ಒಟ್ಟು 17 ಕಡೆಗಳಲ್ಲಿ , 12 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ವೆಂಕಟೇಶಾ ಸರ್ವೋತ್ತಮಾನೆ ಶ್ರೀಶಾ ಪ ರಮಾರಮನೆ ಸದ್ಧಿ ಮಾಕರಾಕರ್Àಮುಖ ಸುಮಾನಸಾನತ ಸಮೀರನಗಧೀಶಾ ಅ.ಪ ವರವೈಕುಂಠದಿಂದ ಈ ಧರಾತಳಕೆ ಬಂದ ಚರಣಕಮಲಕೆ ಶರಣು ಮಾಳ್ಪರ ಕುರುಣಿಸೀ ಭವ ಅರಣದಾಟಿಪ 1 ಧರೇಶ ತೊಂಡನೃಪಗೆ ನೀ ದರಾರಿ ಇತ್ತವಗೆ ಧರಾಸುರೇಶನ ಜರತರಿದು ಬಹು ತ್ವರದಿ ಯೌವನ ಖರೆಯನೀಡಿದಿ 2 ಇಭರಾಜ ನಿನ್ನ ನುತಿಸೆ ಅಭಯವಿತ್ತೆಘನ್ನಾ ಶುಭಕರನೆ ನಿನ್ನ ಪ್ರಭಾವ ಕೇಳಿದೆ ಪ್ರಭುವೆ ಎನ್ನ ಭವಭಯಾಕಳಿಯೊ ಸ್ವಾಮಿ 3 ಮಹಾನುಭಾವ ಎನ್ನ ಮನದಲಿ ವಹಿಸಿದೇ ನಿನ್ನ ಗಹನಮಹಿಮನೆ ಮಹಾಪರಾಧವ ಸಹನ ಮಾಡೆಲೊ ಅಹೀಶಗಿರಿವಾಸ 4 ಪಾತಕಾದ್ರಿಕುಲಿಶಾ ನೀ ವಿಧಾತಾದಿಸುರಕುಲೇಶಾ ನೀತಗುರು ಜಗನ್ನಾಥವಿಠಲ ನಿಜ ದೂತಜ£ಕÀತಿ ಪ್ರೀತಾನಾಗುವೊ ದಾತಾ 5
--------------
ಗುರುಜಗನ್ನಾಥದಾಸರು
1. ಗಜೇಂದ್ರಮೋಕ್ಷ ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ ಘೋರ ಭವದುಃಖ ಸಂಹಾರಾಯ ಪ ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ- ತಾ ಶುಂಡಾಲನಾದನರಸ 1 ಕ್ಷೀರಸಾಗರ ತಡದೊಳೈವತ್ತು ಯೋಜನ ವಿ- ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ ವಾರಣೀಂದ್ರನು ಮೆರೆದನು 2 ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ ಕಂಡಿತು ಪಾನಾಭಿಲಾಷೆಯಿಂದ ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ ಏನಿದೆತ್ತಣ ರಭಸವೆಂದುಗ್ರಕೋಪದಿಂ ನೆಗಳು ಏನೆಂಬೆನಾಕ್ಷಣದೊಳು 3 ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ ಸೆಳೆದುದು ಬಿಡದೆ ನೆಗಳವು ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ ಚಿಂತಿಸುತ ಮತ್ತ್ಯಾರು ತನಗೆನುತಲಿ 4 ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು ಮುಕುಂದ ಮುನಿವೃಂದವಂದ್ಯಾ ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ ಮಾಯಾಪ್ರಬಂಧದಿ ನೆಗಳಿನಿಂ 5 ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ ಪರಮೇಷ್ಠಿ ಪರಮಪುರುಷಾ ನಿರುಪಮ ನಿಜಾನಂದ ನಿರ್ಭಯ ನಿರಾವರಣ ನಿರಂಜನ ನಿರಾಧಾರ ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6 ಗುಪಿತ ಕಂಠಧ್ವನಿಯೊ ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ ದಂತಿವದನನ ನೆಗಹಿದಾ 7 ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ ಕುಂಡಲದಿಂದ ಮಿಗೆ ಶೋಭಿಸುತಲೆಸೆದನು ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ ಅಮರರೊಲುಮೆಗೆ ನೆರೆದನೋಲೈಸುತ 8 ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು [ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ ಸಿರಿ ಮೊಗದ ಪೀತಾಂಬರದಾಲಂಕೃತದ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9 ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10 ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ- ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ ತಾ ವಿಹಂಗಾಧಿಪನನೇರಿ ಬಿಜಯಂಗೈದ ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11
--------------
ಬೇಲೂರು ವೈಕುಂಠದಾಸರು
Àಥವನೇರಿ ಬರುವ ರಂಗನಾಥನ ನೋಡಿ ಪ ಅತಿಶಯವಾದಂಥ ಪರಗತಿಯನು ಪಡೆಯಿರೊ ಅ.ಪ. ಹಸ್ತಿಗಳು ಚಾಮರ ಹಾಕುತಲಿರೆ ಸ್ವಸ್ತಿವಾಚನಗಳನು ದ್ವಿಜರು ಪೇಳುತಲಿರೆ ಸ್ವಸ್ತಿಲಿ ವಿವಿಧ ವಾದ್ಯತತಿ ಸೂಳೈಸುತಲಿರೆ ಮಸ್ತಕಾಂಜಲಿಪುಟದಿ ಹರಿದಾಸರು ಪೊಗಳುತಿರೆ 1 ಸಾಲು ಪಂಜಿನ ದೀವಟಿಗೆಗಳು ಮೆರೆಯೆ ನಾಲ್ಕು ದಿಕ್ಕಲಿ ಜನರು ನಿಂತು ನೋಡುತ ನಲಿಯೆ ಲೀಲೆಯ ತೋರುತ ಶ್ರೀ ಭೂದೇವಿಯರಿಂದ ಲೋಲುಪ ತಾನಾಗಿ ಬಹು ಸಂಭ್ರಮದಿಂದ 2 ನಭದೊಳು ಸಕಲ ದಿವಿಜರೊಡಗೂಡಿ ತಾ ನಭುಜಭವನು ನಿಂತು ನೋಡಿ ಹಿಗ್ಗುತಿರೆ ಇಭರಾಜವರದ ಶ್ರೀ ರಂಗೇಶವಿಠಲನು ತ್ರಿಭುವನ ಪಾವನ ಮಾಡಿ ಸೊಬಗು ತೋರುತ 3
--------------
ರಂಗೇಶವಿಠಲದಾಸರು
ಒಂದು ದಿನದಲಿ ಇಂದಿರೇಶನು ಚಂದದಿಂದಲಿ ವನಕೆ ಬಂದನು ಸುಂದರಾಂಗನು ಗೋಪ ವೃಂದದಿ ನಿಂದು ಕೊಳಲನು ಸ್ವರವಗೈದನು 1 ಕೊಳಲ ಧ್ವನಿಯನು ಕೇಳುತಾಕ್ಷಣ ಖಗಮೃಗಂಗಳು ಮಯ್ಯ ಮರತವು ತರುಣಿ ಮಣಿಯರು ಮನೆಯ ಕೆಲಸಕೆ ಮರತು ಮಯ್ಯನು ತೆರಳಿ ಬಂದರು 2 ಕೊಳಲ ಧ್ವನಿಯನು ಕೇಳಿ ಗೋಪೇರು ನಳಿನನಾಭನ ಬಳಿಗೆ ಬಂದರು ನಳಿನಮುಖಿಯರ ನೋಡಿ ಕೃಷ್ಣನು ಮುಗುಳುನಗೆಯಲಿ ಮಾತನಾಡಿದನು 3 ನಾರಿಮಣಿಯರೆ ರಾತ್ರಿ ವೇಳೆಯು ಈಗ ಇಲ್ಲಿಗೆ ಬಂದಿರೇತಕೆ ಮಾರನಯ್ಯನ ಮಾತುಕೇಳುತ ಮಡದಿ ಮಣಿಯರು ನುಡಿದರಾಗಲೆ4 ಬಾಲಕೃಷ್ಣನೆ ನಿನ್ನ ಕೊಳಲಿನ ಈಗಲೆಮ್ಮಯ ಮನವು ಹರುಷಿಸೆ ಬೇಗ ನಿನ್ನನು ಬೇಡಿಕೊಂಬೆವೊ 5 ಇಂತು ಕೃಷ್ಣನು ಸರಸವಾಡುತ ನಿಂತನವರಿಗೆ ಹರುಷ ತೋರುತ ಚಿಂತೆಯೆಲ್ಲವ ಬಿಟ್ಟು ಗೋಪೇರು ಅಂತರಾತ್ಮನ ಭಜಿಸುತಿದ್ದರು 6 ಏನು ಪುಣ್ಯವೊ ನಮ್ಮದೆನುತಲಿ ದಾನವಾರಿಯ ಸ್ಮರಿಸುತಿದ್ದರು ನಾರೇರೆಲ್ಲರ ನೋಡಿ ಕೃಷ್ಣನು ಬೇಗದಿಂದಲಿ ಅಂತರ್ಧಾನನಾದನು 7 ಸ್ಮರನ ಪಿತನನು ಸ್ಮರಿಸಿಪಾಡುವ ತರುಣಿಯರಿಗೆ ಮೈ ಸ್ಮರಣೆ ಮರೆತಿರೆ ಭರದಿ ಕಂಗಳ ತೆರೆದು ನೋಡಲು ಮುರಳೀಧರನ ಕಾಣದಲೆ ಚಿಂತಿಸಿ 8 ಜಾಜಿ ಸಂಪಿಗೆ ಸೂಜಿ ಮಲ್ಲಿಗೆ ರಾಜೀವಾಕ್ಷನ ಕಾಣಲಿಲ್ಲವೆ ಬಿಳಿಯ ಮಲ್ಲಿಗೆ ಎಳೆಯ ತುಳಸಿಯೆ ನಳಿನನಾಭನ ಸುಳಿವು ಕಾಣಿರಾ 9 ಸರಸದಿಂದಲಿ ಹರಿವ ಯಮುನೆಯೆ ಪಾದ ಕಾಣೆಯಾ ಚಿಗರಿ ಮರಿಗಳೆ ನಿಮ್ಮ ಕಂಗಳು ನಳಿನನಾಭನ ಸುಳವು ಕಾಣವೆ 10 ಯಾರ ಕೇಳಲು ಹರಿಯ ಕಾಣರು ನಾರಿಮಣಿಯರೆ ನಾವೆ ಕರೆಯುವ ಮುದ್ದು ಕೃಷ್ಣನೆ ಪದ್ಮನಾಭನೆ ಶ್ರದ್ಧೆಯಿಂದಲಿ ನಿಮ್ಮ ಭಜಿಪೆವೊ 11 ಜಯತು ಜಯತು ಶ್ರೀ ಲಕ್ಷ್ಮೀ ರಮಣನೆ ಜಯತು ಜಯತು ಶ್ರೀ ಗರುಡಗಮನನೆ ಜಯತು ಜಯತು ಶ್ರೀ ಉರಗಶಯನನೆ ಜಯತು ಜಯತು ಶ್ರೀ ಪರಮ ಪುರುಷನೆ 12 ಜಯತು ಜಾಹ್ನವಿಜನಕÀ ಶ್ರೀಶನೆ ಜಯತು ಭಕ್ತರ ಭಯವಿನಾಶನೆ ಜಯತು ಪಾವನ ಪುಣ್ಯ ಚರಿತನೆ ಜಯತು ಜಯತು ಲಾವಣ್ಯರೂಪನೆ 13 ಎಳೆಯ ಚಿಗುರಿನಂತಿರುವ ಪಾದವು ರುಳಿಯ ಗೆಜ್ಜೆಯು ಕಾಲಪೆಂಡೆಯು ಎಳೆಯ ಪಾದದಿ ಹೊಳೆವ ಪೈಜನಿ ಘಲಿರು ಘಲಿರು ಎಂದೆನುತ ಮೆರೆವುದು 14 ಪುಟ್ಟ ನಡುವಿಗೆ ಪಟ್ಟೆ ಮಡಿಗಳು ಇಟ್ಟ ಚಲ್ಲಣ ಪುಟ್ಟ ಕೃಷ್ಣಗೆ ಉಡುಗೆಜ್ಜೆಯು ಗಂಟೆ ಸರಪಳಿ ಒಪ್ಪಿ ಮೆರೆಯುವ ಕಾಂಚಿಧಾಮವು 15 ಚತುರ ಹಸ್ತದಿ ಶಂಖುಚಕ್ರವು ಗದೆಯು ಪದುಮವು ಹೊಳೆಯುತಿರುವುದು ಕಡಗ ಕಂಕಣ ತೋಳ ಬಾಪುರಿ ವಜ್ರದೊಂಕಿಯು ಮೆರೆಯುತಿರುವುದು 16 ಕೌಸ್ತುಭ ವೈಜಯಂತಿಯು ಸುರಗಿ ಸಂಪಿಗೆ ಸರಗಳೊಲಿಯುತ ಎಳೆಯ ತುಳಸಿಯ ಸರಗಳೊಪ್ಪುತ ಜರದವಲ್ಲಿಯು ಜಾರಿ ಬೀಳಲು 17 ವÀಕ್ಷ ಸ್ಥಳದಿ ಶ್ರೀಲಕ್ಷ್ಮಿ ಒಪ್ಪಿರೆ ರತ್ನ ಪದಕಗಳೆಲ್ಲ ಶೋಭಿಸೆ ಮಕರ ಕುಂಡಲ ರತ್ನದ್ಹಾರಗಳಿಂದ ಒಪ್ಪಿರೆ 18 ಗುರುಳು ಕೂದಲು ಹೊಳೆವೊ ಫಣೆಯಲಿ ತಿಲುಕ ಕಸ್ತೂರಿ ಶೋಭಿಸುತ್ತಿರೆ ಎಳೆಯ ಚಂದ್ರನ ಪೋಲ್ವ ಮುಖದಲಿ ಮುಗುಳು ನಗೆಯು ಬಾಯ್ದಂತ ಪಂಕ್ತಿಯು 19 ಪದ್ಮನೇತ್ರಗಳಿಂದ ಒಪ್ಪುತ ಪದ್ಮ ಕರದಲಿ ಪಿಡಿದು ತಿರುವುತ ಪದ್ಮಲೋಚನೆಯನ್ನು ನೋಡುತ ಪದ್ಮನಾಭನು ಕೊಳಲನೂದುತ 20 ರತ್ನ ಮುತ್ತಿನ ಕಿರೀಟ ಶಿರದಲಿ ಮತ್ತೆ ನವಿಲಿನ ಗರಿಗಳೊಪ್ಪಿರೆ ಹಸ್ತಿ ವರದನು ಎತ್ತಿ ಸ್ವರವನು ಮತ್ತೆ ಕೊಳಲನು ಊದೊ ದೇವನೆ 21 ಸುಂದರಾಂಗನೆ ಮಂದಹಾಸನೆ ಮಂದರೋದ್ಧರ ಬಾರೋ ಬೇಗನೆ ಇಂದಿರೇಶನೆ ಇಭರಾಜವರದನೆ ರಂಗನಾಥನೆ ಬಾರೊ ಬೇಗನೆ22 ಮದನ ಮೋಹನ ಪಾರಮಹಿಮನೆ ಬಾರೊ ಬೇಗನೆ ಶ್ರೀರಮಾಪತೆ ಶ್ರೀ ನಿಕೇತನ ವಾರಿಜಾಕ್ಷನೆ ಬಾರೊ ಬೇಗನೆ 23 ಹೀಗೆ ಗೋಪೇರು ಮೊರೆಯನಿಡುತಿರೆ ಮಂಗಳಾಂಗನು ಬಂದನೆದುರಿಗೆ ಧ್ವಜ ವಜ್ರಾಂಕುಶ ಪದ್ಮ ಪಾದವು ಅಡಿಯನಿಡುತಿರೆ ಧರಣಿ ನಲಿವಳು 24 ಹರಿಯ ನೋಡುತ ಪರಮ ಹರುಷದಿ ತರುಣಿಮಣಿಯರು ಹರುಷ ಪಡುತಲಿ ಪರಮ ಮಂಗಳ ಚರಿತ ದೇವಗೆ ಸ್ವರವನೆತ್ತಿ ಮಂಗಳವ ನುಡಿದರು 25 ಶುಭ ಕಂಬು ಕಂಠಗೆ ಮಂಗಳಂ ಮಹಾ ಮಾರನಯ್ಯಗೆ ಮಂಗಳಂ ಮಹಾ ಮುದ್ದುಕೃಷ್ಣಗೆ ಮಂಗಳಂ ಜಯ ಮಂಗಳಾಂಗಗೆ 26 ಕಮಲ ಮುಖಿಯರು ನಮಿಸಿ ಕೃಷ್ಣಗೆ ಸರಸವಾಡುತ ಹರುಷ ಪಡುತಲಿ ಕಮಲನಾಭ ವಿಠ್ಠಲನ ಕೂಡುತ ಮನದಿ ಸುಖವನು ಪಡುತಲಿದ್ದರು 27
--------------
ನಿಡಗುರುಕಿ ಜೀವೂಬಾಯಿ
ಕೂಗೆಲೋ ಮನುಜ ಕೂಗೆಲೋ ಪ ಸಾಗರಶಯನನೆ ಜಗಕೆ ದೈವವೆಂದು ಅ ಮಾಧವ ಕೃಷ್ಣ ಸಚ್ಚಿದಾನಂದೈಕ ಸರ್ವೋತ್ತಮ ಸಚ್ಚರಿತ ರಂಗ ನಾರಾಯಣ ವೇದ ಮತ್ಸ್ಯ ಮೂರುತಿಯೆಂದು1 ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿ ಕೂರ್ಮ ಮೂರುತಿಯೆಂದು2 ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ ವರದ ಅಪಾರ ಸದ್ಗುಣನಿಲಯ ಮುರುಮರ್ದನ ಮಂಜು ಭಾಷಣ ಕೇಶವ ನಿರ್ಮಲ ದೇವ ಭೂವರಾಹಮೂರುತಿ ಯೆಂದು 3 ನಿಗಮವಂದಿತ ವಾರಿಜನಾಭ ಅನಿರುದ್ಧ ಅಪ್ರಾಕೃತ ಶರೀರ ಸುಗುಣ ಸಾಕಾರ ಜಗದತ್ಯಂತ ಭಿನ್ನ ನರಮೃಗ ರೂಪಾನೆಂದು 4 ವಟಪತ್ರಶಯನ ಜಗದಂತರ್ಯಾಮಿ ಕೌಸ್ತುಭ ವಿಹಾರ ತಟಿತ್ಕೋಟಿ ನಿಭಕಾಯ ಪೀತಾಂಬರಧರ ನಿಟಿಲಲೋಚನ ಬಾಲವಟು ಮೂರುತಿಯೆಂದು5 ವಿಷ್ಣು ಸಂಕರುಷಣ ಮಧುಸೂದನ ಶ್ರೀ ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ ಸಾರಥಿ ರಾಮ ಅಚ್ಯುತಾಧೋಕ್ಷಜ ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು 6 ಇಭರಾಜ ಪರಿಪಾಲ ಇಂದಿರೆಯರಸ ನಭ ಗಂಗಾಜನಕ ಜನಾದರ್Àನನೆ ವಿಭುವೇ ವಿಶ್ವರೂಪ ವಿಶ್ವನಾಟಕ ಋ ಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು 7 ವಾಸುದೇವ ರಂಗ ನವನೀತ ಚೋರ ಜಾರ ಗೋಕುಲವಾಸಿ ಗೋವಳರಾಯ ಶ್ರೀಧರ ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು 8 ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ ಭಂಜನ ಕುಸುಮ ಶರನಯ್ಯ ಶಾರ್ಙಧರಾಚಕ್ರಿ ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು 9 ಸರ್ವಮಂಗಳ ಸರ್ವಸಾರ ಭೋಕ್ತ ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು 10 ಪರಿ ಅಪಾರ ಜನ್ಮ ಬೆಂಬಿಡದಲೆ ಸಪ್ತ ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ ಅಪವರ್ಗದಲ್ಲಿಟ್ಟು ಆನಂದಪಡಿಸುವ 11
--------------
ವಿಜಯದಾಸ
ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ ಸೊಲ್ಲ ಲಾಲಿಸಿ ಬೇಗ ಸಲಹು ದೇವಾ ಖುಲ್ಲ ಮಾನವನೆಂದು ತಲ್ಲಣಗೊಳಿಸೋರು ಭವನಾವಾ ಪ ಓಡಿಬಂದೆನೊ ನಿನ್ನ ನೋಡಬೇಕೆನುತಲಿ ಗಾಡಿಕಾರದೇವ ತ್ವರೆಯಿಂದ ದೂಡಬ್ಯಾಡೊ ನನ್ನ ಪಾದ ಮುಕುಂದಾ 1 ಅಭಯವ ನೀಡಯ್ಯಾ ಇಭರಾಜವರದನೆ ಉಭಯ ಸುಖಪ್ರದ ನೀನೆಂದು ಅಭಿನಮಿಸುವೆನಯ್ಯ ಶಬರಿಯಂಜಲನುಂಡು ಬುಜೆಗಧವಕೊಂಡಿ ವಿಬುಧವಂದಿತನೆ2 ಮೆರೆಯುವಿ ನೀ ಬಲು ಉರಗರಾಜಶಾಯಿ ವರವಿಪ್ರನಿಕರದಿಂ ಪೂಜೆಗೊಂಡು ಥರಥರದಲಿ ನೀ ಪೊರಹಿದೆ ಭಕ್ತರ ಮರೆಯಬ್ಯಾಡ ನನ್ನ ಶಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ನಿತ್ಯ ನಿಜಾಲಂಕಾರ ಶರೀರಾ | ಕ | ಳಂಕ ಮತಿದೂರಾ ಪ ವಿಭುವೆ ಇಭರಾಜಾ ವರದಾ ಸಾರಾ | ನಭರತುನ ತೇಜಾ | ಅಭಯ ಮೂರುತಿ ಸು | ಲಭ ದಾಯಕ | ವಿಬುಧವಂದಿತ ಸರ್ವಾ | ಶುಭಗುಣಶೀಲಾ 1 ಹೂವ್ವಿನಂಗಿಯ ತೊಟ್ಟು ಮೆರೆವಾ ಶ್ರೀವರ ಗಿರಿಯಾ | ಭಾವಕ್ಕೆ ಬಿಗಿದಪ್ಪಿ ತಾ ವೊಪ್ಪುತಿಹ | ಲೋಕ ಪಾವನ ಸ್ವತಂತ್ರ ಗೋವುಗಳ ಕಾಯ್ದಾ2 ವರಪರ್ವತ ವಾಸಾ ವಾಸುದೇವಾ | ಮಂಗಳವೀವ ವಿಜಯವಿಠ್ಠಲರೇಯಾ | ಗರುವ ದೇವರ ದೇವ ಜ್ಞಾನಾನಂದ ಪರಿಪೂರ್ಣ 3
--------------
ವಿಜಯದಾಸ
ನಿತ್ಯ ನಿರುಪಮ ಚಿದಾನಂದ ಕರುಣಾಬ್ಧಿ ನೀನೆ ದೊರಕೆ ನಿಲುಕೆ ಅಪಮಂಗಳನೆ ಮಂಗಳವನಿತ್ತೆ ಮನಸಿಗೆ ನೀನು ಅಂಗ ಮಂಗಳವಾುತುಹಿಂಗಿದವು ದುರಿತಗಳು ಸಂಗವಿದ್ದರು ಜಡದ ತೊಂಗವವ ಮನ ಮೀರಿತುನುಂಗುತಿದೆ ದೋಷಗಳ ಬಂದಡೊಡಬನ ತೆರದಿ ಭಂಗವೆಂಬುದು ಹೋುತುಅಂಗ ಲಿಂಗದ ಕಾಂತಿ ಹೊಂಗಿ ಹೊರಹೊಮ್ಮುತಿದೆ ರಂಗ ನಿನ್ನೊಲವಾುತು ುನಿತು 1ಹೊನ್ನಿನೊಳಗಿದ್ದ ಮಲಿನವನಗ್ನಿ ಕಳಚಿದರೆ ಮುನ್ನಿನಂದದಿ ಮಲಿನವೆಹೊನ್ನಾದ ಕಬ್ಬಿನವು ಕಬ್ಬಿನದ ಸಂಗದಲಿುನ್ನು ಕಬ್ಬಿನ ಭಾವವೆಬೆಣ್ಣೆ ಕ್ಷೀರದಿ ಬಂದು ಘೃತವಾದ ಬಳಿಕ ತಾ ಬೆಣ್ಣೆಯಲ್ಲದೆ ಕ್ಷೀರವೆನಿನ್ನ ಕೃಪೆುಂದ ಮಂಗಳನಾಮವನು ಸ್ಮರಿಸೆ ನಿನ್ನವಗೆ ದೋಷ ಬಹವೆ ಇಹವೆ 2ಬಾಳೆಯನು ಬಿತ್ತಿ ಪ್ರತಿ ದಿವಸ ನೋಡಿದಡಲ್ಲಿ ನೀಳವಾಗಿಹುದು ಸುಳಿಯುಕಾಲ ಬಂದರೆ ಗೊನೆಯು ಹಾಯ್ದು ಫಲವಾಗಿರಲು ಮೇಲೊಮ್ಮೆಯುಂಟೆ ಯೆಲೆಯುಕಾಲ ಕರ್ಮಾಧೀನವಾಗಿರುವ ಸಂಸಾರ ಲೋಲ ಮನಸಿನ ವೃತ್ತಿಯುಜಾಲದಿಂದಿರಲಲ್ಲಿ ನಿನ್ನಂಘ್ರಿ ಸ್ಮರಣೆುಂಮೇಲುಂಟೆ ಕರ್ಮಗತಿಯು ಸ್ಥಿತಿಯು 3ವೃತ್ತಿ ಮಾಯಾಕಾರ್ಯ ಮಾಯೆ ನಿನ್ನಾಧೀನ ವೃತ್ತಿ ಮಾಯೆಯು ಕಲ್ಪಿತಸುತ್ತಿ ಸುಳಿಸುಳಿದಾಡಿ ಸತ್ಯದಂದದಿ ತೋರಿ ಮತ್ತೆ ನಿನ್ನೊಳಗರ್ಪಿತಚಿತ್ತು ತಾನೆ ನಾಮರೂಪಾದ ಬಗೆುಂದ ಚಿತ್ತು ಚಿತ್ತಾಹುದುಚಿತಸತ್ಯಸಂಧನು ನೀನು ಚಿತ್ತವನು ಬಿತ್ತರಿಸಿ ವೃತ್ತಿಯಾುತು ಬೆಳೆಯುತಾ ಇರುತಾ 4ಮನದ ಸಂಶಯ ಬಿಡದು ಶ್ರವಣಮನನಾದಿಗಳನನುದಿನವು ಮಾಡುತಿರಲುಮನಕೆ ಸಾಕ್ಷಿಕನಾದ ನೀನು ಘನಮಾಯೆಯನು ಮನಕೆ ಮರೆಮಾಡುತಿರಲುಚಿನುಮಯನೆ ಮಾಯೆಯನು ಕಡೆಗೆ ತೆಗೆಯಲು ಜ್ಞಾನ ಜನಿಸುವುದು ನೀನು ಕೊಡಲುಇನಕೋಟಿಸಂಕಾಶ ಇಭರಾಜದುರಿತಹರ ಎನಲು ನಿಜವಾಗುತಿರಲು ನಿಲಲು 5ತರಣಿಕಿರಣಗಳಿಂದ ಜನಿಸಿದಾ ಮೇಘಗಳು ತರಣಿಯನು ಮುಚ್ಚಲಳವೆತರಣಿ ತಾನೆನದಿವನು ಹರಹಿ ಹಿಂದಕೆ ತೆಗೆಯೆ ನೆರೆ ಹಿಂಗಿ ಹೋಗದಿಹವೆಪರಮಪುರುಷನು ನೀನು ಸ್ಮರಿಸಿ ಮಾಯೆಯ ಬೀಸಿ ತಿರುಗಿಸಲು ಮಾಯೆಗಿರವೆದುರಿತವಾಗಿರೆ ಜನಕೆ ನೆರೆ ಭಕ್ತಿಯನು ನೀನು ಕರುಣಿಸಲು ಮತ್ತೆ ಭವವೆ ಧ್ರುವವೆ 6ಅರಣಿುಂದುದುಭವಿಸಿದನಲ ಮುನ್ನಿನ ತೆರದ ಅರಣಿಯಾಗಿಯೆ ತೋರ್ಪನೆಅರೆದು ತಿಲವನು ತೆಗೆಯೆ ತೈಲವನು ತಿಲ ಬಳಿಕ ಇರುವದೆ ತೈಲದೊಡನೆಬೆರೆದು ಕರ್ಪುರವಗ್ನಿಯೊಡನಾಡಿ ಬೇರ್ಪಟ್ಟು ಮೆರೆವುದೆಂತಗ್ನಿಯೊಡನೆತಿರುಪತಿಯ ವೆಂಕಟನೆ ನಿನ್ನ ಚರಣದೊಳಿಟ್ಟ ಶರಣ ಮುನ್ನಿನ ಮನುಜನೆಯಹನೆ 7ಓಂ ಪುಣ್ಯ ಶ್ಲೋಕಾಯ ನಮಃ
--------------
ತಿಮ್ಮಪ್ಪದಾಸರು
ಪ(ಪಾ)ವನಾ ಗುರು ಪವಮಾನ ಪ ಪಾವನ ಗುರು ಪವಮಾನ ದೇವ ಅವಾವಕಾಲದಿ ಸಲಹುವ ಕರುಣಿ ಕೃಪಾ ವಲೋಕನದಿಂದ ಕಾವುದೆಮ್ಮನು ಗುರುಅ.ಪ ಪರಮ ಮಹಿಮ ಶ್ರೀ ಮುಕುಂದಾ ನಿಂದ ಕರುಣಾದಿಂದ ಜನಿಸಿಬಂದ ಬಂದು ಸರ್ವಜೀವರೊಳಾನಂದದಿಂದ ಕರಣದೊಳು ನಿಂತಚಂದಾ ||ಆಹ|| ನಿರುತದಿ ಹರಿಪ್ರೇರಣೆಯಿಂದ ಕಾರ್ಯವ ಪರಿಪರಿಮಾಡಿ ಶ್ರೀಹರಿಗರ್ಪಿಸುವ ದೇವ 1 ತರುಚ್ಛಾಯೆಯಂತೆ ಶ್ರೀ ಹರಿಗೆ ನೀನೆ ಪರಮ ಪ್ರತಿಬಿಂಬನಾಗೆ ಸರ್ವ ಚರಾಚರಾದಿಗಳೊಳಗೆ ಅದರ ದರಯೋಗ್ಯತೆಗನುವಾಗೇ ಆಹ ನಿರುತಕಾರ್ಯವ ಮಾಳ್ವೆ ಅಣುಮಹದ್ರೂಪನೆ ಪರಿಪರಿ ಪ್ರಾಣಾದಿಗಳ ಕಾರ್ಯ ನಿನ್ನಿಂದ2 ಚಕ್ರವರ್ತಿ ಆಜ್ಞೆಯಂತೇ ಪುರದ- ಧಿಕಾರಿನಿಯಮದಂತೇ ಅದಕ- ಧಿಕೃತರಿರುವರಂತೇ ಅಂತೆ ತ- ತ್ವ ಕಾರ್ಯವು ನಿನ್ನಿಚ್ಛೆಯಂತೇ ||ಆಹ|| ಮಿಕ್ಕಾದ ತತ್ವರಿಗೆ ತಕ್ಕ ಕಾರ್ಯವನಿತ್ತು ನಿ- ಯುಕ್ತರ ಮಾಡುವೆ ಹರಿಉಕ್ತಿಯ ಮೀರದೆ 3 ಇಭರಾಜವರದನ ಪ್ರೀಯ ನೀನೆ ಪ್ರಭುವಾಗಿರುವೆ ಸರ್ವಕಾಯದೊಳು ಶುಭಾಶುಭಂಗಳ ಕಾರ್ಯ ನಿತ್ಯ ನಿಬಿಡ ನಿನ್ನಿಂದಲೆ ಜೀಯಾ ||ಆಹ|| ಅಬುಜಾಂಡದೊಳಗೆಲ್ಲ ಪ್ರಬಲ ನಿನ್ನಯ ಶೌಂiÀರ್i ಅಬುಜಭವನ ಪದಪಡೆವ ಪ್ರಭುವೆ ನೀನು4 ಪ್ರಾಣಾದೇವ ನಿನ್ನಿಂದ ಪಂಚ- ಪ್ರಾಣಾದಿರೂಪಗಳಿಂದ ತನು ಸ್ಥಾನದಿಭೇದಗಳಿಂದ ಜಡ ಪ್ರಾಣಭೂತ ಪಂಚದಿಂದಾ ||ಆಹ|| ಕಾಣಿಸಿಕೊಳ್ಳದೆ ಜಾಣತನದಿ ಪುಣ್ಯ ಪಾಪ ಜೀವಗೆ ಉಣಿಸುತಲಿರುವೆಯೊ5 ಪಾಯೂಪಸ್ಥದಿ ಅಪಾನ ಮುಖ ನಾಸಿಕ ಶ್ರೋತ್ರ ಪ್ರಾಣಾ-ನಾಭಿ ಅಯನವಾಗಿರುವ ಸಮಾನಾ ಇನ್ನು ಪಯಣವು ನಾಡಿಯೊಳು ವ್ಯಾನ ||ಆಹ|| ಒಯ್ದುಕೊಡುವ ಫಲಕಾರ್ಯವೆಲ್ಲ ಉದಾನನಿಂದ ಕೂಡಿ ಜೀಯ ನೀ ನಡೆಸೂವೆ 6 ಸೃಷ್ಟಿಯೊಳು ನೀ ಪ್ರವಿಷ್ಟನಾಗಿ ಸೃಷ್ಟಿಕಾರ್ಯದೊಳು ಚೇಷ್ಟಾ ಮಾಡಿ ಸೃಷ್ಟೀಶನೊಲಿಸಿ ಪ್ರತಿಷ್ಠಾ ತತ್ವ ಶ್ರೇಷ್ಠರೆಲ್ಲರ ಮನೋಭೀಷ್ಠ ||ಆಹ|| ತುಷ್ಟಿಪಡಿಸಿ ಪರಮೇಷ್ಠಿಯಾಗುವೆ ಕಪಿ ಶ್ರೇಷ್ಠನೆ ಉರಗಾದ್ರಿವಾಸವಿಠಲನದೂತ 7
--------------
ಉರಗಾದ್ರಿವಾಸವಿಠಲದಾಸರು
ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ (ಅಪ್ಪಾವರು) 140 ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ | ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ || ಇಭರಾಜ ವರದನಿಗು ದ್ರುಪದಾತ್ಮಜಾಪತಿಗು | ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ ಶ್ರೀರಾಮನರಹರಿ ಶ್ರೀಕರನಾರಾಯಣ | ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ || ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ | ಅರವಿಂದದಲಿ ನಾನು ಶರಣು ಶರಣಾದೆ 1 ಪಂಚಮುಖ ಹನುಮಂತ ನರಸಿಂಹ ಗರುಡ ವರಾಹ ಹಯವದನ || ಈ ಅಂಜನಾಸುತನನ್ನು ತತ್ ಅಂತಸ್ಥ | ಪಂಚರೂಪ ಶ್ರೀಶನ್ನ ಪೂಜಿಪಮಹಂತ 2 ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು ಅಪ್ಪಮಕ್ಕಳಂತೆ ಕಾಯ್ದಿರಿ ಜನರ || ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ 3 ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು ತಾಳಿಗೋರೂಪ ಪಾದಜ ಧಾನ್ಯ ಉಂಡು || ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು | ಜಲಜನಾಭನ ಗಾಯಕನೆಂದು ಆಶಿಸಿದಿರಿ 4 ಬೊಮ್ಮನ ಪಿತ `ಶ್ರೀ ಪ್ರಸನ್ನ ಶ್ರೀನಿವಾಸನಲಿ' ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ || ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು ಪ್ರೇಮಾನುಗ್ರಹದಯದಿ ಪಾಲಿಪುದು ಶರಣು 5 ಪ || ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಸಂಪ್ರದಾಯದ ಹಾಡುಗಳು ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ಜೋ ವಾಸುದೇವ ನಾರಾಯಣ ಜೋ ಜೋ ಪ ಕೃತಿಶಾಂತಿ ಜಯ ಮಾಯ ಶ್ರೀಲಕ್ಷ್ಮಿಪತಿ ಜೋ ಪತಿತ ಪಾವನ ಪುರುಷೋತ್ತಮ ಜೋ ಜೋ ಅ.ಪ ಕುಂದಣ ಮಯವಾದ ಚಂದ ತೊಟ್ಟಿಲಲಿ ಚಂದ್ರ ಸೂರ್ಯರ ಗೆಲುವ ಮುಖಕಾಂತೆಯಲಿ ಇಂದಿರಾಪತಿ ಶ್ರೀಶ ಇಭರಾಜವರದ ಮೂಕಾಂಬಿಕೆ ಮಲಗೆ ತೂಗುವೆ ಹರುಷದಲಿ 1 ಸುರರೆಲ್ಲ ನೆರೆದು ಸಂಭ್ರಮಗೊಳುತಿರಲು ಸುರಗಂಧರ್ವಪ್ಸರ ಸ್ತ್ರೀಯರು ನಾಚುತಿರಲು ಹರಬ್ರಹ್ಮ ಮೊದಲಾದವರು ಸ್ತುತಿಸುತಲಿರಲು ಭಳಿರೆ ಜಗನ್ಮಾತೆ ರಕ್ಷಿಸು ರಕ್ಷಿಸೆನಲು 2 ಘಲು ಘಲು ಘಲುರೆಂಬ ಕಾಲ್ಗೆಜ್ಜೆಗಳಿಂದ ಥಳ ಥಳ ಹೊಳೆವ ಪೀತಾಂಬರದ ಚಂದ ಗಿಳಿಗೆಜ್ಜೆ ಹೆರಳು ಬಂಗಾರಗಳಿಂದ ಹೊಳೆವ ಮೀನ ಬಾವುಲಿ ಸರಗಳ ಚಂದ 3 ಕನ್ನಡಿ ಕದುಪಿನ ನಗೆಮುಖ ಕಾಂತಿ ಸಣ್ಣ ಮೂಗುತಿನಿಟ್ಟು ನಲಿಯುತ ಶಾಂತಿ- ಯನು ತೋರುತ ಭಕ್ತಜನರಿಗೆ ಭ್ರಾಂತಿ ಯನು ಕಳೆದು ಉದ್ಧರಿಸುವ ಕಾಂತೆ4 ಕಮಲ ಮುಖಿಯ ಕರಕಮಲದಿ ಅಭಯ ತೋರುತ್ತ ಭಕ್ತರಿಗೆಲ್ಲ ಉಣಿಸಿ ಅಮೃತವ ಕಡೆಗಣ್ಣನೋಟದಿ ಜಗವ ಮೋಹಿಸುವ ಕಮಲನಾಭವಿಠ್ಠಲ ಭಕುತರ ಪೊರೆವ 5
--------------
ನಿಡಗುರುಕಿ ಜೀವೂಬಾಯಿ
ಒಂದೇ ನಾಮವು ಸಾಲದೆ - ಶ್ರೀಹರಿಯೆಂಬಒಂದೇ ನಾಮವು ಸಾಲದೆ ಪಒಂದೇ ನಾಮವು ಭವಬಂಧನ ಬಿಡಿಸುವು |ದೆಂದು ವೇದಂಗಳಾನಂದದಿ ಸ್ತುತಿಸುವ ಅ.ಪಉಭಯರಾಯರು ಸೇರಿ ಮುದದಿ ಲೆತ್ತವನಾಡಿ |ಸಭೆಯೊಳು ಧರ್ಮಜ ಸತಿಯ ಸೋಲೆ ||ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು |ಇಭರಾಜಗ ಮನೆಗಕ್ಷಯವಸ್ತ್ರವನಿತ್ತ 1ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ |ಸಂದೇಹವಿಲ್ಲದೆ ಹಲವುಕಾಲ||ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ |ಕಂದನಾರಗನೆಂದು ಕರೆಯಲಭಯವಿತ್ತ 2ಕಾಶಿಯ ಪುರದೊಳು ಈಶ ಭಕುತಿಯಿಂದ |ಸಾಸಿರನಾಮದ ರಾಮನೆಂಬ ||ಶ್ರೀಶನನಾಮದ ಉಪದೇಶ ಸತಿಗಿತ್ತ |ವಾಸುದೇವಶ್ರೀಪುರಂದರ ವಿಠಲನ 3
--------------
ಪುರಂದರದಾಸರು
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥಪೂಗಪುನ್ನಾಗಜಂ |ಬೀರತರುಗುಲ್ಮಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆನೆಗಳೆ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜಾÕನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದಮಾಧವಕೃಷ್ಣನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದುಸಿಲ್ಕಿದೆನು ಬಲು ದಂದುಗದಮಾಯಾಪ್ರ-ಬಂಧಕನೆ ನೆಗಳಿನಿಂದ 5ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿಪರಮಪಾವನಮೂರ್ತಿ |ಪರಮೇಷ್ಟಿಪರಬ್ರಹ್ಮಪರಮಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕನಿರ್ಗುಣನಿರಂಜನನಿರಾಧಾರ |ನಿರವದ್ಯನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8ಮಣಿಮುಕುಟಕುಂಡಲಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯಜಯಾಎಂಬ ಸುರನರರಸಂ- |ದಣಿಯಿಂದೆಹರಿಮೆರೆದನು 9ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙ್ಞÕನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜಾÕನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದಪುರಂದರವಿಠಲನ
--------------
ಪುರಂದರದಾಸರು
ಪಾಹಿಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ |ಮಹಾ ದುರಿತಾದ್ರಿಪವಿ ದೀನ ಸುರಧರಿಜೇ ಪಶಿಷ್ಟಜನರ ಪಾಲಿಪಳೆ ದುಷ್ಟ ಜನ ದೂರಳೇ |ಸೃಷ್ಟಿಪತಿ ಸೇವೆಯೊಳಗಿಟ್ಟುದುರುಳ|ಬಟ್ಟೆಹಿಡಿಸದಲೆ ದಯವಿಟ್ಟು ಪಿಡಿವದು ಕೈಯ |ಕಷ್ಟ ನಾಶನ ಮಾಡೆ ಕೊಟ್ಟು ಸುಖ ಪೂಜ್ಯೆ 1ಮದನಸತಿಕೋಟ ಲಾವಣ್ಯೆ ಗುಣಸಂಪನ್ನೆ |ಸುದತೀ ವೃಂದ ಶಿರೋಮಣಿ ಕರುಣಾರ್ಣವೆ ||ಮಧು ಜಿತ್ಪ್ರಿಯನ ರಾಣಿ, ವಾಣೀ ವೀಣಾಪಾಣಿ |ಹೃದಯದೊಳು ಕಮಲನಾಭನ ನಿರುತ ತೋರೇ 2ಈಶಾದಿ ಸುಮನಸಾರ್ಚಿತಪಾದಸರಸೀರುಹೆ |ಲೇಶೀತರಾನಂದೆ ಸುಗುಣೆ ಶ್ರೀ ಪ್ರಾ-ಣೇಶ ವಿಠಲನ ಕೊಂಡಾಡುವರೊಳಗೆ ಸ್ನೇಹ |ಹ್ರಾಸವಾಗದೆ ಈಯೆ ಇಭರಾಜ ಗಮನೆ 3
--------------
ಪ್ರಾಣೇಶದಾಸರು
ರಕ್ಷಿಸೋ ಲೋಕನಾಯಕನೆ-ನೀ ಎನ್ನ-ರಕ್ಷಿಸೋ ಲೋಕನಾಯಕನೇ ಪಎಷ್ಟೆಷ್ಟು ಜನ್ಮ ಕಳೆದೆನೋ ಇನ್ನೆಷ್ಟೆಷ್ಟು ಜನ್ಮ ಪಡೆವೆನೋ ||ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟುಇಷ್ಟವ ಪಾಲಿಸು ಇಭರಾಜವರದನೆ 1ಬಾಲತನದಿ ಬಹು ಬೆಂದೆನೋ ನಾನಾಲೀಲೆಯಿಂದಲಿಕಾಲಕಳೆದೆನೋ ||ಲೋಲಲೋಚನ ಎನ್ನ ಮೊರೆಯ ಕೇಳುತ ಬೇಗಜಾಲವ ಮಾಡದೆ ಪಾಲಿಸೈ ನರಹರಿ 2ಮುದುಕನಾಗಿ ಚಿಂತೆಪಡುವೆನೋ ನಾಕದಡು ದುಃಖವ ಪಡಲಾರೆನೋ ||ಸದರವಲ್ಲವು ಶ್ರೀಪುರಂದರವಿಠಲಮುದದಿಂದ ರಕ್ಷಿಸೊ ಖಗರಾಜಗಮನ 3
--------------
ಪುರಂದರದಾಸರು