ಆಪನ್ನ ಆರ್ತ ಜನರ ಕಾವ ನೀನೆ ಹರಿ ಎಂಬರು
ಆಪತ್ತು ಬಂದರೂ ನಿನ್ನನೇ ನೆನೆವರು
ಸಂಪತ್ತು ಬಂದರೂೀ ನೀ ನಿತ್ತೆ ಎಂಬರು
ನಿನ್ನಾಪ್ತರು ಕೃಷ್ಣಾ ಎಂದೊದರುವರು
ಅನ್ಯ ದೇವರ ನೆನೆಯರೊ ನಿನ್ನವರು ನಿನ್ನರೂಹ
ಆ ಕರುಣಾ ಆ ಆಭರಣ ಆ ನಿನ್ನ ನಿಜರೂಪ
ಆ ಪರಮ ಪುರುಷ ನಿನ ಕಂಡು ನಲಿವರು
ನಿನ್ನಾಧೀನ ನಾನೆಂಬರು ನಿನ್ನ ಭಕ್ತರು ಶ್ರೀ ಶ್ರೀನಿವಾಸ