ಒಟ್ಟು 75 ಕಡೆಗಳಲ್ಲಿ , 33 ದಾಸರು , 47 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸನು ಕಂಡೆನು ಕೇಳೌ ಘನ ಶ್ರೀ ಗುರು ಬಂದು ಶಾಸ್ತ್ರ ತತ್ವವ ಪೇಳ್ದಂ ಮನಸಿನ ಸಂಶಯವಳಿಯಿಸಿ ತನಯಗೆ ರಾತ್ರಿಯೊಳು ತೋರಿದಂ ಸತ್ಪಥಮಂ ಕಂದ ಕನಸನು ಕಂಡೆನು ಕೇಳೌ ಶ್ರೀಗುರುಭರದಿಂ ತಾ ಬಂದೂ ಪ ತನಯನ ಸಂಶಯವಳಿಯಿಸಿ ಪರತರ ಗತಿಯನು ತಾ ಕೊಡುವ ಅ.ಪ ಶ್ರೀಹರಿ ಪೂಜೆಯು ಸ್ತೋತ್ರವು ಚಿಂತನೆ-ಶ್ರೀಹರಿಮಂತ್ರವನೂ ಶ್ರೀಹರಿ ಲಾಂಛನ ಧರಿಸುತ ಸಂತತ ವಿಠಲನ ಭಜಿಸೆಂದು 1 ಬಂಧುರದೇಗುಲ ವರಕ್ಷೇತ್ರದೊಳಾನಂದವನೋಡುತಲೀ ನಿಂದಿಹ ಪರಿಪರಿ ಸಾಧುವೈಷ್ಣವರಿಗೊಂದನೆಮಾಡೆಂದ 2 ಸತ್ಯಪ್ರಬಂಧವು ಅಷ್ಟಾಕ್ಷರಿಜಪತತ್ವ ಸುದ್ವಯಮಂತ್ರ ನಿತ್ಯಹೃದಯದೊಳು ಸೋಹಂಭಾವದಿ ಭಕ್ತಿಯೊಳ್ಬೆರೆಯೆಂದ 3 ವರಮಹದೇವನ ಪುರಶ್ರೀರಂಗನಚರಣವ ಗುರಿಮಾಡೀ ಮರೆಯದೆ ಧ್ಯಾನಿಸು ನಾನೇ ನಿನ್ನನು ಪೊರೆಯುವೆನೆಂತೆಂದ 4
--------------
ರಂಗದಾಸರು
ಪಾರ್ವತಿರಮಣನಾ ನೋಡಿದೆನು | ನೋಡಿದೆನು | ಪರ್ವತ ಮಲ್ಲೇಶನಾ 1 ಆಟವಾಡುತ ಪಾಟ ಪಾಡುತ | ಕೋಟಿ ಜನರ ಸಹಿತಾಗಿ ಸಾಟಿಯಿಲ್ಲದ ಪರ್ವತ | ನಾಗಾ ಲೋಟಿಯನೆ ನಾ ನೋಡಿದೆ 2 ಅಲ್ಲಿದ್ದ ಜನರ ಸಹಿತಾಗಿ ಪೆದ್ದ ಚೆರುವನ್ನೆದಾಟಿದೆ | ಪುಟ್ಟ ಬೆಟ್ಟಗಳೇರಿ ಇಳಿಯುತ ಕೃಷ್ಣಧ್ಯಾನವ ಮಾಡುತ ದಿಟ್ಟ ಮಲ್ಲಿಕಾರ್ಜುನನ ಮನ ಮುಟ್ಟಿ ಸ್ನರಣೆಯ ಮಾಡುತ 3 ಶ್ರೀಭೌಮನ ಕೊಳ್ಳ ನೇಮದಿಂದಲಿ ದಾಟಿದೆ4 ಆ ಶೈಲ ಕೈಲಾಸ ಧಾಮರೆ | ಸೋಂಪಿನಿಂದಲಿ ಬಂದೆನೂ ಸಾಕ್ಷಿಗಣಪಗೆ ಕೈಯ ಮುಗಿದೂ | ಶ್ರೀ ಶೈಲಶಿಖರವ ಕಂಡೆನು5 ಭಂಗಾರ ಗೋಪುರದ ಮ್ಯಾಲೆ | ಶೃಂಗಾರವನು ನಾ ನೋಡಿದೆ ನಂದಿ ಭೃಂಗಿ ಮೊದಲು ಮಾಡಿ ಸಕಲ ತೀರ್ಥವ ನೋಡಿದೆ6 ಅಲ್ಲಿ ಸ್ನಾನವ ಮಾಡಿನಾನು | ಬಲ್ಲಿದನ ಬಲದಿಂದಲಿ ಎಲ್ಲ ಫಲ ಪುಷ್ಪಧರಿಸಿದ ಮಲ್ಲಿಕಾರ್ಜುನನ ನೋಡಿದೆ 7 ಪಂಚಾಮೃತವ ಮಾಡಿನಾನು | ಸಂಚಿತಾಗಮ ಕರ್ಮವು ವಂಚನಿಲ್ಲದೆ ಕರೆದು | ನಿಶ್ಚಿಂತೆ ಮನವನು ಮಾಡಿದೆ 8 ಜನಿತ ಪಾತಾಳಗಂಗಿ ಉದಕವು ತಂದು ಗಂಗಾಧರಗೆ ಎರೆದು ನಾನು | ಕಂಗಳಿಂದಲಿ ನೋಡಿದೆ 9 ಥೂಪ-ದೀಪ-ನೈವೇದ್ಯದಾರುತಿ | ಅನೇಕ ಭಕ್ತಿಲಿ ಮಾಡಿದೆ ಪ್ರೀತಿಯ ತೋರೆಂದು ಶಿವಗೆ | ಪ್ರೀತಿಲಿ ಕರಮುಗಿದೆನು 10 ಮುದ್ದು ಕೋಟಿಲಿಂಗಗೆ ನಾನು | ವಿಧ್ಯುಕ್ತದಿ ನಮಿಸಿದೆ ವೃದ್ಧ ಮಲ್ಲೇಶ್ವರನ ನೋಡಿ | ಅಲ್ಲಿದ್ದದೇವರ ಭಜಿಸಿದೆ 11 ಅಮರರಿಂದರ್ಚಿಸಿಗೊಂಬ | ಭ್ರಮರಾಂಬನ ನೋಡಿದೆ ಭ್ರಮೆಯು ಬ್ಯಾಡೆಂದು ಸಂಸಾರದ | ಬ್ಯಾಗದಿಂದಲಿ ಬೇಡಿದೆ 12 ಥಟ್ಟನೇ ಪಂಚಾ ಮಠವನೋಡಿ | ಅಟಕೇಶ್ವರಕೆ ಬಂದೆನು ಶಿಖರೇಶ್ವರನ ದರ್ಶನ ಮಾಡಿ | ಹಾಟಕೇಶ ಪುರ ನೋಡಿದೆ13 ಭಾರತಿಯ ಶೈಲಿ ವಿಸ್ತಾರ ಪತ್ರಿ ಪುಷ್ಪಗಳ ಫಲಗಳ ನಾರಸಿಂಹ ವಿಠಲಗರ್ಪಿಸಿ | ಧಾರೆ ಎರೆದು ಬಂದೆನು 14
--------------
ಓರಬಾಯಿ ಲಕ್ಷ್ಮೀದೇವಮ್ಮ
(ಕಾಂಚಿ ವರದರಾಜಸ್ವಾಮಿ) ಕಾಂಚಿ ವರದರಾಜ ಪರಮ ದಯಾಳೊ ವಂಚನೆಯಿಲ್ಲದ ಬಿನ್ನಹ ಕೇಳೊ ಪ. ಐಂದ್ರ ನಕ್ಷತ್ರ ವಾಗೀಂದು ವಾರದಲಿ ದಿ- ನೇಂದ್ರನುದಯಲಗ್ನ ಸಲುವ ಸಮಯದಿ ಇಂದ್ರಾದಿ ದಿವಿಜರು ಪೊಗಳಲು ನಭದಿ ರಾಜೇಂದ್ರ ನೀ ಪೊರಮುಟ್ಟುದನು ಕಂಡೆ ಮುದದಿ 1 ಭರದಿಂದ ಧ್ವನಿಗೈವ ಭೇರ್ಯಾದಿ ವಾದ್ಯ ತಿ¾ುವಾಯ್ಮೊ¾õÉÉಯೆಂಬ ದ್ರಾವಿಡ ಪದ್ಯ ನೆರೆದ ವಿಪ್ರರು ಪೇಳ್ವ ವೇದ ಸಂವೇದ್ಯ ನಿರವದ್ಯ 2 ಎರಡು ಸಾಲಿನಲಿ ಸಾವಿರ ಸಂಖ್ಯೆ ದೀಪ ಮೆರೆವ ಭೂಛತ್ರಿ ಪಿಡಿದಿರುವ ಪ್ರತಾಪ ಗರುಡ ಗಮನನಾಗಿ ಗೋಪುರ ಮಧ್ಯ ಬರುವ ನಿನ್ನನು ನೋಡಿದರೆ ಮುಕ್ತಿ ಸಿದ್ಧ 3 ಖಂಡ ಮಂಡಲ ನಾಯಕನ ಭೇಟಿ ದೊರೆಯೆ ಖಂಡಿತವಾಗೋದು ದಾರಿದ್ರ್ಯ ಮರೆಯೆ ವಾಹನ ಅಖಿಳಾಂಡಕೋಟಿ ಬ್ರಹ್ಮಾಂಡನಾಯಕ ನಿನ್ನ ಕಂಡೆನು ದೊರೆಯೆ 4 ಶೇಷಗಿರಿಯೊಳಿದ್ದು ಪೋಷಿಪೆ ಜನರ ದೋಷವಿದೂರ ಕಾಂಚೀಶ ಶ್ರೀವರದ ಆಶೆ ಪೂರಿಸಿ ಎನ್ನ ಭಾಷೆಯ ಸಲಿಸೊ ಶ್ರೀಶ ಕೃಪಾರಸ ಸೂಸೆನ್ನ ಶಿರದಿ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಹೆಬ್ಬುರಿ ಶ್ರೀ ಅನಂತಪದ್ಮನಾಭ) ಹೆಬ್ಬುರಿ ಪದ್ಮನಾಭಾ ನಂಬಿದೆನು ಪದಾಬ್ಜವ ಪೂರ್ವಶೋಭಾ ಕೊಬ್ಬಿದ ಶತ್ರು ಪುಂಜಗಳನ್ನು ದೂರದಿ ದಬ್ಬಿ ದಯಾರಸ ಉಬ್ಬಿಪಾಲಿಸು ದೇವಾ ಪ. ಯೋಗಿ ಹೃನ್ಮಂಡಲದಿ ನಿತ್ತಂದದಿ ಸಾಗಿ ಬಂದಿರುವಿಯಲ್ಲಿ ನಾಗಶಯನ ನಿನ್ನ ನೆಲೆಯರಿಯದ ತಪ್ಪ ನೀ ಪಾಲಿಪುದೆಂದು ಬಾಗಿ ಬೇಡುವೆ ನಿಂದು 1 ಈ ಕ್ಷಮೆ ಮೇಲಿಲ್ಲದಾ ಲೋಕೋತ್ತರ- ದಾಶ್ಚರ್ಯ ತೋರುವುದು ಪಕ್ಷಿಧ್ವಜ ನಿನ್ನ ಪಾದಪದ್ಮಗಳಲ್ಲಿ ನಕ್ಷತ್ರ ಮಾಲೆಗಳುರುಳುವದೇನಿದು 2 ಪಾಂಡವ ಸಾರಥಿಯೆ ನಿನ್ನಯ ಮೂರ್ತಿ ಕಂಡೆನು ಶ್ರೀಪತಿಯೆ ಕೌಂಡಿಣ್ಯ ಮುನಿಯನು ಕಾಪಾಡಿದಖಿಳ ಬ್ರ- ಹ್ಮಾಂಡ ನಾಯಕ ನಿನ್ನ ದಾಸ್ಯವ ದಯಮಾಡು 3 ಹೆಬ್ಬುಲಿಯಂತಿರುವ ಹೂಣ ಭೂಪ ನಬ್ಬರವಡಗಿಸುತ ಭಾರ ನಿನ್ನದಯ್ಯ ವಾರಿಧಿ ಕೃಷ್ಣ 4 ನೀನೆ ಸದ್ಗತಿಯೆಂಬರ ಕಾವುದಕನು- ಮಾನವ್ಯಾತಕೊ ಭೂವರ ದೀನ ಬಂಧು ಶೇಷಗಿರಿನಾಥ ದಯದಿಂದ ಮಾನಸ ಫಲವ ಪೂರಣಗೈಸು ಗೋವಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದು ಕಂಡೆನು ಹರಿಯ | ಭವಹಾರಿಯ ಇಂದು ಕಂಡೆನು ಕಂಬದಿಂದಲಿ ಪ ಬಂದು ದೈತ್ಯನ ಕೊಂದು ಕಂದನಿ- ಗಂದು ಒಲಿದಾನಂದ ಸಾಂದ್ರನ ಇಂದಿರಾ ಮಂದಿರನ ವಂದ್ಯನ ಅ.ಪ. ಎಂದಿನಂದದಿ ಬರುತ | ಮನದಲಿ ಶ್ರೀ ಮು- ಕುಂದ ನಾಮವ ನೆನೆಯುತ ಮುಂದು ಮುಂದಕೆ ನಡೆಯುತ | ಆ- ನಂದದಿ ಹೋಗುತಲಿರೆ ಸುಂದರಿ ಶ್ರೀ ತುಲಸಿಗೊಲಿದು ಬೃಂದೆಯನು ಕರವಿಡಿದು ಪೊಳೆದು ಬಂದು ಗಂಡಕಿಯಿಂದ ಭಕ್ತರ ವೃಂದ ಪೊರೆಯಲು ಪಥದಿ ನಿಂದನ1 ಸುಕೃತ | ಬಂದೊದಗಿತೊ ಶ್ರೀಶನೆನಗೆ ದೊರೆತ | ಪ್ರಭಾವದೆ ದುರಿತ | ರಾಶಿಯು ಇನ್ನು ದಾಸರಾಯರ ಕುಲದಿ ಜನಿಸಿದ ಕೂಸೆನುತ ದೇಸಿಗರ ಸೇವೆಗೆ ಮೀಸಲಾಗಿಸಲೋಸುಗೆನ್ನ ಮ- ಹಾಶಯವ ಲೇಸೆನಿಸಿ ಬಂದವ 2 ವಿಕಳ ತತಿಗೆ ಬಾಧಕ | ಈತನ ನಾಮ ಪ್ರಕಟಿಸಲಿನ್ನು ಸುಖ | ಪಾಲಿಸುವನು ಯುಕುತಿಗೆಂದಿಗು ನಿಲುಕ | ಸುಕೃತರಿಂದ ಭಕುತಿ ಸೇವೆಯನೊಂದೆ ಕೊಳ್ಳುವ ಭಕುತಿ ಮುಕುತಿಗಳನ್ನು ಕೊಡುವ ಸಕಲ ಕಾಲದಿ ನಿಂತು ಸಲಹುವ ಲಕುಮಿಕಾಂತನ ಸರ್ವ ಶಕ್ತನ 3
--------------
ಲಕ್ಷ್ಮೀನಾರಯಣರಾಯರು
ಇಂದು ವನಜದಳಾಂಬಕ ದೊರೆಯ ಪ. ಕನಸಿನಲೆ ಕಂಡೆನು ಮನಸಿಜನಯ್ಯನ ದನುಜಸಂಕುಲವನೆಲ್ಲವ ಕ್ಷಣದಿಸವರಿದ ಕಡುಗಲಿರಾಮನ ಅ.ಪ. ವರ ರನ್ನಹಾರ ಕಿರೀಟ ಕೋಟಿತರಣಿಸನ್ನಿಭಸಂಕಾಶ ಕೌಸ್ತುಭ ಶ್ರೀವತ್ಸ ಲಾಂಚಿತವಕ್ಷ | ಕೊರಳೊಳು ಧರಿಸಿರ್ಪ ವರರತ್ನ ಹಾರಂಗಳ್ | ತರುಣಿ ಶ್ರೀ ತುಳಸೀ ವನಮಾಲೆಯಿಂದೊಲಿಯಲ್ | ಪರಮ ಮಂಗಳಮೂರ್ತಿವರದ ಹಸ್ತವನೆತ್ತಿ | ಶರಣಜನ ಮೋಹಿಪ ದುರುಳ ರಕ್ಕಸರ ಬೇರಸವರಿದ ಪಾರಕೀರ್ತಿ | ಅರಿತೆನಾ ತರಳ ಪ್ರಹ್ಲಾದನಂ ಪೊರೆದ ಕರುಣಾಮೂರ್ತಿ 1 ವೇದಪಾರಾಯಣಗೈವ ವರದ್ವಾದಶನಾಮದಿ ಮೆರೆವ ಕೀರ್ತನದಿಂ ಮೈಮರೆವ | ಸಾಧುಸಜ್ಜನವೃಂದ ಭಕ್ತಿಭಾವದಿ ಕೈಕಟ್ಟಿ | ಶ್ರೀಧರಾಚ್ಯುತ ಪಾದ ಸಮ್ಮುಖದಿ ನಿಂದು ಭಜಿಪರ ಪರಮಾದರದೆನೋಡಿ | ಶ್ರೀದೇವಿ ಕೆಲದೋಳ್ ನೆಲಸಿರಲ್ ಮನದಿ ಸಂತಸವು ಮೂಡಿ | ಸಾದರದಿ ಕರೆದಾದರಿಸಿ ಕಾಂಕ್ಷಿತಾರ್ಥವನೀಡಿ | ಮೋದಗೊಳ್ಳುತಿಹ ಶ್ರೀಧರನ ಕಂಡು ಮೈಮರೆದೆನೇನಿವನ ನೋಡಿ 2 ಕನಕಖಚಿತ ರತ್ನಮಂಟಪದ ಮಧ್ಯೆ | ಮಿನುಗುವ ಮಣಿಪೀಠದಿ ವೈದೇಹಿ | ವನಜಾಕ್ಷಿ ಕುಳಿತಿರಲು ಕೆಲದೊಳ್ ಮರುತಾತ್ಮಜ | [ನುನಮಿಸ] (ರ)ಲು ಪರಮಸಂಭ್ರಮದಿ ಸೋದರರು ಸಂಸೇವಿಸೆ | [ವÀನ] ತರಣಿಸುತ ಸಪರಿವಾರ ಸಂಭ್ರಮಿಸೆ, ಶರಣ ವಿಭೀಷ | ಣನು ಜಯಘೋಷವೆಬ್ಬಿಸೆ ವರವಸಿಷ್ಟಾದೈಖಿಲ | ಮುನಿವರ ರಾಶೀರ್ವಚಿಸೆ ಸರಸವಚನವೆರಸಿ ರಘುವರ ವರನೆ ತಾನೆಂದು ತೋರೆ 3
--------------
ನಂಜನಗೂಡು ತಿರುಮಲಾಂಬಾ
ಏನು ಧನ್ಯನೋ ನಾನೇನು ಮಾನ್ಯನೋ ಪ ದೀನಪಾಲಗಿರಿಯಪರಮಕರುಣಾನಿಧಿಯಕನಸೊಳ ಕಂಡೆನು ಅ.ಪ ಬಾಲನಾಗಿ ಮುದ್ದುಮುಖದೆ ಶ್ರೀಲತಾಂಗಿಯೊಡನೆಬಂದು ಲೋಲತೆಯಿಂ ಮುಗಳುನಗೆಯ ಲೀಲೆಯನ್ನು ತೋರಿಸಿದನ 1 ನಿನ್ನ ತಂದೆ ತಾಯ್ಗಳಾರು ಎನ್ನಲಾಗ ನೀನುಪಿತನು ಎನ್ನ ತಾಯಿಜಗನ್ಮಾತೆ ಸನ್ನುತಕೇಳ್ ಪ್ರವರವೆಂದೆ2 ದುರಿತದೂರ ಶ್ರೀನಿವಾಸ ಶರಣಜನರ ಪೊರೆವ ತ್ರಾಣ ಕರವ ಮುಗಿದು ಧ್ಯಾನಿಸಿದೆನು 3
--------------
ಶಾಮಶರ್ಮರು
ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ- ದುದ್ದಂಡ ದೇವವರೇಣ್ಯ ತಾಪತ್ರಯಗಳಘ ಹಿಂಡು ಓಡಿಸು ರನ್ನ ಪೊರೆ ಸುಪ್ರಸನ್ನ ಪ. ಕಂಡೆ ನಿನ್ನಯ ಬಾಲರೂಪವ ಪುಂಡರೀಕದಳಾಯತಾಕ್ಷನೆ ಕುಂಡಲೀಶಯ ನಿನ್ನ ಚರಣದಿ ದಂಡವಿಕ್ಕುವೆ ಗೋಪಿಬಾಲ ಅ.ಪ. ಜನನ ಮರಣದಿ ನೊಂದೆ | ಶ್ರೀ ಜಾನಕೀಪತೆ ಪ್ರಣತ ಜನರಿಗೆ ತಂದೆ | ನೀ ಕಾಯದಿದ್ದರೆ ಘನವೆ ನಿನಗಿದು ಎಂದೆ | ಪಾಲಿಪುದು ಮುಂದೆ ಜನಮ ಜನುಮದ ಕರ್ಮಗಳ ನಾ ಅನುಭವಿಸಿ ಪೂರೈಸಲಾಪೆನೆ ಘನಮಹಿಮ ದಯ ಮಾಡಿದಲ್ಲದೆ ಕೊನೆಯ ಕಾಣೆನು ವಿಷಯ ವಾಸನೆ ವನಜ ಸಂಭವ ಪವನ ರುದ್ರಾ ದ್ಯನಿಮಿಷಿರಿಗಿನಿತಿಲ್ಲ ಮಹಿಮೆಯು ನಿನಗೆ ವಿೂರಿದರುಂಟೆ ದನುಜದಲ್ಲಣ ದಯದಿ ಸಲಹೊ 1 ಕಾಮಪಿತ ಮಧ್ವೇಶ | ಸೌಂದರ್ಯ ಸಾರ ತಾಮಸರ ವಿಧ್ವಂಸ | ಸಜ್ಜನರ ಕಾಯುವ ಕೋಮಲಾಂಗನೆ ಶ್ರೀಶ | ಲಕ್ಷ್ಮೀ ನಿವಾಸ ಹೋಮಕುಂಡದಿ ಪುಟ್ಟಿದಾ ಸತಿ ಕಾಮಿಗಳ ಉಪಟಳಕೆ ಸಹಿಸದೆ ಶ್ರೀ ಮನೋಹರ ಕಾಯೊ ದ್ವಾರಕೆ ಧಾಮ ನೀ ಗತಿ ಎನುತವರಲೆ ಪ್ರೇಮದಿಂದಕ್ಷಯವನಿತ್ತ ನಾಮ ಮಂಗಳ ನಿರ್ಮಲಾತ್ಮಕ ಸೋಮಶತಪ್ರಭ ಸೌಮ್ಯರೂಪ ತ್ರಿ- ಧಾಮ ಭಕ್ತರ ಕಾಮಿತಾರ್ಥನೆ 2 ಆದಿಮಧ್ಯವಿದೂರ | ಆನಂದ ಪೂರ್ಣ ಸಾಧು ಮನದಿ ವಿಹಾರ | ಸರ್ವಜ್ಞರಾಯರ ಹಾದಿ ತೋರಿಸೊ ಧೀರ | ಸುಜ್ಞಾನಸಾರ ವೇದ ಶಾಸ್ತ್ರಗಳರ್ಥವರಿಯೆನು ಮಾಧವನೆ ಮಮಕಾರದಲಿ ನಾ ಹಾದಿ ತಿಳಿಯದೆ ನೊಂದೆ ಅಜ್ಞತೆ ಹೋದಡಲ್ಲದೆ ನಿನ್ನ ಕಾಣುವ ಮೋದ ಬರುವುದೆ ಮಧ್ವವಲ್ಲಭ ಭೇದ ಮತಿ ಕೊಡು ತಾರತಮ್ಯದಿ ನೀ ದಯದಿ ಒಲಿದೆನ್ನ ಮನದಲಿ ಆದರದಿ ನೆಲೆಸಿನ್ನು ಪೊಳೆಯೊ 3 ಕಡಲಶಯನನೆ ಶ್ರೀಶ | ಕಡಗೋಲ ಕೈ ಪಡುಗಡಲ ತೀರದಿ ವಾಸ | ಕಮಲೇಶ ನಾ ನಿ- ನ್ನಡಿಯ ಕಂಡೆನು ನಾಶ | ರಹಿತನೆ ಪ್ರಕಾಶ ಎಡೆಬಿಡದೆ ನಿನ್ನಸ್ಮರಿಪ ಧ್ಯಾನವ ಕೊಡುತ ಮಧ್ಯದಿ ತಡೆವ ಸಂಸೃತಿ ತಡೆದು ಸಂತ ಚಿಂತನೆಯ ದೃಢ ಒಡಲೊಳಗೆ ನೆಲೆಸಯ್ಯ ಬಿಡದೆ ಪತಿ ಸತಿ ಪಿತ ಕಡಲವಾಸನೆ ಕಡಲ ಬಂಧನ ಕಡಲ ಮಧ್ಯದಿ ಪುರವ ರಚಿಸಿದೆ ಕಡು ದಯಾಂಬಯಧೆ ಕಾಯೊ ಸತತ 4 ಅಷ್ಟಯತಿ ನುತಪಾದ | ಸುಖ ತೀರ್ಥ ಹೃದಯ ದೀಷ್ಟಿತನೆ ಸನ್ಮೋದ | ಸಜ್ಜನರ ಮನದಾ ಭೀಷ್ಟವೀವ ಪ್ರಮೋದ | ಕರುಣಿ ಸುಪ್ರಸೀದ ಕೊಟ್ಟೆ ಮನು ಮುನಿಗಳಿಗೆ ಜ್ಞಾನವ ತುಷ್ಟಿಪಡಿಸುತÀ ಸುರರ ಸುಧೆಯಲಿ ಕುಟ್ಟಿ ಅಸುರನ ಕೋರೆದಾಡಿಲಿ ಕುಟ್ಟಿ ಅರಸರ ಕಟ್ಟಿ ಜಟೆಯನು ಮಟ್ಟಿ ಕಂಸನ ಬಿಟ್ಟು ವಸನವ ದಿಟ್ಟ ಕಲ್ಕಿ ಗೋಪಾಲಕೃಷ್ಣ ವಿಠ್ಠಲನೆÀ ಶ್ರೀ ಉಡುಪಿಲೋಲ5
--------------
ಅಂಬಾಬಾಯಿ
ಕಂಡೆ ಕಂಡೆನು ಕೃಷ್ಣ ನಿನ್ನಯ | ಭವ್ಯ ಭಾವದ ಮೂರ್ತಿಯ ಪ ಹಿಂಡು ದೈವರ ಗಂಡನ ಅ.ಪ. ಪಾದ ಶೋಭಿಸೆ | ಘುಲು ಘುಲೆನ್ನುವ ಪೈಜಣ |ಉಲಿವ ಗೆಜ್ಜೆಯಲಿಂದ ಮೆರೆಯುವ | ಚಲುವ ಕೃಷ್ಣನ ಸೊಂಟವ 1 ಲಕ್ಷ್ಮೀ ವಕ್ಷಸ್ಥಿತನು ಎನಿಪನ | ಅಕ್ಷಯಾಂಬರವಿತ್ತನ |ಕುಕ್ಷಿಯೊಳು ಜಗ ಧರಿಸಿ ಮೆರೆವನ | ಪಕ್ಷಿವಾಹನ ದೇವನ 2 ವೃಷ್ಣಿಕುಲ ಸಂಭೂತನೆನಿಪನ | ಜಿಷ್ಣುವಿಗೆ ಸಖನೆನಿಪನ |ವಿಷ್ಣು ಮೂರುತಿ ವಿಷ್ಠರ ಶ್ರವ | ಕೃಷ್ಣನ ಮಹಮಹಿಮನ 3 ಕೌಸ್ತುಭ ಹಾರ ಶೋಭಿತ | ಸರಸಿ ಜಾಸನಧಿಷ್ಟಿತ ||ಮೆರೆವ ತ್ರಿವಳಿಯ ಕಂಠ ಶೋಭಿತ | ಸರ್ವ ವೇದಗಳುಧೃತ 4 ತೋಳ ಬಾಪುಕಿ ಬಾಹು ಕೀರ್ತಿಯ | ಕೈಲಿ ಕಡಗೋಲ್ಬಲದಲಿ |ಮೇಲೆ ರಜ್ಜುವ ತಾನೆ ಪಿಡಿದಿಹ | ಕೈಲಿ ವಾಮದ ಪಾಶ್ರ್ವದಿ 5 ಸುರರು ಪರಿ ತುತಿಪುದ 6 ಕುಂಡಲ ಫಣಿ ವಿಭೂಷಣ ಸೇವಿತ 7 ಭುವನ ಮೋಹನ ದೇವ ದೇವನ | ಪವನನಯ್ಯನು ಎನಿಪನ |ಮಧ್ವ ಸರಸಿಯ ತಟದಿ ಮೆರೆವನ | ಮಧ್ವಮುನಿ ಸ್ತುತಿಗೊಲಿದನ 8 ಅಷ್ಟ ಮಠಗಳ ಯತಿಗಳಿಂದಲಿ | ಸುಷ್ಠು ಪೂಜಿತ ಚರಣನದಿಟ್ಟ ಗುರು ಗೋವಿಂದ ವಿಠಲನ |ಸೃಷ್ಟಿ ಸ್ಥಿತಿ ಲಯ ಕರ್ತನ 9
--------------
ಗುರುಗೋವಿಂದವಿಠಲರು
ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ ಕಂಡೆ ಕಂಡೆನು ಕೃಷ್ಣರಾಯನ ಪುಂಡರೀಕ ದಳಾಯತಾಕ್ಷನ ಪಾಂಡವಪ್ರಿಯ ಪಾರ್ಥಸಖನ ಉ ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ. ಕನಕ ನವಮಣಿ ಖಚಿತ | ವಾಗಿಹ ಸಿಂಹಾ ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ ಘನನೀಲನಿಭರಂಜಿತ | ನಿರ್ಮಲಗಾತ್ರ ಕುಂಡಲ ಮಣಿ ಗಣದ ಹಾರಾದಿ ಬಹು ಭೂ ಷಣಗಳನುಪಮ ಕಾಂತಿಯಿಂದಲಿ ಮಿನುಗುವತಿ ಲಾವಣ್ಯ ಮೂರ್ತಿಯ 1 ಕೋಟಿ ಮನ್ಮಥರೂಪನ | ಶ್ರೀಕೃಷ್ಣನ ಹಾಟಕಾಂಬರಧಾರನ | ಕರುಣಾಮಯ ಕಂಬು ಕಂಠನ ಆಟಮಾತ್ರದಿ ಪ್ರಬಲ ದೈತ್ಯ ಮ ಹಾಟವಿಯ ನಿರ್ಧೂಮಗೈದನ ಖೇಟವಾಹನನೆನಿಪ ತ್ರಿಜಗದಿ ಸಾಟಿಯಿಲ್ಲದ ದೇವದೇವನ 2 ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ ಮೊರೆ ಕೇಳಿ ಸಲಹಿದನ | ಭಜಿಪರ ಅವ ಸರಕೊದಗುವ ದೇವನ | ಶ್ರೀ ಕೃಷ್ಣನ ತರಳತನದಲಿ ಗೋಕುಲದಿ ತಾ ಪರಿಪರಿಯ ಲೀಲೆಗಳ ತೋರಿದ ಪರಮ ಪುರುಷನ ಕರಿಗಿರೀಶನ ಸರಿಯಧಕರಿಲ್ಲದ ಸುರೇಶನ 3
--------------
ವರಾವಾಣಿರಾಮರಾಯದಾಸರು
ಕಂಡೆ ನಾ ಕಣ್ಣಾರೆನಾ | ಕಂಡೆನಾ ಪ ಕಂಡೆನು ಕರುಣಾಸಾಗರನ | ಕರ ದಂಡ ನಾಮಕೊಲಿದವನ | ಆಹಾ ದಂಡ ಧಂಡದ ಲೀಲೆ ತೋಂಡರೊಡನಾಡು ಮೂರ್ತಿ 1 vಟಿಟತಮತ್ಕೋಟಿ ಸನ್ನಿಭನ | ದೇವ | ತಟಿನಿಯ ಪದದಿ ಪೆತ್ತವನ | ಚಾರು ಕರವ ನಿಟ್ಟವನ | ನಿಜ ಭಟ ಜನರಿಗೆ ಮುಕ್ತಿ ಪ್ರದನ ||ಆಹಾ || ಜಠರದಿ ಜಗವಿಟ್ಟು ವಟದೆಲೆಯೊಳು ಮಲಗಿ ವಟುರೂಪದಲಿ ಪಾದಾಂಗುಟವನು ಮೆಲುವನ 2 ಭುವನದೊಳು ಸಂಚರಿಸುವನ | ಕೂರ್ಮ ಮಾನವ ಪಂಚಮುಖನ | ಋಷಿ ಕುಮಾರ ಕುವರರ ಕಡಿದವನ ಮಹಿ ಕರವ ಕುವಲಯ ಸಖ ಕುಲೋಧ್ಭವ ಭವಮಾರ್ಗಣ ಬವರದಿ ಹಯವೇರಿ ಯವನರ ಬಡಿದನ 3 ಲ್ಮೊಗನ ನಾಭಿಲಿ ಪಡೆದವನ | ರವಿ ಮಗನಿಗೆ ಮಗನಾದವನ ತನ್ನ ಪೊಗಳುವಂಥರಫÀ ಕಳೆಯವವನ ಆಹಾ ಜಗನ್ನಾಥದಾಸರಿಗೆ | ಸೊಗಸಾದ ಮೃಷ್ಟಾನ್ನ ಬಗೆ ಬಗೆ ಉಣಿಸಿದ ಖಗಪತಿ ಗಮನನ4 ಸಾಸಿರನಯನನುಜನ | ಮಹಿ ದಾಸ ಕಪಿಲದತ್ತಾತ್ರೇಯನ ವೇದ ವ್ಯಾಸ ವೃಷಭ ಹಯಮುಖನ ಭಾರ ಶ್ರೀಶ ಮಾನಸಮಂದಿರ ||ಆಹಾ || ಶ್ರೀಶ ತಂದೆ ವೆಂಕಟೇಶ ವಿಠಲಂಘ್ರಿ ದಾಸರ ಸತ್ಯಹವಾಸದಿಂದಲಿಯಿಂದು 4 ತಂದೆ ತಾಯ್ಗಳ ಸುಕೃತವೊ | ನಮ್ಮ ಒಂದೂರಾರ್ಯರ ಅನುಗ್ರಹವೋ | ಸ್ತಂಭ ಮಂದಿರ ರಾಯರ ದಯವೊ | ದಾಸ ವೃಂದ ಕೃತಾಶೇಷ ಫಲವೊ | ಆಹಾ ಇಂದು ಭಾಗದಿ ಭಕ್ತಾವೃಂದಕೆ ದರುಶನಾ ನಂದಗರೆವ ಶಾಮಸುಂದರ ವಿಠಲನ 5
--------------
ಶಾಮಸುಂದರ ವಿಠಲ
ಕಂಡೆನು ಕೌತುಕ ಮಂಡಲದೊಳಗೊಂದು ಹೊಯ್ಯಂದ ಡಂಗುರವ ಮಂಡಿಯ ಮಸಿಯಲಖಂಡಿತವಾಗ್ಯದೆ ಧ್ರುವ ಖೋಯೆಂದು ಕೂಗುತ ಕಾಯದೊಳಗದೆ ಮಾಯದ ಮರೆಯಲುಪಾಯ ಮುಚ್ಚಿದ ನೋಡಿ 1 ಝೇಂ ಝೇಂ ಝೇಂ ಝೇಂ ಝೇಂಕರಿಸುತದೆ ಕಂಜನಾಭನ ಕರುಣಾನಂದನೋಡಿರ್ಯೊ 2 ಘೇಳೆನಿಸುತದÀ ತಾಳಮೃದಂಗವು ಒಳಹೊರಗಿದು ಧಿಮಿಗುಡುತದ 3 ಅನುಹಾತ ಧ್ವನಿಅನುಭವ ನೋಡಿರೋ ಅನುದಿನ ಸಾಧಿಸಿ ಘನ ಬೆರದಾಡಿರೊ 4 ಆನಂದೊಬ್ರಹ್ಮದ ಆಟವಿದುನೋಡಿ ಏನೆಂದ್ಹೇಳಲಿ ಸ್ವಾನುಭವದ ಸುಖ 5 ತುಂಬಿತುಳುಕುತದೆ ಅಂಬುಜಾಕ್ಷನ ಮಹಿಮೆ ಕುಂಭಿನಿಯೊಳು ನಿಜ ಗಂಭಗುರುತ ನೋಡಿ 6 ಸಾಧಿಸಿ ನೋಡಿರೊ ಶ್ರೀ ಸದ್ಗುರು ಶ್ರೀಪಾದ ಗಾದಿಯ ಮಾತಲ್ಲ ಭೇದಿಸಿ ನೋಡದು 7 ಶುಕಾದಿ ಮುನಿಗಳ ಸುಖಾಶ್ರಯವಿದು ಏಕಾಕ್ಷರ ಬ್ರಹ್ಮ ಏಕೋಚಿತ್ತದಿ 8 ಮೊತ್ತರಾಗಿ ತನ್ನ ನೆತ್ತಿಯೊಳಗಿದೆ ಉತ್ತಮರ ಸುತ್ತ ಮುತ್ತ ಸೂಸುತದ9 ಗುರು ಕೃಪೆಯಿಲ್ಲದೆ ಗುರುತವಾಗದಿದು ಬರೆ ಮಾತಿನ ಮಾಲೆಗೆ ಸೆರಗ ಸಿಲುಕದಿದು 10 ಗುರುತವಿಟ್ಟು ಗುರುವಿನ ಮಹಿಮೆಯ ತರಳ ಮಹಿಪತಿ ನಿನ್ನೊಳು ನೋಡೆಂದು 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ ಧ್ರುವ ಅಜ ನುಂಗಿತು ಗಜನ ವಾಜಿ ನುಂಗಿತು ಈ ಮೂಜಗವ ಸಂಜೀವ ಸಂಜೀವ 1 ಇಲಿಯು ನುಂಗಿತು ಮೊಲವ ಹಲ್ಲಿ ನುಂಗಿತು ಹಲವು ಕುಲವ ಜಲ ನುಂಗಿತು ಜಲವ ಹುಲಿ ನುಂಗಿತು ಈ ಮಾರ್ಜಲವ 2 ನೊರಜು ನುಂಗಿತು ಗಿರಿ ಪರ್ವತವಇರಹು ನುಂಗಿತು ಸರ್ವ ಬೆರಗಾಯಿತು ಮಹಿಪತಿ ಜೀವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆನು ಗುರುರಾಯಾ ನಿನ್ನುದ್ದಂಡ ಪರಾಕ್ರಮವಾ ಕಂಡೆನಾ ಮನಗಾಡೆ ಪಾಂಡುಪಕ್ಷನ ಭೃತ್ಯ ಹಿಂಡು ಖಂಡಿಸಿದ್ಯೋ ಪ ರಾಮನ ಸೇವೆಗೆಂದೂ ನೀನು ಕಾಮಿಸಿ ಜನಿಸಿದೆಯೋ ನೇಮದಿಂದಲಿ ಸುರಸ್ತೋಮವ ನೀಗಿ ಭೂಮಿಜೆಯ ತಂದು ರಾಮನಿಗೊಪ್ಪಿಸಿದ್ಯೋ 1 ಗೋವಳ ಭೃತ್ಯನಾಗಿ ನೀನು ಅವರಲ್ಲಿ ಪುಟ್ಟಿದ್ಯೋ ಸಾವಿನ ಬಾಯಿಗೆ ಕುರುವಿಂಡು ಕಟ್ಟಿ ನೀ ಭಾರ ಪೋಗಲಾಡಿಸಿದ್ಯೋ 2 ಹರಿಮತ ಏರುವುದಕೆ ನೀನೆ ಸರಿ ಗುರುಮಧ್ವನೆನಿಸಿದೆಯೋ ಏಕವಿಂಶತಿ ಮತ ನರಸಿಂಹ ವಿಠಲನ ದಾಸನೆನಿಸಿದ್ಯೋ 3 ಗಂಧದ ಮರವೇನು ಗಂಧದ ಮರವೇ
--------------
ನರಸಿಂಹವಿಠಲರು
ಕಂಡೆನು ನಾನೊಂದು ಕೌತುಕ ಕಲಿಯುಗದೊಳಗೊಂದು ಧ್ರುವ ಮೈಯೊಳಗಿಹುದು ಕೈಯೊಳಗೆಂದಿಗೆ ಸಿಲುಕದು ಇಂದು 1 ವೇದಕ ನಿಲುಕದು ಸಾಧಕರಿಗೆ ತಾ ಸಿಲ್ಕುವದು ಭೇದಿಸಿದರೆ ಹೊಳೆವುದು ಸಾಧು ಜನರಿಗೆ ತಿಳಿವುದು 2 ಭಾವಕ ಸುಲಭದೇವಾದಿಗಳಿಗೆ ದುರ್ಲಭ ಜೀವರ ನೆಲೆನಿಭü ಮಹಿಪತಿ ಪ್ರಾಣದೊಲ್ಲಭ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು