ಒಟ್ಟು 2786 ಕಡೆಗಳಲ್ಲಿ , 117 ದಾಸರು , 2021 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಮಂಗಳಂ ಸದಾಶಿವ ಮಂಗಳಂಮಂಗಳಂ ರಜತಾದ್ರಿ ಮುಖ್ಯನಿಲಯಾಯ ಪಹಿಮಕರಾವತಂಸಾಯ ಹಿಮರುಚಿರಕಾಯಾಯಹಿಮರೂಪಗಿರಿಚಿತ್ತ ಹಾರಕಾಯಹಿಮಹರಾಮಿತಕಾಂತಿ ಸದೃಶಾಯ ಸೌಮ್ಯಾಯಹಿಮತಾಪರಹಿತಾಯ ಹೇಮವರ್ಣಾಯ 1ವರಜಟಾಮಕುಟಾಯ ವಾರಿಯುತಕೇಶಾಯಸ್ಫುರದಿನಾನಲಸೋಮಲೋಚನಾಯಗರನೀಲಕಂಠಾಯ ಕದ್ರುಸುತ ಹಾರಾಯಪರಶು ಮೃಗ ಶೂಲಾದಿ ಪರಮಾಯುಧಾಯ2ನಾಗೋಪವೀತಾಯ ನಾಗೇಶ ವಲಯಾಯನಾಗಧವಳಾಂಗಾಯ ನಾಯಕಾಯನಾಗವಾಹನ ಮುಖ್ಯ ನಾಕಜನನಾಥಾಯನಾಗಪರ್ಯಂಕಸ್ಥ ನಿತ್ಯಮಿತ್ರಾಯ 3ಗೌರೀಧೃತಾಂಗಾಯ ಗಂಧರ್ವಸೇವ್ಯಾಯಭೂರಿ ಗುಣಬ್ರಹ್ಮಾಂಡ ಭೂತಾಯಚಾರು ಕಟಿ ಶುಭ ಜಂಘಾಯನೀರಜಾಮಲ ಪೀಠ ನಿಹಿತ ಪಾದಾಯ 4ಮೃಗಚರ್ಮವಸನಾಯ ಮಂಜುಳ ಮಯೂಖಾಯಜಗದೇಕನಾಥಾಯ ಜೀವನಾಯಸುಗಮ ತಿರುಪತಿ ನಾಮ ಸದ್ಮಾಧಿನಾಥಾಯಗಗನಧುನಿ ಗಿರಿ ವಾಸ ಗಂಗಾಧರಾಯ 5 ಓಂ ನವನೀತನವಾಹಾರಾಯ ನಮಃ
--------------
ತಿಮ್ಮಪ್ಪದಾಸರು
ಶಿವರಗಳೆ ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ ಜ್ಞಾನಿ |ಚಾಟಕನಾದರೆ ಜ್ಞಾನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ ಕಂಟಕ ಕಾಕು ಭಂಗ ಬ್ರಹ್ಮಜ್ಞಾನ ಯೋಗಿ ಬ್ರಹ್ಮಜ್ಞಾನ ಬ್ರಹ್ಮಜ್ಞಾನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||
--------------
ನರಸಿಂಹ
ಶುಕ ಮುನಿವಂದ್ಯ ಹರಿ ಮುಖ ಪೀಠದಲಿ ಕುಳಿತೂ ಪ ಸುಖದಿ ನೀ ಪವಡಿಸಯ್ಯಾ ಅ.ಪ ಬೊಮ್ಮ ದಿವಿಜ ಭವರೋಗ ವೈದ್ಯ ನಿಂ ನವಸರದೂಳಿಗ ನವಸುಂದರ ನಿದ್ದೆ ಪೊ ತ್ತವನೇ ನೀ ಪವಡಿಸಯ್ಯಾ 1 ತುಂಬುರು ನಾರದನೆಂಬರು ವೀಣೆಯ ಸಂಭ್ರಮದಿಂ ಮೇಳೈಸಿ ಅಂಬುಜನಾಭ ನೀನೆಂಬ ಗೀತವ ಸವಿ ದುಂಬಿ ಪಾಡಲು ಕೇಳುತಾ ಟುಂಬ ನೀ ಪವಡಿಸಯ್ಯಾ 2 ಪೆಡೆದಲೆಗನ ಮೃದುವಡೆದ ಹಾಸಿನ ಮೇ ಲಿಡಿಕಿರಿ ವಡಸಿಸುವಾ ಯಡಕೆಲೆ ಸಂಭ್ರಮಿಸೇ ಮಡದಿ ರನ್ನಳು ಸೌಮ್ಯನಾಯಕಿ ಯೊಡನೈಗೂಡಿ ಮೃಡನುತನೆ ಪವಡಿಸಯ್ಯಾ 3
--------------
ಬೇಲೂರು ವೈಕುಂಠದಾಸರು
ಶುಕ್ಕುರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನುರುಕ್ಮಾಭರಣ ವಿಲಕ್ಷಣ ಶೋಭಿಪ ಸುಲಕ್ಷಣ ಮೂರ್ತಿಯನುರಕ್ಕಸರಿಪು ಬಲಪಕ್ಕದಿ ಕೂತಿಹ ರುಕ್ಮಿಣಿ ದೇವಿಯನು ಪ ಸಂತತ ಭಜಿಸುವ ಸಂತರ ಹತ್ತಿರ ನಿಂತು ರಕ್ಷಿಸುತಿಹಳುಶಾಂತಳು ಸದ್ಗುಣವಂತಳು ಕಮಲಾಕಾಂತನ ಸುಪ್ರಿಯಳೂ ಕರವೀರಪ್ರಾಂತ್ಯದೊಳಿರುತಿಹಳು ಹೃತ್ಕಮಲಂಚಳ ಸಂಸ್ಥಿತಳು 1 ಮಾಧವ ಭೂಮಿಯ ಮಂಗಳ ಮೂರ್ತಿಯು ಸುಖರಾಶಿ2 ಆಸ್ಯಾಂಬುಜತನು ಹಾಸಸುಕುಂತಳೆ ಭೂಷಿತ ಬಿಂಬೋಷ್ಠೀಕೂಸಿಗೆ ಕೊಡು ಇಂದಿರೇಶನ ಸಹಜಗದೀಶಳೆ ತವ ಭೆಟ್ಟಿ3 ಅಗಣಿತ ಮಹಿಮನಸುಗುಣದೊಳಾಡುವ ಮಿಗೆ ಹರುಷವ ಕೊಡುನಗೆಮುಖದವಳೇ 4 ಸಂದರವದನೆ ಸಿಂಧುರಗಮನೆ ಕುಂದದ ಅಸುರರನೆಮಂದರಮಾಲಾ ಭೂಷಿತವೇಣಿ ಇಂದಿರೇಶನ ಪಾದದ್ವಂದ್ವತೋರಿಸು ನಿನಗೊಂದಿಸುವೆನು ಶರದಿಂದು ಸುಮನಸೆ 5
--------------
ಇಂದಿರೇಶರು
ಶುಭ ಮಂಗಳ ತ್ರಯಭುವನ ವಂದ್ಯ ಸೀತಾಕಾಂತಗೆ ಪ ದಶರಥಾತ್ಮಜನಾಗಿನರಲೀಲಿ ನಟಿಸಿದಗ ಋಷಿಮುಖಕಾಯ್ದ ಹಿಲ್ಯೋದ್ದಾರಗ ಅಸಮಧನುಮುರಿದ ವನಿಜೆಯಾಮಾಲೆಧರಿಸಿದಗ ಬೀಸಜಲೋಚನ ಜನಕ ಜಾಮಾತಗ 1 ಮೂನವರನುಜರ ಕೂಡಿ ಕಲ್ಯಾಣವಿಡಿದಂಗ ದೇವಭೃಗುಪತಿ ಮನಾನಲಿಸಿದವಂಗ ಅವಿಭವಿ ಬಂದಯೋಧ್ಯಾ ಪುರವನಾಳ್ದಂಗ ಜೀವಜಾತಕಸುಖವ ಬಡಿಸಿದಂಗೆ 2 ಗುರು ಮಹೀಪತಿ ಸುತನ ಜೀವ್ಹದಲಿತಾನಿಲಿಸಿ ನಿರುಪಚಾರಿತ್ರ ನುಡಿಸಿದಂಗೆ ಧರೆಯೊಳಗ ದೀನ ಅನಾಥರನು ಪೊರೆವ ಪರಮ ಮಂಗಳ ನಾಮ ಶ್ರೀ ರಾಮಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ವಾಸುದೇವ ಮೂರುತಿಗೆ ಪಕುಂದಣಕೆ ಸರಿಯಾದ ಕಾಯದತಿ ಕಾಂತಿಗೆಸಿಂಧುವನು ಪೋಲ್ವ ಗಂಭೀರ ರಸಕೆಇಂದುಬಿಂಬವ ಜರೆವ ಮುಖದ ಸೊಂಪಿನ ಸಿರಿಗೆಕಂದರ್ಪ ಕೋಟಿ ಲಾವಣ್ಯ ನಿಧಿಗೆ 1ಅಭಯದಾನವ ಕೊಡುವ ಕರಗಳತಿ ಚೆಲು'ಕೆಗೆಶುಭಗಳಿಗೆ ನೆಲೆಯಾದ ನೇತ್ರಗಳಿಗೆ'ಭವಗಳಿಗೆಡೆಬಿಡದ ಮುಗುಳುನಗೆಯೊಗು'ುಗೆಗೆತ್ರಿಭುವನಂಗಳನಳೆದ ಪದ ನಳಿನಗಳಿಗೆ 2ಜ್ಞಾನಮುದ್ರೆಯ ಕರದಿ ಜ್ಞಾನೋಪದೇಶವನುತಾನೆ ಕರೆದಿತ್ತು ಭಕ್ತರ ಸಲಹುತಾ ಮಾನವನು ಕಡೆಗೊತ್ತಿ ಮಾನ್ಯ ತಾನೆಂದೆನಿಪಶ್ರೀನಿಕೇತನ ನಿಜದ ಚಿನ್ಮಯಾತ್ಮಕಗೆ 3ಕಾವೇರಿ ಗಂಗೆಯೊಲು ಕಮಲನಾಭನ ಕಥೆಯ ಪಾವನದ ತೀರ್ಥದಲಿ ಪಾಪವಳಿದು ಜೀವಭಾವವ ಬಿಟ್ಟು ಬ್ರಹ್ಮ ತಾನೇಯಾಗಿಯಾವಗವು ಸುಖಶರಧಿಯಾದ ಚಿನ್ಮಯಗೆ 4ರಾಗಾದಿರ'ತನಿಗೆ ರಾಗಿಗಳ ಸಂಸಾರಸಾಗರವ ದಾಟಿಸುವ ಬೋಧ ಘನಗೆಯೋಗಿಗಳ ಸಂಮತಗೆ ಗುರು ವಾಸುದೇವಗೆಯೋಗೇಶ ತಿರುಪತಿಯ ವೆಂಕಟೇಶ್ವರಗೆ 5ಓಂ ಶ್ರೀವತ್ಸಕೌಸ್ತುಭಧರಾಯ ನಮಃ
--------------
ತಿಮ್ಮಪ್ಪದಾಸರು
ಶುಭ ವೀರಾಂಜನೇಯಾಯ ಜಯ ಮಂಗಳಂ ಪ ಮಣಿ ಪುಂಜ ರಂಜಿತಾಯ ಶುಭಾಂಗಯ ಮಂಜುಳಾಯ 1 ಲಕ್ಷ್ಮಣ ಪ್ರಾಣ ಸಂರಕ್ಷಣಾಯ ಪಕ್ಷೀಂದ್ರ ಗಂಧವಹ ಗತಿ ಲಕ್ಷಿತಾಯ 2 ಪಂಚಾನನಾದಿ ಮುಖ ಪಂಚಕಾಯ ಪಂಚತಾಪ ಹರಾಯ ಪÀಂಚಾಕ್ಷರಾಯ 3 ಕಂದರ್ಪ ನವವರವ್ಯಾಕರಣ ನವಪಂಡಿತಾಯ ನವಪಂಚಕೋಟಿ ಯೂಧಪ ಸೇವಿತಾಯ 4 ಮಹಾಕಾಂಡ ಬೃಂದಾರಕಾಯ ಗಂಧರ್ವವೇದೇಷು ಘನ ಪಂಡಿತಾಯ 5 ಸರ್ವಮಂತ್ರಾವಳೀ ಸನ್ನುತಾಯ ಸರ್ವಭೀತಿ ಹರಾಯ ಸರ್ವಾತ್ಮಕಾಯ 6 ಶತಕೋಟಿ ಭಯವರ್ಜಿತಾಯ ಬೇಟೆರಾಯಾಖ್ಯ ದೀಕ್ಷಿತ ರಕ್ಷರಾಯ 7 ಪರಯಂತ್ರ ವಿದ್ವಂಸಕಾಯ 8
--------------
ಬೇಟೆರಾಯ ದೀಕ್ಷಿತರು
ಶುಭ ಶುಭ ನಿಧಿಗೆ ಪ ಮಂಗಳಾ ಗುರುವಾದಿರಾಜರಿಗೆ ಜಯಮಂಗಳಾ ಭಾವಿ ಮುಖ್ಯಪ್ರಾಣರಾಜನೀಗೆಅ.ಪ. ಮಾಯಾವಾದಿಗಳಾ ಗೆದ್ದ ಸ್ವಾದಿಪುರವಾಸಿಯಾದ ವಾದಿರಾಜಾ ಮಧ್ವಮುನಿಗೆ ಜಯಮಂಗಳಾ 1 ಭೂತರಾಜಾರಿಂದ ಸೇವ್ಯಾಭೂತ ಪತಿಗೊಲಿದ ಗುರು ಲಾತವ್ಯ ರಾಜರಿಗೆ ಜಯಮಂಗಳಾ 2 ಧವಳಗಂಗಾವಾಸಿಯಾದ ಹಯಗ್ರೀವ ತ್ರಿವಿಕ್ರಮಾ ವೇದವ್ಯಾಸರ ಪೂಜಿಪಗೆ ಜಯಮಂಗಳಾ 3 ಪತಿ ರಮಣ ಹರಿಯಾ ಪ್ರಥಮಾಂಗ ಮುಖ್ಯಪ್ರತಿಬಿಂಬಾಣೆಗುರುತಂದೆವರದಗೋಪಾಲವಿಠ್ಠಲನಾ ವೀಹಾರಕ್ಕಾ-ವಾಸನಾದ ಸುವ್ರೇತಾ ಘನದೂತಾ ಗುರುವಾದಿರಾಜಗೆ 4
--------------
ಗುರುತಂದೆವರದಗೋಪಾಲವಿಠಲರು
ಶುಭಫಲಪ್ರದಮೌನಿ ಮಾಂ ಪಾಲಯ ಶುಭಫಲಪ್ರದಮೌನೀಅಭಿನವರಂಗನಾಥ ಪರಕಾಲಧೀಮಣಿ ಪ'ಬುಧಜನಾರ್ಚಿತ 'ಮಲ ಸುಗಣ್ಯಾ ಅಭಿನುತಿಚೇಕೊನು ಆರ್ತಶರಣ್ಯಾ 1ಶಮದಮಶಾಂತಾದಿ ಸದ್ಗುಣಭರಿತ ಸುಮಶರಜಿತಯಾಶ್ರಮತ್ರಯತ್ಯಜಿತ 2ನಿಯತಿಯುಕ್ತ ಬ್ರಂಹತಂತ್ರಕೃಪಾಂಗಾಹಯಮುಖಚರಣಸರೊರುಹಭೃಂಗಾ 3ಸಕಲಾಗಮಶಾಸ್ತ್ರಾರ್ಥ ಪುರಾಣಪ್ರಕಟತ ಪರಿಶ್ರಮಪ್ರತಿಭಪ್ರ'ೀಣಾ 4ಧರಿಶ್ರೀಕೃಷ್ಣ ನೃಪದೇಶಿಕ ಪ್ರಮುಖಪರಮಶೀಲವ್ರತಪತಿತೋದ್ಧಾರಕ 5ಸರ್ವತಂತ್ರಸ್ವಾತಂತ್ರಯತೀಂದ್ರಾಯುರ್ವಿಯಾಮ್ಮುಕ 'ತಕರಸಾಂದ್ರಾ 6ನಿಗಮಾಂಗುರುಪದನಿತ್ಯಾರಾಧಕದ್ವಿಗುಣರ'ತಪರತತ್ವಸ್ಥಾಪಕ 7ಮಂಗಳತರಸತ್ಸಂಗಧುರೀಣಾರಂಗಸ್ವಾ'ುದಾಸಾರ್ಚಿತಚರಣಾ 8
--------------
ಮಳಿಗೆ ರಂಗಸ್ವಾಮಿದಾಸರು
ಶೇಷದೇವ ವಾರುಣೀಪತಿ ಪಾಹಿ ಪ ಶೇಷದೇವ ತ್ರೈಘೋಷಣ ಮುಖ ಪರಿ ಪೋಷಿಸು ಎಮ್ಮಭಿಲಾಷೆಯ ಸಲಿಸಿ ಅ.ಪ. ಭಜಿಸುವೆ ಸರ್ವದಾ ಸುಜನರಭೀಷ್ಟವ ಸುಜನಾರಾಧಕ ಭುಜಗೋತ್ತಂಸ 1 ಪುಣ್ಯ ಚರಿತ ಸುಶರಣ್ಯಗೆ ಸುಬ್ರ ಹ್ಮಣ್ಯದೇವ ಕಾರುಣ್ಯ ಮೂರುತಿ 2 ವಾರುಣಿ ಸುಮುಖ ಸರೋರುಹ ದಿನಕರ ತೋರು ತವಾಂಘ್ರಿ ಮಹೋರಗ ರಾಜ3 ಅಸಿತವಸನ ಹಲಮುಸಲಾಯುಧ ಧರ ದ್ವಿಸ [ಹ] ಸ್ರೇಕ್ಷಣ ಸುಶರಣ ಪಾಲ 4 ಪಾತಾಳಪ ಪುರುಹೂತನುತ ಜಗ ನ್ನಾಥ ವಿಠಲನ ಪ್ರೀತಿ ವಿಷಯನೆ 5
--------------
ಜಗನ್ನಾಥದಾಸರು
ಶೇಷದೇವನೆ ಷೋಷಿಸೆನ್ನನು ಶೇಷದೇವಾ ಕರುಣಾ ಸಮುದ್ರಭವ ಪ ಕ್ಲೇಶವ ಕಳಿಯೋ ಸುರೇಶ ಮುಖವಿನುತ ಅ.ಪ ವಾಸುದೇವನ ಶಯ್ಯಾಸನ ರೂಪದಿ ಸೇವಿಸುವಿ ಚರಣ ಸಾಸಿರವದನದಿ ಶ್ರೀಶನ ಶುಭಗುಣಲೇಶ ವರ್ಣಿಸುವ ಭಾಸುರ ವಪುಷಾ 1 ವ್ಯಾಪ್ತನೆ ರಾಮನ ಸೇವಿಸಿ ಪ್ರೇಮವ ಪಡೆದಿಹ ಸೌಮಿತ್ರಿಯ ಶುಭನಾಮದಿ ಮೆರೆದಾ 2 ವಾರುಣೀವರ ಧಾರುಣಿಯೊಳು ಕೃಷ್ಣಾತೀರಕಾರ್ಪರ ನಾರಸಿಂಹನ ಪದಾರವಿಂದಯುಗ ಸೇರಿಸುಖಿಸುತಿಹ ಶೌರಿ ಅಗ್ರಜ3
--------------
ಕಾರ್ಪರ ನರಹರಿದಾಸರು
ಶೇಷಮೂರುತಿ ಪೋಷಿಸೆನ್ನ ಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ಪ ಶ್ವೇತದ್ವೀಪದ ಮಧ್ಯದಲ್ಲಿ ದೇವನರಸಿಯ ಕೂಡುತ್ತಲಿರಲು ಭಕ್ತಿಯಿಂದಲಿ ಕಂಗಳಿಂದ ಬಿಡದೆ ನೋಡುತಲಿಪ್ಪ ಸಮಯ1 ಮಗಳ ಲಜ್ಜೆಯ ಕಂಡು ಪಿತನು ಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನು ಮಗಳ ಮೇಲಿನ ಪ್ರೀತಿ ಪಿತಗೆ ಯೆಣಿಸಲಾಗದು ಲೋಕದೊಳಗೆ 2 ರಾಜೇಶ ಹಯಮುಖ ಹರಿಗೆ ಮಂಚವೆಂದರೆ ನೀನೆ ಖರೆಯು ರಾಜರಾಜರಿಗಿಂಥ ಮಂಚ ದೊರಕದೆಂದೆಂದಿಗೂ ದೇವ 3
--------------
ವಿಶ್ವೇಂದ್ರತೀರ್ಥ
ಶೇಷಶಯನ ಶ್ರೀಕೃಷ್ಣನಿಗಾರತಿ ಸತಿ ಲಕುಮಿಯು ಮಾಡಿದಳು ಪ ಸಾಸಿರನಾಮನ ಭೂಸುರಪಾಲನ ಸೋಸಿನಿಂದ ಸ್ಮರಿಸುತ ಮನದಿ ಅ.ಪ ಅಂಬುಧಿಯುದುಕದಿ ಆಲದ ಎಲೆ ಮೇಲೆ ಅಂಗುಟವನು ಬಾಯೊಳಗಿಟ್ಟು ತುಂಬಿಗುರುಳ ಮುಖಕಮಲದ ಚಲುವಗೆ ಸಂಭ್ರಮದಲಿ ಮುತ್ತಿನಾರತಿಯ 1 ಮಂದರಧರ ಗೋವಿಂದಗೆಮ್ಮಯ ಕುಂದುಗಳೆಣಿಸದೆ ಸಲಹೆನ್ನುತಾ ವಂದಿಸಿ ಪ್ರಾರ್ಥನೆ ಮಾಡುತ ಬೇಗದಿ ಇಂದಿರೇಶ ಸಲಹೆಂದೆನುತ 2 ಗೋವರ್ಧನವನು ಎತ್ತಿ ಸುಜನರನು ಗೋಗೋಪಾಲರ ಪೊರೆದವಗೆ ಗೋಪತಿ ಕಮಲನಾಭ ವಿಠ್ಠಲನಿಗೆ ಗೋಪಿಯರೊಡನಾಡುವ ಹರಿಗೆ 3
--------------
ನಿಡಗುರುಕಿ ಜೀವೂಬಾಯಿ
ಶೋಭಾನವೆನ್ನಿರೆ ಸಕಲ ಗುಣನಿಧಿಗೆ ಶೋಭಾನವೆನ್ನಿ ಸಮೀರ ಪಿತನಿಗೆ ಶೋಭಾನವೆನ್ನಿ ಸರೋಜಸದನ ಮನೋಭಿರಾಮನಿಗೆ ಶೋಭಾನವೆನ್ನಿ ಪ ಕಪಟ ಕಮಠಗೆ ತಪ ನಿಯಾಂಬಕನಸುಪರಿಹರಿಸಿದಗೆ ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ ಚಪಲಾಕ್ಷಿಯರಾರುತಿ ಬೆಳಗಿರೆ 1 ಕೊಡಲಿ ಕೋದಂಡವ ಪಿಡಿವ ಪಂಡಿತಗೆ ಕಡಲ ಕಟ್ಟಿಸಿ ಖಳರೊಡಲ ಬಗೆದಗೆ ಫಣಿ ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ ಮಡದೇರಾರುತಿಯ ಬೆಳಗೀರೆ 2 ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ ಶರಧಿಯೊಳಾಡ್ದಗೆ ಗಿರಿಮಹಿಧರಗೆ ನರಹರಿ ರೂಪಗೆ ಧರಣಿಯಾಳ್ದಗೆ ಧುರದೊಳು ರಾಯರ ತರಿದ ಸಮರ್ಥಗೆ ಗರತೇರಾರುತಿಯ ಬೆಳಗೀರೆ3 ದಶರಥ ತನಯಗೆ ವಸುದೇವ ಸುತಗೆ ಕೂರ್ಮ ರೂಪಗೆ ವಸುಧಿ ವಾಹಕಗೆ ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ ಶಶಿಮುಖಿಯರಾರುತಿ ಬೆಳಗೀರೆ 4 ವಟು ಭೃಗುರಾಮಗೆ ಜಟಲ ಮಸ್ತಕಗೆ ಕಠಿಣ ಕಂಸನ ತಳ ಪಟವ ಮಾಡಿದಗೆ ಕಪಟ ಭೀಕರಗೆ ವಟಪತ್ರಶಯನ ನಿಷ್ಕುಟಿಲ ಜಗನ್ನಾಥ ವಿಠಲಗಾರುತಿಯ ಬೆಳಗೀರೆ 5
--------------
ಜಗನ್ನಾಥದಾಸರು
ಶೌನಕಾದಿ ಮುನಿಗಳಿಗೆ ಸಾನುರಾಗದಲಿ ಪೇಳಿದರು 1 ಕೈಲಾಸಶಿಖರ ಮೆರೆವುದು ಮೇಲಾದ ರತ್ನಕಾಂತಿಗಳಿಂ2 ಜಂಬುಕೇತಕಿ ಪನಸ ಪುನ್ನಾಗ ಸರ್ವಾತಿಶಯದಲಿ ತೋರುವದು 3 ಸಿದ್ಧಿದಾಯಕ ವೆಂದಿಲ್ಲಿ ಪದಧ್ಯಾನದಿ ಕುಳಿತಿಹರು 4 ದಿವಿಜ ಅವನಿಧರಾಗ್ರಣಿಯಾಗಿ ಭುವನೋದರತ್ವದಿ ಭುವನಜನಾಭ ಶ್ರೀಧವನಂತೆ ಗಿರಿಯು ಮೆರೆಯುವುದು5 ಪಾರ್ವತಿಯೊಡನೆ ಸತಿ ನಮಿಸಿ ನುಡಿದಳು 6 ನುಡಿಯ ಲಾಕ್ಷಣದಿ ನಾಕರುಣಿಸುವೆ ಕೇಳೆಂದ7 ವರಮಹಾಲಕ್ಷ್ಮಿಯ ವೃತವು ದೊರೆವುದು ಸಕಲಸೌಭಾಗ್ಯ 8 ಶ್ರಾವಣ ಪೂರ್ಣ ಮಾಸಿಯ ದಿನದಿ ಪೂಜಿಪದು ವಿಶ್ವಾಸದಿಂದಾರಾಧಿಸುತಲಿ 9 ಪಕ್ವಾನ್ನ ಲೇಹ್ಯಾದಿ ನೈವೇದ್ಯ ತತ್ತನ್ನಿಯಾಮಕರ ಚಿಂತಿಪುದು 10 ಕೃಪಾಪಯೋನಿಧೆಯ ಪೂಜಿಪುದು ಬಿಂಬಾಪರೋಕ್ಷಿಗಳು ಪೂಜಿಪರು 11 ಕಾಮಿತ ಪಡೆದವರ್ಯಾರು ಮಹಾಮಹಿಮೆಯನು ಚನ್ನಾಗಿ12 ಮಡದಿ ತಾನಿರಲು ಕರೆಯುವರೆಲ್ಲಾರು ಪುರದಿ 13 ವನಜನಾಭನ ಶೇವೆಯೆಂದು ಗುಣದಿ ಭೂಷಿತಳು 14 ಬಂದಳು ವರಮಹಾಲಕ್ಷ್ಮಿ ಪರಮ ಸಂಭ್ರಮದಿ 15 ನಿರ್ಮಿಸುವನು ಜಗವೆಲ್ಲ ನೀ ಕರುಣಿಸು ಮಾತೆ 16 ಶ್ರಾವಣ ಹರುಷದಿಂದೆನ್ನಯ ವೃತವ ವರಗಳನಿತ್ತಳು ದಯದಿ 17 ಸಂತೋಷದಲಿ ಪೇಳಲವರು ಚಿಂತಿತ ಫಲವೀವುದೆಂದು 18 ಸಿಂಗರಿಸಿದಳಾದಿನದಿ ವಿಪ್ರಾಂಗನೆಯರನು ಕರೆದಳು 19 ಶಿರಿದೇವಿ ಪೂಜಾಸಾಧನವ ನೆರೆದರಾ ದ್ವಿಜನಮಂದಿರದಿ 20 ಕುಂಭಗಳಿಟ್ಟಘ್ರ್ಯಾದಿಗಳಿಂ ಸುರರ ಸಮ್ಮುಖದಿ 21 ಇಂದಿರ ದೇವಿಗಾರುತಿಯ ಬಂಧÀ£ವÀನÉ ಮಾಡುತಿಹರು 22 ಪೂಜಿಸುತಿರಲಾಗೃಹವು ಸೋಜಿಗವಾಯ್ತು ನೋಳ್ಪರಿಗೆ 23 ಕೊರಳೊಳುನವರತ್ನಹಾರ ಸಿರಿದೇವಿ ಕರುಣವಿದೆಂದು 24 ಇತ್ತರು ಬಾಗಿಣಗಳನು ಪೋದರು ತಮ್ಮ ಮನೆಗೆ 25 ಪುಣ್ಯದಿಂದೆಲ್ಲರು ನಾವೆಂ ಧನಧಾನ್ಯ ಸಂಪದಾಗಮನ 26 ಪಾಲಿಸುವಳು ಸಿರಿಯೆಂದು ಶಿವನು ಹೀಗೆಂದು ||27| ಕಾಯಜ ಜನನಿಯ ಕಾಯುವದೆಂದು ನೀ ತಿಳಿಯೆ 28 ನಿರ್ಮಲ ಭಕ್ತಿಜ್ಞಾನ ವೈರಾಗ್ಯ ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲಿವನು ನಿರುತ ಪಠಿಸಲು30
--------------
ಕಾರ್ಪರ ನರಹರಿದಾಸರು