ಒಟ್ಟು 11 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏರ ರಂಗಕಿಷನ್ ದಾರಿ ಚೂಪರಾ ಮಾರ ಸುಂದರ ಪ ಮೊರೆ ಗಾಣರೆ ವಶವೊ ಮಾರಜನಕನೇ ಅ ಸುಜನ ಭಜಕನೆ 1 ರಾರಯನುಚು ಮೇರೆ ಮೂಮೆ- ಕರಿಯಲೇದೆರಾ ಕೋರ ಅನುಚು ತೇರೆ ಚರಣ-ಲೇದು ಕಾದುರಾ 2 ಓಡಿಬನ್ನಿ ಸುಜನರೆಲ್ಲ ಭಜನೆ ತ್ರಿಜಗ ಪೂಜಿತನೆಂಬೊ ಅಜನಪಿತನಗೂಡುವಾ 3 ಧರೆಯೊಳಧಿಕ ಮಧುರ ನಗರ ಪುರಿಯವಾಸನೇ ಯನ್ನ ಭವವಿನಾಶನೇ ಕೋಟಿ ರವಿಪ್ರಕಾಶನೆ ನಿನ್ನ ಚರಣ ಗುರುವು ತುಲಶಿರಾಮದಾಸನೇ 4
--------------
ಚನ್ನಪಟ್ಟಣದ ಅಹೋಬಲದಾಸರು
ಕವನ ಪೇಳು ನೀ ಮನವೆ ಆವಾವ ನೆವದಿದಾದ್ದು ಘನವೆ ಪ ಭುವನ ಪಾವನ ಲಕ್ಷ್ಮೀ - ಧವನ ನವಗುಣ ರೂಪ ಕ್ರಿಯವನ್ನೆ ಅ.ಪ ಸ್ತವನ ಮಾಡಬೇಡÀ ನ್ಯಪನನ್ನು ನವ ಯುವತೇರ ಮೆಚ್ಚಬೇಡ ಭವ ಮತ ಬಿಡಬ್ಯಾಡ ಭವದೊಳು ಮಮತೆ ಕೊಡಬ್ಯಾಡÉ 1 ಹರಿಕಥಾ ಶ್ರವಣ ಬಿಡಬ್ಯಾಡ ಹರಿದಾಸರೊಳು ಛಲ ಇಡಬ್ಯಾಡ ದುರುಳ ಮಾಯವಾದಿರ ಸ್ನೇಹ ಅರಿತು ಮಾಡಲು ಅದು ಮಹಾಮೋಹ 2 ಅಜನಪಿತನ ಸ್ಮರಣೆ ಮರಿಬ್ಯಾಡ ರುಜುಮಾರ್ಗವ ಬಿಟ್ಟು ನಡಿಬ್ಯಾಡ ವಿಜಯ ರಾಮಚಂದ್ರವಿಠಲನ ಮರೆದು ಗೋಜು ಕರ್ಮವ ಮಾಡಲಲ್ಲೇನು ಮಾತು 3
--------------
ವಿಜಯ ರಾಮಚಂದ್ರವಿಠಲ
ಪಾದುಕೆಗಳ ದಯಪಾಲಿಸು ಪರಮ ಪಾವನ ಮಹಿಮ ಸುದೇವ ಲಲಾಮ ಪ ನೀ ದಯದಿಂ ತವಪಾದ ಪಯೋಜಗ ಳಾದರದಲಿ ಕೊಡು ಹೇ ದಯಧಾಮ ಅ.ಪ. ಅಜನವ್ಯಯನಪ್ರಾಕೃತ ಮಹಿಮನು ಅಜನಪಿತನು ತನ್ನಿಚ್ಛೆಯೊಳು ಅಜಸುತ ದಶರಥ ಸುತನೆಂದೆನಿಸಿದ ತ್ರಿಜಗ ನೋಡೆ ಆಶ್ಚರ್ಯದೊಳು 1 ತುಂಗಮಹಿಮ ತವ ಮಂಗಳಕರ ಚರ ಣಂಗಳು ಈ ತ್ರಿಜಗಂಗಳ ಪಾಲಿಪುವು ಅಂಗಜಕೋಟಿ ಶುಭಾಂಗನೆ ತವಪದ ಭೃಂಗನೆನಿಸಿ ಕೃಪಾಪಾಂಗದಿ ಈಕ್ಷಿಸೊ ಮಂಗಳಕರ ರಘುಪುಂಗವ ಕರಿಗಿರಿ ರಂಗ ನೃಸಿಂಹ ಸೀತಾಂಗನೆಯರಸ 2
--------------
ವರಾವಾಣಿರಾಮರಾಯದಾಸರು
ಪ್ರಸನ್ನ ಶ್ರೀ ನರಸಿಂಹ (ಪ್ರಹ್ಲಾದ ಚರಿತೆ)] ಪ್ರಥಮ ಅಧ್ಯಾಯ - ಹಿರಣ್ಯಕಶಿಪು ಪೂರ್ವ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ತೋಯಸ್ಥ ಪತ್ರಸ್ಥ ತೋಯಜಾಲಯಾ ಸ್ತುತ್ಯ ಅಂಡ ಸ್ರಷ್ಟಾ ಸರ್ವಸ್ಥ ಅಚ್ಯುತಾನಂತ ಗೋವಿಂದ ನೀ ಸಜ್ಜನರ ಭಯ ನಿವಾರಣ ಮಾಳ್ಪಿ ತೋರಿ ಆಗಾಗ 1 ಪ್ರಳಯ ಜಲಚರ ಶೈಲಧರ ಧರೋದ್ಧರ ನಮೋ ಬಾಲಕಗೆ ಒಲಿದು ಬಲಿಯಲಿ ದಾನ ಕೇಳಿ ಖಳ ಕುಪಾಲರ ಸದೆದು ಜಲಧಿಯ ಬಂಧಿಸಿದ ಲಲನೇರ ರಂಜಿತ ಶಿಶು ಶಂಭಳದಿ ತೋರ್ವಿ 2 ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು ದಿಗ್ವಾಸಸ ಶಿಶುರೂಪ ಆ ಮುನಿವರರ ಲೆಕ್ಕಿಸದೇ ತಡೆದರು ದ್ವಾರಪಾಲಕರು 3 ಜಯವಿಜಯರೆಂಬ ಆ ದ್ವಾರಪಾಲಕರಿಗೆ0 ಮಾಯೇಶ ಹರಿ ಪ್ರಿಯತರರು ಮುನಿವರರು ಈಯಲು ಶಾಪವ ಆ ವಿಷ್ಣು ಪಾರ್ಶದರು0 ದೈತ್ಯಜನ್ಮವ ಹೊಂದಿದರು ಪತನವಾಗಿ 4 ಸುತಪೋನಿಧಿ ಕಶ್ಯಪ ತೇಜೋಲ್ಬಣದಿಂ ದಿತಿದೇವಿ ಜಠರದಲಿ ವಿಷ್ಣು ಪಾರ್ಶದರು ಪತಿತ ಆ ಜಯ ವಿಜಯರು ಪ್ರವೇಶಿಸಿದರು ದಿತಿ ಹಡೆದಳು ಗಂಡು ಮಕ್ಕಳೀರ್ವರನು 5 ದಿತಿದೇವಿ ಅಗ್ರಸುತ ಹಿರಣ್ಯಕಶಿಪು ಜಯ ದಿತಿ ಅವರಸುತ ವಿಜಯನೇ ಹಿರಣ್ಯಾಕ್ಷ ಉಪಟಳ ಕೊಟ್ಟನು ಈ ಧರೆಯ ಅಬ್ಧಿಯ ಕೆಳಗೆ ಅಡಗಿಸಿದ 6 ಸುರಸುಜನ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು ಕರದಿಂದ ಹೊಡೆದು ಹಿರಣ್ಯಾಕ್ಷನ ಕೊಂದು ಧರೆಯ ಲೀಲೆಯಿಂದ ಮೇಲೆತ್ತಿತಂದಿ ವರಾಹ ಹರಿ ನೀನು 7 ಜಯ ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 -ಇತಿ ಪ್ರಥಮಾಧ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಹಿರಣ್ಯಕಶಿಪು ವರ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಮೂರ್ಜಗದ ದೊರೆ ಹರೇ ನೀ ತನ್ನ ತಮ್ಮನ ಭಂಜಿಸಿದೆ ಎಂದು ಕಡುಕೋಪಗೊಂಡು ದುರ್ಜನ ದಾನವ ವಂದಿತ ಹಿರಣ್ಯಕನು ರಜಸ್ತಮೋಚ್ಛದಿ ದ್ವೇಷ ಮಾಡಿದನು ನಿನ್ನಲ್ಲಿ 1 ಶೂಲದಿಂ ಅಚ್ಯುತನ ಕುತ್ತಿಗೆ ಕತ್ತರಿಸಿ ಗಳರುಧಿರ ತರ್ಪಣ ಕೊಡುವೆ ಎನ್ನುತ್ತ ಖಳ ದೈತ್ಯ ಪ್ರಮುಖರಿಗೆ ಹೇಳಿದನು ವೈಷ್ಣವ ಸ್ಥಳ ದ್ವಿಜ ಗೋ ಭಕ್ತರನ್ನ ತರಿ ಎಂದ 2 ಗರ್ಜಿಸುತ ದೈತ್ಯರು ಪುರ ಗ್ರಾಮ ಆಶ್ರಮ ವ್ರಜಕ್ಷೇತ್ರ ದಹಿಸÀಲು ಹಿರಣ್ಯಕಶಿಪು ಅಜೇಯಾಜರಾಮರತ್ವವ ಅಪ್ರತಿ ಮುಖ್ಯ ರಾಜತ್ವ ಹೊಂದಲು ತಪಸ್ಸು ಮಾಡಿದನು 3 ಊಧ್ರ್ವದಲಿ ಬಾಹುಗಳ ನಭದಲಿ ದೃಷ್ಟಿಯು ಪಾದಾಂಗುಷ್ಟ ಮಾತ್ರದಿ ನಿಂತು ತಪವ ಗೈದನು ಆ ತಪೋಧೂಮಾಗ್ನಿ ಪೀಡಿತ ತ್ರಿದಿವರು ಮೊರೆ ಇಟ್ಟರು ಬ್ರಹ್ಮನಲ್ಲಿ 4 ಪದುಮಭವ ಭೃಗು ದಕ್ಷಾದಿಗಳೊಡೆಯೈದು ದೈತ್ಯೇಶ್ವರ ಹಿರಣ್ಯಕನ ಆಶ್ರಮವ ಭದ್ರಂತೇ ತಪಸಿದ್ಧಿ ಆಯಿತು ವಶೀಕೃತನಾದ ಉತ್ತಿಷ್ಠೋತ್ತಿಷ್ಠ ವರ ಕೊಡುವೆನು ಎಂದ 5 ಬ್ರಹ್ಮನ್ನ ನೋಡಿ ಹಿರಣ್ಯಕನು ಸನ್ನಮಿಸಿ - ಬ್ರಹಾಂತರ್ಗತ ಹರಿ ವಿವಕ್ಷಿತ ಗುಣಗಳ ಬ್ರಹ್ಮ ಹರುಷದಿಂದಲಿ ಸಮ್ಯಕ್ ಕೀರ್ತನೆ ಮಾಡಿ ಆ ಹಂಸವಾಹನನ ವರಗಳ ಬೇಡಿದನು 6 ಸರೋರುಹಾಸನ ಸೃಷ್ಟ ಸರ್ವಭೂತಂಗಳು ಮೃಗ ಪ್ರಾಣ ಉಳ್ಳವು ಇಲ್ಲದವು ಹೊರ ಒಳಗೆ ಭೂಮ್ಯಾಂಬರ ದಿವಾ ರಾತ್ರಿಯು ಸುರಾಸುರ ಮೃತ್ಯು ಮಾ ಭೂನ್ಮ್‍ಮ ಎಂದ 7 ಏಕಪಥ್ಯವು ಅಪ್ರತಿ ಶಕ್ತಿಮತ್ಯವವು ಲೋಕಪಾಲಕರಂತೆ ಬಲವು ಮಹಿಮೆಗಳು ಯೋಗಿ ತಪಸ್ವಿಗಳಂತೆ ಸಿದ್ಧಿಗಳು ಸರ್ವವು ಬೇಕು ತನಗೆಂದು ವರ ಬೇಡಿದ ಬ್ರಹ್ಮನ್ನ 8 ಶತಧೃತಿಯು ಈ ದುರ್ಲಭ ವರಗಳನ್ನಿತ್ತು ತಾ ತೆರಳಿದನು ದೈತ್ಯನಿಂ ಪೂಜೆಗೊಂಡು ಭ್ರಾತೃವಧ ಅನುಸ್ಮರಿಸಿ ಹರಿದ್ವೇಷ ಬೆಳಸಿದನು ಲಬ್ಧವರ ದೈತ್ಯೇಶ ಇನ್ನೂ ಹೆಚ್ಚಾಗಿ 9 ನರಸುರಾಸುರ ಋಷಿ ಗರುಡೋರಗ ಸಿದ್ಧ ಚಾರಣ ವಿದ್ಯಾಧರ ಯಕ್ಷ ಗಂಧರ್ವ ಪಿತೃ ಪ್ರೇತ ಭೂತಪತಿ ರಾಕ್ಷಸ ಪಿಶಾಚೇಶ ಸರ್ವರನು ಜೈಸಿ ತನ್ನವಶ ಮಾಡಿಕೊಂಡ 10 ಮೂರ್ಲೋಕಂಗಳಲ್ಲಿ ದಶದಿಕ್ಕುಗಳಲ್ಲಿ ಈ ಹಿರಣ್ಯಕಶಿಪು ತನ್ನ ಜಯಭೇರಿ ಹೊಡೆದ ಸರ್ವಲೋಕಪಾಲರ ತೇಜಃಸ್ಥಾನಗಳ ಅಪ - ಹರಿಸಿ ತ್ರಿವಿಷ್ಟಪ ಭೋಗದಲಿ ಮನಸ್ಸಿಟ್ಟ 11 ಅಜಿತೇಂದ್ರಿಯ ಹೇಯ ಭೋಗರತ ಅಹಂಕಾರಿ ಮೂರ್ಜಗಾರಿಯು ಧರ್ಮ ಆಚಾರ ದ್ವೇಷಿ ನಿರ್ಜರರು ಅವನಿಂದ ಹಿಂಸೆ ತಾಳದೆ ವಿಷ್ಣೋ ತ್ರಿಜಗದೀಶನೇ ಮೊರೆ ಹೊಕ್ಕರು ನಿನ್ನಲ್ಲಿ 12 ಅಚ್ಯುತ ಈಶ್ವರ ನಿನ್ನ ಭದ್ರವಾಣಿ ಅಭಯ ಹೊಂದಿ ಸುರವರರು ನಿರೀಕ್ಷಿಸಿದರು ಪ್ರಶಾಂತ ಮಹಾತ್ಮಾ ನಿರ್ವೈರ ಪ್ರಹ್ಲಾದ ಹುಟ್ಟುವ ಕಾಲವನು 13 ಜಯತು ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 13 -ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ - ತೃತೀಯ ಅಧ್ಯಾಯ - ಬಾಲಕ ಪ್ರಹ್ಲಾದ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಯುಕ್ತ ಕಾಲದಿ ಹೇಮಕಶಿಪುಗೆ ಐದು ಮಕ್ಕಳು ಹುಟ್ಟಿದರು ನಾಲ್ವರು ಗಂಡು ಮಕ್ಕಳು ನಾಲ್ವರಲ್ಲಿ ಪ್ರವರ ಪ್ರಹ್ಲಾದನು ಅಕಳಂಕ ಗುಣಶ್ರೇಷ್ಠ ಮಹದುಪಾಸಕನು 1 ಸತ್ಯಸಂಧನು ಶೀಲಸಂಪನ್ನ ಬ್ರಹ್ಮಣ್ಯ ಜಿತೇಂದ್ರಿಯ ಸಮದರ್ಶಿ ಆರ್ಯರ ವಿಧೇಯ ಸ್ನಿಗ್ಧರಿಗೆ ಭ್ರಾತೃವತ್ ಯಥಾದೇವೋ ತಥಾಗುರೋ ಭೂತಪ್ರಿಯ ಸುಹೃತ್ತಮ ದೀನವತ್ಸಲನು 2 ವಿಧ್ಯಾರ್ಥಿ ರೂಪಾದಿಗಳ ಗರ್ವ ಇವಗಿಲ್ಲ ಶ್ರುತ ದೃಷ್ಟ ವಿಷಯದಲಿ ಗುಣಗ್ರಾಹಿಯು ಶಾಂತನು ದಾಂತನು ಸಾಧುಗಳಲಿ ಪ್ರಿಯ ಸದಾ ಸ್ವಭಾವದಿ ಶ್ರೀ ವಿಷ್ಣುಭಕ್ತಿ 3 ವಾಸುದೇವ ನಿನ್ನಲ್ಲೇ ಸರ್ವದಾ ಮನವನು ನೆಲಸಿ ಈ ಬಾಲ ಸರ್ವ ನಡೆನುಡಿ ಊಟ ಶಯನ ಪರ್ಯಟನ ಸರ್ವಾವಸ್ಥೆಯಲೂ ನಿನ್ನ ಸ್ಮರಿಸುವನು 4 ಅಂಬುಜೋದ್ಭವ ತ್ರ್ಯಿಂಬಕ ಮುಖ್ಯವಿನುತ ನಿನ್ನ ಅಂಬುಜಾಂಘ್ರಿಗಳನ್ನ ಧ್ಯಾನಿಪ ಈ ಬಾಲಕನ ಅಂಬಕದಿ ಸುಜ್ಞಾನ ಭಕ್ತಿ ಪುಳಕಾಂಬುವು ತುಂಬಿ ತುಳುಕಾಡುವುದು ಕಂಡಿಹರು ಅಂದು 5 ಒಮ್ಮೆ ನಗುವನು ಒಮ್ಮೆ ರೋದಿಸುವನು ಒಮ್ಮೆ ಸುಮ್ಮನಿರುವ ಹರಿ ಪ್ರೇಮಾನಂದದಲಿ ಅಮ್ಮಮ್ಮ ಭಕ್ತಿಯಲಿ ಕೂಗಿ ಕುಣಿವನು ಮಹಾನ್ ರಮೆಯರಸ ನಿನ್ನ ದಾಸಾಗ್ರಣಿಯು ಪ್ರಹ್ಲಾದ 6 ಮಹಾತ್ಮನು ಮಹಾಭಾಗ ಮಹಾಭಾಗವತನು ಮಹಾಕಾರುಣಿಕ ಪ್ರಹ್ಲಾದಗೆರಗುವೆನು ಅಹರ್ನಿಶಿ ಧೃತಿಸ್ಥ ಹರಿ ನಿನ್ನಲ್ಲಿ ಭಕ್ತಿ ಇಹಪರದಿ ಸೌಭಾಗ್ಯ ಎಮಗೀಯಲೆಂದು 7 ಜಯ ಗುಣಾರ್ಣವ ಭೂಮನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 - ಇತಿ ತೃತಿಯಾ ಅಧ್ಯಾಯ ಸಂಪೂರ್ಣಂ - ಚತುರ್ಥ ಅಧ್ಯಾಯ ಪ್ರಹ್ಲಾದರ ವಿಧ್ಯಾಭ್ಯಾಸ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ದೈತ್ಯರಾಜನು ಪ್ರಿಯಪುತ್ರ ಪ್ರಹ್ಲಾದನಿಗೆ ವಿದ್ಯೆಕಲಿಸಲು ಶಂಡಾಮರ್ಕರು ಎಂಬ ಬೋಧಕರ ಏರ್ಪಾಡು ಮಾಡಿಸಲು ಆ ಮಹಾನ್ ಇತರ ಬಾಲಕರೊಡೆ ಕೂಡಿ ಓದಿದನು 1 ವಿದ್ಯೆ ಕಲಿಯುವಾಗ ಇತರ ಬಾಲರ ಮೀರಿ ಪ್ರತಿಭೆ ತೋರಿಸಿದನು ಬಾಲಪ್ರಹ್ಲಾದ ಕೇಳ್ದ ಕಲಿತದೆÀ್ದಲ್ಲಿ ಸಾಧು ಹೇಳೆಂದು 2 ಸಂಸಾರಿ ಜೀವರುಗಳು ಸದಾ ಐಹಿಕ ನಿಸ್ಸಾರ ವಿಷಯಂಗಳಲ್ಲಿ ಮುಳುಗಿ ತಮಃಸಿಲಿ ಬೀಳದಿರೆ ಸಾಧು ಜನಸಂಗ ಶ್ರೀಶ ಹರಿ ಸರ್ವವಂದ್ಯನ ಆಶ್ರಯಿಪುದು 3 ಹೀಗೆ ಪ್ರಹ್ಲಾದ ಪೇಳಲು ಹಿರಣ್ಯಕ ಕೇಳಿ ಪರ ಬೋಧಿತನಾಗಿಹನೆಂದು ನೆನೆದು ಶುಕ್ರ ಸುತರು ತಮ್ಮ ಮನೆಯಲ್ಲೇ ಇಟ್ಟುಕೊಂಡು ತಕ್ಕ ವಿಧದಲಿ ಬುದ್ಧಿ ತಿದ್ದಿಸುವುದು ಎಂದ 4 ಗುರುಗಳು ಮನೆಯಲ್ಲಿ ಒಳ್ಳೆಮಾತಿಂದಲಿ ಪರಕೃತವೋ ಸ್ವತಃ ಕೃತವೋ ಈ ಹರಿಪಕ್ಷಬುದ್ದಿ ಅನೃತವಾಡದೆ ಸತ್ಯ ಪೇಳೆಂದು ಕೇಳಿದರು ಭಾಗವತ ಪ್ರಹ್ಲಾದ ಬಾಲನ್ನ 5 ಸತ್ತಾ ಪ್ರವೃತ್ತಿ ಪ್ರತೀತ್ಯಾದಿಪ್ರದ ಸರ್ವ - ಚಕ್ರಧರ ವಿಷ್ಣು ವಿಧಿ ಶಿವಾದೀಡ್ಯನಲಿ ರತತಾನು ಕಾಂತವು ಅಯಸ್ಸನ್ನು ಸೆಳೆವಂತೆ ಎಂದು 6
--------------
ಪ್ರಸನ್ನ ಶ್ರೀನಿವಾಸದಾಸರು
ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ ಬಂದು ನಿಲ್ಲೆಂದು ನಿನ್ನ ವಂದಿಸ್ವರವ ಬೇಡುವೆ ನಾ ನಂದನ ಸುಂದರ ಕೃಷ್ಣ ಬಂದೆನಿಲ್ಲಿಗೆ ಪ ಪಾಲಶರಧಿ ಆಲದೆಲೆಯಲ್ಯೋಗನಿದ್ರೆ ಮಾಡಿ ನಿನ್ನ ನಾಭಿಕಮಲನಾಳದಿಂದ ಆಗ ಅಜನ ಪಡೆದ ಹರಿಯೆ 1 ಸಾಗರವ ಬಿಟ್ಟು ನಾಗಶಯನ ಶೂರಸುತನಲ್ಲುದಿಸಿ ಯೋಗಿಗಳ ಹೃದಯಕಮಲ ಆಲಯವ ಮಾಡಿದ್ದ ದೊರೆಯೆ2 ಕಂದನಾಗಿ ಬಂದು ಕಾಳಿಂದಿ ದಾಟಿ ನಂದಗೋಕುಲ ವೃಂದಾವನದಿ ಗೋವುಕಾಯ್ದ ಇಂದಿರೇಶ ಅಜನಪಿತನೆ 3 ಅಷ್ಟಮಠದ ಯತಿಗಳಿಂದ ಮುಟ್ಟಿಪೂಜೆಗೊಂಬುವಂಥ ಶ್ರೇಷ್ಠರೊಳಗೆ ಶ್ರೇಷ್ಠ ನಿನ್ನುತ್ಕøಷ್ಟಮಹಿಮೆ ನೋಡಲೀಗ4 ಧ್ವಜ ವಜ್ರಾಂಕುಶ ರೇಖವುಳ್ಳ ಪದುಮಪಾದ ನೋಡಲೀಗ5 ದೊಡ್ಡ ಮುತ್ತು ವಜ್ರದ್ಹರಳಿನಡ್ಡಿಕೆ ಉಡಿದಾರ ಹೊಳೆಯೆ ಒಡ್ಯಾಣವನೆಯಿಟ್ಟ ಜಂಘÉ ಜಾನುದ್ವಯವ ನೋಡಲೀಗ6 ಉದರದಲ್ಲೀರೇಳುಲೋಕ ಅಡಗಿಸಿದನಂತಶಯನ ಪದುಮ ಪೊಕ್ಕಳಿಂದ ಬ್ರಹ್ಮನ ಪಡೆದ ಪರಮಾತ್ಮನ್ನ ನೋಡ7 ವಂಕಿ ಬಾಹುಪುರಿಗಳಿಂದ ಕಂಕಣ ಭೂಷಣಗಳೊಪ್ಪೆ ಕರವ ನೋಡ8 ನೀಲವರಣ ನಿನ್ನ ಬೆರಳು ಸಾಲು ಮಾಣಿಕ್ಯ ಮುದ್ರಿಕಿಂದ್ಹೊಳೆಯೆ ಲೀಲೆಯಿಂದ ಗಿರಿಯೆತ್ತಿದ ಗೋಪಾಲಕೃಷ್ಣ ನಿನ್ನ ನೋಡ 9 ವೈಜಯಂತಿ ತೋರ ಮುತ್ತಿನೆಳೆÀಗಳ್ಹೊಳೆವೋ ಶ್ರೀದೇವೇರಿಗಾಶ್ರಯವಾಗಿದ್ದಿ ್ವಶಾಲ ವಕ್ಷಸ್ಥಳವ ನೋಡ10 ಪಚ್ಚೆಪದಕ ಪಾರಿಜಾತ ಅಚ್ಚ ಮಲ್ಲಿಗೆ ತುಳಸಿಮಾಲೆ ಶ್ರೀ- ಕೌಸ್ತುಭ ಶೃಂಗಾರ ಕೊರಳ ಸಿರಿಯರಸು ನಿನ್ನ ನೋಡ11 ಮಧ್ವರಾಯರು ಕೈಯ ಬೀಸೆ ಎದ್ದು ಬಂದು ಹಡಗದಿಂದಿ ಲ್ಲಿದ್ದಾನುಡುಪಿಕ್ಷೇತ್ರದಿಯೆಂದು ಮುದ್ದುಕೃಷ್ಣನ ಮುಖವ ನೋಡ12 ಕ್ರೂರಕಂಸನ(ಅ)ಪ್ಪಳಿಸಿ ದ್ವಾರಾವತಿಯಲ್ಲಿದ್ದ ಅಷ್ಟಭಾರ್ಯೇರಿಂದ್ವಿ- ಹಾರ ಮಾಡಿದ್ವಾರಿಜಾಕ್ಷನ್ವದನ ನೋಡ 13 ಚಂದ್ರನಂತೆ ಹೊಳೆವೊ ಮುಖದಿ ದುಂಡು ಮುತ್ತಿನ ಮೂಗುತಿನಿಟ್ಟು ಕುಂದಣದ್ವಜ್ರ ಬಿಗಿದ ಕರ್ಣಕುಂಡಲವನ್ನು ನೋಡಲೀಗ14 ಕೇಸರಿ ಗಂಧ ಕಸ್ತೂರಿಯ ನಾಮ ತಿಲಕ ಒಪ್ಪೋವಜ್ರದರಳೆಲೆ ದೇವಕೀಸುತನ (ನೋಡ) 15 ಬಾಲಭಾಸ್ಕರ ಕೋಟಿಲಾವಣ್ಯರೂಪಗೆಲುವ ಕಾಂತಿ ಸಾಲುದೀವಿಗೆ ಸೊಬಗು ಕಮಲದಳಾಯತಾಕ್ಷ ಹರಿಯ ನೋಡ16 ಕೆಂಪುಹರಳು ಝಗ ಝಗಿಸುವೊ ಪಂಚರತ್ನದ ಕಿರೀಟ ಚಂಚಲಾಕ್ಷ ಹರಿಯ ಶಿರದಿ ಮುಂಚೆ ನೋಡಿ ಮುಗಿವೆ ಕೈಯ17 ಅಸುರರ್ವಂಚಿಸಮೃತ ಬೀರಿ ಪಶುವಾಹನಗೆ ಮೋಹ ತೋರಿ ಮೋಸದಿಂದ ಭಸ್ಮಾಸುರನ ನಾಶಮಾಡಿದ ನಾರಿ ನೋಡ18 ಲವಣಶರಧಿತೀರ ಮಧ್ವ ಸರೋವರದಲಿ ಶುದ್ಧಸ್ನಾನ ಪರಮ ಮಂತ್ರ ಜಪಿಸೋ ನಿನ್ನ ಶರಣು ಸುಜನಜನರ ನೋಡ19 ಉತ್ತಮ ವೈಕುಂಠ ಬಿಟ್ಟೀ ಉಡುಪಿಯಲ್ಲಿ ವಾಸವಾಗಿ ಭಕ್ತಜನರಭೀಷ್ಟಕೊಡುವೋ ನಿತ್ಯಮುಕ್ತ ನಿನ್ನ ನೋಡ20 ಶ್ರೀಶನೊಲಿಸಿದ್ಹನುಮ ಭಾರತೀಶನಾದ ಮಧ್ವರಾಯರ ದಾಸರ ದಾಸತ್ವಕೊಡು ಭೀಮೇಶಕೃಷ್ಣಂದಯದಿ ನೋಡ 21
--------------
ಹರಪನಹಳ್ಳಿಭೀಮವ್ವ
ಶ್ರೀಯತಿವೃಂದ ಸ್ತೋತ್ರ ಯತಿಗಳ ಸತತ ಸಂಸ್ತುತಿಸುವೆ ಅತಿತ್ವರಿತದಲಿ ದುರಿತಗಳ ತರಿವೆ ಪ ಮೋದತೀರ್ಥಾದಿ ಸುಬೋಧೇಂದ್ರ ಪರಿಯಂತ ಮೋದದಿಂದವರ ಶ್ರೀಪಾದಕ್ಕೆ ನಮಿಪೆ 1 ಅಜನಪಿತನಪಾದ ಭಜಿಸುವ ಭಕುತ ನಿಜವಾಗಿ ಪಾಲಿಪ ಸುಜನೇಂದ್ರ ತೀರ್ಥ 2 ಆನತಜನ ಪಾಪಕಾನನದಹಿಪ ಕೃ ಶಾನನಂತಿಪ್ಪ ಸುಙÁ್ಞನೇಂದ್ರ ತೀರ್ಥ 3 ದುರ್ಮತಧ್ವಂಸ ಸದ್ಧರ್ಮ ಸಂಸ್ಥಾಪಕ ಕರ್ಮಂದಿವರ ಸುಧರ್ಮೇಂದ್ರ ತೀರ್ಥ 4 ಅಗಣಿತಮಹಿಮ ಮೂಜಗದೊಳು ಪ್ರಖ್ಯಾತ ನಿಗಮಾಗಮಜ್ಞ ಶ್ರೀ ಸುಗುಣೇಂದ್ರ ತೀರ್ಥ 5 ಸಸುಪ್ರಸಿದ್ಧ ಮುನಿ ವಿಪ್ರಸಮೂಹವ ಕ್ಷಿಪ್ರದಿಪಾಲಿಪ ಸುಪ್ರಙÉ್ಞಂದ್ರಾಖ್ಯ 6 ಶ್ರೀಶ ಪದಾರ್ಚಕ ಸುಕೃತೀಂದ್ರ 7 ಮೂಲೋಕ ವಿಖ್ಯಾತ ಶ್ರೀಲೋಲನಂಘ್ರಿ ಕೀ - ಲಾಲಜಮಧುಪ ಸುಶಿಲೇಂದ್ರ ಮುನಿಪ 8 ವರದೇಶ ವಿಠಲನ ಪರಿಪರಿ ಪೂಜಿಪ ಪರಮಹಂಸರ ಪಾದಕ್ಕೆರಗಿ ಬಿನ್ನೈಪೆ 9
--------------
ವರದೇಶವಿಠಲ
ಜಯಮಂಗಳಂನಿತ್ಯ ಶುಭಮಂಗಳಂ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಯತುಂಗಲಕ್ಷ್ಮೀಪತಿ ನರಸಿಂಹಗೆಪ.ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆಮಂದರೋದ್ಧಾರ ಮಧುಸೂದನನಿಗೆ ||ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀ -ಇಂದಿರಾ ರಮಣ ಸರ್ವೋತ್ತಮನಿಗೆ 1ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆಸರಸಿಜೋದ್ಭವ - ಭವವಂದ್ಯ ಹರಿಗೆ ||ಗಿರಿಯರಸು ಕಾವೇರಿಪುರದ ರಂಗಯ್ಯಗೆಗಿರಿರಾಜಪತಿವಂದ್ಯ ಸುರರ ನಿಧಿಗೆ 2ಅಂಬರೀಷನ ಶಾಪ ಅಪಹರಿಸಿದವನಿಗೆತುಂಬುರ ನಾರದ ಮುನಿವಂದ್ಯಗೆ ||ಕಂಬುಕಂಧರಪುರಂದರ ವಿಠಲರಾಯಗೆಅಂಬುಜನಾಭಗೆ ಅಜನಪಿತಗೆ 3
--------------
ಪುರಂದರದಾಸರು
ಶ್ರೀ ಸತ್ಯ ಸಂಧರ ಚರಿತ್ರೆ127ಸತ್ಯ ಸಂಧಾರ್ಯರೆ ಶರಣಾದೆ ನಿಮ್ಮಲ್ಲಿಭೃತ್ಯನಾ ಎಂದೆಣಿಸಿನಿತ್ಯಪಾಲಿಸುವುದುಸತ್ಯಾರುಕ್ಷ್ಮಿಣೀ ರಮಣ ಕೃಷ್ಣನೃಹರಿ ರಾಮಸತ್ಯಜ್ಞಾನಾನಂತನಿಗೆ ಪ್ರಿಯ ಯತೀಂದ್ರ ಪನಿರ್ದೋಷ ಗುಣಸಿಂಧು ಸುಖಪೂರ್ಣ ಹಂಸನಿಗೆವಿಧಿಸನಕಮೊದಲಾದಗುರುಪರಂಪರೆಗೆಯತಿವರ್ಯ ಅಚ್ಚುತಪ್ರೇಕ್ಷರಿಗೆ ಆನಂದತೀರ್ಥರಾಂಬುಜ ಪಾದಗಳಿಗೆ ಆನಮಿಪೆ 1ಪದ್ಮನಾಭನರಹರಿಮಾಧವಅಕ್ಷೋಭ್ಯರಪದ್ಮಾಂಘ್ರಿಗಳ ನಮಿಸಿ ಜಯತೀರ್ಥರವಿದ್ಯಾಧಿರಾಜರಪಾದಪಂಕಜಕ್ಕೆರಗಿವಿದ್ಯಾಧಿರಾಜರು ಈರ್ವರಿಗೂ ನಮಿಪೆ 2ನಮಿಸುವೆ ರಾಜೇಂದ್ರ ಕವೀಂದ್ರ ವಾಗೀಶರಿಗೆರಾಮಚಂದ್ರರಿಗೆ ಆ ಯತಿವರರಹಸ್ತಕಮಲಜರು ವಿಭುದೇಂದ್ರ ವಿದ್ಯಾನಿಧಿಗಳಿಗೆನಮೋ ಎಂಬೆ ವಿದ್ಯಾನಿಧಿಗಳ ವಂಶಕ್ಕೆ 3ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದ ವ್ಯಾಸಾಭಿದ ಯತಿ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 4ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಾಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯ ವಿಜಯರಿಗೆ ಸತ್ಯ ಪ್ರಿಯರಿಗೆ ಸತ್ಯಬೋಧರಿಗೆ ಎನ್ನ ವಂದನೆ ಅರ್ಪಿಸುವೆ 5ಸತ್ಯಬೋಧಾರ್ಯರ ಕರಕಮಲ ಸಂಜಾತಸತ್ಯಸಂಧರ ಮಹಿಮೆ ಬಹು ಬಹು ಬಹಳವೇದ್ಯ ಕಿಂಚಿತ್ ಮಾತ್ರ ಎನಗೆ ಶ್ರೀಹರಿ ವಾಯುಪ್ರೀತಿಯಾಗಲಿ ಇಲ್ಲಿ ಪೇಳಿರುವೆ ಸ್ವಲ್ಪ 6ಪೂರ್ವಾಶ್ರಮದಲ್ಲಿ ರಾಮಚಂದ್ರಾಚಾರ್ಯಹಾವೇರಿಯವರು ಈ ಯತಿವರಮಹಂತದೇವ ಸ್ವಭಾವರು ವೇದಾಂತ ಕೋವಿದರುಸರ್ವದಾ ಹರಿನಾಮ ಸಂಸ್ಮರಿಸುವವರು 7ರಾಮಚಂದ್ರಾಚಾರ್ಯ ಸರ್ವಪ್ರಕಾರದಲುತಮ್ಮ ಸಂಸ್ಥಾನ ಪೀಠಾರ್ಹರು ಎಂದುನೇಮದಿಂ ಪ್ರಣವೋಪದೇಶ ಅಭಿಷೇಕಸಂಮುದದಿ ಮಾಡಿದರು ಸತ್ಯಬೋಧಾರ್ಯ 8ಹರಿಕ್ಷೇತ್ರ ತೀರ್ಥಯಾತ್ರೆ ಮಾಡಿ ಅಲ್ಲಲ್ಲಿಹರಿತತ್ವ ಯೋಗ್ಯರಿಗೆ ಸಮ್‍ಯುಕ್ ಬೋಧಿಸುತಧರೆಯಲ್ಲಿಜ್ಞಾನಿಶ್ರೇಷ್ಠರು ಎಂದು ಸ್ತುತಿಕೊಂಡಧೀರ ಗುರುವರ ಸತ್ಯಸಂಧರಿಗೆ ನಮಿಪೆ 9ಸತ್ಯಂ ವಿದಾತಂ ನಿಜಭೃತ್ಯಭಾಷಿತಂಅಂದು ಕಂಬದಿ ತೋರ್ದಹರಿಪ್ರಹ್ಲಾದನಿಗೆಇಂದುವಟುರೂಪದಿ ಬಂದು ವಿಠ್ಠಲ ಸತ್ಯಸಂಧರಿಗೆ ತೋರಿದನು ತನ್ನಿಚ್ಛೆಯಿಂದ 10ವಿಠ್ಠಲನ್ನ ವಂದಿಸಿ ಪಂಡರೀಪುರದಿಂದಮಠ ಪರಿವಾರ ಸಹ ಇನ್ನೂ ಬಹು ಕ್ಷೇತ್ರಅಟನ ಮಾಡಿ ಬಾಗೀರಥಿ ಪೂಜೆ ಮಾಡುತ್ತಪಠವಾಳಿ ಉಡುಗೊರೆಯ ಕೊಟ್ಟರು ಗಂಗೆಗೆ 11ಕಾಶಿ ನಗರದಿ ಜನರು ಪ್ರತ್ಯಕ್ಷ ನೋಡಿಹರುವಸ್ತ್ರ್ರಾದಿಗಳ ಗಂಗೆ ಮೂರ್ತಿಮತ್ ಬಂದುನಸುನಗುತ ತುಷ್ಟಿಯಲಿ ಕರದಿಂ ಸ್ವೀಕರಿಸಿದ್ದುಯಶವೇ ವರ್ಣಿಸಲು ಈ ಮಹಾತ್ಮರ ಮಹಿಮೆ 12ಶ್ರೀವಿಷ್ಣುಪಾದಮಂದಿರದ ಮುಖದ್ವಾರಅವಿವೇಕದಲಿ ಗಯಾವಾಳರು ಬಂಧಿಸಲುಶ್ರೀವರನ್ನ ಸ್ಮರಿಸಿ ನಿಂತರು ಸತ್ಯಸಂಧರುವಿಶ್ವವಿಷ್ಣು ವಷಟ್ಕಾರನು ವಲಿದ 13ನೆರೆದಿದ್ದ ಜನರೆಲ್ಲ ನೋಡುತಿರೆ ಬಾಗಲಭಾರಿ ಕೀಲುಗಳೆಲ್ಲ ಬಿದ್ದವು ಕೆಳಗೆಈ ರೀತಿ ಅದ್ಬುತವು ಜರುಗಿದ್ದು ಕಂಡುಎರಗಿ ಕೊಂಡಾಡಿದರು ಅಲ್ಲಿದ್ದ ಜನರು 14ತಮ್ಮ ತಪ್ಪುಗಳನ್ನು ಮನ್ನಿಸೆಕ್ಷಮೆಬೇಡಿತಮ್ಮನ್ನು ಕರಕೊಂಡು ಹೋಗಿ ಗುರುಗಳಿಗೆಹೇಮರತ್ನಾದಿಗಳಕಾಣಿಕೆಅರ್ಪಿಸಿನಮಿಸಿ ಪೂಜಿಸಿದರು ಗಯಾವಾಳರು 15ಸೂರಿಕುಲ ತಿಲಕರು ಸತ್ಯ ಸಂಧಾರ್ಯರುಹರಿಪೂಜೆ ಮಾಡುವಾಗಹರಿಶಿರಿ ವಾಯುಸುರನಿಕರ ಸಾನಿಧ್ಯ ಇರುವುದು ಅನುಭವಕ್ಕೆಬರುವುದು ನೋಡುವ ಯೋಗ್ಯ ಭಕ್ತರಿಗೆ 16ಶ್ರೀಹರಿಅರ್ಚನೆಗೆ ಸ್ವಾಮಿಗಳು ಕುಳಿತರುಬ್ರಾಹ್ಮಣ ಮಹಾಪುರುಷ ಓರ್ವನು ಬಂದಸಹಸ್ರದಳ ಸುಂದರತರ ಕಮಲಪುಷ್ಪವಶ್ರೀಹರಿಗರ್ಪಿಸೆ ಕೊಟ್ಟು ಅದೃಶ್ಯನು ಆದ 17ಪ್ರಣವಅಷ್ಟಾಕ್ಷರಿ ಮೊದಲಾದ ಮಂತ್ರಗಳಆಮ್ನಾಯಋಗ್ ಯಜುಸ್ಸಾಮಾಥರ್ವಣದಅನುಪಮ ಮಹಾ ಇತಿಹಾಸ ಎರಡರಸಾರವಿಷ್ಣು ಸಹಸ್ರನಾಮಗಳಿರುತಿವೆಯು 18ಉತ್ಕøಷ್ಟತಮ ವಿಷ್ಣು ಸಹಸ್ರ ನಾಮಂಗಳಶ್ರೀ ಕೃಷ್ಣ ಸುಪ್ರೀತಿಕರವ್ಯಾಖ್ಯಾನಸಂ ರಚಿಸಿ ಪ್ರತಿನಿತ್ಯ ಅರ್ಚಿಪರು ವಿಷ್ಣುಸೂರಿವರಧೀರರು ಸತ್ಯ ಸಂಧಾರ್ಯ 19ವೇದಾಂತ ಸಾಮ್ರಾಜ್ಯ ದಶವತ್ಸರ ಆಳಿವೃಂದಾವನದಿ ಕೂಡುವಕಾಲಬರಲುಭೂದೇವಿಪತಿವಕ್ತ್ರದಿಂದುದಿತಸಾಧು ಸುಪವಿತ್ರ ತೀರಕ್ಕೆ ಬಂದಿಹರು 20ಹದಿನೇಳು ನೂರು ಹದಿನಾರನೇ ಶಾಲಿ ಶಕಆನಂದ ಸಂವತ್ಸರ ಜೇಷ್ಠ ಶುದ್ಧದ್ವಿತೀಯಪುಣ್ಯತಮ ದಿನದಲ್ಲಿ ಶ್ರೀಹರಿಯಪಾದಯೆಯ್ದಿದರು ಈ ಗುರುವರಮಹಂತ21ಉಡುಪಿಯಿಂದುತ್ತರಕ್ಕೆ ಬರುವ ಮಾರ್ಗದಲಿದೊಡ್ಡದಲ್ಲದ ಗ್ರಾಮಮಹಿಷಿಎಂಬುವಲಿಕ್ರೋಡಜಾ ತೀರಸ್ಥ ವೃಂದಾವನಸದನಮಾಡಿ ಕುಳಿತರು ಮತ್ತೊಂದು ಅಂಶದಲಿ 22ವೃಂದಾವನದೊಳು ಇಹ ಸತ್ಯಸಂಧರೊಳುನಿಂತಿಹನು ಸತ್ಯಸಂಧನು ಮುಖ್ಯವಾಯುವಾತದೇವನೊಳು ಸತ್ಯಸಂಧ ನಾಮಾವಿಷ್ಣುಸತ್ಯಜ್ಞಾನಾನಂತಾನಂದ ವಾಯು ಇಹನು 23ವೃಂದಾವನಸ್ಥರ ಈ ರೀತಿ ತಿಳಿಯುತ್ತಬಂದು ಸೇವಿಸುವವರಿಗೂ ಸ್ಮರಿಸುವವರಿಗೂಕುಂದುಕೊರತೆನೀಗಿಇಷ್ಟಾರ್ಥ ಲಭಿಸುವವುಇಂದಿರಾಪತಿ ದಯಾಸಿಂಧು ಪಾಲಿಸುವನು 24ಹನುಮಸ್ತ ಅಜನಪಿತ `ಶ್ರೀ ಪ್ರಸನ್ನ ಶ್ರೀನಿವಾಸ'ಮೀನಕಮಠಕ್ರೋಡನೃಹರಿವಟುಪರಶುದನುರ್ಧರ ಶ್ರೀಕೃಷ್ಣ ಜಿನ ಕಲ್ಕಿ ಶ್ರೀಶಗುಣನಿಧಿ ಪ್ರಿಯ ಸತ್ಯ ಸಂಧಾರ್ಯ ಶರಣು 25 ಪ|| ಇತಿ ಶ್ರೀ ಸತ್ಯಸಂಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸೌಭಾಗ್ಯ ಪ್ರದ ಹನುಮಂತ(ಅಣು ಸುಂದರ ಕಾಂಡ)67ಶರಣು ಪಾಲಿಸೋ ಹನುಮ |ಕರುಣಾಳು ಅಂಜನಾಸೂನು ನಿನ್ನ ಮಹಿಮೆವರ್ಣಿಸಲು ನಾಬಲ್ಲೆನೆ ಹೇ ವಾಯು ಪುತ್ರನೇ ಅಸಮಬಲಜ್ಞಾನ ರೂಪನೆ ನಿನಗೆ ಇಷ್ಟ ಶ್ರೀರಾಮಜೀವರಲಿ ನೀ ಉತ್ತಮ |ಶರಣು ಫಲ್ಗುಣಸಖಪಿಂಗಾಕ್ಷನೇಶರಿಧಿ ದಾಟಿದಿಅಮಿತವಿಕ್ರಮವಾರ್ತೆ ಸೀತೆಗೆ ಪೇಳಿ ದಶಮುಖಸರ್ವತರದಿ ಸೌಮಿತ್ರಿ ಪ್ರಾಣ ಪ್ರ -ದಾತಹರಿವರಶರಣು ಶರಣು ಮಹಾತ್ಮ ಸಹೃದನೇಶರಣು ಪಾಲಿಸೋ ಹನುಮ ಪಪೂರ್ಣಪ್ರಜÕನೀನೆಂದು ಬಹು ಹರುಷ ತೋರಿದ |ರಾಘವನ ಕರೆತಂದು ರವಿಜನಿಗೆ ಸಖ್ಯ | ಮಾಡಿಸಿ ನೀಸಿಂಧು|ದಾಟುತ್ತ ಮೈನಾಕನ್ನೇ | ಶ್ಲೇಷಿಸಿನಿಂದುವಿಶ್ರಾಂತಿ ಕೊಳ್ಳದೆ ಮುಂದು |ಹಾರಿ ಸುರ ಸೆಯೊಳ್ ಲೀಲೆಯಿಂದಲಿ ಹೊಕ್ಕು ಹೊರಟು -ಸುರರುಪೂಮಳೆಕರಿಯೇ ಸಿಂಹಿಕಾ ಉದರ ಸೀಳಿ ದ್ವಾರ ಪಾಲಕೆಯನ್ನ ಜಯಿಸಿಪುರಿ ಪ್ರವೇಶವ ಮಾಡಿ ಸೀತಾಕೃತಿಯ ಕಂಡುಂಗರುವ ಕೊಟ್ಟುಕ್ರೂರ ರಾಕ್ಷಸ ಅಕ್ಷಾದಿಗಳ ಕೊಂದು ಲಂಕಾಪುರಿಯ ಸುಟ್ಟುಭರದಿ ತಿರುಗಿ ಬಂದು ರಾಘವನಂಘ್ರಿಯಲಿ ಸನ್ನಮಿಸಿ ಸೀತೆಯಚೂಡಾರತ್ನವನಿಟ್ಟು ರಾಮಾಲಿಂಗನ ನೀಕೊಂಡಿಯೋ ಸೌಭಾಗ್ಯ ನಿಧಿಯೇಶರಣು ಪಾಲಿಸೋ ಹನುಮ 1ಜಯತು ಶರಣು ಶ್ರೀರಾಮ | ಶರಣೆಂದವಿಭೀಷಣನನ್ನ | ಅತಿ ಪ್ರೇಮದಿಂದ ನೀ ಸ್ವೀಕರ್ಯನೆನಲು ಶ್ರೀರಾಮ |ಬಂದು ಅಭಯವ ನಿತ್ತ ಪೂರ್ಣಕಾಯ |ಅಮಿತ ಸುಗುಣ ಸುಧಾಮ|ಮಾರ್ಜಗಾರಿ ಸಸೈನ್ಯ ರಾವಣ ನನ್ನ ಜಹಿಯಲು | ಸೇತು ಕಟ್ಟಿಸಿ |ಸುಜನರಕ್ಷಕ ಉರುಪರಾಕ್ರಮ ಅಜಿತರಾಮನು ಪೋಗೆ ಲಂಕೆಗೆ |ಜಾಂಬವಾನ್ ಸುಗ್ರೀವ ಸಹ ನೀ ಜಾನಕೀಶಗೆ ಸೇವೆ ಸಲ್ಲಿಸಿ |ಸಂಜೀವಿನಿಗಳ ತಂದು ರಾಮಾನುಜಗೆ ಪ್ರಾಣವನಿತ್ತು ರಾವಣಭಂಜನವ ರಘುರಾಮ ಮಾಡಿ ಅಯೋಧ್ಯೆಬರುವುದು ಪೇಳಿ ಭರತಗೆ |ನಿಜ ಸಂತೋಷದಿ ಸೀತಾರಾಮಗೆ ರಾಜ್ಯ ಪಟ್ಟಾಭಿಷೇಕ ಗೈಸಿದಿ -ಶುಭಸುಚರಿತನೆ ಶರಣು ಪಾಲಿಸೋ ಹನುಮ2ರಾಮಭದ್ರನು ನಿನ್ನ | ಅನುಪಮೋತ್ತಮ ಸೇವೆ ಮೆಚ್ಚಿ ಏನನ್ನ |ನೀನಗೀವುದು ನಿನ್ನ ಸೇವೆ ಸಮ ಬಹುಮಾನ |ಮೋಕ್ಷ ಸಾಲದು ಪೇಳು ಬೇಕಾದ್ದನ್ನ | ಎನಲು ನೀ ರಾಮನ್ನ |ನಮಿಸಿ ಪ್ರೇಮದಿ ರಾಮಚಂದ್ರನೆ ನಿನಗೆ ಇಷ್ಟ ಸರ್ವಜೀವರುರಾಮನಲ್ಲಿ ಮಾಳ್ಪ ಭಕ್ತಿಗೆ ಅಧಿಕನಿತ್ಯಪ್ರವೃದ್ಧವಾದಪರಮಭಕ್ತಿವೊಂದನ್ನೇ ಈವುದು ಎಂದು ನೀ ಕೇಳೆ ವಿನಯದಿಪ್ರೇಮದಿಂದ ತಥಾಸ್ತು ಎನ್ನುತ ಬ್ರಹ್ಮಪದ ಸಹಭೋಗ ಸಾಂಪ್ರತಸಮಸ್ತವಾದ ಸೌಭಾಗ್ಯ ಸಮೃದ್ಧಿಯ ಇತ್ತು ಒಲಿದನು ಅಜನಪಿತ ಶ್ರೀರಮೆಯ ಅರಸ ಪ್ರಸನ್ನ ಶ್ರೀನಿವಾಸ ಭೂಮ ಏಕಾತ್ಮ ರಾಮಪ್ರಮೋದಿ ವಿಭುವು _ ಶರಣು ಪಾಲಿಸೋ ಹನುಮ 3
--------------
ಪ್ರಸನ್ನ ಶ್ರೀನಿವಾಸದಾಸರು