ಒಟ್ಟು 2789 ಕಡೆಗಳಲ್ಲಿ , 122 ದಾಸರು , 2090 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಧನ್ವಂತ್ರಿ ಸ್ತೋತ್ರ(ನಾರಾಯಣಾಚ್ಯುತ ವಿಠಲ ದಾಸಿಗಾಗಿ) ಕಾರುಣ್ಯ ನಿಧಿ ತವಾ | ಪಾರ ಮಹಿಮೆಯ ಕೇಳಿಸಾರಿದೆನೊ ಪಾದಾಬ್ಜ ಶರಣೆಂದು | ಶರಣೆಂದೆಶ್ರುನಾಥಪಾರು ಮಾಡಾಕೆಯ ವೃಜಿನವ 1 ಆಂತ್ರಕೆಟ್ಟಿಹುದೆಂದು | ತಾಂತ್ರಿಕರು ಪೇಳುವರುಆಂತ್ರ ಸರಿಮಾಡುವ ಕಾರ್ಯವ | ಕಾರ್ಯನಿರ್ವಹಿಸಿ ಸ್ವಾ-ತಂತ್ರ ಪುರುಷಾ ದಯತೋರೋ 2 ಪಾದ ಭಜಿಸೂವ | ಭಜಿಸೂವ ದಾಸಿಗೆಈ ರೀತಿ ಭವಣ್ಯಾಕೊ ಧನ್ವಂತ್ರಿ 3 ಆರೋಗ್ಯ ಆಯುಷ್ಯ | ಆರಾಧಕರ್ಗೀವೆಈರನುತ ಧನ್ವಂತ್ರಿ ಕರುಣಾಳು | ಕರುಣಾಳು ಸರ್ವಜ್ಞಆರೋಗ್ಯ ದಾಸಿಗೆ ಕೊಡು ಎಂಬೆ4 ಧಂ ಎಂದು ಉಚ್ಛರಿಸೆ | ಧ್ವಂಸ ಮಾಡುವೆ ರೋಗಧನಂತ್ರಿಯೆನ್ನೆ ಭವರೋಗ | ಭವರೋಗ ವಾರಿಸುವಧನ್ವಂತ್ರಿ ರೂಪಿ ನಮೊ ಎಂಬೆ 5 ಕರದಲ್ಲಿ ಸುಧೆ ಕಲಶ | ಧರಿಸಿರುವ ಬಗೆಯೇನೊಶರಣರ್ಗೆ ಸುಧೆಯಾನುಣಿಸುತ್ತ | ಉಣಿಸುತ್ತಲಮರತ್ವಕರುಣಿಸುವಿ ಎಂದೂ ಶ್ರುತಿ ಸಿದ್ಧ 6 ಇಂತಿರಲು ದಾಸಿಸ | ತ್ಪಂಥಗಳನ್ನುದ್ದರಿಸೊಅಂತು ತವ ಚರಣಾಬ್ಜ ಬೇಡುವೆ | ಬೇಡುವೆನೋಪಾದಾಕ್ರಾಂತಳಿಗೆ ಸುಧೆಯಾ ನೂಣೀಸೊ7 ಚಂದ್ರ ನಿವಹದ ಕಾಂತಿ | ಯಿಂದಮೃತ ಕಿರಣದಿಂಹೊಂದ್ಯಮಿತ ಸುಖರೂಪಿ ಉಲ್ಲಾಸವೀವುತ್ತಚಂದುಳ್ಳ ಸುಧೆ ಕಲಶ ಪಿಡಿಯುತ್ತ 8 ಆತು ಜ್ಞಾನಾಂಕವನು | ಆತ್ಮಸ್ಥಶೀತಾಂಶುಧೌತ ಮಂಡಲಗ ಲಕ್ಷ್ಮೀಶ | ಲಕ್ಷ್ಮೀಶ ಹರಿಯನ್ನುಮಾತು ಮಾತಿಗೆ ನಾನು ಸ್ಮರಿಸೂವೆ 9 ಉತ್ತಮಾಂಗದಲಿರುವ | ಹತ್ತೆರಡು ದಳ ಕಮಲಪ್ರಸ್ಥಿತನು ಧನ್ವಂತ್ರಿ ಮಕರಂದ | ಮಕರಂದ ಸ್ರವಿಸುವನಭಕ್ತಿಯಲಿ ಸ್ಮರಿಸೋದು ರೋಗಾರ್ತೆ 10 ಕಮಲ ಹೃದಯಸ್ಥ 11 ಸದನ ಷಟ್ದಳ ಕಮಲಗುದವು ಮೂಲಾಧಾರಾನಾಲ್ದಳವುನಾಲ್ದಳ ಕಮಲಸ್ಥಬದಿಗನು ಧನ್ವಂತ್ರಿ ರೂಪೀಯು 12 ರೂಪೀ ಈ ದೇಹವನು | ವ್ಯಾಪಿಸುತ ತಾನಿದ್ದುಕಾಪಾಡಲೋಸುಕದಿ ಮಕರಂದ | ಮಕರಂದ ಸುರಿಸುವವ್ಯಾಪಾರದಿಂ ಜೀವರುದ್ಧಾರ 13 ಹತ್ತಿರುವ ಅಜ್ಞಾನ | ವತ್ತಿಬಹ ಭಯದುಃಖಮತ್ತೆ ಮಹವಿಷವು ಇದರಿಂದ | ಇದರಿಂದ ಪರಿಹಾರ ಭಕ್ತಿಯಿಂ ಭಜಿಸೇ - ಸುಖ ಸೌಖ್ಯ 14 ಶರಣರ್ಗೆ ತಪ್ಪದೆಲೆ | ಗೆರೆವೆ ಸೌಖ್ಯಂಗಳನುಗುರು ಗೋವಿಂದ ವಿಠಲಾ | ವಿಠ್ಠಲ ಧನ್ವಂತ್ರಿಮರುತಾಂತರಾತ್ಮಾ ಸಲಹಯ್ಯ15
--------------
ಗುರುಗೋವಿಂದವಿಠಲರು
ಶ್ರೀ ಧ್ರುವಚರಿತ್ರೆ ಪದ ಭಜ ಭಜ ಭಜ ಶ್ರೀ ಗಣರಾಜ ತ್ಯಜ ತ್ಯಜ ತ್ಯಜ ತಾಮಸ ಬೀಜ ಪ ಶಂಕರ ಪುತ್ರ ಶುಭಂಕರ ವರನಿಜ ಪಾದ ಸರೋಜ 1 ಲಂಬೋದರ ಪೀತಾಂಬರಧರ ಕರು ಣಾಂಬುಧಿ ವರ ದೇವ ಮಹೀಜ 2 ಶ್ರೀಶಾನಂತಾಜದ್ರೀಶ ವರಾನ್ವಿತ ದಾಸ ಸುವೃತ ಮಾನಸ ಪೂಜ 3 ಆರ್ಯಾ ರಾಜ ಸುಪೂಜಿತ ರಾಜ ರಾಜ ನೃಪ ರಾಜ್ಯ ಮಾಡುತಾ ಇರುತಿಹನು ದುರ್ಜನ ಪುರುಷರ ತರ್ಜನ ಮಾಡುವ ಸಜ್ಜನ ಆತ್ಮಾರಿಂಗ್ಯತಿ ಪ್ರಿಯನು 1 ದೀನ ಬಂಧು ಬಹುದಾನವಂತ ಉ ಪಾದ ಎಂಬುವ ಹೆಸರು ಮಾನಿತರೊಳಗತಿ ಮಾನಯುಕ್ತರು ಮಾನಿನಿಯರು ಇಬ್ಬರು ಇಹರು2 ಸುರಚಿ ಗಣ್ಯಳು ಪಟ್ಟದರಸಿ ಸುನೀತಿಯು ವಿರಸದಿ ಆರಸಗ ನಿಷ್ಟ್ರಿಯಳು 3 ಮುತ್ತಿನಂಥ ವರಪುತ್ರರಿಬ್ಬರು ಉತ್ತಮನೆಂಬ ಸುರುಚಿಪುತ್ರಾ ಉತ್ತಮ ಗಣ್ಯ ಗುಣೋತ್ತಮ ಧ್ರುವನು ಮತ್ತ ಸುನೀತಿಗೆ ತಾ ಪುತ್ರಾ 4 ಮಂದಿರದೊಳಗೆ ವಸುಂಧರೇಶನು ಛಂದದಿ ತಾ ಸುಖದಿಂದಿರಲು ಒಂದಿನದಲಿ ಬಹುಸುಂದರಸಭಿಯಲ್ಯಾ ನಂದದಿ ಬಂದು ತಾ ಕುಳಿತಿರಲು 5 ಶ್ಲೋಕ ಕೂಡಿಸಿತಾ ತೊಡಿಯಲ್ಲಿ| ಮುದ್ದಿಸಿದಾ ಸಭಿಯಲ್ಲಿ | 1 ಛಂದ ನೋಡಿ ಧ್ರುವನು ತಾ ಹರುಷದಿಂದಲಿ ಓಡಿ ಬಂದನು ರಾಜ ಸಭಿಯಲಿ ಕೂಡಬೇಕು ತಾ ಎಂದು ತೊಡಿಯಲಿ ಇಂದು ಮನದಲಿ 1 ನಾಥ ಭೂಮಿಪಾ ನೋಡಿ ಬಾಲನ ಪ್ರೀತಿಯಿಂದಲ್ಯೊಂದು ಮಾತನಾಡನು ತಾತ ಸುತಗೆ ಬಾಯೆಂದು ಕರೆಯನು ಆತ ಧ್ರುವನು ತಾ ಅನಾಥನಾದನು 2 ಆಗ ಸುರುಚಿ ಬಾಲನ್ನ ನೋಡುತಾ ಬ್ಯಾಗನುದರದಲ್ಲಿ ಬಹಳ ಗರ್ವಿತಾ ಯೋಗ್ಯವಲ್ಲ ಕೂಡಲಿಕ್ಕೆ ತೊಡಿಯಲಿ ಹೀಂಗ ದುಷ್ಟ ಮಾತುಗಳು ಬಾಯಲ್ಲಿ 3 ಪದ ಬಾರದೊ ಧ್ರುವಾ ನಿನಗೆ ಸಿಂಹಾಸನ ಪದವಿ ಬಾರದೊ ಧ್ರುವಾ ನಿನಗೆ ಸಾರಸಿಂಹಾಸನವು ಪ ಏರ ಬೇಕೆಂಬುವಂಥಾ ಘೋರತನವ ಬಿಡು ಅ.ಪ ಅನ್ಯಳ ಮಗನೊ ನೀ ಯನ್ನಲಿ ಜನಿಸಿಲ್ಲಾ ಚೆನ್ನಿಗ ಉತ್ತುಮಾಗಿನ್ನ ನೀ ಸರಿಯೇನೋ 1 ಇಂದಿನಾ ಮನೋರಥಾ ಎಂದಿಗಾವುದಲ್ಲಾ ಕಂದ ಸುನೀತಿಯಾ ಮುಂದ ಕೂಡಾಲಿ ಪೋಗೊ 2 ಇಚ್ಛಿ ಮಾಡಾದಿರೋ ಹೆ ಚಿನ್ನಾ ಶ್ರೀ ವತ್ಸನಾರಾಧನಿ ಮಾಡಿಲ್ಲಾ 3 ವೀರ ಸಿಂಹಾಸನ ಏರಬೇಕಾದರೆ ವಾರಿಜನಾಭ ನಾರಾಧನಿ ಮಾಡೊನೀ 4 ` ಚೆನ್ನಿಗಾನಂತಾದ್ರೀಶ್ನ ' ನೀ ಪೂಜಿಸಿ ಯೆನ್ನಲ್ಲಿ ಪುಟ್ಟಾದೆ ಉನ್ನತ ಪದವಿಯು 5 ಶ್ಲೋಕ ಅತ್ಯಂತ ಘೋರತರ ವಾಕ್ಯಗಳನ್ನು ತಾಳಿ ಸಂತಪ್ತನಾದ ಮನದಲ್ಲಿ ಸುನೀತಿ ಬಾಲಾ ಪುತ್ರನ್ನ ನೋಡಿ ಪಿತ ಸುಮ್ಮನೆ ಕೂತನಾಗಾ ತಾತನ್ನು ಬಿಟ್ಟು ನಡದಾ ಧ್ರುವ ತಾನು ಬ್ಯಾಗಾ 1 ಶ್ವಾಸೋಚ್ಛ್ವಾಸವು ಬಾಯಿಲಿಂದ ಬಿಡುತಾ ಕಣ್ಣಿಂದ ನೀರ ಹೋಗುತಾ ಸೂಸು ಬಾಹುವ ದು:ಖದಿಂದ ಮರಗಿತಾ ರೋದನಾ ಮಾಡುತಾ ಬಂದಾ ತೀವ್ರದಿ ತಾಯಿ ಸನ್ನಿಧಿಯಲ್ಲಿ ಆಳುತಾಗ ತುಟಿ ಬಿರಿಗಿಸಿ ಬಂದಾ ಕಂದನ ಮುಂದ ಕುಳ್ಳಿರಿಸಿ ಸತಿ ಕೇಳ್ಯಾಳು ವಿಚಾರಿಸಿ 2 ಪದ ಕಂದ ನೀ ಬ್ಯಾಗ ಹೇಳೊ ಎಲ್ಲೊ ನಿನಗೆ ಇಂದು ಬಡಿದವರ್ಯಾರು ನಿನಗೆ ಪ ಎಂದು ಪೋಗದಲೆ ತನಯ ನೀನು ಇಂದು ಪೋಗಿದ್ದಿಯೊ ದಾರ ಮನಿಗೆ 1 ಘೋರತರ ದು:ಖವೇನೊ ಈ ಪರಿ ನೀರ ತುಳಕುವ ಕಣ್ಣುಗಳಿಗೆ 2 ಏನಂತ ಪೇಳಲಿ ಸ್ವಲ್ಪ ಇಲ್ಲಾ `ಅನಂತಾದ್ರೀಶನ ' ದಯವು ನಮಗೆ 3 ಪದ ತನಯನ ಕೇಳಲು ಹೀಂಗೆ ಪೌರಜನರು ನುಡದರಲ್ಯಾಗೆ ಅರುಚಿನುಡಿಗಳ ಲ್ಹ್ಯಾಂಗೆ ಆ ಸುರುಚಿ ನುಡಿದಳ್ಹಾಂಗೆ 1 ಕೇಳಿದಳೀ ಪರಿವಾಣಿ ಮನ ಪನ್ನಗ ವೇಣಿ ಸಾಗರ ಬಿದ್ದಳು ತರುಣಿ ತಾ ಕೂಗುತ ಕೋಕಿಲವಾಣಿ 2 ಒಡಲೊಳು ಕಿಚ್ಚುರದಂತೆ ಬಹು ಮಿಡುಕೊಳು ತಾಮನದಂತೆ ನಡುಗುತ ಹಿಮ ಹೊಡದಂತೆ ತಾ ನುಡು(ಡಿ)ವಳು ಕರುಣಾದಂತೆ 3 ಏನು ಮಾಡಲಿ ಇನ್ನಯ್ಯೋ ಬಹು ದೀನಳಾದೆ ನಯ್ಯಯ್ಯೊ ಮಾನದ ಪತಿಯೆನ ಕಾಯೊ ಗುರು ಮಾನಸ ದು:ಖವ ತಿಳಿಯೋ4 ಶರಣು ಕೇಳು ದೇವೇಶಾಯನ್ನೊಳು ಕರುಣಾಬಾರದೆ ಲೇಶಾ ಚರಣಕೆರಗುವೆನು ಶ್ರೀಶಾ ಮರಣ ಕುಡಾ`ನಂತದ್ರೀಶ' 5 ಛಂದ ನಾರಿ ಸುರುಚಿಯಾ ಮಾತು ಮರಿಯದೆ ಘೊರ ದು:ಖದಾಪಾರ ತಿಳಿಯದೆ ನೀರ ಧಾರಿಯ ಕಣ್ಣಲ್ಯುದುರುತಾ ಧೈರ್ಯ ಭಾವ ತಾ ಬಿಟ್ಟಳು ಸರುತಾ 1 ಸುಂದರಾಂಗಿಯು ನೊಂದು ಮನದೊಳು ಕಂದಧ್ರುವನ ತಾ ಮುಂದ ನುಡದಳು ಬಂದ ತಾಪವ ಸಹಿಸಬೇಕಯ್ಯಾ ಇಂದು ಮನಸಿನಾ ಕೋಪ ತಾಳಯ್ಯಾ 2 ಕೇಳು ಬಾಲನೆ ರಾಜಯನ್ನನು ಭಾಳ ತುಚ್ಛವ ಮಾಡುತಿಹನು ಭಾಳ ಲಜ್ಜದಿ ಸುನೀತಿ ಭಾರ್ಯಳೆಂದು ಹೇಳಲಿಕ್ಕೆ ನಾಚುತಿಹನು 3 ಯನಗ ಪುತ್ರ ನೀನಾದ ಕಾರಣಾ ನಿನಗ ಮಾಡುವಾ ಅರಸು ನಿರ್ಘೃಣಾ ಕನಸಿಲಿಲ್ಲವೊ ಯನಗ ಹಿತಕರು ತನಯ ವೈಯಲಿಲ್ಲವೊ ಯನ್ನದೇವರು 4 ಮಿಥ್ಯವಲ್ಲವೊ ಸುರುಚಿ ನುಡಿಗಳು ಸತ್ಯ ವಾದ ಮಾತುಗಳು ನುಡಿದಳು ಪಥ್ಯವೆ ಸರಿ ಪರಮ ನಿನಗಿವೆ ಪೊತ್ತುಗಳಿಯದೆ ಪೋಗರಣ್ಯಕೆ 5 ಗುರ್ವನುಗ್ರಹ ಶಿರಸಿ ಗ್ರಹಿಸೈಯ್ಯಾ ಶರ್ವಸಖಗ ನೀ ಪೂಜಿಮಾಡಯ್ಯಾ ಪೂರ್ವದಲ್ಲಿ ನಿನ್ನ ಮುತ್ಯ ಮಾಡಿದಾ ಸಾರ್ವಭೌಮ ಆಧಿಪತ್ಯ ಏರಿದಾ 6 ಇಂದಿರೇಶನಾ ಬ್ರಹ್ಮ ಪೂಜಿಸಿ ಮುಂದ ಏರಿದಾ ಸತ್ಯಲೋಕ ನೇಮಿಸಿ ಕಂದ ಭಜಿಸು ನೀ ಛಂದದಿ ಧ್ರುವಾ ಮುಂದ ಕೇಶವಾನಂದ ಸುರಿಸುವಾ 7 ಶ್ಲೋಕ ಜನನಿಯಾಡಿದ ವಾಕ್ಯವು ಕೇಳಿ ಆಗಾ ಮನಿ ಆಸಿಯು ಬಿಟ್ಟು ನಡದಾನು ಬ್ಯಾಗಾ ಘನಾರಣ್ಯಕೆ ಪೋಗಲು ಶೋಕಸಿಂಧು ಸಿಂಧು 1 ಆರ್ಯಾ ಇಂದಿರೇಶನಾ ಸುಂದರ ಗುಣಗಳ ಬಂದಾಕ್ಷಣಹೀಗೇಂದು ನುಡದನು ಕಂದಗ ಮುನಿ ಆ ಸಮಯದಲಿ 1 ನಿಲ್ಲೆಲೊ ಬಾಲಕ ಬಲ್ಲಿದರಣ್ಯದಿ ನಿಲ್ಲದೆ ಪೋಗುತಿ ಎಲ್ಲಿಗೆ ನೀ ಯೆಲ್ಲಿಂದ ಬಂದಿ ನೀ ಫುಲ್ಲಲೋಚನ ಯೆಲ್ಲ ಬಳಗ ಬಿಟ್ಟಿಲ್ಲಿಗೆ ನೀ 2 ಕಂದ ಬಿಟ್ಟ ನೀ ಬಂದ ಕಾರಣಾ ಇಂದು ತಾಯಿ ತಂದೆಗಳೆಲ್ಲ ಸುಂದರಾನನಾ ಛಂದದಿ ನುಡಿನೀ ಮಂದಿರ ವೃತ್ತಾಂತಗಳೆಲ್ಲಾ 3 ಶ್ರೇಷ್ಠನಾರದ ನೀ ಅಷ್ಟುಲೋಕವಾ ದೃಷ್ಟಿಲಿ ನೋಡುವಿ ಇಷ್ಟರಿಯಾ ಕೆಟ್ಟ ಮಾತು ಆದುಷ್ಟ ಮಳಾಯಿಯು ಎಷ್ಟು ನುಡದಳೊ ಯನಗÀಯ್ಯಾ4 ಏನು ಪೇಳಲಿ ನಾನು ಮುನೀಶ್ವರ ಮಾನ ಗೇಡಿ ಮಾಡಿದಳೆನ್ನಾ ಮಾನ ಹೋಗಿ ಅಪಮಾನಿತನಾಗಿ ಕಾನನ ಶೇರಿದೆ ನಾ ಮುನ್ನ 5 ಮಾನಪಮಾನಗಳೆನಾದರೂ ಸರಿ ಧ್ಯಾನಕ ತರಬಾರದು ನೀನು ನಾನಾ ಲೀಲಿಯಾ ಮಾಡುವ ಬಾಲಕಗೇನು ಚಿಂತೆ ಕೇಳರೆ(ಳುವೆ?) ನಾನು 6 ಶಾಂತನಾಗು ಗುಣವಂತ ಬಾಲ ನಿ ನ್ನಂತರಂಗ ಚಿಂತಿಯು ಬಲ್ಲೆ ಚಿಂತಿಸಿ ಬಂದ್ಯೋ ನೀ ಸತತ ಸುಖ ಭಗವಂತನನೆ ಬ(ರ?) ಬೇಕಂತಿಲ್ಲೆ 7 ಎಂಥವರಿಗೆ ಭಗವಂತ ದೊರಕ ನಿ ನ್ನಂಥ ಬಾಲನಾ ಗತಿಯೇನು ಕಾಂತನಯನ ಶ್ರೀಕಾಂತ ದೊರಕ ಛೀ ಭ್ರಾಂತಿ ಬಿಟ್ಟು ತ್ವರ ನಡಿ ನೀನು 8 ಪದ ನಡಿನಡಿ ನಡಿ ಧ್ರುವಾನೆ ತಿರುಗಿ ಮನಿಗೆ ನಡಿ ನಡಿ ನಡಿ ದೊಡ್ಡ ಅಡವಿಯು ಸೇರಾದೆ ಹುಡುಗ ಬುದ್ಧಿಯನು ಬಿಡು ತಡಮಾಡದೆ ಪ ಅಂಬಕಗಳಿಗೆ ತಾನು ತೋರಾನು ಪೀ ತಾಂಬರಧರ ದೇವಾನು ಅಂಬುಜನಾಭನ ನಂಬಿ ಭಜಿಸುವಂಥ ಹಂಬಲ ಬಿಟ್ಟು ವಿಳಂಬನ ಮಾಡದೆ 1 ಕಾಲಾವಲ್ಲವೋ ಬ್ಯಾಡಯ್ಯ ವಿಗ(ಹಿ?)ತವಾದ ಕಾಲಕೆ ತಪ ಮಾಡಯ್ಯ ಕಾಲಕಾಲಕೆ ಸ್ತನ ಪಾಲನುಂಬುವ ಸಣ್ಣ ಬಾಲ ಈ ವಚನ ಬಿಟ್ಟು ಕಾಲಗಳಿಯದೆ 2 ದೇಶದೇಶವ ತಿರುಗಿ ಬಹಳ ಕಾಸೋಸಿ ಇಂದಲೆ ಮರುಗಿ ಕ್ಲೇಶಾದಿ `ಅನಂತಾದ್ರೀಶ' ದೊರಕ ಘಾಸಿ ನೀ ಆಗದೆ 3 ಆರ್ಯಾ ಮುನಿಯ ವಚನ ನೃಪತನಯ ಕೇಳಿ ಬಹುವಿನಯದಿಂದಲಿ ಹೀಗೆಂದಾ ಘನದು:ಖದಿ ಯನ್ನ ಮನಿಗೆ ಪೋಗಲಿಕ್ಕೆ ಮನಸುವಲ್ಲದು ವಲ್ಲೆಂದಾ 1 ಪದ ಮನಿಗೊಲ್ಲೆ ವಲ್ಲೆ ಮುನಿರಾಯಾಪ ಬಹುತಲ್ಲಣಗೊಳು ತಿಹ(ಹೆ?)ನೈಯ್ಯಾ ಅ.ಪ ಶೋಣೀತ ವಸ್ತ್ರನೆ ಪಾಣಿವಿನಾದಿತ ವೀಣಾಧರ ಕೇಳಯ್ಯ 1 ದುಷ್ಟಮಳಾಯಿಯ ಕೆಟ್ಟಮಾತು ಒಂದಿಷ್ಟು ಸಹಿಸಲಾರೈಯ್ಯ 2 ದೀನದಯಾಳುವೆ ಮಾನಗಳಿದು ಮು ನ್ನೇನು ಉಳಸಲಿಲ್ಲೈಯ್ಯ 3
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ನರಸಿಂಹ ದೇವರು ರಕ್ಷಿಸೆನ್ನನು ನಿರುತ ನರಮೃತನಾಥ ಪ ರಕ್ಷಿಸೆನ್ನ ಜಗತ್ಕುಕ್ಷಿಯೆ ಕರುಣಾಕ ಟಾಕ್ಷದಿಂದೀಕ್ಷಿಸಿ ತ್ರ್ಯಕ್ಷಾಂತರ್ಗತದೇವ ಅ.ಪ ಪತಿತಪಾವನ ಪರಶತ ಮೋದಗತ ಬೇದ ಚತುರ್ವೇದ ಪಾಲ ಶತಕ್ರತು ಕೃತಿನಾಥ || ಯತಿ ತತಿ ಮಾನಸವೃತ ತೇಜ ಭಾಸ್ಕರ ಸತತ ನಿನ್ನಯ ಪಾದವ | ಸದ್ಭಕುತಿಯಲಿ ಸ್ತುತಿಪ ದಾಸರ ಸಂಗವ | ಗರೆದು ಭವ ಮಾಧವ ನೀನೊಲಿದತಿ ಹಿತದಿಂದುಣಿಸು ನಿನ್ನ ಕಥೆ ಸುಧಾರಸವ 1 ಅರಿದರ ಗದಾಪದ್ಮಧರ ಚತುಷ್ಟಯಕರ ತಸ್ಕರ ಹರ ನರಗಾತ್ರ ಹರಿವಕ್ರ ಸುರಪಾನುಜವಟು ಪರಶುಪಾಣಿಯೆ ವಾನರ ನರಪಾಲಕವಿgಹಿÀ ತಾಂ ಬರಕಲ್ಕಿ ಶರಣ ಜನರು ಭಕ್ತಿಪರವಶದಲಿ ಕೂಗಿ ಕರೆಯಲಾಕ್ಷಣ ಓ ಎಂದು ಭರದಿ ಬಂದು ಪೊರೆವ ಪ್ರಭು ನೀ ಎಂದು ಬುಧರು ಪೇಳ್ವ ವರವಾಕ್ಯ ಮನಕೆ ತಂದು ಪ್ರಾರ್ಥಿಪೆ ನಿನ್ನ ಚರಿತೆ ಪಾಡುವ ಸುಖಗರಿಯೊ ಬಂಧು 2 ಸಿಂಧು ಶಯನ ಶಾಮ ಸುಂದರ ವಿಠಲ ಇಂದಿರಾತ್ಮಕ ತ್ರಯ ಮಂದಿರ ಕಾರ್ಪರ ಮಂದಿರ ತರುರಾಜ ಮಂದಿರ ದ್ವಿಜ ಮಧ್ಯ ಮಂದಿರಾತ್ಮಜ ಹೃ ನ್ಮಂದಿರ ಸದ್ಧಕ್ತ ಮಂದಾರ ಭೂರುಹ3
--------------
ಶಾಮಸುಂದರ ವಿಠಲ
ಶ್ರೀ ಪತಿಯೆ ನಿನ್ನ ದಯವೆಂತಾಹದೋ ಪಾಪಕರ್ಮವ ಮಾಡಿ ಜೀವಿಸುವೆ ನಿರುತ ಪ ಬಾಲತನವನು ಬಾಲಲೀಲೆಯಿಂದಲಿ ಕಳೆದೆ ಕೀಳು ಜನರೊಡನೆ ಸ್ನೇಹವ ಬೆರಸಿದೆ ಹಾಳು ಹರಟೆಗೆ ಹೊತ್ತು ಸಾಲದೋಯಿತು ಯನಗೆ ಶ್ರೀ ಲೋಲ ನಿನ್ನಡಿಗೆ ದೂರಾದೆ ನಾನು 1 ಬುದ್ಧಿ ಪೂರ್ವಕದಿ ಸದ್ವಿದ್ಯೆಯನು ಕಲಿಯದಲೆ ಶುದ್ಧ ತಾಮಸ ವಿದ್ಯದೊಳು ರಮಿಸಿದೆ ಮಧ್ವಶಾಸ್ತ್ರದಸಾರವನ್ನು ತಿಳಿಯದೆ ನಾನು ಕದ್ದಕಳ್ಳನ ತೆರದಿ ಬಾಳಿದೆನು ಬರಿದೆ 2 ಪ್ರಾಯತನವೆ ವಿಷ ಪ್ರಾಯವಾಯಿತು ಎನಗೆ ಕಾಯಜನ ಉಪಟಳದಿ ಮತ್ತನಾದೆ ತೋಯಜಾಕ್ಷಿಯರ ದುರ್ಮಾಯ ಜಾಲಕೆ ಸಿಲುಕಿ ನೋಯಿಸಿದೆ ನಿಜ ಸತಿಯ ಪರಿಪರಿಯಲಿಂದ 3 ಮದನ ಜನಕನೆ ನಿನ್ನ ಮಧುರನಾಮವ ಮರೆದು ಸುದತಿಯರ ಅಧರಾಮೃತಕೆ ಬೆರೆದು ವಿಧಿಕುಲಾಚರಣೆ ಜರೆದ್ಹÀÀಗಲಿರುಳು ನಾರಿಯರ ವದನವನು ನೋಡಿ ಮೋದಿಪನರಾಧಮನೊಳ್ 4 ಉದರ ಗೋಸುಗ ಪರರ ಹೃದಯ ದ್ರವಿಸುವ ತೆರದಿ ವಿಧ - ವಿಧದಿ, ಆತ್ಮ ಸ್ತೊತ್ರವನೆ ಪೊಗಳಿ ಸದ-ಸದ್ವಿ ವೇಕವನು ತೊರೆದನ್ಯರ್ಹಳಿದು ಬಲು ಚದುರ ನಾನೆಂಧೇಳಿ ಮೋಸಗೊಳಿಸುತ ಜನರ 5 ಸಿರಿ ಚರಣಕ್ಕೆ ಶಿರ ಬಾಗ ದ್ಹರಿ ಭಕುತರಿಗೆ ವಿನಯದಿಂದೆರಗದೆ ನಿರುತದಲಿ ನಾಚಿಕಿಲ್ಲದಲೆ ಭೂದನುಜಯ ವಾನರಿಗೆ ಕರಮುಗಿದು ಜೀವಿಪÀಖೂಳ ಮನುಜನೊಳು 6 ಸತ್ಯಧರ್ಮವÀ ತ್ಯಜಿಸಿ ಮತ್ತೆಯುತ್ತಮರಜಾ - ನ್ನತ್ಯವನು ಸಹಿಸದಲೆ ತತ್ತಳಿಸುವೆ ಪೆತ್ತವರ ಸೇವಿಸದೇ ಮಿಥ್ಯವನೆ ಬೊಗಳಿದು - ಷ್ಕøತ್ಯದಿಂಬಾಳ್ವ ಉನ್ಮತ್ತನರ ಪಶುವಿನೊಳು 7 ಹರಿಗೆರಗದಿರುವÀÀ ಶಿರ ಹರಿಯ ಸ್ಮರಿಸದ ಜಿಂಹೆ ಹರಿವಾರ್ತೆಯಾಲಿಸದ ಕರ್ಣಂಗಳು ಕರ ಹರಿಯ ನೋಡದ ಚಕ್ಷು ಸರುವ ಪರಿಯ ಪವಿತ್ರದೇಹಧರಿಸಿದ ನರಗೆ 8 ವಿತ್ತ ಪಹರಿಸಿ ಪರರ ನಿಂದಿಸಿ ಪರರ ಬಲುವಂಚಿಸಿ ಪರಮೇಷ್ಟಿ ಜನಕನೆ ಪರತರ ಪರಂಜ್ಯೋತಿ ಪರದೈವನೆಂದರಿಯದಿರುವ ಪಾಮರನಿಗೆ 9 ನಾಮಾಡದಿಹ ಪಾಪ ವೀಮಹಿಯೊಳೊಂದಿಲ್ಲ ಸೀಮೆಗಾಣಲು ರವಿಜನಿಗೆ ಸಾಧ್ಯವಿಲ್ಲ ಆ ಮಹಾನರಕÀಂಗಳೆನಗೆÀ ತಕ್ಕವು ಅಲ್ಲ ಸ್ವಾಮಿ ನೀಪೊರೆಯದಿರೆ ಯನಗಾರು ಗತಿಯಿಲ್ಲ 10 ಏನಾದರೊಳಿತೆ ವರದೇಶ ವಿಠಲ ನಿನ್ನಾ ಙÁ್ಞನುಸಾರದಿ ಕರ್ಮಗಳ ಮಾಡಿದೆ ಧೀನರಕ್ಷಕನೆಂಬ ಬಿರಿದು ನಿಜ ವಿದ್ದರಾ - ದೀನನಾದವನನುದ್ಧರಿಸಲರಿಯಾ 11
--------------
ವರದೇಶವಿಠಲ
ಶ್ರೀ ಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪ- ರೀ ಪೃಥುವಿಯೊಳು ಧನ್ಯರು ಪ ಗೋಪಿನಾಥ ಪದಾಬ್ಜ ಮಧುಪ ದ- ಯಾ ಪಯೋನಿಧಿ ಸುಜನರಂತಃ- ಸ್ತಾಪಹಾರಕ ಗೋಪ ಸಕಲ ಕ- ಲಾಪವಿದ ತಾಪತ್ರಯಾಪಹ ಅ.ಪ. ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು ಹೀರ ವರ್ಣರು ಬಂದು ಕೇಳಲು ತೋರಿ ತುರುಗಳ ಗತಿಯ ಸೂರ್ಯನ ತೋರಿ ತಮ್ಮಯ ಪೋರ ವಯಸನು ಸೂರಿಗಳೇ ನೀವರಿಯರೆನ್ನುತ ಚಾರು ಉತ್ತರವಿತ್ತ ಧೀರರ 1 ಭೂದೇವನನು ಕೊಂದು ಬಾಧೆಗಾರದೆ ನೃಪ ತಾ ದೈನ್ಯದಲಿ ನಿಂದು ಬೇಡಲು ಪಾದ ಪದ್ಮಾ- ರಾಧನೆಯ ತೀರ್ಥವನು ಪ್ರೋಕ್ಷಿಸಿ ಆದರದಲೀಕ್ಷಿಸುತ ಭೂಪನ ಕಾದ ಕಾಂಚನದಂತೆ ಮಾಡಿದ 2 ಶಂಕಿಸಿ ದ್ವಿಜವೃಂದ ಆತಂಕಗೊಳ್ಳುತಲಿರೆ ಮಂಕುಗಳಾ ಡೊಂಕು ತಿದ್ದಲು ಬಿಂಕದಲಿ ತರಿಸಿ ಗೇರೆಣ್ಣೆ ಪಂಕದೊಳಗದ್ದಿರುವ ವಸ್ತ್ರಕೆ ಕಲುಷ ಹಾರಿಸಿ ಕಿಂಕರ ಮನಶಂಕೆ ಬಿಡಿಸಿದ 3 ಹರಿಗರ್ಪಿಸಿದ ನಾನಾ ಪರಿಯ ಶಾಖವ ಭುಂಜಿಸೆ ನರರು ತಾವರಿಯದೆ ಜರಿಯುತ್ತಿರೆ ಹರುಷದಿಂದಲಿ ಹಸಿಯ ವಸ್ತುಗ- ಳಿರವ ತೋರಿಸಿ ಮರುಳ ನೀಗಿಸಿ ಶರಣು ಶರಣೆನಲವರ ಪಾಲಿಸಿ ಮೆರೆದ ಬಹು ಗಂಭೀರ ಗುರುವರ 4 ಘೋರಾರಣ್ಯದಿ ದಿವ್ಯ ಕಾಸಾರ ನಿರ್ಮಿಸಿ ನಾರಸಿಂಹನ ನೆಲಸಿ ಊರು ಮಂದಿಯು ನೋಡುತಿರಲಾ- ವಾರಿ ಮಧ್ಯದಿ ಬಂದ ಗಂಗೆಗೆ ಸೀರೆ ಕುಪ್ಪಸ ಬಾಗಿನಂಗಳ ಧಾರೆಯೆರೆದಪಾರ ಮಹಿಮರ 5 ಫಣಿ ಬಂಧ ನಿವಾರಿಸಿ ಭಾಷಿಸಿ ಫಣಿಪನ್ನ ತೋಷಿಸಿ ಕಾಶಿ ಗಯಾ ಶ್ರೀ ಮುಷ್ಣದ್ವಾರಕ ಶೇಷಗಿರಿ ಮೊದಲಾದ ಪುಣ್ಯ ಪ್ರ- ದೇಶಗಳ ಸಂಚರಿಸಿ ಭಕ್ತರ ದೋಷರಾಶಿಯ ನಾಶಗೈಸಿದ 6 ಕಸ್ತೂರಿತಿಲಕ ಶ್ರೀಗಂಧ ಲೇಪನದಿಂದ ನಿತ್ಯ ಮಹೋತ್ಸವಗೊಳುತ ಮುತ್ತಿನಂಗಿಯ ಮೇಲ್ಕುಲಾವಿಯು ರತ್ನ ಕೆತ್ತಿದ ಕರ್ಣಕುಂಡಲ ಬಿತ್ತರದಿ ಧರಿಸುತ್ತ ರಥವನು ಹತ್ತಿ ಬರುತಿಹ ಸ್ತುತ್ಯ ಬಿರುದಿನ 7 ಆರ ಬೃಂದಾವನ ಸೇವೆಯ ಮಾಡಲು ಕ್ರೂರ ಭೂತಗಳೆಲ್ಲ ದೂರವು ಆರ ಬೃಂದಾವನದ ಮೃತ್ತಿಕೆ ನೀರು ಕುಡಿಯಲು ಘೋರಕ್ಷಯ ಅಪ- ಸ್ಮಾರ ಗುಲ್ಮಾದಿಗಳ ಉಪಟಳ ಹಾರಿ ಪೋಪುದು ಆ ಮುನೀಶ್ವರ 8 ಪರವಾದಿಗಳ ಬೆನ್ನುಮುರಿವ ವಜ್ರದ ಡಾಣೆ ಶರಣ ರಕ್ಷಾ ಮಣಿಯೆ ದುರಿತ ತಿಮಿರಕೆ ಮೆರೆವ ದಿನಮಣಿ ಎನಿಸಿ ಪೂರ್ವ ಕವಾಟ ನಾಮಕ ಪುರದ ನರಕೇಸರಿ ಕ್ಷೇತ್ರದಿ ಸ್ಥಿರದಿ ಶ್ರೀ ಕಾಂತನನು ಭಜಿಸುವ 9
--------------
ಲಕ್ಷ್ಮೀನಾರಯಣರಾಯರು
ಶ್ರೀ ಪುರುಷೋತ್ತಮವಿಲಾಸ 62-2 ಆನಂದ ಜ್ಞಾನಮಯ ಅಖಿಲ ಗುಣ ಪರಿಪೂರ್ಣ || ಅನಘ ಲಕ್ಷ್ಮೀರಮಣ ಶರಣು ಜಗದೀಶ ಪ ವನಜಾಸನಾದಿ ಸುರರಿಂದ ಆರಾಧಿತನೇ | ವನಜಜಾಂಡದಿ ಜಗಜ್ಜನ್ಮಾದಿಪತೇ ಅಪ ಅಮಿತ ಅನಂತ ಗುಣಕ್ರಿಯಾರೂಪ ಅನಂತ ಶೀರ್ಷಾನಂತ ಉರುಸುಗುಣಪೂರ್ಣ|| ಅನಂತಾಕ್ಷ ಸರ್ವಜ್ಞ ಸಾಕ್ಷಿ ಸರ್ವಾಧ್ಯಕ್ಷ || ಅನಂತಪಾದನು ಅನಂತರೂಪಸರ್ವಸ್ಥ 1 ಸಹಸ್ರಪಾತ್ ಸತ್ಯಂ ಸತ್‍ಸೃಷ್ಟಿ ಜೀವನದ ಸಹಸ್ರಾಕ್ಷಜ್ಞಾನಂ ಎರಡು ವಿಧಜ್ಞಾನ || ಸಹಸ್ರಶೀರ್ಷಾನಂತಂ ಆನಂದ ಆನಂದ ಮಹಾಮಹಿಮ ಪೂರ್ಣಗುಣ ಪುರುಷನೀಬ್ರಹ್ಮ 2 ನಾಕಭೂಪಾತಾಳ ಜಗದಂತರ್ಬಹಿವ್ರ್ಯಾಪ್ತ || ಭಕುತರ ಸಮೀಪಸ್ಥ ಇತರರಿಗೆ ದೂರ || ಏಕಾತ್ಮ ಪರಮಾತ್ಮ ಪರಮ ಪುರುಷವಿಷ್ಣೋ ನೀಕಾಲಗುಣ ದೇಶಾಪರಿಶ್ಚಿನ್ನ ಭೂಮನ್ 3 ಪ್ರಕೃತಿಶಚವ್ಯಕ್ತ - ಮಹದಾದಿ ತತ್ವಂಗಳಿಗೇ | ಆಕಾಶ ಮೊದಲಾದ ಭೂತ ಪಂಚಕಕ್ಕೆ || ಸುಖಮಯನೇ ನೀಸರ್ವೆ ಚೇತನಾ ಚೇತನಕೆ | ಏಕ ಆಶ್ರಯ ಅನಂತ ಶೀರ್ಷಾಕ್ಷಪಾದ 4 ಪರಮೇಶ ಅವಿಕಾರ ಸಮರ್ಥ ಉರು ತೈಜಸಚ್ಛಕ್ತಿ ರೂಪವಷಟ್ಕಾರ ಪ್ರಕ್ರತಿ ಸರ್ವದಿ ನೀನು ಸ್ವೇಚ್ಛೆಯಿಂ ತುಂಬಿರುವಿ | ಪ್ರಕೃತಿ ಸರ್ವವು ನಿನ್ನಧೀನವೋ ಸ್ವಾಮಿ 5 ದ್ಯುಭ್ವಾದಿ ಜಗತ್ತಿಗೆ ಆಧಾರಾಧಿಷ್ಠಿತನು ದುಭ್ವಾದಿಗಳವ್ಯಾಪ್ಯ ವ್ಯಾಪಕನು ನೀನು ಸರ್ವಸ್ಥನಾಗಿ ನೀ ಸರ್ವವಶಿಯಾದುದರಿಂ ಸರ್ವನೀನೇಂದೆನಿಸಿಕೊಂಬಿಯೋ ಸ್ವಾಮಿ 6 ಆಧಾರ ಆಧೇಯೆ ಅನಂತಾಲ್ಪಶಕ್ತಿಯು ಅಧಿಷ್ಠಾನಾಷ್ಟಿತ ವ್ಯಾಪ್ಯ ವ್ಯಾಪಕವು ಭೇದ ಈರೀತಿಯಲಿ ಸುಸ್ಪಷ್ಟವಾಗಿದೆಯು ಇದಂಸರ್ವಂ ಉಕ್ತಿ ನಿನ್ ಸ್ವಾಮಿತ್ವ ಬೋಧಕವು 7 ಅಧೀನ ನಿನ್ನಲ್ಲಿ ಸ್ವಾಮಿ ಸರ್ವವಶಿಸರ್ವ | ಓದುನವು ಕರ್ಮಫಲಭುಂಜಿಪ ಸಂಸಾರಿಗಳು ಅದರಂತೆ ಮುಕ್ತರಸ್ವಾಮಿ ಆಶ್ರಯನು 8 ಇವು ಮಾತ್ರವೇ ನಿನ್ನ ಮಹಿಮೆಗಳು ಪರಮಾತ್ಮ || ಸರ್ವ ಈ ಚೇತನಾಚೇತನ ಪ್ರಪಂಚವು ಸರ್ವೇಶ ನಿನ್ನಂಶ ಸಹೃದಯ ಕಿಂಚಿತ್ತು 9 ಒಡೆಯನಿನ್ನಮಿತ ಶಕ್ತಿಯೊದಂಶದಲೆ ಜಡಜಗತ್ ಇರುವಿಕೆ ವಿಕಾರವುಸರ್ವ || ಜಡ ಭಿನ್ನರಲಿ ನಿನ್ನ ಸಾದೃಶ್ಯ ಅತಿ ಸ್ವಲ್ಪ ಪಾದ ವೊಂದಂ ಶೃತ ಸುಪಾದನು 10 ಅಧೀನತ್ವದಿಂಜಗತ್ ಇದಂಸರ್ವಂ ಎಂದಂತೆ - ಪಾದೋಸ್ಯ ವಿಶ್ವದಲಿ ಭಿನ್ನಾಂಶಜೇಯ || ಭಿನ್ನಜೀವರು ನಿನ್ನ ಪಾದರಾಗಿತಿಹರೋ ಚಿತ್ಚೇತ್ಯಯಂತ 11 ಪೂರ್ಣಗುಣನಿಧಿ ಅನಘ ಜನ್ಮಾದಿಕರ್ತಅಜ ಆವಣ್ನಯೋನಿತ ಪ್ರಾಪ್ಯ ಮಧ್ವಸ್ಥ ಶರಣು || ವನಜಭವಪಿತ ಶ್ರೀಶ ಪ್ರಸನ್ನ ಶ್ರೀನಿವಾಸ ನಮೋ ಪರಮ ಪುರಷ 12
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ ಸಾನುರಾಗದಲಿ ಸ್ಮರಿಸುವರ ಭಕುತಿಯನ್ನು ಕೊಡುತಿಹರು ಪ ವರಕಾಶ್ಯೊಪಸದ್ಗೋತ್ರದಿ ಲಿಂಗಸು - ಗುರು ಕರಣಿಕರಲಿ ಸಂಜನಿಸಿ ತಿರುಕಾರ್ಯರ ಪರತನುಭವಯೋಗೀಂ - ದ್ರರು ಯಂಬ ಸುನಾಮದಿ ಕರಿಸಿ 1 ಕೆಲವುಕಾಲ ಲೌಕಿಕವನುಸರಿಸುತ ಲಲನೆ ತರಳರಿಂದೊಡಗೂಡಿ ಬಲು ವಿನಯದಿ ಸಾಧುಗಳರ್ಚಿಸಿ ನಿ - ರ್ಮಲ ವೈರಾಗ್ಯ ಮನದಿ ಕೂಡಿ2 ಮೂಜಗದೊಳು ಪ್ರಖ್ಯಾತರೆನಿಸಿದ ಶ್ರೀ ಜಗನ್ನಾಥಾರ್ಯರ ಪಾದಾಂ - ಭೋಜ ಭಜಿಸಿ ಪ್ರಾಣೇಶಾಂಕಿತವನು ತಾಜವದಿಂದವರಲಿಪಡೆದ 3 ಶ್ರೀಶಪಾದಯುಗ್ಮಗಳಲಿ ಸದ್ರತಿ ದಾಸಜನಗಳಲಿ ಸದ್ಭಕುತಿ ಹೇಸಿಭವದ ಸುಖದಾಸೆ ಜರಿದು ಸಂ - ತೋಷದಿ ಧರಿಸಿಹ ಸುವಿರಕುತಿ 4 ನೇಮದಿ ಯಮನಿಯಮವ ವಹಿಸಿ ತಾ ಮುದದಲಿ ನಲಿಯುತ ಕೀರ್ತಿಸುತಿಹ ಶ್ರೀ ಮನೋಹರನ ಸುಗುಣರಾಶಿ 5 ಪರಿಪರಿ ಹರಿಕಥೆವರ ಪ್ರಮೇಯಗಳ ಸರ್ವಜ್ಞ್ಞರ ಉಕ್ತ್ಯನುಸರಿಸಿ ವಿರಚಿಸಿ ಹರಿಮಂದಿರದ ಸುಪಥ ಪಾ - ಮರರಿಗೆ ಸೌಕರ್ಯವಗೈಸಿ 6 ವರದೆಂದ್ರರ ಪದಸರಸಿಜ ಸೇವಿಸಿ ಹರುಷದಲವರ ಕರುಣ ಪಡೆದ ವರವೃಂದಾವನ ಸಂಸ್ಥಾಪಿಸಿ ಪರಿಪರಿಯಿಂದಲಿಯಾರಾಧಿಸಿದ7 ಜ್ಞಾನದಿಲಯವನು ಚಿಂತಿಸುತಾ ಚಿತ್ರ ಬಾನುಸಪ್ತಮಿ ಯಾಶ್ವಿಜಶುದ್ಧ ಜಾನಕಿ ಪತಿಪದ ಧೇನಿಸಿಹರಿಪುರ ಕೀನರ ದೇಹ ಜರಿದು ಸಾರ್ದ 8 ಪರಮಭಾಗವತರೆನಿಸುವರಿವರನ ವರ ತನದ ಸುಮಾಲಿಕೆ ಸತತ ಸ್ಮರಿಸುವ ಭಕುತರ ಪುರುಷಾರ್ಥಗಳನು ವರದೇಶವಿಠಲನ ಕೊಡುವ ತ್ವರಿತ 9
--------------
ವರದೇಶವಿಠಲ
ಶ್ರೀ ಪ್ರಾಣೇಶದಾಸಾರ್ಯರ ಸ್ತುತಿ ತೆರಳಿದರು ಪರಮ ತೋಷದಲಿ ಹರಿಪರಕೆ |ಹರಿಪ್ರೀಯರಾದ ಪ್ರಾಣೇಶದಾಸರು ತ್ವರದಿ ಪ ನಿರುತದಲಿ ಹರಿಪೂಜೆ |ಮರಿಯದಲಿ ಮಾಡಿ ಬಲು |ಸ್ಥಿರ ಬುದ್ಧಿ ಪೂರ್ವಕದಲಿ |ಗುರುಗಳಲಿ ಸರ್ವಜ್ಞರಾಯರಿಂದಧಿಕ ಮ ||ತ್ತಿರಲುಂಟೆ ಎಂದು ತಿಳುಹಿ |ದುರುಳ ಜನರನುಸರಿಸದಲೆ ಕವಿಗಳೊಡನಾಡಿ |ಚರಿಸಿ ದೇಶಗಳಲ್ಲಿ ಮೆರೆದು ಖ್ಯಾತಿಯ ಪಡದು 1 ಭಾಗವತ ಶ್ರೇಷ್ಟ ಜಗನ್ನಾಥ ದಾಸಾಖ್ಯರಡಿ |ಜಾಗುಮಾಡದಲರ್ಚಿಸಿ |ಭೋಗಿವರ ಶಯನ ಪ್ರಾಣೇಶವಿಠಲಾಂಕಿತವ ||ಆ ಗುರುಗಳಿಂದ ಕೊಂಡು |ರಾಗದ್ವೇಷಗಳೆಂಬ ಅರಿಗಳನು ಸಂಹರಿಸಿ |ರಾಗದಲಿ ಹರಿಕಥನ ಕವನ ರೂಪದಿ ಪೇಳಿ2 ಪ್ರಾಣಮತವನನುಸರಿಸಿ ಆಚರಣಿಯನು ಮಾಡಿ |ಪ್ರಾಣಿಗಳಿಗೆ ತಿಳಿಸದೆ |ಕ್ಷೋಣಿಯೊಳಗಿನ್ನು ಇರಸಾಕೆಂದು ಆ |ಚಿತ್ರಭಾನು ಆಶ್ವಯುಜ ಶುದ್ಧ ಸಪ್ತಮಿಯಲಿ ||ಜ್ಞಾನಪೂರ್ವಕ ಲಯ ಚಿಂತನೆಯ ಮಾಡಿ ಗುರು |ಪ್ರಾಣೇಶ ವಿಠಲನಿದ್ದಾ ಪುರಕೆ ಜವದಿಂದ3
--------------
ಗುರುಪ್ರಾಣೇಶವಿಠಲರು
ಶ್ರೀ ಬ್ರಹ್ಮದೇವರ ಸ್ತವನ ಬ್ರಹ್ಮಾ ಮಾಂ ಪಾಲಯಸುಬ್ರಹ್ಮಣ್ಯ ಪಿತನ ಪಿತನೇ ಪ ವಾಕು ಲಾಲಿಸೊ ವರಪ್ರದಾ ಶ್ರೀಕರ ಹರಿಯವ ಲೋಕನ ಮಾರ್ಗವನೀ ಕೊಡುತೆನಗೆ ವಿವೇಕವ ತೋರೋ 1 ಸುಳಿ ನಾಭೀ ಪದುಮ ಭೂ | ಕಲಿಮಲಘ್ನ ಸ್ವಯಂಭೂಅಳಿಕುಲ ದೇಣಿ ವಾಣಿ ಸಂಸೇವ್ಯನೆ |ಅಳಿದ ಅವಿದ್ಯಗಳ ಸಲಹೊ ಸುರಜೇಷ್ಟಾ 2 ಭವ ತವ ಶರ್ವಾವ್ಯಕುತಿಗೈದು ಮುಖ ನಾಲ್ಕರಿಂದಸುಖಿಪೆ ಚತುರ ಮುಖ ಪರಮೇಷ್ಠೀ 3 ದಶದಶಾನಂದಾ ಶೃತ ಧೃತೀ | ಯಶ ಪೊಗಳಲಳವೆ ಸಕಲ ಮತೀವಿಷಧರನುತ ಮಮ ಧೀ ಪ್ರಸರಣವಿಷಯ ವಿರಲಿ ತವ ಮನಸಿನೊಳಗೇ 4 ವಿಶ್ವ ಸೃಜನೇ | ಬುದ್ಧ್ಯಾಭಿಮಾನಿ ವಂದಿತನೆಮಧು ವೈರಿಯ ಪದ ಸೇವಕ ವಿಧಿಮಧುಕರ ತವ ಪದ ಪಲ್ಲವ ತೋರೋ 5 ಸಂಚಿತ ದುರಿತ ಗಮನ ಹರಿಮಂಚ ಯೋಗ್ಯನುತ |ಮುಂಚೆ ಮನವ ಹರಿಚಿಂತನೆಲಿರಸೋ 6 ಋಜುನಿಕರಕ್ಯಧಿಕನೇ | ನಿಜ ವೈಭವದಿ ಮೆರೆವನೇಅಜ ಗುರು ಗೋವಿಂದ ವಿಠಲನ ಪದಬಿಸಜ ಕಾಂಬ ಋಜು ಮಾರ್ಗದಲ್ಲಿಡು 7
--------------
ಗುರುಗೋವಿಂದವಿಠಲರು
ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ | ಶ್ರೀ ಭೂರಮಣನ ತನಯೇಪ ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು | ಇನ್ನು ನೀ ಮರಿಸದೇ | ಪುಣ್ಯನರನ ಮಾಡೊ ಪೂತೋಭಾವವೆಂದು | ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ 1 ಶಿವ ನಿನ್ನ ಶಿರದಲ್ಲಿ ಧರಿಸಿದೆ ಕಾರಣ ಪವಿತ್ರಂಗನಾದನೆಂದು | ಅವನಿಯೊಳಗೆ ಮಹಾ | ಕವಿಜನ ಪೇಳಿದ ಶ್ರವಣದಿಂದಲಿ ಭಕುತಿಯಿಂದಲಿ ನಿಂದೆ 2 ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ | ಪಾದ | ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವದು 3
--------------
ವಿಜಯದಾಸ
ಶ್ರೀ ಮಹಾದೇವರು ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1 ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2 ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3
--------------
ಶಾಮಸುಂದರ ವಿಠಲ
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ. ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ. ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1 ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2 ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3
--------------
ಗೋಪಾಲದಾಸರು
ಶ್ರೀ ಮುಖ್ಯ ಪ್ರಾಣದೇವರ ಸ್ತೋತ್ರ ಪಾಲಿಸಯ್ಯಾ ಶ್ರೀ | ಪ್ರಾಣರಾಯ | ಪಾಲಿಸಯ್ಯಾ ||ಪಾಲಿಸಯ್ಯಾ ಶ್ರೀ ಲೋಲನ ಭೃತ್ಸನೆ |ವಾಲಯದಲಿ, ಮಹದುರಿತವ ತರಿದು ಪ ಶರಣು ಪೊಕ್ಕವರ ಸಲಹುವನೆಂದು |ವರವೇದಂಗಳು ಸಾರುತಲಿಹವೊ 1 ಶಿಶುವಿನ ತಪ್ಪೆಣಿಸದೆ ಆ ಜನನಿಯು |ಬಿಸುಟದೆ ತ್ಪರದಿಂ ಕರುಣ ಮಾಳ್ಪವೋಲ್ 2 ಶ್ರೀಶ ಪ್ರಾಣೇಶ ವಿಠಲನ ದಾಸಾಗ್ರಣಿ |ನೀ ಸದಾ ಕರುಣ್ಯುಪೇಕ್ಷ ಮಾಡದೇ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಮುದ್ದು ಮೋಹನ್ನ | ವಿಠಲ ಪೊರೆ ಇವನಾ ಪ ನಾಮ ಸಂಸೃತಿ ಇವಗೆ | ಸತತ ನೀನಿತ್ತು ಅ.ಪ. ವೇಣುಲೋಲನ ಮಹಿಮೆ | ಗಾನಮಾಡಲು ಇವಗೆಜ್ಞಾನವಂಕುರಿಸಲ್ಕೆ | ಜ್ಞಾನಿಸಂಗವಕೊಡೊ |ಮಾನನಿಧಿ ಮಧ್ವಾಖ್ಯ | ಸನ್ಮತದಲುದಿಸಿಹನೊ ಮೌನಿಜನ ವೃಂದ ಸ | ನ್ಮಾನ ಮಾಳ್ವವನಾ 1 ಭವವನದಿ ನವಪೋತ | ಶ್ರವಣ ಸಾಧನವಿತ್ತುನವನವ ಸುವಿಶೇಷ | ಮಹಿಮಯುತ ಹರಿಯಾಪ್ರವರ ಗುಣರೂಪಗಳ | ಸ್ತವನ ಮಾಳ್ವಂತೆಸಗಿಪವನಾಂತರಾತ್ಮಕನೆ | ಪಾಲಿಸೊ ಇವನಾ 2 ಕಾಕು ಸಂಗವಕೊಡದೆಮಾಕಳತ್ರನದಾಸ | ಸಂಕುಲದಲಿರಿಸೋವ್ಯಾಕುಲಾರ್ಥಿಕ ಕಳೆಯೆ | ಬೇಕಾದ ವರಗಳನೆನೀ ಕೊಟ್ಟುಕಾಯೊ ಕೃ | ಪಾಕರನೆ ಹರಿಯೇ 3 ತೈಜಸನೆ ನೀನಾಗಿ | ಯೋಜಿಸಿದ ಅಂಕಿತವ ಮಾಜದಲೆ ಇತ್ತಿಹೆನೊ | ನೈಜ ಮಾರ್ಗದಲೀಮಾಜಗಜನ್ಮಾದಿ ನಿ | ವ್ಯಾಕಜ್ಯ ಕಾರುಣಿಕವಾಜಿವದನನೆ ಪೊರೆಯೊ | ವೃಜನಾರ್ಥನೆನಸೀ 4 ಸಂತ ಸಂಗವನಿತ್ತು | ಅಂತರಾತ್ಮಕ ನಿನ್ನಚಿಂತೆಯಲ್ಲಿರುಸುತಲಿ | ಭ್ರಾಂತಿಯಿರದೊಂದುಅಂತ ಗೈಯುವಮಾರ್ಗ | ಕಂತುಪಿತ ನೀನಿತ್ತುಕಾಂತ ಗುರು ಗೋವಿಂದ | ವಿಠಲಾ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಶ್ರೀ ರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ | ಚಾರುತರ ಯುಗ್ಮಪದ ರಂಜನಾಸುರ ಸಂ | ಹಾರ ಸುರ ಜನ ಪಾಲ ಪರಮಾನಂದ ಸಾ | ಕಾರನಲಿದುಪ್ಪವಡಿಸಾ ಹರಿಯೇ ಪ ಹರಿವೇಗ ಮಂಮೀರ್ವ ಹರಿಗಳೇಳಂಗಳದಲಿ | ಹರಿಯಾಗ್ರಜನನಿಂದ ಹರಿಪದದೊಳಗ ಜವದಿ ಹರಿವುತಿಹ ಝಗ ಝಗಿಪ ಹರಿಮಯದ ರಥದೊಳಗ | ಹರುಷಾದೊಳಡರ್ದು ಬಳಿಕಾ || ಹರಿದಿಕ್ಕಿ ಲಿಂದೊಗೆದು ಹರಿಜಗಳ ವಿಸ್ತರಿಸಿ | ಹರಿಯುಮೊದಲಾದವರ ಹರಿಸಿ ತೇಜವ ಜಗಕ | ಪರಿ ಹರಿಸಿ ಉದಿಸಿದಹರಿಯು ನರಹರಿಯೆ ಉಪ್ಪವಡಿಸಾಹರಿಯೇ1 ಪವನಜ ಖಗರಾಜ | ಭಜಿಪಧ್ರುವದ ಶಶಿರಾನುಜ ಭಿಷ್ಮಾ ತನ್ನ ಆ | ತ್ಮ ಜರಿತ್ತ ರಿಕ್ಷಪತಿ ರಜನೀಶ ವಾನ್ನರ | ಧ್ವಜ ವಿಧುರ ಅಂಬರೀಷಾ || ದ್ವಿಜ ಪುಂಡಲೀಕ ಪದ್ಮಜ ಮುಖ್ಯರಾದ ನಾ | ಶುಕ ಉದ್ಧವ ಬಲಿ ಜಯ ವಿಜಯರ ಕೂಡಿ | ಸುಜನರೈ ತಂದ | ರಂಬುಜ ಪದಕ ನಮಿಸೆ ವಾ | ರಿಜನಾಭ ಉಪ್ಪವಡಿಸಾ ಹರಿಯೇ 2 ಪಾಕ ಶಾಸನ ಅಗ್ನಿ ಆಕಾಳ ನೈಋತಿರ | ತ್ನಾಕರ ಪ್ರಭಂಜನಪಿ ನಾಕಿವರ ಕೌಬೇರ | ನಾಕೆರಡು ದಿಕ್ಕಿನವರೇಕೋ ಭಾವದಲಿಂದ ನಾಕ ಪುರಗಜ ಅಜಮಹಾ ಕೋಣ ಮನುಜ ಮಕ | ಹಾಕುರಂಗಂದಣವು ಗೋಕುಲೆಂದ್ರನು ಇಂತು | ವಾಹನ ವಿವೇಕದೇರಿ ಬಂದಿದೆ | ಲೋಕೇಶ ಉಪ್ಪವಡಿಸಾ ಹರಿಯೇ3 ಶ್ರೇಷ್ಠ ಕಶ್ಯಪ ಋಷಿ ವಶಿಷ್ಠ ಗಾರ್ಗೇಯ ತಪೋ | ನಿಷ್ಠ ವಿಶ್ವಾಮಿತ್ರ ಸೃಷ್ಠಿಯೊಳ ಜಲದ ಸಂ | ದಷ್ಟ ವರುಣನ ಗರ್ವ ಭಷ್ಟ ಮಾಡಿದಗಸ್ತಿ | ಅಷ್ಟಾದಶ ಧ್ವಯ ಬಾರಿ ಸೃಷ್ಟಿರ ಚನೆಯ ಕಂಡ | ತುಷ್ಟ ಬಕದಾಲ್ಪ್ಯ ಉತ್ಕøಷ್ಟ ಸನಕಾದಿಗಳು | ದೃಷಮಾನಿಸರಾಗಿ ಮುಟ್ಟಿಸ್ತುತಿ ಸುತಲಿದೇ | ಕೃಷ್ಣ ನೊಲಿ ದುಪ್ಪವಡಿಸಾ ಹರಿಯೇ 4 ವರ ವಾಮ ದೇವಾತ್ರಿ ಪರಮಗಾಲ ವನುಸೌ | ಭರಿಯ ಕೌಡಿಣ್ಯ ಸುಖ ಭರಿತ ಕೌಸಿರ ಮತಿ | ಪರಿಪೂರ್ಣ ಜಯಾಮುನೀರ್ವರು ಭರತರುಸುಗುಣ ಶರಧಿ ವೈಶಂ ಪಾಯನಾ|| ಸುರಪುರೋಹಿತ ಮಹಾ ಸುರರ ವಂಶಾವಳಿಯು | ತರಣಿಜ ಬುಧಾದಿಗಳ | ಕರದೊಳು ಸುಫಲವಿರಿಸಿ ಹರುಷಾದಲಿ ನಿಂದಿದೆ || ಪರಬೊಮ್ಮ ಉಪ್ಪ ವಡಿಸಾ ಹರಿಯೇ 5 ಡಮರುಧರ ಜಡೆಯೊಳಗ ಸಮುಲ್ಲಾಸದಲಿ ಮೆರೆವ ಅಮರ ನದಿ ಪಾಪಹರ ಸಮಕೃಷ್ಣ ವೇಣಿ ಸು | ವಿಮಲ ಗೋದಾವರಿ ಕುಮುದ್ವತಿ ಕಾವೇರಿ | ಶ್ರಮಹಾರಿ ತುಂಗ ಭದ್ರಿ || ಯಮುನಿ ಫಲ್ಗುಣಿ ಮಹೋತ್ತಮ ಸರಸ್ವತಿ-ಕಪಿಲ | ನರ್ಮದಿ ಮೊಲಾಗಿ ಅಮಲಗ್ರೋದ ಕವ | ಕ್ರಮದಿಂ ಕೊಂಡು ನದಿ ಚಮು ಬಂದಿದೇ ಪೊರಗ | ಕಮಲಾಕ್ಷ ಉಪ್ಪವಡಿಸಾ ಹರಿಯೇ6 ದಾರುಣೀ ಚರರಾದಾ ಚಾರುಗೋ ಬ್ರಾಹ್ಮಣರು | ಸಂರಕ್ಷಣೆಯ ಮಾಳ್ವ ಧೀರಯ ಯಾತಿ | ಮೇರು ಸಮ ಹರಿಶ್ಚಂದ್ರ ವೈರಾಟ ಪತಿಜನಕ | ಆರಾಯ ನಳ ನಹುಷನು || ಶೂರ ಹಂಸಧ್ವಜನು ಸಾರಿ ವಿಷ್ಟಕ್ಸೇನ | ವೀರ ಪಾಂಚಾಲನ - ಕ್ರೂರ ಚಂದ್ರಹಾಸ ಮ | ಯೂರ ಧ್ವಜ ಪ್ರಮುಖರಾರತದಿ ಬಂದರಿದೆ | ಕಾರುಣನೆ ಉಪ್ಪಾವಡಿಸಾ ಹರಿಯೇ 7 ವಾರಿಯೋಳ್ ನಡೆವಹತೇರಗಜ ಶೃಂಗರಿಸಿ | ಏರಿಬಂದಿಳಿದು ಮಹಾ ವೀರ ಭಟರೋಗ್ಗೀನೊಳು | ಬಾರಿ ಬಾರಿಗೆ ನಿಮ್ಮ ಚೀರುತ ಬಿರುದಂಗಳನು ಭೂರಿಜನ ಸಚಿದಣಿಸುತಾ || ಪಾರವಿಲ್ಲದ ಪಟಹ ಭೇರಿ ನಿಸ್ಸಾಳತಹ | ಳಾರವರಿದು ಊದುತಲಿ ಈ ರೀತಿ ನೃಪರದಳ | ಚಾರುವಾಲಗವ ಮನವಾರಗುಡುತಿದೆ ಪರಮ ಶೌರಿ ವಲಿದು ಪ್ಪವಡಿಸಾಹರಿಯೇ 8 ಕೇಣವನು ಗೊಳ್ಳದಿಹ ಜಾಣ ಕಲೆಯಿಂದ ಗೀ | ರ್ವಾಣ ಸ್ತ್ರೀಯರು ನೃತ್ಯ ಮಾಣುತಲಿ ಬರೆಕರದಿ | ವೀಣೆಯನು ತಾಂ ಪಿಡಿದು ವಾಣಿ ತುಂಬರ ಸುಪ್ರ ವೀಣನಾರದ ಗಣಪನು || ಶ್ರೇಣಿಯಿಂ ತೊಡಗೂಡಿ ತ್ರಾಣದಿಂದಲಿ ನಾಮ | ವಾಣಿಯಲಿ ವಚಿಸುತಿದೆ ಕಾಣಲ್ಕೆ ನಿಂದಿದೆ | ಏಣಾಂಕನುಜೆ ಮುಗಿದು ಪಾಣಿಯನು ಗುರು ಮಹಿಪತಿ ಪ್ರಾಣನೊಲಿದುಪ್ಪವಡಿ ಸಾ ಹರಿಯೇ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು