ಒಟ್ಟು 15585 ಕಡೆಗಳಲ್ಲಿ , 137 ದಾಸರು , 6785 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಿಂಕರನು ನಾನೊಂದು ಬಿನ್ನಪವ ಪ ಶಂಕೆಯನು ಪರಿಹರಿಸೊ ಕರುಣದಿ ಅ.ಪ ನೆರೆದು ಪಾಲಿಪುದೆನ್ನ ಮುದದಲಿ 1 ಸಡಗರದಿ ಕೊಡು ಜಡಜಲೋಚನ 2 ಒಡೆಯ ನೀನೆ ಗತಿ ಸದಾನಂದ 3
--------------
ಸದಾನಂದರು
ಕಿಂಕರರು ಗಣಪನ್ನ ಧ್ಯಾನಿಸಿ ಪ. ಪಾದ ಪಂಕಜವನೆ ನೆನೆಯುವುದು ಮನದೊಳು ಶಂಕರನ ಪ್ರಾಥಿಸುತ ಹರಿಯನಾತಂಕವಿಲ್ಲದೆ 1 ಪರಿ ಶಂಕೆಯಿಲ್ಲದೆ ಹರಿ ಮಹಿಮೆ ಪೊಗಳಲು 2 ಸರಸತಿಯ ಧ್ಯಾನಿಸಿ ನಿಮ್ಮ ಮಂಕಿನಜ್ಞಾನವನು ಕಳೆಯಲು ಪವಮಾನಗೆ ವಂದಿಸಿ 3 ಪಂಕಜಾಕ್ಷಿ ರಮಾದೇವಿ ಶ್ರೀ ಶ್ರೀನಿವಾಸನ ಪಾದ ಪಂಕಜವÀ ನೆನೆದು ಹರುಷದಿ 4 ಹರಿಕಿಂಕರು ಇರಿ ಎಂದರುಹಿದ ಪುರಂದರದಾಸರ ನೆನವೆನನುದಿನವೂ 5
--------------
ಸರಸ್ವತಿ ಬಾಯಿ
ಕಿನ್ನೇಶದೂತರು ಎಳಿಯಾರೆ ಪ ಹಿಂದಿನ ದುಃಖವ ನೆನಸಿಕೊ | ನೀನು | ಬಂದದೆ ಒಂದೊಂದು ಗುಣಿಸಿಕೊ | ಮುಂದೀಗ ಎಚ್ಚತ್ತು ನೋಡಿಕೊ | ಇದು ಸಂದೇಹವೆನದೆ ನಿಜವಾಗಿ ತಿಳಿದಕೊ 1 ಗರ್ಭಯಾತನೆ ಬಲು ಹೇಸಿಕೆ | ವಳಗೆ | ನಿರ್ಬಂಧವಾಗಿ ಬೆಳೆದು ಮೇಲಕೆ | ದೊಬ್ಬುವರು ನಿನ್ನ ಕೆಳಿಯಿಕೆ | ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ2 ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ | ಬಳಗವೆಲ್ಲ ಸಂತೋಷಬಡುವರು | ಆಯಿತು ಮಗುವೆಂದು ನುಡಿವರು | ಇವನ ಆಯುಷ್ಯ ಕಡಿಮೆಯೆಂದದು | ಅರಿಯದೆ ಕೆಡುವರು 3 ಚಿಕ್ಕಂದು ಎತ್ತಿ ಮುದ್ದಾಡಿ ಬೆಳಸಿ | ಅಕ್ಕರದಿಂದಲಿ ನೋಡಿ ಕೊಂಡಾಡಿ | ಫಕ್ಕನೆ ಕುಲಗೋತ್ರರ ಕೂಡಿ | ಒಬ್ಬ | ರಕ್ಕಸಿಯ ತಂದು ನಿನಗೆ ಜತಿ ಮಾಡಿ 4 ನೆಲೆ ಇಲ್ಲದ ಮಮತೆಯೊಳು | ಮುಳುಗಿ | ತಲೆಕೆಳಗಾಗಿ ನಡೆದು ಹಗಳಿರುಳು | ಕುಲನಾಶಕನೆಂಬೊದು ಬಾಳು | ಬಿಡು | ತಿಳಿಯ ಪೇಳುವೆನು ಎತಾರ್ಥವ ಕೇಳು5 ದುರ್ವಾಸನೆ ನಾರುವ ಬೀಡು | ಇದು | ಸ್ಥಿರವಲ್ಲ ಎಂದಿಗು ಹಂಬಲ ಬಿಡು | ಹರಿದಾಸರ ಸಂಗ ಮಾಡು | ಇನ್ನು | ಹರಿನಾಮಗಳ ಕೊಂಡಾಡು 6 ಆವಾವ ಜನ್ಮದಲಿ ನೀನು | ಒಮ್ಮೆ | ದೇವ ಎಂದೆನಲಿಕ್ಕೆ ನಾಲಿಗಿತ್ತೇನು | ಈ ಉತ್ತಮವಾದ ಈ ತನು | ಬಂತು | ಕೋವಿದನಾಗಿ ಶ್ರೀ ಹರಿಯನ್ನು ಕಾಣು7 ಆ ಮರ ಈ ಮರ ಎನಲಾಗಿ | ಅವನ | ತಾಮಸದ ಜ್ಞಾನ ಪರಿಹಾರವಾಗಿ | ಸ್ವಾಮಿಯ ದಯದಿಂದ ಮಹಯೋಗಿ | ಎನಿಸಿ | ಭೂಮಿಯೊಳಗೆ ಬಾಳಿದನು ಚನ್ನಾಗಿ 8 ಸಿರಿ | ರಂಗ ಯೆನಲಾಗಿ ಕಾಯ್ದ ಶ್ರೀಪತಿ | ವಿಜಯವಿಠ್ಠಲ ನಂಬು 9
--------------
ವಿಜಯದಾಸ
ಕೀರ್ತನೆಗಳು ಅಪರಾಧಿ ನಾನಲ್ಲ ಅಪವಾದಯನಗಿಲ್ಲಾ ಪ. ಕಪಟನಾಟಕ ಕೃಷ್ಣ ಯನಗೆ ನೀನಪರಾಧಿ ಅ.ಪ. ನೀನು ಆಡಿಸಲು ಜೀವಗಳನುದಿನದ ಬೊಂಬೆ ಆನೆ ಬಲ್ಲೆನೆ ಬ್ಯಾರೆ ಪಥವನೊಂದಾ ನೀನಿಟ್ಟ ಸೂತ್ರದಂತಿರಲು ಕೈಕಾಲುಗಳು ನೀನು ಮುಗ್ಗಿಸಲು ಮುಗ್ಗುವ ಜೀವ ನಾನಾದೆ 1 ಒಂಬತ್ತು ಬಾಗಿಲುವುಳ್ಳ ಪಟ್ಟಣದೊಳಗೆ ತುಂಬಿದಿಪ್ಪತ್ನಾಲ್ಕು ಮೊನೆಯಾಳ್ಗಳ ನಂಬಿಸಿ ಕಾವಲು ನೀನು ಎನ್ನೊಳಗಿದ್ದು ಕಂಬುದಾ (?) ಯೇರಿ ಕೊಲಿಸುವುದು ನಿನಗನ್ಯಾಯ 2 ಅಂತರಾತ್ಮಕ ನೀನು ಒಳಗಿದ್ದಾ ಬರಿ ತಂತ್ರಿಯೆಂದೆನ್ನ ಕೊಲ್ಲಿಸುವರೇನೊ ಹೇಳೋ ಕಂತುವಿನ ಜನಕ ಲಕ್ಷ್ಮೀರಮಣ ಕಾಯಬೇ- ಕೆಂತೆಂದೆನ್ನ ಅಚಲಾನಂದವಿಠಲ ಪುರಂದರ ವಿಠಲ ಅಂಕಿತದಲ್ಲೂ ಇದೆ.
--------------
ಅಚಲಾನಂದದಾಸ
ಕೀಳು ಮನವೆ ಏನುಕೆಟ್ಟೆಲೋ ಹಾಳು ಮಾಡಿದಿ ದಿನಗಳ ಪ ನೀಲಮೇಘಶ್ಯಾಮ ಹರಿಪಾದ ಶೀಲಭಕ್ತಿಲಿ ಸ್ಮರಿಸದೆ ಅ.ಪ ಬಾಲತನದ ಸುಶೀಲ ದಿನಗಳ ಜಾಳುಗೈದೆಲೋ ಆಟದಿ ನಾಳೆ ಕಾಲನು ಸೀಳಿ ಕೊಲುವಾಗ ತಾಳಿ ಬಾಳುವುದೆಂತೆಲೊ 1 ಪ್ರಾಯದಿನಗಳ ಕಾಯಜನ ಮಹ ಮಾಯದಾಟದಿ ನೀಗಿದ್ಯೊ ಮಾಯಮೃತಿಯ ಬಾಯೊಳು ಸಿಲ್ಕಿ ನೋಯುವಾಗ ಕಾಯ್ವರಾರೆಲೊ 2 ಇಷ್ಟಕ್ಕಾದರೂ ಕೆಟ್ಟಗುಣಗಳ ಬಿಟ್ಟು ಶ್ರೀರಾಮಪಾದವ ನಿಷ್ಠೆಯಿಂ ಮನಮುಟ್ಟಿ ಭಜಿಸಲೆ ದುಷ್ಟಭವದಿಂ ಗೆಲಿಸುವ 3
--------------
ರಾಮದಾಸರು
ಕೀಳುಯೋಚನೆ ಬಿಡು ಖೋಡಿಮನವೇ ಪಡಿ ಮಾಧವನಿಂ ಬೇಡಿಪ ಹಾಳುಯೋಚನೆ ಮಾಡಿ ಮಾಡಿ ನೀನು ಬೀಳುಗಳೆಯ ಬೇಡ ತಿಳಿ ಹುಚ್ಚ ಖೋಡಿ ತಾಳದೆ ಜಡಿತಾರ ಒದೆದು ಎಳೆದಾಡಿ 1 ನಾಶನ ಈ ಜಗಸುಖ ಒಂದೇ ತಾಸಿನ ಮೋಜಿದು ಇರದು ಕಡೆತನಕ ಮೋಸದಿ ಸಿಲ್ಕಬೇಡಿದಕೆ ಇದ ರ್ವಾಸನಳಿದು ಬೇಗ ಕಡಕೋ ಭವತೊಡಕ 2 ದಾಸರು ಪೇಳಿದ ಸೊಲ್ಲುಕೇಳಿ ಧ್ಯಾಸಿಟ್ಟು ದೋಷದಿಂ ಕಡೆಗ್ಹಾರಿ ನಿಲ್ಲು ದಾಸನಾಗಿ ಭವಗೆಲ್ಲು ತಂದೆ ಶ್ರೀರಾಮನ ಪಾದಕೆ ಸಲ್ಲು 3
--------------
ರಾಮದಾಸರು
ಕುಟಿಲವನು ಕಳಿಯೋ ನಿಟಿಲ ನಯನಾ ಪ ದುರ್ವಿಷಯ ಲಂಪಟದಿ ಮುಳಿಗಿ ಘನ ಸಂಕಟಕೆ ಒಳಗಾದೆನೊ ಪ್ರಭುವೇ ಅ.ಪ. ಪಂಚಭೇದ ಜ್ಞಾನವನು ಪಂಚವಿಧ ತೋರೆಂದು ಬಿನ್ನೈಪೆ ಮಂಚಪದಯೋಗ್ಯಾ ವೈರಾಗ್ಯ 1 ಕಾಮಿನಿಯಳಾ ಇಟಕೊಂಡು ಅನ್ಯಳ ಕಾಮಿಸುವುದುಚಿತವೇ ರಾಯಾ ಕಾಮರೂಪದಿಂದೆನ್ನ ಕಡೆಗೆತ್ತಿ ಕಾಯದಿರೆ ಕಾಮಹರನೆಂಬ ಬಿರುದ್ಯಾತಕೊಕಾಮಪಿತನೇ ಕೇಳು ಕಾಲಕಾಲಕೆ ನಿನ್ನ ಕಾಲಿಗೆರಗುವಂತೆ ಮಾಡಿ 2 ಬಿಲ್ವಭಜಕನೆ ಕೇಳು ಮತ್ತೊಂದು ನಾನೊಲ್ಲೆಶಪಥ ಪೂರ್ವಕ ಪೇಳ್ವೆ ಮಿಥ್ಯಮತವೊಲ್ಲೆನೊಒಲ್ಲದ ಸುರನಿಗೆ ಚೆಲ್ವಿಯಾಗಿತ್ತು ಕಂಗೆಡಿಸಿ ಉಳಿಸಿದೆ ಬಿಲ್ಲುಗಾರನೆ ಮಗನ ಕಾಳಗದಿ ಕೆಡಹಿ ತಂದೆ-ವರದಗೋಪಾಲವಿಠಲನ ನೋಡಿ ತೋರಿದೇ 3
--------------
ತಂದೆವರದಗೋಪಾಲವಿಠಲರು
ಕುಂಟೆ ಹೊಡೆಯೊ ಜಾಣ ಅದನೋಡಿ ಕುಂಟೆ ಹರಗೋ ಜಾಣ ಪ ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನುಅ.ಪ ಅರಿವೆಮಡಿಕೆಹೊಡೆಯೊ ಮರವ್ಯೆಂಬ ಕರಿಕಿದಡ್ಡನಳಿಯೊ ಶರಣೆಂಬಗುದ್ದಲ್ಹಿಡಿಯೊ ಗರುವೆಂಬ ದುರಿತಕರುಣಗಳಗಿಯೊ ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ ಕರುಣೆಂಬ ಮಾಗಿ ಮಡಿ ಮಾಡಿ ಭರದಿ ಹಸನಮಾಡು 1 ಧ್ಯಾನ ದಾಸರಸೇವೆಯೆಂದೆಂಬುವ ಖೂನ ಮಾಡೆಲೊ ಬದುವ ದಾನಧರ್ಮಯೆಂಬುವ ಸತತದಿ ಹನಿಸು ಗೊಬ್ಬರವ ಜ್ಞಾನಿಸಂಗವೆಂಬ ಜಾಣಬೆದೆಗಾಲದಿ ಜ್ಞಾನಕೂರಿಗೆಯಿಂದ ಧ್ಯಾನಬೀಜವ ಬಿತ್ತು 2 ಮನನೆಂಬಬೆಳೆ ಕಾಯೋ ನಿಜವಾದ ನೆನೆವೆಂಬರ ಕವಣ್ಹಿಡಿಯೊ ಮನಚಂಚಲ್ಹಕ್ಕ್ಹೊಡೆಯೊ ಶಾಂತಿಸದ್ಗುಣವೆಂಬ ಫಲ ಪಡೆಯೊ ಘನತರ ದೃಢವೆಂಬ ಧಾನ್ಯರಾಸಿಮಾಡಿ ವನಜಾಕ್ಷ ಶ್ರೀರಾಮನೊನರುಹಕರ್ಪಿಸು 3
--------------
ರಾಮದಾಸರು
ಕುಟ್ಟಿ ಕೊಳ್ಳೊ ಮಾಣಿ ನಿನ್ನ ಹುಟ್ಟಿಸಿರುವ ದೈವಕೆ ಹೊಟ್ಟೆ ತುಂಬ ಬಾಯಿಗಾನು ಬಿಟ್ಟೆನೆಂದ್ರೆ ಕ್ಷೀರವಿಲ್ಲ ಪ ಕೊಟ್ಟು ಪಡೆಯಲಿಲ್ಲ ಮುನ್ನಹುಟ್ಟಿ ಪಡೆಯಲಿಲ್ಲ ಮುಂದೆ ಹಟ್ಟಿಯೊಳಗಣಾಕಳೆಲ್ಲ ನಷ್ಟವಾಯ್ತು ರೋಗದಿಂದ 1 ಅತ್ತು ಸಾಯ ಬೇಡ ನೀನು ಎತ್ತಿ ಕೊಂಬರೊಬ್ಬರಿಲ್ಲ ಭತ್ತವನ್ನು ಕುಟ್ಟಿ ನಾನು ತುತ್ತಮಾಡಿ ತಿನ್ನಿಸುವೆನು 2 ನೀರು ಕಾದು ಬಂತು ಬಿಸಿಯ ನೀರ ನೆರೆವೆನೀಗ ನಿನಗೆ ಸಾರಿ ಮೊಲೆಯ ನೂಡಿ ನನ್ನ ಸೀರೆ ಸೆರಗಹಾಸಿ ಕೊಡುವೆ 3 ದೊಡ್ಡ ಕೂಸ ಕಾಣೆಯವಳು ಗುಡ್ಡೆ ಬಸವಿಯಾದಳೀಗ ಚಡ್ಡೆಯಲ್ಲದೆ ಹೋಗುತಿಹಳು ಸಡ್ಡೆ ಮಾಡಳೆನ್ನಮಾತ 4 ಇಂತೆನುತ್ತ ಬಾಲಕನ್ನ ಸಂತವಿಟ್ಟು ನಾರಿ ಲಕ್ಷ್ಮೀ ಕಾಂತ ಮಾಡ್ದ ಲೀಲೆಗಳನು ನಿಂತು ಪಾಡಿಪೋದಳಾಕೆ 5
--------------
ಕವಿ ಪರಮದೇವದಾಸರು
ಕುಡಿಸೆನಗೆ ಹರಿ ನಿನ್ನ ನಾಮರಸವ ಪ ಕೊಡಬೇಡ ಅನ್ಯರಸ ಹಸಿದಿದ್ದರೂ ಇರುವೆ ಅ.ಪ ಜನರ ಮನ್ನಣೆ ದೃಷ್ಟಿ ಕನಸಿನಲಾದರೂ ಬೇಡ ಮನವು ನಿನ್ನಲಿ ಸತತ ನೆಲಸಿರಲಿ ಸ್ವಾಮಿ ತೃಣವನು ಘನ ಮಾಳ್ಪ ಅನಿಲಮಂದಿರವಾಸ ಪ್ರಣತಪಾಲಕ ನಿನ್ನ ಮೊರೆಹೊಕ್ಕೆನಯ್ಯ 1 ನಿಜ ಭಕ್ತ ಪದವೀಯೊ ಋಜುವರ್ಗ ಸಂಪೂಜ್ಯ ಅಜ ಜನಕ ಜಗದೀಶ ಗೋಪಾಲ ಬಾಲ ವೃಜಿನವ ದೂರ ಮಾಡಿ ಮಾಯಸೆರೆಯನು ಬಿಡಿಸಿ ಕುಜನರ ಸಂಗ ಎನ್ನ ಹತ್ರ ಸುಳಿಯದಂತೆ ಮಾಡೊ 2 ಕೇಳಿಸು ನಿನ್ನ ಕಥೆ ನೋಡಿಸು ತವ ಮೂರ್ತಿ ಬಾಳಿಸು ಮನ ನಿನ್ನ ಧ್ಯಾನದಲ್ಲಿ ಫಾಲಕ್ಷ ಸಖ ಪೂರ್ಣ ಜಯೇಶವಿಠಲ ಕಾಲಿಗೆ ಬಿದ್ದವನ ಕೈಹಿಡಿದು ಉದ್ಧರಿಸು 3
--------------
ಜಯೇಶವಿಠಲ
ಕುಣಿ ಕುಣಿಯಲೋ ಬಾಲಗೋಪಾಲ ಪ ಗೋಪಾಲ ನೀರದ ನೀರ ಅ.ಪ ಯಮುನಾ ತೀರದಿ ಹಿಮಕಿರಣನು ತಾ ಮಮತೆಯ ತೋರಲು ಬೆಳಗುತಿಹ ಘಮಘಮಿಸುವ ಈ ಸುಮಗಳು ಸೂಸಿರೆ ಪ್ರಮದೆಯರೆಲ್ಲರ ಪ್ರೇಮಾಂಗಣದಲಿ 1 ಗಂಧವ ಮಾರುತ ಬೀರುತಲಿರುವನು ಇಂದಿರೆ ಕೊಳಲಿನ ರೂಪದಲಿ ಚಂದದಿ ನಾದವ ತುಂಬಲು ಪರಮಾ ನಂದವು ಮಾನಸ ಮಂದಿರದಲಿ ನೀ 2 ಕಾಯವು ರೋಮಾಂಚಿತವಾಯ್ತೊ ಮಾಯಾವಾದವೊ ಮೋಹಗಳು ತಾಯಿ ಮಡಿಲು ಸೇರಿದ ಶಿಶುವಂದದಿ ಹಾಯವೆನಿಸಿತೊ ಜೀವನ ಯಾತ್ರೆಯು 3 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಬಿಡಿಸೊ ಸ್ವಾಮಿ ನಿನ್ನಯ ಪಾದಯುಗಳವೆ ಕ್ಷೇಮವೆನ್ನಿಸೊ ಸಾರಾಸಾರ ವಿವೇಕದಿ ಮೋಕ್ಷದ ಕೋರಿಕೆ ಪುಟ್ಟಿಸೊ ಭವ ಪಾರ ಸೇರಿಸೋ 4 ಸಾರದ ಕರುಣಕೆ ಕಾರಣ ಬಿಂಬದ ಮೂರುತಿ ದರುಶನವು ಭಾರತಿ ರಮಣನ ಮಂಗಳಶಾಸ್ತ್ರ ವಿಚಾರವೆ ಕಾರಣವು ಭಕುತ ಜನ ಪ್ರಸನ್ನ ಲಕುಮಿರಮಣ ಎನ್ನು ತಕಿಟ ತಕಿಟ ಎಂದು 5
--------------
ವಿದ್ಯಾಪ್ರಸನ್ನತೀರ್ಥರು
ಕುಣಿದಾಡೊ ರಂಗ ನಲಿದಾಡೊ ಪ. ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ ಅ.ಪ. ಪತಿಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂಧಿಮಿಕೆನ್ನುತ 1 ಗಕ್ಕಸದಿಂ ಶಕಟಾಸುರನಸೊಕ್ಕ ಮುರಿದು ಬಂಡಿಯನೊದೆದುಚೊಕ್ಕ ಶ್ರೀಚರಣಾರವಿಂದಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ 2 ಬಲಿಯ ಮೆಟ್ಟಿ ಕಾಳಿಂಗನ ಹೆಡೆಯತುಳಿದು ನಾಟ್ಯವನಾಡಿಚೆಲುವ ಶ್ರೀಹಯವದನ ನಿಮ್ಮಘಲುಘಲು ಗೆಜ್ಜೆ ಘಿಲುಘಿಲುಕೆನ್ನುತ 3
--------------
ವಾದಿರಾಜ
ಕುತ್ಸ್ಸಿತರೊಲ್ಲದ ಮತ್ಸರವಿಲ್ಲದ ಸತ್ಸಭೆ ಕೇಳಲೀ ಕೃತಿಯ ಪ. ಈ ಯುಗದವರಿಗೆ ಕಲಹ ಮಂಡಿಸಿದಗೆ ಆ ಯುಗದವರುಕ್ತಿ ಬೇಕು ನ್ಯಾಯದವರ ಕೇಳು ಪೂರ್ವಶಾಸನ ಸಾಕ್ಷಿ ಹೇಯವೆಂದಾರು ಪೇಳುವರು1 ನಿಮ್ಮವರಾಗಮ ನಮ್ಮವರಿಗೆ ಸಲ್ಲ ನಮ್ಮೋಕ್ತಿ ನಿಮಗೆ ಮೆಚ್ಚಲ್ಲ ಇಮ್ಮನದವರಿಗೆ ಇನ್ನೊಬ್ಬ ಹಿರಿಯರ ಸಮ್ಮತಿ ಬೇಕು ನಿರ್ಣಯಕೆ2 ಯುಕ್ತಿ ಮಾತ್ರವ ನಂಬಿ ನಡೆವುದುಚಿತವಲ್ಲ ಯುಕ್ತಿ ಸರ್ವತ್ರ ಬಂದಿಹುದು ಕುತ್ಸಿತ ದೇಹಬಂಧವ ಬಿಡಿಸುವ ನರ- ರುತ್ತಮರೆಂದರೇನೆಂಬೆ 3 ಹಿಂಸೆ ಸಲ್ಲದು ಗಡ ಕರದ ಚಿಮುಟಿಯಿಂದ ಏಸು ಕೂದಲ ಕೀಳುತಿರಲು ಏಸೋ ಜೀವಗೆ ನೋವು ಅದು ಹಿಂಸೆ ದೋಷದ ಒಂದಂಶಕ್ಕೆ ಸರಿ ಬಂದಿಹುದೆ 4 ಕೇಶ ಆಚ್ಛಾದನ ಸಂಕಟದಿಂದೆಂದ ಕ್ಲೇಶ ಸೂಸುವ ನಯನಾಂಬುಧಾರೆ ಆ ಸಮಯದಿ ಪರಮಸುಖವೆಂಬ ಮಾತು ಸತ್ಯವ್ರತಕೆ ಎಂತೊಪ್ಪಿಹುದೊ 5 ವೇದಶಾಸ್ತ್ರವ ಬಲ್ಲ ಹಾರವನಲ್ಲ ಹು- ಟ್ಟಿದ ದಿವಸ ಮೊದಲಾಗಿ ಪಾತಕಿ ತಮ್ಮೊ - ಳಾದನೆಂಬುದು ಬಲು ಚೋದ್ಯ6 ಪಾಪ ಸಲ್ಲದು ಗಡ ಪರನಿಂದೆಯಿಂದಾದ ಪಾಪವೆ ತಾವು ಶುದ್ಧರೆಂಬ ಪರಿ ಆತ್ಮಸ್ತುತಿಯಿಂದೊಂದಾ ಪಾಪ ಲೇಪಿಸದಿಹುದೆ ತಮ್ಮವರ 7 ಸ್ಥಾವರಜೀವರ ಸಾವಿರ ಕೋಟಿಯ ಆವಾಗ ಕೊಂದು ತತ್ತನುವ ಜೀವಿಪೆನೆಂದು ಬೇಯಿಸಿ ತಿಂಬ ಪಾಪವ ಆವ ನಿಮಗೆ ಅಹುದೆಂದ 8 ಇಂದ್ರಿಯಹತ್ತಿಲ್ಲದವರ ಕೊಲ್ಲುವುದಕ್ಕೂ ಹಾ- ಗೆಂದ ಗುರುವ ನಾನೇನೆಂಬೆ ಅಂದಚೆಂದಗಳ ಮೂಕರ ಪಕ್ಷ್ಷಿಯಂಡದ ನಿಂದ್ಯ ಹಿಂಸೆಯ ಸಲಿಸುವರೆ 9 ಸಂಗೀತಶ್ರವಣದಿ ಧೂಪಾಘ್ರಾಣದಿ ಮೂಲ ಹಿಂಗೂಡಿದುದಕ ಸ್ವಾದನಾದಿ ಅಂಗನೆ ಈಕ್ಷಣ ಸ್ಪರ್ಶನದಿಂ ಸ್ಥಾವ- ರಂಗಳು ಜಂಗಮದಂತೆ 10 ತಮ್ಮ ಕರ್ಮದಿ ತಾವೆ ಸಾವರೆಂಬ ಮತದಿ ಕಮ್ಮಿಯಾದ ವ್ರಣಕ್ಕೆ ಮದ್ದನಿಕ್ಕಲು ನಿರ್ಮಾಯನದೊಳಗೇಸೊ ಹಿಂಸೆ 11 ಅಕ್ಕಿಯ ಕುಟ್ಟಲು ಬಕ್ಕು ಜೀವರ ಹಿಂಸೆ ಮಕ್ಕಳುಂಬುದು ಮಾಂಸ ಪ್ರಿಯಳ ಚೆಂದುಟಿ ಮಾಂಸ ಇಕ್ಕು ಬಾಯೊಳು ದಂತದೆಲುವೆ 12 ಕರದ ತುಂಬವಿದೇನು ಕೊರಳ ಹಾರವಿದೇನು ಚರಣದ ನಖಪಂಕ್ತಿಯಿದೇನು ಖರ ಭೂತಪಂಚಕ ಅನ್ನ ಮಾಂಸಗಳೊಳು ಬರಿದೆ ನಿಂದಿಸಲೇಕೆ ಪರರ 13 ಉಪ್ಪಿನೊಳಗೆ ತೋರ್ಪ ಚಿಪ್ಪ ನೋಡದೆ ಪರ- ರಲ್ಪ ದೋಷಗಳರಸುವರೆ ಒಪ್ಪುವುದೆಂತೊ ಶತ್ರುಗಳ ನಿಂದನೆ ಕೊಲು- ತಿಪ್ಪ ನೃಪಗೆ ಜಿನಮಾರ್ಗ 14 ಬಸ್ತಿಯ ಕಟ್ಟಲು ಭೂಸ್ಥ ಜೀವರ ಹಿಂಸೆ ಸುತ್ತ ಯಾತ್ರೆಯ ಮಾಡಲೇಸೊ ತತ್ತಜ್ಜೀವರ ಹಿಂಸೆ ತೈಲಸ್ನಾನದಿ ಹಿಂಸೆ ವಸ್ತ್ರ ಒಗೆಯಲೇಸೋ ಹಿಂಸೆ 15 ಸಲ್ಲದ ಹಿಂಸೆಯ ಸಲಿಸಿದರೆಂಬರ ಬಲ್ಲವಿಕೆಯ ನಾನೇನೆಂಬೆ ಬಲ್ಲಿದ ಹಿಂಸೆಗೆ ಒಳಗಾದರು ಎಲ್ಲ ತಾ- ಕೈವಲ್ಯ ಸಾಧಕರು 16 **** ತೊಳೆಯದ ಬಲುಹಿರಿಯರ ನಾತಕ್ಕೆ ಸೋತು ಬೆಂಬಿಡದೆ ಆತುರದಿಂ ಬಪ್ಪನೊಣಗಳ ಗೀತವ- ನೋತು ಕೇಳುವ ಶಿಷ್ಯ ಧನ್ಯ 17 ಮೂತ್ರ ದ್ವಾರದ ಮಲ ಶ್ರೋತ್ರನೇತ್ರದ ಮಲ ಗಾತ್ರ ನಾಸಿಕದ ಮಲ ಯಾತ್ರೆಯ ಮಾಡುವರಕ್ಷಿಗೆ ಕೌತುಕ ಪಾತ್ರವಾಯಿತು ಬಲು ಚಿತ್ರ 18 ******************* 19 ಏಕ ಭಾಗದೊಳು ಸ್ತ್ರೀ ವಾಸ ಏಕಾಂತದಿಪ್ಪುದು ಲೋಕಸಲ್ಲದೆಂಬರ ಈ ಕಾಮನೆಂತು ಬಿಟ್ಟಿಹನು 20 ಬಸ್ತಿಯ ಪ್ರತಿಮೆಯಲಿಪ್ಪ ದೇವನದಾರು ಮುಕ್ತರಿಗೀಭೋಗ ಸಲ್ಲ ಮುಕ್ತರÀಲ್ಲದ ಜೀವ ದೇವರೆಂತಹರೆಂದು ವ್ಯರ್ಥವಾಯಿತು ನಿನ್ನುತ್ಸಾಹ 21 ನೋಡುವ ನಯನಕ್ಕೆ ಮಾಡುವ ಪೂಜೆಗೆ ಕೂಡಿದ ಬಹುವಿತ್ತ ವ್ಯಯಕ್ಕೆ ಈಡಾಯಿತಂಶ ಕೇವಲ ಬೊಂಬೆ ಶಿವಶಿವ ಆಡುವ ಶಿಶುಗಳ್ಪೇಳಿದರೆ 22 ಹೆಂಡಿರೆ ಸಂಸಾರವಾದರೆ ಹಸಿತೃಷೆ ಉಂಡು ಮಲಗುವುದು ಮುಕ್ತರಿಗೆ ಮಂಡೆಯ ಬೋಳಿಸಿ ದೇಹದಂಡನೆ ಮಾಡಿ ಕೈ- ಕೊಂಡ ಮಾತ್ರದಿ ಮುಕ್ತರಹರೆ 23 ಮತ್ರ್ಯ ದೇಹವಿರಲು ಮುಕ್ತರೊಬ್ಬರು ಅಲ್ಲ ಸತ್ತಮೇಲೇನಾದರೆಂತೊ ಅತ್ತು ಕಾಡುವ ಶಿಷ್ಯರೆಂತರು ಕಾಂಬರು ಸರ್ವ- ಕರ್ತೃ ಶ್ರೀಹರಿ ತಾನೆ ಬಲ್ಲ 24 ದುಃಖವೆ ಸಂಸಾರ ದುಃಖವಿಲ್ಲದ ಸುಖ ಮುಕ್ತಿಯೆಂಬುದು ಬುಧರ್ಗೆ ಮಾತ್ರ ಮಿಕ್ಕದೆ ದುಃಖವಿತ್ತರೆ ಭವವೆನಿಪುದು ದುಃಖವೆ ದೂರ ಮುಕ್ತರಿಗೆ 25 ಪುನರ್ಭವವೆÉನ್ನೆ ಶ್ರುತಿ ಅಮೃತವುಂಡರೆ ಮೋಕ್ಷ ಜನನ ಮರಣವಿಲ್ಲದಖಿಳ ಜನರ ದುಃಖವನವತರಿಸಿ ಕಳೆವ ನಾರಾ- ಯಣನೆ ನಿರ್ದೋಷ ನಿತ್ಯಸುಖಿ 26 ಪಾತಕ ವ್ರತವ ಕೈಗೊಂಡ ಸ್ತ್ರೀ- ಜಾತಿಯ ಮುಟ್ಟಲ್ಲೆಂಬುವನು ಖ್ಯಾತ ಶ್ರೀಹರಿಗೆ ಪಾತಕಮುಟ್ಟದೆಂಬರ ಮಾತನದೇಕೆ ಮನ್ನಿಸನು 27 ಕೆಸರ ತೊಳೆದ ನೀರು ಕೆಸರ ಬಾಧಿಪುದೆ ತಾ- ವೈರಿ ಸೂರ್ಯನೊಳು ತಮವೆ ವಿಷಹರ ಗರುಡಗೆ ವಿಷ ಲೇಪಿಸುವುದೆ ಕ- ಲುಷ ಮುಟ್ಟುವುದೆ ಪಾಪಾಂತಕನ 28 ಸುಡುವಗ್ನಿ ಕಡಿವಸ್ತ್ರ ಕಡುಕೋಪಿ ಸರ್ಪನ ತಡೆಯಬಲ್ಲರೆ ತುಡುಕುವರೆ ಬಿಡು ಮನಭ್ರಾಂತಿಯ ಹಯವದನನೆ ಜಗ- ದೊಡೆಯ ಸರ್ವತ್ರ ನಿರ್ದೊಷ 29
--------------
ವಾದಿರಾಜ
ಕುದುರೆ ಬಂದಿದೆ ಚೆಲುವಕುದುರೆ ಬಂದಿದೆ ಪ. ಕುದುರೆ ಬಂದಿದೆ ವಾದಿರಾಜಗೆಮುದದಿ ಜ್ಞಾನ ಭಕುತಿ ಕೊಡುವ ಅ.ಪ. ಹಿಂಗಾಲಿಂ ರಕ್ಕಸರ ಒದೆವ ಕುದುರೆಮುಂಗಾಲು ಕೆದರಿ ಬಾಲವ ಬೀಸಿತಗ್ಗಿಸಿ ತಲೆಯ ಅಡಿಗಡಿಗೆಜಿಗಿದು ಹಾರಿ ಹುಂಕರಿಸುವ1 ಗರುವಿ ಮಹಲಕ್ಷ್ಮಿ ತನ್ನವರನೆಂದು ಒಲಿದು ಬರುವಉರದಿ ಶ್ರೀವತ್ಸ ಕೌಸ್ತುಭಧsÀರಿಸಿ ತಾಂ ಮೆರೆಯುವಂಥ 2 ಹಲ್ಲಣವಿಲ್ಲದೆ ನಿಲ್ವುದು ಕುದುರೆಒಲ್ಲದು ಕಡಿವಾಣ ಕುದುರೆಬೆಲ್ಲಕಡಲೆ ಮೆಲ್ಲುವ ಕುದುರೆಚೆಲುವ ಹಯವದನನೆಂಬೊ ಕುದುರೆ 3
--------------
ವಾದಿರಾಜ
ಕುಮಾರವ್ಯಾಸ ನಿತ್ಯ ಶುಭ ಮಂಗಳಂ ಪ ಮಂಗಳಂ ವೀರನಾರಾಯಣನ ಭಕ್ತಂಗೆಮಂಗಳಂ ಶಿವನಂಶ ದ್ರೋಣಸುತ ಶಿಷ್ಯಂಗೆಮಂಗಳಂ ಕನ್ನಡದೆ ಭಾರತವನೊರೆದವಗೆಮಂಗಳಂ ಯೋಗೀಂದ್ರ ಕುವರವ್ಯಾಸಂಗೆ 1 ಕವಿ ಪುಂಗವಂಗೆ 2 ಭಾರತದ ಶಾಸ್ತ್ರಾರ್ಥದೊಗಟವನು ಬಿಡಿಸುತಲಿಸಾರಿಜನರಿಗೆ ರಮ್ಯಗಮಕದಲಿ ಹೇಳಲಿಕೆಭಾರತದ ಶ್ರೀ ಬಿಂದುರಾಯರನು ಪ್ರೇರಿಸಿದ ತೋರ ಗದುಗಿನ ವೀರ ನಾರಾಯಣಂಗೆ 3
--------------
ವೀರನಾರಾಯಣ