ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳೀಮನವೇ ತಿಳೀಮನವೇ ತಿಳೀಮನವೇ ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ ಭಾವಾತೀತನ ನೀ ತಿಳೀಮನವೇ ಪ ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ ಅಡಗಿದ ಗೂಢವಿದು ತಿಳೀಮನವೇ 1 ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ ಮರ್ಮವಿದು ಘನಶಾಂತಿಯಾ ಸ್ಥಾನಾ ಧರ್ಮಾಧರ್ಮವ ಮೀರಿಹ ತಾಣ ದುರ್ಮತಿಯಾ ಬಿಡು ಜಾಣಾ ಘೋರತರದ ಸಂಸಾರದ ನಾಶಾ ಪೂರಣಗೊಂಬುದು ಆಶಾ ಪರಾಶಾಂತಿಗಿನ್ನೊಂದನು ಕಾಣೆ ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಸುಮ್ಮನೆ ಹೊಗಳಿದರ್ಯಾತಕೀತನ ಪರ ಬ್ರಹ್ಮ ಪರಮಾತ್ಮೆಲ್ಲ್ಹಾನ ಪ ರಮ್ಮೆ ಮಾಡಿ ಬಲುಜಮ್ಮಾಸಿ ಮನುಗಳು ದಿಮ್ಮಾಕಿನಿಂದ ವೇದಸ್ಮøತಿಯನ್ನು ಅ.ಪ ಎಲ್ಲಿ ಕರೆಯಲಿಲ್ಲ್ಯಾನಂತೆ ಸುಳ್ಳೆ ಸಲ್ಲದ ಮಾತ್ಹೇಳಿಹ್ಯರಿಂತೆ ಸೊಲ್ಲು ಸೊಲ್ಲಿಗೆ ನಾನೆಲ್ಲೆಲ್ಲಿಕೂಗಲು ಕಲ್ಲಿಗು ಕಡೆಯಾಗಿರುವ ಪುಲ್ಲನಾಭ 1 ಹೊತ್ತುಕೊಂಡು ಇರುತಿಹ್ಯನಂತೆ ಅರ್ತುಕೊಂಡು ನಾ ನಿರ್ಕಾಗಿ ಭಜಿಸಲು ಸಾರ್ಥಕಮಾಡವಲ್ಲ ಕರ್ತನೆಂಬಂಥವ 2 ಮೊರೆಯಿಟ್ಟು ಭಕ್ತರಪ್ರಿಯಬಂಧು ಮಹ ಕರುಣಾಳು ಶ್ರೀರಾಮನೆ ಎಂದು ಪರಿ ಸ್ಥಿರವಾಕ್ಯವೇ ನರಿತು ಪೊಗಳಿದರು ಪರಮ ಪಾವನರು 3
--------------
ರಾಮದಾಸರು