ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಪ್ರಸ್ಥದಲ್ಲೆ ಕುಂತಿ ನಂದ(ನ) ರಾಜಸೂಯ್ಯಾಗವನು ಆ- ನಂದದಿ ಮಾಡಿಂದಿರೇಶಗರ್ಪಿಸಿದನು 1 ಮಂದಬುದ್ಧಿ ಕೌರವನು ಚೆಂದನೋಡಿ ಸೈರಿಸದೆ ಪಾಂಡವರ ಪಟ್ಟಣದಿಂದ್ಹೊರಗ್ಹಾಕುವೆನೆಂದನು 2 ಘಾತಕ ದುರ್ಯೋಧನ ತನ್ನ ಮಾತುಳ ಶಕುನಿಯ ಕೇಳಿ ಪ್ರೀತಿಂದೆ ಪಾಂಡವರ ಕರೆಸಿ ದ್ಯೂತವಾಡಿದ 3 ಆಗ್ರಾದಿಂದಾಟಗಳ ಸೋಲಿಸಿ ಶೀಘ್ರದಿಂದ್ವನವಾಸವ ಚರಿಸಿ ಅಜ್ಞಾತ್ವಾಸೊಂದೊ(ದ್ವ?) ರುಷವೆಂದು ಪ್ರತಿಜÉ್ಞ ಮಾಡಿದ 4 ಸೋತು ಧರ್ಮ ಸಕಲೈಶ್ವರ್ಯ ಸಾದೇವ ನಕುಲ ಭೀಮರ ಪಾರ್ಥ ದ್ರೌಪದಿಯ ಪಣಕಿಟ್ಟು ಕೂತನಾಗಲೆ 5 ಆನೆ ಕುದುರೆ ಅಷ್ಟೈಶ್ವರ್ಯ ಬ್ಯಾಗೆ ತನ್ನಿರಿ ಭಂಡಾರವನು ಹೋಗಿ ದ್ರೌಪದಿ ಕರೆಯಿರೆಂದು ಹೇಳಿದನಾಗ 6 ಕರವ ಮುಗಿದು ನಿಂತು ಇಂದು ನಮ್ಮ ರಾಜಸಭೆಗೆ ಬನ್ನಿರೆಂದರು 7 ದಾಯವಾಡಿ ಸೋತರಿನ್ನುಪಾಯವಿಲ್ಲೀಗೆ 8 ಇಂದಿರೇಶನ ದಯವು ನಮ್ಮಲ್ಲಿದ್ದ ಕಾರಣದಿಂದೀಗ ದುರಿತ ಬಯಲಾಗುವುದ್ಹ್ಯಾಗೆಂದು ನುಡಿದಳು 9 ಚಂದ್ರ ಜ್ಯೋತಿಯಂತೆ ಹೊಳೆವೊ ಮಂದಗಮನೆ (ಇ)ಂದು ವದನೆ ದುಂಡು ಮಲ್ಲಿಗೆಶಿರವ ಬಾಗಿ ಬಂದು ನಿಂತಳು 10 ಕಂಡು ದುರ್ಯೋಧನ ದ್ರೌಪದಿ ನಿನ್ನ ಗಂಡರಡವಿಗೈದುವೋರು ಹೆಂಡತ್ಯಾಗಿರೆನ್ನ ಬಳಿಗೆ ಬಾರೆ ಎಂದನು 11 ಕೆಂಡ ತುಂಬಿದ ಕೊಂಡದೊಳು ಕಂಡೂ ನೀ ಹಾರುವರೇನೊ ತುಂಡು ಮಾಡಿ ಕಡಿವೋರೈವರು ಬ್ಯಾಡೋಯೆಂದಳು 12 ಪತಿಗಳಿಂದೆ ರಹಿತಳೆ ದ್ರೌಪದಿಯೆ ನೀನತಿ ಹರುಷದಿಂದೆ ಸತಿಯಾಗಿ ಬಾಳ್ಹಿತದಿಂದೆನ್ನಕೂಡೇಯೆಂದನು 13 ಪತಿಯಿಂದೆ ರಹಿತಳು ಭಾನುಮತಿಯೋ ಧೃತರಾಷ್ಟ್ರ ಗಾಂಧಾರಿ ಸುತಹೀನರಾಗುವರತಿ ಬ್ಯಾಗೆ ಮತಿಗೇಡಿ ಕೇಳೊ 14 ಪಟ್ಟೆ ಮಂಚಕ್ಕೊಪ್ಪುವ್ಯಂತೇ ಬಾರೇಯೆಂದನು 15 ಅಷ್ಟ ಬಡವರೈವರು ನಿನ ಶಿರ ಕುಟ್ಟಿ ಯಮಪಟ್ಟಣಕ್ಕೆ ಅಟ್ಟಿ ರಾಜ್ಯಕ್ಕಧಿಕಾರ್ಯವರು ಕೇಳೋಯೆಂದಳು 16 ಹೇಮ ಇಚ್ಛ ಮಾಡಿದ್ದೇನೀಗೆನ್ನ ಕೂಡೆ ಎಂದನು 17 ಹುಚ್ಚು ಹಿಡಿದಿತೇನೋ ನಿನಗೆ ಉಚ್ಚು ಬಡಿದು ನಿನ್ನ ಹಲ್ಲು ನುಚ್ಚು ಮಾಡಿ ಕೊಲ್ಲೋರೈವರು ಬ್ಯಾಡೋಯೆಂದಳು 18 ಬಡನಡುವಿನ ವೈಯಾರಿ ಕಡುಚೆಲ್ವೆ ದ್ರೌಪದಿಯೆ ಎನ್ನ ತೊಡೆಯಮ್ಯಾಲೆ ಒಪ್ಪುವ್ಯಂತೆ ಬಾರೆಯೆಂದನು 19 ಕಡುಪಾಪಿ ನೀ ನುಡಿವೋ ನಾಲಿಗೆ ಕಡಿದು ಭೀಮನ ಗದೆಯು ನಿನ್ನ ಉರ ಭೇದಿಸುವೋದನು ನೋಡೇನೆಂದಳು 20 ಅಂಗನೆ ನಿನ್ನಂಗಸಂಗವಾಗದಿದ್ದರೆ ನಿನ್ನ ಮಾನ- ಭಂಗ ಮಾಡಿ ಬತ್ತಲೆ ನಾ ನಿಲಿಸೇನೆಂದನು 21 ಪುಂಡ ಖಳ ನಿನ್ನುದರ ಓಕುಳಿಕೊಂಡಮಾಡೋಕುಳಿಯನಾಡಿ ಚೆಂಡನಾಡಲು ನಿನ್ನ ಶಿರವ ನೋಡೇನೆಂದಳು 22 ಪಾಪಿ ದುಶ್ಶಾಸನನು ಬಂದು ದ್ರೌಪದಿಯ ಮುಂದೆ ನಿಂತು ನೂತನದ ನಿರಿಯ ಪಿಡಿದು ಸೆಳೆಯುತಿದ್ದನು 23 ನಿಲ್ಲೊ ಪಾಪಿ ನಿನ್ನ ರಕ್ತ ಎರೆದು ಹಲ್‍ಹಣಿಗಿಯಲ್ಹಿಕ್ಕಿ ಎಲ್ಲ ಕರುಳ್ವನಮಾಲೆಯ ಮಾಡಿ ಮುಡಿವೆನೆಂದಳು 24 ಮಂಗಳ ಮೂರುತಿ ಮಾರಜನಕ ಎನ್ನ ರಕ್ಷಿಸೆಂದು ಕರವ ಮುಗಿದು ನಿಂತಳು 25 ಮಡುವಿನಲ್ಲೆ ಮುಚ್ಛನಾಗಿ ಬಿಡದೆ ವೇದವ ತಂದು ಕ್ಷೀರ- ಕಡಲ ಕಡೆದ ಕೂರುಮ ಎನ್ನ ಕಾಯೋಯೆಂದಳು 26 ಕಡುಕ್ರೂರ ವರಾಹಾವತಾರ ಹಿಡಿದು ಹಿರಣ್ಯಾಕ್ಷನ ಕಂಬ ವೊಡೆದು ಬಂದಾರ್ಭಟಿಸುವ ಸಿಂಹ ಕಾಯೊ ಎಂದಳು 27 ಬಡವನಾಗಿ ಬಲಿಯ ದಾನ ಬೇಡಿಕೊಂಡ್ವಾಮನನೆ ದೊಡ್ಡ ಕೊಡಲಿ ಪಿಡಿದು ಕ್ಷತ್ರಿಯರನೆ ಕಡಿಬ್ಯಾಗೆಂದಳು 28 ಹತ್ತು ತಲೆಯ ರಾವಣನ ಹತವಮಾಡಿದ್ದವನೆ ಗೋಪೀ ಪುತ್ರನಾದ ಕೃಷ್ಣ ಎನ್ನ ರಕ್ಷಿಸೆಂದಳು29 ಬತ್ತಲಿದ್ದ ಬೌದ್ಧ ನೀ ಬಿಟ್ಟೊ ್ವಸ್ತ್ರ ಎನಗುಡುಗೊರೆಯ ಕೊಟ್ಟು ಹತ್ತಿ ತೇಜಿ ಹರುಷದಿಂದ ಬಾರೋಯೆಂದಳು 30 ಕ್ಷೀರಸಾಗರದಲ್ಲೆ ನೀ ಶ್ರೀಲಕ್ಷ್ಮೀ ಸಹಿತ ಇದ್ದರೇನು ಭೂ ವೈಕುಂಠವಾಸಿ ಎನ್ನ ಕಾಯೋಯೆಂದಳು 31 ಅನಂತಾಸನದಲ್ಲೆ ಆದಿಲಕ್ಷ್ಮೀ ಸಹಿತಾಗಿದ್ದರೇನು ಸೇತೂ(ಶ್ವೇತ?) ದ್ವೀಪವಾಸಿಯೆನ್ನ ಕಾಯೋಯೆಂದಳು 32 ಮಧುರಾ ವಾಸಿ ವೃಂದಾವನ ಗೋವ್ರಜದಲ್ಲಿದ್ದರೇನೊ ಕೃಷ್ಣ ಒದಗಿಬಂದೀಗೆನ್ನಭಿಮಾನ ಕಾಯೋಯೆಂದಳು 33 ಬ್ಯಾಗೆ ಬಿಟ್ಟೀಗೆನ್ನ ಬಳಿಗೆ ಬಾರೋಯೆಂದಳು 34 ಕಾಂತ ಅಕ್ಷಯವೆಂದ ವಸ್ತ್ರಾನಂತವಾದುವು 35 ಕೆಂಪು ಹೂವು ಇರುವಂತಿಗೆಯು ಪಂಚಪೈಠಣಿ ಪಗಡಿ ಬಣ್ಣ ಚಿಂತಾಕು ಪೈಠಣಿಯ ನಿರಿ ಸೆಳೆಯುತಿದ್ದನು 36 ಕರಿಯ ಹೂವು ಕಡ್ಡಿಪೈಠಣಿ ಸೆರಗು ಜರದ ಚಾರಖಾನಿ ಪರಿಪರಿ ಪತ್ತಲಗಳ ತಾ ಸೆಳೆಯುತಿದ್ದನು 37 ಬಿಳಿಯ ಹೂವು ಬಟ್ಟ ಮುತ್ತಿನ ಹೊಳೆವೊ ನಿಂಬಾವಳಿಯು ಚಂದ್ರ ಕಳೆಯ ಸೀರೆಗಳನೆ ಪಿಡಿದು ಸೆಳೆಯುತಿದ್ದನು 38 ಸೂರೂತಿ ಸುಗುತೀಯ ಬಣ್ಣ ಭಾರಿ ಬಾಳೆಪಟ್ಟೆಗಳನು ದ್ವಾರ್ಯಾಮನಿ ಖಂಬಾವತಿ ಸೀರೆ ಸೆಳೆಯುತಿದ್ದನು 39 ತಬಕಾದ್ಹೂವೆಳ್ಳ್ಹೂವು ಗೆರೆ ಸಾಸಿವೆಯ ಚಿಕ್ಕಿ ಸರಪಳ್ಯಂಚು
--------------
ಹರಪನಹಳ್ಳಿಭೀಮವ್ವ
ಗುರು ಅಂತರ್ಯಾಮಿ ಶ್ರೀನಿವಾಸ ಸಿರಿರಮಣ ಶ್ರೀ ಕೃಷ್ಣ ಶ್ರೀನಿಧಿಯೆ ಶ್ರೀಶ ಪ. ಸೃಷ್ಟಿಕರ್ತನೆ ನಿನ್ನ ಲಕ್ಷಿದೇವಿಯು ಸತತ ಶ್ರೇಷ್ಠತನದಲ್ಲಿ ಪೂಜೆ ಮಾಡುತಿಹಳೊ ಅಷ್ಟು ದೇವತೆಗಳು ಆಗಮವನನುಸರಿಸಿ ಶಿಷ್ಟೇಷ್ಟನೆಂತೆಂದು ಪೂಜೆ ಮಾಡುವರೋ 1 ಅಣು ನಾನು ನಿನ್ನ ಅರ್ಚಿಸ ಬಲ್ಲೆನೇ ದೇವ ಘನಮಹಿಮ ಸ್ವೀಕರಿಸೊ ಅಲ್ಪ ಸೇವೆ ಮನ ಮಂದಿರದಿ ನಿಂತು ಅನುಗಾಲ ನಿನ್ನ ದಿವ್ಯ ಘನ ಮೂರ್ತಿಯನೆ ತೋರೋ ಪೂಜೆ ಮಾಡುವೆನೊ 2 ಸರಸಿಜಾಕ್ಷನೆ ನಿನಗೆ ಸರಸದಿಂದ ಗುಲಾಬಿ ಸರದ ಪೂಮಾಲೆಯನು ಕೊರಳಿಗ್ಹಾಕುವೆನೊ ಸುರರ ಪಾಲಿಪ ಹರಿಯೆ ಸುರಹೊನ್ನೆ ಹಾರವನು ಕರ ಚಕ್ರಯುತ ನಿನ್ನ ಕಂಧರದಿ ಧರಿಸೋ 3 ಶ್ಯಾಮವರ್ಣನೆ ರತ್ನಹಾರಗಳು ಹೊಳೆಯುತಿರೆ ಶ್ರೀ ಮನೋಹರ ಮುತ್ತಿನ್ಹಾರ ಪದಕಗಳು ಈ ಮಧ್ಯೆ ದಿವ್ಯ ಶ್ಯಾವಂತಿಗೆ ಸುಮನದಿಂ ಕಾಮಜನಕನೆ ಮಾಲೆಕಟ್ಟಿ ಹಾಕುವೆನೊ 4 ಈ ಜಗವ ಉದರದಲಿ ಧರಿಸಿ ಮೆರೆಯುವ ದೇವ ಜಾಜಿ ಪೂಮಾಲೆಯನು ಕಂಧರದಿ ಧರಿಸೊ ಭೋಜಕುಲ ತಿಲಕನೆ ಕೆಂಡ ಸಂಪಿಗೆ ಸರವ ಮಾಜದೇ ಎನ್ನಿಂದ ಸ್ವೀಕರಿಸೊ ದೇವ 5 ಪಾತಕರಹಿತ ಹರಿ ಪಾವನರೂಪನೆ ಪ್ರೀತಿಯಿಂ ಸ್ವೀಕರಿಸೊ ಕೇತಿಕೆಯ ಸರವ ಶ್ರೀತರುಣಿ ಸತ್ಯಭಾಮೆಯರು ಕದನವಗೈದ ಪ್ರೀತಿ ಪಾರಿಜಾತ ಧರಿಸಯ್ಯ 6 ಮರುಗ ದವನಗಳಿಂದ ಸುರಹೊನ್ನೆಯನೆ ಕಟ್ಟಿ ಇರುವಂತಿಗೆಯ ಹಾರ ಹರಿಯೆ ಅರ್ಪಿಸುವೆ ಪರಿಮಳವ ಬೀರುತಿಹ ಪರಿಪರಿಯ ಮಲ್ಲಿಗೆಯ ಸರಗಳನೆ ಧರಿಸಿನ್ನು ಸಾಕಾರರೂಪ 7 ದುಂಡುಮಲ್ಲಿಗೆಯ ಮೊಗ್ಗು ಪಾಂಡವರ ಪಾಲಕಗೆ ದಂಡೆಯನೆ ಕಟ್ಟಿ ನಾ ಕೊರಳಿಗ್ಹಾಕುವೆನೊ ಚಂಡವಿಕ್ರಮ ಶಂಖ ಚಕ್ರಧಾರಿಯೆ ಪಾದ ಮಂಡೆ ಪರಿಯಂತರದಿ ನೊಡಿ ದಣಿಯುವೆನೊ8 ಸತಿ ನಿನಗಾಗಿ ಕಾಷ್ಟದಳ ಮೃತ್ತಿಕೆಯ ಸೇವಿಸುವ ಜನಕೆ ಇಷ್ಟ ಫಲವನೆ ಇತ್ತು ಕೃಷ್ಣನ್ನ ತೋರಿಸುವ ಶ್ರೇಷ್ಠ ತುಳಸಿಮಾಲೆ ಕಟ್ಟಿ ಹಾಕುವೆನೊ 9 ಕಮಲನಾಭನೆ ಕೃಷ್ಣ ಕಮಲಾಪತಿಯೆ ಸ್ವಾಮಿ ಕಮಲಪಾಣಿಯೆ ದೇವ ಕಮಲಾಕ್ಷನೆ ಕಮಲಮುಖ ನಿನ್ನ ಪದಕಮಲದಲಿ ನಲಿವಂತೆ ಕಮಲದ್ಹಾರವ ಕಟ್ಟಿ ಕೊರಳೀಗ್ಹಾಕುವೆನೋ10 ಈ ಪರಿಯ ಮಾಲೆಗಳ ನೀ ಪ್ರೀತಿಯಿಂ ಧರಿಸಿ ಪಾಪಗಳ ತರಿದೆನ್ನ ಪಾವನವಗೈಯ್ಯೊ ಆಪತ್ತು ಕಳೆವ ಶ್ರೀ ಗುರು ಕಟಾಕ್ಷದಿ ನುಡಿದೆ ಗೋಪಾಲಕೃಷ್ಣವಿಠ್ಠಲನೆ ಕೃಪೆಮಾಡೊ 11
--------------
ಅಂಬಾಬಾಯಿ