ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನದ ತುತೂರಿ ಹಿಡಿಯೊ ಸಾಗರ ಶಾಯಿಯೆ ಮೂಜಗ ಧಣಿಯೆಂದು ಜಾಗಟೆ ಡÀಣ್ ಡಣ್ ಬಡಿಯೊ ಪ ಅನುದಿನ ಮನಮುಟ್ಟು ನೆನೆಯುವ ಭಕ್ತರ ಮನದೆಣಿಕೆಯನು ನೀಡುವ ಕನಿಕರದಿಂ ಕಾಪಾಡುವ ಜನಕಜೆವಲ್ಲಭ ತನ್ನವರನು ಬಿಟ್ಟು ಕ್ಷಣ ಅಗಲಿರೆನಾ ವನಜನಾಭನೆಂದು 1 ಎಡೆಬಿಡದೊಡತೊಳ ಧೃಢದಿಂ ಭಜಿಪರ ಕಡುದಯಾದೃಷ್ಟಿಯಿಂ ನೋಡುವ ಸಡಗರದವರೋಳಾಡುವ ಮೃಡವಂದಿತ ತನ್ನಡಿಯ ದಾಸರ ಕರಪಿಡಿದು ಬಿಡದೆ ಕಾಯ್ವ ಸಡಗರದೊಡನೆಂದು 2 ನರಹರಿ ಚರಣವ ಪರಿಪರಿ ಸ್ಮರಿಪರ ದುರಿತರಾಸಿ ದೂರ ಮಾಡುವ ಬರುವ ಸಂಕಟ ನಿವಾರಿಸುವ ಜರಾಮರಣ ದೂರಮಾಡಿ ಪರಮ ಪರತರ ಸಿರಿಸೌಭಾಗ್ಯ ಕರುಣಿಪ ಸ್ಥಿರವೆಂದು 3 ಚಿತ್ತಜತಾಪನ ಸಚ್ಚರಿತವನು ನಿತ್ಯ ಬಿಡದೆ ಕೊಂಡಾಡುವರ ಭಕ್ತ ಜನರ ನೋಡಿ ಬಾಗುವರ ಮೃತ್ಯುಬಾಧೆ ಗೆಲಿ ಸತ್ಯಾನಂದವ ನಿತ್ತು ಪೊರೆವ ಹರಿ ಸತ್ಯ ಸತ್ಯವೆಂದು 4 ದೀನರಾಪ್ತನಾದ ಧ್ಯಾನಮೂರುತಿ ತನ್ನ ಧ್ಯಾನಿಸುವರ ಬೆಂಬಲಿಸುವ ಮಾನದಿಂದ ಭವಗೆಲಿಸುವ ಏನು ಬೇಡಲಾನಂದ ದೀಯ್ವನು ಪ್ರಾಣೇಶ ಶ್ರೀರಾಮ ದೇವ ದೇವನೆಂದು 5
--------------
ರಾಮದಾಸರು
ಬಾ ಬಾರೊ ನೀಬಾರೊ ರಂಗಯ್ಯ ಓಡಿ ಪ ಬಾರೊ ರಂಗಯ್ಯ ಓಡಿ ತೋರೊ ಕೃಪೆಯ ಮಾಡಿ ದಾರಿಯ ಕಾಣೆ ಭವದೂರ ಧೀರ ಬೇಗ 1 ತನಯನು ಅಗಲಿರೆ ಮನಕೆ ನೀ ತೆರೆದರೆ ಅನುಚಿತವಲ್ಲ ವೇನೊ ಇನಕುಲಚಂದ್ರ ಬೇಗ2 ಸುರುಪತಿ ವಿನುತನೆ ಧರಸತಿಗೆ ನತನೆ ಗುರುವು ತುಲಶೀರಾಮಾ ಧೊರೆಯೆ ಸರಿಯೆ ಬೇಗ 3
--------------
ಚನ್ನಪಟ್ಟಣದ ಅಹೋಬಲದಾಸರು