ಒಟ್ಟು 13 ಕಡೆಗಳಲ್ಲಿ , 3 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾರೆ ತಿಳಿದು ನೋಡು ಮನರಾಯಾ | ನಿನ್ನ ಕಣ್ಣದೆರೆದು ಸ್ವ ಹಿತದ ಉಪಾಯಾ ಪ ನಾನಾ ಜನ್ಮದಲ್ಲಿ ಬಂದು ಧರೆಯಲ್ಲಿ ಸುಖ | ವೇನು ಪಡೆದಿ ಹರಿಯ ಸ್ಮರಣೆ ಮರೆದಿಲ್ಲಿ 1 ಶರಗೊಡ್ಡಿ ಬೇಡಿಕೊಂಬೆ ನಾನೀಗಾ | ಸ್ಥಿರವಾದರಿಲ್ಲ ದೂರ ಶಿವಯೋಗಾ 2 ಇಂದು ನಾಳೆವೆನ್ನಬೇಡಿ ನಿಶ್ಚಯಾ ನಿನಗ | ಮುಂದ ಮತ್ತ ದೊರೆಯದಿದ ನರದೇಹಾ 3 ತಂದೆ ಮಹಿಪತಿಸ್ವಾಮಿ ದಯದಿಂದ | ನಂದವ ಪಡೆದು ಗೆಲಿಯೋ ಭವದಿಂದಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನಾರೆ ನೆರೆ ತಿಳಿ ನಿಜ ಹಿತವನು ಪ ಇನ್ನಾರೆ ನೆರೆ ತಿಳಿ ನಿಜ ಹಿತವನು | ನಿನ್ನೊಳು ನೀನು ಮರಳು ಮನವೇ | ತನ್ನ ಹಿತವ ತಾ ನರಿಯದೆ ಮರೆದು | ದಣ್ಣನೆ ದಣಿವುದು ಸುಖದನುವೇ 1 ಸಂತರಿಗೆರಗಿ ಶರಣವ ಮಾಡಿ | ಸದ್ಭೋಧ ಕೇಳಲು ಬೇಸರಿಕೆ | ಪಂಥದಿ ಲೆತ್ತ ಪಗಡಿ ಜೂಜೂ ಮಂಡಿಸಿ | ಎಂದಿಗೆ ದಣಿಯೇ ನೀ ವಂದಿನಕೆ 2 ಒಂದರೆ ಘಳಿಗೆಯ ಹರಿಕಥೆ ಮಾಡುವ | ಸ್ಥಳದಲಿ ಕೂಡಲು ತೂಕಡಿಕೆ | ಛಂದದಿ ಹಾಸ್ಯ ಕುವಿದ್ಯಗಳಾಟವ | ನೋಡುದರಲಿ ಮಹಾ ಎಚ್ಚರಿಕೆ 3 ಪಥ | ಅನುಸರಣಿಯೊಳಗೆ ನಿರ್ಭಯವು | ಧನ ಧರ್ಮದಂಧರ ಮನಸವ ಹಿಡಿಯಲು | ಕಾಶಿನ ಆಶೆಗೆ ಬೆಜ್ಜರವು 4 ತೃಷೆಯದ ಕಾಲಕೆ ಬಾವಿ ತೋಡುವೆನೆಂಬಾ | ವನ ಪರಿಯಲಿ ಮತಿವಿಡಿಯದಿರು | ವಸುಧಿಲಿ ಮಹಿಪತಿ ನಂದನ ಪ್ರಭುವಿನ | ಶರಣ ಹುಗಲು ದಿನ ಗಳೆಯದಿರು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಹೇಳಲಿ ನಿನಗ ಮನವೇ ನಾ ಇನ್ನೇನು ಹೇಳಲಿ ನಿನಗೆ ಶ್ರೀನಾಥನಂಘ್ರಿಯ ನೀನೋಲೈಸದಿಹುದೇನೋ ಪ ಮನುಷ್ಯದೇಹ ಧರಿಸಿ ಸದ್ಗತಿಯ | ಜ್ಞಾನದಾರಿ ತ್ಯಜಿಸಿ ನೀ ಭಕುತಿ ಸುಖ | ಖೂನವಿಲ್ಲದೆ ಚರಿಸಿ | ಏನೂ ಇಲ್ಲದೆ ವಿದ್ಯಾ ಮಾಟಕ ಭ್ರಮಿಸಿಹುದೇನಾ 1 ವಿಷಯ ಸುಖ ಹರಿದು ಸಂಸಾರದಿ | ನಿಶಿದಿನದಲಿ ಸವೆದು ತಾಪತ್ರಯ | ಘಸಣಿಯೊಳಗ ಕುದಿದು | ಪಶುವಿನ ಪರಿಯಲಿ ಯಚ್ಚರ ಮರೆದಿಹುದೇನಾ 2 ಇನ್ನಾರೆ ಹಿತವರಿಯೋ ಸದ್ಗುರುವಿನ | ಮನ್ನಿಸಿ ಗತಿ ಪಡಿಯೋ ಹರಿಯ ನಾಮವಾ | ಚನ್ನಾಗಿ ನಂಬಿ ನಡಿಯೋ | ಸನ್ನುತ ಮಹಿಪತಿ ಬೋಧಾಮೃತ ಸವಿಯದೇನಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೋ ಮನವೇ ನೀಹೀಂಗಾದಿ ಧ್ರುವ ಏನೋ ಮನವೇ ನೀ ಹೀಂಗಾದಿ | ಸ್ವಾನಂದ ಸುಖ ತಿಳಿಯದೆ ಬಳದಿ | ಮಾನುಭವರ ವಿಡಿನಿಜ ಹಾದಿ | ಭವ ವ್ಯಾಧಿ 1 ಮಂದ ಮತಿತನ ಬಿಡು ಗುಣದಾ | ಹೊಂದೋ ಸದ್ಗುರುವಿನ ಪಾದಾ | ಛಂದದಿ ಪಡಿಯೋ ನಿಜ ಬೋಧಾ | ಸಂದೇಹ ಬಿಡಿಸೆಚ್ಚರಿಸುವದಾ2 ಹೊಗೆ ಅಗ್ನಿಯ ಮುಸುಕಿಹ ಪರಿಯಾ | ಮಾಯಾ | ಬಿಗಿದಾವರಿಸಿಹುದು ನೋಯಾ | ಬ್ಯಾಗನೆ ತಿಳಿ ಗೆಲುವ ಉಪಾಯಾ 3 ಮುಂದ ಹಾಕಿದ ಹೆಜ್ಜೆಯನು | ಹಿಂದಕ ತಿರುಗಿಸದಿರು ನೀನು | ನಿಂದಿಸಲೊಂದಿಸಲಾರೇನು | ಮುಂದಗಿಡದೆ ಬೆರಿ ವಸ್ತವನು 4 ನಿನ್ನ ಸುದ್ದಿಯು ತಾ ನಿನಗಿಲ್ಲಾ | ಇನ್ನಾರೆ ತಿಳಿತನು ಸ್ಥಿರವಲ್ಲಾ | ಮುನ್ನಿನ ಪರಿಕೆಡುವುದು ಸಲ್ಲಾ | ಮನ್ನಿಸು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಳಿಸಿದೆ ನಾಕಳತಿ ತಿಳಿಯದೆ ನಿನ್ನಳತಿ ಅಳೆದು ಹಾಕಿ ತೊಳಲಿ ಬಳಲಿದೆ ಚಿತ್ತ ಹೊಲತಿ 1 ಏಸು ಜನ್ಮ ತಾಳಿ ಹೆಸಲಿಲ್ಲ ಮೂಳಿ ಘಾಸಿಯಾದೆ ಸೋಶಿಲಿನ್ನು ಆಶಿಯಲಿ ಬಾಳಿ 2 ವಿಷಯದಾಶಿವಳಗ ವಶವನೀಗೊಂಡಲಗ ಪಶುವಿನಂತೆಗಳದಿ ಜನ್ಮವ್ಯಸನದಾಶಿ ಕೆಳಗೆ 3 ಏನ ನೀನಾದರ ಜ್ಞಾನಹೀನನಾದರೆ ಭಾನುಕೋಟಿ ತೇಜನ ನೀ ಶರಣು ಪುಗು ಇನ್ನಾರೆ 4 ಪಿಡಿದು ನಿಜಖೂನ ಪಡೆದುಕೋ ಸುಜ್ಞಾನ ಬಿಡದೆ ಸಹಲುತ್ಹಾನೆ ಮಹಿಪತಿಯ ಸ್ವಾಮಿ ಪೂರ್ಣ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಛೀ ಯಾತರ ಬುದ್ಧಿ | ಸೊಕ್ಕಿನ ಮಾತಿಲಿ ಬಲು ನÉೂಂದಿ ಪ ಗುರುಹಿರಯರ ಅನುಸರಿಸದೇ | ಹರಿಚರಣವ ಕೊಂಡಾಡದೇ | ಬರಡಾ ನಾಲಿಗೆ ಮಾಡಿದಿ ಬರಿದೇ 1 ವಳ್ಹವ ಹೊಲ್ಲವರಿಯದೇ | ಯಳ್ಳಿನಿತು ನೀ ವಿಚಾರಿಸದೇ | ನಿಲ್ಲದೇ ಮಾಡುವಿ ಬಗಳುವದೇ 2 ಕೆಂಡವ ಕಂಡು ನೆರೆ | ಮಂಡಿಯಾ ತುರಿಸುವರೆ | ತುಂಡತನ ಗುಣ ಬಿಡು ಇನ್ನಾರೆ 3 ಪೊಡವಿ ದೇವತೆಯ ಕೋಣಾ | ಯಡಬಲ ನೋಡದಿರಲೇನು | ಕಡೆಯಲಿ ಕೆಡುವರು ಒಂದಿನಾ 4 ಮಹಿಪತಿಸುತ ಪ್ರಭು ದಾಸರ ಕೈ | ಅಹುದೆನಿಸಿಕೊಂಬುದೆ ಸ್ವರ್ಗಯ್ಯ | ವಿಹಿತಲ್ಲೆಂಬುದೇ ನರ್ಕದಾಶ್ರಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನಗೇನಾಯಚ್ಚರಿಲ್ಲೋ|ಕೇಳಾತ್ಮಾ| ಪಾದ ಭಕುತಿಯ ತೊರೆದಿಪ ನಾನಾ ಯೋನಿಯಲಿ ತೊಳಲಿ | ಭವದು:ಖ | ಕಾನನದಲಿ ಬಳಲಿ | ಮಾನವ ಜನುಮ ಬಂದು ಹರಿ ಹರಿ1 ವಿಷಯ ಸುಖವ ಬೆರೆದು | ಬೇಕಾದ | ಸ್ವಸುಖವನೆಗಳದು | ಅಶನ ವ್ಯಸನದಲಿ ಪಶುವಿನ ಪರಿಯಲಿ | ನಿಶಿದಿನವನುಗಳೆದೇ ಹರಿ ಹರಿ2 ಸಾಧು ಸಂಗಕತ್ಯಗಳೀ | ಕುಜನರಾ | ಹಾದಿಯಿಂದಲಿ ಮರಳೀ | ಸಾದರ ವಿವೇಕ ದೀಪ ಮನೆಯೊಳಿಟ್ಟು | ಸಾಧಿಸೋ ನಿಜ ಘನವಾ ಹರಿ ಹರಿ3 ಅರಗಳಿಗೆಯ ನೋಡಲು ಶ್ರೀಹರಿ | ಸ್ಮರಿಸದೆ ತಾ ನಿರಲು | ಕರೆದು ವಡಿಯ ನಿನ್ನ ತನು ಲೇಶವ ಕೇಳಲು | ತೆರಗಾಣಿ ನುಡಿಗಳಿಗೇ ಹರಿ ಹರಿ4 ಹಿಂದಾದ ಮತಿಗಳಿಯೋ ಇನ್ನಾರೆ | ಪಥ ವರಿಯೋ | ಭವ | ಬಂದಗೆಲಿದು ಸುಖಿಸೋ ಹರಿ ಹರಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನನೀ ತಿಳಿದು ನೋಡು | ಯನ್ನ ಮನವೇ ಪ ನಿನ್ನ ನೀ ತಿಳಿದು ನೋಡು | ಎನ್ನ ಹಿತವು ದಾವುದೆಂದು | ಮುನ್ನಿನವ ಗುಣ ಜರಿದು | ಇನ್ನಾರೆ ನೀ ಮನವೇ 1 ಒಳ್ಳೆವರಾ ಕಂಡು ಬಾಗಿ | ಬಡಿವಾರ ನೀಗಿ | ಸೊಲ್ಲವ ನಾಲಿಸು ಅವರಾ | ನಿಲ್ಲದೇ ನೀ ಮನವೇ 2 ತಂದೆ ಮಹಿಪತಿ ದಯಾ | ದಿಂದ ಪಡೆಯೋ ವಿಜಯಾ | ಮಂದ ನಾಗದಿರು ಬಂದಾ | ಛಂದ ವಿಂದು ಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದ ಕೂಡು | ಸಾಯಾಸಗಳನೇ ಬಿಡು ಪ ಪಾದ ಕೂಡು ಸಾಯಾಸಗಳನೇ ಬಿಡು | ಸಾಧಿಸುವದು ನೋಡು ಸದ್ಗತಿಯ ಸುಖಾಡು 1 ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು | ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2 ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ | ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3 ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು | ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4 ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ | ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಶ್ರೀ ಗುರುರಾಯಾ | ಸಲಹು ಬುಧ ಜನಪ್ರೀಯಾ | ಸಲಹೆನ್ನ ಪರಮ ಗೇಹ್ಯಾ ಪ ಚಿಕ್ಕವನು ನಾ ಮೊದಲು | ಸೊಕ್ಕಿ ಭವಸುಳಿಯೊಳಗೆ | ಸಿಕ್ಕಿ ಬಹು ನೊಂದೆನೆಂದು | ಹೊಕ್ಕೆ ಮೊರೆ ನಿನ್ನ ಹಿಂದಿಕ್ಕಿಕೋ ದಯದಿಂದ | ಮಕ್ಕಳಂದದಲಿ ಚೆನ್ನಾಗೆನ್ನಾ 1 ಪಿಂತಿನಾ ಭವಣೆಗಳು | ಎಂತಾದರಾಗಲೀ | ಶಾಂತ ಮೂರುತಿಯೇ ಎನ್ನಾ | ಅಂತರಂಗದಲಿನ್ನು ನಿಂತು ನಿನ್ನಯ ರೂಪ | ಸಂತತವಾಗಿ ದೋರೋ ಬೀರೋ 2 ಅನ್ಯಪಥಕೆಳಿಸಿದಾ ಘನ್ನ ತಪ್ಪವ ಕ್ಷಮಿಸಿ | ನಿನ್ನ ಪದಯುಗಳ ದೋರಿ | ಸನ್ನುತವೆ ಮಹಿಪತಿ ಚಿನ್ನ ಕೃಷ್ಣನ ಸ್ವಾಮಿ | ಇನ್ನಾರೆ ದಯಮಾಡೋ ನೋಡೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಗತಿಯೊ ಮುಂದೆನಗೆ ಗೋವಿಂದಶ್ರೀನಿವಾಸ ರಕ್ಷಿಸದಿರೆ ದಯದಿಂದ ಪ.ನಿಶಿದಿನ ಹಸಿವುತೃಷೆಸುಡುವ ಕುಮರಿಯುಮಸಿವರ್ಣ ಮಾಡಿ ಕೇರಿಡಿವ ಮೂರುರಿಯು 1ನಾಚಿಕಿಲ್ಲದ ವಿಷಯಾಸೆಯಸಹ್ಯನೀಚ ದುರುಕ್ತಿಯಸ್ತ್ತ್ರದ ಘನಗಾಯ 2ಮಾಯದ ಕಡಲೊಳು ಕಟ್ಟಿಹ ಕೊರಳುಆಯಾಸ ಬಡುತ ಬಡುತ ಬಿದ್ದಿತುರುಳು 3ಎಳ್ಳನಿತು ಜ್ಞಾನ ಅಹಂಕಾರ ಬಹಳಘಲ್ಲನೆ ತಗಲುವ ಜ್ಞಾನದಶೂಲ4ಮರಹುಮದಗಳೆಂಬ ಮುಸುಕಿದ ಮೆಳೆಯುಪರದಾರ ಪರನಿಂದೆಯಗ್ನಿಯ ಮಳೆಯು 5ಬೇಡಿದ ಬಯಕೆ ಸಾಧ್ಯಾಗದ ನೋವುಮೂಢತನದಿ ದಿನ ನೂಕುವ ಸಾವು 6ಇನ್ನಾರೆ ಸಜ್ಜನ ಸಂಗಕೌಷಧಮುನ್ನ ಕೊಡಿಸೊ ಪ್ರಸನ್ವೆಂಕಟ ಮುಕುಂದ 7
--------------
ಪ್ರಸನ್ನವೆಂಕಟದಾಸರು
ನೀನೆ ಗತಿಯೆಂದು ನಂಬಿದೆ ಕಾಯಯ್ಯ ಶ್ರೀನಿವಾಸ ಎನ್ನಹೀನಗುಣಗಳೆಣಿಸಲಿ ಬ್ಯಾಡ ದಯಮಾಡೊ ಶ್ರೀನಿವಾಸ 1ನಾನಾ ದುಷ್ಕøತಫಲವ ಉಂಡೆ ಇನ್ನಾರೆ ಶ್ರೀನಿವಾಸಎಂದೂ ದುರ್ವಿಷಯಕೆಮನ ಎರಗದಂತೆ ಮಾಡೊ ಶ್ರೀನಿವಾಸ 2ಸತ್ಕಥಾ ಶ್ರವಣ ಭಾಗ್ಯವ ಕೊಡುಅನುದಿನಶ್ರೀನಿವಾಸ ಎನ್ನಹೃತ್ಕಮಲದಿ ವ್ಯಕ್ತನಾಗಯ್ಯ ಶ್ರೀನಿವಾಸ 3ಪುತ್ರಕಳತ್ರಮಿತ್ರರು ನಿನ್ನ ದಾಸರೊ ಶ್ರೀನಿವಾಸ ತ್ವದ್ಭøತ್ಯಭೃತ್ಯರ ಪರಿಚಾರಕ ನಾನು ಶ್ರೀನಿವಾಸ 4ಅನಂತ ಜನ್ಮದ ಸತ್ಕರ್ಮ ನಿನಗೇವೆ ಶ್ರೀನಿವಾಸನಿತ್ಯದೀನೋದ್ಧಾರÀ ಪ್ರಸನ್ನವೆಂಕಟ ಮುಕುಂದ ಶ್ರೀನಿವಾಸ 5
--------------
ಪ್ರಸನ್ನವೆಂಕಟದಾಸರು