ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಪರಿಪಾಹಿ-ನರಹರಿಯೆ ಪ ನಿನ್ನೊಳು ನಿರುತನಾನಪರಾಧಿ ನಾರಾಯಣ ಅ.ಪ ಹೇಸಿಕೆಯಿಂದ ಮನಕಾಸುವೀಸಕೆ ಸೋತು ಮೋಸಹೋದೆ ನಿನ್ನ ನೆನೆಯದೆ ಕೇಶವ 1 ನಿರುತ ನಿನ್ನಯ ನಾಮಸ್ಮರಣೆಯ ಬಿಟ್ಟು ಘೋರನರಕಕ್ಕೆ ಗುರಿಯಾದೆ ಪೊರೆಯೊ ನಾರಾಯಣ2 ಮುದದಿಂದ ನಾ ಹದಿಬದೆಯರ ಮುಖನೋಡಿ ಮದದಿಂದ ನಿನ್ನನು ಮರೆದೆನೊ ಮಾಧವಾ3 ಸವನತ್ರಯದಿ ಅವ್ಯವಹಿತ ಕಾರ್ಯವ ಲವಲೇಶ ಬಿಡದೆ ನಾನೆಸಗಿದೆನೋ ಗೋವಿಂದ 4 ಕ್ಷಣ ಬಿಡದಲೆ ದುಷ್ಕರ್ಮದಿಂದಲಿ ದಣಿದು ತೃಣಕೆಣೆಯಾಗಿ ನಿರ್ವಿಣ್ಣನಾದೆ ಹೇವಿಷ್ಣು 5 ಹೃದಯದೊಳಿಲ್ಲದ ಮಧುರ ನುಡಿಗಳ ಮುದದಿ ನುಡಿದೆನೋ ಮಧುಸೂದನನೇ 6 ಅವನಿಯೊಳಗೆ ಎನಗೆಣೆಯಿಲ್ಲವೆನುತ ಅವಗುಣಪ್ರತಿಮೆ ನಾನಾದೆ ತ್ರಿವಿಕ್ರಮ 7 ಅನುದಿನ ನಿಂದಿಸಿ ಯಮನ ಮಂದಿರದಿ ನಾ ನಿಂದೆನೊ ವಾಮನ8 ಬುಧನೆಂದು ಮೆರೆದು ನಾ ಆಧಮರಸೇವಿಸಿ ಅಂಧತಮಕೆ ಗುರಿಯಾದೆನೋ ಶ್ರೀಧರ 9 ವಿಷಯವೆ ಜೀವನದ ಕೃಷಿಯಾಯಿತೆನಗೆ ತೃಷೆಯ ಮೀರದೆ ನಿನ್ನ ಮರೆದೆನೊ ಹೃಷಿಕೇಶನೆ 10 ಉದುಭವಿಸಿದೆ ಈ ವಸುಧೆ ಭಾರಕ್ಕಾಗಿ ಬಾಧಕನಾದೆನೊ ಪದುಮನಾಭನೆ 11 ತಾಮಸಕೃತ್ಯದಿಂದುದರ ಪೋಷಣೆಗಾಗಿ ಪ್ರೇಮದಿ ತಿರುಗಿದೆ ದಾಮೋದರ ದೇವ 12 ಶಂಕೆಯಿಲ್ಲದ ದುರುಳಕಿಂಕರಸೇವೆಯಿಂದ ಸಂಕಟಪಟ್ಟೆನೊ ಸಂಕುರುಷಣ ದೇವ 13 ಕಾಸಿನಾಶೆಗೆ ನಾ ಹೇಸಿಕಿಲ್ಲದೆ ಮನ ಹೇಸದೆ ಯಾಚಿಸಿದೆ ವಾಸುದೇವನೇ 14 ಸದ್ಯಫಲವೆ ಮುಖ್ಯವು ಉದ್ಯೋಗವೆಂದು ಉಬ್ಬಿ ಒದ್ಯಾಡುತಿಹೆ ಪ್ರದ್ಯುಮ್ನದೇವನೆ15 ಸತಿ ಅನುಗಾಲ ಬಂಧು ಎಂದು ಅನವರತ ನಂಬಿದೆನು ಅನಿರುದ್ಧದೇವನೆ 16 ಪರಿಪರಿ ಕ್ರೀಡೆಯಿಂ ಪರಪೀಡಕನಾಗಿ ಪರರನು ಸ್ತುತಿಸಿ ಬೆಳೆದೆ ಪುರುಷೋತ್ತಮ17 ಸಾಧು ಸಜ್ಜನರೊಳು ಭೇದ ವಂಚನೆ ಮಾಡಿ ಅಧೋಕ್ಷಜ ಮೂರ್ತೇ 18 ಬಾರಿಬಾರಿಗೆ ಪರಾನ್ನವನುಂಡು ಘೊರ ದುರಿತಕ್ಕೆ ಗುರಿಯಾದೆ ಶ್ರೀ ನರಸಿಂಹನೇ19 ಕೆಚ್ಚೆದೆಯಿಂದ ನಾನು ಸ್ವೇಚ್ಛೆಯಿಂದಲಿ ಚರಿಸಿ ಹುಚ್ಚು ಹಿಡಿದಂತಾದೆ ಅಚ್ಯುತಮೂರ್ತೇ20 ಮಾನಿಗಳಿಗೆ ಅವಮಾನ ಮಾಡಿ ನಾ ಜ್ಞಾನಿ ಎಂದೆನಿಸಿದೇ ಜನಾರ್ದನನೇ ಕಾಯೊ 21 ಕೋಪತಾಪಗಳಿಂ ಪಾಪಕೃತ್ಯವೆಸಗಿ ತಾಪ ಪಡುತಲಿಪ್ಪೆನಯ್ಯ ಉಪೇಂದ್ರನೆ 22 ಕರಚರಣಗಳಿಂದ ಕಳ್ಳನಾಗಿಹೆನು ತೊರೆದೆನೊ ಹರಿಗುರು ಯಾತ್ರೆಯ ಶ್ರೀಹರೇ 23 ಶಿಷ್ಟರನ್ನೆಲ್ಲ ನಿಕೃಷ್ಟತನದಿ ನೋಡಿ ಭ್ರಷ್ಟನಾಗೀಜಗದಿ ಮೆರೆದೆ ಶ್ರೀಕೃಷ್ಣನೇ 24 ಸಂಕಟಪಡುತಿಹ ಕಿಂಕರನೊಳಿಹ ಮಂಕು ಹರಿಸಿ ಕಾಯೋ ಶ್ರೀ ವೇಂಕಟೇಶನೇ25
--------------
ಉರಗಾದ್ರಿವಾಸವಿಠಲದಾಸರು
ಚೂರ್ಣಿಕೆಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾಕಾಳಿಯ ದಮನಾ ಭುವನತ್ರಯಾಕ್ರಮಣಪದ್ಮಾಲಯಾ ರಮಣ 1ಧನದಮಾತಿರಲಿ ಗೋಧನದ ಮಾತಿರಲಿಭೂಧನದಮಾತಿರಲಿ ಶೌರೀಧನವೆಲ್ಲವೂ ಕರ್ಮವನು ಬೆನ್ಹಿಡಿದುಬಹದೆನುತಾಡುವರೊ ಮುರಾರಿತನುವು ನಿನ್ನಯ ಸೇವೆಯನು ಮಾಡುತಿರಲಿಕಂಸಾರಿಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿಈ ಕೃಪೆಯಭೂರೀ ದುರ್ಜನವಿದಾರೀಸುಜನೋಪಕಾರೀ ಗಿರಿನಾಥ ಧಾರೀಪಾಪಹಾರಿದಿತಿಜಾರಿನಿರ್ವಿಕಾರಿ ಉದಾರಿ2ನಾಕದೊಳಗಿರಲಿ ಭೂಲೋಕದೊಳಗಿರಲಿಅಧೋಲೋಕದೊಳಗಿರಲಿ ನಾನೂಶ್ರೀಕಾಂತ ನಿನಗೆ ಬೇಕಾದವನೆನುತ್ತಸಾಕಬೇಕೆನ್ನ ನೀನೂ ಭಕ್ತಜನಕಾಮಧೇನುಹೇಳಬೇಕಾದುದಿನ್ನೇನು 3ಬಿದ್ದಿರುವೆನೈ ರಜೋಗುಣದಿಒದ್ಯಾಡುತಿಹೆನೊ ಸಂಕಟದಿಇದ್ದು ಫಲವೇನೊ ಈ ಭವದಿಉದ್ಧರಿಸು ಕೃಪಾಜಲಧಿ 4ಬದ್ಧನಾನಯ್ಯ ಈ ಜಗದಿಶುದ್ಧಬುದ್ಧಿಯ ನೀಯೊ ಮುದದಿಕೃದ್ಧನಾಗದಿರೆನ್ನ ದುಷ್ಕøತದಿಎದ್ದು ಬಾರೆನ್ನಡಿಗೆ ದಯದಿಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ 5
--------------
ತಂದೆ ಮುದ್ದುಮೋಹನ ವಿಠಲರು