ಮಾರುತಿ ನಿನ್ನಾ ನಿರುತದಿ ಭಜಿಪೆ
ತ್ವರಿತದಿ ಹÀರಿ ಸರ್ವೋತ್ತಮನೆಂಬುವ
ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು
ಪರಿಪಾಲಿಸು ಎಂದು ಶಿರಸದಿ ನಮಿಪೆ
ಆರಿಸಿ ನೋಡಲು ಆರಾರು ಇಲ್ಲವೊ
ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ
ಹರಿ ತಾ ಕರುಣಿಪನೆಂದು
ಅರಿತು ನಿನ್ನಯ ದಿವ್ಯ
ಚರಣ ಸೇರಿದೆನಯ್ಯಾ
ಸರಿಬಂದದ್ದು ಮಾಡೋ
ಹರಿ ಕುಲಾವರಿಯಾನೆ
ಪರಿಪರಿ ಜನರನ್ನು ಪಾಲಿಸಿ ಎನ್ನನು
ದೂರದಿ ಇಟ್ಟರೆ ದೊರೆತನವೇನಯ್ಯಾ
ಸಾರುವೆ ಸಾರುವೆ ಸರಸಿಜನಾಭನ ಸುತನೆ
ಆರುಮೂರೆರಡೊಂದು ಸಾವಿರಾ
ಮೂರೆರಡು ಶತಶ್ವಾಸ ಜಪಗಳನು
ಮೂರುಜೀವರಲ್ಲಿ ನೀರಜಜಾಕಲ್ಪ
ಪರಿಯಂತರ ಮಾಡಿ ಅವರವರ ಗತಿಯಾ
ಮರಿಯದೆ ನೀಡುವಿ ಗಿರಿಶಾನುತಪಾದ
ಗುರುಜಗನ್ನಾಥ ವಿಠಲನ್ನ ಅರಿವಂತೆ
ಮಾಡೋ ಧೀರಾ ಕರುಣಿಯೇ