ಹರೇ ಕೃಷ್ಣ ಲೋಕನಾಯಕ ಪಾಲಿಸೆನ್ನ
ದೊರೆ ಸರ್ವ ಸೌಖ್ಯದಾಯಕ ಪ.
ಮೂಢ ಚಿಂತೆ ಎಂಬುದೋಡಿಸು ಕರುಣವಿರಿಸು
ಸದಾ ನಿನ್ನ ಸ್ಮøತಿಯ ನೀಡಿಸು
ಉದಾಸೀನಭಾವದೂಡಿಸು ಭೂಪ ನಿನ್ನ
ಪದಾಬ್ಜವನು ಶಿರದೋಳಾಡಿಸು 1
ಪರಮನೋವೃತ್ತಿ ತಿಳಿಯದೆ ನಿತ್ಯದಲ್ಲಿ
ಕರಗಿ ಕಲ್ಮಶವನು ತಾಳಿದೆ
ಮರುಗಿ ಮುಗ್ಗಿ ಮುಂದುಗಾಣದೆ ತತ್ವ ತಿಳಿಯ-
ದಿರುವೆ ನಿಂತು ಕಂಪುಗೊಳ್ಳದೆ 2
ಈಶ ನೀನೊಬ್ಬನಲ್ಲದೆ ದಾಸನನ್ನು
ಪೋಷಿಸುವರ ಕಾಣೆ ಲೋಕದಲಿ
ಬೇರಿನ್ನು ಬೇಡವೆನ್ನಲಿ ವೆಂಕಟಾದ್ರಿ
ಭೂಪ ಬೇಗ ಕಾಯೊ ಕರುಣದಿ 3