ಒಟ್ಟು 2158 ಕಡೆಗಳಲ್ಲಿ , 105 ದಾಸರು , 1685 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿನಿನ್ನ ಕರುಣವಿರಾಲಾವ ಭಯವು ಸ್ಮರಣಿ ಮಾತ್ರದಿ ಸಕಲದುರಿತಗಳ ಪರಿಹರಿಪ ಪ ಸಣ್ಣ ವಯದಲಿ ಶ್ರೀ ಜಗನ್ನಾಥದಾಸಾರ್ಯ ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ - ಬಿನ್ನಪವನಾಲಿಸಿ ರೋಗಮೋಚನ ಗೈದ 1 ದಾಸಕುಲರತ್ನ ಪ್ರಾಣೇಶ ದಾಸಾರ್ಯರ ಆಸುವಂಶದ ತರುಳ ರೋಗದಿಂದಾ ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ 2 ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ ಇರಳ್ಹಗಲು ನಿಮ್ಮ ನಾಮ ಸ್ಮರಿಸುವಂಥ ಪರಿ ಪೀಡಿಸುವದುಚಿತವೇನೊ ಶ್ರೀ ಹರಿ ವಿಚಾರಿಸಿ ನೀನೆಸಿದಯದಿಂದ ನೋಡೊ 3 ವಾಸವಾದ್ಯಮರನುತ ವಾಸುದೇವನೆ ನೀನು ಈ ಸಮಯದೊಳಗಿವನ ಕರುಣದಿಂದ ಪೋಷಿಸಲು ನಿನ್ನ ಪೊಂದಿರುವ ಸದ್ಭಕ್ತರ ದಾಸನೆಂದೆನಿಸಿ ಜೀವಿಸಲಿಯನವರತ 4 ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ ಬನ್ನ ಬಡಿಸಲು ಸಲ್ಲ ಇನ್ನು ನೀ ಕರುಣಿಪುದು ವರದೇಶವಿಠಲ 5
--------------
ವರದೇಶವಿಠಲ
ಹರಿಬಾಬು ರಾಮಚಂದ್ರ ಶೀತಾಪತೇ ಪ ದಶರಥನುದರದೊಳ್ ಶಿಶುವಾಗಿ ಪುಟ್ಟಿದೆ ದಶಕಂಠನಾಶನೇ ನೀನೆವೋಹರಿ ಶೀತಾಪತೇ 1 ತಾಪತ್ರಯಗಳಿಂದ ಪಾಪಿಯಾಗಿಹೆ ನಾನು ತಾಪವಿದಾರನೇ ನೀನೇವೋಹರಿ ಶೀತಾಪತೇ 2 ವಾಸುದೇವನೇ ನೀನು ದಾಸರ ಸಲಹುವ ಭೂಷಣ ಪೋಷಿಪ ನೀನೇವೋಹರಿ 3 ಆಶಾಪಾಶಗಳಿಂದ ಘಾಶಿಯಾದೆನು ನಾನು ದೋಷವಿದಾರನೇ ನೀನೇವೋಹರಿ 4 ಶಾಂತಿಪದದಲಿ ವಿಶ್ರಾಂತಿ ಕೊಟ್ಟಿನ್ನಾ ಭ್ರಾಂತಿಯ ತೋರಿಸುವ ನೀನೇವೋಹರಿ ಶೀತಾಪತೇ 5
--------------
ಶಾಂತಿಬಾಯಿ
ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆಧರಣಿ ಒರೆಸಮ್ಮ ದುರಿತಘಮ್ಮ ಹರಿಸುದಮ್ಮ ಪ. ಧನಧಾನ್ಯವಿತ್ತು ಮತ್ರ್ಯರ ಪೊರೆವೆ ಎಂದೆಂದುಮನೆಗಿಂಬುಕೊಟ್ಟು ರಕ್ಷಿಸಿದೆದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದುನಿನ್ನ ಸಲಹುವ ಪ್ರವೀಣೆ1 ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆಉತ್ತಮ ತ್ರಿವಿಕ್ರಮನ ರಥೋತ್ಸವವೆ ಮೊದಲಾದಪವಿತ್ರಾಂಕುರಾರ್ಪಣಕೆ ನೀ ಬಂದು ವರಿಯಸುತ್ತಿನ ಪವಳಿಯೊಳಗೆ ನಿಂದು ನಮಗೆಮುಕ್ತಿ ಪದವೀವುದಕೆ ಬಾ ಕೃಪಾಸಿಂಧು 2 ಕೊಂಡ ಸಿರಿ ಹಯವದನಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿನಿನ್ನನ್ನು ಪೊರೆಯುತಲಿಹನು ಕಂಡಾ3
--------------
ವಾದಿರಾಜ
ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು ನೆರೆಪೇಳ್ವ ಶೃತಿ ತಿಳಿದು ಮನವೆ ಕರುಣಾಸಾಗರನಾದ ಕಮಲಾದ್ರಿವಾಸ ನರಹರಿಯಪಾದ ಭಜಿಸುವ ಮನವೆ ಪ ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ ಹಿತ ವೇಳ್ವೆ ಕರಿಯಲು ಮನವೆ ಚತುರಾಸ್ಯ ಜನಕ ಮನ್ಮಥಕೋಟಿರೂಪ ಸದ್ಗತಿ ತೋರಿಸಲಹುದೇನು ಮನವೆ 1 ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ ಭಕ್ತರ ಪ್ರೇಮ ಮನವೆ ಕಾಮಿತಾರ್ಥವನಿತ್ತ ಕಂಜಾಕ್ಷದಯದಿ ಸೀತಾಮನೋಹರ ರಾಮ ಮನವೆ 2 ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ ಪರಬ್ರಹ್ಮನೆಂದು ಸ್ತುತಿಸಿ ಮನವೆ ಗರುಡವಾಹನ ಹೆನ್ನೆಪುರನಿಲಯ ಮರಿಯದಲೆ ಪರಿಪಾಲಿಸಿ ಪೊರೆವ ಮನವೆ 3
--------------
ಹೆನ್ನೆರಂಗದಾಸರು
ಹರಿಯೆ ಎನ್ನ ದೊರೆಯೆ ನಿನ್ನಯ ಮರೆಯಹೊಕ್ಕೆನೊ ಪ ವ್ಯಾಘ್ರಗಿರಿಯೊಳಿರುವ ಸಿರಿನಾರಾಯಣ ಅ.ಪ ಸಕಲ ಲೋಕಗಳನು ನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೇ ಸಲಹುವಾತನು ಪ್ರಕಟವಾದ ಜಗವ ನೀನೆ ಪ್ರಳಯಗೈವನು ನಿತ್ಯ ನೀನೆ ನಿಯಮಿಸುವನು 1 ಸ್ಥೂಲ ಸೂಕ್ಷ್ಮರೂಪ ನೀನೆ ಮೂಲ ಪುರುಷನು ಲೀಲೆಯನ್ನು ಪ್ರಕಟಗೈವ ಕಾಲರೂಪನು ನೀಲಲೋಹಿತಾದಿ ವಿಬುಧಜಾಲವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮಪುರುಷ ಪಂಕಜಾಕ್ಷ ಪತಿತಪಾವನ ಶರಧಿ ಶಯನ ಸಕಲಲೋಕ ಸಂವಿಭಾವನ ವರಗುಣಾಢ್ಯ ವಿಗತಮಾಯ ವಿಶ್ವಮೋಹನ ದುರಿತಗಜ ಮೃಗಾಧಿರಾಜ ವರದವಿಠಲ ವಿಹಗಯಾನ3
--------------
ವೆಂಕಟವರದಾರ್ಯರು
ಹರಿಯೆ ಪೊರೆಯೊ ಪರತರ ಮರೆಯ ಹೊಕ್ಕೆ ಕರುಣಾಕರ ಶ್ರೀಕರ ಪ ಸರುವತಾಪದಿಂದ ಗೆಲಿಸಿ ಸರುವವಿಷಯದಿದ ಉಳಿಸಿ ಪರಮ ನಿಮ್ಮ ಕರುಣ ಬರೆಸಿ ಕರವ ಪಿಡಿದು 1 ಘೋರ ಭವಕಡಲವ ಘೋರ ಬಟ್ಟು ಈಸಿಸಭವ ಸೈರಿಸದೆ ನಿಮ್ಮ ಪಾದವ ಸೇರಿದೆ ಸಲಹು ಪರಮಕರುಣ ಸಿರಿಯರಮಣ2 ಮಾಯಮೋಹಗಳ ಬಿಡಿಸಿ ಕಾಯಕರ್ಮಗಳನು ಕೆಡಿಸಿ ತೋಯಜಾಕ್ಷೆನ್ನಯ್ಯ ರಾಮ ಸಿಂಧು 3
--------------
ರಾಮದಾಸರು
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಹರಿಯೆ ಯನ್ನ ಧೊರೆಯೆ ನಿನ್ನಮರೆಯ ಹೊಕ್ಕೆನೊ ಸಿರಿಯರಮಣ ಪ ಸಕಲ ಲೋಕಗಳನುನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೆ ಸಲಹುವಾತಾನು ಪ್ರಕಟವಾದ ಜಗವ ನೀನೆ-ಪ್ರಳಯಗೈವನು ನಿಖಿಲ ಜೀವಸಾಕ್ಷಿಯಾಗಿ ನಿತ್ಯನೀನೆನಿಯಮಿಸುವನು 1 ಸ್ಥೂಲಸೂಕ್ಷ್ಮರೂಪನೀನೆ ಮೂಲಪುರುಷನು ಲೀಲೆಯನ್ನು ಪ್ರಕಟಗೈವ ಕಾಲರುಪನು ನೀಲ ಲೋಹಿತಾದಿ ವಿಬುಧಜಾಲ ವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮ ಪುರುಷ ಪಂಕಜಾಕ್ಷ-ಪತಿತ ಪಾವನ ಶರಧಿಶಯನ ಸಕಲಲೋಕ ಸಂವಿಭಾವನ ವಿಶ್ವ ಮೋಹನ ದುರಿತ ಗಜಮೃಗಾಧಿರಾಜವರದ ವಿಠಲ ವಿಹಗಯಾನ 3
--------------
ಸರಗೂರು ವೆಂಕಟವರದಾರ್ಯರು
ಹರಿಯೇ ಎನ್ನ | ಮರೆತಿರುವರೆ ಇದು ಸರಿಯೇ ಪಾಲಿಸು ನೀ ದೊರೆಯೇ | ತರಳತನದಿ ನಾ ಮರೆತೆನೆಂದು ನೀ ಜರೆದು ಬಿಟ್ಟರೆ ಮುಂದೆ ಪೊರೆವರಾರೈ ಶ್ರೀ ಪ ಒಡೆಯ ನೀನಾಗಿ ಸಲಹುವುದೀಗ ನಿನ್ನಯ ಪದ ಜಡಜಕೆರಗುವೆ ನಾ ಬೇಗ ಕಡು ದಾರಿದ್ರ್ಯದ ಕಡಲೊಳು ಮುಳುಗಿದೆ ತಡಿಯ ಕಾಣಿಸೋ ಜಗದೊಡೆಯ ದಯದಿ ಶ್ರೀ 1 ದುರುಳ ಬಾಧಿಸುತಿರೆ ಭರದೊಳಕ್ಷಯವಿತ್ತುದ್ಧರಿಸಲಿಲ್ಲವೆ ಶ್ರೀ 2 ಪರಮೇಷ್ಠಿ ಜನಕ ಶ್ರೀ 3 ತಂದೆ ನೀನಲ್ಲವೆ ಜಗದೀಶ ಪಾಲಿಸು ನಿನ್ನ ಕಂದನಲ್ಲವೆ ಸರ್ವೇಶ ಹಿಂದ ಮುಂದನಾನೊಂದನರಿಯೆ ದಯ ದಿಂದ ಕಾಯೋ ಮುಚುಕುಂದವರದ ಶ್ರೀ 4 ಮಂಗಲ ಪುರವಾಸ ಶ್ರೀ ವೆಂಕಟೇಶ | ಅಂಗಜ ಜನಕ ರಮೇಶ | ಮಂಗಲಾಂಗ ನಿನ್ನಂಘ್ರಿ ಸೇವಕರ ಸು-ಸಂಗವ ಪಾಲಿಸು ಗಂಗಾಜನಕ ಶ್ರೀ 5
--------------
ಅನ್ಯದಾಸರು
ಹರಿಯೇ ಗತಿ ಭರ್ತನು ಜಗಕೇ|ನರ ಹರಿಯೇ ನೆಂಟ ಭಕುತ ಜನಕೇ ಪ ಆರು ಸಲಹುವರ ನಾಥ ದೀನಜನ| ಘೋರಪಾತಕಿ ಬಧಿರಾಂಧರನು| ವಾರಿಜಾಸನ ಮುಖ್ಯ ದೇವತೆಗಳಲಿ|ವಿ ಚಾರಿಸೆ ಅನ್ಯದೊರೆಗಳುಂಟೆ 1 ಕಮಲ ಬಾಂ ಧವ ವರುಣರು ಮೃತ್ಯುಗಳೆಲ್ಲ| ಭಾವಿಸೆ ನೇಮದಲಿರುತಿಹರು 2 ಅವನ ರೋಮರೋಮದಿ ಬ್ರಹ್ಮಾಂಡವು | ಅವುದುಂಬರ ಫಲದಂತಿಹುದು | ಭುವನದಿ ಗುರುಮಹೀಪತಿ ಸ್ವಾಮಿಯು ಜಗ ಕಾವ ಕೊಲುವ ನಿರ್ಮಿಸುತಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೇ ನಮ್ಮ ಪರದೈವಾ ಹರಿಯೇ ತ್ರಿಭುವನ ಕಾವಾ ಹರಿಯೇ ಇಹಪರ ನೀವಾ ಜಗದೊಳಗೆ ಪ ಬಿಟ್ಟು ತಾಯ ತಂದೆಗಳ ನೆಟ್ಟನಡವಿಗೆ ಪೋಗಿ | ಮುಟ್ಟಿ ಭಜಿಸಲಾಗಿ ದಯವಿಟ್ಟು ಬಂದನು | ವಿಠಲ ನಚಲ ಪದವಿಯ ಕೊಟ್ಟು ಸಲಹಿದಕ | ಧಿಟ್ಟ ಧ್ರುವರಾಯ ಸಾಕ್ಷಿ ಅಂಬರದಲಿ 1 ಶರಧಿ ದಾಟ ಬಂದು ರಘು | ಪತಿ ಕರಿಸಿದನು | ಧರಿಯದುಳ್ಳನಕಾ ಲಂಕಾಪುರದ ಪದವಿಕೊಟ್ಟು ಕಾಯ್ದಾ | ಮೆರೆವಾ ವಿಭಿಷಣÁ ಸಾಕ್ಷಿ ಮೃತ್ಯುಲೋಕದೀ 2 ಧರೆಯ ನೆಳೆದು ಕೊಟ್ಟರಂಘ್ರಿ ವೆರಡರಿಂದ ಮುಚ್ಚಲಾಗಿ | ಶರಣ ತೃತಿಯ ಪಾದಕ ಶಿರಸವ ನೀಡಲು | ಹೊರೆದನೆಂದು ಬಲಿಸಾಕ್ಷಿ ಪಾತಾಳದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೇ ಪೊರೆಯದಿಹುದು ಸರಿಯೆ | ಎನ್ನ ಮರೆತೆ ಯಾತಕೊ ನಾನರಿಯೆ ಪ ಸೂಕರ ಯೋನಿಯಲಿ ಬಂದು | ನಾನು ಮನುಜನಾಗಿ ನಿಂದಿಹೆನಿಂದು ನಿನ ಬೇಡಿಕೊಂಬೆ ದಯಸಿಂಧು | ಎನ್ನ ಪುನಹ ಪುಟ್ಟಿಸಬೇಡವೆಂದು 1 ಮನಸು ವಚನ ಕಾಯಗಳಿಂದ | ನಿನ್ನ ಅನುಚರನಾಗಿಹೆ ಮುದದಿಂದ ದನುಜಾರಿ ಬಿಡಿಸೆನ್ನ ಬಂಧ | ಭವ- ಜನಿತವಾಗಿಹ ಜಾಲದಿಂದ 2 ಹಲವು ಮಾತೇಕೊ ಮಾಲೋಲ | ಮೌನಿ ಅಲವ ಬೋಧಾರ್ಚಿತ ಗೋಪಾಲ ಕಲುಷ ರಾಸಿಗಳನೆಲ್ಲ ಕಳೆದು ಸಲಹೈಯ್ಯಾ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಹರಿಸಿರಿ ರಮಣಿಯೆ ಕರಗಳ ಮುಗಿಯುವೆ ವರಮತಿ ನೀಡೆನಗೆ ಪ ಸರಸಿಜಾಕ್ಷನ ವಕ್ಷಸ್ಥಳದಿ ನಿವಾಸಿಯೆ ನಿರುತದಿ ಹರಿಪಾದ ಸ್ಮರಣೆ ಎನಗೆ ಕೊಡು ಅ.ಪ ಮಂದರೋದ್ಧರ ಗೋವಿಂದ ಗುಣಗಳಾ- ನಂದದಿ ಸ್ತುತಿಸಿ ಹಿಗ್ಗುವ ಜನನಿ ಇಂದಿರೆ ರಮೆ ಭಾರ್ಗವಿಯೆ ನಿನ್ನಯ ಪಾದ ದ್ವಂದ್ವಕೆ ನಮಿಪೆ ಸುಗಂಧಿ ಸುಂದರಿಯೆ 1 ಪರಮಪುರುಷ ಪುರುಷೋತ್ತಮನರಸಿಯೆ ಪಾವನಿ ಜನನಿ ಸುರರು ಕಿನ್ನರರು ಕಿಂಪುರುಷರು ಸ್ತುತಿಪರು ವರ ಮಹಾಲಕ್ಷ್ಮಿ ಸುಂದರಿ ಜಯ ಜಯ ಎಂದು 2 ಗಂಗಾಜನಕ ಪಾಂಡುರಂಗ ನಿಜ ಸತಿ ಭೃಂಗಕುಂತಳೆ ಭಾಗ್ಯದ ಖಣಿಯೆ ಅಂಗಜಜನಕ ವಿಹಂಗವಾಹನನ ಪಾ- ದಂಗಳ ಸ್ಮರಣೆಲಿ ನಲಿವ ಮನವ ಕೊಡು 3 ಪಕ್ಷಿವಾಹನ ಕಮಲಾಕ್ಷನ ಮಹಿಮೆಯ ವೀಕ್ಷಿಸಿ ಮನದಿ ಹಿಗ್ಗುವ ಜನನಿ ರಾಕ್ಷಸನಾಮ ವತ್ಸರದಲಿ ಭಕುತರ ಮೋಕ್ಷದಾತನು ಸಲಹುವ ಸುಜನರನು4 ಕಮಲಸಂಭವ ಕಮಲಾಲಯೆ ಹರಿಪಾದ ಕಮಲಭೃಂಗಳೆ ಹಿರಣ್ಯಹರಿಣಿ ಕಮಲನಾಭ ವಿಠ್ಠಲನೊಡಗೂಡಿ ಹೃ- ತ್ಕಮಲದಿ ಶೋಭಿಸು ಎನುತ ಸ್ತುತಿಸುವೆನು 5
--------------
ನಿಡಗುರುಕಿ ಜೀವೂಬಾಯಿ
ಹರಿಹರರು ಸರಿಯೆಂಬ ಮರುಳು ಜನರುಹರಿಹರರ ಚರಿತೆಯನು ತಿಳಿದು ಭಜಿಸುವುದು ಪ ಸುರರು ಮುನಿಗಳು ಕೂಡಿ ಪರದೈವವಾರೆಂದುಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು ಸಂಗರವ ಮಾಡಿಸಿ ನೋಡೆಮುರಹರನು ಪುರಹರನ ಗೆಲಿದುದರಿಯಾ 1 ಕರವ ಶಿರದ ಮ್ಯಾಲಿರಿಸಿ ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ 2 ದೂರ್ವಾಸರೂಪ ಹರನಂಬರೀಷನ ಮುಂದೆಗರ್ವವನು ಮೆರೆಸಿ ಜಡೆಯನು ಕಿತ್ತಿಡೆಸರ್ವಲೋಕದೊಳವನ ಚಕ್ರನಿಲಲೀಯದಿರೆಉರ್ವೀಶನನು ಸಾರಿ ಉಳಿದನರಿಯಾ 3 ಹರನಂಶ ದ್ರೋಣಸುತನು ಪಾಂಡವಾ ಎಂದುಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದುಶರಣಾಗತರ ಕಾಯಿದ ಕಥೆಯನರಿಯಾ 4 ನರನಾರಾಯಣರು ಬದರಿಕಾಶ್ರಮದಲಿರೆಹರನು ಹರಿಯೊಡನೆ ಕದನವನು ಮಾಡೆಹರಿ ಹರನ ಕಂಠವನು ಕರದಲಿ ಪಿಡಿದು ನೂಕೆಕೊರಳ ಕಪ್ಪಾದ ಕಥೆ ಕೇಳಿ ಅರಿಯಾ 5 ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆಹರ ನೋಡುವೆನೆಂದು ಸಂಪ್ರಾರ್ಥಿಸೆಪರಮ ಮೋಹನ ರೂಪಲಾವಣ್ಯವನು ಕಂಡುಹರ ಮರಳುಗೊಂಡ ಕಥೆ ಕೇಳಿ ಅರಿಯಾ 6 ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆಗರುಡವಾಹನನಾಗಿ ಕೃಷ್ಣ ಬಂದುಹರನ ಧುರದಲಿ ಜಯಿಸಿ ಅವನ ಕಿಂಕರನ ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ 7 ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆಹರನು ಹರಿಯೊಡನೆ ಕದನವನು ಮಾಡೆತರಹರಿಸಲಾರದೋಡಿದ ಕಥೆಯ ನೀನೊಮ್ಮೆಹಿರಿಯರ ಮುಖದಿ ಕೇಳಿ ನಂಬು ಹರಿಯಾ 8 ಹರಸುತನು ತಪದಿಂದ ಹರಿಯ ಚಕ್ರವ ಬೇಡೆಪರಮ ಹರುಷದಲಿ ಚಕ್ರವನೀಯಲುಭರದಿಂದ ಧರಿಸಲಾರದೆ ಚಕ್ರವನಂದುಹರನು ಭಂಗಿತನಾದನೆಂದರಿಯಲಾ 9 ರಾವಣಾಸುರ ಕುಂಭಕರ್ಣ ನರಕಾದಿಗಳುಶೈವತಪವನು ಮಾಡಿ ವರವ ಪಡೆಯೆಅವರುಗಳನು ವಿಷ್ಣು ನರರೂಪಿನಿಂದರಿದುದೇವರ್ಕಳನು ಕಾಯಿದ ಕಥೆಯ ನೀನರಿಯಾ 10 ಗಂಗಾಜನಕನÀ ಸನ್ಮಂಗಲ ಚರಿತ್ರ್ರೆಗಳಹಿಂಗದಲೆ ಕೇಳಿ ಸುಖಿಸುವ ಜನರಿಗೆಭಂಗವಿಲ್ಲದ ಪದವನಿತ್ತು ಸಲಹುವ ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ11
--------------
ಶ್ರೀಪಾದರಾಜರು
ಹರಿಹರಿ ಹರಿಯೆನ್ನಿ ಮಂದರಧರನೆ ಗತಿಯೆನ್ನಿ ದೀನ ದಯಾಕರನು ದಿವಿಭುವಿ ಪ. ಮಾನ ಭರಾಕರನು ನೀನೆಂದೊರವರನು ದುರಿತ- ಹೀನರ ಮಾಡುವನು 1 ತರಳನ ಮೊರೆ ಕೇಳಿ ವರ ನರ ಹರಿಯ ರೂಪವ ತಾಳಿ ದುರುಳ ಹಿರಣ್ಯಕನಾ ಕರುಳನು ಕೊರಳೊಳು ಧರಿಸಿದನಾ 2 ಗಜರಾಜನ ಕಾಯ್ದಾ ಬಾಣನ ಭುಂಜ ಪುಂಜವ ಕೊಯ್ದಾ ಗಜಪುರವರಗೊಲಿದಾ ಚರಣಾಂ- ಬುಜವೀವುತ ನಲಿದಾ 3 ನೆನೆದಲ್ಲಿಗೆ ಬರುವಾ ನಂಬಿದ ಜನರ ಸಂಗಡವಿರುವಾ ಅನುಗಾಲವು ಪೊರೆವಾ ಮನಸಿಜ ಜನನಿಯನಪ್ಪಿರುವಾ 4 ದಾಸರ ಸಲಹುವದು ಶೇಷ ಗಿ- ರೀಶನ ಮಹಾ ಬಿರುದು ದೋಷಗಳನು ತರಿದು ಈರೆರ- ಡಾಸೆ ಪೂರಿಪ ನೆರೆದೂ 5
--------------
ತುಪಾಕಿ ವೆಂಕಟರಮಣಾಚಾರ್ಯ