ಒಟ್ಟು 150 ಕಡೆಗಳಲ್ಲಿ , 44 ದಾಸರು , 128 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನಸಿಟ್ಟು ಭ್ರಮಿಸುವರೇನೆ -ಘನ - |ಗುಣವಂತನೇನವ ಜಾಣೆ ? ಪಅನುದಿನ ಗೊಲ್ಲಪಳ್ಳಿಗೆ ಕಳ್ಳನೆನಿಸಿದ |ದನಗಾಹಿ ನಿನಗೇನ ಮರುಳು ಮಾಡಿದನೆ ? ಅ.ಪಜಲವಾಸಿ ಮುಖವೊಳಸೆಳೆವ - ಇವ |ನೆಲವ ಕೆದರಿ ಕಂಬದಿ ಬಾಯ್ ತೆಗೆವ ||ಇಳೆಯನಳೆದ ಕೊರಳಗೊಯ್ಕ ವನವಾಸಿಯ |ಕೊಳಲಪಿಡಿದ ಕುರುಬಲವನಳಿದಾತಗೆ 1ಅಂದು ಮಧುರೆಯಲಿ ಪುಟ್ಟಿದನ - ಆ |ನಂದಗೋಪ - ಯಶೋದೆ ಕೋಮಲನ ||ಕಂದನಾಗಿ ಮೊಲೆಯುಂಡು ಪೂತನಿಯನು |ಕೊಂದು ಕಂಸರಪುರ ತಂದೆಗಿತ್ತವಗೆ2ಬತ್ತಲಿರುವ ಶ್ರೀನಿರ್ವಾಣಿ - ತೇಜಿ - |ಹತ್ತಿ ಪಿಡಿದ ಖಡ್ಗಪಾಣಿ ||ಮತ್ತರನೆಲ್ಲರ ಮರ್ದಿಸಿ ಬಲವಂತ |ಪಾರ್ಥಗೊಲಿದ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
--------------
ಗೋವಿಂದದಾಸ
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು
ರಂಗರಾಯರ ಮುಂದೆಇವರಕೊಂಗಬುದ್ಧಿಕೋಲಹೊಯ್ಸಿಹಂಗಿನ ಮುಯ್ಯ ಕಳೆದೆವಇವರ ತಂಗಿಯರಮಾರಿಭಂಗಿಸಿ ನಾವುಪ.ಅಪ್ಪ ಅರಸು ಆಗೊ ಇವರತಪ್ಪಿನ ಮಾತಿಲೆ ಸೋಲಿಸಿನಿಮ್ಮಪ್ಪ ನಿಮ್ಮರಸನೆಂಬೊಚಪ್ಪಾಳೆಯನಿಕ್ಕಿಸಿ ನಾವು 1ಒಡ ಹುಟ್ಟಿದಣ್ಣನ ದ್ರೌಪತಿಒಡಗೂಡುತಲಿ ತಾ ಇಡುವರೆಈ ಆಣೆ ನಮಗೆನುಡಿದ ಆ ನುಡಿಗೆ ನಾಚಿಸಿ ಇವರನು 2ಹುಟ್ಟು ಹೊಂದೊದೆಂಬೋದಿವರಬಿಟ್ಟು ಕಡೆಗೆ ಮಾಡಿಸಿನಾವುಶ್ರೀ ಕೃಷ್ಣನಂಫ್ರಿ ಕಮಲವನ್ನುಎಷ್ಟು ದಯದಿ ತೋರಿಸಿ 3ಅಷ್ಟ ಮದದ ತಮವು ಎಂಬೊಕುಟ್ಟಿ ಹಿಟ್ಟು ಮಾಡಿಸಿ ನಾವುಸಿಟ್ಟು ಕೋಪವೆಂಬೊ ಬಣವಿ ಒಟ್ಟಿಕೆಂಡ ಹೇರಿಸಿ ನಾವು 4ಸತ್ವರಜ ತಮವು ಎಂಬೊಕತ್ತಲೆಯ ಅಡಗಿಸಿ ನಾವುಮತ್ತೆ ಜ್ಞಾನ ಸೂರ್ಯನಪ್ರಶಸ್ತ ಉದಯ ಮಾಡಿಸಿ 5ನೀತಿ ತಪ್ಪಿದ ಬಾಲೆಯರಭೂತ ಹೊರಗೆ ಹೊರಡಿಸಿನಾವುಮಾತ್ರಗಳೆಂಬೊ ಇವರಗಾತ್ರಬಿಟ್ಟು ದೂರ ಇಡಿಸಿ6ಸಂಚಿತಗಾಮಿಯು ಇವರಕಿಂಚಿತುಳಿಯದಲೆ ಹಾರಿಸಿ ನಾವುಪಂಚ ಪಾಂಡವರ ಮಡದಿಪಾಂಚಾಲಿಯ ನಾಚಿಸಿ 7ದಶೇಂದ್ರಿಯಗಳೆಂಬೊ ಕುದುರೆಗಳದಶ ದಿಕ್ಕಿಗೆ ಓಡಿಸಿ ನಾವುಮುಸುಕು ಹಾಕಿದ ಅಂಗವನುಕೊಸರಿ ಕೊಸರಿ ಝೂಡಿಸಿ 8ನಿಂದ್ಯವಾದಪಟಲುವಿದ್ಯೆಚಿಂದಿ ಚಿಂದಿ ಮಾಡಿಸಿ ನಾವುತಂದೆ ರಾಮೇಶನ ಪಾದಕೆತಂದು ಇವರ ಹೊಂದಿಸಿ 9
--------------
ಗಲಗಲಿಅವ್ವನವರು
ವಾಯು ದೇವರುಮುದದಿ ಪಾಲಿಸೊ ಮುದತೀರಥ ರಾಯಾಸದ್ಬುಧ ಜನ ಗೇಯಾ ಪಪದುಮನಾಭ ಪದ ಪದುಮ ಮುದುಪ ಸದಯಾಸದಮಲಶುಭಕಾಯಾ ಅ.ಪ.ವದಗಿರಾಮ ಕಾರ್ಯದಿ ನೀ ಮನಸಿಟ್ಟಿಲಂಕಾಪುರ ಮೆಟ್ಟಿಹೆದರದೆ ದಿತಿಜರನೆಲ್ಲ ಕೊಂದು ಬಿಟ್ಟೆಪುಚ್ಚದಿಪುರ ಸುಟ್ಟಕದನದಿ ಭೀಮವೃಕೋದರ ಜಗಜಟ್ಟಿಸಂನ್ಯಾಸ ತೊಟ್ಟಿ 1ಸೀತಾಶೋಕವಿನಾಶನ ಮಹಂತಾಮಹಬಲಿ ಹನುಮಂತದಾತಜವಾರಿಜಜಾತನಾಗುವಂತಾಖ್ಯಾತಿಯುಳ್ಳವಂಥಾಕೋತಿರೂಪಿಧರ್ಮಾನುಜಜಯವಂತಯತಿನಾಥನೆ ಶಾಂತಾ 2ಶಿರಿಗೋವಿಂದ ವಿಠಲನ ಪ್ರೀತಿ ಕಂದಾಭೀಮನೆ ಆನಂದಾಗರಿದು ಮುರಿದು ಪರಮತವನೆಆನಂದಾ ಮುನಿ ರೂಪದಲಿಂದ ಶಿರಿರಾಮನಸುತರ ಪ್ರೀಯ ಭರದಿಂದಾಬದರಿಗೆ ನಡೆ ತಂದಾ 3
--------------
ಸಿರಿಗೋವಿಂದವಿಠಲ
ವಾಸುದೇವನ ಗುಣೋಪಾಸನೆತಾರಕxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಹೇಸಿಕೆಸಂಸಾರ ಮಾರಕವೋ ಪಕ್ಲೇಶದ ಭವದೊಳಾಯಾಸಿ ಬಡದೆಹರಿದಾಸರ ದಾಸ ನೀನಾಗೋ ಭವನೀಗೋ ಅ.ಪಥಳಥಳ ದೇಹವ ತೊಳೆದು ನಾಮವಹಚ್ಚಿಛಳಿಗಂಜದೆ ನಿತ್ಯಜಲದಿ ಮುಳುಗಿಕರ್ಮಒಳಗೆ ಹೊರಗೆ ಎಲ್ಲಾ ಹೊಳೆವ ಹರಿಯಮೂರ್ತಿತಿಳಿಯದೆ ಯಮನಿಗೆ ಸಿಲುಕುವೆಯಲ್ಲೋ 1ಡೊಂಬನಂದದಿ ಡಾಂಬಿಕ ಕರ್ಮದ ಆ -ಅಂಬರಹಾಸಿಟ್ಟು ಕುಂಭದಿ ನೀರೆರೆದುಬಿಂಬನುಂಡನು ತೆಗಿ ಎಂಬುವಿಯಲ್ಲೋ 2ಕರ್ತಶಾಸ್ತ್ರಾರ್ಥತ್ವದ ಅರ್ಥ ತಿಳಿಯದೆ ಜೀವ -ಅತ್ತಣದ್ವಾರ್ತೆಯ ಮರೆತಿರುವೀ 3ಒಡೆಯನೆನುತನಿತ್ಯಪೊಡವಿತಳದಿ ಬಹುಧೃಢಮನದಲಿ ನೇಮಹಿಡಿದು ಮಾಡಿದಕರ್ಮಜಡಜನಾಭನಪಾದದೃಢ ಮಾಡಲೊಲ್ಲೆ4ಪ್ರೀತಿಯಾಗುವಕರ್ಮವ್ರಾತಮಾಡದೆನೀಗಿ5
--------------
ಗುರುಜಗನ್ನಾಥದಾಸರು
ವಿಠಲ ಎನ್ನನು ಕಾಯೊ ವಿಠಲ ಪಂಢರಿರಾಯವಿಠಲ ಭಕ್ತವತ್ಸಲ ವಿಠಲಹರಿವಿಠಲಪ.ದಿಟ್ಟ ಪುಂಡಲೀಕ ತನ್ನ ಪುಟ್ಟಿಸಿದವರ ಮನಮುಟ್ಟಿ ಪೂಜಿಸಲು ಚಿತ್ತಗೊಟ್ಟು ಬಂದೆಯೊ ವಿಠಲಬಿಟ್ಟು ಬರದಲೆ ಒಡನಿಟ್ಟಿ ನೀಡಲು ಚೆಲುವಇಟ್ಟಂಗಿ ಮ್ಯಾಲಂಘ್ರಿಪದ್ಮವಿಟ್ಟು ನಿಂತ್ಯಯ್ಯ ವಿಠಲ 1ಕೊಟ್ಟ ಭಾಷೆಗೆ ಭಕ್ತರ ಕಟ್ಟಲಿ ಸಿಲುಕಿದೆಯೊ ಕಂಗೆಟ್ಟೆನೊ ಭವದಿ ನಿನ್ನಗುಟ್ಟುತೋರಯ್ಯ ವಿಠಲಪಟ್ಟಗಟ್ಟ್ಟ್ಯಜಭವರ ಕಟ್ಟಿಲೆ ಇದ್ದ ವೈಕುಂಠಪಟ್ಟಣ ಭೀಮಾತೀರದಿ ನಟ್ಟು ನಿಂತ್ಯಯ್ಯ ವಿಠಲ 2ನೆಟ್ಟನೆ ವೇದವ ತಂದು ಬೆಟ್ಟವೆತ್ತಿ ಇಳೆಯ ಪೊತ್ತಿಸಿಟ್ಟು ತಾಳ್ದೆವಟುಖಳರೊಟ್ಟಿಲೊದ್ಯೈಯ್ಯ ವಿಠಲಕಟ್ಟಿದೆ ಕಡಲ ಜಗಜಟ್ಟಿ ಗೋಪ ಬೌದ್ಧ ಕಲಿಯಮೆಟ್ಟಿ ಆಳ್ದೆ ಪ್ರಸನ್ವೆಂಕಟ ಕೃಷ್ಣಯ್ಯ ವಿಠಲ 3
--------------
ಪ್ರಸನ್ನವೆಂಕಟದಾಸರು
ಸಾಕ್ ನಿನ್ನ ಸಂಸಾರವೂ ಓ ಮನವೇಯಾಕ್ ನಿನಗೀ ವ್ಯಾಪಾರವೂಪಬೇಕ್ ಬೇಕಾದುದ ತಂದುಹಾಕಿದುದೆಲ್ಲವ ತಿಂದು ಕಾಗೆ-ಯಂತೆ ಕೂಗುವರುಜೋಕೆಜೋಕೆಪೋಕಮನವೇಅ.ಪಯಜಮಾನ್ನೆ ಸಿಕ್ಕೀತೆಂದು ಪೌರುಷವ್ಯಾಕೋಅಜಪಟ್ಟಕ್ಕೊಡೆಯನೆಂದು ಟ್ರೆಜರಿ ಖಜಾನಿ ಕೀಲಿಕೈಸಿಕ್ಕಿತೆನುತ್ಹಿಗ್ಗಿಸುಜನಸಜ್ಜನರ ಮನ್ನಿಸದ ನಿ-ನ್ನೆಜಮಾನ್ಕೆ ಸುಡುವುದು ಮನವೇ1ಹೊಟ್ಟೆಗೂ ಸಮ ತಿನ್ನದೇ ಒಳ್ಳೆಯದೊಂದುಬಟ್ಟೆಸಹ ಹೊದೆದುಕೊಳ್ಳದೆಕಷ್ಟ ಪಟ್ಟು ಹಣ ಗಳಿಸಿಟ್ಟು ಮರುಗದೆದುಷ್ಟ ಮಕ್ಕಳು ಜುಗಾರಾಡಿ ಕಳೆದರೆಂದುಕೆಟ್ಟ ಪಾಪಿ ಮನವೇ2ಋಣ ರೂಪಸಂಸಾರಕೇ ನಿನಗೆ ಕೈಲಿ ಹಣಇಲ್ದೀ ವ್ಯಾಪಾರ್ಯಾಕೆ ಗುಣವಿಲ್ಲದ್ಹೆಂಡತಿಬಿನವಿಲ್ದ ನೆಂಟರುಬಣಗುಮಕ್ಕಳಿಗಾಗಿದಣಿವುದ್ಯಾತಕೊ ವ್ಯರ್ಥ ಹೆಣದತ್ತ ಮನವೇಬಂಧು ಬಾಂಧವರೆಲ್ಲರೂ ಸಂಪದವಿರೆಬಂದು ಸೇವಿಸಿ ಹೊಗಳ್ವರುಇಂದುನೀ ಗತಿಹೀನನೆನಿಸಲು ಜಗಳವಸಂಧಿಸಬೇಕಾಗಿ ನಿಂದಿಸುವರುಹಿಂದಿನಿಂದಲಿ ಪರಿಪರಿ ಮಂಗಬುದ್ಧಿ ಮನವೇ3ಯಾರಿಗೋಸುಗ ಬಂದಿಲ್ಲಿ ದಣಿವೆ ಸಂಗ-ಡ್ಯಾರೂ ಬರುವರ್ ಕಡೆಯಲಿಯಾರು ಯಮನ ಶಿಕ್ಷೆ ತಡೆವೆನೆಂಬರು ಪೇಳ್ವಾರಿಜನಾಭಗೋವಿಂದನಲ್ಲದೆ ಮುಂದೆಯಾರಿಗ್ಯಾರುಳಿಂಬ್ಹೇಳು ಮನವೇ4xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ