ಒಟ್ಟು 12 ಕಡೆಗಳಲ್ಲಿ , 10 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಧರನ ಸಖನಛಂದಾಗಿ ಭಜಿಪ ದೇ | ವಾಂಶ ಸಂಭೂತನೆ ಅ.ಪ. ದಣಿಸುವರ್ದನುಜರೆಲ್ಲಾ | ನೀನರೆ ಎನ್ನಮನಕಭಿಮಾನಿ ಎನಿಸೀ ||ಘನವೇನೊ ನಿನಗಿದು | ದನುಜ ದಲ್ಲಣನೆನಿಸಿಮನದ ಡೊಂಕನು ತಿದ್ದಿ | ಮನುಜ ನೆನಿಸೊಯೆನ್ನ 1 ಮುಕುತಿ ಮಾರ್ಗಕೆ ಸಾಧನಾ | ಎನಿಸಿ ಮೆರೆವ ಭಕುತಿ ವಿರಕುತಿ ಸುಜ್ಞಾನ ||ಸುಖ ತೀರ್ಥ ಮತದೊಳು | ಸುಖಿಸುವ ಸೌಭಾಗ್ಯಸುಖವ ನೀ ಪಾಲಿಸೊ | ಕಕುಲಾತಿಯನೆ ಹರಿಸೀ 2 ಪಂಕಜ ಧ್ಯಾನನಿರುತದಿ ಮಾಳ್ಪನೆ | ಕರಿಗಿರಿ ವಾಸನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದು ನಮ್ಮ ಮನಿಲಿ ಬ್ರಹ್ಮಾನಂದ ಬಂದು ಭಾವ ಪೂರಿಸಿದ ಮುಕುಂದ ಧ್ರುವ ಎನ್ನಮನಕೆ ಮಾಡಿದ ಮನೋಹರ ಚೆನ್ನಾಗೊಲಿದು ದೋರಿದ ಸಹಕಾರ ಮನ್ನಿಸೆನಗೆ ಬೀರಿದ ನಿಜಸಾರ ಇನ್ನೊಬ್ಬರಿಗ್ಹೇಳುದಲ್ಲೀ ವಿಚಾರ 1 ದಯದಿಂದ ಪಿಡಿದು ಎನ್ನ ಕೈಯ ಶ್ರೇಯ ಸುಖ ನೀಡಿದ ಪ್ರಾಣಪ್ರಿಯ ತ್ರಯ ಗುಣಾತೀತದ ಸುಖಾಶ್ರಯ ತ್ರೈಲೋಕದೊಳೆನಗೆ ವಿಜಯ 2 ಕಣ್ಣು ಪಾರಣಗೈಸಿದೆನ್ನ ನೋಡಿ ಎನ್ನೊಳನುಭವಾಮೃತಸಾರ ನೀಡಿ ಚಿಣ್ಣಮಹಿಪತಿ ಕೈವಶಗೂಡಿ ಧನ್ಯಧನ್ಯಗೈಸಿದ ದಯಮಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಸುಕಾಲ ಸುಪರ್ವಕಾಲ ಧ್ರುವ ಇಂದು ಸುಕಾಲ ಇಂದು ಸುಕಾಲ ಸುಪರ್ವಕಾಲ 1 ಇಂದು ಸುಕಾಲ ಬಂದ ಗೋಪಾಲ ಸಂಧಿಸಿ ಮನದೊಳಗಾದನುಕೂಲ 2 ಇಂದು ಸುದಿನ ಚಂದವಾಯಿತು ಎನ್ನಮನ ಉನ್ಮನ3 ಭಿಕ್ಷೆ ನೋಡುವ ಲಕ್ಷ ಒಡಿಯ ಪೂರಿಸಿದ ಬೇಡುವಪೇಕ್ಷ4 ಇಂದು ಆನಂದ ಹೊಂದಿ ಮಹಿಪತಿಗುರುಪಾದಾರವಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಡಲಶಯನ ಹರೇ ಉಡುಪತಿ ಕುಲದೊರೆ ಪ ಅಡಿಗೆರಗಿದೆ ನಿನ್ನ ನೀಡೆಲೊ ಕರಗಳ ಅ.ಪ ನಡೆಯುವ ಪದಗಳು ಎಡವದಿರುವುದೇನೊ ಕಡುಮಂದನಲಿ ದಯ ಸಡಿಲಿಸದಿರೊ ದೇವ 1 ಕಂದನು ಪುಟ್ಟಲು ಅಂಧನಾಗಿರೆ ಅದನು ಚೆಂದವಿಲ್ಲೆನುತ ಬೀಸುವಳೆ ಜನನಿ 2 ಹೇಯ ಸಂಸಾರದಿ ಗಾಯವ ಪೊಂದಿ ನಾ ನೋಯುತಿರುವೆನು ಉಪಾಯವ ಕಾಣದೆ 3 ಲೋಪಗಳಿಗೆ ಬಲು ಕೋಪಿಸದೆ ಅಯ್ಯೋ ಪಾಪವೆಂದೆನ್ನುತ ಕಾಪಾಡೆಲೋ ದೇವ 4 ಎನ್ನೊಳು ದಯದಿ ಪ್ರಸನ್ನನಾಗುವೆಯೆಂದು ಎನ್ನಮನದಿ ಸದಾ ಧ್ಯಾನಿಸುವೆನೋ ದೇವ 5
--------------
ವಿದ್ಯಾಪ್ರಸನ್ನತೀರ್ಥರು
ನಂದ ತೀರಥರಾಯ ಅಸ್ಮದ್ಗುರೋರ್ಗುರು ಕಾಯ ಪೊರೆಯಯ್ಯ ಜೀಯಾ ಪ ಪಾದ ಕಮಲಕೆ ನಂದ ಮಧುಕರ ನಂದದಲಿ ನಿಜ ಮಂದ ಜನರಿಗೆ ನಂದ ಕೊಡುವಾ ಮೂರ್ತಿ ಆನಂದಕಾರಿಯೆ ಅ.ಪ ಮಧ್ಯಮನಿ ದ್ವಿಜನಲ್ಲಿ ಉದ್ಭವಿಸಿ ನೀನೂ ಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ - ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾ ಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ ಶುದ್ಧ ಶ್ರೀ ಹರಿಮತದ ಶುಭ ಸಿದ್ಧಾಂತ ಸ್ಥಾಪಿಸಿ ಜಗದಿ ಜೀವರ ಸಿದ್ಧಗಣಕಧಿನಾಥನೆಂದೂ ಪ್ರ - ಸಿದ್ಧಗೈಸಿದಿ ಶುದ್ಧ ಮೂರುತಿ 1 ಬದರಿಕಾಶ್ರಮವನ್ನು ಐದಿದ್ಯೊ ಮುದದಿ ಪದುಮನಾಭನನ್ನು ಬಲಗೈಸಿ ನಿನ್ನ ಬದಿಗ ಜನರಿಗಿನ್ನೂ ಸುವಾಕ್ಯ ದಿಂದಲಿ ಪೇಳಿದದು ನಿಜ ಪದುಮನಾಭನೆ ಪರಮದೈವನು ಪದುಮೆ ಮೊದಲು ಬ್ರಹ್ಮಾಂತ ಜೀವರ ಪದದಿ ಗುಣದ ತಾರತಮ್ಯವ ಹೃದಯ ಮಂದಿರದಲ್ಲಿ ಪೇಳಿದ 2 ಘನ್ನಮಹಿಮನೆ ಎನ್ನಮನ ವಚನ ಕಾಯದಿ ಇನ್ನು ಮಾಡುವುದನ್ನು ಸ್ವೀಕರಿಸಿ ಹರಿಗೆ ಮುನ್ನ ನೀಡೆಲೊ ಚೆನ್ನವಾಗಿ ನಿಜಫಲ ನಿನ್ನ ಜನರೀಗಿನ್ನ ನೀಡಯ್ಯ ಮುನ್ನ ನಿನ್ನ ಒಳಗೆ ನಿರುತ ಇರುವ ಘನ್ನ ಗುರುಜಗನ್ನಾಥವಿಠಲನ ಎನ್ನ ಮನದಲಿ ತೋರಿಸೆಂದು ನಿನ್ನ ಪದಯುಗವನ್ನು ಭಜಿಸಿದೆ 3
--------------
ಗುರುಜಗನ್ನಾಥದಾಸರು
ನೀಲವರ್ಣ ವಿಠಲ ನಾ ನಿನ್ನ ಮೆಚ್ಚಿದೆ ಎನ್ನಪಾಲಿಸಯ್ಯ ಪರಮಪಾವನ್ನ ಮೆಚ್ಚಿದೆ ಪ. ಶರಧಿ ಲೋಚನಕೆ ಭಯ ನಿನ್ನವರ ನೀಲೋತ್ಪಲದೀ ವಕ್ಷದೊಳ್ ಘಾಯಸ್ಮರನ ಧಾಳಿಗೆ ಕಡುನೊಂದೆನೊ ಪ್ರಿಯಾ ನಿನ್ನಕರುಣಕವಚವನ್ನು ತೊಡಿಸೊ ಜೀಯ 1 ಪಾದ ಬಾಲರವಿಯ ನಿನ್ನತರಳಲೋಚನಕೆ ಮುಖೇಂದು ಛವಿಯಗುರುಮಾಡಿ ಸಲಹಯ್ಯ ಸಿರಿದೇವಿಯ ಎನ್ನೊಡನೆವರವ[ಪಡೆವೆನು] ನಿನ್ನಂಘ್ರಿಸೇವೆಯ 2 ಮುನಿಜನ ಮನಕೆ ಸಿಲುಕದಿಪ್ಪನ ಎನ್ನಮನೆಗೆ ಬಾರೆಂಬುದುಚಿತವಲ್ಲ ನಿನ್ನಅನಿಮಿತ್ತ ಬಂಧುವೆ ನೀ ದಯಾಸಂಪನ್ನಎನ್ನಿನಿಯ ಬಾರಯ್ಯ ನೀನು ಹಯವದನ್ನ 3
--------------
ವಾದಿರಾಜ
ಪರಿ ನಿರ್ದಯಗೈದಿರಿ ತಂದೆ ಶ್ರೀ ಗುರುವೆ ಪೇಳಿ ಪ. ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ. ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ ಅತಿಶಯಾನಂದವ ಪಡುತಲಿದ್ದೆ ಇಂದು ಅತಿಶಯದ ನಿಮ್ಮ ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ 1 ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ ಒಲ್ಲೆನು ನಾನೊಂದು ಇಹಪರ ಸೌಖ್ಯವು ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ 2 ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು ಘನಮನಕಿನ್ನೀಗ ಬರಲಿಲ್ಲವೆ ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ ಮನದಿ ನಾ ಕಾಣೆನು ವನಜಾಕ್ಷ ಬಲ್ಲನು 3 ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ ಸರಸಿಜಾಕ್ಷನ ತೋರಿ ಹರುಷವಿತ್ತು ದುರಿತವ ತೊಲಗಿಸಿ ಕರಕರಗೊಳಿಸದೆ ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ 4 ತಡಮಾಡದೆ ಭವಕಡಲ ದಾಟಿಸಿ ಈಗ ಮೃಡಸಖನನು ತೋರಿ ದೃಢ ಮನದಿ ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ 5
--------------
ಅಂಬಾಬಾಯಿ
ಬೇಡುವುದಿಲ್ಲನ್ಯ ನಾನೇನು ನಿನ್ನ ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ ಎನ್ನುಳಿಸು ತಂದೆಯನು ತರಿದೆನ್ನದಿಲ್ಲ ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ ನಿನ್ನ ದಾಸರ ಸಂಗವನ್ನು ಕರುಣಿಸಿ ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ ಭಿನ್ನವೇನಿದರೊಳು ಉನ್ನತಮಹಿಮ 1 ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ ಎಲೆದೇವ ತವಪಾದನಳಿನ ನಿರ್ಮಲಧ್ಯಾನ ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ 2 ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು ಉನ್ನತ ಕುಲಗೆಡು ಎನ್ನೊಳುಂಡೆನೆನು ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು ಅನ್ಯರನು ಬೇಡದಂತುನ್ನತ ಪದ ನೀಡಿ ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ 3
--------------
ರಾಮದಾಸರು
ಮಾರನಯ್ಯನ ಚದುರನ ತಂದುತೋರು ವೆಂಕಟರಮಣನ ಪ. ನಲ್ಲ ನುಡಿದರೆ ನುಡಿದರಗಿಣಿಯನು ನಾಚಿಸುವಚೆಲ್ವಮೊಗದಿ ಶಶಿಯನುಗೆಲ್ವ ಭಾರಿಯ ಸೊಬಗ ತೋರಿಫುಲ್ಲಬಾಣನ ಜರೆವನೊ 1 ಕಂಬನಿಯ ತೊಡೆದು ತನ್ನ ಮೊಗವಚುಂಬಿಸಲು ತರುಣಿ ತನ್ನ ಬಾಯತಾಂಬೂಲವನಿತ್ತು ಎನ್ನಮನ ದ್ಹಂಬಲ ಸಲಿಸಲು ಪೂರ್ಣ 2 ಇಂದೆನ್ನನಗಲಿದರೆ ಮನದಕುಂದು ಬಿಡಿಸುವನದಾರೆಇಂದುಮುಖಿ ಕರೆದು ತಾರೆ ಹಯವದನನಬಂದು ಬೇಗದಲಿ ಸಾರೆ 3
--------------
ವಾದಿರಾಜ
ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ ತಾಪ ಪರಿಹರಿಪ ಜ್ಞಾನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜಾಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ಸಂಸಾರದೊಳು ಸುಖವಿಲ್ಲ ಪ ದುಂಡನೆ ಬಂದಿಹೆ ದುಂಡನೆ ಹೋಗುವೆ ಹೆಂಡಿರು ಮಕ್ಕಳ ನಡುವೆಯಲಿ ತಂಡ ತಂಡದಿ ಹುಟ್ಟಿ ಕೊಂಡವರು ನಚ್ಚಿ ಕೊಂಡಿವರನು ಪರಗತಿಯ ಕೆಡಿಸದಿರು 1 ಹುಟ್ಟುತ ತರಲಿಲ್ಲ ಹೋಗುತ ವೈಯೊಲ್ಲ ನಟ್ಟ ನಡುವೆ ಬಂದ ಸಿರಿಯಿದು ಕಟ್ಟ ಕಡೆಗೆ ನೀನು ಮಡಿಯಲಿ ಕರುವೆಯ ಬಟ್ಟೆಯ ಶವ ಕಿತ್ತಲಿದು ಬಳ್ಳಿತೆಂಬರು 2 ಎನ್ನಮನೆಯು ಎನ್ನತೋಟ ತುಡಿಗೆಯಿದು ದೆನುತ ಹಿಗ್ಗದಿರು ಇದರೊಳಗೊಂದು ಚಿನ್ನ ಬಾರದು ಕಾಲನವರೆಳೆದೊಯ್ವಾಗ 3 ಘಟ್ಟದ ಕೆಳಗುಷ್ಟು ಬೆಟ್ಟದ ಮರಗಾಯಿ ಹುಟ್ಟಿದ ಬಯಲ ಸೀಮೆಯ ಮೆಣಸು ಬಟ್ಟಾದ ಲವಣ ಶಾಕದ ವೋಲು ಸಂಸಾರ 4 ಜಾಣನಾದರೆ ಪರಗತಿಯ ನೀ ನೊಲುವೊಡೆ ತ್ರಾಣ ವಿರಲಿಕೆ ತೊಡಕಬಿಟ್ಟು ಕಾಣುಸಂಸಾರವ ವಿಷವೆಂದು ತ್ಯಜಿಸಿ ಗೀರ್ವಾಣವಂದಿತ ಲಕ್ಷ್ಮೀರ ಮಣನ ಮೊರೆಹೋಗು 5
--------------
ಕವಿ ಪರಮದೇವದಾಸರು
ನಿನ್ನ ಭಕುತಿಯನು ಬೀರೊ ಎನ್ನಮನ್ನಿಸಿ ಸಲಹುವರಾರೋ ಪಸನ್ನುತಸನ್ಮಾರ್ಗ ತೋರೋ ಆಪನ್ನರಕ್ಷಕ ಬೇಗ ಬಾರೋ ಅ.ಪಪನ್ನಗಶಯನ ಲಕ್ಷ್ಮೀಶಾ ವೇದಸನ್ನುತಪಾದಸರ್ವೇಶಾಇನ್ನು ಬಿಡಿಸು ಭವಪಾಶಾ ಪ್ರಸನ್ನ ರಕ್ಷಿಸೊ ಶ್ರೀನಿವಾಸಾ 1ನಾರದ ಗಾನವಿಲೋಲಾ ಸ್ವಾಮಿಭೂರಿಭಕ್ತರ ಪರಿಪಾಲಾಶ್ರೀ ರಮಣಕರುಣಾಲವಾಲ- ದೇವನೀರದಶ್ಯಾಮ ಗೋಪಾಲಾ2ಕರಿರಾಜವರದ ಪ್ರಮೇಯಾ ಎನ್ನನರಿತು ನಡೆಸೊ ಯೋಗಿಧ್ಯೇಯ ||ಸುರಮುನಿ ಹೃದಯನಿಕಾಯ-ನಮ್ಮಪುರಂದರವಿಠಲರಾಯಾ3
--------------
ಪುರಂದರದಾಸರು