ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯ ನೆಚ್ಚಿ ಮಾಯಾ- ಡಂಬರಕೊಳಗಾಗಿ------ದುರ್ಜನರು ಪ ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳ ಇಂಬಿನಲ್ಲಿ ಹುಟ್ಟಿ ವ್ಯಥೆಯ ಬಿಟ್ಟು ಸಂಭ್ರಮದಿ ಸುಖದು:ಖ ಸಂಸಾರದೊಳು ಬಿದ್ದು ಕುಂಭಿಣೀ ದೇಹಮರೆತು ಕಡೆಗೆ ಹೋಗ್ವದು ತಿಳಿದು 1 ಈ ಶರೀರದ ಭೋಗ ಎನಗೆ ಶಾಶ್ವತವೆಂದು ಏಸೊ ಪರಿಯಿಂದ ಹಾರೈಸಿ ಇನ್ನೂ ಆಸೆಯಿಂದ ನೀ ಬಹಳ ಕಾಲ ಮೃತರಾಗುವದು ತಿಳಿದು 2 ನಿಶ್ಚಯವಿಲ್ಲದ ದೇಹಗಳು ನಿಜವೆಂದು ಮಂದನಾಗಿ ಅಚ್ಯುತ 'ಹೆನ್ನೆವಿಠ್ಠಲ’ನ ಅರಿಯದಿನ್ನು ಎಚ್ಚರಿಕೆಯನು ತಪ್ಪಿ ಇಹಲೋಕವನು ತ್ಯಜಿಸಿ
--------------
ಹೆನ್ನೆರಂಗದಾಸರು
ನಂಬಿದೆ ನಿನ್ನ ನೀರಜಪಾದ | ಇಂಬಿನಲ್ಲಿಟ್ಟು ಸಲಹೊ ಪ್ರಸಾದ ಪ ಅಂಬರೀಷನ ಶಾಪ ಹಿಂಗಿಸಿ ಕಳೆದ ದ- | ಯಾಂಬುಧಿ ನೀನೆಂದು ಹಂಬಲಿಸಿದೆ ಹರಿಯೆ ಅ.ಪ ಉಗ್ರನ್ನ ಖಳವಂಚಿಸಿ ತನ್ನ ಕ- | ರಾಗ್ರವಾ ಶಿರದಲ್ಲಿ ಇಡಬರಲು || ಅಗ್ರೇಶ ಕಾಯೆಂದು ಅವನೀಗ ಮೊರೆಯಿಡೆ | ಶೀಘ್ರದಿಂದಲಿ ಬಂದು ಕಾಯ್ದು ಕರುಣಿಯೆಂದು1 ಕಾಲದೂತರು ಅಜಾಮಿಳನೆಳೆಯಲು | ನಾಲಿಗೆಯಿಂದ ನಾರಗÀನೆನ್ನಲು || ಆಲಸ್ಯ ಮಾಡದೆ ನಿನ್ನ ದೂತರನಟ್ಟಿ | ಓಲಗ ವೈಕುಂಠವಿತ್ತ ಭಾಂದವನೆಂದು 2 ಭೂತಳದೊಳು ನಿನ್ನನು ಪೋಲುವ | ದಾತರ ನಾನೆಲ್ಲಿ ಕಾಣೆ ಶ್ವೇತವಾಹನ || ದಾತ | ವಿಜಯವಿಠ್ಠಲನಹುದೆಂದು ದೃಢವಾಗಿ 3
--------------
ವಿಜಯದಾಸ