ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮನ ಬಂದಂತೆ ವಿಹರಿಸೊ ಸಿರಿಕೃಷ್ಣ ಎನ್ನ ಸ್ವಾಮಿ ನೀ ಎಂದು ಮರುಳಾದೆನಲ್ಲದೆ ಪ ಬೊಮ್ಮ ಮೊದಲು ಸುರೋತ್ತಮದ ಪಾದ ಧುಮ್ಮಿನೊಳು ಮುಳುಗಿಹೆ ಎಮ್ಮಯ್ಯ ಕೇಳು 1 ಸರ್ವಜ್ಞನೆಂಬಿಯಾ ಉರ್ವಿಯ ಪತಿಗಳು ಸರ್ವ ಜನಗಳಾ ಪೆÀೂರ್ವರೆ ಕಂಡೀಗ2 ಅಕ್ಷೀಣ ಶಕುತೆಂಬ ದಾಕ್ಷಿಣ್ಯವಿಲ್ಲದೆ ಸುಕ್ಷೀಣ ಜನರನ್ನು ರಕ್ಷಿಪರಯ್ಯ 3 ಭಕುತ ವತ್ಸಲನೆಂಬೊ ಭಕುತಿಯು ಎನ್ನಲ್ಲೆ ಯುಕುತವಾಗಿಹವು ವ್ಯಕತ ನಿನಗಲ್ಲವೆ 4 ಶರಣರ ದೊರೆಯೆಂದು ಕರುಣ ಮಾಡುವೆನೆಂಬ ಸಿರಿ ವಾಸುದೇವವಿಠಲ ಕರುಣಿಸಾಲಸ್ಯವ್ಯಾಕೊ 5
--------------
ವ್ಯಾಸತತ್ವಜ್ಞದಾಸರು
ಮರೆವರೇನೊ ರಾಮ ನಿನ್ನ ಚರಣ ಸೇವಕನÀನ್ನು ಪರರಿಗೊಪ್ಪಿಸಿ ಹೀಗೆ ಪ ಪರಮ ದಯಾನಿಧಿ ಅಲ್ಲವೆ ಮುನ್ನ ಶರಣರ ಪಾಲಿಸಲಿಲ್ಲವೆ ಇದು ಸರಿಯೇನೊ ಜನ ನಗರೇನೊ ಇನ್ನು ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ. ಗತಿಹೀನರಿಗೆ ನೀ ಗತಿಯೆಂದು | ನೀನೆ ಪತಿತರ ಪತಿಕರಿಸುವನೆಂದು ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ ಗತಿದೋರೆಂದು ಸಾರಿದೆ ಚೀರಿದೆ ದೂರಿದೆ 1 ದೋಷರಾಶಿಗಳೆಲ್ಲ ಅಳಿಸಯ್ಯ ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ ದಾಸಾನುದಾಸ ದಾಸನು ಎನಿಸಿ | ಪರಿ- ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ 2 ಏನು ಸಾಧನವನ್ನು ನಾ ಕಾಣೆ | ನಿನ್ನಾ- ಧೀನದವನು ನಾ ನಿನ್ನಾಣೆ ದೀನ ಬಂಧುವೆ ದಯಾಸಿಂಧುವೆ ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ 3
--------------
ಲಕ್ಷ್ಮೀನಾರಯಣರಾಯರು