ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಕುಲವಾದರೇನು ಶ್ರೀ ವಾಸು-ದೇವನೆಂದವನೆ ಧನ್ಯಾ ಪ ವಿಪ್ರ ಮಾ-ದಿಗಗಿಂತ ನಿಕೃಷ್ಟನೋ 1 ಊಧ್ರ್ವ ಪುಂಡ್ರಗಳ ಧರಿಸೀ ಶಿರದಲ್ಲಿಪದ್ಮಾಕ್ಷಿ ತುಲಸಿ ಮಾಲೆ ಹಾಕಿಮಧ್ವ ವಲ್ಲಭನೆನ್ನದಾ ಆ ವಿಪ್ರಶುದ್ಧ ಚಾಂಡಾಲನೆನ್ನೋ 2 ಪಂಚ ಮುದ್ರೆಗಳ ಧರಿಸೀ ಲೋಕ ಪ್ರ-ಪಂಚಕ್ಕೆ ದಾಸನೆನಿಸೀಪಂಚ ಭೇದವು ತಿಳಿಯದಾ ಆ ವಿಪ್ರಪಂಚ ಮಹಾ ಪಾತಕಿಯೋ3 ನಾರದಾನೆಂಬವನನೂ ಕುಲದಲ್ಲಿಆರೆಂದು ತಿಳಿಯೊ ನೀನು ನಮ್ಮನಾರಾಯಣನ ಸ್ಮರಿಸಲು ನೀಚ್ಯೋನಿಮೀರಿ ಸುರಮುನಿಯಾದನೋ 4 ವಿದುರ ವಾಲ್ಮೀಕರ ನೋಡು ಅವರ ತುದಿಮೊದಲು ನೀ ತಿಳಿದು ನೋಡು ನಮ್ಮಮದನನಯ್ಯನ ಭಜಿಸಲು ಅವರೆಲ್ಲಸದಮಲಾರಾದುದರಿಯಾ 5 ಜಾತಿ ಕಾರಣವಲ್ಲವೋ ಶ್ರೀ ಹರಿಗೆಭೂತಿ ಕಾರಣವಲ್ಲವೋ ||ಸ್ವಾತಂತ್ರ್ಯವನ್ನು ಮರೆದು ಶ್ರೀ ಹರಿಯಪ್ರೀತ್ಯಾಗಲೆನ್ನಬೇಕೋ 6 ಅನ್ಯ ಕರ್ತೃತ್ವ ಮರೆದು ಶ್ರೀ ಹರಿಗೆನಿನ್ನ ನಿನ್ನವನೆಂದಡೇತನ್ನ ದಾಸ್ಯವನೆ ಇತ್ತು ನಮ್ಮ ಮೋ-ಹನ್ನ ವಿಠ್ಠಲ ಸಲಹುವಾ 7
--------------
ಮೋಹನದಾಸರು
ಗುರು ಸದ್ಗುರು ಆರೆಂದು ನೋಡೊ ಗುರುತಿಟ್ಟು ಮನವೆ ಸೇವೆ ಮಾಡೊ ಧ್ರುವ ಗುರುಗಳುಂಟು ಮನೆಮನೆ ಬಹಳ ಬ್ಯಾರೆ ಬ್ಯಾರೆ ಮಾಡುತ ತಮ್ಮ ಮ್ಯಾಳ ದೋರುತಿಹರು ಮೋಹಿಸುವ ವಾಗ್ಜಾಲ ಸರಿ ತಮಗಾರಿಲ್ಲೆಂದೆನ್ನು ತಲಾ ತೋಳ 1 ಎಲ್ಲ ಬಲ್ಲತನದಭಿಮಾನ ಅಲ್ಲೆ ಕೊಂಬುದೇನುಪದೇಶ ಜ್ಞಾನ ಸೊಲ್ಲಿಲ್ಹೇಳಿ ಕೇಳಿದರಾಹುದೇನ ಸಲ್ಲದರಲಿಹುದೆನೊಡೆತನ 2 ಸರ್ವಸಮ್ಮ ತಾಗುವ ಸುಜ್ಞಾನ ಗರ್ವಾಭಿಮಾನಗೆಲ್ಲಿಹುದು ಖೂನ ಪೂರ್ವಾಪರ ಸದ್ಗುರು ನಿಜಧ್ಯಾನ ದೋರ್ವದು ತಾಂ ಪಡೆದವಗ ಪೂರ್ಣ3 ವಿರಳಾಗತ ಎಲ್ಲಿಗೊಬ್ಬ ಮಹಿಮ ಶರಣ ಹೊಕ್ಕವಗೆ ಪೂಜ್ಯಪರಮ ಕರತಳಾಮಲಕವಾಗುವ ನಿಜವರ್ಮ ಗುರುಮಾರ್ಗದಾಗೆನಬೇಕು ನೇಮ 4 ಗುರುವರ ಶಿರೋಮಣಿ ಭಾನುಕೋಟಿ ಗುರುತಾದ್ಯೆನ್ನ ಮನದೊಳು ನಾಟಿ ಪರಬ್ರಹ್ಮನಹುದೊ ಜಗಜೇಟಿ ತರಳ ಮಹಿಪತಿ ಮನವಸೋಘಟಿ(?) 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾಚಿಸಿದೆಯ ದೇವಯನ್ನ ಎಲ್ಲಈ ಚರಾಚರ ತುಂಬಿಹ ವ್ಯುತ್ಪನ್ನ ಪ ಶ್ರೀಗಿರಿ ನೋಡುವೆನೆಂದು ನಾಸಾಗಿ ಪಯಣಗೊಂಡು ಬಂದುರಾಗವುದಿಸಿ ಮನಕಿಂದು ಮುಂದೆಭೋಗ ತರದ ಮನ ತೂರಿತು ನಿಂದು 1 ಮಧ್ಯಾಹ್ನ ಬಿಸಿಲೊಳು ನಡೆಯೆ ನಾನುಅದ್ವಯವಿಲ್ಲದೆ ಹಾದಿ ನೀರ್ಗುಡಿಯೆಇದ್ದ ಚೈತನ್ಯ ತಾ ನುಡಿಯೆ ಇಂತುಹೊದ್ದ ಶರೀರ ಬಳಲಿ ನೆಲಕೆಡೆಯೆ 2 ಧರಣಿಯ ಸುರರೂಪ ತಾಳಿ ನೋಡೆವರಣ ವರಣ ರುದ್ರಾಕ್ಷಿ ಚಾಳಿಚರಣ ಕಿರಣದಲ್ಲಿ ಹೂಳಿ ನಾನುಗುರುವೆ ಎಂದು ನುಡಿವುದ ಕೇಳಿ 3 ಎಲ್ಲಿ ಪೋಗುವೆ ಎಂದು ಕೇಳೆಮಲ್ಲಿಕಾರ್ಜುನನ ನೋಡಿಯೇ ಬಹೆನೆಂದುಸೊಲ್ಲುಡುಗಲು ನಾನಿತ್ತೆಂದು ಗುರುಸುಳ್ಳು ಆದನೆ ಸರ್ವ ಪೂರಿತನಿಂದು 4 ಸರ್ವರೂಪದು ಮೃಷೆಯಾಯ್ತು ಎಲ್ಲಸರ್ವಜನರಿಗೆ ಬೋಧಿಸುವಡೇನಾಯ್ತುಸರ್ವತಾನೆನಿಪುದೇನಾಯ್ತು ಎಲ್ಲಸರ್ವರನುಳಿದು ಬಂದಿಹುದೊಳಿತಾಯ್ತು 5 ಇಂತು ಬುದ್ಧಿಗಳಿಂದ ಝಡಿಯೆ ಎಲ್ಲಅಂತು ಕೇಳುತ ನೀವು ಆರೆಂದು ನುಡಿಯೆನಿಂತಲ್ಲಿ ದೃಶ್ಯವ ಪಡೆಯೆ ಕಂಡುಸಂತೋಷದಿಂ ನಾ ಸಾಷ್ಟಾಂಗವೆರಗೆ 6 ಆನಂದ ತೊರೆಯೊಳು ಮುಳುಗಿ ಚಿ-ದಾನಂದ ಗುರುವ ಕಾಣದೆ ಮನಮರುಗಿಧ್ಯಾನದಿ ಕಂಗಳು ತಿರುಗಿ ನೋಡಿತಾನೇ ತಾನಾದ ಘನದಿ ಮನ ಕರಗಿ7
--------------
ಚಿದಾನಂದ ಅವಧೂತರು
ಮಾತು ಸುಳ್ಳಾಗೊದೆ ದುರಿತಾರಿ | ಯನ್ನನಾಥನಿಂದಿಗೆ ರಕ್ಷಿಸೇ ಗೌರಿ ಪಮಾತೆ ನಿನ್ನಯಪಾದಪ್ರೀತಿಂದ ಭಜಿಸಿದ್ದ |ಕ್ಕೀತ ಸಿಕ್ಕಿದ್ದನು ಚಾತುರ್ಯ ಪುರುಷ 1ಧಾತಾಜನಾಡೀದ ಮಾತೀಗೆ ಕೋಪಾದಿ |ಈ ತೆರ ಮಾಡಿದ ತಾತನು ನೊಂದೂ 3ಪೋರಾನಲ್ಲಮ್ಮಿವಾ ಆರೆಂದು ಹೇಳಾಲಿ |ಶೌರಿಯ ಮೊಮ್ಮಗನೀರಜನೇತ್ರೆ 3ಭೃತ್ಯಾರ ಅಭಿಮಾನ ಮತ್ರ್ಯಾಪಗುಂಟಲ್ಲೆ |ಅತ್ತತ್ತವಾದೀನೆ ಹೆತ್ತವ್ವ ನಿನಗೇ 4ಪ್ರಾಣೇಶ ವಿಠಲನು ಬಾಣನ ಶಿಕ್ಷಿಸಿ |ತಾನೆ ಯೀವಂದಾಗಿ ನೀನೊಲಿಯವ್ವಾ 5
--------------
ಪ್ರಾಣೇಶದಾಸರು