ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಋ. ದೇವತಾ ತಾರತಮ್ಯ ದೇವ - ದೇವತಾ ತಾರತಮ್ಯ ವಾರುಣಿ ಸತಿ ಪರ್ಜನ್ಯ ಸುರರು ಸುರರು ಅಜಾನಜರು (ಸುರಸೇವೆ ಮಾಡುವರು)ಹರಿಯ ಹೃದಯಕಾಂಬುವರು ಚಿರ ಪಿತೃಗಳವರು ದೇವರಗಾಯಕ ಗಣವುನರ ಗಾಯಕರು ಭೂಮಿಧರರು ನರಸೋತ್ತಮರುಚಿರ ಜೀವ ಸ್ಥಿರ ಜೀವ ಸರ್ವಜೀವಿಗಳಿಂದ ಪರಮಸೇವೆಯಕೊಂಡುಪುರುಷಾರ್ಥಗಳ ನೀವ ಹರಿಯ ನುತಿಸುವೆ ನಿನ್ನಾ ಕರುಣದಲಿನೋಡೆನ್ನ ವರ ಇಂದಿರೇಶಜತೆ :ತಾರತಮ್ಯಾದಿ ನುತಿ ಸಾರುವ ಜನರಿಗೆ ಮಾರಮಣ ಇಂದಿರೇಶ ತೋರುವನು
--------------
ಇಂದಿರೇಶರು
ತರತಮದಿ ಶರಣು ಮಾಡುವೆ ನಿಮಗೆ ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು ನಿರುತ ಬಿಡದೆ ಮನ ಸಿರಿಹರಿ ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಪ ಪರಮೇಷ್ಠಿ ವಾಯು ಸರಸ್ವತಿ ಭಾರತೀ ಉರಗ ಈಶ ಹರಿ ಸತಿಯರು ಮೂ ರೆರಡು ಜನರು ಆ ತರುವಾಯ ಸೌಪರ್ಣಿ ಸಿರಿ ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ ವರು ಸನಕಾದ್ಯರು ದುರಿತಶಾಸನ ಶಶಿ ತರಣಿ ಶತರೂಪ ವರುಣ ನಾರದರ 1 ಮುನಿಗಳ ಶ್ರೇಷ್ಠ ಭೃಗು ಅನಲ ಪ್ರಸೂತಗಾಧಿ ತನುಜ ವಾರಿಜಾಜನ್ನತನಯರು ವೈವಸ್ವತ ಸೂರ್ಯ ದನು ಪ್ರವಾಹವೆಂಬ ಅನಿಲನ್ನ ತಳೋದರಿ ಅನಿಲದೇವಜ ಅಶ್ವಿನಿ ದೇವತೆಗಳು ಅನಳಾಕ್ಷಸುತ ಧನಪತಿ ಪ್ರಹ್ಲಾದ ಗುಣಿಸುವೆ ವಸು ಏ ಳನು ದಶರುದ್ರರು ಇನಿತರೊಳಗೆ ಒಬ್ಬನ ಬಿಟ್ಟನು ದಿನ 2 ದಶ ವಿಶ್ವದೇವತರು ಸ್ವಶನರೊಳಗೆಗೀರ್ವರ ರಸದ್ಯುನವಕೋಟಿ ತ್ರಿದಶರೂಪ ಪಿತ್ರರೂ ಎಸವ ಸೋಮ ಪುನರ್ವಾಪಸರಿಪಶತಸ್ಥರು ನಸುನಗೆ ಕರ್ಮಜ ಋಷಿ ಈರ್ವರು ಮನು ಕುಶಲ ಸಪ್ತ್ತರಿಗೆ ತುತಿಸೆ ಕಾಲಕಾಲದಿ 3 ಮಾಂಧಾತ ಬಲಿ ಶಶಿಬಿಂದುವೆ ಪ್ರಿಯವ್ರತ ಪರೀಕ್ಷಿತ ನಂದ ಕಕುಸ್ಥ ಗಯ ಕುಂದದೆ ಯದುಕುಲದಿಂದ ಬಂದ ಹೈಹಯನು ಚಂದ್ರನ ಮಡದಿ ಏಳೊಂದನೆ ಸೂರ್ಯನು ಮಂದಹಾಸಾಂಬುಜ ಬಾಂಧವನಸತಿ ಕಲದರ್ಪನಸೂಸೆ ವೃಂದಾರಕರಿಗೆ 4 ಸದಮಲ ಸ್ವಾಹಾದೇವಿ ಬುಧಾ ಉಷಾದೇವಿ ಶನಿ ಮುದದಿಂದ ಪುಷ್ಕರ ಸಹೃದಯ ತುಂಬರರಿಂದ ಮೊದಲಾಗಿ ನೂರುಮಂದಿ ತ್ರಿದಶ ಗಂಧರ್ವರು ಚದುರೆ ಊರ್ವಸಿ ರಂಭೆ ಅದಿತಿ ಕಶ್ಯಪದಿತಿ ಹದಿನಾರು ಸಾವಿರ ಬುಧನ ಮಕ್ಕಳು ತಪೋನಿಧಿಗಳು ಎಂಭತ್ತು ತದುಪರಿ ಅಜಾನಜ ತ್ರಿದಶರು ಓಜಸ್ತರೆದರಾಗಿ ನಾನಿಂದು 5 ಹರಿಭಕ್ತರಾದ ಅಪ್ಸರ ಸ್ತ್ರೀಯರು ಕೆಲಕೆಲವು ಮರಳೆ ಚಿರಾಖ್ಯನಾಮದಿರುತಿಪ್ಪ ಪಿತೃಗಳು ಪರಿಪರಿ ನೂರುಕೋಟಿ ಪರಮಋಷಿಗಳಿಗೆ ಸುರ ಗಂಧರ್ವರ ವಿಸ್ತರ ಮನುಜ ಗಂಧರ್ವ ಧರಿಣಿಜಾಕವಿ ಮೇಲರಿದು ಜಯಂತಗೆ ಕರ ಮುಗಿವೆ ಕ್ಷಿತಿಪರನು ಕೊಂಡಾಡುತ ಇರುಳು ಹಗಲು ಉತ್ತಮರ ಮನುಜರ ಪಾಡಿ ನಿರುತ ಜಂಗಮ ಸ್ಥಾವರಗಳ ನೋಡುತ 6 ಭುಜಗಶಯನನಿಂದ ಸೃಜಿಸಿದ್ದ ಸರ್ವರಿಗೆ ನಿಜವಾಗಿ ಶಿರವಾಗಿ ಭಜಿಸುವೆ ಚನ್ನಾಗಿ ತ್ರಿಜಗದೊಳಗೆ ಎನ್ನ ರಜ ತಾಮಸ ಗುಣದ ವೃಜವೆ ಓಡಿಸಿ ನಿತ್ಯಸುಜನ ಮಾರ್ಗವ ತೋರಿ ರಜನಿ ಚರಾಂತಕ ವಿಜಯವಿಠ್ಠಲನ್ನ ಭಜಿಪೆನದಕೆ ನಿಮ್ಮ ನಿಜವ್ಯಾಪಾರದಿ ಸೃಜಿಸಿ ಕೊಡುತ ಧರ್ಮ ವೃಜಗಳೊದಗಿಸುತ್ತ ಕುಜನ ಮತದ ಮೇಲೆ ಧ್ವಜವೆತ್ತಿಸುವುದು 7
--------------
ವಿಜಯದಾಸ
ಶ್ರೀ ಶನೈಶ್ಚರ ಸ್ತೋತ್ರ96ಪಾಹಿಶ್ರೀನರಸಿಂಹಪ್ರಿಯ ಶನೈಶ್ಚರನೆ ನಮೋ ಸಂತತಪಾಹಿನಮೋ ಗ್ರಹರಾಜಶೌರಿ ಮಹೇಶ್ವರನೇ ಕೃಪಾಕರಪಪೃಥ್ವಿ ತತ್ವಾಭಿಮಾನಿಯೇ ನಮೋ ಕರ್ಮಪನು ಎಂಬಪುಷ್ಕರಮತ್ತು ಅಜಾನಜರು ಋಷಿಗಂಧರ್ವ ಮಹಾಸಮುದಾಯಕೆಮೇದಿನೀ ರಾಜರು ಮನುಷ್ಯರು ಸರ್ವರಿಗೂಗುರುಈಶ್ವರನೀ ದಯದಿ ಹರಿದಾಸರನ್ನ ಸಲಹುತಿಯೋ ಶರಣೆಂಬೆನೋ 1ಸೂರ್ಯಛಾಯಸೂನು ಕಾಲರೂಪಿ ಮಹಾಗ್ರಹ ನಮೋಕಾಯೊ ಜಟಿಲನೇವಜ್ರರೋಮನೇ ದಾನವರಿಗೆ ಭಯಂಕರತ್ರ್ಯಯಂಬಕ ನಾರದರಿಗುಪದೇಶಿಸಿ ಕೊಂಡಾಡಿದ ನಿನ್ನನ್ನುಖ್ಯಾತ ರಘುವಂಶೋತ್ಥ ಅತಿ ವಿಖ್ಯಾತ ದಶರಥ ಕೀರ್ತಿತ 2ಜ್ಞಾನ ಚಕ್ಷುರ್ನಮಸ್ತೇಸ್ತು ಕಶ್ಯಪಾತ್ಮಜಸೂನವೇತುಷ್ಟೋದದಾಸಿ ವೈರಾಜ್ಯಂ ರುಷ್ಟೋ ಹರಸಿ ತಕ್ಷಣಾತ್ನಿನ್ನನು ದಶರಥನು ಸ್ತುತಿಸಿ ನಮಿಸೆ ವರಗಳನಿತ್ತು ನೀಕ್ಷೋಣಿಜನ ಸಂರಕ್ಷಣೆಗೆ ಬಗೆ ಪಾದ್ಮ ಉಕ್ತದಿ ಅರುಹಿದಿ 3ಗಂಗಾ ಮಹಿಮ ರಕ್ಷೋಭುವನಪ್ರಸ್ಥಾನೋಕ್ತವು ತ್ವತ್‍ಕೃತತುಂಗಮಹಿಮ ಶ್ರೀಲಕ್ಷ್ಮೀ ಭೂಮಾನಾರಸಿಂಹನ ಸ್ತೋತ್ರವುರಾಘವಕೃತ ತ್ವತ್‍ಕೃತ ಈ ನುಡಿಗಳ್ ಪಠಿಸಿ ಕೇಳ್ವರ್ಗೆಶೋಕನೀಗಿ ಇಷ್ಟ ಲಭಿಸುವುದು ನೃಹರಿಪ್ರಿಯ ನೀ ಒದುಗುವಿ 4ವನರುಹಾಸನನತಾತಪ್ರಸನ್ನ ಶ್ರೀನಿವಾಸ ನೃಕೇಸರಿಘನ್ನದಯದಿ ಪ್ರಸನ್ನನಾಗಿ ಒಲಿಯೆ ಸಾಧನವಾಗುವಜ್ಞಾನ ಭಕ್ತಿ ವೈರಾಗ್ಯ ಸಂಪತ್ ಅಯುರಾರೋಗ್ಯ ಇತ್ತು ನೀಎನ್ನ ತಪ್ಪುಗಳ ಮನ್ನಿಸಿ ಎನ್ನಪಾಹಿಸತತ ಶನೈಶ್ಚರ5ಪ
--------------
ಪ್ರಸನ್ನ ಶ್ರೀನಿವಾಸದಾಸರು