ಒಟ್ಟು 3600 ಕಡೆಗಳಲ್ಲಿ , 124 ದಾಸರು , 2704 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜೆ ಮುಕುಂದಂ ಗೋವಿದಂ ಪ ಚಕೋರ ನಿರಶೇಷಂ | ಗಾಧಿ ತನಯ ಸತ್ಕøತು ಪರಿತೋಷಂ 1 ಶಂಭರ ಸಂಭವ ಜಿತಶುಭನಯನಂ | ಶಂಭರ ನಿಧಿ ಕಮಲಾಯುತ ಶಯನಂ 2 ಘನ ಶ್ರೀ ಗಿರಿಧರ ಸುತ ಪರಿಪೋಷಂ | ಕನಕಲಸತ್ಸೋದಾಮಿನಿ ಜೈಲಂ 3 ಅಂಕಿತ-ಗಿರಿಧರಸುತ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಂಡನಾದೆ ಸಂಸಾರಕೊಂಡದೊಳಗೆ ಬಿದ್ದು ಕಂಡುಕಾಣದಂತಿರುವರೇ ಪುಂಡರೀಕನಯನ ಪ ಅಶÀನ ವಸನಕ್ಕಾಗಿ ದೆಸೆಗೆಟ್ಟು ಬಾಯ್ಬಿಡುತ ಅಸುವ ಕರದೊಳ್ಪಿಡಿದು ವಸುಧೆಯ ಜನರ ಬಸವಳಿದು ಬೇಡಲು ಕಣ್ಣೆಸಿದು ಬೈಯಲು ತಲೆಬಾ ಗಿಸಿಕೊಂಡು ನಿಂದೆ ಹರಿ ಉಸುರಲಳವಲ್ಲ 1 ರೊಕ್ಕದ ಆಸೆಗಾಗಿಕ್ಕೆಲದ ಜನರನ್ನು ತರ್ಕಿಸದೆ ದೈನ್ಯದಿಂ ಚಿಕ್ಕಮಗ ನಾ ಎನುತ ಫಕ್ಕನೆ ಕೈತಾಳನಿಕ್ಕುವರು ನಗಲು ಮಹ ದು:ಖದಿಂ ತಿರುಗಿದೆನು ಬಿಕ್ಕಿಬಿಕ್ಕಳುತ 2 ಯರ ಮೋಹಿಸಿ ದಂಡಿಸಿದೆ ಮನೆಸತಿಯ ಕಂಡವರು ತಿದ್ದಿದರು ಚಂಡಿತನವಿಡದೆ ಕಂಡವರ ಅರ್ಥವನು ಮನೆಸೇರಿಸಿ ಬಂಡೆದ್ದು ಜನರೊಳಗೆ ಮಂಡೆಯೆತ್ತದೆಹೋದೆ 3 ತಪದಿಂದ ಹರಿಪಾದ ಜಪಿಸುವುದ ಮರೆದು ನಾ ಕೃಪಣತ್ವಜನಸೇವೆ ಅಪರೂಪಗೈದೆ ಚಪಲತ್ವತನದಿಂದ ಅಪಹರಿಸಿ ಪರರರ್ಥ ಸುಪಥಕ್ಕೆ ದೂರಾಗಿ ಅಪರಾಧಿಯಾದೆ4 ಕದ್ದು ತಿಂದೆ ನೆರಹೊರೆಯ ಬಿದ್ದೆ ದುರ್ಬವಣೆಯೊಳು ಬದ್ಧನಾಗಿ ಧರೆಮೇಲೆ ಹದ್ದಿನಂತೆ ಬಾಳ್ದೆ ತಿದ್ದಿ ನೀ ಎನ್ನ ತಪ್ಪುಬುದ್ಧಿಯನು ಕಲಿಸೆನ್ನೊ ಳಿದ್ದು ಪೊರೆ ದಯದಿಂದ ಮುದ್ದು ಶ್ರೀರಾಮ 5
--------------
ರಾಮದಾಸರು
ಭಂಡನೆಂದು ಎನ್ನ ನೀ ತಿಳಿಯೋ ಅಖಿಲಾಂಡನಾಯಕ ಪ ತಂಡ ತಂಡದಿ ಒದಗಿ ಬರುತಿಹ ಗಂಡ ಸಂತತಿ ನಾ ಕಂಡು ಬೆದರುವ ಷಂಡನಲ್ಲವೊ ಪುಂಡರೀಕ ಲೋಚನನೇ ದೊಡ್ಡ 1 ಮಂದ ಮಾನವರಿಂದ ನುಡಿಸುವ ನಿಂದೆ ವಚನಗಳಿಂದ ಮನ ನೊಂದರೂ ಗೋವಿಂದ ನಿನ್ನನು ಬಂಧುವೆಂದು ನಂದದಿ ಪೊಗಳುವ 2 ದ್ವೇಷಿ ಜನಗಳೂ ರೋಷದಿಂದಲಿ ಶೋಷಿಸಿದರೂ ನೀ ಕಮ ಲೇಶ ಎನ್ನನು ಪೋಷಿಸುವನೆಂದು ಘೋಷಿಸುವೆನೋ ಶೇಷಶಯನನೇ 3 ಹೀನ ಮಾನವರಿಂದ ನೀ ಅವಮಾನ ನೀಡಿದರೂ ವರ ಜಾನಕೀಶನೆ ನೀನು ಎನ್ನಯ ಮಾನರಕ್ಷಕನೆಂದು ಅರಿಯುವ 4 ಸಣ್ಣ ಮಾನವರಿಂದ ಎನ್ನಯ ಸಕಲ ವೈಭವವು ದೊಡ್ಡ ಸೊನ್ನೆಯಾದರು ನಿನ್ನ ಪಾದಗ ಳನ್ನು ಬಿಡೆನೊ ಪ್ರಸನ್ನ ಮೂರುತಿ 5
--------------
ವಿದ್ಯಾಪ್ರಸನ್ನತೀರ್ಥರು
ಭಯ ನಿವಾರಣ ಸುಳಾದಿ ನಾಕೇಶ ದೇವತತಿ ಆ ಕಮಲನಾಭ ಯತಿ ನಿಕರಗೊಲಿದನೆ ಶ್ರೀಕರವದನ ಸರ್ವಲೋಕಕಧಿಪ ಕೃಪಾ- ಲೋಕನದಲಿ ನೋಡಿ ಸುಖತೀರ್ಥನುತ ಚರಣ ವ್ಯಾಕುಲ ಬಿಡಿಸಿ ನಿನ್ನಾನೇಕ ಮಹಿಮೆ ತಿಳಿಸಿ ಜೋಕೆಯಿಂ ಕಾಯ್ದ ಗುರು ಆಕಾರಂತರ್ಯಾಮಿ ಈ ಕಾಲದಲಿ ಮನ ವ್ಯಾಕುಲಪಡಿಸುವ ಕಾಕು ಭಯವ ಬಿಡಿಸಿ ನೀ ಕಾಯಬೇಕೊ ದೇವ ಲೋಕ ಲೋಕಾದಿಗಳ ಸಾಕುವ ಭಾರಕರ್ತ ಆ ಕಮಲಭವನಭಯ ವ್ಯಾಕುಲ ಬಿಡಿಸಿದೆ ಲೋಕ ಸೃಷ್ಟಿಪ ಶಕ್ತಿ ಏಕಚಿತ್ತವ ಕೊಟ್ಟು ಲೋಕಲೋಕಾಧಿಪರ ನೀ ಕಾಯ್ದೆ ಕರುಣದಿ ಲೋಕವೆಲ್ಲವ ಕೊನೆಗೆ ಏಕಾಪೋಶನಗೈವ ಲೋಕಪತಿಯೆ ಭಕ್ತಾನೀಕಕÀಭಯದಾತ ಭೀಕರ ಬೆನ್ಹತ್ತಿ ತಾಕಿದ ಮನಸಿನ ವ್ಯಾಕುಲ ಭಯಬಿಡಿಸಿ ಜೋಕೆಯಿಂದಲಿ ಕಾಯೊ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠ್ಠಲ ಈ ಕಾಲಕೊದಗೆ ನಿನ್ನಾನೇಕ ಕೀರ್ತಿಯು ನಿಜವೋ 1 ಭಯ ನಿವಾರಕದೇವ ಭಕ್ತವತ್ಸಲ ನೀನೆ ದಯಮಾಡು ಮನಸಿನಲಿ ತಗುಲಿದ ಭಯವನೆ ಬಿಡಿಸಿ ಭಯಪಡಿಸುತಿರೆ ಖಳನು ಬಾಲಕನ ಪ್ರತಿದಿನದಿ ನಯವಿನಯದಿ ಕಂದ ನಿನ್ನನು ಮೊರೆಯಿಡೆ ಕೇಳಿ ದಯಮಾಡುತ ತರಳನಲಿ ಕನಲುತ ದೈತ್ಯನ ಕೊಂದು ಭಯ ಬಿಡಿಸಿದೆ ಬಾಲಕಗೆ ಭಕ್ತವತ್ಸಲ ನೃಹರೆ ಅಯೋನಿಜೆ ದ್ರೌಪದಿಗೊದಗಿದ ಅನುತಾಪಗಳನೆಲ್ಲ ದಯದಲ್ಲಿ ಪರಿಹರಿಸಿದ ಆಪದ್ಭಾಂಧವ ಸ್ವಾಮಿ ಭಯಪಡಿಸುತ ಭಸ್ಮಾಸುರ ಮೃತ್ಯುವಿನಂದದಿ ಮೃತ್ಯುಂ ಜಯನನು ಬೆನ್ನಟ್ಟಿ ಬರೆ ಹರನು ನಿನ್ನನು ಮೊರೆಹೋಗಲು ಸಂತೈಸಿ ತರುಣಿಯ ರೂಪದಿ ಖಳನ ಕೈಯಿಂದಲೆ ಅವನ ಶಿರ ಉರಿಸುತ ಶಿವನನು ಪೊರೆದೆ ಭಯಹಾರಕ ನರಹರೆ ಶ್ರೀ ಗೋಪಾಲಕೃಷ್ಣವಿಠ್ಠಲ ಜಯವಲ್ಲದೆ ದಾಸರಿಗೆ ಭಯವುಂಟೆ ಪೇಳೋ 2 ನಿತ್ಯ ನಿನ್ನನು ನಂಬಿ ಚಿತ್ತದಿ ನೆನೆವಂಥ ಆಪ್ತವರ್ಗಕೆ ಇನ್ನು ಮೃತ್ಯು ಭಯವು ಉಂಟಿ ಆಪ್ತನಲ್ಲವೆ ನೀನು ಚಿತ್ತಕಂಟಿದ ಭಯ ಮೃತ್ಯು ಪರಿಹರಿಸೈಯ್ಯ ಎತ್ತ ನೋಡಲು ನಿನ್ನ ವ್ಯಾಪ್ತಿ ಸುತ್ತಿರೆ ಜಗದಿ ಮೃತ್ಯುವೆತ್ತಣದೊ ನಿನ್ನುತ್ತಮ ಭಕ್ತರಿಗೆ ಇತ್ತ ದೇಹವು ನಿಂದು ಚಿತ್ತಾದಿಂದ್ರಿಯ ನಿಂದು ನಿತ್ಯ ನಡೆವ ಜೀವಕೃತ್ಯವು ನಿನದೈಯ್ಯ ಸುತ್ತುವೊ ಗ್ರಹಗತಿ ಮೃತ್ಯು ಪರಿವಾರವೆಲ್ಲ ಭೃತ್ಯರಲ್ಲವೆ ನಿನ್ನ ಚಿತ್ತಕ್ಕೆದುರಾಗುವರೆ ಭೃತ್ಯತ್ವದಲ್ಲಿರೆ ಎತ್ತಣ ಭಯವೈಯ್ಯ ಹತ್ತಿಕಾಡುವ ದುಷ್ಟಗ್ರಹಗಳ ಕಡೆಗೆ ನೂಕಿ ಚಿತ್ತ ನಿರ್ಮಲವಿತ್ತು ಮತ್ತೆ ಮಂಗಳವಿತ್ತು ನಿತ್ಯ ಕಾಯಲಿಬೇಕೊ ನಿನ್ನ ಸೇವೆಯನಿತ್ತು ಮೃತ್ಯು ಮೃತ್ಯುವೆ ಮಹಾದೈತ್ಯ ಸಂಹರಣನೆ ಚಿತ್ತದಲ್ಲಿ ನೀನು ಆಪ್ತನಾಗಿರೆ ಬೇರೆ ಹತ್ತಿಕಾಡುವ ಗ್ರಹ ಹತ್ತಿರ ಬರಲುಂಟೆ ಸಿರಿ ಗೋಪಾಲಕೃಷ್ಣವಿಠ್ಠಲ ಹತ್ತಿದ ಮೃತ್ಯು ಭಯ ಕಿತ್ತಿ ಬಿಸುಟು ಕಾಯೊ 3 ವಾಸುದೇವನೆ ನಿನ್ನ ದಾಸನ ಕಾಯುವಂಥ ಈಶನಲ್ಲವೆ ಜೀವರಾಶಿಗಳಿಗೆ ಬಿಂಬ ಸುಷುಪ್ತಿಯಲ್ಲಿ ಕಾವ ಆತ್ಮ ಆನಂದರೂಪ ತಾಸು ತಾಸಿಗೆ ಬಂದ ಭಯವ ಬಿಡಿಸುವದರಿದೆ ದಾಶರಥಿಯೆ ನಿನ್ನ ಅನುಜನ ಜೀವಭಯ ದಾಸ ಹನುಮನಿಂದ ಗಿರಿತರಿಸಿ ಹರಿಸಿದೆ ಆ ಸುಗ್ರೀವನ ಮೊರೆ ಕೇಳಿ ಅಭಯವಿತ್ತು ತೋಷದಿಂದಲಿ ಒಲಿದು ರಾಜ್ಯ ಸುಖವನಿತ್ತೆ ವಾಸವ ಮೊರೆಯಿಡೆ ಒಲಿದು ಅಮೃತವಿತ್ತು ಘಾಸಿಗೊಳಿಪ ಮೃತ್ಯುದೈತ್ಯರ ಸದೆಬಡಿದೆ ನಾಶರಹಿತ ನೃಹರಿ ಗೋಪಾಲಕೃಷ್ಣವಿಠ್ಠಲ ನಾಶದ ಭಯ ಉಂಟೆ ನಿನ್ನ ನಂಬಿದವರಿಗೆ 4 ತರಳತ್ವದಲಿ ಭಯವು ವರ ಯೌವ್ವನದಲಿ ಭಯವು ಜರೆ ಮರಣದಲಿ ಭಯವು ಪರಿಪರಿ ರೋಗದ ಭಯವು ಆರೆಘಳಿಗೆಯು ಬರದಂತೆ ಹರಿ ನೀ ಪರಿಹರಿಸುತಲಿ ಪರತರ ನಿನ್ನಯ ಮಂಗಳ ಚರಿತೆಯ ಸ್ಮರಣೆಯನಿತ್ತು ಹರಿಭಕ್ತರ ಕಾಯುವುದು ಬಿರುದಲ್ಲವೆ ನಿನಗಿನ್ನು ಪರಿಪರಿ ಭಯ ಕ್ಲೇಶಗಳ ಪರಿಹರ ಮಾಡುತ ಕಾಯೊ ವರಯಂತ್ರ ಮಂತ್ರಗಳು ಪರಿಪರಿ ಜಪ ಹೋಮಗಳು ತರತರದೌಷಧ ಪಥ್ಯ ನರಹರಿ ಎಲ್ಲವು ನೀನೆ ಹೊರಗೊಳಗೆಡಬಲದಲ್ಲಿ | ಮರೆವು ಸ್ಮರಣೆಗಳಲ್ಲಿ ಪರಿಪರಿ ಕ್ರೀಡೆಗಳಲ್ಲಿ ಚರಿಸುವ ಕರ್ಮಗಳಲ್ಲಿ ನೆರೆದಿಹ ಜನವೃಂದದಲಿ ಹಗಲಿರುಳು ಸಂಧಿಯಲಿ ಪರಿಪರಿ ಕಾಲಗಳಲ್ಲಿ ಪರಿಪರಿ ದೇಶಗಳಲ್ಲಿ ನರಹರಿ ದುರ್ಗಾಸಹಿತ ವರ ಮೃತ್ಯುಂಜಯ ವರದ ಸಿರಿಭಾರತಿಪತಿಸಹಿತ ಚರಿಸುತ ಬೆಂಬಿಡದಲೆ ನೀ ನಿರುತದಿ ಕಾಯಲಿಬೇಕೊ ಬರಿದನು ಮಾಡದೆ ಸ್ತುತಿಯ ವರ ಸುದರ್ಶನ ಪಾಂಚಜನ್ಯ ಪದ್ಮವ ಪಿಡಿದ ಪರಮ ಮಂಗಳರೂಪ ದೈತ್ಯರಿಗತಿ ಘೋರ ಗುರುಬಿಂಬನೆ ನೀನೆಂದು ಪರಿಪರಿ ಪ್ರಾರ್ಥಿಪೆನಿನ್ನು ಕೊರಗಿಸದಲೆ ಮನವನ್ನು ಹರಿ ಸೌಭಾಗ್ಯವನಿತ್ತು ಕರೆಕರೆಗೊಳಿಸದೆ ಕಾಯೊ ಕರುಣಾಬ್ಧಿಯೆ ದಾಸರನು ವರಭಾಗ್ಯವು ಆಯಸ್ಸು ಆರೋಗ್ಯಂಗಳೂ ಎಲ್ಲ ನಿರುತವಿರಲಿ ಬೇಕೊ ನಿನ್ನವರಿಗೆ ಸಾಧನಕೆ ಕರುಣಾಕರ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಿಸಿದ ಮಾತ್ರದಿ ಸಕಲ ಭಯ ಪರಿಹಾರಕವೋ 5 ಜತೆ ನಿತ್ಯ ಮಂಗಳ ನಿನ್ನ ಸ್ಮರಿಪರ ಮನದ ಭಯವ ಕಿತ್ತು ಬಿಸುಟು ಸಲಹೋ ಗೋಪಾಲವಿಠ್ಠಲ
--------------
ಅಂಬಾಬಾಯಿ
ಭಯ ನಿವಾರಿಸೋ ಜಯ ಶ್ರೀ ಹರಿಯೆ ಭಯ ನಿವಾರಿಸಯ್ಯ ದಯದಿ ಭಯ ನಿವಾರನೆನ್ನ ಪ ಮರವೆಯೆಂಬುವ ಇರುಳಿನಲ್ಲಿ ದುರಿತಯೆಂಬುವ ಗಿರಿಯಲ್ಲಿ ಪರನಿಂದೆಂಬುವ ಶರಧಿಯಲ್ಲಿ ಕರುಣವಿಲ್ಲದ ಕಾಯದುರ್ಗದರಣ್ಯಕಂಜಿ ಕೊರುಗುತಿರುವೆ ಹರಿಯೆ ನಿಮ್ಮ ಸ್ಮರಣವೆಂಬ ನಿರುತ ಧೈರ್ಯ ಕರುಣಿಸಭವ 1 ವ್ಯಸನವೆಂಬ ಮುಸುಕಿನಿಂದ ಪಿಸುಣತೆಂಬುವ ದಸಕಿನಿಂದ ಪುಸಿಯುಯೆಂಬುವ ಮಿಸುನಿಯಿಂದ ವಿಷಯದಾಸೆ ತಸ್ಕರಗಂಜಿ ದೆಸೆಗೆ ಬಾಯ ಬಿಡುವೆನಯ್ಯ ಅಸಮಮಹಿಮನ್ವ ಚಶ್ರವಣೆಂಬೆಸೆವ ಧೈರ್ಯ ಕರುಣಿಸಭವ 2 ಆರು ಹುಲಿಗಳ ಘೋರಿಸುವ ಮೂರು ಮರಿಗಳ ಹಾರುತಿರುವ ಮೂರೇಳು ನಾಯ್ಗಳ ಘೋರತಾಪ ಸೈರಿಸದೆ ಸಾರಸಾಕ್ಷ ಮರೆಯ ಹೊಕ್ಕೆ ಶ್ರೀರಾಮ ನಿಮ್ಮ ಚರಣ ಭಕ್ತೆಂ ಬ್ವೀರತನವ ಕರುಣಿಸಭವ 3
--------------
ರಾಮದಾಸರು
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು
ಭಯಕೃದ್ಭಯಹಾರೀ ರಾಧಾನಯನ ಮನೋಹಾರೀ ಪ ತಾಪತ್ರಯ ಪರಿಹಾರಕ ರಂಗಾ ಗೋಪೀಜನ ಹೃತ್ಪದ್ಮ ಪತಂಗಾ 1 ಸುಂದರ ಸುಸ್ಮಿತಶೋಭಿತ ವದನಾ ಮಾಧವ ಜಿತಮದನಾ 2 ದುಷ್ಟಕುಲಾಂತಕ ಈ ಧರೆಯೊಳು ಶ್ರೀದ - ವಿಠಲ ವಿಧಿಭವವಂದಿತ ಪಾದಾ 3
--------------
ಶ್ರೀದವಿಠಲರು
ಭರಬರನೆ ಬಾಜಾರಕೆ ನಾ ಬಂದೆನಯ್ಯ ಚಿದಾನಂದನ ಮರೆಯಲಿಕೆ ಪ ಐವರು ಗೌಡರು ಕಟ್ಟಿದ ಪೇಟೆ ಆ ಪೇಟೆಗೆಐದು ನಾಲ್ಕು ಬಾಗಿಲುಗಳುಐದು ಮಂದಿ ಸೆಟ್ಟರು ಸೇರಿಹರು ಆವರಲ್ಲಿಯೆಐದು ಮಂದಿ ಚಲವಾದಿಗಳು1 ಭಾರ ನೇಮಲ್ಲಿದೆ 2 ತಡುಗರೆಂಬವಾಲೆ ಶೆಟ್ಟಿಗಳೆ ಅಲ್ಲಿಗಲ್ಲಿಗೆಪಡುವಲ ಕೋರಿ ಶೆಟ್ಟಿಗಳೇಕಡುಕರ್ಮಿ ಕೋಮಟಿ ಶೆಟ್ಟಿಗಳೇ ಬಾಯಿ ಘನವಾಗೆಬಡಬಡಿಪ ಪಟ್ಟಣ ಶೆಟ್ಟಿ 3 ಪಾಪವೆಂಬ ವಸ್ತ್ರದಂಗಡಿಯೇ ನಾ ನೋಡಲಾಗಿತಾಪವೆಂಬ ಜವಳಿ ಅಂಗಡಿಯೆಕೋಪವೆಂಬ ಕುಪ್ಪಸ ದಂಗಡಿಯೇಒಪ್ಪುತಲಿರೆ ಕಾಪಥವೆಂಬ ಸಕಲಾತ್ಮಂಗಡಿಯೇ 4 ಚಿ, ಛೀ ಎಂಬ ಚಿಕ್ಕ ತಕ್ಕಡ ಗಂಡಿಯೆ ನಾ ಬರುತಿರೆನಾಚಿಕೆಯಿಲ್ಲದ ಕಂಚಿನಂಗಡಿಯೇಚು ಛೂ ಎಂಬ ಚೀನಿಯಂಗಡಿಯೇ ಯಡಬಲದಲ್ಲಿಕೋಚು ಮಾಡೋ ಉದ್ದಿನಂಗಡಿಯೇ 5 ತನು ವ್ಯಸನವೆಂಬ ತಾಡಪತ್ರಿ ತೋರಲಾಗಿಮನವ್ಯಸನವೆಂಬ ಕಿಂಕಾಪುಧನವ್ಯಸನವೆಂಬೋ ಮಖಮಲ್ಲು ನಾ ಬೆರಗಾಗೆಜನ ವ್ಯಸನವೆಂಬೋ ಜರತಾರಿಯೇ6 ನಾನಾ ವಿಷಯ ವೆಂಬೋ ಉತ್ತತ್ತಿ ಅಲ್ಲಿದ್ದಾವೆಜ್ಞಾನಶೂನ್ಯ ಜಾಜಿಕಾಯಿಮಾನ ಹಾನಿಯೆಂಬೋ ಜಾಪತ್ರಿನಾನು ನನ್ನದು ಎಂಬ ಭಂಗಿ ಸೊಪ್ಪು7 ಜೀವನೆಂಬ ಹೊಗೆಯ ತೊಪ್ಪಲೇ ಹಿರಿಯವಾದನೋವು ಕಷ್ಟಗಳೆಂಬ ಗಾಂಜಿಯೇಸಾವು ಬದುಕು ಎಂದೆಂಬ ಮಾಲೆಗಳೇ ಮಾರುತಲಿತ್ತೋನಾನು ನೀನು ಎಂಬ ಚಿಲುಮೆಗಳೋ 8 ಭೇದವೆಂಬ ನಿಲುವುಗನ್ನಡಿಯೆ ಒಳಗಿದ್ದಾವೆ ವಾದವೆಂಬವಜ್ರದಹರಳೇ ಹಾದಿ ಕಾಣೆನೆಂಬ ಹವಳದ ರಾಶಿಯೇ ಹರಡಿದ್ದಾವೆಗಾದೆ ಎಂಬ ಸೂಜಿದಬ್ಬಣವೇ 9 ಪ್ರಾರಬ್ಧವೆಂಬೋ ಉಂಬತಳಿಗೆಯೇ ಪಸರಿಸುತಿರುವಘೋರ ತಾಪತ್ರಯದ ತಟ್ಟೆಯೇನಾರಿ ನೋಟೆಂಬ ಕಠಾರಿಯೇ ನಿಲಿಸಿದ್ದಾವೆಸೂರಿಯ ಸುಕೃತವೆಂಬೋ ತುಬಾಕಿಯೇ10 ಪರಿಣಾಮಿಲ್ಲದ ಪಡವಲಕಾಯಿ ದಾರಿಯಲಿದಾರಿಯಿಲ್ಲದ ದೊಡ್ಡಿಲಕಾಯಿಅರಿವಿಲ್ಲದ ಕುಂಬಳಕಾಯಿ ಹಾಗಿದ್ದಾವೆಮರುಳು ಎಂಬ ಮಾವಿನಕಾಯಿ11 ಮಂಠ ಎಂಬೋ ಮೆಂತ್ಯ ಪಲ್ಲಯೇ ಮಾಸಲವಿತ್ತೆಕಂಟಕ ಎಂಬೋ ಹರಿವೆ ಪಲ್ಲೆಯೇಕೊಂಟೆಯೆಂಬೊ ಬಸಲೆ ಪಲ್ಲೆಯೇ ತೀವ್ರದಲಿತ್ತೆಶುಂಠವೆಂಬೋ ಬೆರಕೆ ಪಲ್ಲೆಯೇ 12 ಬಂಗಾರವೆಂಬೋ ಬಿಳಿಯ ಜೋಳವೇ ಬೆಡಗಿಲಿರೇರಂಗು ಎಂಬೋ ರಾಗಿ ರಾಶಿಯೇಸಂಗವೆಂಬೋ ಸಣ್ಣಕ್ಕಿಯೇ ಸಾರಿದ್ದಾವೆಹಿಂಗದೀಪರಿ ದಿವಾರಾತ್ರಿಯೇ 13 ಸಂಕಲ್ಪೆಂಬೋ ಧಾರಣೆ ಹಚ್ಚಿರೋ ಸಂಗಾತಲೆವಿಕಲ್ಪೆಂಬೋ ಧಾರಣೆಯಿಳಿವುದೇಸುಖದುಃಖವೆಂಬೋ ಮಾರಾಟವೇ ಸಾಗಿರಲಾಗಿಕಾಕಧಾವಂತರ ಸಂಧಾನವೇ 14 ಕಾಮಕ್ರೋಧಗಳೆಂಬ ಕಳ್ಳರೇ ಕಾವಲಿರ್ದುರಾಮನೆಂಬ ಸ್ಮರಣೆ ಕದ್ದಿಹರೋಕಾಮುಕರೆ ತಿರುಗಾಡುವರೆಲ್ಲ ಕಾಣದ ಹಾಗೆಆ ಮಹಾಜ್ಞಾನವ ಸುಲಿದಿಹರೋ15 ಬರಬಾರದ ನಾನು ಬಂದೆನೇ ಬಾಜಾರ ಬಿಟ್ಟುಹೊರಡುವ ತೆರನ ಕಾಣೆನೇಕರುಣಿಯಾಗಿ ಕೈ ವಿಡಿವರಾರೋಕರುಣಾಕರ ಹರ ವಿಶ್ವೇಶನೇ ಬಲ್ಲ 16 ಚಿಂತೆ ನಾನು ಮಾಡುತಿರಲಾಗಿ ಚಿದಾನಂದಚಿಂತೆ ಬೇಡೆಂದು ಮುಂದೆ ನಿಂದಿಹನುಚಿಂತೆ ಬಿಡು ಕಾವಲಿಹೆನೆಂದು ಚಿದ್ರೂಪ ತೋರಿಎಂತು ಪೇಳಲಿ ಎನ್ನೆದುರು ನಿಂದಿಹನೆ17
--------------
ಚಿದಾನಂದ ಅವಧೂತರು
ಭವ | ಬನ್ನ ಬಿಡಿಸಿ ಕಾಯೋ ಅಜಭವರಯ್ಯ ಪ ಆಶೆಯೆಂಬ ನದಿಯಲ್ಲಿ | ಘನ | ಸೂಸುವ ಮನೋರಥವ ಸೆಳವಿನಲಿ | ವಾಸನೆ ತೆರೆಗಳಿ ಬರಲಿ | ಬಲು | ಘಾಸಿಯಾಗುವೆ ಸಿಕ್ಕಿ ಮೋಹ ಸುಳಿಯಲಿ 1 ಉಲಿವ ಕುತರ್ಕ ಪಕ್ಷಿಗಳು | ನುಂಗ | ನಕ್ರ ಕಾಮಕ್ರೋಧಗಳು | ಬಲಿದು ವಿವೇಕ ಧಡಿಗಳು | ಕೋರೆ | ಯಲಿ ಬೀಳೆ ಧೃತಿ ಶಾಂತಿಯೆಂಬಾ ವೃಕ್ಷಗಳು2 ಸಿರಿ | ಕಾಂತ ನಿನ್ನಯ ನಾಮ ಹಡಗ ತಂದು | ಪಂಥಗಾಣಿಸೋ ಗತಿಗಿಂದು | ದಯ | ವಂತ ಗುರು ಮಹಿಪತಿ ಪ್ರಭು ದೀನ ಬಂಧು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭವ ತಾರಿಸೊ ಸುಜ್ಞಾನ ಪ್ರೇರಿಸೊ ಪ ಮಾಯದ ಮೃಗದ ಬಾಯಿಗೀಡಾದೆ ಕಾಯುವದಾತರ ಕಾಣೆ ಹರಿಯೆ ನಾಯಿಯ ತೆರದಲಿ ಮಬ್ಬಿಲಿ ಮೆರೆದೆ ದೋಷ ನೋಡದೆ ಕಾಯೋ 1 ಬಂದೆನು ಭೂಸುರನಾಗುತ ಜಗದಿ | ಪೊಂದಿದೆ ತವ ಪದ ಹರಿಯೆ ನಂದನಸುತ ನೀ ಬಂಧನ ಬಿಡಿಸೋ ಕಂದನ ಮರೆಯುವರೇನೋ 2 ಮನ್ನಿಸೋ ಶಾಮಸುಂದರವಿಠಲ ಭಾರ ನಿನಗೊಪ್ಪಿಸಿದೆ | ಹರಿಯೆ ಇನ್ನು ತೋರಿಸೈ ನಿನ್ನಯ ಚರಣ ಕರುಣಾಭರಣ ದೇವ 3
--------------
ಶಾಮಸುಂದರ ವಿಠಲ
ಭವ ನಿಂದುದಗಣಿತ ಕರ್ಮವೆಂದು ನಿನ್ನವನೆನಿಪುದೊ ಹರಿಯೇ ಅ.ಪಸೂಸುತಿದೆಯಜ್ಞಾನ ಮಾಸುತಿದೆ ಸುಜ್ಞಾನದೋಷಗಳು ಬಹುವಾಗಿವೆ ಹರಿಯೇಆಶೆಯೆಂಬುದಕಂತವಿಲ್ಲ ಬಹುಬಗೆ ತರದಪಾಶದಲಿ ಬಿಗಿವಡೆದೆನೋ ಹರಿಯೇಈಶ ನಿನ್ನಯ ಮಾಯೆಯೆಂಬ ಬಲು ಹುರಿ ಬಲೆಯುಬೀಸಿ ಸೋವುತ್ತಲಿದೆಕೋ ಹರಿಯೇಕ್ಲೇಶಸಾಗರದಲ್ಲಿ ಮುಳುಗಿ ತಡಿಯನು ಕಾಣೆವಾಸುದೇವ ಕಡೆಹಾುಸೋ ಹರಿಯೇ 1ಆವರಣ ವಿಕ್ಷೇಪವೆಂದೊಂದು ಶಕ್ತಿ ತಾನಾವರಿಸಿ ಬ್ರಹ್ಮಾಂಡವ ಹರಿಯೇತೀವಿಕೊಂಡೊಳಹೊರಗೆ ವಿಕ್ಷೇಪ ಶಕ್ತಿ ತಾಜೀವಕೋಟಿಗಳ ಸೃಜಿಸಿ ಹರಿಯೇಠಾವುಗಾಣದ ತೆರದಿ ಬಹುವಿಧದ ಕರ್ಮದಲಿಜೀವರನು ಬಂಧಿಸಿಹುದು ಹರಿಯೇಈ ವಿಧದ ಮಾಯೆ ತಾ ಯೋಗಿಗಳಿಗಸದಳವುದೇವ ಕೃಪೆಮಾಡಿ ಸಲಹೋ ಹರಿಯೇ 2ಮೂರು ಗುಣ ಮೂಲದಲಿ ಮೂರು ಕರ್ಮಗಳುದಿಸಿಮೂರಾರು ಕವಲಾದುದೋ ಹರಿಯೇಸಾರಿ ವೃಕ್ಷವ ಬಳ್ಳಿ ಮೀರಿ ಮುಸುಕಿದ ತೆರದಿತೋರದಿದೆ ನಿನ್ನ ನಿಜವ ಹರಿಯೇಬೇರುವರಿದಿಹ ಕರ್ಮಲತೆಯ ಜಾರಿಸಿ ಗುಣವಮೀರುವ ಉಪಾಯವೆಂತೋ ಹರಿಯೇಸೇರಿದೆನು ನಿನ್ನ ಚರಣವನು ವೆಂಕಟರಮಣದಾರಿಯನು ತೋರಿ ಸಲಹೋ ಹರಿಯೇ 3ಕಂ||ಗುರುವಾರದರ್ಚನೆಯನಿದಗುರುವಾಗಿಯೆ ಪೇಳ್ದೆ ನೀನೆ ಮೂಢನ ಸಲಹಲ್‍ಗುರುಸೇವೆಯೆಂತೊ ತಿಳಿಯದುಗುರುವರ ಸಂಗತಿಯನರಿಯೆ ನೀನೇ ಗತಿಯೈಓಂ ದಾಮೋದರಾಯ ನಮಃ
--------------
ತಿಮ್ಮಪ್ಪದಾಸರು
ಭವ ಬಂಧವೂ ಪಗಂಗಾಜನಕ ಖಗೊತ್ತುಂಗ ತುರಗನೆ ದೇವ ರಂಗಾಪುರಾಗಾರನೆ ಸ್ವಾ'ು ಅ.ಪದುರಿತ ಕೋಟಿಗಳ ಪರಿಹರಿಸಿ ರಕ್ಷಿಪ ನಿನ್ನ ಬರಿನಾಮಸ್ಮರಣೆಯೊಂದುಪರಿಪರಿಯ ಭವದ ಕೋಟಲೆಯ ಬಿಡಿಸುವ ನಿನ್ನ ಚರಿತೆಯ ಶ್ರವಣವೊಂದುಅರಿತರಿಯದೆಸಗಿದಘರಾಶಿಯ ದ'ಸಿ ನಿನ್ನ ಶರಣಜನ ಸಂಗವೊಂದುಇರಲಿವನು ಬಯಸಿ ಬೇಡುವೆನೆಂದು ನಿನ್ನ ಸಿರಿಚರಣದೆಡೆಗೈದಿ ಸಂತಸದಳೆದುನಿಂದೂ 1ಆವಜನ್ಮಾರ್ಜಿತದ ಸುಕೃತ ಪರಿಪಾಕವೊ ದೇವ ನಿನ್ನಯ ಕರುಣವೋಸಾವಧಾನದಿ ನಿನ್ನ ನೆನೆದು ಪೂಜಿಸಿ ನುತಿಪ ಸೇವಕರ ಪ್ರೇಮದೊಲವೋಜೀವರಾಶಿಗಳೊಳುದುಸಿ ಮಡಿಯೆ ಪುಟ'ಟ್ಟ ಭಾವಬಂದೀ ಬಣ್ಣವೋಆವುದನು ತಿಳಿಯದಜ್ಞನನು ನಿನ್ನವರೊಯ್ದು ಪಾವನಕ್ಷೇತ್ರವನು ಪೊಗಿಸಿದತಿಶಯವೋ 2ಗುರು ವಾಸುದೇವಾರ್ಯನಾಗಿ ಚಿಕನಾಗಾಖ್ಯಪುರದಿ ಮ'ಮೆಯ ತೋರ್ದೆಯೈಕರೆದಜ್ಞರಜ್ಞತೆಯ ಪರಿದು ಸುಜ್ಞಾನ ಸುಧೆಯೆರೆದು ನೀನೆ ಪೊರೆದೆಯೈಪರದೇಸಿ ವೇಷದಿಂ ಮೂಢ ಜನರಿಗೆ ಭಕ್ತಿುರವ ಕೈಸಾರಿಸಿದೆಯೈಮರೆಯೊಕ್ಕೆ ನಾನು ತಿಮ್ಮದಾಸ ದೇವ ಪರಾಕು ಕರ'ಡಿದು ಕಾಯಬೇಕೆನ್ನ ವೆಂಕಟರಮಣ 3
--------------
ತಿಮ್ಮಪ್ಪದಾಸರು
ಭವ ಬಿಡಿಸಯ್ಯ ಹರಿ ನಿನ್ನ ನಾಮ ದೃಢವಾಗಿ ನುಡಿಸಯ್ಯ ಬಿಡದೆ ಸನ್ಮಾರ್ಗದಿ ನಡೆಸಯ್ಯ ದೇವ ಗಡ ನಿನ್ನ ಕೃಪಾಕವಚ ತೊಡಿಸಯ್ಯ ಪ ಹಾಳು ಭ್ರಾಂತಿಗಳೆಲ್ಲ ಕೆಡಿಸಯ್ಯ ಎನ್ನ ಕೀಳುಯೋಚನೆ ಸರ್ವ ಕಡಿಸಯ್ಯ ಜಾಳು ಪ್ರಪಂಚದಾಸೆ ತಿಳಿಸಯ್ಯ ಸ್ವಾಮಿ ಮೂಳಮಾನವರ ಮಾತು ಮರೆಸಯ್ಯ 1 ನಿತ್ಯ ಸುಜನರೊಳಿರಿಸಯ್ಯ ಎನ್ನ ಸತ್ಯ ಶರಣರೊಳಾಡಿಸಯ್ಯ ಅರ್ತಿಯಿಂ ತತ್ವರ್ಥ ತಿಳಿಸಯ್ಯ ಎನ್ನ ಮಿಥ್ಯಗುಣಂಗಳನ್ನು ಹರಿಸಯ್ಯ 2 ಕೋಪತಾಪಂಗಳ ವಧಿಸಯ್ಯ ಎನ್ನ ಪಾಪ ಮಾಫಿಗೊಳಿಸೆನ್ನಯ್ಯ ಕೋಪಿ ಪಾಪಿಗಳಿಂದುಳಿಸಯ್ಯ ನಿನ್ನ ಗೌಪ್ಯದ ಧ್ಯಾನ ಮುನ್ನ ತಿಳಿಸಯ್ಯ 3 ಭೂತಪ್ರೇತದಂಜಿಕ್ಹರಿಸಯ್ಯ ತಂದೆ ಜಾತಿಭೀತಿ ಮೊದಲ್ಹಾರಿಸಯ್ಯ ನೀತಿಶಾಂತಿ ಸ್ಥಿರ ನಿಲ್ಲಿಸಯ್ಯ ಎನ್ನ ತಾತ ಮಾತೆ ನೀನೆ ನಿಜವಯ್ಯ 4 ನರರಿಗೆ ಎರಗಿಸದಿರಯ್ಯ ಎನ್ನ ಶಿರ ನಿನ್ನ ಚರಣದಿ ಇರಿಸಯ್ಯ ಪರಲೋಕಸಾಧನ ತೋರಿಸಯ್ಯ ಎನ್ನ ಶರಣ ನೀನಾಗು ಶ್ರೀರಾಮಯ್ಯ 5
--------------
ರಾಮದಾಸರು
ಭವ ಭಯ ಪರಿಹರಾ ಪ ಸನಕಾದಿ ಮುನಿವಂದ್ಯ | ಕನಕ ಗರ್ಭಜ ಜನಕಅನುನಯದಿ ಗೀತೆ ಫ | ಲ್ಗುಣಗೆ ಭೋಧಿಸಿದೇಎಣೆಯೆ ತವ ಕರುಣ | ಘನವರ್ಷಣಕೆ ಹರಿಅನಘ ನಿನ್ನಡಿ ನೆಳಲ | ನಾಶ್ರಯಿಪೆ ಎಂದೆಂದೂ 1 ಭುವನ ಮೋಹನ ದೇವ | ಭವಗು ಮೋಹಿಪ ಭಾವದಿವಿಭವರು ತವರೂಪ | ಯುವಗಳಿಕ್ಕದಲೇ |ಸುವನ ತ್ರಯದಲಿ ಕಂಡು | ಪವನಾಂತರಾತ್ಮಮಾಧವನೆ ಹಿಗ್ಗುತಲಿ | ಹವಿಷನರ್ಪಿಪರೋ 2 ಸರ್ವಶಬ್ಧಾಭಿಧನೆ | ಸರ್ವ ದೇವೋತ್ತಮನೆಪರ್ವ ಪರ್ವದಿ ಇದ್ದು | ಪರ್ವ ವಾಚ್ಯಾ |ದರ್ವಿಯಂದದಲಿಪ್ಪ | ಜೀವನ್ನ ಪೊರೆಯುವಸರ್ವಭಾರವು ನಿನ್ನದೊ | ಶರ್ವನೊಡೆಯಾ 3 ಇಂಬು ಅರಿ ತುಂಬಿ ಎನ್ನೊಳು ನೀನುಸಂಭ್ರಮದಿ ಕಾಯುವುದು | ಕುಂಭಿಣಿಯ ರಮಣಾ 4 ವಿಶ್ವ ತೈಜಸ ಪ್ರಾಜ್ಞ | ತ್ರೈಯವಸ್ಥೆ ಪ್ರವರ್ತಕನೆವಿಶ್ವ ವ್ಯಾಪಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಭವ ಮುಖ್ಯ ಸುರಗಣ ಮುನಿನಿಕರ ಸಿದ್ಧ ಪರಿವಾರವು 1 ಸರಿತು ಪ್ರವಾಹದಂತೆ ವಾಗ್ವೈಖರಿಯಿಂದ ನಿರುತ ತೃಪ್ತಿಪಡಿಸಲಾರರು ಇನ್ನು 2 ಉರು ಉಗ್ರಜಾತಿ ಅಸುರ ಕುಲದಿ ಪುಟ್ಟಿದ ನಾನು ನೆರೆ ತುತಿಸಿ ತೃಪ್ತಿಪಡಿಸಲಾಪೆನೆ ನಿನ್ನ 3 ಆದೊಡೆ ಕುಲ ರೂಪ ವಯಸ್ಸು ವಿದ್ಯೆಗೆ ನೀನು ಮೋದಪಡುವನಲ್ಲ ಭಕ್ತಿಯೊಂದಕೆ ನಲಿವೆ 4 ಕರಿರಾಜನೇ ಸಾಕ್ಷಿ ಕರುಣಾಮಯನೇ ನಿನ ಗಿರುವುದೇ ವೈಷಮ್ಯ ? ಭಕ್ತಗೆ ವಶ ನೀನು 5 ಅರವಿಂದನಾಭ ನಿನ್ನ ಚರಣಾರವಿಂದವನು ನಿರುತ ಭಜಿಸುವ ಉತ್ತಮನೆನಿಸುವ 6 ಸರುವ ಸ್ವತಂತ್ರ ಪೂರ್ಣಕಾಮ ನಿನ್ನನು ನಾವು ಹಿರಿದಾಗಿ ಆರಾಧಿಸಿ ತೃಪ್ತಿಪಡಿಸುವುದೇನೊ 7 ನಾವು ಮಾಡುವ ಕರ್ಮಸಾಧನದಿಂದ ನಿನಗೆ ಯಾವ ಫಲವೂ ಇಲ್ಲ ! ಫಲವೆಲ್ಲ ನಮಗಯ್ಯಾ 8 ಬಿಂಬವನಲಂಕರಿಸೆ ಕನ್ನಡಿಯೊಳಗೆ ಪ್ರತಿ ಬಿಂಬಕೆ ಅಲಂಕಾರ ಕಾಣುವ ಪರಿಯಲಿ 9 ತರಳನ ಮೊರೆಯನು ಲಾಲಿಸಿ ಪಾಲಿಸೊ 10 ನಮ್ಮ ಸಾಧನೆಗಾಗಿ ನಿನ್ನ ಆರಾಧಿಪೆವು ಬೊಮ್ಮನಯ್ಯನೆ ನಿನ್ನ ಆನುಗ್ರಹದಿಂದಲಿ 11 ಬ್ರಹ್ಮಾದಿ ಸುರರೆಲ್ಲ ನಿನ್ನ ಸೇವಕರಯ್ಯಾ ಹಮ್ಮು ಮತ್ಯಾತಕಯ್ಯಾ ನಮ್ಮಂಥವರಿಗೆಲ್ಲ 12 ನಿನ್ನ ಕೋಪಕೆ ಅಂಜಿ ನಡುಗದವರುಂಟೆ ಮನ್ನಿಸಿ ಕೋಪವ ಉಪಶಮ ಮಾಡೋ ಸ್ವಾಮಿ 13 ನಿನ್ನ ಈ ಉಗ್ರರೂಪ ಧ್ಯಾನವು ಜನರಿಗೆ ಘನ ಭಯವ ಕಳೆಯೆ ಸಾಧನವಾಗಲಿ 14 ದಿಗಿಲು ಪುಟ್ಟಿಸುವಂಥ ಈ ನಿನ್ನ ಮುಖ ಜಿಹ್ವೆ ಭೃಕುಟಿ ಕರಾಳ ದಂಷ್ಟ್ರ 15 ಕೊರಳಲ್ಲಿ ಧರಿಸಿಹ ಕರುಳ ಮಾಲಿಕೆ ರಕ್ತ ಬೆರದ ಕೇಸರ ಮತ್ತೆ ನಿಗುರಿದ ಕರ್ಣಗಳು 16 ಲೋಕ ಭಯಂಕರವಾಗಿವೆ ಆಂದೊಡೆ ಶ್ರೀಕರ ನಿನ್ನ ಕೃಪೆಯಲಿ ನಾನವಕೆ 17 ಅಂಜುವನಲ್ಲ ಕೇಳು ಕಂಜನಾಭನೆಯಿನ್ನು ಅಂಜುವೆನೊಂದಕೆ ಸಂಸಾರ ಚಕ್ರಕೆ 18 ತೊಳಲಿಸÀುವುದು ಜನ ದುಃಖದಿ ಸಂಸಾರ ಬಲು ಪರಿಯಲಿ ಅದು ದುಃಖದಿ ಸಾಗರ 19 ಇಷ್ಟವಾದದ್ದು ಕೊಡದೆ ಇಷ್ಟವಿಲ್ಲದ್ದುಣಿಸಿ ಭವ 20 ಸಂಸಾರ ಸಾಗರ ದಾಟಿಸೋ ಮಹಾಮಹಿಮ ಸಂಶಯವಿಲ್ಲದೆ ಸೇರಿಸೋ ನಿನ್ನ ಬಳಿ 21 ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ ತರಳನ ಮೊರೆಯನು ಲಾಲಿಸಿ ಪಾಲಿಸೊ 22 ( ಪ್ರಹ್ಲಾದ ನರಹರಿಯನ್ನು ಸ್ತುತಿಸಿದ್ದು )
--------------
ವರಾವಾಣಿರಾಮರಾಯದಾಸರು