ಒಟ್ಟು 2117 ಕಡೆಗಳಲ್ಲಿ , 117 ದಾಸರು , 1524 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತರೆಂದರೆ ನೈಜ ಭಕ್ತರವರು ಪ.ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.ಅಧಿಯಾತ್ಮ ತಾಪಗಳುಅಧಿಭೂತ ಕ್ಲೇಶದನುಭವಅಧಿದೈವದಟ್ಟುಳಿಯನೆಣಿಸರತಿ ಬಲವಂತರ್ಮಧು ಮಥನಗಲ್ಲದರ ಬಗೆಗಂಜರು 1ವೇದತಂತ್ರವಾಕ್ಯದಿಂದುಪದೇಶಮಾಡಿದರೆ ಮೋಹನಕೊಳಗಾಗರುವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲುಕದಲದಂತಃಕರಣದ್ಹರಿದಾಸರು 2ಬದಿಗೆ ಬಂದಡಲಾವದುರಿತಕೋಟಿಗಳನ್ನುತುದಿಗಾಲಿಲೊದ್ದು ಸಲೆ ತಲೆವಾಗರುಹುದುಗೊಂಡು ಷಡುವರ್ಗ ರಿಪುಗಳನು ಗೆದ್ದುಹರಿಪದಲಂಪಟ ಜ್ಞಾನಾಂಬುಧಿಗಳು 3ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯಸುದಯಾರಸನುಂಬುವ ಬೋಧನವರುಸದಮಲ ಗುಣಾನಂತ ಪ್ರಸನ್ವೆಂಕಟಪತಿಯಹೃದಯವಲ್ಲಭರೆನಿಪಅಚಲಮತಿಯವರು4
--------------
ಪ್ರಸನ್ನವೆಂಕಟದಾಸರು
ಭಾಪು ಹರಿಮತನೆ ಪ.ಭಾಪು ಹರಿಮತಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯು ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ ಅ.ಪ.ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀದ್ಯುಮಣಿಕುಲಮೇದಿನೀಶನ ಪಾದಕೆರಗಿ ಅಂಬೋಧಿದಾಟ್ಯಾಜÕದಿಆ ದಶಾಸ್ಯನ ಲಂಕಾ ದಹಿಸಿ ಜಾನಕೀದೇವಿಯ ಸುದ್ದಿ ಶ್ರೀಧರಗರುಹಿಯೋಧ ಬಾಧಿತರಾದ ಕಪಿಚೇತನದಾಯಕ ತೇ ನಮೊ 1ತುಂಗಗಿರಿ ಶತಶೃಂಗಕೃತ ಸುವಜ್ರಾಂಗ ಅಗ್ನಿಜಾಸಂಗಮತ್ತನೃಪಂಗಳನು ಭುಜದಿಂ ಗೆಲಿದು ಯಜÕ ಸಂಗ್ರಹವ ಪೂರಿಸಿಸಂಗಡಿಸಿದರಿ ಸಂಗರವ ಪೊಕ್ಕುಸಿಂಗಗರ್ಜನೆಯಿಂ ಗದೆಯ ಕೊಂಡುಭಂಗಿಸಿದೆಯೊ ಯುಗ್ಮಾಂಗ ಕೃಷ್ಣ ಸೇವಾಂಗೀಕೃತ ತೇ ನಮೊ 2ತುಚ್ಛರಿಳೆಯೊಳು ಪೆಚ್ಚಿ ಬಗೆ ಬಗೆಕುಚ್ಛಿತಾರ್ಥ ವಿರಚ್ಚಿಸ್ಯಾತ್ಮಗೆಅಚ್ಚುತೈಕ್ಯವ ಉಚ್ಚರಿಸುತಿರೆ ಸ್ವಚ್ಛ ಯತಿರೂಪದಿಮಚ್ಚರಿಪರನು ಕೊಚ್ಚಿ ತಂತ್ರಸಾರಾರ್ಚನೆಯಭೇದ ನಿಶ್ಚೈಸಿದೆ ಶಿರಿಸಚ್ಚಿದಾತ್ಮ ಶ್ರೀವತ್ಸ ಪ್ರಸನ್ವೆಂಕಟೇಚ್ಛಮತ ತೇ ನಮೊ 3
--------------
ಪ್ರಸನ್ನವೆಂಕಟದಾಸರು
ಭಾರತೀ ರಮಣಾ ಪವಮಾನಾ ಜಗದೊಳುಸುತ್ರಾಣ|ಘೋರದುರಿತಾರಣ್ಯ ದಹನ |ಮಾರಕದನಜಿತವಾರವಾರಕೆ ಶ್ರೀ ನಾರಾಯಣನ ಪದ ಆರಾಧನೆ ಕೊಡು ಪಮೈಗಣ್ಣಪದವಾಳ್ದವಾತ | ಲೋಕ ವಿಖ್ಯಾತ |ನಾಗಜನಕ ಭಜಕ ಪ್ರೀತ ||ಯೋಗೇಶ ಜಡಜಂಗಮ ವಿತತ | ಅದ್ಭುತ ಚರಿತ |ಬಾಗುವೆ ಲಾಲಿಸೋ ಮಾತ ||ಹೋಗುತಲಿದೆ ಹೊತ್ತೀಗಲೆ | ತವಕದಲಿಭಾಗವತರೊಳಗೆ ||ಭಾಗೀರಥೀ ಪಿತನಾಗುಣಪೊಗಳಿಸೊ |ಜಾಗುಮಾಡದಲೆ |ನಾಗಾದಿ ರೂಪನೆ ಗರುಡಾರ್ಚಿತ 1ಗೀರ್ವಾಣವಂದ್ಯ ಹರಿದಶ್ವ |ತೇಜಪೃಷದಶ್ವ |ದೂರ್ವಾಸಾರ್ಚಿತಮಾತರಿಶ್ವ||ಪಾರ್ವತೀಪತಿ ವಂದ್ಯ | ದುಸ್ವಭಾವಗತನಭಸ್ವ |ತ್ಪೂರ್ವಿಕಾ ದೇವ ಹಂಸಾಶ್ವ ||ತೋರ್ವುದು ಜ್ಞಾನವ | ಬೀರ್ವುದು ಕರುಣವ |ಪೂರ್ವದೇವ ಸಾರ್ವೆ ನಿನ್ನನು ಯನ್ನ ||ಚಾರ್ವಾಕ ಮತಿಯನು | ಬೇರೂರೆ ಸಳಿಯಾಲು |ಉರ್ವಿಯೊಳಗೆ ಮತ್ತೋರ್ವರ ಕಾಣೆ2ತ್ರಿಗುಣ ವರ್ಜಿತ | ಪ್ರಾಣೇಶ ವಿಠಲನ ದಾಸ |ನಗಪಾಲಾ ಕೊಡು ಯನಗೆ ಲೇಸ ||ಅಗಣಿತಮಹಿಮನೆ | ಕಾಷಾಯವಸನಭೂಷ |ನಿಗಮವೇದ್ಯನೆ ನಿರ್ದೋಷ ||ನಗಸ್ತೋಮಗಳಿಗೆ | ಪಗೆಯಾಗಿರ್ಪನ |ಮಗನ ಧ್ವಜದಿ ನಿಂದಿ ಗಡಕುರುಜರೆದೆ ||ಭುಗಿಲೆಂಬುವ ತೆರ ಮೃಗಧ್ವನಿ ಮಾಡಿದನಘ |ಪೊರೆವುದುಕರವಮುಗಿವೆ ಚರಣಕೆ 3
--------------
ಪ್ರಾಣೇಶದಾಸರು
ಭಾವಿಸಮೀರಶ್ರೀ ವಾದಿರಾಜ ಸ್ವಾಮಿ ಸ್ತೋತ್ರ108ಪಾಲಿಸೋ ಗುರುರಾಜ ಪಾಲಿಸೋಪಾಲಿಸೋಗುರುವಾದಿರಾಜ || ಪೊಗಳ-ಲಳವೇ ನಿನ್‍ಮಹಿಮೆ ಮಹೋಜ || ಅಹಹಂಸಹಯಾಸ್ಯವರಾಹಕೇಶವ ಪ್ರಿಯಹಂಸಾರೂಡ್ಯನೆ ನಮೋ ಶರಣು ಮಾಂಪಾಹಿ ಪವಾಗ್ವಿಭವನು ಗುರುವರ್ಯ || ಮಹಾಯೋಗಿವರನು ಯತಿವರ್ಯ || ಶಿರಿವಾಗೀಶಕರಪದ್ಮದುದಯ || ನಾಗಿಜಗತ್ತಲ್ಲಿ ಮಾಡಿ ದಿಗ್ವಿಜಯ || ಅಹಜಗವನಳೆದಮೂರ್ತಿತರಿಸಿ ನಿಲ್ಲಿರಿಸಿಪೊಗಳೆ ಮುಕ್ಕಣ್ಣಾದಿ ಸುರರೇಬಲ್ಲರು 1ಜೀವೋತ್ತಮವಿದ್ಯುತ್ಪತಿಯ ||ನಿತ್ಯಅವೇಶಯುತ ವ್ಯಾಸರಾಯ || ಮುನಿಸರ್ವಾಭೌಮರ ಸೇರಿ ದಿವ್ಯ || ವಾದಮಾಧ್ವ ವೈದಿಕ ಬ್ರಹ್ಮವಿದ್ಯ || ಅಹಸುವಿಚಾರ ಪ್ರವಚನರತನಾಗಿ ಭುವಿತತ್ವವಶ್ರುತಿಯುಕ್ತಿ ಯುಕ್ತದಿ ಬೋಧಿಸಿದ2ಕೂರ್ಮತೀರ್ಥವು ಧವಳಗಂಗೆ || ಅದರನಿರ್ಮಲ ಲಲಿತತರಂಗ|| ಲಿಪ್ತಚರ್ಮ ತೊಳೆದು ಪಾಪಭಂಗ || ಮಾಡಿಧರ್ಮ ಆಚರಣೆ ನಿಸ್ಸಂಗ || ಅಹ ||ಬುದ್ದಿಯ ಒದಗಿಸಿಗುರುಸೇವಾರತಿಯಿತ್ತುಮಧ್ವಾಂತರ್ಗತ ಶ್ರೀಶನಲಿ ಭಕ್ತಿ ತೋರ್ಪುದು 3ಧವಳಗಂಗೆಗೆ ಪೂರ್ವಾದೇಶ || ದಲ್ಲಿದೇವದೇವೋತ್ತಮ ವ್ಯಾಸ || ದೇವಅವಲೋಕಿಸುತ ಇಹ ಪಂಚ || ವೃಂದಾವನಮಧ್ಯದಲ್ಲಿ ಪ್ರವೇಶ || ಅಹ ||ಮಾಡಿದಿರಿ ತ್ರಿವಿಕ್ರಮನನಂತ ಗುಣಕ್ರಿಯದೃಢಧ್ಯಾನೋಪಾಸನ ಮಾಳ್ಪಮಹಂತ4ಪೂರ್ಣೇಂದು ಪೋಲುವ ಮುಖವ ||ಕಮಲಕರ್ಣಿಕೆವರ್ಣದಿ ಪೊಳೆವ ||ಗಾತ್ರಪೂರ್ಣಲಕ್ಷಣ ಸಂಯುತವ || ದಿವ್ಯಫಣಿಯಲ್ಲಿ ಪುಂಡ್ರವು ಊಧ್ರ್ವ || ಅಹಪೀತ ಸುವರ್ಣ ಸುರೇಶ್ಮಿವಸನಉಟ್ಟಪದ್ಮಜ ಪಾದಾರ್ಹನೆ ನಿನ್ನ ಕಂಡೆ ನಾ ಶರಣು 5ಗುರುವಾದಿರಾಜ ನಿನ್ ದೂತ || ವೀರಭದ್ರನೋಪಮ ಬಲವಂತ || ಬಾಧೆವಿದ್ರಾವ ಕ್ಷಣದಿ ಮಾಳ್ಪಂತ || ಅತಿಶೂರ ಅದ್ಬುತ ಶಕ್ತಿಮಂತ || ಅಹ ||ನಾರಾಯಣಾಹ್ವಯ ಭೂತರಾಜನು ಎನ್ನಸಂರಕ್ಷಿಸುವ ಗುರುರಾಜ ನಿನ್ ದಯದಿ 6ಒಡೆಯ ಶ್ರೀಪತಿಹಯವದನ || ತಾನೇಕಡಲೆ ಮಡ್ಡಿಯನ್ನು ನಿನ್ನ || ಕೈಯಿಂದಉಂಡದ್ದು ಚತುರ್ದೇಶಭುವನ|| ಖ್ಯಾತಿಈಡಿಲ್ಲ ಸ್ಮರಿಸೆಪಾವನ್ನ|| ಅಹ ||ಕುಸುಮಜಪಿತ ಉಕ್ತಅಭಯಪ್ರಸನ್ನ ಶ್ರೀನಿವಾಸನ್ನೊಲಿಸೋ ಎನಗೆ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಭಿಕ್ಷೆಬೇಡಿದವರು ರಾಜ್ಯ ರಕ್ಷಿಸ ಬಲ್ಲವರಲ್ಲಭಕ್ಷಿಸಿರೊ ಬಂಡಿ ತುಂಬ ಭಕ್ಷ್ಯ ತುಪ್ಪವೆಲ್ಲ ಪ.ಹಿಂದೆ ಧರ್ಮರಾಯ ರಾಜ್ಯ ಎಂದೂ ಕಂಡವನಲ್ಲಅಂದು ಕರಡಿ ಕುಲದವನಂತೆಂದು ರಾಯ ಬಲ್ಲ 1ಮಾತಿಲೆ ಜಾಣನು ಭೀಮ ಮಾತು ಮಾಯಾವಿಯಲ್ಲಖ್ಯಾತಿ ಹೇಳಲು ಒಂದು ಕೋತಿ ಕುಲದವನಲ್ಲ 2ಮ್ಯಾಲೆ ಗರವಿನ ಪಾರ್ಥನಿಗೆ ವಾಲಿಯೆಂಬೊ ಕೋತಿಮ್ಯಾಲೆ ತಮ್ಮನ ಮಡದಿಯ ಕೆಡಸಿದ ಏನು ಹೇಳಲಿ ಖ್ಯಾತಿ 3ಆತ ನಕುಲ ಸಹದೇವ ಬಲು ಕುಲಖ್ಯಾತಿಯ ಕೋತಿಗಳುಕುದುರೆ ಜಾತಿಯಲ್ಲಿ ಜನಿಸಿದ ಮ್ಯಾಲಿನ್ಯಾತರ ದೊರೆಗಳು 4ಅಕ್ಕ ಸಿಂಹಾಸನಕೆ ಇವರು ತಕ್ಕ ಪುರುಷರಲ್ಲನಕ್ಕಿಹನು ರಾಮೇಶ ಇದಕೆ ಮಿಕ್ಕ ರಾಯರೂ ಎಲ್ಲ 5
--------------
ಗಲಗಲಿಅವ್ವನವರು
ಭುವನವನಾ ಯಂಧ್ಯಾಗಿದ್ದರೆಕರ|ಸುವದು ನಿರಂತರ ಲೋಕದಲೀ ||ಅವಿದಿತ ನಾನು ಅದನ್ನ ಆಪನಿತು |ವಿವರಿಸುವೆನು ಕಲಿಗಳು ಕೇಳೀ ಪರವಿಮೂಡವ ಮುಂಚೇಳುತ ಶ್ರೀಮಾ |ಧವನ ಸ್ಮರಿಸುತಿರಲದೆ ಭವನಾ ||ಯುವತಿಯರಾ ವ್ಯಾಳ್ಯದಲಿ ಮೊಸರು ಮಥ |ನವ ಮಾಡುತಿಹರು ಅದೆ ಭವನಾ 1ಶಂಖ ಚಕ್ರ ಮೊದಲಾಯುಧ ಧರಿಸದೆ |ಮಂಕುಗಳಿರುತಿಹರದೇ ವನಾ ||ಸಂಕಟ ಚೌತೀ ಶಿವನಿಸಿ ಭೂತ ಶ |ಶಾಂಕನ ಪೂಜಿಪರದೇ ವನಾ 2ಅಂಗನಿಯರು ತಿಲಕಾಯುಧ ಕುಂಕುಮ |ಶ್ರಿಂಗರವಾಗಿ ಹರದೆ ಭವನಾ ||ಅಂಗಣದಲಿ ವೃಂದಾವನ ಗೋವ್ಗಳು |ರಂಗವಲಿಕ್ಕುವರದೆ ಭವನಾ 3ಸರುವರು ಸರ್ವದ ದುಷ್ಟ ಶಬ್ದ ಉ |ಚ್ಚರಿಸುತಲಿಪ್ಪರು ಅದೇ ವನಾ ||ಹರಿಗತಿ ಪ್ರಿಯಕರ ತುಲಸಿಲ್ಲದ ಮಂ |ದಿರವೆ ನಿಶ್ಚಯವಾಗಿ ವನಾ 4ರಾಮಾರ್ಪಿತದನ್ನವ ಹೋಮಿಸಿದ |ಧೂಮ ವ್ಯಾಪಿಸಿಹದದೆ ಭವನಾ ||ಭಾಮಿನಿಯರು ಕೆಲಸವ ಮಾಡುತಖಳ|ಭೀಮನ ಸ್ಮರಿಸುವರದೆ ಭವನಾ 5ದೇವಪೂಜೆ ನೈವೇದ್ಯವು ವೈಶ್ವ |ದೇವ ಯಂಬದಿಲ್ಲದೇ ವನಾ ||ಆವ ಕಾಲಕೂ ವೇದ ವೇದ್ಯ ಭೂ |ದೇವರು ಬರದಿಹದದೇ ವನಾ6ವೇದ ಪುರಾಣದ ಘೋಷವು ಸರ್ವದ |ಭೂ ದಿವಿಜರ ಸಂದಣೆ ಭವನಾ ||ವಾದಿಗಳ ಹಳಿದು ಮಧ್ವರಾಯರಾ |ರಾಧನೆ ಮಾಡುವರದೆ ಭವನಾ 7ಹಿಕ್ಕದೆ ತಲಿ ಕಚ್ಚಿಲ್ಲದೆ ತಿರುಗುತ |ಮಕ್ಕಳನಳಿಸುವರದೇ ವನಾ ||ಸೊಕ್ಕಿಲಿ ಗಂಡತ್ತಿಗಳಿಗೆ ಬೈತಿಹ |ರಕ್ಕಸಿ ಹೆಂಗಸಿಹದೇ ವನಾ 8ತಂಬೂರಿ ತಾಳಂಗಳ ಸುಸ್ವರ |ತುಂಬಹದೆಂದೆಂದು ಭವನಾ ||ಉಂಬುವಾಗಪ್ರತಿಪ್ರತಿ ತುತ್ತಿಗೆ | ಪೀತಾಂಬರನ ಸ್ಮರಿಪರದೆ ಭವನಾ 9ರೌಚ ದಂತ ಧಾವನ ಮೊದಲಾದ ಸ |ದಾಚಾರಿಲ್ಲಲ್ಲದೇ ವನಾ ||ಯಾಚಕರಿಗೆ ತುತ್ತನ್ನವಿಲ್ಲ ಮ |ತ್ತ್ಯೋಚನಿ ಯಾತಕೆ ಅದೇ ವನಾ 10ಹರಿದಿನದಲಿ ಸರ್ವರು ನಿರ್ಜಲ ಜಾ |ಗರವನು ಮಾಡುವರದೇ ಭವನಾ ||ಮರುದಿನ ಭೋಜನ ಸೂರ್ಯೋದಯ ಕಂ |ತರಿಸದೆ ಮಾಡುವರದೆ ಭವನಾ 11ಉದಯಾಗಿ ತಾಸಾದರನ್ನನರ|ಸುದತಿಯರೇಳದ ಮನೇ ವನಾ ||ಪದುಮನಾಭ ನಾಮೋಚ್ಚಾರಣೆ ಯಂ |ಬದು ಎಂದೆಂದಿಲ್ಲದೇ ವನಾ 12ಪ್ರತಿದಿನ ಧರ್ಮಕೆ ಪ್ರತಿಕೂಲಾಗದ |ಸತಿಸುತರಿದ್ದರೆ ಅದೆ ಭವನಾ ||ವೃತಗಳು ಸದ್ದಾನಗಳು ತಿಳಿದನವ |ಕತ ಮಾಡುತಿಹ್ಯರದೆ ಭವನಾ 13ರೊಕ್ಕವಿದ್ದು ಸದ್ವ್ಯಯವಾಗದ ಯಳಿ |ಮಕ್ಕಳಿಲ್ಲದಿಹ ಸದನೇ ವನಾ ||ಮುಕ್ಕುಂದನ ದಾಸರ ನಿಂದಿಸುತಿಹ್ಯ |ಚಿಕ್ಕ ಮತಿಗಳೀಹದೇ ವನಾ 14ಮಾರುತ ಮತವನುಸರಿಸುತಲೀ ವ್ಯವ |ಹಾರ ಮಾಡುವದೆ ಭವನಾ ||ಮಾರುತಿ ಸುತ ಪ್ರಾಣೇಶ ವಿಠ್ಠಲನ ಪ |ದಾರಾಧನೆ ಮಾಡುವರದೆ ಭವನಾ 15
--------------
ಪ್ರಾಣೇಶದಾಸರು
ಮಂಗಲಂ ಮಂಗಲಂ ಭವತು ತೇಮಂಗಲಂ ಮಂಗಲಂ ಪ.ಅಂಗಜರೂಪಗೆ ಅಖಿಲ ಲೋಕೇಶಗೆಶೃಂಗಾರಮೂರ್ತಿಗೆ ಶ್ರೀಕಾಂತಗೆಸಂಗೀತ ಲೋಲಗೆ ಸಾಮಜವರದಗೆಬಂಗಾರಗಿರಿವಾಸ ಭವಭವ ಹರಗೆ 1ಕೃತ್ರಿಮ ರಕ್ಕಸ ಮೊತ್ತ ಸಂಹರಗೆಭಕ್ತರ ಹೃದಯದಿ ಬೆಳಗುವಗೆಸತ್ಯಾತ್ಮಕನಿಗೆ ಸತ್ಯನೇತ್ರನಿಗೆಚಿತ್ತಜಪಿತ ಚಿನುಮಯ ಮೂರ್ತಿಗೆ 2ಉತ್ತಮ ಗೌಡಸಾರಸ್ವತ ವಿಪ್ರರಿಂನಿತ್ಯಪೂಜೆಯಗೊಂಬ ನೀಲಾಂಗಗೆಛತ್ರಾಖ್ಯಪಟ್ಟಣಮಸ್ತಕಮಕುಟಗೆಕರ್ತಲಕ್ಷ್ಮೀನಾರಾಯಣ ಗುಣಾಂಬುಧಿಗೆ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಗಲಾ ಸ್ವಸಿದ್ದ ಸಿದ್ಧಗೆ ಮಂಗಲಾ ಸ್ವಶುದ್ಧ ಶುದ್ಧಗೆ |ಮಂಗಲಾ ಸ್ವಬುದ್ಧ ಬುದ್ಧಗೆ ಸದ್ಗುರೇಂದ್ರನಿಗೆಜಯ ಮಂಗಲಾಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಆದಿಮಧ್ಯಾವಸಾನವಿಲ್ಲದೆ ನಾದ ಬಿಂದು ಕಳಾ ವಿಹೀನಗೆ |ವೇದ ವೇದಾಂತದ ವಿಚಾರವ ತಿಳಿದ ನಿಶ್ಚಲಗೆ |ಸಾಧು ಸಂತ ಮಹಾನುಭವಿಗಳು ಸಾಧಿಸುವವರಬೋಧ ಬೋಧಗೆ | ವಾದ ಮನಬುದ್ಧ್ಯಾದಿ ಉದಯಾದಿಕವ ಲಕ್ಷಿಪಗೆ1ವಿಶ್ವತೋ ಮುಖ ವಿಶ್ವನೇತ್ರನು ವಿಶ್ವಪಾಣಿಪಾದಶೀರಿಷ | ವಿಶ್ವದೊಳಹೊರಗೇಕ |ಮಯನಾ ಸೂತ್ರನು ಮಣಿಯಂತೆ | ವಿಶ್ವವನ್ನುದ್ಧರಿಸ-ಲೋಸುಗ ವಿಶ್ವದೊಳಗವತರಿಸಿ ಸಾಕ್ಷಾದೀಶ್ವರನುಕಲಿಯುಗದಿ ವಿಶ್ವಾಮಿತ್ರ ಗೋತ್ರದೊಳು2ಪರಮಪುರುಷನು ಸ್ವಪ್ರಕಾಶನು ನರಾಕೃತಿಗೆತಾ ಬಂದು ಶಿಂಧಾಪುರದಿ ಗುರುನಾಥನು-ದರದಿ ಕರಣಿಕನ್ವಯದಿ | ಸರಸ ಲೀಲಾ ನಟನೆನಟಿಸುತ ತೆರಳಿ ಭ್ರಮರಾಪುರಕೆ ಸದ್ಗುರುವರಕೃಪೆಯತಾ ಪಡೆದು ಜಗದೊಳು ಖ್ಯಾತಿ ಪಡೆದಂಗೆ3ಅಂತು ಇಂತೆನಬಾರದಾ ನಿಶ್ಚಿಂತ ರೂಪನು ಬಳಿಕ | ಸಂತಮಹಾಂತನು ಸ್ತುತಿಸಲಾತ್ಮ ಸುಬೋಧ ಬೋಧಿಯಲಿ ||ಅಂತರಂಗದ ಭ್ರಮೆಯನಳಿದೇಕಾಂತ ಭಾವಿಕ ಭಕ್ತರಿಗೆ ವಿ-ಶ್ರಾಂತವಾದ ಸ್ವ-ಪದದೊಳುದ್ಧರಿಸಿದಾತಂಗೆ4ಸ್ಪರ್ಶ ದರ್ಶನದಿಂದೆ ಝಗ ಝಗ ಧರಿಸುತಲಿ ನಾನಾ ವಿ-ಚಿತ್ರಾಚರಣವನು ಚರಿಸುತ್ತ ಸದ್ಗುರು ರಾಯ ಕಡೆಯಲ್ಲಿ,ಪರಮಹಂಸಾಶ್ರಮವ ಕೈಕೊಂಡಿನಿತುಕೆಲಕಾಲದಲಿ ಶಿಂಧಾಪುರದಿಸ್ವ-ಸ್ಥಾನ ದೊಳು ಸಹಜಸಮಾಧಿಸ್ಥಳದಲ್ಲಿ5ಶಾಲಿವಾಹನ ಶಕೆಯ ಶತಕತಿ ಮೇಲೆ ಐವತ್ತಾಗೆ ಮೂರನು |ಕಾಲು ದಕ್ಷಿಣ ಅಯನ ಸಂವತ್ಸರ ವಿರೋಧಿಕೃತು |ಕಾಳ ದ್ವಿತಿಯಾಮಾಸ ಆಶ್ವೀನ ಮೇಲೆ ಶಿವ ಬುಧವಾರಕರ್ಣವಿಶಾಲಿ ಗರ್ಜಾ ಭರಣೆ ಪ್ರಥಮಪ್ರಹರಸಮಯದೊಳು6ಆ ಸುದಿನದೊಳಗಾ ಮಹಾ ಸಂತೋಷ ಕಾಲದಿಸುರರುಪೂಮಳೆ ಸೂಸುತಿರೆ ಬ್ರಹ್ಮಾದಿಕರು ಸ್ವಸುಖದಿನಲಿದಾಡಿ |ಏಸುಕಾಲದಸುಕೃತಫಲವಿದು ವಸ್ತುಕಣ್ಣಲಿ ಕಂಡೆವೈ ಉಲ್ಲಾಸವೆನುತ ಸಮಸ್ತ ಸುರಜಯ ಘೋಷ ಮಾಡುತಲಿ7ನಿಜ ಪರಂಧಾಮಕ್ಕೆ ಸದ್ಗುರು ಬಿಜಯಮಾಡಿದನೆಂಬ ಮಹಾಶಯ | ಸುಜನರೆಲ್ಲರುಬಲ್ಲರಿದನು ಲೋಕಕಿದು ಸತ್ಯ || ತ್ರಿಜಗವೇಪುಸಿಯೆಂಬ ಮಹಾತ್ಮಗೆ ತ್ಯಜನವೆಲ್ಲಿ ಉದಾರ ಮಹಿಮಗೆ |ನಿಜವು ಜಲ ದೊರೆತಿಲ್ಲ ತೋರಲು ಕರಗಲೆರಡಹುದೇ8ನಿರಾಕಾರಾಕಾರ ವ್ಯಕ್ತಿಗೆಚರಣಒಂದೆ ಭೇದ ಮಿಥ್ಯೆಯು |ಚರಣಯುಗಕೆರಡುಂಟೆ ಈಪರಿಶರೀರ ಶರಣಂಗೆ ||ಹಿರಿದ ಕಿರಿದ ದರದರ ಹಂಗನು ಹರಿದು ಬಿಸುಟುವಶ್ರೀ ಮಹಾಶಂಕರಾನಂದ ಸರಸ್ವತೀ ಯತಿವರ್ಯ ಗುರುವರಗೆಜಯ ಜಯ ಮಂಗಲಾ ಜಯ ಜಯ ಮಂಗಲಾ9
--------------
ಜಕ್ಕಪ್ಪಯ್ಯನವರು
ಮಂಗಳ ಮಂಗಳಾತ್ಮಕಗೆ ಮಂಗಳ ಮಂಗಳಾನನಗೆಮಂಗಳ ಮಂಗಳದೇವಿಯರಸಗೆ ಪ.ಮಿಸುನಿಯ ಹರಿವಾಣದಲ್ಲಿ ಹೊಸಮುತ್ತಿನಾರತಿ ನಿಲಿಸಿಬಿಸಜಗಂಧಿಯರು ಶ್ರೀಹರಿಗೆ ಜಯವೆನ್ನಿ 1ಕುಂದಕುಟ್ಮಲರದನೆಯರು ಇಂದುಮಂಡಲವದನೆಯರುಸಿಂಧುಶಯನ ನಿತ್ಯನಿಗೆ ಜಯವೆನ್ನಿ 2ರಂಭಾಸ್ತಂಭೋರು ಅಂಬುಜಕುಚಯುಗಳೆಯರುಅಂಬುಜಶರಜನಕಗೆ ಜಯವೆನ್ನಿ 3ಪ್ರಾಗ್ಜೋತಿಷಧಿಪನರಿಗೆ ಪೂಗಣ್ಣಿಯ ಮನೋಹರಗೆನಾಗ್ಗನ್ನೆಯರ ದೇವಗೆ ಜಯವೆನ್ನಿ 4ಸೌಂದರ್ಯಾತಿಶಯ ಪೂರಣಗೆ ಸೈಂಧವಹನನಕಾರಣಗೆತಂದೆ ಪ್ರಸನ್ನವೆಂಕಟೇಶಗೆ ಜಯವೆನ್ನಿ 5
--------------
ಪ್ರಸನ್ನವೆಂಕಟದಾಸರು
ಮಂಗಳಾನನ ರಂಗ ಕರುಣಾಪಾಂಗವೆಂಬ ಪತಂಗದಿಂದಘತುಂಗತಿಮಿರವಿಭಂಗ ಭಕ್ತರ ಇಂಗಿತವನೀವುದುಪ.ಮಾರನ ಮನೋಹರ ಮದ ಅಂಧಕಾರ ಕವಿಯಲು ಕ್ರೂರವಿಷಯವಿಕಾರ ಭವವೆಂಬಪಾರಾಂಬುಧಿಯೊಳು ದಾರಿದೊಡಕಿದೆ ನಾಆರೆನಾರದತಾತಕರುಣಾಳುತೋರಿ ನಿನ್ನಯಚಾರುಮೂರುತಿಯಘೋರಕಲುಷವಿದೂರಮಾಡುಮಂದರಧರಮುಕುಂದ1ಪ್ರಿಯ ಮನಮುನಿಗೇಹಮಲೆತಇಂದ್ರಿಯಗಳಿಗೆ ಸಹಾಯವಾಗಿದೆಹೇಯವಿಲ್ಲದ ನಾಯಿಮನವೆನ್ನ ನೋಯನೋಯಿಸುತಿದೆಕಾಯಬೇಕೆಲೆಜೀಯಕರಿಮಕರಿಯ ಬಾಧೆಗೆ ಬಾಯಿ ತೆರೆಯೆ ಪೊರೆಯಬೇಕೆಂದು ಕೆಲದೆ ಎಸೆದಿರಲು ತಾಯಿಪಿತನಾರೆಂದು 2ಮನ್ಮಥಪಿತಚಿನ್ಮಯಾತ್ಮಕಮುನ್ನಸಂಚಿತಘನ್ನಕರ್ಮವುಬೆನ್ನ ಬಿಡದು ದುರ್ಜನ್ನ ಸಂಗದಿ ಖಿನ್ನನಾದೆ ನಾಉನ್ನತಗುಣಪೂರ್ಣಎಂದೆಂದುನಿನ್ನ ದಾಸರನ್ನು ಕೂಡಿಸುಪನ್ನಗಾದ್ರಿ ಪ್ರಸನ್ನವೆಂಕಟರನ್ನ ಜಗಜೀವನ್ನ 3
--------------
ಪ್ರಸನ್ನವೆಂಕಟದಾಸರು
ಮತ್ತವನಲ್ಲೊ ಮುರಾರಿ ನಿನಗೆ ನಾಮತ್ತವನಲ್ಲೊ ಮುರಾರಿ ನಿನ್ನಭೃತ್ಯರ ಭೃತ್ಯರ ಭೃತ್ಯರ ಭೃತ್ಯನಿಗೆತ್ತಣ ಸ್ವಾತಂತ್ರ್ಯ ಸಲಹಯ್ಯಶೌರಿಪ.ರಂಗಾ ನೀ ಕೊಳ್ಳದ ಬಂಗಾರ ತಳಿಗ್ಯೂಟನುಂಗುವ ಮತ್ತವನಲ್ಲೊರಂಗಾ ನಿನ್ನ ಮರೆದಂಗನೆಯರನಾಲಂಗಿಸಿ ಮತ್ತವನಲ್ಲೊರಂಗಾ ನಿನ್ನೊಲುಮೆಯ ಡಿಂಗರರಂಘ್ರಿಗೆರಂಗದೆ ಮತ್ತವನಲ್ಲೊರಂಗಾ ನಿನ್ನೆಂಜಲೆನ್ನಂಗೈಯೊಳುಂಡು ರಾಜಂಗಳನುಡುಗುವ ಬಡವ ನಾನಲ್ಲದೆ 1ನಾಥನೆ ನಾನೆಂದು ಮಾತು ಕಲಿತುಖಳವ್ರಾತಸಂಗದಿ ಮತ್ತವನಲ್ಲೊನಾಥ ನಿನ್ನ ಮೀರಿದಾತನುಂಟೆಂದು ನಿರ್ಭೀತಿಲಿ ಮತ್ತವನಲ್ಲೊನಾಥ ನಿನ್ನ ಗುಣಖ್ಯಾತಿ ಹೊಗಳದನ್ಯಸ್ತೌತ್ಯದಿ ಮತ್ತವನಲ್ಲೊನಾಥ ನಿನ್ನಡಿಯ ತೀರಥವೆ ಗತಿಯೆಂದುಯಾತನೆಗಂಜುವ ಬೆದರುಗುಳಿಯಲ್ಲದೆ 2ತಂದೆ ನೀ ಮಾರಿದರೊಂದೊಪ್ಪು ಕೊಂದರೊಪ್ಪೆಂದಿಗೆ ಮತ್ತವನಲ್ಲೊತಂದೆ ನಿನ್ನ ಮನೆ ಹೊಂದಿದಟ್ಟಣೆಗೈದಿಬಂಧಿಸು ಮತ್ತವನಲ್ಲೊತಂದೆ ನಿನ್ನಾಯುಧ ಸಂದು ಸಂದಿಗೆ ಕಾಸಿತಂದಿಡು ಮತ್ತವನಲ್ಲೊತಂದೆ ಪ್ರಸನ್ನವೆಂಕಟಿಂದಿರೇಶನೊಬ್ಬ ಅಹುದೆಂದ ಸೊಕ್ಕೊಂದುಳ್ಳವನಲ್ಲದೆ 3
--------------
ಪ್ರಸನ್ನವೆಂಕಟದಾಸರು
ಮದ್ದಿನ ಹವಾಯಿ ನೀನೋಡುಬಗಳಮದ್ದಿನ ಹವಾಯಿ ನೀನೋಡುಮದ್ದಿನ ಹವಾಯಿ ಹೃದಯ ಬಯಲಲ್ಲದೆಎದ್ದಿರು ಚತುಷ್ಟ ತನುವಿಗೆ ಬೇರೆಯುಪತೂರ್ವುತಲಿದೆ ಬಿರಿಸಾಕಾಶದ ತುದಿಗೇರ್ವುತಲಿದೆಅಂಬರಬಾಣಬೀರ್ವುತಲಿದೆ ಚಕ್ರದ ಕಿಡಿಯಗಲಕೆಜಾರ್ವುತಲಿದೆ ಅಜ್ಞಾನದಖೂನ1ಗಡಿಗ ಬಾಣದ ಗತಿಯನೆನೋಡುಗಜುಗಿಂಗಳ ಕಾಯಬ್ಬರವಗಿಡುಗಳು ಹಾರ್ವವು ಜಿನಿಸು ಜಿನಿಸುಗಳುಭಡಲ್ ಭಡಲ್ಲಿಹ ಸಪ್ಪಳವು2ಅಂತರ ದೌಸು ಸರಬತ್ತಿಗಳುಅಗಸೆಯ ಹೂವಿನ ಅಚ್ಚರಿಯಕಂತುಕ ಪೆಟಲವು ಮುತ್ತಿ ಸೇ-ವಂತಿಗೆ ಕವಳೆಯ ಹೂವಿನ ಸುರಿಮಳೆಯು3ಕೋಳಿಯು ಮುಳುಗುತಲೇಳುತಲಿರುತಿರೆಕೋಣ ಆನೆಗಳ ಕಾದಾಟಬಾಳೆಯ ಗೊನೆಗಳು ಬೆಳ್ಳಿಯ ಚುಕ್ಕೆಯುಬೆಳ್ಳನೆ ಜ್ಯೋತಿಯ ಕಡಕದಾಟ4ನಿನ್ನ ಕಾಂತಿ ಇವು ನೀನೇ ನೋಡುತಲಿರುತನ್ಮಯ ದೃಷ್ಟಿಯನಿಟ್ಟುಚೆನ್ನ ಚಿದಾನಂದ ಬಗಳೆ ನೀ ಸಾಕ್ಷಿಯಿರೆ ಚೈ-ತನ್ಯಾತ್ಮಕ ಶುದ್ಧನವ5ಸೂಚನೆ :ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಹಾರಿಸುವ ಮದ್ದಿನ ವಸ್ತುಗಳ ಬೆಳಕಿಗೆ ದೇವಿಯನ್ನು ಹೋಲಿಸಿದ್ದಾಗಿದೆ. ಇದರಲ್ಲಿ ಬಂದಿರುವಕೆಲವು ಮದ್ದಿನ ಪದಾರ್ಥಗಳ ಹೆಸರುಗಳು ಆಗಿನ ಕಾಲದವು.
--------------
ಚಿದಾನಂದ ಅವಧೂತರು
ಮರುಳಾಟವ್ಯಾಕೆ ಮನುಜಗೆ ಮರುಳಾಟವ್ಯಾಕೆಹರಿಭಕ್ತನಲ್ಲದವಗೆ ಹಲವಂಗವ್ಯಾಕೆ ಪ.ಮೃತ್ತಿಕಾಶೌಚವಿಲ್ಲದೆ ಮತ್ತೆ ಸ್ನಾನ ಜಪವ್ಯಾಕೆಹತ್ತು ಕಟ್ಟದವಗೆ ಅಗ್ನಿಹೋತ್ರವ್ಯಾತಕೆತೊತ್ತುಬಡಕಗೆ ಬಹು ತತ್ವವಿಚಾರವ್ಯಾಕೆಕರ್ತಕೃಷ್ಣನ್ನೊಪ್ಪದ ವಿದ್ವತ್ತವ್ಯಾತಕೆ1ಹಸಿವೆತೃಷೆತಾಳದವಗೆಹುಸಿವೈರಾಗ್ಯವ್ಯಾತಕೆವಿಷಮ ಚಿತ್ತಗೆ ಪರರ ಕುಶಲ ಬಯಕ್ಯಾಕೆದಶ ಜಪ ಮಾಡಲಾರ ಮುಸುಕಿನ ಡಂಬವ್ಯಾಕೆಕುಶಶಾಯಿಗರ್ಪಿಸದ ಅಶನವ್ಯಾತಕೆ 2ಮೂಲಮಂತ್ರವರಿಯದ ಮೇಲೆ ದೇವಾರ್ಚನೆ ಯಾಕೆಸಾಲಿಗ್ರಾಮವಿಲ್ಲದ ತೀರ್ಥವ್ಯಾತಕೆಸೂಳೆಗಾರಗೆ ತುಳಸಿಮಾಲೆ ಶೃಂಗಾರವ್ಯಾಕೆಮೇಲೆ ಮೇಲೆ ಹರಿಯೆನ್ನದ ನಾಲಿಗ್ಯಾತಕೆ 3ಊಧ್ರ್ವಪುಂಡ್ರಿಲ್ಲದಾಸ್ಯ ತಿದ್ದಿನೋಡಬೇಕ್ಯಾಕೆಶುದ್ಧ ಸಾತ್ವಿಕವಲ್ಲದ ಬುದ್ಧಿ ಯಾತಕೆಕದ್ದು ಹೊಟ್ಟೆ ಹೊರೆವವಗೆ ಸಿದ್ಧ ಶೀಲವೃತ್ತಿಯಾತಕೆಮಧ್ವ ಮತವÀ ಬಿಟ್ಟಿತರ ಪದ್ಧತ್ಯಾತಕೆ 4ಕಂಡ ನಾರೇರಿಚ್ಛೈಸುವ ಲೆಂಡಗೆ ಪುರಾಣವ್ಯಾಕೆಭಂಡು ಮಾತಿನ ಕವಿತ್ವ ಪಾಂಡಿತ್ಯಾತಕೆಕುಂಡಲಿಪ್ರಸನ್ವೆಂಕಟ ಮಂಡಲೇಶನ ಶ್ರೀಪಾದಪುಂಡರೀಕಬಿಟ್ಟವನ ವಿತಂಡವ್ಯಾತಕೆ5
--------------
ಪ್ರಸನ್ನವೆಂಕಟದಾಸರು
ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
--------------
ಪುರಂದರದಾಸರು
ಮಾಡುಸಾಧು ಸೇವೆಯ ಬೇಡು ಆಭಯಕೂಡು ನಂತರ ನೀ ನಿರಂತರೀಡಾಡಿದರೆಅಂಜಿ ಓಡದೆ ಆತ್ಮ ಪ.ಸಂತರೊಳು ಕುತರ್ಕ ಕಲ್ಪಾಂತ ರೌರವನರ್ಕಸಂತರೊಳು ಉಗ್ರ ಮನಸು ಆದ್ಯಂತ ಪಾಪದ ಬೆಳಸುಸಂತರ ಕೂಡ ದುಶ್ಚಿತ್ತ ದೇಹಾಂತ ಪ್ರಾಯಶ್ಚಿತ್ತಸಂತರಾಧೀನನಾದರೆಹರಿತಾ ಸಂತೋಷದಿಂದ ಒಲಿವನುನಿತ್ಯ1ತೀರ್ಥ ಸ್ನಾನವು ಹಲವು ಕಾಲೋತ್ತರಕಾಹುದು ಫಲವುಮೂರ್ತಿಔಪಾಸನವು ಧರ್ಮಾರ್ಥ ಮುಂದಣ ಅನುವುಅರ್ಥಗಳ ವಿತರಣವು ಶೂನ್ಯಾರ್ಥ ಸಮಯಕೆ ದಣಿವುಸಾಥರ್Àಕವು ಸಧ್ಯ ಸಾಧುನಿಕರದಗಾತ್ರಕ್ಷೇತ್ರಯಾತ್ರೆಯ ಬಿಡದೆ2ಸಾಧುಸಂಗವಗಿಲ್ಲ ಮುಕ್ತಿಯ ಹಾದಿ ಅವನಿಂಗಿಲ್ಲಸಾಧುರದಾವಹಳಿವ ತಮಸಕೈದುವುದು ಅವನ ಕುಲವುಸಾಧುಕೃಪೆ ದಾವಗುಂಟು ಎಲ್ಲಿ ಹೋದರಾನಂದದ ಗಂಟುಸಾಧುಪ್ರಿಯ ಪ್ರಸನ್ವೆಂಕಟರಮಣನು ಸಾಧುರ ಮೆಚ್ಚಿದವರಿಗೆಮೆಚ್ಚುವನು 3
--------------
ಪ್ರಸನ್ನವೆಂಕಟದಾಸರು