ಗುರುಮಧ್ವಮುನಿರಾಯಾ ಎನಗೊಂಬೊದಗಿದಾನು ಸಹಾಯ ಪ
ಕತ್ತಲೆ ಕವಿದಿತ್ತು ಸುತ್ತಲೆ ಕಾಣದಂತೆ ಇತ್ತು
ಬಟ್ಟೆ ದೃಶ್ಯವಿತ್ತು
ಮತ್ತುರೆ ಭವತಮ ಸುತ್ತಲೆ ಮುಸುಕಿರೆ
ಉತ್ತಮಾನಂದತೀರ್ಥ ಬಿಡು ಉದಯಸಿದಾ 1
ಹರಿಬೀಜಾವರಿ ಅಲ್ಲಾ ಧರೆಯೊಳು ಸದ್ಗತಿ ದೊರಿಲಿಲ್ಲಾ
ಗುರುವೇ ಇರಲಿಲ್ಲಾ ಧರೆಯೊಳು ಹರಿಯನಾವ ಬಲ್ಲ
ಸುರರೊಳು ಸುರತರುವರ ವಾಡ ಸೂನು
ಧರೆಯೊಳವತರಿಸಿ ಹರಿಪಥ ತೋರಿದಾ 2
ಎಲ್ಲ ರೋಗಕೆ ಮದ್ದು ಸಲ್ಲುವದಿವರ ನಾಮ ಮುದ್ದು
ಹುಲ್ಲಜನರ ಸದ್ದು ನಿಲ್ಲದೆ ಪೋದಿ ತಡವಿ ಬಿದ್ದು
ಬಲ್ಲಿದ ನರಸಿಂಹ ವಿಠಲನ ನೆನೆಯಲು
ಎಲ್ಲ ಕಾಮಿತಫಲ ನಿಜವೆಂದರುಹದಾ 7