ಒಟ್ಟು 18 ಕಡೆಗಳಲ್ಲಿ , 10 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಪ್ರಮೇಯ ಪ್ರಕರಣ) ಸುವ್ವಿ ಸುವ್ವಿ ಉರಗಾದ್ರಿವಾಸ ಶ್ರೀ ವೆಂಕಟೇಶ ಸುವ್ವಿ ಶ್ರೀ ಸಚ್ಚಿದಾನಂದಾತ್ಮಕಾನೆ ಸುವ್ವಿ ಪ ಮೂಲನಾರಾಯಣ ಮೂಲಪ್ರಕೃತಿಯನ್ನು ಮೂರುಭಾಗಗೈಸಿ ಸೃಷ್ಟಿಮಾಡಿದನೆ ಸುವ್ವಿ ಸೃಷ್ಟಿಯೊಳು ಗುಣವ್ಯಷ್ಟಿಸಮಷ್ಟಿಯಿಂದ ಸೃಷ್ಟಿಸಿದ ಜಗಸಂಸೃಷ್ಟನೆನಿಸಿದಸುವ್ವಿ 1 ಸತ್ವರಜತಮ ಸಂಯುಕ್ತದಿಂದ ಕರ್ಮ ಮುಕ್ತಿ ಪರ್ಯಂತ ಜನ್ಮಕರ್ಮಂಗಳು ಸುವ್ವಿ ಕರ್ಮಂಗಳು ಸವೆದು ಉತ್ಕ್ರಾಂತ ಮಾರ್ಗ ಪಿಡಿದು ತಮ್ಮ ಸ್ವರೂಪ ಕರ್ಮನೆಸಗುವರೋ ಸುವ್ವಿ 2 ಮಹದಹಂಕಾರದಿಂದ ವೈಕಾರಿಕದಿಂದ ವ್ಯಸ್ತ- ರಾದರು ತತ್ವದೇವತೆಗಳು ಸುವ್ವಿ ದೇವತೆಗಳಾದರು ಮೇಲೆ ರಾಜಸಾಹಂಕಾರದಿಂದ ಇಂದ್ರಿಯಾದಿಗಳೆಲ್ಲ ಸೃಷ್ಟಿಯಾದವು ಸುವ್ವಿ 3 ಭೂತಪಂಚಕವು ತನ್ಮಾತ್ರಪಂಚಕಗಳು ತಾಮ- ಸಾಹಂಕಾರಗಳುದಿಸಿದವೆನ್ನು ಸುವ್ವಿ ಉದಿಸಿದಹಂಕಾರತ್ರಯದೊಳು ಬಂದು ಸರ್ವಸೃಷ್ಟಿ ಅದುಭುತವಾದುದು ಅನಿರುದ್ಧನಿಂದ ಸುವ್ವಿ 4 ಎಲ್ಲಜೀವರು ಮುನ್ನಾಸೃಷ್ಟಿಗೆ ಬಾರದಿರೆ ಇನ್ನು ಸುಪ್ತಾವಸ್ಥೆಯಲ್ಲಿ ಸುಮ್ಮನಿರ್ಪರೋ ಸುವ್ವಿ ಸೃಷ್ಟಿಗೆ ತಂದ ಗುಣವೈಷಮ್ಯದಿಂದಲೀ ಸುವ್ವಿ 5 ಭೇದಪಂಚಕವು ನಿತ್ಯತಾರತÀಮ್ಯ ಸತ್ಯ ವಿಧಿ ಮೊದಲು ತೃಣಾಂತ ಜೀವರು ತ್ರಿವಿಧವು ಸುವ್ವಿ ನಿತ್ಯ ತ್ರಿವಿಧಕಾರ್ಯ ಅರಿತು ತ್ರಿವಿಧಸಾಧನದಂತೆ ತ್ರಿವಿಧಗತಿಯು ಸುವ್ವಿ 6 ಜೀವರು ಅನಾದಿಯು ಸಾವು ನೋವುಗಳಿಲ್ಲ ಆ- ವಾವಸ್ಥೆಗಳೆಲ್ಲ ಸ್ಥೂಲ ದೇಹಕೆ ಸುವ್ವಿ ಸ್ಥೂಲದೇಹವ ಧರಿಸಿ ಪೂರ್ವಕರ್ಮದಂತೆ ಸಾಧನದಿಂ- ದಲೆ ಕರ್ಮಕ್ಷಯವಹುದು ಸುವ್ವಿ 7 ವೃದ್ದಿಹ್ರಾಸಗಳಿಲ್ಲ ಶುದ್ದ ಜೀವಸ್ವರೂಪ ವಿಧಿಮೊದಲು ತೃಣಾಂತ ಪರಿಮಿತಿ ಒಂದೆ ಸುವ್ವಿ ಪರಿಮಿತಿ ಒಂದೇ ರೀತಿ ಗುಣಕ್ರಿಯ ವಿವಿಧರೀತಿ ಅ- ದರಂತೆ ಜಡ ಪ್ರಕೃತಿ ಕಾರ್ಯವು ಪರಿಪರಿ ಇಹುದು ಸುವ್ವಿ 8 ಸರ್ವತ್ರ ಹರಿವ್ಯಾಪ್ತನಿರ್ಲಿಪ್ತನು ಸುವ್ವಿ ನಿರ್ಲಿಪ್ತನು ಅನಂತಾನಂತಗುಣಗಣಪೂರ್ಣ ಅವ್ಯಯ ಅಪ್ರಮೇಯ ಅಚ್ಯುತಾನಂತ ಸುವ್ವಿ9 ಅನಂತಾನಂತರೂಪಾನಂತ ಚೇತನ ಜಡದಿ ಅಂತರಾತ್ಮ ತಾ ನಿರಂತರ ನಿಂತಿಹ ಸುವ್ವಿ ನಿಂತು ತದಾಕಾರದಿ ತದ್ಭಿನ್ನ ತನ್ನಾಮದಲಿ ಕಂತುಪಿತನು ತಾ ನಿಂತಿಹನೆನ್ನು ಸುವ್ವಿ 10 ಇಂಥಾಜೀವರಿಗೆ ಲಿಂಗದೇಹ ಅನಾದಿಯಲ್ಲಿದ್ದು ಜ್ಯೋತಿರ್ಮಯವಾಗಿ ಪ್ರಕಾಶಿಸುವುದು ಸುವ್ವಿ ಪ್ರಕಾಶದ ಜೀವಕ್ಕೆ ಗಜ್ಜಗಬೀಜದಂತೆ ತ್ರಿಗುಣಾ ವರ್ಕವು ಲಿಂಗಕ್ಕಾವರ್ಕವು ಸುವ್ವಿ 11 ಗುಣಬದ್ಧನಾದುದರಿಂದ ಗುಣಕಾರ್ಯ ಫಲಗಳಿಂದೆ ಶೀ ತೋಷ್ಣಸುಖದುಃಖಾನುಭವವಾಗುವುದೆನ್ನು ಸುವ್ವಿ ಅನುಭವದಭಿಮಾನ ಸಾಧನದಂತೆ ಜೀವಾ ಜೀವ ಜನುಮಜನುಮಾಂತರದ ವಾಸನವಿಹುದು ಸುವ್ವಿ 12 ಸತ್ವಜೀವರ ಲಿಂಗಕ್ಕೆ ಸತ್ವಾವರಣವೇ ಪ್ರಥಮ ದ್ವಿತೀಯಾವರಣವೆ ರಜ ತೃತೀಯ ತಮವೆನ್ನು ಸುವ್ವಿ ತಮೋ ಆವರಣವೆ ಪ್ರಥಮ ರಜ ಸತ್ವವು ತದುಪರಿ ತ್ರಿವಿಧಾವರ್ಕವು ತಮೋಜೀವರಿಗಿಹುದು ಸುವ್ವಿ 13 ರಜೋ ಜೀವರಿಗೆ ರಜವು ಪ್ರಥಮಾವರಣದಿ ಇಹುದು ತಮಸತ್ವಾವರಣಾನಂತರವಿಹುದು ಸುವ್ವಿ ತಮರಜಸತ್ವಾವರಣತ್ರಯಗಳು ಲಿಂಗಕ್ಕೆ ನಿತ್ಯ ಇರಲು ತ್ರಿವಿಧಬದ್ದರಾಗಿ ಸುತ್ತುತಿಪ್ಪರು ಸುವ್ವಿ 14 ಸತ್ವಾವರ್ಕದಿ ವಿಶ್ವರಜತಮ ತ್ವೆಜಸ ಪ್ರಾಜ್ಞ ನಿತ್ಯದಿ ಜೀವನವಸ್ಥಾ ತೋರಿಸುವರು ಸುವ್ವಿ ತೋರಿಸುವರು ಜೀವರ ಜಾಗ್ರಸ್ವಪ್ನಾ ವಸ್ಥೆಯೊಳು ಶ್ರೀಭೂದುರ್ಗಾ ಲಿಂಗಕಭಿಮಾನಿಗಳುಸುವ್ವಿ 15 ಸತಿಸಹಿತರಾಗಿ ಬ್ರಹ್ಮವಾಯು ಬಿಡದೆ ನಿತ್ಯ ಭಕ್ತಿಯಿಂದ ಹರಿಯಾರಾಧಿಸುವರೋ ಸುವ್ವಿ ನಿತ್ಯಭಕ್ತಿಯಿಂದ ಸ್ತುತಿಯ ಮಾಡಿ ಜಗ- ಕತೃವಿನಾಜ್ಞೆಯಿಂ ತೃಪ್ತರಾಗೋರೋ ಸುವ್ವಿ 16 ಜ್ಞಾನ ಕರ್ಮೇಂದ್ರಿಯ ಭೂತಪಂಚಕಗಳು ಮನಸು ಎಂದು ಇನಿತು ಕೂಡಿ ಷೋಡಶಕಳೆಗಳು ಲಿಂಗಕ್ಕೆ ಸುವ್ವಿ ಷೋಡಶಕಳೆಗಳಿಂದ ಕೂಡಿ ಲಿಂಗವು ಇಹದು ಕಳೆಗಳಲ್ಲಿನ ಭಗವದ್ರೂಪವ ತಿಳಿಯೋ ಸುವ್ವಿ 17 ಮನಸಿಗೆ ಶ್ರವಣಕೆ ಶ್ರೀ ಕೇಶವನಾರಾಯಣ ತ್ವ- ಮಾಧವ ಗೋವಿಂದನೆ ಸುವ್ವಿ ಜಿಹ್ವೆ ಘ್ರಾಣದಿ ವಿಷ್ಣುಮಧುಸೂದನ ತ್ರಿವಿಕ್ರಮನೆನ್ನು ಸುವ್ವಿ 18 ಹಸ್ತ ಪಾದಕ್ಕೆಲ್ಲ ವಾಮನ ಶ್ರೀಧರ ಗುಹ್ಯಕ್ಕೆ ಹೃಷೀಕೇಶ ಮೂರುತಿ ಇಹರೋ ಸುವ್ವಿ ಮೂರುತಿ ಇಹರೋ ಮತ್ತೆ ಗುದದೊಳು ಪದ್ಮನಾಭ ಮುದದಿಂದ ಜ್ಞಾನ ಕರ್ಮೇಂದ್ರಿಯದಲ್ಲಿ ಸುವ್ವಿ 19 ಶಬ್ದದೊಳು ದಾಮೋದರ ಸ್ಪರ್ಶದಿ ಸಂಕರ್ಷಣನು ವಾಸುದೇವ ಮೂರುತಿ ಇಹರೋ ಸುವ್ವಿ ರೂಪಸುಗಂಧಗಳಲಿ ಈರೂಪಗಳಹವೋ ಸುವ್ವಿ 20 ಷೋಡಶ ಕಳೆಗಳಲ್ಲಿ ಅಭಿಮಾನಿಗಳಂತರದಲ್ಲಿ ನೀ ಬಿಡದೆ ನೆನೆಸು ಈ ಭಗವದ್ರೂಪಗಳಲ್ಲಿ ಸುವ್ವಿ ಭಗವದ್ರೂಪಗಳಲಿ ಧೃಡಭಕುತಿಯಿಂದಲಿ ಎಡೆಬಿಡದೆ ನಡೆನುಡಿಗಳಲ್ಲಿ ಸುವ್ವಿ 21 ಆಚ್ಛಾದಿಕವು ಜೀವರಿಗೆ ಎರಡುಂಟು ನಿತ್ಯದಲ್ಲಿ ಜೀವನ ಮರೆಯಮಾಡಿದ ಜೀವಾಚ್ಛಾದಿಕ ಸುವ್ವಿ ಜೀವಾಚ್ಛಾದಿಕ ಇದೆ ಹರಿಚ್ಛಾಬಂದಕಾಲದಿ ಬಿಚ್ಚಿ ಹೋಗುವುದು ನಿಶ್ಚಯ ಕೇಳೋ ಸುವ್ವಿ 22 ಪರಮಾಚ್ಛಾದಿಕವೆಂಬುದು ನಿರುತವು ತಪ್ಪಿದ್ದಲ್ಲ ಹರಿಇಚ್ಛಾ ಇಂಥಾದ್ದೆ ಇಂಥಾದ್ದೆನ್ನು ಸುವ್ವಿ ಇಂತಿದ್ದರು ಹರಿಯು ಒಮ್ಮೆ ಇಚ್ಛೆಮಾಡಿದರೆ ಒಮ್ಮೆ ಒಮ್ಮೆ ತೋರಿದರೆ ಒಮ್ಮೆ ತೋರದಿಹನೋ ಸುವ್ವಿ 23 ಲಿಂಗದೇಹಕ್ಕೆ ತಮ ಮೋಹ ಮಹಮೋಹ ತಾಮಿಶ್ರ ಅಂಧತಾಮಿಶ್ರವೆನ್ನು ಸುವ್ವಿ ತಾಮಿಶ್ರದಿ ಪಂಚ ನರಕಂಗಳಲ್ಲಿರ್ಪ ಕೃದ್ಧೋಲ್ಕಾದಿ ಪಂಚಭಗವದ್ರೂಪವಿಹುದೋ ಸುವ್ವಿ 24 ದೈತ್ಯರಿಗವಕಾಶ ಲಿಂಗದೊಳೆಂದಿಗಿಲ್ಲ ದೈತ್ಯಾರಿಜನಾರ್ದನ ಹರಿ ಅಲ್ಲೆ ಇಹನು ಸುವ್ವಿ ದೈತ್ಯಾರಿ ಜನಾರ್ದನನು ಲಿಂಗವ ರಕ್ಷಿಸುತ್ತ ನಿತ್ಯನಿರ್ಲಿಪ್ತನಾಗಿ ನಿಂತಿಹನೋ ಸುವ್ವಿ 25 ವಿಧಿಮೊದಲು ತೃಣಾದಿ ಜೀವರ ಲಿಂಗದಲಿ ದಗ್ಧಪಟದ ತೆರದಿ ವಿಧಿಗೆ ಲಿಂಗವು ಸುವ್ವಿ ವಿಧಿಗಿಹ ಲಿಂಗದ ಕಾರ್ಯ ಹರಿಯ ಪ್ರೀತ್ಯರ್ಥವು ಲಿಂಗಗುಣದ ಕಾರ್ಯವೆಂದಿಗಿಲ್ಲವೋ ಸುವ್ವಿ 26 ಲಿಂಗದೇಹಕೆ ಮುಂದೆ ಅನಿರುದ್ಧದೇಹವು ಅಂಗಿಯ ತೊಟ್ಟಂತೆ ಸಂಗಮಾದುದು ಸುವ್ವಿ ಅದರಿಂದ ಅನಿರುದ್ಧದೇಹ ಇಹುದು ಸಪ್ತಾವರಣ ಆವರಣಗಳಲ್ಲಿ ವಿವರಣೆ ತಿಳಿಯೋ ಸುವ್ವಿ 27 ಅನಿರುದ್ಧ ಪ್ರದ್ಯುಮ್ನ ಆವರಣಗಳೆರಡು ವಾಸುದೇವ ನಾರಾಯಣ ಸುವ್ವಿ ಸರ್ವತತ್ತ ್ವ ವ್ಯಕ್ತವಾದವು ನೀ ಮತ್ತೆ ತಿಳಿಯೋದು ಸುವ್ವಿ 28 ಮಹತ್ತತ್ವ ತಿಳಿ ಶ್ರೀ ವಾಸುದೇವಾವರಣದಿ ನಾರಾಯಣಾವರಣದಿ ಅವ್ಯಕ್ತ ತತ್ವವು ಸುವ್ವಿ ಅವ್ಯಕ್ತ ತತ್ವಾದಿಚತುರ್ವಿಂಶತಿ ತತ್ವದಲಿ ಕೇಶವಾದಿ ಚತುರ್ವಿಂಶತಿ ರೂಪವಿಹುದು ಸುವ್ವಿ 29 ತತ್ವಂಗಳಲಿ ತತ್ತದಭಿಮಾನಿಗಳಂತರದಿ ನಿತ್ಯ ಹರಿಯು ತನ್ನ ಸತಿಯರಿಂದಲಿ ಸುವ್ವಿ ಸತಿಯರಿಂದಲಿ ಕೂಡಿ ಕೃತ್ಯವ ನಡೆಸಿ ಅಭಿ ವ್ಯಕ್ತಮಾಡಿಸುತ್ತಿರುವನು ಹರಿ ಸತ್ಯವೆನುಸುವ್ವಿ 30 ಹೃದಯದೊಳಿರುತಿರ್ಪ ಅನಿರುದ್ಧದೇಹದೊಳು ಮುದದಿಂದ ದೈತ್ಯದಾನವಾದಿಗಳಿರುವರು ಸುವ್ವಿ ದೈತ್ಯರೆಲ್ಲರು ಪಾಪಕಾರ್ಯಗಳ ಮಾಳ್ಪರು ಪುಣ್ಯಕಾರ್ಯಗಳೆಲ್ಲ ಸುರರಿಂದಾಹುದು ಸುವ್ವಿ 31 ಲಿಂಗದೇಹದ ಸಂಗಡ ಭಂಗವಿರುವುದು ಸುವ್ವಿ ಭಂಗವಾಗಲು ವಿಷಯ ಸಂಗರಹಿತನಾಗು ರಂಗ ಅಂತರದಿ ತಿಳಿಯಗೊಡುವನು ಸುವ್ವಿ 32 ಜೀವಪ್ರಕಾಶವು ಲಿಂಗಾನಿರುದ್ಧದೊಳು ಷೋಡಶಕಳೆಗಳಿಂದ ವ್ಯಾಪಿಸಿಹುದು ಸುವ್ವಿ ವ್ಯಾಪಿಸಿಹುದು ಮುಂದೆ ಸ್ಥೂಲದೇಹವು ಒಂದು ಸ್ಥೂಲಜಡದೇಹದ ಕಾರ್ಯ ಅಭಿವ್ಯಕ್ತವಾಹುದು ಸುವ್ವಿ 33 ಸ್ಥೂಲ ದೇಹದೊಳು ಸುಷುಮ್ನಾಧಾರ ಹಿಡಿದು ಸಪ್ತಕಮಲಗಳಲ್ಲುಂಟು ತಿಳಿಯೋ ಸುವ್ವಿ ಸಪ್ತಕಮಲದಿ ಮೊದಲು ಮೂಲಾಧಾರದಿ ನಾಲ್ಕು ಕಮಲ ಹವಳವರ್ಣವಿದೆ ಭೂಲೋಕವೆನ್ನು ಸುವ್ವಿ 34 ಕಮಲ ನಾಭಿಯಲ್ಲಿ ವಾಯುಮಂಡಲವಿದೆ ಭುವರ್ಲೋಕವು ಸುವ್ವಿ ಭುವರ್ಲೋಕ ಇಲ್ಲಿ ವಾಯುಬೀಜಾಕ್ಷರದಲ್ಲಿ ನಿತ್ಯ ಸುವ್ವಿ 35 ಹೃದಯಕಮಲದಿ ಎಂಟುದಳ ಉಂಟು ರವಿಭಾ ಸತ್ರಿಕೋಣ ಅಗ್ನಿಮಂಡಲವಿಹುದಿಲ್ಲಿ ಸುವ್ವಿ ಇಹುದು ಸುವರ್ಲೋಕ ಇಲ್ಲಿ ಅಗ್ನಿ ಬೀಜಾಕ್ಷರ ನಿತ್ಯ ಸುವ್ವಿ 36 ಹೃದಯಕಮಲದ ಮಧ್ಯ ಕರ್ಣಿಕಮಧ್ಯದಲ್ಲಿ ಮೂಲೇಶನಿಪ್ಪ ಸ್ಥೂಲಾಂಗುಷ್ಟ ಮೂರುತಿ ಸುವ್ವಿ ಮೂರುತಿ ಮೂಲೇಶನ ಪಾದಮೂಲದಲ್ಲಿಪ್ಪ ಅನಿರುದ್ಧ ದೇಹವೇ ಸುವ್ವಿ 37 ನಿತ್ಯ ಇಪ್ಪತ್ತೊಂದು ಸಾವಿರದಾರುನೂರು ಸುವ್ವಿ ಆರುನೂರು ಜಪ ಮೂರು ಮೂರು ವಿಧಜೀವರೊಳು ಮೂರು ವಿಧ ನಡೆಸಿ ಮೂರ್ಗತಿ ನೀಡುವ ಸುವ್ವಿ 38 ಅಷ್ಟದಳಗಳ ಮೇಲೆ ಅಷ್ಟಭುಜನಾರಾಯಣ ನಿಷ್ಟೆಯಿಂದಲಿ ಚರಿಸಿ ಜೀವರಿಷ್ಟವ ತೋರುವ ಸುವ್ವಿ ಜೀವರಿಷ್ಟದೊಳು ಪೂರ್ವದಳದಲಿ ಪುಣ್ಯ ನಿದ್ರಾಲಸ್ಯವು ಶ್ರೀ ಆಗ್ನೇಯ ದಳದಲಿ ಸುವ್ವಿ 39 ಆಗÉ್ನೀಯದಳದ ಮುಂದೆ ಯಮದಿಕ್ಕಿನಲ್ಲಿ ಕ್ರೂರ ಬುದ್ಧಿಯು ಜೀವಗಾಗುವುದೆನ್ನು ಸುವ್ವಿ ನಿರುತ ದಳದಲ್ಲಿ ಸಂಚರಿಸುವ ಸುವ್ವಿ 40 ವಾಯುವ್ಯದಲ್ಲಿ ಗಮನಾಗಮನವು ಸುವ್ವಿ ಗಮನಾಗಮನದಿಮೇಲೆ ರತಿಬುದ್ಧಿಯ ಉತ್ತರದಲಿ ದಾನಬುದ್ಧಿಯು ಈಶಾನ್ಯದಲಿ ಸುವ್ವಿ41 ಬರಲು ಸ್ವಪ್ನಾವಸ್ಥೆಯು ಸುವ್ವಿ ಸ್ವಪ್ನಾನಂತರದಿ ಕರ್ಣಿಕೆಯಲ್ಲಿ ಜಾಗ್ರತಿಯು ಮಧ್ಯದೊಳು ಸುಷುಪ್ತಾವಸ್ಥೆಯು ಸುವ್ವಿ 42 ಉರದಲ್ಲಿ ಮುತ್ತಿನವರ್ಣ ಎರಡಾರುದಳಕಮಲದಿ ವಿರುಪಾಕ್ಷನಭಿಮಾನಿ ನರಸಿಂಹನ ಪೂಜಿಪ ಸುವ್ವಿ ನರಸಿಂಹನ ಪೂಜಿಪ ಈ ಲೋಕ ಮಹರ್ಲೋಕ ದ್ವಾದಶದಳದಿ ಕಲಾಭಿಮಾನಿಗಳಿಹರು ಸುವ್ವಿ43 ಕಂಠದಲಿ ಎರಡೆಂಟರಷ್ಟದಳಕಮಲ ಕಮಲ ರಕ್ತವರ್ಣ ಜನಲೋಕವು ಸುವ್ವಿ ಜನಲೋಕದಲಿ ಶೇಷ ಸಂಕರ್ಷಣ ಮೂರ್ತಿಯನು ನಿತ್ಯ ಸ್ತುತಿಸುತ ತಾ ಭೃತ್ಯನಾಗಿಹನೊ ಸುವ್ವಿ 44 ಭ್ರೂಮಧ್ಯ ದ್ವಿದಳಕಮಲ ಉಂಟೊಂದಿಲ್ಲಿ ತಾ ಮಧುಪುಷ್ಪದಂತೆ ಪೊಳೆಯುತ್ತಿಹುದು ಸುವ್ವಿ ತಪೋಲೋಕವೆನ್ನು ಸುವ್ವಿ 45 ಶಿರದೊಳು ಸಾವಿರದಳಕಮಲವು ವಜ್ರದ ಕಲಾ ವರುಣ ಮಂಡಲವಿದೆ ಸತ್ಯಲೋಕವೆ ಸುವ್ವಿ ಉತ್ತಮೋತ್ತಮ ಶ್ರೀರಂಗನ ಪೂಜಿಸುವನು ಸುವ್ವಿ 46 ಅಷ್ಟಾಕ್ಷರU
--------------
ಉರಗಾದ್ರಿವಾಸವಿಠಲದಾಸರು
ಅಧ್ಯಾಯ ಎರಡು ಪದ:ರಾಗ:ಯರಕಲಕಾಂಬೋದಿ ತಾಳ:ಬಿಲಂದಿ, ಸ್ವರ ಷಡ್ಜ ದೇವಕಿಯಲಿ ಅವತರಿಸಿದ ದೇವಾಧೀಶನ ಕಂಡು ಆ ವಸುದೇವನು ಸ್ತುತಿಸಿದ ಕೇವಲ ಭಕುತಿಯಲಿ | ಲಾವಣ್ಯಾಂಬುಧಿಯನಿಸುವ ಭಯದಿಂದ || 1 ಲೋಕಾಧೀಶನೆ ನಿನ್ನ ಅತೌಕಿಕ ರೂಪಾವು ಕಂಡು ಆ ಕಂಸನ ಭಯದಲ್ಲಿ ನಾ ವ್ಯಾಕುಲಳಾಗಿರುವೆ| ಸಾಕೀಕಾಲಕ ಈ ಅಪ್ರಾಕೃತರೂಪವು ಎÀÀನಲು ಶ್ರೀಕಾಂತನು ಆಕ್ಷಣದಲಿ ಪ್ರಾಕೃತ ಶಿಶುವಾದಾ|| 2 ಆ ಕಾಲದಲ್ಯಾದುರ್ಗಾ ತಾ ಕಾಲವ ಕಳಿಯದಲೆ ಗೋಕುಲದಲ್ಲಿ ಪುರುಷೆಂದಾಕಿಯು ತಿಳಿಯದೆ ನಿದ್ರಿಲಯಲ್ಯಾಕ್ರಾಂತಾದಳು ಹುಟ್ಟಿರುವಾಕಿಯ ಮಹಿಮೆ ಇದು|| 3 ಪಟ್ಟಣದಲಿ ಸರ್ವರು ಭಯಬಿಟ್ಟು ನಡರಾತ್ರಿಯೋಳ್ ತಟ್ಟಲು ಬಹುನಿದ್ರಿ ಸೃತಿಗೆಟ್ಟು ಮಲಗಿರಲು | ಹÀುಟ್ಟಿದ ಬಾಲಕನ ನಾ ಬಚ್ಚಿಟ್ಟು ಬರುವೆನೆಂದ ಥಟ್ಟನೆ ನಡದನು ಕೃಷ್ಣನ ಘಡ್ದ್ಹಡದು ಶೌರಿ|| 4 ಕಾಲೊಳಗಿನ ಬೇಡಿಯು ತತ್ಕಾಲಕ ಕಡದಿತು ಬಾಗಿಲಕೀಲಿಗಳೆಲ್ಲಾ ಸಾಲ್ಹಿಡದಿಂದ್ಗರಂತೆ| ಬೈಲಾದವು ಬಾಗಿಲಗಳಾ ಕಾಲದಿ ಹೀಂಗಾದದ್ದು ಬಾಲಕ ಹರಿ ಬದಿಲಿದ್ದ ಮ್ಯಾಲೇನಾಶ್ಚರ್ಯ 5 ವಾಸದ ವೃಷ್ಟಿಯ ಮಾಡಲು ಶೇಷನು ಬೆನ್ನಿಲೆ ಬಂದು ಸೂಸಿ ಬಾಹುವ ಯಮುನಿ ವಾಸುದೇವನ ಕಂಡು ಘಾಸಿಯು ಮಾಡದೆ ಕೂಟ್ಟಳು ಅಸಮಯಕೆ ಹಾದಿ 6 ಗೋಕುಲಕ್ಹೋಗುತ ಶೌರಿಯು ಶ್ರೀ ಕೃಷ್ಣನ ಅಲ್ಲಿಟ್ಟು ಆ ಕನ್ನಿಕೆಯ ತಂದು ತನ್ನಕಿಯ ಬದಿಲಿಟ್ಟಾ| ಆ ಕಾಲಕ ಆ ಬೇಡಿಯ ತಾಕಾಲಗಳಲ್ಲಿತಟ್ಟು|| ಶ್ರೀ ಕಾಂತನ ಸ್ಮರಿಸುತಲೆ ಏಕಾಂತದಲ್ಲಿರುವಾ|| 7 ಬಾಗಿಲುಗಳು ಎಲ್ಲಾ ಮತ್ಥಾಂಗೆ ಕೀಲಿಗಳ್ಯಲ್ಲಾ ಬ್ಯಾಗನೆ ಆದವು ಮುಂಚಿನ್ಹಾಂಗೆ ತಿಳಿಗೂಡದೆ| ಆಗಾ ಕೂಸಿನ ಧ್ವನಿ ಛಂದಾಗಿ ಕಿವಿಯಲಿ ಬೀಳಲು ಬಾಗಿಲಕಾಯುವ ಭೃತ್ಯರು ಬ್ಯಾಗನೆದ್ದರು ಭಯದಿ|| 8 ಗಡಿಬಿಡಿಯಿಂದಲ್ಯವರು ಯಡವುತ ಮುಗ್ಗುತ ತ್ಯೋಡುತ ನಡಿದರು ನಿಂದಿರದಲೆ ಬಹುಸಡಗರದರಮನಿಗೆ| ಒಡಿಯಾನಂತಾದ್ರೀಶನ ಖಡುದ್ವೇಷ ಆಸವಗೆ ನುಡಿದರು ದೇವಕಿದೇವಿಯು ಹಡಿದಾಳೆಂತೆಂದು|| 9 ಪದ್ಯ ನುಡಿಯ ಕೇಳೀಪರಿಯ ಖಡುಪಾಪಿ ಕಂಸ ಗಡವಡಿಸಿ ಕೊಂಡೆದ್ದು ಭಯ ಬಡುವತಲೆ ಶ್ವಾಸವನು ಬಿಡುವುತಲೆ ಭರದಿಂದ ಎಡವುತಲೆ ಮುಗ್ಗುತಲೆ ನಡದನಾ ದೇವಕಿಗೆ ಕುಡು ಕೂಸು ಎಂತ್ಯಂದು ನುಡಿಕೇಳಿ ಮನದಲ್ಲಿ ಮಿಡುಕುತಲೆ ದೇವಕಿಯು ದೃಢವಾಗಿ ಕೈಯೊಳಗೆ ಹಿಡಿದು ಆಕೂಸಿನಾ ಕುಡದೆ ಕಂಸನ ಮುಂದೆ ನುಡಿದಳೀ ಪರಿಯು|| 1 ಪದ:ರಾಗ:ನೀಲಾಂಬರಿ ತಾಳ:ತ್ರಿವಿಡಿ ಕುಡಲಾರೆ ಕೂಸಿನ್ನನಾ ನಿನಗೆ || ಅಣ್ಣ ಕುಡಲಾರೆ ಒಡ್ಡಿ ಬೇಡುವೆ ಕಡಿ ಹುಟ್ಟ ಹೆಣ್ಣದು|| ಪ ಸೂಸಿಯು ನಿನಗೆ ಈಕಿ ತಿಳಿ ನೀನು | ಮತ್ತು ಹಸಗೂಸು ಎಂಬುವದರಿಯೇನು | ಇಂಥಾ ಶಿಶುವಿನಳಿದಾರೆ ಪಾಪ ಬರದೇನು| ವಸುಧಿ ಒಳಗೆ ಬಹು ಹೆಸರಾದವನೋ ನೀನು|| 1 ಹಿರಿಯಣ್ಣನಲ್ಲೇನೊ ನೀ ಎನಗೆ | ಸ್ವಲ್ಪ ಕರುಣಾವಿಲ್ಲವೋ ಎನ್ನೊಳು ನಿನಗೆ|| ಮಕ್ಕಳಿರಧಾಂಗ ಮಾಡಿದಿ ಮನಿಯೋಳಗೆ ಗುರುತಕ್ಕಿದು ಒಂದು ನೋಡಿ ಮರೆತೆನ್ಹಿಂದಿನ ದುಃಖ|| 2 ನಾ ಏನು ನಿನಗೆ ಮಾಡಿದೆ ಪೇಳು | ಬಹು ಬಾಯಿತಗುವೆ ಕೋಪವು ತಾಳು| ಇಂಥಾ ಮಾಯಾ ಮೋಹತಳಿಗಿ|| 3 ಪದ್ಯ ಅಪ್ಪ ಕುಡಲಾರೆಂದು ತಪ್ಪದಲೆ ಆ ಕೂಸಿನಪ್ಪಿಕೊಂಡಳುವಾಗ ಕಲ್ಲ ಮ್ಯಾಲಪ್ಪಳಿಸಲಾಕೂಸು ತಪ್ಪನ್ಹಾರಿತು ಮ್ಯಾಲೆ ಅಷ್ಟು ಚಿನ್ಹಿಗಳಂದ ಉಟ್ಟ ಪೀತಾಂಬರದಿ ತೊಟ್ಟ ಹೀಂಗೆ ಸ್ಪಷ್ಟಪೇಳಿದಳು| ಪದ ರಾಗ:ತೋಡಿ ತಾಳ ಬಿಲಂದಿ ಮಂದ ಮತಿಯೇ ಕಂದರನ್ನ ಕೂಂದರೇನು ಫಲವೂ| ಇಂದು ಎನ್ನ ಕೂಂದ ವ್ಯೂಲ ಮುಂದೆ ಬರುವದೇನು| 1 ವೈರಿ ಅನ್ಯರಲ್ಲಿ ಇನ್ನ ಬೆಳೆವುತಿಹನೊ| ಮುನ್ನ ಬಂದು ತನ್ನ ಬಲದಿ ನಿನ್ನ ಕೊಲ್ಲುವೊನು 2 ಅಂತಕನ್ನ ನಿಂತು ಕೊಲ್ಲುವ ಭ್ರಾಂತಿ ಬಿಡೆಲೊ ನೀನು| ಅನಂತಾನಂತಾದ್ರೀಶನಂತು ತಿಳುವದೇನೇ|| 3 ಪದ್ಯ ಆ ಮಹಾ ಪಾಪಿ ಗ್ಯಾಡೀ ಮಾತು ದೇವಿ ತಾ ಭೂಮಿಯಲಿ ಬಂದು ಬಹುಗ್ರಾಮದಲೆ ನಿಂತು ಬಹುನಾವು ಉಳ್ಳವಳಾಗಿ ಕಾಮಿತಾರ್ಥಗಳನ್ನೂ ಪ್ರೇಮದಲಿ ಕುಡುತಿಹಳು ನೇಮದಿಂದಾ|| ಆ ಮಾಯಿ ವಚÀನವನು ಪಾಮರನು ತಾ ಕೇಳಿ ರೋಮಾಂಚಗಳು ಉಬ್ಬಿ ನಾ ಮಾಡಿದಲ್ಲೆಂದು ನೇಮದಲಿ ಇಬ್ಬರಿಗೆ ನೇಮಿಸಿದ ಬೇಡಿಯನು ತಾ ಮೋಚನವು ಮಾಡಿ ಪ್ರೇಮದಿ ನುಡದಾ|| 1 ಪದ:ರಾಗ :ಸಾರಂಗ ಅದಿತಾಳ ಸ್ವರ ಮಧ್ಯಮ ಎಲೆ ತಂಗಿಯೆ ಎಲೊ ಶಾಲಕ ಬಲು ಪಾಪಿಯು ನಾನು| ಬಲು ಮಂದಿ ಮಕ್ಕಳನ ಛಲದಿಂದ ಕೊಂದೆ| ತಿಳಿಯದೆ ನಾ ಇಂಥ ಕೆಲಸಕ್ಕೆ ತೊಡಕಿ ಪರಿ ಪಾಪದ ಫಲ ಭೋಗಿಯು ಆದೆ|| 1 ಅಶರೀರದ ವಾಣಿಯು ಹುಸಿ ಅಯಿತು ಇಂದು ವಸುಧಿಯೋಳಿರುವಾ ಮಾನುಷರಾ ಪಾಡೇನು|| ಶಶಿಮುಖಿ ನಾನಿಮ್ಮ ಶಿಶುಗಳ ಕೂಂದೆ||2 ಅಮಿತಾ ಅಪರಾಧಾಯಿತು ಕ್ಷಮಾ ಮಾಡಿರಿ ನೀವು|| ವಿಮಲ ಮನಸಿನಿಂದ ನಮಿಸಿದೆ ನಿಮಗೆ|| ಕಮಲೋದ್ಭವ ಬರದಂಥಾ ಕ್ರಮ ತಪ್ಪದು ಎಂದು ಶ್ರಮಯಾತಕ ಸುಖದುಃಖವ ಸಮಮಾಡಿರಿ ನೀವು|| 3 ತಿಳಗೇಡಿಯು ಆ ಕಂಸ ತಿಳಿಹೇಳಿಪರಿಯು ಸ್ಥಳಬಿಟ್ಟು ತಾ ತನ್ನ ಸ್ಥಳಕ್ಹೋದನು ಬ್ಯಾಗೆ\ ಬ್ಯಳಗಾಗಲು ಎಲ್ಲಾರಿಗೆ ತಿಳಿಸೀದನು ಆಗೆ ಹೊಳುವಾ ದೇವಿಯ ಮಾತುಗಳನೆಲ್ಲ ಬಿಡದೆ || 4 ಖಳರಂದರು ನಾವಿನ್ನ ಇಳಿಯೊಳ್ಹುಟ್ದರುವಾ| ಉಳದಾ ಬಾಲಕೃಷ್ಣಕರನ್ನ ಕೊಲ್ಲು ವುದ ಸತ್ಯಾ| ತಿಳದೀಪರಿ ಅವರನ್ನ ಕಳಸೀದ ಕಂಸಾ ಚಲುವಾನಂತಾದ್ರೀಶನ ಕೊಲ್ಲವೊದು ಎಂದು|| 5 ಪದ್ಯ ಮುಂದ ಗೋಕುಲದಲ್ಲಿ ನಂದಗೋಪನು ತನ್ನ ಕಂದನಾ ಮುಖವನ್ನು ಛಂದದಲಿ ನೋಡಿ ಆನಂದ ಹಿಡಿಸದೆ ತಾನು ಬಂದ ಬಂದವರಿಗ್ಯಾನಂದ ಬಡಸಿದ ಮನಕ ಬಂದದ್ದು ಕೂಟ್ಟು| ನಂದನಂದನನ ವದನೇಂದು ದರ್ಶನಕಾಗಿ ಬಂಧು ಬಾಂಧವರೆಲ್ಲ ಬಂದು ಒದಗಿದರಲ್ಲೆ ದುಂದುಬಿಯು ಮೊದಲಾದ ಛಂದಾದ ವಾದ್ಯಗಳು ಒಂದಾಗಿ ನುಡದÀವಾನಂದದಿಂದಾ| ಗೀತ ಬಲ್ಲವರು ಸಂಗೀತವನು ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ತಾತನವ ತನ್ನಲ್ಲೆ ಜಾತನಾಥಂಥವಗೆ ಜಾತಕರ್ಮವು ಮಾಡಿ ಪ್ರೀತನಾದಾ| ಪ್ರೀತಗೋಕುಲದಲ್ಲಿ ನೂತನೈಶ್ವರ್ಯಗಳು ಜಾತವಾದವು ಸರ್ವಜಾತಿಗಳಿಗ್ಯಾದರೂ ಯಾತಕ್ಕೂ ಕಡಿಮಿಲ್ಲ ಸೋತಂಥ ದಾರಿದ್ರ್ಯ ಯಾತಕಿರುವದು ರಮಾನಾಥ ಇರಲು|| 1 ಸ್ಥಿರ ಮನಸಿನಿಂದಲ್ಲೆ ಸ್ಥಿರವಾಗಿ ಕುಳಿತು ಈ ಚರಿತವನು ಕೇಳಿದವರ ಪರಿಪರಿಯ ಅಭಿಲಾಷ ಪರಿಪೂರ್ಣವಾಗುವದು ಚರಿಸದಲೆ ಅವರಲ್ಲಿ ಸ್ಥಿರಳಾಗಿ ಇರುವವಳು ವರಮಹಾಲಕ್ಷ್ಮೀ| ಧರಿಯೊಳಗ ಇರುವಂಥ ವರಕವೀಶ್ವರರಂತೆ ಸ್ಥಿರವಲ್ಲ ಗೋಕುಲದಲ್ಲಿ ತ್ವರ ಅವನೇ ಮುಗಿಸಿದಿಲ್ಯರಡು ಅಧ್ಯಾಯಾ|| 2 “ಶ್ರೀ ಕೃಷ್ಣಾರ್ಪಣ ಮಸ್ತು” ಎರಡನೆಯ ಅಧ್ಯಾಯವು ಸಂಪೂರ್ಣವು”
--------------
ಅನಂತಾದ್ರೀಶ - ಕಥನಕಾವ್ಯಗಳು
ಆತ್ಮಶೋಧನೆ ಅನಂತಾನಂತ ಪಾಪ ಮಾಡುವೆ ನಾನು ಪ ಅನಂತದಯಾನಿಧೆ ನೀನೊ ಹಯವದನ ಅ.ಪ ದಾರು ಎನ್ನ ಪಾತಕಕ್ಕೆ ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಿಮಾಣುಗಳಿಗೆ 1 ಪೇಳು ಪಾಪವೆಂದಲೆನಲು ಪೇಳಲಿಕ್ಕೆ ಬಲುಲಜ್ಜೆ ಗಳು ಅಂಡಲಿವುತಿದೆ ತಿಳಿದಾತ ನೀನಲ್ಲವೆ 2 ಎನಗೊಂದು ಉಪಾಯವ ಅನಾಯಾಸ ಮಾಡುವಂಥ ನಿನ್ನ ನಾಮಸುಧೆಯನ್ನು ಎನಗೀಯೊ ಮುದದಿಂದ3 ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು ವಾಸುದೇವವಿಠಲನೆ ನೀ ಸಡಲ ಬಿಡುವರೇನೊ4
--------------
ವ್ಯಾಸತತ್ವಜ್ಞದಾಸರು
ಏನಾರಿಸುವಿ ಹರಿಯೇ ಎನ್ನವಗುಣಾ ಅನಂತಾನಂತ ತಪ್ಪು ಮಾಡಿದ ಪಾಮರೊಳೇನಾ ಪ ಉದಯ ಉದ್ಯೋಗನೆನುವೆ ಮಧ್ಯಾಹ್ನಕ ಕ್ಷುಧೆ ತೃಷೆಯಲ್ಲಿ ದಣಿವೆ ಇರುಳಿಗಿನ್ನು ವದಗಿ ನಿದ್ರೆ ಯನುವೆ ಇದರೊಳು ನಿನ್ನ ನಾಮನೆನೆಯದೆ ದಿನಗಳೆದೇನಾ 1 ನಿನ್ನ ಕಥೆಯಾ ಕೇಳದೇ ಮಂಗಳಂಗುಟ ಕಣ್ಣಿನೊಳಿಟ್ಟು ನೋಡದೇ ಸರ್ವಾಂಗದಿ ಚೆನ್ನಾಗಿ ಮಾಡದೇ ಎನ್ನ ಕಾಯವು ಸತಿಸುತರಿಗೆ ಮಾರಿದೇನಾ 2 ಹರಿ ಭಕ್ತಿ ಮುದ್ರೆ ಧರಿಸೀ ಹೆಮ್ಮಿಲಿ ದುರಾಚರಣೆ ಮಾಡಿದ ಕ್ಷಮಿಸೀ ಸತ್ಸಂಗದಿ ಅರಿವಿಗೆ ಮನನೀಲಿಸೀ ಹೊರೆವದು ಗುರು ಮಹಿಪತಿಸ್ವಾಮಿ ಕರುಣಿಸಿ ಎನ್ನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೊ ಕರುಣ ಕೃಪಾಳ ಸದ್ಗುರು ಘನಲೋಲ ದ್ರುವ ಎನ್ನಹೊಯಿಲ ನಿಮಗೆಂತು ಮುಟ್ಟುವದಾನಂತಗುಣಮಹಿಮೆ ಚಿಣ್ಣ ಕಿಂಕರನಾದ ಅಣುಗಿಂದತ್ತಲಿ ಹೀನ ದೀನ ನಾ ಪರಮ ಖೂನತಿಳಿಯಲು ನಿಮ್ಮ ಕೃಪಾಸಿಂಧು ನಿಮ್ಮ 1 ಅನಂತಕೋಟಿ ಬ್ರಹ್ಮಾಂಡನಾಯಕನೆಂದೊದರುತಿಹಾನಂತ ವೇದ ಅನಂತಾನಂತಾನಂತ ಮಹಿಮರು ಸ್ತುತಿಸುತಿಹರು ಸರ್ವದ ಗುಹ್ಯ ಅಗಾಧ ತಿಳಿಯದು ಮಹಿಮ್ಯಂಗುಷ್ಠದ 2 ಮಾಡುವರಾನಂದ ಘೋಷ ದೋರುವ ಹರುಷ ತಾ ಶೇಷ ಸುರಮುನಿ ಜನರೆಲ್ಲ ಚರಣಕಮಲಕೆ ಹಚ್ಚಿದರು ನಿಜಧ್ಯಾಸ ಸಿರಿಲೋಲ ನೀ ಸರ್ವೇಶ 3 ಸಕಲಾಗಮ ಪೂಜಿತ ಸದ್ಗುರು ಶ್ರೀನಾಥ ಕಾಮಪೂರಿತ ಕರುಣಾನಂದಮೂರುತಿ ಯೋಗಿಜನ ವಂದಿತ ಜನರಿಗೆ ಸಾಕ್ಷಾತ 4 ಸಲಹುವದೋ ನೀ ಶ್ರೀಹರಿಯೆ ನೀ ಎನ್ನ ಧೊರೆಯೆ ಮುರ ಅರಿಯೆ ಸಕಲಪೂರ್ಣಸಿರಿಯೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಪ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ 1 ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ2 ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ ಹೊತ್ತು ಮೀರದೆ ಮಾಳ್ಪುದು ಧರ್ಮ ಮೊತ್ತವಲ್ಲದೆ ಇನ್ನೊಂದಿಲ್ಲವೊ ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು3 ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ ನಾನಾ ಪರಿಯಲಿ ತಿಳಿದು ನೋಡು ಧ್ಯಾನದಿಂದಲಿ ದಿನಪ್ರತಿ ಜ್ಞಾನನಿಧಿ ನಿಜಗುರು ಶಿರೋಮಣಿ ಅನಂತಾನಂತ ಜನುಮದಲೀಗ ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ4 ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ ಸೊಲ್ಲುಗಳಲ್ಲದೆ ಇದು ಸಲ್ಲದೊ ಸಕಲ ಮನೋಭೀಷ್ಟಾ ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ 5 ನೂನ್ಯಪೂರ್ಣವು ಅವರನ ಕೂಡಿ ತನ್ನ್ಯೋಪಾಯವು ಯಾಕೆ ನಿನಗೆ ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ 6 ಊರ್ವಿಗೀರ್ವಾಣರಿಗೆ ಉಣಿಪುದು ಗರ್ವವನು ತಾಳದಲೆ ಚೆನ್ನಾಗಿ ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ ಪೂರ್ವತನೆ ಬಯಸುತಾರಾಧಿಸು ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ7
--------------
ವಿಜಯದಾಸ
ತೋರವ್ವಾ ಕೇಳದೀ ಶ್ರೀನಿಧಿಯಾ|ಕಾರುಣ್ಯಂಬುಧಿಯಾ ಪ ಹರಿಯಾ ಸಕಲ ಜಗಧೊರಿಯಾ|| ಸುರಮನಿ ಜನಸಿರಿಯಾ|ಅನಂತಾನಂತ ಚರಿಯಾ| ಕರುಣ ಹೊಕ್ಕಾಕರಿಯಾ| ಕೇಳುತ ಘನ ಮೊರಿಯ ಬಂದೊದಗಿದಧೊರಿಯಾ 1 ಸ್ಮರನಾ ಲಾವಣ್ಯಾ ಮಂದಿರನಾ| ಸಿರಿದೇವಿ ಮನೋಹರನಾ ಪರಕ ಪರಾತ್ಪರನಾ| ಶಂಖಚಕ್ರದ ಕರನಾ| ಸಾರಥಿಯಾದಾ ನರನಾ|ಪೀತಾಂಬರ ಧರನಾ 2 ನಂದಾನಂದನ ಶ್ರೀ ಮುಕುಂದಾ| ದೀನವತ್ಸಲದಿಂದಾ|ಹೊರಿಯಲಯನ್ನದೊಂದಾ| ನೋಡದೇ ಮುನ್ನಿನ ಕುಂದಾ| ಗುರು ಮಹೀಪತಿ ಪ್ರಭುಬಂದಾ ನೀಡಿದಾನಂದಾ|| 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಚಿತ್ತಕೆ ಬಂದುದನು ಮಾಡು ಸರ್ವೇಶ ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮಿ ಪ ಅನಂತಾನಂತ ಜನ್ಮ ಕಾದರು ಒಮ್ಮೆ ಚೆನ್ನ ಗೋಪಾಲ ಕೃಷ್ಣದೇವ ಅ.ಪ. ಛೀ ಎನಿಸು ಜನರಿಂದ ನಿಂದ್ಯವನು ಮಾಡಿಸು ಬಾಯದೆರೆಸೊ ಹೊಟ್ಟೆಗಾಗಿ ಗಾಯನವ ಮಾಡಿಸು ಗುಪ್ತದಲ್ಲೇ ಇರಿಸು ದಾಯಾದಿಗಳಿಗೊಪ್ಪಿಸು ರಾಯಪದವಿಯ ಕೊಡಿಸು ರಾಜ್ಯವೆಲ್ಲವ ಮೆರೆಸು ಕಾಯಕ್ಲೇಶವನು ಪಡಿಸು ಮಾಯಾಧವನೆ ನಿನ್ನ ಮಹಿಮೆ ತಿಳಿದವರಾರು ನ್ಯಾಯ ಅನ್ಯಾಯವಾಗಿ ಶ್ರೀಶ 1 ಧನವನ್ನೆ ಕೊಡಿಸು ದಾನವನೆ ಮಾಡಿಸು ಗುಣವುಳ್ಳ ಮನುಜನೆನಿಸು ಮನಸು ಚಂಚಲನೆನಿಸು ಮಾತುಗಳ ಪುಸಿಯೆನಿಸು ಕ್ಷಣದೊಳಗೆ ಶುದ್ಧನೆನಿಸು ಋಣದ ಭಯವನೆ ಹೊರಿಸು ರಿಕ್ತ ನಾನೆಂದೆನಿಸು ತೃಣದಂತೆ ಮಾಡಿ ನಿಲಿಸು ನಿತ್ಯ ಮನದಿಚ್ಛೆಗಾರನೆ ದಿನ ಪ್ರತಿದಿವಸವಾಗೆ, ದೇವ 2 ಯಾತ್ರೆಯನೆ ಮಾಡಿಸು ಯೋಚನೆಯಲೇ ಇರಿಸು ಪಾತ್ರ ಜನರೊಳು ಪೊಂದಿಸು ಗೋತ್ರ ಉತ್ತಮನೆನಿಸು ಗೋವುಗಳ ಕಾಯಿಸು ಧಾತ್ರಿಯೊಳು ನೀಚನೆನಿಸು ಮೈತ್ರರೊಳು ಕೂಡಿಸು ಮೈಗೆಟ್ಟವನೆನಿಸು ಸ್ತೋತ್ರಕ್ಕೆ ಯೋಗ್ಯನೆನಿಸು ನೇತ್ರ ಮೂರುಳ್ಳವನು ಸ್ತುತಿಸಿದ ಮಹಾಮಹಿಮ ರಾತ್ರಿ ಹಗಲು ಎನ್ನದೆ ದೇವ 3 ಉಪವಾಸದಲ್ಲಿರಿಸು ಉಚಿತ ಭೋಜನ ಉಣಿಸು ಜಪತಪವನೆ ಮಾಡಿಸು ಅಪಹಾಸ್ಯ ಮಾಡಿಸು ಅದ್ಭುತವನೈದಿಸು ಗುಪಿತರೊಳಗಧಿಕನೆನಿಸು ಉಪಕಾರಿ ನರನೆನಿಸು ಉದ್ದಂಡನಿವನೆನಿಸು ವಿಪುಳ ಮತಿಯಲಿ ನಿಲಿಸು ಅಪರಿಮಿತ ಗುಣನಿಧಿಯೆ ಆನಂದ ಮೂರುತಿಯ ಸಫಲಮತಿಯೀವ ದೇವ 4 ವೇದವನು ಓದಿಸು ವೇದಾರ್ಥಗಳ ನುಡಿಸು ಓದಿದರು ದಡ್ಡನೆನಿಸು ಹಾದಿಯನು ತಪ್ಪಿಸು ಹಿತದವರನಗಲಿಸು ಸಾಧು ಮಾರ್ಗವನೆ ಕೊಡಿಸು ಬಾಧೆಗಳನಟ್ಟಿಸು ಭಕುತಿವೆಗ್ಗಳನೆನಿಸು ಉದರಕೋಸುಗ ತಿರುಗಿಸು ಪಾದದಲಿ ಗಂಗೆಯನು ಪೆತ್ತ ಪರಮಾನಂದ ಮೋದ ವಿನೋದವಾಗೆ ದೇವ 5 ಕುಣಿಕುಣಿದಾಡಿಸು ಕಾಶಿಯಲಿ ಪೊಂದಿಸು ಮಣಿ ಭೂಷಣವ ತೊಡಿಸು ಘನ ಕವನ ಪೇಳಿಸು ಕೌತುಕವನೈದಿಸು ವನ ಭುವನದೊಳು ನಿಲಿಸು ಪ್ರಣವ ಮಂತ್ರವ ಜಪಿಸು ಪ್ರಕಟಭಯವನೆ ಬಿಡಿಸು ಬಿನುಗು ವೈರಾಗ್ಯನೆನಿಸು ಜನನಿ ತನುಜರ ಕೂಡೆ ಅನುಸರಿಸಿ ನಡೆವಂತೆ ಎನಗೆ ನೀನೆ ಸದ್ಗತಿ ಸ್ವಾಮಿ 6 ಯಾವುದಾದರು ನೀನು ಇತ್ತುದಕೆ ಎನಗಿಷ್ಟು ನೋವು ಒಂದಾದರಿಲ್ಲ ಜೀವೇಶರೊಂದೆಂಬ ದುರ್ಮತವ ಕೊಡದಿರು ಭಾವದಲಿ ನಾ ಬೇಡುವೆ ಆವಾವ ನರಕದಲಿ ಬಹುಕಾಲವಿಟ್ಟರು ಇಪ್ಪೆ ನಾನೊಲ್ಲೆ ಮಿಥ್ಯಮತವ ಕಾವ ಕರುಣೆ ನಮ್ಮ ವಿಜಯವಿಠ್ಠಲರೇಯ ಪಾವನ್ನ ಮಾಳ್ಪ ಶಕ್ತ ವ್ಯಕ್ತ 7
--------------
ವಿಜಯದಾಸ
ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ ಅಪಾರ ಮಹಿಮ ಅನಂತಾನಂತ ರೂಪನಾ ಪ ನಖ ನಾಲ್ಬೆರಳು ಎರಡು ಜಾನು ಜಂಘೀ ಕಟಿ ನಾಭಿ ಉದರ ಉರುತರ ಕಂಠಾ ಕದಪು ಕರ್ಣ ನಯನಾ ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸ ಹರನಾ1 ಮಣಿ ಕುಂಡಲ ತಿಲಕ ಸರಿಗೆ ಕೌಸ್ತಭ ಕಮಲ ತುಲಸಿಹಾರ ಮುತ್ತಿನಸರ ಪ ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ 2 ಶ್ರುತಿ ತತಿಗೆ ದೂರ ಉನ್ನತ ಲೀಲ ಸಾಕಾರ ಅಪ್ರಾಕೃತ ಶರೀರ ಯತಿಗಳ ಮನೋಹರ ಮತಿಗೆ ಅಗೋಚರ ಸಿರಿ ಪತಿ ವಿಜಯವಿಠ್ಠಲನಾ 3
--------------
ವಿಜಯದಾಸ
ಪಾವನಿ ನಿರಂಜನಿ ಪಾವನಿ ಧ್ರುವ ಆದಿನಾರಾಯಣಿ ಸಾಧುಜನವಂದಿನಿ ಸದಾನಂದರೂಪಿಣಿ ಸದ್ಗತಿ ಸುಖದಾಯಿಣಿ 1 ಲಕ್ಷುಮಿ ರೂಪಿಣಿ ಸಾಕ್ಷಾತ್ಕಾರಿಣಿ ರಕ್ಷರಕ್ಷಾತ್ಮಿಣಿ ಅಕ್ಷಯಪದದಾಯಿಣಿ 2 ಅನಾಥರಕ್ಷಿಣಿ ದೀನೋದ್ದಾರಿನೀ ಅನಂತಾನಂತಗುಣಿ ಮುನಿಜನ ಭೂಷಣಿ 3 ದಾರಿದ್ರ್ಯಭಂಜನಿ ದುರಿತವಿಧ್ವಂಸಿನಿ ಪರಮಸಂಜೀವಿನಿ ಸುರಮುನಿರಂಜನಿ 4 ಸ್ವಾಮಿ ಶ್ರೀ ಗುರುವಿಣೆ ಬ್ರಹ್ಮಾನಂದ ರೂಪಿಣಿ ಮಹಿಪತಿಕುಲಸ್ವಾಮಿಣಿ ನೀನೆ ಪರಮಪಾವನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಯೇನು ಕರುಣಾಳೋ ದೇವವರೇಣ್ಯ ಯೇನು ಭಕುತರಧೀನನೋ ಪ ಕನ್ನಯ್ಯ ಧ್ಯಾನವಿತ್ತ ನಾರಾಯಣಾ ಅ.ಪ. ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ ಒಡನೆ ತಿರುಗೂವ ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ 1 ಪಾವನವ ಮಾಡಿದನು ಬಲು ಕೃ ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ ಕವಿ ಮನ್ನಿಸಿ ತಪ್ಪನೆಣೆಸದೆ ದೇವ ಜಗತ್ರಯ ಜಿತ ಕರಣ ವಸುದೇವ ದೇವಕೀನಂದನಾ2 ದೋಷರಾಶಿಯೊಳಿದ್ದು ಅನುದಿನ ಮೋಸಗೊಳಿಸುವ ಭವವನಧಿ ಮಧ್ಯ ಈಶ ಕಡಕಾಣಲಾರದೆ ಕ್ಲೇಶದಲಿ ಸಂಚರಿಸುತ್ತಿಪ್ಪ ಮಾನೀಶ ಪಶುವನು ನೋಡಿ ವೇಗದಿ ಲೇಸು ಕೊಡುವೆನೆಂದು ಆನಂದ ದಾಸರೊಳಗಿದ್ದ ನರಹರೀ 3 ಡಂಬಕಾ ಭಕುತಿಯನೆ ಬಿಡಿಸೀ ವೆಂಬೋದೆ ನಿರ್ಮಲ ಮಾಡೀ ಪಾದ ಇಂಬು ಬಯಸುವ ಸುಖವೆ ಪಾಲಿಸಿ ಪೊಂಬುಡೆಧರ ಗೋವಿಂದಾ 4 ಜಪತಪಾನುಷ್ಠಾನ ನಾನಾ ವುಪವಾಸ ವ್ರತದಾನ ಧರ್ಮಗ ಳಪರಿಮಿತವಾದ ಯಾಗ ಕನ್ಯಾದಾನ ನಾನಾಲೋಚನ ಸ್ವಪನದಲಿ ಕಾಣಿಸುವ ತಾನೆ ಕೃಪಣರಿಗೆ ವಲಿದಲ್ಲದೆ ಬಿಡ ಚಪಲ ವಿಜಯವಿಠಲಾ5
--------------
ವಿಜಯದಾಸ
ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ ದಾನಿ ನೀನೆಂದು ನಂಬಿದೆ ಪ ಜ್ಞಾನಗಮ್ಯನೆ ವಾಙ್ಮನೋಮಯ ಮಾನಿ ಮಾನಸರಾಜಹಂಸ ಅ.ಪ ಲೋಕಭರಿತ ಶ್ರೀಕಳತ್ರ-ತ್ರಿಕಕುದ್ಧಾಮದಧಿನಾಥ ಶ್ರೀಕಮಲಭವಾದಿವಂದಿತ ಮುಕುತಾಮುಕುತಜನ ಸಂಸೇವಿತ ಅಖಿಳಾಗಮಕೆ ಅತೀತ-ಶ್ರೀಕರಪಲ್ಲವಪೂಜಿತ ಅಖಿಳಾಜಾಂಡದಿ ವ್ಯಾಪ್ತ-ಭಕುತರಗತಿಯಪ್ರದಾತ1 ನಿಗಮವಿತ್ತೆ ನಗವಪೊತ್ತೆ ಬಗೆದು ಬೇರ ನರ- ಮೃಗಾಂಗನೇ ತ್ಯಾಗಿಯೊಳು ಪೋಗಿ ನೃಪರ ನೀಗಿಸಿ ವನವನವಾ ಚರಿಸಿದೆ ಬಗೆಬಗೆ ಆಟದಿ ಬಾಲ್ಯದಿ ಹಗೆಗಳ ಮಡುಹಿದೆ ಕಾರ್ಯದಿ ಆಗಮಕರ್ಥಮೋಹಿಸಿ-ಜಗದೊಳುತುರಗವನೇರ್ದೆ 2 ಅಂತರಾತ್ಮಪರಮಾತ್ಮ ಅನಂತಾನಂತರೂಪಾತ್ಮ ಪ್ರಾಂತಕಾಣದೇ ನಿರಂತರದಿ ನಿಂತು ಸಿರಿ ನಿತ್ಯಮುಕ್ತಳಾದಳೋ ಕಂತುಪಿತ ಎನ್ನಂತರದಿ ನಿಂತಿಹೆ ನಿರಂತರದಿ ಕಾಂತ ಶ್ರೀ ವೆಂಕಟೇಶನೆ-ಅಂತರ್ಬಹಿರದಿ ನಿಂತಿಹ ಪ್ರಭೊ 3 ಅಪ್ರಮೇಯ ಸ್ವಪ್ರಕಾಶ ಅಪ್ರಾಕೃತಗುಣಗಣಾರ್ಣವ ಸ್ವಪ್ರಯೋಜನರಹಿತ ಸತತ ತ್ವತ್ಪ್ರಸಾದದಿಂದ ಜಗವು ಕ್ಷಿಪ್ರದಿ ನೃಪಸಂಸ್ತುತಿಸೆ ವಿಪ್ರನಮನ ಸಂತೈಸಿದೆ ಅಪ್ರತಿಹತಮಹಿಮನು ಸುಪ್ರೀತನು ಜನರ್ಗೆ 4 ಪರಮ ಪುರುಷ ಪೂರ್ಣಾನಂದ ಪರಮಕರುಣಶರಧಿಯೆ ಉರಗಾದ್ರಿವಾಸ ವಿಠ್ಠಲ ಕರಾವಲಂಬನವಿತ್ತು ಸಲಹೆಲೋ ಪರಿಪರಿ ಎನ್ನಪರಾಧ ನೋಳ್ಪರೆ ಭೋ ಜಗದೊಡೆಯ ಕರುಣವು ತೋರದೆ ನೀನಿರೆ ನರಪಶು ನಾನೆಂತು ಬಾಳ್ವೆನೋ5
--------------
ಉರಗಾದ್ರಿವಾಸವಿಠಲದಾಸರು
ಸಂಪ್ರದಾಯದ ಹಾಡುಗಳು ಆರತಿ ಬೆಳಗಿದೆನೆ ಗುರುವಿಗೆಆರತಿ ಬೆಳಗಿದೆನೆಆರಾರು ಬೆಳಗೇ ಬೆಳಗದಂಥಾಆರತಿ ಬೆಳಗಿದೆನೆ ಪ ಹೃದಯ ತಳಿಗೆಯಲಿ ನಾನೀಗಭಾವದಾರತಿ ಮಾಡಿವಿದವಿದ ಬುದ್ಧಿಯ ಬತ್ತಿಯ ಮಾಡಿನಿರ್ಮಲಾಜ್ಯ ಹೊಯ್ದು 1 ಜ್ಞಾನ ಜ್ಯೋತಿಯನೆ ಮುಟ್ಟಿಸಿಚಿತ್ತದಿಂ ಪಿಡಿದುನಾನೇ ನಾನೇ ನಾನೆಂದಾರತಿ ಬೆಳಗಿದೆನೇ 2 ಬಲುಶಶಿ ಸೂರ್ಯರ ಶತಕೋಟಿಪ್ರಭೆಯನೆ ಮೀರ್ದುಥಳಥಳ ಥಳಥಳ ಹೊಳೆಯುತನಾನೇ ಆರತಿ ಬೆಳಗಿದೆನೆ 3 ಎತ್ತೆತ್ತ ನೋಡೆ ಪ್ರಭೆ ತಾಮೊತ್ತ ಮೊತ್ತವಿದೆ ಕೋಚಿತ್ತದಿಂದಲಿ ಚಿಜ್ಯೋತಿಯ ಪ್ರಭೆನಿತ್ಯದಿ ಬೆಳಗಿದೆನೆ 4 ಅನಂತಾನಂತವ ಮುಚ್ಚಿಹುದುಅನಂತಾನಂತವನುಅನಂತ ಚಿದಾನಂದ ಗುರು ತಾನೆ ಎಂದಾರತಿ ಬೆಳಗಿದನೆ 5
--------------
ಚಿದಾನಂದ ಅವಧೂತರು
ಇರಲೇ ಬಾರದು - ಇಂಥಲ್ಲಿಇರಬಾರದಿಂದ ......... ವರೆ ಭಯಂಕರದುರುಳ ಜನ ಸಹವಾಸದಲ್ಲಿ ದುಷ್ಟಮೃಗವಿದ್ದಡವಿಯಲ್ಲಿ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಉರಗಗಳು ಸೇರಿಕೊಂಡ ಸದನಗಳಲ್ಲಿಕರುಬರಿದ್ದ ಊರಗಳಲಿ ಕಲಹ ಹೆಚ್ಚಿದ ರಾಜ್ಯದಲ್ಲಿಪರಹಿಂಸೆಯ ಮಾಡಲಂಜದ ಪಾಪಿಗಳಿದ್ದಲ್ಲಿ 1ಅವಿವೇಕದ ಪ್ರಭುಸೇವೆಯಲ್ಲಿ ಆತ್ಮಸೌಖ್ಯವಿಲ್ಲದಲ್ಲಿಲವಶೇಶವು ಸದ್ವಿದ್ಯಾ ಮಾತ್ರ ಲಾಭವಿಲ್ಲದಲ್ಲಿನವಯೌವನಭರಿತ ನಾರಿ ತಾನೊಬ್ಬಳಿದ್ದಲ್ಲಿಅವನಿಯೊಳಗರ್ಥಪ್ರಾಪ್ತಿಇಲ್ಲದಂಥಲ್ಲಿ2ಮಾನವಲ್ಲದ ಸಭೆಯಲ್ಲಿ ಮಾತ ಕದಿವ ನ್ಯಾಯದಲ್ಲಿನೂನ್ಯಪೂರ್ಣ ಎನ್ನವವನ ಉಟ್ಟಕಾಲದಲ್ಲಿಶ್ರೀನಾಥ ಶ್ರೀ ಪುರಂದರವಿಠಲ ರೂಪಗಳುಅನಂತಾನಂತವೆಂದು ಅರಿಯದ ಅದ್ವೆಷ್ಣವರಲ್ಲಿ 3
--------------
ಪುರಂದರದಾಸರು