ಒಟ್ಟು 2836 ಕಡೆಗಳಲ್ಲಿ , 118 ದಾಸರು , 2078 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಾ ನಿನ್ನಯ ದಿವ್ಯ ನಾಮಾ ನೆನೆವೆನು ರಾಮಾ ನಿನ್ನಯ ದಿವ್ಯ ನಾಮಾ ಪ್ರೇಮವ ಕೊಟ್ಟನ್ನಾ ನೇಮದೊಳಿರಿಸೊ ನೀ ಕರುಣದಿ ಪ ಚಿತ್ತ ಶುದ್ಧವ ಮಾಡಿ ಮತ್ತೆ ನಿನ್ನಯ ಪಾದ ನಿತ್ಯದಿ ನೆನೆವಂತೆ ಭಕ್ತಿಯೊಳಿರಿಸೊ ನೀ ಎನ್ನನು 1 ದಶರಥನುದರದಿ ಶಿಶುವಾಗಿ ಜನಿಸಿದೆ ಹೊಸ ಆಭರಣವಿಟ್ಟು ಕುಶಲಮಾತೆಯನು ನೋಡುವ 2 ಛಂದದಿಂದಲಿ ಆನಂದದೊಳಿಹ ರಾಮಾ ಚಂದ್ರನ ಮೊಗ ಅತಿ ಸುಂದರವಾಗಿರುವವನೇ 3 ಬಿಲ್ಲ ಬಾಣವಪಿಡಿದು ಎಲ್ಲಾ ದೈತ್ಯರ ಕೊಂದು ಅಲ್ಲೇ ಕೌಶಿಕಯಾಗ ಎಲ್ಲ ಸಲಹಿದೆ ಧೀರನೇ 4 ವಿಥುಳಾಪುರದಿ ಬಂದು ಅತುಳ ಧನುವ ಮುರಿದು ಸತಿ ಸೀತಾ ಸಹಗೂಡಿ ಪಿತನಾ ಪಟ್ಟಣವನು ಸೇರಿದೆ 5 ಮಾತೆಯ ವರ ಕೇಳಿ ನೀತಿಯಿಂದಲಿ ಅನು ಜಾತನ ಒಡಗೂಡಿ ಖ್ಯಾತಿಯಿಂದಲಿ ಪೋದಂತಹ 6 ಸರಯು ತೀರದಿ ಬಂದು ಪುರದ ಜನರ ಬಿಟ್ಟು ಭರದಿ ನಾವೆಯನೇರಿ ತ್ವರಿತದಿಂ ದಾಟಿ ನೀ ಪೋದೆ 7 ಭಕ್ತಿಯಿಂದಲಿ ಆ ಸಕ್ತ ಭರತನ ಕಂಡು ಯುಕ್ತಿಯಿಂದಲಿ ತೇಜೋಯುಕ್ತಪಾದುಕವನು ಕೊಟ್ಟೆನೀ 8 ಪುಸಿಯತಿಯಾಗಿ ಶೀತೆಯ ಅಸುರ ಕೊಂಡೊಯ್ದನೆಂದು ವ್ಯಸನದಿಂದಲಿ ಪೋಗಿ ಪಕ್ಷಿಯುದ್ಧರಿಸಿದೆ ಘಮ್ಮನೆ 9 ಶಾಂತಮೂರುತಿ ಹನುಮಂತರೆಲ್ಲರು ಕೂಡಿ ಅಂತರದಲಿ ಸೇತು ನಿಂತು ನೋಡುವೆ ನೀ ಛಂದದಿ 10 ಶರಣ ಬಂದ್ವಿಭೀಷಣನ ಕರುಣದಿಂದಲಿ ಕಾಯ್ದೆ ಸ್ಥಿರದಾಪಟ್ಟವಗಟ್ಟಿ ಹರುಷದೋಳ್ ನಿಲಿಸಿದೆ ಅವನನು 11 ವಾನರರೊಡಗೊಂಡು ಸೇನೆ ಸಹಿತಲೇ ದಶಾ ನನ ರಾವಣನಕೊಂದು ಮಾನಿನೀ ಸಹಿತನೀ ಬಂದಿಹೆ 12 ಪುಷ್ಪಕವನೆ ಏರಿ ಅಕಸ್ಮಾತದಲಿ ಬಂದು ಆಕ್ಷಣದಲಿ ಭರತ ರಕ್ಷಣ ಮಾಡಿದ ದೇವನೇ 13 ಪಟ್ಟಣದಲಿ ಮಾಹಾ ಪಟ್ಟವನೇರಿಸಿ ಶಿಷ್ಟ ಅಯೋಧ್ಯೆಯ ಪಟ್ಟಣವಾಳಿದೆ ರಾಮನೆ 14 ಬ್ರಹ್ಮಮೂರುತಿ ರಾಮಾಗಮನ ಚರಣದಿ ಸುಮ್ಮಾನದಲಿ ಶಾಂತಿ ತನ್ಮಯಗೊಳಿಸಾನಂದದಿ 15
--------------
ಶಾಂತಿಬಾಯಿ
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ
ರಾಮೇತಿ ಮಂಗಳಂ ದಿವ್ಯನಾಮಾಪ್ರೇಮದಲಿ ಪಾಡುವರ ಕಾಯೋ ಕರುಣಾಳೋ ಪ ಚಿತ್ರ ಚರಿತಾಂಬೂಜ ಪುತ್ರ ದಶರಥ ಬಾಲಾಉತ್ತುಮಾನಾಮವನೆ ಭಕ್ತಿಯಿಂದನಿತ್ಯ ಪಠಿಸಲು ನಿಜ ಭಕ್ತರಿಗೆ ಸಂಸಾರಮೃತ್ಯು ಸುಖ ಹರಿ ಮೋಕ್ಷ ಇತ್ತು ಪಾಲಿಸುವ 1 ಶಬರಿ ಸಾಕ್ಷಿ ಇದಕೆ ಶರಭಂಗ ಋಷಿ ಸಾಕ್ಷಿಸಿಲೆಯು ಸಾಕ್ಷಿ ಸುತನ ಕಪಿಯು ಸಾಕ್ಷಿಶಿವನ ಸಾಕ್ಷಿಯು ಸೂರ್ಯಸುತ ಮುಖ್ಯ ವಾಹನರಗೋಚರನ ರಾಕ್ಷಸರ ಸಾಕ್ಷಿ ನರ ಸಾಕ್ಷಿ 2 ದಾಶರಥೆ ಸಕಲ ಮುನಿ ಪೋಷಕನು ಲಂಕಾದಿಪ್ರೇಶನಾಶಕ ಭೃಗುಜ ತೋಷಿತಾಶಾಶ್ರೀಚರಿಯ ತೀರದಲೆ ಸೀತೆ ಸಿಂಧೆ ಇಂದಿ-ರೇಶ ಪಾಹತ ಸದ್ಗುಣತ ವಿಭೀಷಣ ತ್ರಾತಾ 3
--------------
ಇಂದಿರೇಶರು
ರುಕುಮಾಯಿ ಮನೋಹರಾ ಪ ಮೃಕಂಡು ಸುತ ಪ್ರಿಯಾಖಂಡ ತೇಜ ಅ.ಪ ಇಷ್ಟಭಕುತ ಪ್ರೀತಿಯಿಂದ ನಿನಗೆ ಕೊಟ್ಟ ಇಟ್ಟಿಗೆ ಮೇಲೆ ನೆಲಸಿರುವ ದೇವ 1 ಮರೆತಾದರು ಸಂಸ್ಮರಿಸುವಜನರಘ ಪರಿಹರಿಸುವೆನೆಂಬ ಬಿರುದು ಕಟ್ಟ್ಟಿಹ 2 ದೇವ ಗುರುರಾಮ ವಿಠಲನೆಲಸಿದೆ 3
--------------
ಗುರುರಾಮವಿಠಲ
ರುದ್ರದೇವರು ಉಮೇಶಾ ಪರಿಪಾಲಿಸೊ ಪ ಉಮೇಶ ಪಾಲಿಸು ರಮೇಶನ ಪಾದ ಕಮಲಗಳಿಗೆ ಭ್ರಮರನೆನಿಸಿ1 ಕಾಲನಿಯಾಮಕ ನೀನಾಗಿ ಜಗವನು ಲೀಲೆಯಿಂದಲಿ ಕಾವ ಶೂಲ ಪಾಣಿಯೆ 2 ಸಿರಿ ಶೇಷಾವಿಠ್ಠಲನ ದಾಸನೆನಿಸಿ ಸಂತೋಷಗೊಳಿಸೊ 3
--------------
ಬಾಗೇಪಲ್ಲಿ ಶೇಷದಾಸರು
ರೋಗವನು ಪರಿಹರಿಸೊ ಗುರು ರಾಘವೇಂದ್ರಾ ಪ ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ ಅ.ಪ. ಅರಿಯದಾ ತರಳ ತನ್ನ ನಿಜಮತಿಯಿಂದ ದೂಷಿಸಲಿಲ್ಲ ಪರರ ಮಾತನು ಕೇಳಿ ದೂಷಿಸಿದನಲ್ಲದೇ 1 ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು ಇನ್ನುಂಟೆ ಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ 2 ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡುಬೆಂಡಾದಾತಂದೆವರದಗೋಪಾಲವಿಠ್ಠಲ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಲಕುಮಿವಲ್ಲಭ ಹರಿಯ ಮಂದಿರದಿಂದ ಬಕುಳೆ ಬಂದ ಪರಿಯ ನಗುತ ಸದ್ಯುಕುತಿಯಿಂದಲಿ ಪೇಳ್ದಳು ಪ. ಯಾರು ಬಲ್ಲರಿವನ ಸಂಸ್ಥಿತಿಯನ್ನು ನೀರೆ ನೀ ಪೇಳ್ವದನ ದಾರಿಯ ಪೇಳೆ ಜಾಣೆ 1 ಕ್ಷೀರಾಂಬುಧಿವಾಸನ ಸಕಲಗುಣ ವಾರುಧಿ ವರದೇಶನ ಸಾರಿ ಸಾರಿಗೆ ಸರ್ವ ಸುರಮುನೀಶ್ವರರೆಲ್ಲ ಸೇರಿ ಬಾಳುವರೀತನ 2 ಮಾತಿಗೆ ದೊರೆಯನಂತೆ ಮನೋಗತಿ ನೀತಿಯು ನಡೆಯದಂತೆ ಜಾತಿ ಗೋತ್ರ ಬಂಧು ಜನರಿಲ್ಲದವನಿಗಿನ್ಯಾತಕೆ ಪರಿಣಯವು 3 ಭೂತೇಂದ್ರಿಯ ಮನವು ಬಲಿಷ್ಠ ಮಹಾತತ್ವ ಹಂಕೃತಿಯು ಶ್ರೀ ತರುಣಿಯ ಗುಣ ತ್ರಯಮುಖ ತತ್ವ ಸಂಘಾತವೀತನಿರಲು 4 ಮನೆಯ ಕಟ್ಟಿದನೆಂಬೊರು ನಿಜವಾಗಿ ಪೇಳು 5 ಸಕಲ ಜಗನ್ನಿವಾಸ ಸಾಂಗೋಪಾಂಗ ಮುನಿಗಳ ಸರಿವನಂತೆ ತನುಮನದಲಿ ತನ್ನ ನೆನೆವರ ಕೃತ್ಯಗಳನು ತಾನೆ ಮಾಳ್ಪನಂತೆ 6 ಮನೆವಾರ್ತೆಗಳ ಬಿಟ್ಟು ಸಂಚರಿಸುವ ಮುನಿಗಳ ಸರಿವನಂತೆ ತನುಮನದಲಿ ತನ್ನ ನೆನೆವರ ಕೃತ್ಯಗಳನು ತಾನೆ ಮಾಳ್ಪನಂತೆ 7 ದಾಸರ ಪಾಲಿಪುದು ಎಂದೆಂದಿಗು ಶ್ರೀಶನ ಮಹಬಿರುದು ದೋಷದೂರನಾದರಿಂದ ಮೌನಿ ಮನೋವಾಸನಾಗಿಹ ನೆರದು 8 ಕುಲಹೀನನಾಗಿ ಕಲ್ಪಾಂತದೊಳಿರುವಗೆ ಲಲನೆಯ ನಿಪ್ಪುದೆಂತೆ 9 ಸುಧೆಯನು ತಾನೆ ತಂದ ಮುದವ ತೋರಿದ ಮುಕುಂದ 10 ಹೊಡದಾಡಿ ಬರುವನಂತೆ ಕೊಡುವದೆಂತೆ 11 ಮಗುವಿನ ಮಾತ ಕೇಳಿ ತಕ್ಷಣ ನರಮೃಗನಾಗಿ ಕೋಪತಾಳಿ ಬಗೆದು ಬಲಿಷ್ಠ ದೈತ್ಯನು ಸುಲಭದಿ ಬೇಗ ತೆಗೆದನು ಕರುಳನಂತೆ 12 ಸಿರಿಯನಾಳುವನಾದರೆ ದೈತ್ಯರ ಮುಂದೆ ತರಿವುದು ಸರಿಯೆ ನೀರೆ ಮರುಳು ಮಾತುಗಳಾಡಲ್ಯಾತಕೆ ಸುಮ್ಮನೆ ಥರವಲ್ಲ ಹಿಂದೆ ಸಾರೆ 13 ಕೃತ್ರಿಮ ದ್ವಿಜನಿವನು ಭೂಭಾರಕ ಕ್ಷತ್ರ ಸಮೂಹವನು ಶಸ್ತ್ರ ಪಿಡಿದು ಬುಡ ಕತ್ತ್ರಿಸಿ ಮಡುಗಳ ನೆತ್ರದಿ ರಚಿಸಿದನು 14 ದಾನವರನು ಗೆಲಲು ಚಪಲ ಬುದ್ಧಿ ವಾನರರನು ಒಲಿಸಿ ಪೇಳ್ವ ಹೀನವಾರ್ತೆಗಳೇನಿದು 15 ಧರೆಯ ಭಾರವನಿಳುಹಿ ಸಕಲ ಸುರವರ ಮುನಿಗಳ ಸಲಹಿ ತೆರವ ತೋರಿದ ಕೃಷ್ಣನು 16 ಜೈನರ ಸಭೆಯೊಳಗೆ ಮೈಯೊಳು ವಸ್ತ್ರಹೀನನಾಗಿರುವ ಬಗೆ ನಾನರಿಯೆನೆ ಬಹು ಮಾನ ಬಿಟ್ಟವನಿಗೆ ಏನೆಂದು ಮಗಳೀವನೆ 17 ಕೊಲುವನು ಖಡ್ಗದಲಿ ನಿಖಿಳ ಕುಲವನುದ್ಧರಿಸುವನು 18 ಏನೆಂದರು ಮನದಿ ನಿರ್ಣಯ ತೋರದೇನು ಮಾಡಲಿ ಕೆಳದಿ ಮಾನಿನಿ ಶಿರೋಮಣಿಯೆ 19 ದೋಷ ಲೇಶಹೀನನು ಸಕಲಗುಣ ಭೂಷಿತ ಶ್ರೀವರನು ಶೇಷ ಗಿರೀಶನೆನಲು ತನ್ನ ಮಗಳೀವ ಭಾಷೆಕೊಟ್ಟಳು ಧರಣಿ 20
--------------
ತುಪಾಕಿ ವೆಂಕಟರಮಣಾಚಾರ್ಯ
ಲಕುಮೀಶ ನಿನಗಾರತಿ ಭಕುತಿಯಿಂದೆತ್ತುವೆ ಸಕಲರ ಸುಖಕರ ಭಕ್ತರಿಗೊಲಿಯುವ ರುಕ್ಮಿಣಿಯರಸನೆ ಪ. ರಮಾಪತಿ ನಿನ್ನನು ನಮಿಸಿ ನುತಿಸುತ್ತಿರ್ಪೆನು ಕಮಲಾಂಘ್ರಿಯ ಭ್ರಮರವೆಂದಮಲನೆ ಕೈಪಿಡಿ ರಮಣನೆ ನುಡಿ ನುಡಿ1 ಇನಕುಲಮಂಡನ ವನರುಹಲೋಚನ ಜನಕಜಾ ಸುಪ್ರೇಮನೆ ಚಿನ್ಮಯರೂಪನೆ ಮನುಮುನಿ ಸೇವ್ಯನೆ 2 ಸುರನರ ಪೂಜಿತ ಸರಸಿಜ ಭವಪಿತ ಕರುಣಾಕರ ನರಕೇಸಂ ಮರೆಹೊಕ್ಕೆನು ಪೊರೆ ವರಶೇಷಗಿರಿದೊರೆ 3
--------------
ನಂಜನಗೂಡು ತಿರುಮಲಾಂಬಾ
ಲಕ್ಷುಮಿ ನಾರಾಯಣ ಸಂರಕ್ಷಿಸು ಎನ್ನನು ಬೇಗ ಪ. ಪಕ್ಷ್ಮ(?)ಗಳಕ್ಷಿಗಳನು ಕಾವಂದದೊಳಕ್ಷಯ ನಿಧಿಯ ಸ- ಮಕ್ಷದಿ ತೋರುತ ಅ.ಪ. ಅರ್ಭಕನಾ ಮೋರೆ ಕೇಳಿ ಕರ್ಬುರ ಚರ್ಮನ ಸೀಳಿ ಗರ್ಭೀತ ಕರುಳ ಮಹಾರ್ಭಟದಿಂ ತೆಗದುರ್ಬಿಗೆ ಬೀರಿದ ನಿರ್ಭಯಕಾರಿ 1 ಮಣಿಗರ್ಭ ಮೂರ್ತಿಗೆ ನೀ ಎಣೆಯಾಗಿಲ್ಲಿಗೆ ಬಂದು ಕುಣಿಯಲು ನಿಧಿ ಸಂದಣಿಗೊಳದಿರೆ ಲಕ್ಷಣಕೆ ಕೊರತೆಯಂ- ದೆಣಿಸರೆ ಸುಜನರು 2 ಶಕ್ರ ಚತುಷ್ಕರ ಸಿರಿಯು ಚಕ್ರಗದಾಬ್ಜರ ಪರಿಯು ವಕ್ರ ಮತಿಯ ರಿಪುಚಕ್ರವ ತರಿವ ಪರಾಕ್ರಮ ಕರುಣೋ- ಪಕ್ರಮ ತೋರುತ 3 ಅಂಬುಜನಾಭನೆ ನಿನ್ನ ನಂಬಿದ ಭಾವನೆಯೆನ್ನ ತುಂಬಿದ ಜಗದೊಳಗಿಂಬುಗೊಂಡಿಹ ನಿನಗೆಂಬುದೇನು ಪೀ- ತಾಂಬರ ಧಾರಿ4 ಎರಡೊಂದು ಋಣಬಂಧ ಪರಿಹರಿಸೊ ಗೋವಿಂದ ಸುರತರು ಕರುಣಾರಸವಿರಿಸು ಶೇಷಗಿರಿ- ವರ ತ್ವರೆಯಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷುಮೀನಾರಾಯಣ ಜಯಲಕ್ಷುಮೀ ನಾರಾಯಣ ಲಕ್ಷುಮೀನಾರಾಯಣ ಜಯ ಲಕ್ಷುಮೀ ನಾರಾಯಣ ಪ. ಪಾದ ದಾನವ ಗರ್ವಹರಣ ಗದಾದಿ ಧಾರಣ ಪರ್ವತಾರಿ ವರ ಪ್ರದ 1 ನಂಬಿಕೊಂಡಿಹೆ ನಿನ್ನ ದಿವ್ಯ ಪದಾಂಬುಜಗಳನು ಸರ್ವಕಾಲದಿ ಮನದೊಳಗಿಂಬುಗೊಳು ಕಮಲಾಂಬಕ 2 ಆರು ಸಂಖ್ಯೆಯ ಕಳ್ಳರೆನ್ನನು ಗಾರುಮಾಡುವರಾದರಿಂದತಿ ಧೀರ ನಿನ್ನ ಪದಾರವಿಂದಕೆ ದೂರುವೆನು ರಘುವೀರನೆ 3 ದುರ್ಮತಿಗಳಾದಸುರಹರಣಕೆ ಭರ್ಮಗರ್ಭನು ಬಂದು ಸ್ತುತಿಸಲು ಧರ್ಮಸಂಸ್ಥಾಪಿಸುತ ಬಹು ಶುಭಕರ್ಮ ತೋರುವ ಕರುಣಿಯೆ 4 ಸಪ್ತ ಋಷಿಗಳ ಕೂಡಿಕೊಂಡತಿ ಭಕ್ತಿಯಿಂದಲಿ ನಿನ್ನ ಭಜಿಸಿದ ಸತ್ಯವ್ರತನಿಗೆ ಸಕಲ ಶ್ರುತಿಗಳ ತತ್ವ ತಿಳಿಸಿದ ಮತ್ಸ್ಯನೆ 5 ಮುಳುಗಿಕೊಂಡಿಹ ಅಮಿತಗುರು ಮಂದರವ ಧರಿಸುತ ಅಮೃತರಸ ತೆಗೆದಿತ್ತನೆ 6 ದೈತ್ಯನ ತರಿದು ಬಿಸುಟು ವಿ- ಜನಿತ ಪವಿತ್ರ ಯಜ್ಞ ವರಾಹನೆ 7 ಘಡುಘಡಿಸಿ ಕಂಬದೊಳು ಬಂದ ಸಿಡಿಲಿನಂತಿಹ ನಖದಿ ದೈತ್ಯನ ಒಡಲ ಬಗೆದನು ಕೋಪದಿಂದ 8 ದಾನಕೊಂಡನಾನೆವನದಿ ದಾನವಾಹೃತ ಧರೆಯ ಕಸ್ಯಪಸೂನುಗಳಿಗೊಲಿದಿತ್ತನೆ 9 ದುಷ್ಟಭೂಭುಜಭಾರದಿಂದತಿ ಕಷ್ಟಪಡುತಿಹ ಧರೆಯ ಕರುಣಾ ನೃಪರ ಕಡಿದ 10 ನೀರಜಾವದನಾರವಿಂದ ಮಹಾ ರಸಾಸ್ವಾದನ ಪದ ಕಪಿವೀರನಿಗೆ ಸ್ವಾರಾಜ್ಯ ನೀಡಿದ ಮಾರುತಿಗೆ ದಯ ಮಾಡಿದ 11 ಬಾಲ ಲೀಲೆಯ ತೋರಿ ಗೋಪಕ ಬಾಲೆಯರ ಕೂಡಾಡಿದೆ ಖೂಳಕಂಸನ ಕೆಡಹಿ ದಾನವಮೂಲ ಕಿತ್ತು ಬಿಸಾಡಿದೆ 12 ಜೈನರನು ಮೋಹಿಸುವೆನೆಂದನುಮಾನವಿಲ್ಲದೆ ನಗ್ನನಾಗಿ ಹೀನ ಬುದ್ಧಿಯ ತಿಳಿಸಿ ತ್ರಿಪುರವ ಹಾನಿಗೈಸಿದ ಬೌದ್ಧನೆ 13 ಸುಧೆಯನು ಕರೆದು ಶಿರದಲಿ ತುಂಗ ವಿಷಯ ತರಂಗ ತಪ್ಪಿಸು ಅಂಗಭಂಗವ ಶಿಂಗನೆ 14 ಮಿಂಚಿನೊಡ್ಡಿದ ಮೇಷನಂದದಿ ಪಂಚವರ್ಣದ ತುರಗವೇರಿ ಸಂಚರಿಸಿ ಮ್ಲೇಂಛರನು ಕೊಲ್ಲಿಸಿ ಲಾಂಛಜೀವನ ವರದನೆ 15 ಮಂದಿರದಿ ನೀ ಬಂದು ರಕ್ಷಿಪೆ ಎಂದು ಸಕಲಾನಂದಗೊಂಡಿಹೆ ಇಂದಿರೇಶನೆ ಎಂದಿಗೂ ಈ ಅಂದದಿಂದಲಿನಿಂದ ಸಲಹು 16 ಕೇಶವಾದಿ ದ್ವಿದಶರೂಪವು ಮಾಸಗಳಿಧಿಷ್ಠಾನನಿಗೆ ಪ- ರೇಶ ಕಡೆಯಲಿರುವ ಕಾರ್ತಿಕವಾಸ ದಾಮೋದರ ಹರನೆ 17 ಬಳಲಿ ಕರ್ಮವ ಮಾಡಲಾರೆ ನಳಿನಜಾರ್ಜಿತ ನಿನ್ನ ಪಾದದ ನೆಳಲನಂಬಿ ಸುಮ್ಮನಿರುವೆ 18 ಅಖಿಳದೋಷ ನಿವಾರಣಾದ್ಭುತ ಸಕಲಸದ್ಗುಣಧಾರಣಾ ಕುಂಡಲ ಧಾರಿ ವೆಂಕಟಶಿಖರ ವರ ಸುಖಕಾರಣಾ 19
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷ್ಮೀದೇವಿ ನಂಬಿದೆ ನಿನ್ನ ಪಾದಾಂಬುಜಯುಗಳವ- ಶಂಬರಾರಿ ಜನನಿಪ ಬೆಂಬಿಡದೆನ್ನಹೃದಂಬುಜದೊಳಗವಲಂಬಿಸಿ- ಸಲಹುಮದಂಬೆ ಸನಾತನಿ ಅ.ಪ ಅಂಬುಜಮುಖಿ....ಚಿಕುರೆ ಶರ ದಂಬುಜದಳನಯನೆ ಬಿಂಬಫಲಾಧರೆ 1 ಕರ್ಣದೊಳೆಸೆವಸು ವರ್ಣವಿಡಿದ ಪೊಸರನ್ನದೊಡವೆಗಳ ರನ್ನೆ ಗುಣಾರ್ಣವೆ 2 ಮಾಲತಿಮಲ್ಲಿಗೆ ಮಾಲೆಯಿಂದೊಪ್ಪುವ ನೀಲಭುಜಗವೇಣಿ ಗೈದಲಮೇಲಮಂಗಾಮಣಿ 3
--------------
ಸರಗೂರು ವೆಂಕಟವರದಾರ್ಯರು
ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷದಾಯಕನೆ ಜಯ ಜಯ ಪ ಮೋಕ್ಷದಾಯಕನೆ ಮಧುಸೂದನ ಪ-ದ್ಮಾಕ್ಷಗಾರುತಿಯ ಬೆಳಗಿರೇ ಅ.ಪ. ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದಇಳೆಯ ದಾಡೆಯಿಂದ ನೆಗಹಿದಾ ||ಇಳೆಯ ದಾಡೆಯಿಂದ ನೆಗಹಿದ ನರಹರಿ ಚೆಲುವಗಾರುತಿಯ ಬೆಳಗಿರೆ ಶೋಭಾನೆ 1 ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮಶ್ರೀ ಕೃಷ್ಣಗಾರುತಿಯ ಬೆಳಗಿರೇ 2 ನಗ್ನನಾಗಿ ವ್ರತವಾ ವಿಘ್ನವ ಚರಿಸಿದಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ ಮೋಹನ್ನ ವಿಠ್ಠಲ ಸ-ರ್ವಜ್ಞಗಾರುತಿಯ ಬೆಳಗಿರೇ3
--------------
ಮೋಹನದಾಸರು
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ
ಲಾಲಿ ಗೋವಿಂದ ಲಾಲಿ ಕೌಸಲ್ಯಬಾಲ ಶ್ರೀರಾಮ ಲಾಲಿ ಪ ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ ಅ.ಪ. ಕನಕರತ್ನಗÀಳಲ್ಲಿ ಕಾಲ್ಗಳನೆ ಹೂಡಿನಾಲ್ಕು ವೇದಗಳನ್ನು ಸರಪಣಿಯ ಮಾಡಿಅನೇಕ ಭೂಮಂಡಲವ ಹಗೆಯನು ಮಾಡಿಶ್ರೀಕಾಂತನುಯ್ಯಾಲೆಯನು ವಿರಚಿಸಿದರು1 ಆಶ್ಚರ್ಯಜನಕವಾಗಿ ನಿರ್ಮಿಸಿದಪಚ್ಚೆಯ ತೊಟ್ಟಿಲಲ್ಲಿಅಚ್ಚುತಾನಂತನಿರಲು ತೂಗಿದರುಮತ್ಸ್ಯಾವತಾರ ಹರಿಯ 2 ಧರ್ಮಸ್ಥಾಪಕನು ಎಂದು ನಿರವಧಿಕನಿರ್ಮಲ ಚರಿತ್ರನೆಂದುಮರ್ಮ ಕರ್ಮಗಳ ಪಾಡಿ ತೂಗಿದರುಕೂರ್ಮಾವತಾರ ಹರಿಯ 3 ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದುಪರಮ ಹರುಷದಲಿ ಪಾಡಿ ತೂಗಿದರುವರಹಾವತಾರ ಹರಿಯ4 ಕರಿಕುಂಭಗಳ ಪೋಲುವ ಕುಚದಲ್ಲಿಹಾರ ಪದಕವು ಹೊಳೆಯಲುವರ ವರ್ಣಿನಿಯರು ಪಾಡಿ ತೂಗಿದರುನರಸಿಂಹಾವತಾರ ಹರಿಯ 5 ಭಾನುಮಣಿಯರೆಲ್ಲರು ಯದುವಂಶಸೋಮನಿವನೆಂದು ಪೊಗಳಿನೇಮದಿಂದಲಿ ಪಾಡಿ ತೂಗಿದರುವಾಮನಾವತಾರ ಹರಿಯ6 ಸಾಮಜವರದನೆಂದು ಅತುಳ ಭೃಗು ರಾಮಾವತಾರವೆಂದುಶ್ರೀಮದಾನಂದ ಹರಿಯ ತೂಗಿದರುಪ್ರೇಮಾತಿರೇಕದಿಂದ7 ಕಾಮನಿಗೆ ಕಾಮನೆಂದು ಸುರಸಾರ್ವಭೌಮ ಗುಣಧಾಮನೆಂದುವಾಮನೇತ್ರೆಯರು ಪಾಡಿ ತೂಗಿದರುರಾಮಾವತಾರ ಹರಿಯ8 ಸೃಷ್ಟಿಯ ಕರ್ತ ನೆಂದು ಜಗದೊಳಗೆಶಿಷ್ಟ ಸಂತುಷ್ಟನೆಂದುದೃಷ್ಟಾಂತರಹಿತನೆಂದು ತೂಗಿದರುಕೃಷ್ಣಾವತಾರ ಹರಿಯ 9 ವೃದ್ಧನಾರಿಯರೆಲ್ಲರು ಜಗದೊಳಗೆ ಪ್ರಸಿದ್ಧನಿವನೆಂದು ಪೊಗಳಿಬದ್ಧಾನುರಾಗದಿಂದ ತೂಗಿದರು ಬೌದ್ಧಾವತಾರ ಹರಿಯ 10 ಥಳಥಳಾತ್ಕಾರದಿಂದ ರಂಜಿಸುವಮಲಯಜಲೇಪದಿಂದಜಲಗಂಧಿಯರು ಪಾಡಿ ತೂಗಿದರುಕಲ್ಕ್ಯಾವತಾರ ಹರಿಯ 11 ಕನಕಮಯ ಖಚಿತವಾದ ತಲ್ಪದಲಿವನಜಭವ ಜನಕನಿರಲುವನಜನಾಭನ್ನ ಪಾಡಿ ತೂಗಿದರುವನಿತಾಮಣಿಯರೆಲ್ಲರು 12 ಪದ್ಮರಾಗವ ಪೋಲುವ ಹರಿಪಾದಪದ್ಮವನು ತಮ್ಮ ಹೃದಯಪದ್ಮದಲಿ ನಿಲಿಸಿ ಪಾಡಿ ತೂಗಿದರುಪದ್ಮಿನೀ ಭಾಮಿನಿಯರು 13 ಹಸ್ತಭೂಷಣ ಮೆರೆಯಲು ದಿವ್ಯತರಹಸ್ತಲಾಘವಗಳಿಂದಹಸ್ತಗಳ ಪಿಡಿದುಕೊಂಡು ತೂಗಿದರುಹಸ್ತಿನೀ ಭಾಮಿನಿಯರು14 ಮತ್ತಗಜಗಾಮಿನಿಯರು ದಿವ್ಯತರಚಿತ್ರವಸ್ತ್ರಗಳನುಟ್ಟುಚಿತ್ತಸಂತೋಷದಿಂದ ತೂಗಿದರುಚಿತ್ತಿನೀ ಭಾಮಿನಿಯರು 15 ಕಂಕಣಧ್ವನಿಗಳಿಂದ ರಂಜಿಸುವಕಿಂಕಿಣೀಸ್ವರಗಳಿಂದಪಂಕಜಾಕ್ಷಿಯರು ಪಾಡಿ ತೂಗಿದರುಶಂಕಿನೀ ಭಾಮಿನಿಯರು 16 ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವಮಕರಿಕಾಪತ್ರ ಬರೆದುಲಿಕುಚಸ್ತನಿಯರು ಪಾಡಿ ತೂಗಿದರುಅಕಳಂಕಚರಿತ ಹರಿಯ17 ಆನಂದಸÀದನದೊಳಗೆ ಗೋಪಿಯರುಆ ನಂದಸುತನ ಕಂಡುಆನಂದ ಭರಿತರಾಗಿ ತೂಗಿದರುಆನಂದ ಭೈರವಿಯಿಂದ 19 ದೇವಾಧಿದೇವನೆಂದು ಈ ಶಿಶುವುಭಾವನಾತೀತನೆಂದುದೇವಗಂಧರ್ವರ್ಪಾಡಿ ತೂಗಿದರುದೇವ ಗಾಂಧಾರದಿಂದ 20 ನೀಲ ಕರುಣಾಲವಾಲ ಶ್ರೀಕೃಷ್ಣ ಜೋ ಜೋಲೀಲಾವತಾರ ಜೋ ಜೋ ಪರಮಾತ್ಮಬಾಲಗೋಪಾಲ ಜೋ ಜೋ 21 ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣಇಂದು ರವಿ ನೇತ್ರ ಜೋ ಜೋಇಂದುಕುಲ ಪುತ್ರ ಜೋ ಜೋ ಪರಮಾತ್ಮಇಂದಿರಾರಮಣ ಜೋ ಜೋ 22 ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ 23
--------------
ಶ್ರೀಪಾದರಾಜರು
ಲಾಲಿ ಲಾಲಿ ಹನುಮ ಲಾಲಿ ಬಲಭೀಮ ಲಾಲಿ ಲಾಲಿ ಮಧ್ವರಾಯ ಗುರುವರ್ಯ ಪ ತ್ರೇತೆಯಲಿ ರಘುಪತಿಯ ಸೇವೆ ಸಲಿಸಿದವನೆ ಸೀತೆಯನು ಕಂಡು ರಕ್ಕಸರ ಗೆಲಿದವನೆ ದೂತರಾವಣಗೆ ನೀತಿಗಳ ಕಲಿಸಿದವನೆ ಭೀತಿಯಿಲ್ಲದೆ ಲಂಕಾಪುರವ ದಹಿಸಿದವನೆ 1 ದ್ವಾಪರದಿ ಶ್ರೀ ಕೃಷ್ಣನನು ಪೂಜಿಸಿದವನೆ ಪಾಪಿ ದುರ್ಯೋಧನಾದಿಗಳ ಗೆಲಿದವನೆ ಕೋಪದಲಿ ಜರಾಸಂಧನನು ಸೀಳಿದವನೆ ಶ್ರೀಪತಿಯ ಸೇವೆಯಲಿ ನಿಸ್ಸೀಮನೆನಿಸಿದವನೆ2 ಮಧ್ವಮತದವರನುದ್ಧರಿಸಿ ಮೆರೆದವನೆ ಶ್ರದ್ಧೆಯಿಂದಲಿ ಹರಿಯ ಭಜಿಪ ಗುರುವರನೆ ಮುದ್ದು ಕಮಲನಾಭ ವಿಠ್ಠಲನೊಲಿಸಿದವನೆ ಶುದ್ಧ ಮೂರುತಿ ಉಡುಪಿ ಕೃಷ್ಣನರ್ಚಿಸಿದವನೆ3
--------------
ನಿಡಗುರುಕಿ ಜೀವೂಬಾಯಿ