ಮಾಡಿದ ಕರುಣಕೃಪಾಳೋ ಕೈ- ವಲ್ಯದಾಯಕ ಸೀತಾವಲ್ಲಭೆಂದೆನಿಸುವೋನೆಲ್ಲಾಡಿಲ್ಲಿಗೆ ಬಂದನೆ 3
--------------
ಹರಪನಹಳ್ಳಿಭೀಮವ್ವ
ಭಯವ್ಯಾಕೆ ಭಕ್ತ ಜನಕೆಪ. ನಯದಿಂದ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ ಮಾಯವಾದಿಗಳನ್ನು ಅ.ಪ. ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ ನಾದಮಯನಾದ ದೇವ ಭೇದವಿಲ್ಲದೆ ಎಲ್ಲಾ ಭೇದವೆಂಬುವರನ್ನು ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ 1 ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ ಹೃದಯದೊಳಗೆ ಹರಿಯ ತಂದು ಮುಂದು ಸದಯನು ನೀನೆನುತ ಸದ್ವøತ್ತಿಲುದಯನು ನೀನೆನುತ ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ 2 ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ- ಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉ- ತÀ್ಕøಷ್ಟ ಹಯವದನ ದೊರೆ 3
--------------
ವಾದಿರಾಜ
ಶ್ರೀಕಾಂತ ಬಿನ್ನಹ ಸರ್ವಲೋಕೈಕ ರಕ್ಷಕನಾಗಿಯಾಕೆ ನೀರಪೊಕ್ಕೆಯಯ್ಯಾ ಶ್ರೀಕೃಷ್ಣರಾಯಭೀಕರತಮನ ಕೊಂದುಶ್ರೀಕರವೇದವ ತಂದುಲೋಕೇಶನಿಗಿತ್ತೆ ಕಾಣೆ ಎಲೆ ಸತ್ಯಭಾಮೆ 1 ಮಾರಜನಕನ ಕೌಸ್ತುಭಹಾರ ಕೇಳು ಕಠಿಣ ಶ-ರೀರವ ಪಡದೆ ಯಾಕೆ ಶ್ರೀಕೃಷ್ಣರಾಯನೀರೊಳು ಧಾರಿಣಿ ಮುಳುಗೆಚಾರು ಕೂರ್ಮಾಕಾರದಿಂದಭೂರಮಣಿಯ ಪೊರೆದೆ ಎಲೆ ಸತ್ಯಭಾಮೆ2 ಧಾರಿಣಿಯ ಮಣ್ಣನಗೆದುಬೇರಮೆದ್ದು ಕಠಿಣ ಕಾಂ-ತಾರವ ಸೇರಿದೆ ಯಾಕೆ ಶ್ರೀಕೃಷ್ಣರಾಯಕ್ರೂರದಾಡೆಯಗ್ರದಿ ವೈ-ಯಾರದಿ ಭೂಮಿಯನೆತ್ತಿಮೂರು ಲೋಕವ ಪೊರದೆ ಎಲೆ ಸತ್ಯಭಾಮೆ 3
--------------
ಕೆಳದಿ ವೆಂಕಣ್ಣ ಕವಿ
(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
(ಅ) ಯಾಕೆ ಬಾರದೋ ದಯವು ಶ್ರೀಹರೀ ಪ ಲೋಕನಾಥ ನಿನಗೆ ಅಹಿತನೆ ನಾನು ನೂಕದಿರೆನ್ನ ಭವದೀ - ಶ್ರೀ ಹರೀ 1 ಆರು ನಿನ್ನ ಹೊರತೂ ಪೊರೆವರೋ ಶೌರೀ ಭೂರಿ ಕರುಣಾಶರಧೀ - ಶ್ರೀ ಹರೀ 2 ಚಿಂತಿತಾರ್ಥವನು ಕೊಡುವ ಶ್ರೀಕಾಂತ ಅಂತು ಕೃಪೆಯಿಂ ಪೊರೆಯೋ - ಶ್ರೀ ಹರೀ 3
--------------
ಲಕ್ಷ್ಮೀನಾರಯಣರಾಯರು
(ಅ) ಸರಿಯಾರೋ ಜಗದೊಳಗೆ - ಶ್ರೀ ನರಹರಿಗೇ ಪ ಸುರ ನರೋರಗರೊಳು ಅರಸೀ ನೋಡಲು ಕಾಣೆಅ ಹರಿಯೇ ಮೈದೋರೆಂದು - ಕರೆಯಲಾಕ್ಷಣ ಬಂದು ತರಳನ್ನ ಸಲಹಿದ ಸರ್ವಾಂತರ್ಯಾಮಿಗೇ 1 ಕರಿರಾಜ ಕರೆಯಲು ಸುರರೆಲ್ಲಮಿಡುಕಲು ಗರುಡನ್ನೇರಿ ಬಂದ ಸರ್ವಕಾರ್ಯನಿಗೇ 2 ರಕ್ಷಕ ಶಿಕ್ಷಕ ಮೋಕ್ಷದಾಯಕ ಆಕ್ಷಯಾತ್ಮಕನಾದ ಲಕ್ಷ್ಮೀಕಾಂತನಿಗೇ 3
--------------
ಲಕ್ಷ್ಮೀನಾರಯಣರಾಯರು
* ಸತ್ಯವಂತನೊ ನೀನು ಸರಸಿಜಾಕ್ಷ ಸಿರಿ ನಿತ್ಯಾವಿಯೋಗ ಪ. ಶ್ರೀನಿವಾಸನೆ ಕೃಷ್ಣ ಭಾನು ಪ್ರಕಾಶ ಹರಿ ಏನೆಂಬೆ ನಿನ್ನ ಪ್ರಭಾವವನ್ನು ನಾನಾ ವಿಧದಿಂದ ಭಕ್ತರ ಕಾಯ್ವ ನರಹರಿಯೆ ಮಾನವಂತರ ಕಾಯ್ವ ದಾನವಾಂತಕನೆ 1 ಕೃಷ್ಣಮೂರುತಿ ನಿನ್ನ ದರುಶನದ ಕಾರಣದಿ ಕ್ಲೇಶ ತಂದೊಡ್ಡಿ ಇಷ್ಟು ಪರಿಯಲಿ ಎನ್ನ ಮನವ ಶೋಧಿಸಿ ನೋಡಿ ಕಷ್ಟ ಕಳೆದೆಯೊ ಈಗ ಕರುಣಾಳು ದೇವ 2 ಗುರುಗಳಿಗೆ ಬಂದಂಥ ರೋಗವನೆ ಪರಿಹರಿಸಿ ಕರುಣಿಸಿದೆ ಮನಕೆ ಬಹು ಆನಂದವನ್ನು ಪರತರನೆ ಇದರಂತೆ ಭವರೋಗವನೆ ಹರಿಸಿ ನಿರುತ ನಿನ್ನಯ ಪಾದಸ್ಥಾನ ನೀಡೆನಗೆ 3 ಸುರಪನಿಗೆ ಬಂದಂಥ ಪರಿಪರಿಯ ಕಷ್ಟದಿಂ ಹರಿಯೆ ನಿನ್ನಾಜ್ಞೆಯಿಂದೆಲ್ಲರೂ ಕೂಡಿ ಶರಧಿ ಮಥಿಸುತಲಿರಲು ಕರುಣೆಯಿಂದಲಿ ಸುಧೆಯ ಕಲಶ ತಂದವನೆ4 ವಂಚನೆಯ ಪೆಣ್ಣಾಗಿ ವಂಚಿಸಿ ದೈತ್ಯರನು ಅಮೃತ ಸುರರಿಗುಣಿಸಿ ಪಂಚಬಾಣನ ಪಿತನೆ ಸುರರ ರಕ್ಷಕನಾದೆ ವಂಚಿಸದೆ ಎಮ್ಮಗಳ ನೀನೀಗ ಕಾಯೊ 5 ಅಮೃತಹಸ್ತನೆ ಕೃಷ್ಣ ಅಮೃತವಿತ್ತು ಕಾಯೊ ಅಮೃತರಲ್ಲವೆ ನಿನ್ನ ಪಟ್ಟಣದ ಜನರು ಅಮೃತ ಕಿರಣಾಂತರ್ಯಾಮಿಯೆ ಶಾಂತ ಧನ್ವಂತ್ರಿ ಅಮೃತರಾಗುವರೈಯ್ಯ ನಿನ್ನ ನಂಬಿದರೆ 6 ಸಚ್ಚಿದಾನಂದ ಸರ್ವೋತ್ತಮನೆ ಶ್ರೀ ಕೃಷ್ಣ ಬಿಚ್ಚಿ ಸಲಹಯ್ಯ ಎನ್ನಜ್ಞಾನ ಬಂಧ ಅಚ್ಚುತಾನಂತ ಶ್ರೀ ಗುರುಗಳಂತರ್ಯಾಮಿ ಅಚ್ಚವೈಷ್ಣಣವ ಪ್ರಿಯ ಗೋಪಾಲಕೃಷ್ಣವಿಠ್ಠಲ 7
--------------
ಅಂಬಾಬಾಯಿ
ಪುರಾಣವಿಷಯ ಶ್ರೀವೆಂಕಟೇಶ ಕಲ್ಯಾಣ ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ಪ ಪನ್ನಂಗಶಯನ ಪ್ರಸನ್ನರ ಪಾಲಿಪ ಘನ್ನಮಹಿಮ ನೀನೆನ್ನನುದ್ಧರಿಸೂಅ.ಪ ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ ಪರಮಾದರದಿಂದಿರುವ ಸಮಯದಿ ನಾರದ ಮುನಿ ಬಂದೊದಗಿ ನಿಂದ ಇ- ಸುರಮುನಿವಚನದಿ ಭೃಗುಮುನಿವರ ಪೋಗಿ ಹರುಷದಿ ಶ್ರೀಹರಿ ಉರಗಶಯನನಾಗಿ ಹರುಷದಿ ಮುನಿಪಾದ ಕರದಲಿ ಒತ್ತುತ ಕರುಣದಿ ಸಲಹಿದೆ ದುರಿತವ ಹರಿಸಿ ಹರಿಭಕುತರ ಅಘಹರಿಸಿಕಾಯುವಂಥ ಕರುಣಿಗಳುಂಟೇ ಶ್ರೀಹರಿ ಸರ್ವೋತÀ್ತುಮಾ 1 ಸ್ವಾಮಿ ನೀನಿಜಧಾಮವನೇ ತೊರೆದೂ ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ ವಲ್ಮೀಕವನೆ ನೋಡಿ ಸನ್ಮುದವನ್ನೇ ತೋರುತ ಕಮಲ ಭವಶಿವ ತುರುಕರುರೂಪದಿ ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ ಭೂಮಿಗೊಡೆಯ ಚೋಳನೃಪಸೇವಕನು ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು ಅಮಿತ ಸುಗುಣಪೂರ್ಣ ಅಜರಾಮರಣ ನೀ ಮಸ್ತಕಸ್ಪೋಟನ ವ್ಯಾಜವ ತೋರಿ ಪ್ರೇಮದಿ ಗುರುಪೇಳ್ದೌಷಧಕಾಗಿ ನೀ ಮೋಹವ ತೋರಿದೆ ವಿಡಂಬನಮೂರ್ತೇ 2 ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ ಹಯದಿ ಕುಳಿತ ನಿನ್ನ ನೋಡಲು ಪ್ರಿಯಳಿವಳೆನಗೆಂದು ಯೋಚಿಸಿ ಕಾಯಜಪಿತ ನಿನ್ನ ಹಯವನೆ ಕಳಕೊಂಡು ಮಾಯದಿಂದ ನೀ ಮಲಗಿದೆ ತೋಯಜಮುಖಿಯಳ ಬೇಡಿದೇ ಆ ಯುವತಿಯನ್ನೇ ಸ್ಮರಿಸುತಾ ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು ಶ್ರೇಯವೆಂದು ಆಕಾಶನನೊಪ್ಪಿಸಿ ತಾಯಿಯಭೀಷ್ಟವನಿತ್ತೆ ಸ್ವರಮಣಾ 3 ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ ಭಕುತನಾದ ಆಕಾಶನೃಪತಿಯು ಬಕುಳೆ ಮಾ- ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ- ಗೆ ಕೊಟ್ಟನು ತಾ ಲಗ್ನಪತ್ರಿಕಾ ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ ಸಕಲಸಾಧನವಿಲ್ಲಿನ್ನು ಲೋಕೇಶಗರುಹಬೇಕಿನ್ನು ಲೋಕಪತಿಯೆ ಸುರಕೋಟಿಗಳಿಂದಲಿ ಈ ಕುವಲಯದಿ ನಿನ್ನಯ ಪರಿಣಯವೆಸಗಲು ಭಕುತಜನಪ್ರಿಯ ಶ್ರೀವತ್ಸಾಂಕಿತ 4 ಖಗವರವಾಹನ ದೇವಾ ಅಗಣಿತಮಹಿಮ ಗೋಮಯನೆನಿಸಿ ಸುರರ ಪೊರೆಯುತಾ ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ ಖಗಮೃಗ ರೂಪವ ಬಗೆಬಗೆ ಇಹೆ ಪೊಗಳಲಳವೇ ಗಿರಿವರವು ಹಗಲು ಇರುಳು ಭಗವಂತನೆ ನಿನ್ನನ್ನು ಪೊಗಳುತಿಹರು ನಿನ್ನ ಭಕುತರು ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ ಯುಗ ಯುಗದೊಳು ನೀನಗದೊಳು ನೆಲಸಿಹೆ ಜಗದ ದೇವ ರಾಜಿಸುವವನಾಗಿಹೆ ಮಿಗಿಲೆನಿಸಿದ ಶ್ರೀ ವೆಂಕಟೇಶಾ ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ 5
--------------
ಉರಗಾದ್ರಿವಾಸವಿಠಲದಾಸರು
ಶ್ರೀ ಮಧ್ವನಾಮ ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ ಪ ಆವ ಕಚ್ಚಪ ರೂಪದಿಂದ ಲಂಡೋದಕವಓವಿ ಧರಿಸಿದ ಶೇಷಮೂರುತಿಯನುಆವವನ ಬಳಿವಿಡಿದು ಹರಿಯ ಸುರರೆಯ್ದುವರುಆ ವಾಯು ನಮ್ಮ ಕುಲಗುರುರಾಯನು 1 ಆವವನು ದೇಹದೊಳಗಿರಲು ಹರಿ ನೆಲಸಿಹನುಆವವನು ತೊಲಗೆ ಹರಿ ತಾ ತೊಲಗುವಆವವನು ದೇಹದ ಒಳ ಹೊರಗೆ ನಿಯಾಮಕನುಆ ವಾಯು ನಮ್ಮ ಕುಲಗುರುರಾಯನು 2 ಸುರರು ಮುಖ್ಯಪ್ರಾಣ ತೊಲಗಲಾ ದೇಹವನುಅರಿತು ಪೆಣವೆಂದು ಪೇಳುವರು ಬುಧಜನ 3 ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆಪರತರನೆನಿಸಿ ನಿಯಾಮಿಸಿ ನೆಲಸಿಹಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳುಗುರು ಕುಲತಿಲಕ ಮುಖ್ಯ ಪವಮಾನನು 4 ತರಣಿ ಬಿಂಬಕ್ಕೆ ಲಂಘಿಸಿದಈತಗೆಣೆಯಾರು ಮೂರ್ಲೋಕದೊಳಗೆ 5 ತರಣಿಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿಉರವಣಿಸಿ ಹಿಂದು ಮುಂದಾಗಿ ನಡೆದಪರಮ ಪವಮಾನಸುತ ಉದಯಾಸ್ತ ಶೈಲಗಳಭರದಿಯೈದಿದಗೀತಗುಪಮೆ ಉಂಟೇ 6 ಅಖಿಳ ವೇದಗಳ ಸಾರಪಠಿಸಿದನು ಮುನ್ನಲ್ಲಿನಿಖಿಳ ವ್ಯಾಕರಣಗಳ ಇವ ಪಠಿಸಿದಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದುಮುಖ್ಯಪ್ರಾಣನನು ರಾಮನನುಕರಿಸಿದ 7 ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿಧರಣಿಸುತೆಯಳ ಕಂಡು ದನುಜರೊಡನೆಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳಉರುಹಿ ಲಂಕೆಯ ಬಂದ ಹನುಮಂತನು 8 ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಬಲು ರಕ್ಕಸರನುಒರಸಿ ರಣದಲಿ ದಶಶಿರನ ಹುಡಿಗುಟ್ಟಿದಮೆರೆದ ಹನುಮಂತ ಬಲವಂತ ಧೀರ 9 ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆತರಣಿ ಕುಲತಿಲಕನಾಜ್ಞೆಯ ತಾಳಿದಗಿರಿಸಹಿತ ಸಂಜೀವನವ ಕಿತ್ತು ತಂದಿತ್ತಹರಿವರಗೆ ಸರಿಯುಂಟೆ ಹನುಮಂತಗೆ 10 ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆಭಜಿಸಿ ಮೌಕ್ತಿಕದ ಹಾರವನು ಪಡೆದಅಜಪದವಿಯನು ರಾಮ ಕೊಡುವೆನೆನೆ ಹನುಮಂತನಿಜಭಕುತಿಯನೆ ಬೇಡಿ ವರವ ಪಡೆದ 11 ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮಕುಲದಲಿ ಜನಿಸಿ ಪಾರ್ಥನೊಡನೆ ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದಆ ಮಹಿಮನಮ್ಮ ಕುಲಗುರು ರಾಯನು 12 ಕರದಿಂದಶಿಶುಭಾವನಾದ ಭೀಮನ ಬಿಡಲುಗಿರಿವಡೆದುಶತಶೃಂಗವೆಂದೆನಿಸಿತುಹರಿಗಳ ಹರಿಗಳಿಂ ಕರಿಗಳ ಕರಿಗಳಿಂಅರೆವ ವೀರನಿಗೆ ಸುರ ನರರು ಸರಿಯೇ 13 ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿಹಸಿದುರಗಗಳ ಮ್ಯಾಲೆ ಬಿಡಲದನೊರಸಿದಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರಧರಿಸಿ ಜಾಹ್ನವಿಗೊಯ್ದ ತನ್ನನುಜರ14 ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ ಲೋಕಕಂಟಕರನುಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದುಎಲ್ಲ ಸುಜನರಿಗೆ ಹರುಷವ ತೋರಿದ 15 ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿರಾಜಸೂಯ ಯಾಗವನು ಮಾಡಿಸಿದನುಆಜಿಯೊಳು ಕೌರವರ ಬಲವ ಸವರುವೆನೆಂದುಮೂಜಗವರಿಯೆ ಕಂಕಣ ಕಟ್ಟಿದ 16 ಮಾನನಿಧಿ ದ್ರೌಪದಿಯ ಮನದಿಂಗಿತವನರಿತುದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದುಮಾನಿನಿಗೆ ಸೌಗಂಧಿಕವನೆ ತಂದ 17 ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆಮರುಳಾಗಿ ಕರೆÀಕರೆಯ ಮಾಡಲವನಾಗರಡಿ ಮನೆಯಲ್ಲಿ ವರೆಸಿ ಅವನನ್ವಯದಕುರುಪನಟ್ಟಿದ ಮಲ್ಲಕುಲವ ಸದೆದ 18 ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿಓರಂತೆ ಕೌರವನ ಮುರಿದು ಮೆರೆದವೈರಿ ದುಶ್ಯಾಸನ್ನ ರಣದಲ್ಲಿ ಎಡೆಗೆಡಹಿವೀರ ನರಹರಿಯ ಲೀಲೆಯ ತೋರಿದ 19 ಗುರುಸುತನು ಸಂಗರದಿ ನಾರಾಯಣಾಸ್ತ್ರವನುಉರವಣಿಸಿ ಬಿಡಲು ಶಸ್ತ್ರವ ಬಿಸುಟರುಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ 20 ಚಂಡ ವಿಕ್ರಮನು ಗದೆಗೊಂಡು ರಣದಿ ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನುಕಂಡುನಿಲ್ಲುವರಾರು ತ್ರಿಭುವನದೊಳು21 ದಾನವರು ಕಲಿಯುಗದೊಳವತರಿಸಿ ವಿಬುಧರೊಳುವೇನನ ಮತವನರುಹಲದನರಿತುಜ್ಞಾನಿ ತಾ ಪವÀಮಾನ ಭೂತಳದೊಳವತರಿಸಿಮಾನನಿಧಿ ಮಧ್ವಾಖ್ಯನೆಂದೆನಿಸಿದ 22 ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನುಓರ್ವ ಮಧ್ವಮುನಿ ತೋರ್ದ ಸುಜನರ್ಗೆ23 ವಿಶ್ವ ವಿಶ್ವ ಗೀರ್ವಾಣ ಸಂತತಿಯಲಿ 24 ಅಖಿಳ ವೇದಾರ್ಥಗಳನುಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ 25 ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡಜಯಜಯತು ವಾದಿಗಜ ಪಂಚಾನನಜಯಜಯತು ಚಾರ್ವಾಕಗರ್ವಪರ್ವತ ಕುಲಿಶಜಯ ಜಯ ಜಗನ್ನಾಥ ಮಧ್ವನಾಥ26 ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿಭಂಗವಿಲ್ಲದೆ ಸುಖದ ಸುಜನಕೆಲ್ಲಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕರಂಗವಿಠಲನೆಂದು ನೆರೆ ಸಾರಿರೈ 27 “ಮಧ್ವನಾಮ” ಕೃತಿಗೆ ಶ್ರೀ ಜಗನ್ನಾಥದಾಸರ ಫಲಶ್ರುತಿ ಸೋಮ ಸೂರ್ಯೋಪರಾಗದಿ ಗೋಸಹಸ್ರಗಳಭೂಮಿದೇವರಿಗೆ ಸುರನದಿಯ ತೀರದಿಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕುಈ ಮಧ್ವನಾಮ ಬರೆದೋದಿದರ್ಗೆ 1 ಪುತ್ರರಿಲ್ಲದವರು ಸತ್ಪುತ್ರರೈದುವರುಸರ್ವತ್ರದಲಿ ದಿಗ್ವಿಜಯವಹುದು ಸಕಲಶತ್ರುಗಳು ಕೆಡುವರಪಮೃತ್ಯು ಬರಲಂಜವುದುಸೂತ್ರನಾಮಕನ ಸಂಸ್ತುತಿ ಮಾತ್ರದಿ 2 ಶ್ರೀಪಾದರಾಯ ಪೇಳಿದ ಮಧ್ವನಾಮ ಸಂತಾಪಕಳೆದಖಿಳ ಸೌಖ್ಯವನೀವುದುಶ್ರೀಪತಿ ಜಗನ್ನಾಥವಿಠಲನ ತೋರಿ ಭವಕೂಪಾರದಿಂದ ಕಡೆ ಹಾಯಿಸುವುದು 3
--------------
ಶ್ರೀಪಾದರಾಜರು
----------ನೋಡಿದೆ ತಾಂಡವ ಕೃಷ್ಣನ ನೋಡಿದೆ ಕೃಷ್ಣನ ನೋಡಿದೆ ಸೃಷ್ಟಿಗೆ ಕರ್ತನಾದ ವಿಠ್ಠಲಮೂರುತಿ ಅಭೀಷ್ಟದಾ ನಾಯಕನಾ ಪ ಅಕ್ಷಯ ತೋರುವನಾ ಸಕಲಾ ರಕ್ಷಕ ರಘುರಾಮಾನಾ ಲಕ್ಷ್ಮಿ ಮನೋಹರನಾ ದೈವಾಧ್ಯಕ್ಷ ಮಹಾಮಹಿಮನಾ ಕಲ್ಪವೃಕ್ಷ ಕಾಮಧೇನು ವಿಶ್ವಕುಟುಂಬನಾ 1 ದಶರಥನಂದನನಾ ದೇವಾ ವಸುಧಿಯನಾಳುವನಾ ಪಶುಪತಿ ಪಾಲಕನಾ ಭಕ್ತರ ಕುಶಲದಿ ಸಲಹುವನಾ ಬಿಸರುಹಾಕ್ಷ ಶ್ರೀ ಪೂರ್ಣ ಪ್ರಕಾಶನ ದಶಶಿರನಳಿದ ಕೋದಂಡರಾಮನ 2 ಶಿರಮಣಿ ಮಕುಟಧರನಾದಾ ಕೊರಳ ಪದಕಹಾರ ಕರದೊಳು ಕಂಕಣವಾ ಕಿರಿಬೆರಳಲಿ ಉಂಗುರವಾ ಪರಮ ಪರುಷ ನರಹರಿ ` ಹೆನ್ನೆವಿಠ್ಠಲ ' ಪರಮಾತ್ಮನ ಸರ್ವ ಪೋಷಕ ನಾದನಾ 3
--------------
ಹೆನ್ನೆರಂಗದಾಸರು
(3) ತುಳಸಿರಾಮದಾಸರು ದಯಮಾಡಬಾರದೇಕೊ ದಾಸನೊಳೆ ನೀ ಪ ಭಯ ವೇನಿಹುದೊ ನಿನ್ನ ಭಜಕನಾದ ಮ್ಯಾಲೆ ದಯ ಸಾಕ್ಷಿಯೊಳು ಜಗತ್ರಯ ಪೂಜ್ಯವಂತ 1 ಸಾಧು ಶಿಖರನೆ ಬಾರೊ ಸಕಲಾಂತರವತೋರೊ ಪಾದ ಸೇವಕನು ನಾನಾದಮೇಲೆ ನಿಂತು ನೀ 2 ನಿತ್ಯೋತ್ಸವನೇ ದೇವಾ ನೀನೆ ಮಹಾನುಭಾವಾ ಪ್ರತ್ಯಕ್ಷಮಾದ ಮದ್ಗುರುವೇ ತುಲಸೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
(3) ರೇವಣ್ಣ ಸಿದ್ದೇಶ್ವರ ಯತಿಗಳು ಬೆಂಗಳೂರು ಭೇಟಿ ಯೋಗಿಶೇಖರನಾಗಿ ಬೆಳಗುವ ಜಗದೊಳಗೆ ತಾ ನಿಜ ಪ ನಾಗಭೂಷಣನಡಿಗಳಂ ಪಿಡಿದಾಗ ಹೊಂದಿದನದ್ವಯಂ ಪದ ಜೋಗಿ ಜಂಗಮದೊಡೆಯ ನಮ್ಮಯ ರೇವಣಾಶಿದ್ಧೇಶ್ವರನೆ 1 ತಾನಿಹ ಶೈವಗಿರಿಯೊಳು ದೀನಜನಮಂದಾರ ಮುನಿಮಹ 2 ಅಂತರಾತ್ಮನೊಳಿಂತು ಹೊಂದಿಪ ರೆಂತು ಲೋಕೋಪಕಾರ ರಾಗಿಯು ಅಂತು ದಯಮಾಡಿರುವ ನೋಡಿ ಅ ನಂತ ಮಹಿಮನೆ ರುದ್ರಮುನಿ 3 ತತ್ಸ್ವರೂಪನು ತೋರಿ ಭುವನಕೆ ಸತ್ಸಹಾಯಕನಾದ ನಮ್ಮಯ ಮತ್ಸ್ಯಮೂರುತಿ ಪ್ರಿಯನೆ ಮುನಿಮಹಾ 4 ತಿರ್ಗಿ ಲೋಕಕೆ ಬಾರದಂದದಿ ಸ್ವರ್ಗಲೋಕದೊಳಿರುವ ಮುನಿಮಹಾ 5 ಭುವನದೊಳಗವತರಿಸಿಯಿರುತಿಹ ಸುಮನ ಸತ್ಯಸಮಾಜ ಭೋಜನೆ ತಾ ನಿವನೆನೆ ಹೊಳೆವ ಮುನಿಮಹಾ 6 ಬರುವ ಭಕ್ತರಿಗಾಗಿ ತನ್ನೊಳ ಗಿರುವ ಪರತತ್ವವನು ಭಕ್ತರ ಕರದುಕೊಡುವುದು ಕಂಡುಕೊಳ್ಳಿರೊ ತರುಣಿಮಣಿಯನು ಧರಸಿ ಧರೆಯೊಳು 7 ಪ್ರಣವಲಿಂಗದೊಳೈಕ್ಯಮಾಗುವ ಕಂಚಿವರದನ ಪ್ರೀಯನಾಗಿಯು 8
--------------
ಚನ್ನಪಟ್ಟಣದ ಅಹೋಬಲದಾಸರು