ಒಟ್ಟು 2274 ಕಡೆಗಳಲ್ಲಿ , 101 ದಾಸರು , 1388 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತೆ ಸರಸ್ವತಿ ಮಂಜುಳ ಮೂರುತಿಚೇತನಾತ್ಮಕಿಭಾರತಿಪ.ಪ್ರೀತಿಯಿಂದೀವುದು ಪೀತಾಂಬರಧರನಸಾತಿಶಯದ ಭಕುತಿ ಅ.ಪ.ಗುರುಹಿರಿಯರ ಕಂಡು ಬಿರುನುಡಿ ನುಡಿಸದೆಕರುಣಿಸೆನಗೆಸನ್ಮತಿಪರಮಪಾವನ ವೈಷ್ಣವರ ಪಾದಾಂಬುಜ ಮಧು-ಕರದಂತಿರಲಿ ಮದ್ರತಿ 1ಶ್ರೀಶನಮೂರ್ತಿತಾರೇಶನಂದದಿ ಹೃದಯಾ-ಕಾಶದೊಳು ಕಾಣುತಿದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತಗೈಸಮ್ಮ ಹರಿಯ ಸ್ತುತಿ 2ಮನುಜರ ರೂಪದಿ ದನುಜರು ಭೂಮಿಯೊಳ್ಜನಿಸಿದರ್ಜಲಜನೇತ್ರಿಅನಘಲಕ್ಷುಮಿನಾರಾಯಣನ ದಾಸರಿಗೆಲ್ಲಜನನಿಯೆ ನೀನೆಗತಿ3ಭಾರತಿದೇವಿಯ ಸ್ತುತಿ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು
ಮೀಸಲ ಗುಣದೆಯರನೆಲ್ಲ ಮೋಸಗೈಸಿ ಕೊಳಲನೂದಿರಾಸಕ್ರೀಡೆ ಮಾಡಿದಾಭಾಸಬಹಳಯ್ಯಾ ಪ.ನೀನೆ ಎಂದವರೆದೊಡ್ಡ ಕಾನನದಿ ಬಿಟ್ಟು ಒಬ್ಬಮಾನಿನಿಯಜರಿದುನಡೆದಿ ಇನ್ನೇನು ಉಚಿತವಯ್ಯ ಕೃಷ್ಣ1ಎಳೆಯಬಳ್ಳಿ ಗಿಳಿಪಕ್ಷಿನಳಿನನಾಭನ ಕಂಡಿರೇನನಳಿನಮುಖಿಯರೆಲ್ಲ ತಿರುಗಿ ಬಳಲಿ ನಿಂತಾರೊ ಕೃಷ್ಣ2ಸೂಸು ಮಲ್ಲಿಗೆ ಸಂಪಿಗೆ ಜಾಜಿ ಹಾಸಿಕೆಯ ಮಾಡಿ ಅವಳಸೋಸುಪೂರೈಸುವ ಬಗಿಯು ಶ್ರೀಶ ರಮಸಿದಿಯೋ ಕೃಷ್ಣ3ಚಂದ್ರವದನೆಗೆ ಅಂಗದಲ್ಲಿ ಗಂಧ ಕಸ್ತೂರಿ ಕುಂಕುಮವಿಟ್ಟುಮಂದಾರಮಲ್ಲಿಗೆಯ ಮುಡಿಸಿ ಆನಂದ ಬಡಿಸಿದಿಯೊ ಕೃಷ್ಣ4ಇಂದಿರೇಶನ ಕಾಣದಲೆ ನೊಂದವರ ಮ್ಯಾಲೆ ಪರಿಮಳತಂದು ಹಾಕಿದ ವಾಯು ಪಾಪಿ ಎಂದು ಬಯ್ಯುತ ಕೃಷ್ಣ 5ತಂದು ಕನ್ನಡಿ ನಿಲ್ಲಿಸಿ ಒಳಗೆ ಚಂದ್ರನ್ಹೊಗಿಸಿಮ್ಯಾಲೆಕಲ್ಲುತಂದು ಹಾಕಿ ಅವನ ನಾವು ಕೊಂದರೆ ಪಾಪಿಲ್ಲ ಎನುತ6ಬೆಂದವರ ಮ್ಯಾಲೆ ಪರಿಮಳ ಚಂದ್ರನುಡಿಸಿದ ಕಂದನಿವನುಹಿಂದಿನ ವೈರವೇ ಸವತಿ ಇಂದಿನವನೆಂದು ಭವಿತ 7ಮಲ್ಲಿಗೆ ಸಂಪಿಗೆ ಜಾಜಿ ಚಲ್ವ ತುಳಸಿ ಯಮುನಾದೇವಿಫುಲ್ಲನಾಭನ ಕಂಡಿರೇನ ನಲ್ಲೆಯರು ಹಲಬುತ ಕೃಷ್ಣ 8ನೋಡುನೋಡುಕೆಳದಿ ಇಲ್ಲೆ ಜೋಡು ಹೆಜ್ಜಿ ತೋರುತಾವಮಾಡಿ ಕಪಟದಿ ರಂಗನ ಒಬ್ಬಳು ಓಡಿಸಿ ಒಯ್ದಾಳೆ ಎನುv 9ನಗಧರಒಬ್ಬ ಬಾಲೆಯಳ ಜಿಗಿದು ಎತ್ತಿದ ಹೆಜ್ಜೆ ನೋಡಿಸಿಗಲಿ ಅವಳು ರಂಗನ ಬೆರೆದ ಬಗಿಯ ತೋರೆನುತ ಕೃಷ್ಣ 10ಹಿಂಡುನಾರಿಯರೆಲ್ಲ ಕೂಡಿಕೊಂಡು ಅವಳ ಮಂಡೆಕುಕ್ಕಿಪುಂಡರಿಕಾಕ್ಷನ ತೋರೆದಿಂಡೆಮನುಜಳೆ ಎನುತ11ಇಷ್ಟು ನಾರಿಯರೊಳು ರಾಧೆ ಶ್ರೇಷ್ಠಳೆಂದು ಗರುವಿಸ್ಯಾಳುಅಷ್ಟರೊಳಗೆ ಅವಳ ನೀನು ಬಿಟ್ಟು ಪೋಗಿದ್ಯೊ ಕೃಷ್ಣ 12ಗಲ್ಲಕುಕ್ಕಿ ಅಂಜಿ ಅವಳು ಎಲ್ಲ ನಾರಿಯರಿಗೆ ಎರಗಿಫುಲ್ಲನಾಭಮಾಡಿದಪಾಟನಎಲ್ಲಿ ಉಸಿರಲೆ ಎನುತ13ವಿಧಿಗೆ ದಯವಿಲ್ಲ ನಮ್ಮ ಚದುರ ರಂಗನ ಅಗಲಿಸಿತುಮದನಬಾಣ ನೆಟ್ಟಿತೆಂದು ಸುದತೆಯರು ಹಲಬುತ ಕೃಷ್ಣ14ಶ್ರೀಶ ರಾಮೇಶನ ಯಾವ ದೇಶದಲ್ಲಿ ಹುಡುಕಲೆಂದುಕ್ಲೇಶಬಡಲು ಕೆಲದೆಯರೆಲ್ಲ ಸರ್ವೇಶ ಬಂದೆಂದ ಪಾರ್ಥ15
--------------
ಗಲಗಲಿಅವ್ವನವರು
ಮುಕ್ತನಾಗುವೆನಿತ್ಯಮುಕ್ತನಾಗುವೆಭಕ್ತಿಯಿಟ್ಟು ಗುರುವಿನಲ್ಲಿ ಭಜಿಸಿ ಬಗಳೆ ನೀನೆಯಾಗಿಪಮುರುಕಿ ಮೂಳಿಯರ ಜೊಲ್ಲು ಮಧುವೆಂದು ಸವಿದಂತೆಹಿರಿಯರಂಘ್ರಿ ತೀರ್ಥವನು ಕುಡಿದು ತೃಪ್ತನಾಗೋ ನೀನು1ಏಣಲೋಚನೆಯನ್ನು ನೀನು ಬಿಡದೆ ಬಿಡದೆ ನೋಡಿದಂತೆಜ್ಞಾನಿಗಳ ಮೂರ್ತಿಯನ್ನು ಘಳಿಗೆ ಘಳಿಗೆ ನೀನು ನೋಡೋ2ಕಾಮ ಕೇಳಿಗಾಗಿ ಹಲ್ಲ ಕಿರಿದು ಕಾಲಿಗೆರಗಿದಂತೆಪಾಮರೋದ್ಧಾರನಾದ ಗುರುಪದಕ್ಕೆ ಶರಣು ಹೋಗೋ3ನಾರಿಯಲ್ಲಿ ಲೋಲನಾಗಿ ನೀಚಮಾತು ಕೇಳಿದಂತೆವೀರ ಸಾಧು ತತ್ವವನ್ನು ವಿವರವಾಗಿ ನೀನು ತಿಳಿಯೋ4ಚದುರೆ ಮೇಲೆ ನಿನ್ನ ಚಿತ್ತ ಚದುರದಂತೆ ಇದ್ದ ಹಾಗೆಚಿದಾನಂದ ಬಗಳೆಯಲ್ಲಿ ನೆಲಸೆ ಚೇತನಾತ್ಮ ಶುದ್ಧನಹೆಯೋ5
--------------
ಚಿದಾನಂದ ಅವಧೂತರು
ಮುಖ್ಯಪ್ರಾಣಾ ಎನ್ನ ಗುರುವೇ ಪರಕ್ಕಸಾಂತಕ ಶ್ರೀ ರಾಮನ ನಿಜದಾಸ ಅ.ಪತಂದೆ ನೀನೆ ಎನಗೆ ತಾಯಿ ನೀನೆ | ಬಂಧು ನೀನೆಎನಗೆ ಬಳಗ ನೀನೇ |ಎಂದೆಂದಿಗೂ ನಮ್ಮೆಲ್ಲರ ರಕ್ಷಪನು ನೀನೇ 1ತಾತನೀನೇ ಎನಗೆಕರ್ತನೀನೇ |ವಿತ್ತನೀನೆಎನಗೆವಿಭವನೀನೆ |ಸತ್ಯ ನೀನೇ ಸದಾಚಾರವು ನೀನೇ 2ಸುಖವು ನೀನೇ ಎನಗೆ ಸುಲಭ ನೀನೇ |ಏಕಾಂತ ಶ್ರೀಪುರಂದರವಿಠಲನ ಭಕುತ ನಿಜವು ನೀನೇ3
--------------
ಪುರಂದರದಾಸರು
ಮುಟ್ಟು ಚಟ್ಟೆಂದು ನಗುವಯ್ಯನಿನ್ನ ತಿಳಿಯಯ್ಯಮುಟ್ಟು ಚಟ್ಟೆಂಬುದು ನಗುವಯ್ಯಮುಟ್ಟಿದು ಆದುದು ನಿನ್ನಿಂದಲೆಮುಟ್ಟಿಗೆ ಸಾಕ್ಷಿಯು ನೀಪರವಸ್ತುಪತಿಂಗಳು ತಿಂಗಳು ರಕ್ತಕಲಕು ಘಟ್ಟಾಗಿ ಬಲಿತುಇಂಗಾ ಇಂಗಡದ ವಯವ ಜಿಗಿತುಅಂಗಾಯಿತು ತೆರದಅಂಗವ ಮುಟ್ಟಿರಿ ಮುಟ್ಟಿರಿ ಎಂದುಮಂಗನ ತೆರದಲಿ ಕುಣಿವುದು ಮುಟ್ಟು1ಮೃಗಜಲದಂತೆಮಾಯೆಮುಟ್ಟುಆದುದು ಯಥೇಷ್ಟಬಗೆಬಗೆ ರೂಪಳವಟ್ಟುತೋರಿದವದುರಿಟ್ಟುನಗಸಾಗರನದಿ ನರಸುರ ಕ್ರಿಮಿಪಶುನಗಧರಹರವಿಧಿ ಲೋಕವೆ ಮುಟ್ಟು2ಮುಟ್ಟು ಭಟ್ಟರು ಹೇಳುವಂತಿಲ್ಲಬೆಳಗಿದುದು ಎಲ್ಲಅಷ್ಟಾಗಿ ಕಳೆಥಳಿಥಳಿಪುದೆಲ್ಲತನ್ನರಿದವ ಬಲ್ಲಶಿಷ್ಟ ಚಿದಾನಂದ ನೀನೆಂದು ಕಾಣಲುಮುಟ್ಟಿಗೆ ಜಾಗವಿಲ್ಲ ನೀಚರ ವಸ್ತು ನಿಜ ಬ್ರಹ್ಮ3
--------------
ಚಿದಾನಂದ ಅವಧೂತರು
ಮುರಹರನಗಧರನೀನೆಗತಿಧರಣಿ ಲಕ್ಷ್ಮೀಕಾಂತ ನೀನೆಗತಿಪಶಕಟ ಮರ್ದನ ಶರಣಾಗತ ವತ್ಸಲಮಕರಕುಂಡಲಧರ ನೀನೆಗತಿ||ಅಕಳಂಕ ಚರಿತನೆ ಆದಿನಾರಾಯಣರುಕುಮಿಣಿಪತಿ ಕೃಷ್ಣ ನೀನೆಗತಿ1ಮನೆಮನೆಗಳ ಪೊಕ್ಕು ಕೆನೆ ಹಾಲು ಬೆಣ್ಣೆಯದಿನ ದಿನ ಮೆದ್ದಹರಿನೀನೆಗತಿ||ಅನುದಿನಭಕುತರ ಬಿಡದೆ ಕಾಯುವಘನಮಹಿಮನೆ ಕೃಷ್ಣ ನೀನೆಗತಿ2ಪನ್ನಗಶಯನ ಸುಪರ್ಣಗಮನನೇಪೂರ್ಣ ಚರಿತಹರಿನೀನೆಗತಿ||ಹೊನ್ನ ಹೊಳೆಯಲಿಹಪುರಂದರವಿಠಲಚೆನ್ನ ಲಕ್ಷ್ಮೀಕಾಂತ ನೀನೆಗತಿ3
--------------
ಪುರಂದರದಾಸರು
ರÀಕ್ಷಿಸು ರಕ್ಷಿಸು ದೇವವಿಶ್ವಕುಕ್ಷನೆ ಭಕ್ತ ಸಂಜೀವಪಕ್ಷಿಗಮನ ಕಾಯೊದಾತಭೃತ್ಯಪಕ್ಷನೆ ಶ್ರೀ ಪ್ರಾಣನಾಥ ಪ.ಜಾರಿದ ಶ್ರ್ರುತಿಯ ತಂದವನೆ ಉದಾರಿವಿಕ್ರಮತಮಹರನೆವಾರಿಧಿಯೊಳುದಿಸಿದನೆ ಮಂದರಗಿರಿಯನೆತ್ತಿದನೆ1ರಂಭೆಗೆ ತತ್ವ ಹೇಳಿದನೆ ಹೇಮಾಂಬಕನ ಚುಚ್ಚಿದವನೆಕಂಬವ ಸೀಳಿ ನಿಂದವನೆ ಆದಂಭೋಳಿವೈರಿಬಾಲಪನೆ2ಪದ್ಮಜಾಂಡವನೊಡೆದವನೆಬಲಿಸದ್ಮವ ಬಿಡದೆ ಕಾಯ್ದವನೆಛದ್ಮಿ ಪಾರ್ಥಿವರ ಸಂಹರನೆಕರಪದ್ಮದಿ ಪರಶು ಪಿಡಿದವನÉ 3ಅಡವಿ ಪ್ರಾಣಿಗಳನಾಳುವನೆ ಹತ್ತುಹೆಡಕಿನವನ ತಲೆಕಡಿದವನೆಮಡದಿಗೆ ಗಿಡವನಿತ್ತವನೆ ಭೀಮಮಡದಿಯ ಲಜ್ಜೆ ಕಾಯ್ದವನೆ 4ಮಿಥ್ಯದಹೊಲಬುಹೇಳಿದನೆಖಳದೈತ್ಯರ ವಶವ ಮಾಡಿದನೆಮತ್ತಕಲಿವಪುಹರನೆ ನನ್ನಕರ್ತಪ್ರಸನ್ವೆಂಕಟ ನೀನೆ5
--------------
ಪ್ರಸನ್ನವೆಂಕಟದಾಸರು
ರಕ್ಷಿ ರಕ್ಷಿ ರಕ್ಷಿಸಯ್ಯ ಚಿದಾನಂದ ಸ್ವಾಮಿರಕ್ಷ ಶಿಕ್ಷ ಕರ್ತನಾದ ದಯದಿಂದಪದಾಸ ನಿಜವಲ್ಲವೆನೆ ಸಾಕ್ಷಿ ಬೇಕೆ ನಿನ್ನದಾಸರ ದಾಸನಾಗಲಿಕೆಏಸುಕಾಲ ಪರೀಕ್ಷೆ ನಿನ್ನ ನೋಡಲಿಕೆ ಎನ್ನಲೇಸುಹೊಲಬುನಿನ್ನನು ಬಿಡದು ಜೋಕೆ1ನಿನ್ನ ನೋಡೆ ನಾನು ಬೇರೆಯಲ್ಲವಯ್ಯಇದು ಮಾಡಿ ಬಂದ ಸುಕೃತವೇಯೆಲ್ಲನಿನ್ನವನ ನೀನೆ ಕೈವಿಡಿದೆಲ್ಲ ಕೇಳುನಿನ್ನೊಳಗೆನ್ನೊಳಗೆ ಭೇದವೇನೂ ಇಲ್ಲ2ಖೂನವಿಲ್ಲದ ಖೂನದಿಂದ ನಿನ್ನ ಕಂಡೆ ನಾಖೂನವಿದ್ದೂ ವಿಲ್ಲದಂತೆ ಬಲಗೊಂಡೆಧ್ಯಾನ ಮೌನವೆಲ್ಲವ ನಾ ಕಳಕೊಂಡೆಧ್ಯಾನವೆಂತು ನಿನ್ನನೆ ಭಜನೆಗೊಂಡೆ3ನಿನ್ನ ಪಾದವ ನಂಬಿಯೆ ಸಂತೋಷನಾದೆ ನಾನಿನ್ನ ಪಾಡಿ ಪೊಗಳಿ ವಿಶೇಷನಾದೆನಿನ್ನ ಲೀಲೆ ನೆನೆದು ನಾನೀಶನಾದೆನಿನ್ನ ನೋಡಿಯೆ ಕಂಡು ಜಗದೀಶನಾದೆ4ಕೋಟಿ ಶತಶಶಿ ಪ್ರಭೆಯ ತಾಳ್ದ ಅಂದವನ್ನುಪಾಟಿಸಿ ಪೊಗಳಬಲ್ಲೆನೆ ಮುಂದಾನೀಟೆನಿಪದೇವಗುರುಚಿದಾನಂದ ನಿನ್ನನೀಟಿನಂತೆ ನಿಲ್ಲಿಸು ಕರುಣದಿಂದ5
--------------
ಚಿದಾನಂದ ಅವಧೂತರು
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
--------------
ಪುರಂದರದಾಸರು
ರಾಘವೇಂದ್ರಾ ನೀನೆ ಪಾಲಿಸೊಶ್ರಿತಜನ- ಪಾಲಾxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಯೋಗಿಜನಾ - ಲೋಲನೆ ಪಜಾಗುಮಾಡದೆನಿನ್ನಾನು- ರಾಗದಿ ಮನಸಾರಬಾಗಿ ನಮಿಸಿ ಬೇಡಿಕೊಂಬೆ -ಯೋಗಿಕುಲ ಶಿರೋಮಣಿಯೇ ಅ.ಪಅನುಭವ ಮಾಡಿದೆನು |ಘನಮಹಿಮನೆ ನಿನ್ನಘನಸುಖವಿತ್ತ್ತು ಎನ್ನ| ಮನ ಪೂರ್ತಿ ಭಜಿಸುವಂತೆಅನುಪಮ ಙ್ಞÕನ - ಭಕ್ತಿ | ಜನುಮ ಜನುಮದಿ ಇತ್ತು 1ಹೇಸಿ - ಸಂಸಾರದಲ್ಲಿ | ಮೋಸಗೊಂಡು ಅದರ ಸುಖಲೇಶಗಾಣದೆ ಬಹು | ಕ್ಲೇಶಬಡುವೆನಯ್ಯಾ ನಿತ್ಯಾಈಶ ! ಸಂಸಾರ ಮಹ | ಪಾಶಬಿಡಿಸಿ ತವೋ -ಪಾಸನದಲ್ಲಿ ಮನ | ಲೇಸು ಇತ್ತು ನಿತ್ಯಾದಲ್ಲಿ 2ದೃಷ್ಟಿ ಇತ್ತು ಗುರುಜಗನ್ನಾಥ | ವಿಠಲನ್ನ ತೊರಿಸಯ್ಯಾ 3
--------------
ಗುರುಜಗನ್ನಾಥದಾಸರು
ರಾಯನ ಭಯವಿಲ್ಲ ಮನಕೆ ಪಶ್ರೇಯಸ್ಸು ಸೌಖ್ಯವ ನೀಡೋದು ಜನಕೆ ಅ.ಪನೀನೆ ನೀಡುವಿ ಎಂಬ ಙ್ಞÕನ ದಿಂ -ದನು ಸಂಧಾನ ಮಾಡುತಲಿಪ್ಪನರಗೆ 1ಸತಿಸುತ ಹಿತಜನ ವಿತತವೃತ್ತಿಕ್ಷೇತ್ರವ್ರತತೀಜ ಯುಗಕೀವ ಮತಿಯುಳ್ಳ ನರಗೆ 2ಪಾತಕಕರ್ಮವ ಮಾಡಲೇನುಯಾತನಮಯಭವಪಾಥೋನಿಧಿಯೋಳನೀತಗುರುಜಗನ್ನಾಥವಿಠಲಗತಿಪ್ರೀತನಾದಗುರುದೂತನಾದವಗೆ3
--------------
ಗುರುಜಗನ್ನಾಥದಾಸರು
ರೂಪತೋರೆನಗೆ ಗುರುವೆರೂಪತೋರೆನಗೆರೂಪನಾಮಕೆ ವಿರಹಿತನಾದ ದೇವನೆರೂಪತೋರೆನಗೆಪಬ್ರಹ್ಮಾಂಡ ತಂಡಗಳೊಳು ಹೊರಗಾವರಸಿಕೊಂಡುಬ್ರಹ್ಮಾಂಡ ಖಂಡಗಳ ಬೆಳಗುವೆ ವಿರೂಪವೆಡೆಗೊಂಡು1ನಿನ್ನ ತೇಜಸ್ಸಿನಿಂದ ತೋರ್ಪುದು ತೋರ್ಪ ಜಗವೆಲ್ಲನಿನ್ನನುಳಿದೇ ಬೇರೆ ತೋರೆನಲವಕಾಶವ ಇಲ್ಲ2ನಾದ ಬಿಂದುಕಳೆ ನೀನೆಂಬೆನೆ ದೃಶ್ಯವು ಇವು ಎಲ್ಲನಾದ ಬಿಂದುಕಳೆ ಸಾಧಕಗಳು ವಸ್ತು ನಿಜವಲ್ಲ3ಬೋಧಾನಂದ ತುರೀಯಗಳೆಂಬೆನೆ ಆ ಅವಸ್ಥೆಗಳೆಲ್ಲಬೋಧಾನಂದ ತುರೀಯದಿ ನೋಡಲು ಎದುರಿದ್ದವು ಎಲ್ಲ4ನಿರ್ವಿಕಾರ ನಿರ್ಗುಣ ನಿರವಯನಿರಂಜನಸ್ಪೂರ್ತಿ ಪರಮಗುರು ಪರಬ್ರಹ್ಮ ಚಿದಾನಂದಮೂರ್ತಿ5
--------------
ಚಿದಾನಂದ ಅವಧೂತರು
ಲಕ್ಷ್ಮೀಕಾಂತ ಬಾರೋಶುಭಲಕ್ಷಣವಂತ ಬಾರೋಪಪಕ್ಷಿವಾಹನಾ ಬಾರೋ ಪಾವನಮೂರ್ತಿಬಾರೋಅ.ಪಆದಿಮೂಲವಿಗ್ರಹ ವಿನೋದಿ ನೀನೆ ಬಾರೋಸಾಧುಸಜ್ಜನ ಸತ್ಯಯೋನಿ - ದಾನಿ ನೀನೆ ಬಾರೋ 1ಗಾಡಿಕಾರಕೃಷ್ಣ ನಿನ್ನ ಬೇಡಿಕೊಂಬೆ ಬಾರೋರೂಢಿಮಾತನಾಡಿ ಸರ್ವ ರೂಢಿಗೊಡೆಯ ಬಾರೋ2ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆನು ಬಾರೋಪನ್ನಂಗ ಶಯನ ಸಿರಿ-ಪುರಂದರ ವಿಠಲ ಬಾರೋ 3
--------------
ಪುರಂದರದಾಸರು
ಲಿಂಗದೇಹವೆಂಬ ಪವಳಿ ಶೃಂಗರಿಸಿಅಂಗವ ನಿನಗೆ ಕಾಣಿಕೆಯ ನೀಡುವೆ ||ಮಂಗಳಮೂರುತಿಅಂಗನೆಸಹಿತ- ಭುಜಂಗಶಯನ ಎನ್ನ ಕಂಗಳುತ್ವವವೀಯೋ 2ಕಡಗ ಕಿರುಗೆಜ್ಜೆ ಪೆಂಡೆಗಳಿಂದಲೊಪ್ಪುವಉಡುಗೆ ಪೀತಾಂಬರತರಳಕೌಸ್ತುಭ||ಪಿಡಿದ ಶಂಖ ಚಕ್ರ ಕರ್ಣಕುಂಡಲದಿಂದಕಡಲಶಯನ ಎನ್ನ ಹೃದಯದೊಳಗೆ ನಿಲ್ಲೊ 3ಒಡೆಯ ನೀನೆನಗೆ ಅನಾದಿ ಕಾಲದಿಂದಬಡವನು ನಾನಿನ್ನ ದಾಸನಯ್ಯ ||ಕಡುಕರುಣದಿಂದ ದಾಸತ್ವ ನೀಡು ಗ-ರುಡಗಮನನೆ ವೆಂಕಟೇಶ ಎನ್ನ ಮನಕೆ 4ಬರಿಮನೆಯಲ್ಲವು ಪರಿವಾರವು ಉಂಟುಪರಮಪುರುಷ ನಿನ್ನ ರೂಪಗಳುಂಟು ||ಸಿರಿದೇವಿ ಸಹಿತದಿಪುರಂದರವಿಠಲನೆಕರುಣದಿಂದಲಿ ಮನ್ಮಂದಿರದೊಳಗೆ 5
--------------
ಪುರಂದರದಾಸರು