ಒಟ್ಟು 253 ಕಡೆಗಳಲ್ಲಿ , 71 ದಾಸರು , 237 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆ ದೇವಿ ಭಾಗ್ಯವಂತೆ ಬೇಡಿಕೊಂಬೆ ಬೇಗ ಹಸೆಗೆ ಪ ಸುತ್ತನಾಲ್ಕು ದೀಪಗಳಿಟ್ಟು ಎತ್ತಲೂ ಪ್ರಜ್ವಲಿಸುತಿರ್ಪ ಮುತ್ತುರತ್ನ ಕೆತ್ತಿಸಿರುವ ಉತ್ತಮ ಮಣಿಪೀಠಕೆ 1 ಜಡೆಯಬಂಗಾರವನು ಹಾಕಿ ಬಿಡದೆ ಕಮಲಮಾಲೆಧರಿಸಿ ಮುಡಿದು ಮಲ್ಲಿಗೆ ಸಂಪಗೆಯ ಒಡನೆ ಪೀತಾಂಬರವನುಟ್ಟು 2 ಜಾಜಿಪಟ್ಟಣನರಸಿಯೆ ನೀಂ ರಾಜಿಸು ತನುರಾಗದಿಂ ದೀನ ಜನರಂ ಹರುಷಗೊಳಿಸು ಮಾಜದೇ ನೀ ಮಂಗಳಾಂಗಿ3
--------------
ಶಾಮಶರ್ಮರು
ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ ಪ ಮೆಲ್ಲಮೆಲ್ಲನೆ ಪದ ಪಲ್ಲವ ವಿಡುತಲಿ ಗುಲ್ಲು ಮಾಡದೆ ಭವ ದಲ್ಲಣಗೊಳಿಸು ವಲ್ಲಭ ಸಿರಿಸಹ ನಿಲ್ಲದೆ ಮನೆಯೊಳು ಬಲ್ಲಿದರಿಗೆ ಬಹು ಬಲ್ಲಿದನೆನಿಸಿಹ ಅ.ಪ. ನೆಗೆಯುವ ನಿಲ್ಲುತೆ ಚಿಗರಿಯ ತೆರೆದನು ರಾಗದಿನೋಡುತ ಬಗೆ ಬಗೆ ಹರ್ಷದ ನಗೆಮೊಗಹಾಸದಿ ಬಿಗಿಯುತ ಮನ ಅಗಣಿತ ಗುಣನಿಧಿ 1 ಸಾಗರನಳಿಯನೆ ಸಾಗರಶಯನನೆ ಯಾಗ ಸುಭೋಕ್ತನೆ ಯೊಗಿಗಳರಸನೆ ಬಾಗುವೆ ಚರಣದಿ ಸಾಗುತ ಮನ ಬಡ ಬಡ ನೀಗಿಸಿ ಮಲಮನದಾಗಸಗೀಗಲೆ 2 ಕುಣಿಸುತ ಹುಬ್ಬನು ಉಣಿಸುತ ಭಕ್ತಿಯ ತನುಮನವೆಲ್ಲವ ಮಿನುಗಿಸಿ ಜ್ಞಾನವÀ ಧಣಧಣ ತಾಳಕೆ ಅಭಿನಯಸಹಿತದಿ ಕುಣಿಯುತ ಕುಣಿಸುತ ದಣಿಸದೆ ಕರುಣದಿ 3 ಕರ್ಜಿಸಿ ರಾಮದ ಕಜ್ಜಿಯಮನದಿಂ ಮಜ್ಜನಗೈಸುತ ಭಕ್ತಿಯಕಡಲಲಿ ಗೆಜ್ಜೆಯಕಟ್ಟಿಸಿ ಹೆಜ್ಜೆಹೆಜ್ಜೆಗೆ ಪೂ- ರ್ವಾರ್ಜಿತವೆಲ್ಲವ ಭರ್ಜನೆ ಗೈಸಲು 4 ಇಂದಿರೆಯರಸನೆ ಚಂದ್ರನ ಹಳಿವನೆ ಛಂದಸುವೇದ್ಯನೆ ಬಂಧ ಸುಮೋಚಕ ಬಂಧುವೆ ಸರ್ವರ ಮಂದಜಭವಪಿತ ತಂದೆಯೆ ವಿಶ್ವದ ನಂದವ ನೀಡಲು 5 ವೇದವ ತಂದವ ವೇದನ ಪೊರೆದವ ಭೂಧರ ಪೊತ್ತವ ಮಾಧವನಾದವ ಮೋದವ ತಂದವ ಖೇದವ ತರಿದವ ಮೇದಿನಿ ಪೊರೆದವ ಛೇದಿಸಿ ಬಂದವ 6 ಮೇದಿನಿ ಇತ್ತವ ಮೇದಿನಿಸುತೆಯಳ ಮೋದದಲಾಳ್ದವ ಮೇದಿನಿಸುತಹರ ವೇದವ ಕಾಯ್ದವ ಛೇದಿಸಿ ಕಲಿಗಣ ಹಾದಿಯ ತೊರುವ 7 ನಂದನಂದ ಅರವಿಂದ ನಯನ ಬಹು ಸುಂದರತಮಶ್ರೀ ಮಂದಿರ ಗೋಕುಲ ಚಂದಿರ ಶುಭಗುಣಸಾಂದ್ರ ಮಹೋಜಸ ಇಂದ್ರನ ಹಳಿದ ಮಹೇಂದ್ರ ಪರಾತ್ಪರ8 ಗೋಪಿಕಂದ ಬಹು ಗೋಪಿಕಾಮಸ್ತ್ರೀ ರೂಪಧಾರಿ ನಗಚಾಪವರದ ಶಿವ ಭಂಗ ಹರಣ ನಿ- ರ್ಲೇಪ ದುಃಖ ಸುಖಲಾಪ ಚರಿತ ಭಗ 9 ವಾಸುದೇವ ಸಂತೋಷದಾತ ಗೋಕೇಶವೇದ್ಯ ವಾಗೀಶ ಜನಕ ನಿಜದಾಸಪೋಷ ಖಳ- ದಾತ ಮಹಿ- ದಾಸಪೂರ್ಣವಿಭು 10 ವೈರಿ ಕುರುವಂಶ ಧ್ವಂಸ ನಿಜ ಹಂಸರೂಪ ಯದುವಂಶ ಚಂದ್ರ ನೀ- ಲಾಂಶುಧಾಮ ಗರುಡಂಸಗಮನ ಭವ ದಮನ ದೇವಾಂಶಗಣಪೋಷ 11 ತುಂಬಿರೆಜಯಜಯ ದುಂಧುಭಿನಾದವು ಅಂಬರಸುರಗಣ ವರ್ಷಿಸೆಕುಸುಮವ ಸಂಭ್ರಮದಾರತಿ ಎತ್ತಲ್ ಸ್ತ್ರೀಗಣ ಕಂಬು ಚಕ್ರಾಂಕಿತ ಪಾಣಿಯೆಸರಸರ 12 ಮಂಗಳಮೂರ್ತಿಯೆ ಮಂಗಲ ದಾತನೆ ಅಂಗಜರಿಪುಗಳ ಭಂಗವ ಹರಿಸುತ ತಿಂಗಳು ಬೆಳಕಿನ ತುಂಗ ಸುರೂಪವ ಕಂಗಳು ಮನಸಿನ ಸಂಗದಿ ತೋರುತ13 ಸಾಸಿರ ಶಿರಮುಖ ಸಾಸಿರ ನೇತ್ರನೆ ಸಾಸಿರ ಬಾಹುವೆ ಸಾಸಿರನಾಮಕ ಸಾಸಿರಕೀರ್ತಿನಿರ್ದೋಷ ಸುಖಪೂರ್ಣ ಶ್ವಾಸವಿನುತ ವಿಶ್ವಾಸವ ಬೀರುತ 14 ಜಯಮುನಿ ಹೃದಯಗ ವಾಯು ವಿನಾಯಕ ಜೀಯ ಶ್ರೀ ಕೃಷ್ಣವಿಠಲ ಮಹಾಂತನೆ ಪ್ರೇಮದ ಮನವಳಿದ ಹೇಯದು ನಿನ್ನಯ ಧೇಯವೆ ನಡೆಸುತ ಶ್ರೀ ಯವ ನೀಡಲು 15
--------------
ಕೃಷ್ಣವಿಠಲದಾಸರು
ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ ಪ ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯ ಅಷ್ಟಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ ಅ.ಪ ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದು ಚೆಲ್ವ ಲಲನೇರ ಗಲ್ಲ ಮುದ್ದಾಡುತ ಬೇಗ 1 ಮಂದಗಮನೆಯರ ಮಂದಹಾಸದಿ ಅಪ್ಪಿ ದ್ವಂದ್ವ ಕುಚದಲ್ಲಿಟ್ಟ ನಂದಜ ಕರಗಳಿಂದ 2 ಮಿರಿಮಿರಿ ಮಿಂಚುವ ಕಿರೀಟ ಕುಂಡಲ ಧರಿಸಿ ವಾರೆ ನೋಟದಿ ನಾರೇರ ಮನ ಸೆಳೆವ 3 ಸುಮನಸರೊಂದಿತ ಯಮುನಾ ಪುಳಿನದಿ ವಿಮಲ ವೇಣುಸ್ವರದಿ ಕಮಲಾಕ್ಷಿಯರೊಲಿಸಿದ 4 ಶ್ರೀವತ್ಸ ಕೌತ್ಸುಭ ಪವಳ ಮುತ್ತಿನಹಾರ ನ್ಯಾವಳ ಸರಿಗಿಟ್ಟು ಗೋವಳರೊಡಗೂಡಿ 5 ತುತ್ತೂರಿ ಝಾಂಗಟೆ ಒತ್ತಿ ಪಿಡಿದಿಹ ಕಹಳೆ ಬತ್ತೀಸ ರಾಗದಿ ತತ್ಥೈವಾದ್ಯದೀ 6 ಎತ್ತಿ ಪಿಡಿದಿಹ ಛತ್ರಿ ಸುತ್ತು ಮಾಗಧ ಮಂದಿ ಸ್ತೋತ್ರವ ಮಾಡೆ ನೇತ್ರೋತ್ಸವ ತೋರುತ 7 ದಿವಪನ ಸೋಲಿಪ ನವ ಪೀತಾಂಬರ ಧರಿಸಿ ಭುವನವ ಮೋಹಿಪ ನವ ಸುವಿಶೇಷನೆ 8 ವಿಜಯ ರಾಮಚಂದ್ರವಿಠಲರಾಯನೆ ನಿಜ ಪರಿವಾರದಿಂ ಭಜಕರ ಪಾಲಿಪ 9
--------------
ವಿಜಯ ರಾಮಚಂದ್ರವಿಠಲ
ಬೇಡ ಬೇಡ ಹೋಗೆಂದು ಕಾಡದಿರು ಕೃಪೆಯೊಂದ ಬೇಡದಿರಲಾರೆ ಮಾಂಗಿರಿಯರಂಗ ಪ ಬೇಡುವನ ಕೈ ಕೀಳು ನೀಡುವನ ಕೈ ಮೇಲು ಬೇಡಿದಲ್ಲದೆ ಕೃಪೆಯ ಮಾಡನೈರಂಗಾ ಅ.ಪ ಗಾನಕೆ ನಲಿಯುವೆಯೋ ಧ್ಯಾನಕೆ ಒಲಿಯುವೆಯೋ ಜ್ಞಾನಕೆ ಸಿಗುವೆಯೋ ನಾನರಿಯೆನು ಗಾನದರಿವೆನಗಿಲ್ಲ ಧ್ಯಾನಮಾಡುವನಲ್ಲ ಜ್ಞಾನಾನುಭವವಿಲ್ಲ ಆಧಾರವಿಲ್ಲ 1 ನೀನೆನ್ನ ಕಡೆಗಣಿಸಿ ಹೀನ ಹೋಗೆಂದೆನಲು ನಾನಳುವೆನನವರತ ಶ್ವಾನದಂತೆ ಸೂನು ಬಾ ಬಾರೆಂದು ಸಾನುರಾಗದಿ ರಮಾದೇವಿ ಸಂತೈಪಳು 2 ಎನ್ನಮ್ಮ ಕೃಪೆಯಿಂದ ನಿನ್ನ ಕಾಲ್ವಿಡಿಯೆಂದು ಎನ್ನ ಕಳುಹುತ ನಿನಗೆ ಎನ್ನ ತೋರ್ದು ಎನ್ನನತಿಕೃಪೆಯಿಂದ ಮನ್ನಿಸೆನ್ನುವಳಾಗ ನಿನ್ನ ಕೃಪೆ ಯೆನಗುಂಟು ಮಾಂಗಿರೀಶಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೋಧ ಪ ಶ್ರೀನಿವಾಸನ ನಾಮ ಲೀಲೆಯಸಾನುರಾಗದಿ ವಾಣಿಜಾಣೆಸೂನೂನ ಪಾಪವ ಹಾನಿಯ ಮಾಡುತ 1 ಹತ್ತು ನಾಲ್ಕು ಸುತ್ತದೇಶದಿಚಿತ್ರ ಚರಿತನ ವೃತ್ತಿ ನಿತ್ಯದಿವಿಸ್ತರಿಸಿ ಹೇಳುತ ಚಿತ್ತದಿ ಸುಖಿಸುವಿ 2 ಇಂದಿರೇಶನ ತಂದು ತೋರುವಿಎಂದು ನಿನ್ನನು ಪೊಂದಿ ಬಂದೆನಂದನ ಕಂದನ ಬಂದೀಗ ತೋರಿಸು 3
--------------
ಇಂದಿರೇಶರು
ಬೋಧ ಸದ್ಗುರು ಜಿತಮದನ ಪ ಬಾದರಾಯಣ ವೈದೇಹಿ ಚರಣಾಬ್ಜಾ ರಾಧಕ ನಮಿಪೆ ಸನ್ಮೋದವಿತ್ತು ಕಾಯೊ ಅ.ಪ. ಶ್ರೀ ಮಧ್ವ ಮತವಾರಿಧಿ ಸೋಮ | ದ್ವಿ ಜ ಸನ್ನುತ ಗುಣಧಾಮಾ ಕಾಮಿತಜನ ಕಲ್ಪಭೂಜ ವಿಬುಧ ಸು ಪ್ರೇಮ ಸಂಯಮಿಕುಲೋದ್ಧಾಮ ದಯಾಂಬುಧೇ ಗೋಮಿನೀವಲ್ಲಭನ ಪದಯುಗ ತಾಮರರಸಗಳನನುದಿನದಿ ಬಿಡ ದೇ ಮನಾಬ್ಜದಿ ಭಜಿಸುತಿಪ್ಪಮ ಹಾ ಮಹಿಮ ತುತಿಸಿಬಲ್ಲನೆ 1 ದೀನಜನರ ಬಂಧು ನಿನ್ನಾ | ಪಾದ ಕಾನೆರಗುವೆ ಸುಪ್ರಸನ್ನಾ ದಾನ ಮಾನಗಳಿಂದ ಜ್ಞಾನಿಜನರಿಗೆ ಮ ಹಾನಂದ ಬಡಿಸುತ ಸಾನುರಾಗದಿ ನಿತ್ಯಾ ಶ್ರೀ ನಿಕೇತನ ಪರಮ ಕಾರು ಣ್ಯ ನಿವಾಸ ಸ್ಥಾನನೆನಿಪ ಮ ಹಾನು ಭಾವ ಭಗವತ್ಪದಾಂಭೋ ಜಾನುಗರೊಳೆನ್ನೆಣಿಸಿ ಪಾಲಿಸು 2 ಸತ್ಯಪ್ರಿಯರ ಕರಕಮಲ | ಜಾತ ನಿತ್ಯ ನಿರ್ಜಿತ ಘೋರ ಶಮಲಾ ಚಿತ್ತಜಪಿತ ಜಗನ್ನಾಥ ವಿಠಲನ ಚಿತ್ತಾನುವರ್ತಿಗಳಾಗಿ ಸಂಚರಿಸುತಾ ಅತ್ಯಧಿಕ ಸಂತೋಷದಲಿ ಪ್ರತ್ಯರ್ಥಿಗಳಿಗುತ್ತರಿಸಿ ಮಿಗೆ ಪುರು ಷೋತ್ತಮನೆ ಪರನೆಂದು ಡಂಗುರ ವೆತ್ತಿ ಹೊಯ್ಸಿ ಕೃತಾರ್ಥನೆನಿಸಿದ 3
--------------
ಜಗನ್ನಾಥದಾಸರು
ಭಕ್ತನಾಗೋ ಹರಿಗೆ ಓ ಮನುಜ ಪ ನಾಲಗೆಯಲಿ ಶ್ರೀಲೋಲನ ನಿಜಗುಣ ಜಾಲವ ಕೊಂಡಾಡೋ ಓ ಮನುಜ 1 ಮಾನಸದಲಿ ಸದಾ ಜಾನಕಿ ರಮಣನ ಧ್ಯಾನವ ಮಾಡುತಿರೋ ಓ ಮನುಜ2 ಕರಯುಗಳಗಳಿಂ ವರಗೋಪಾಲನ ಚರಣ ಪೂಜೆಮಾಡೋ ಓ ಮನುಜ 3 ರವಿಕುಲ ತಿಲಕನ ಸುವಿಮಲ ಚರಿತೆಯ ಕಿವಿಯಲಿ ಕೇಳುತಿರೋ ಓ ಮನುಜ4 ಶ್ರೀಹರಿಯ ಜಗನ್ಮೋಹನ ಮೂರ್ತಿಯ ಊಹಿಸಿ ನೋಡುತಿರೋ ಓ ಮನುಜ 5 ಶಾಸ್ತ್ರ ಸಿದ್ಧವಹ ಕ್ಷೇತ್ರತೀರ್ಥಗಳ ಯಾತ್ರೆಯ ನೀಮಾಡೋ ಓ ಮನುಜ 6 ಶ್ರೀಶಗರ್ಚಿಸಿದ ಸುವಾಸಿತ ತುಲಸಿಯ ನಾಸಿಕದಲಿ ಮೂಸೊ ಓ ಮನುಜ7 ಸಾಧುಜನಗಳಿಗೆ ಮೋದವೀವ ಶ್ರೀ ಪಾದಗಳಿಗೆ ನಮಿಸೋ ಓ ಮನುಜ 8 ಭೋಗಿಶಯನಗನುರಾಗದಿಂದ ಶಿರ ಬಾಗಿ ಸತತ ನಡೆಯೋ ಓ ಮನುಜ 9 ಈಜಗದಲಿ ತಾ ಜಾಜಿ ಶ್ರೀಶನು ರಾಜಿಪುದನು ಕಾಣೋ ಓ ಮನುಜ 10
--------------
ಶಾಮಶರ್ಮರು
ಭಕ್ತಿಯೆಂಬ ಹೆಣ್ಣ ಶಕ್ತಿಯನ್ನು ನೋಡಿ ಮುಕ್ತಾಶ್ರಯ ಲಕ್ಷ್ಮೀಪತಿಯನ್ನು ಪಾಡಿ ಪ. ಸ್ವಾನಂದ ಪರಿಪೂರ್ಣ ಪರಮ ಮಂಗಲಮೂರ್ತಿ ಶ್ರೀನಿವಾಸಗೆ ಸರ್ವ ಸಂಗವ ಬಿಡಿಸಿ ತಾನಿರುವಲ್ಲಿಗೆ ಹಿಡಿದೆಳತರಿಸಿ ಸಾನುರಾಗದಿ ತನ್ನ ಸಂಗಡಲಿರಿಸಿ 1 ಅಣುರೇಣು ತೃಣಕಾಷ್ಠ ಪರಿಪೂರ್ಣ ಸರ್ವೇಶ ಗಣನೆಯಿಲ್ಲದ ದಿವ್ಯ ಗುಣಗಳುಳ್ಳವನು ಎಣಿಸಲು ಇವಳ ಜನರ ದೋಷಗಳನು ಕ್ಷಣ ಬಿಟ್ಟಗಲದೆ ಇವಳ ಕೂಡಿಹನು 2 ಭೂಧರ ಗಿರಿವರ ಶೋಭಿತ ಮೂರ್ತಿ ಮಾಧವ ಪರಿಹರಿಸುವನು ಭವಾರ್ತಿ ಪಾದ ಪಲ್ಲವಗಳ ನಂಬಿದವರಿಗರ್ಥಿ ಸಾಧಿಪ ಕರುಣಾಳು ಹರಿಯ ಶ್ರೀಕೀರ್ತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಜಿಸಿರೋ ಭಜಿಸಿರೋ ಅಜನ ಪೆತ್ತವನಾ ಭುಜಗಶಯನ ಮದಗಜವ ಪೊರೆದನಾ ಪ ಭಜಕರ ಕೂಗಿಗೆ ನಿಜವ ತೋರುವನಾ ಸುಜನೋದ್ಧಾರನ ವಿಜಯ ರಾಘವನಾ ಅ.ಪ ರಾಗವಿದೂರನ ರಾಗೋಲ್ಲಾಸನ ರಾಗಕೆ ಒಲಿವನಾ ರಾಗವನುಣಿಪನ ರಾಗದಿ ಮುರಳಿಯ ಊದಿ ರಾಜಿಸುವನ ರಾಗದಿ ನಮಗನುರಾಗವನೀವನ1 ಶರಣರ ದುರಿತವ ಪರಿಹರಿಸುವನ ಧರಣಿಯನೀರಡಿ ಅಳೆದವನ ಕರುತುರುಗಳ ಕನಿಕರದಿಂಕಾಯ್ದನ ವರದಾಯಕ ಮಾಂಗಿರಿ ರಂಗಯ್ಯನ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಾಗವತರ ನೋಡುವಾ ಭಾಗ್ಯಸ್ವರೂಪಾ ಪ ಯೋಗಜನಗಳನು ರಾಗದಿ ಧ್ಯಾನಿಪ ಭೋಗಿಶಯನ ಸಂಪನ್ನ ಸದ್ಗುಣಪೂರ್ಣ ಭಾರ್ಗವೀಸತಿ ಬಿಡದೆ ವರಿಸಿರುವಾ ತಾಂಝಂ ತಂಝಂತ ತಂತಕನಾ ತಧಿಂಗಿಣತೋಂ ತಧಿಂಗೀಣತೋಂ ತಧಿಂಗಿಣತೋಂ 1 ನಿನ್ನಮುಖಕೇ ಸರಿಬಾರದೆ ಚಂದ್ರಮನು ಉನ್ನತ ಕಳಂಕಿಯಾಗಿರುತಿಹನೋ ಕಣ್ಣು ಸಾಹಸ್ರಕ್ಕೂ ಸರಿಬರದೆ ತಾಂಝಂ ತಂಝಂತ 2,ತಂಝಂ...ತಂತ 2 ಹೊಳೆವ ನಿನ್ನಯ ಕೊರಳಿಗೆ ಪಡಿಯಾಗದೆ ನಲಿದು ನಾರಾಯಣ ಎನ್ನುತ್ತಿದೆ ಶಂಖವು ನಳಿನಶರ ರೂಪಕ್ಕೆ ಸರಿಬರವೆ ತಾಝಂ ತಝಂತ 2,ತಝಂ...(ತ್ವಂತ) 3 ಭಕ್ತರು ಪಡೆವತಿ ಸೌಖ್ಯಕ್ಕೆ ಹೋಲದ ನಿತ್ಯವಾದ ಲೌಕಿದದಾಶೆ ಬಿಡಿಸಯ್ಯ ಮುಕ್ತಿಕೊಡುತೆನ್ನನ್ನು ನಿನ್ನಡಿಯ ತಾಝಂ ತಂಝಂತ ತಂತಕನಾ ತಧಿಗಿಣತೋಂ ತಧಿಗಿಣತೋಂ ತಧಿಗಿಣತೋಂ 4
--------------
ಶಾಮಶರ್ಮರು
ಭೂರಿ ಕರುಣಾಕರನೋ ಸಾರುವ ತೆರೆದೊಳು ತೋರಿಹ ಭಕ್ತರ ಪ. ಅಗಣಿತ ಮಹಿಮನ ಪೊಗಳುವೆ ನಾನೆಂತು ಬಗೆ ಬಗೆ ರೂಪದಿ ಸಿಗದೆಸಿಗುವ ಹಾಂಗೆ ಪೊಗಳಿಸಿಕೊಂಡು ತಾ ಝಗಝಗಿಸುತ ಬಹ ನಗೆಮೊಗ ಚೆನ್ನಿಗ ನಿಗಮಗೋಚರ ಕೃಷ್ಣಾ 1 ಭಕ್ತ ಪ್ರಹ್ಲಾದಗೆ ಅತ್ಯಧಿಕ ಹಿಂಸೆ ಯಿತ್ತ ಪಿತನ ಕೊಂದು ಇತ್ತ ಮುಕುತಿ ಅವ ನತ್ಯಪರಾಧವನೆತ್ಯಾಡಿದನೇ ಚಿತ್ತಜನೈಯ್ಯನು ಭಕ್ತವತ್ಸಲ ದೇವ 2 ಅಣುರೇಣು ತೃಣಕಾಷ್ಠ ಪರಿಪೂರ್ಣ ನೀನೆಂದು ಕ್ಷಣ ಬಿಡದಲೆ ಗಜರಾಜನು ಸ್ತುತಿಸೆ ಅನುವಿಲಿ ಚಕ್ರದಿ ನಕ್ರನ ಹರಿಸಲು ದಣಿದ ಹರಿಗೆ ಗಜರಾಜನೇನಿತ್ತನೋ 3 ಭಕ್ತರ ಮನದಘ ನಿತ್ಯದಿ ಕಳೆದನೋ ಅಶಕ್ತ ಅಜಮಿಳನೆಮ ಭೃತ್ಯರೆಳೆಯಲು ಇತ್ತು ನಾರಗನುಡಿ ಮತ್ತೆ ಯಮಭಟರ ಇತ್ತ ಮುಕುತಿ ದೇವ ಅತ್ಯಧಿಕ 4 ಮೂಗುತಿ ನೆವದೊಳು ಸಾಗಿಸಿ ಭಾಗ್ಯವ ಜಾಗರ ಮೂರುತೆ ಯೋಗಿಗಳರಸನು ಬಾಗಿಸಿ ತನ್ನವರಾಗಿಸಿ ದಾಸರ ಸರ್ವರ ಅನುರಾಗದಿ ಸಲಹುವ 5
--------------
ಸರಸ್ವತಿ ಬಾಯಿ
ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ ಪ ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರ ಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ ಅ.ಪ ನರರ ಸಂದಣಿಯಲಿ ವಿರತಿ ಮಾತಾಡಿಸಿ ಮಾರನಾಟದಿ ಮನವೆರಗುವಂದದಿ ಮಾಡಿ 1 ಕಾಷಾಯ ದಂಡಿ ವೇಷವ ಧರಿಸಿ ಮುನ್ನ ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸಿದೆನ್ನ 2 ಸೀಲರಂದಲಿ ಜಪಮಾಲೆ ಕೈಯಲಿ ಪಿಡಿಸಿ ಕಾಳಿಮರ್ಧನ ದೇವ ಮಲಿನ ಮನವನಿತ್ತು 3 ಕರವಶವನೆ ಮಾಡಿ ಸರಸದಿಂದ ಕಲೆಹಾಕಿ ಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ4 ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ ಶರಪಂಜರದಿ ಬಿಗಿದು ಚರಣ ತೋರಿಸದೆಲೆ 5 ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ ಮಾಧವ 6 ಪತಿತಾಗ್ರಣಿಯು ನಾನು ಪತಿತ ಪಾವನ ನೀನು ಸತತ ನಿನ್ನಯ ಸಂಸ್ಮøತಿಯ ನೀಡದಲೆನ್ನ 7 ದ್ವಿಜ ಅಜಮಿಳ ನಿಜನಾಮದಿಂದಲಿ ಸುಜನನೆಂದೆನಿಸಿದ್ದು ನಿಜತೋರದಲೆನ್ನ 8 ಹೀನರೊಳೆನ್ನೆಂಥ ಹೀನ ಜನರ ಕಾಣೆ ಸಾನುರಾಗದಿ ಕಾಯೊ ಶ್ರೀ ನರಹರಿಯೆ 9
--------------
ಪ್ರದ್ಯುಮ್ನತೀರ್ಥರು
ಮಂಗಳಂ ಶ್ರೀ ಶ್ರೀನಿವಾಸಗೆ ಶೃಂಗಾರರೂಪಗೆ ಮಂಗಳಂ ಶ್ರೀ ಶ್ರೀನಿವಾಸಗೆ ಪ. ಪದ್ಮನಾಭ ಪದ್ಮ ಮುಖಗೆ ಪದ್ಮಪಾದಗೆ ಪದ್ಮವತಿಯ ವರಿಸಿದವಗೆ ಪದ್ಮೋದ್ಭವನ ಸೇವೆ ಕೊಂಬಗೆ 1 ಆರ್ತ ಜನರ ಪೊರೆಯುವನಿಗೆ ಪಾರ್ಥಸಾರಥಿಗೆ ಕೀರ್ತಿಸುವರ ಕಾಯ್ದೆನೆಂದು ಅರ್ಥಿಯಿಂದ ನಿಂತಿರುವಗೆ 2 ಯೋಗಿಗಳಿಗೆ ನಿಲುಕದವಗೆ ಭೋಗಿಶಯನಗೆ ಭಾಗವತರು ಸ್ತುತಿಸಲು ಅನು- ರಾಗದಿಂದ ಲಾಲಿಪನಿಗೆ 3 ಭಕ್ತ ಜನರ ಕಾಯುವನಿಗೆ ಮುಕ್ತಿದಾಯಕನಿಗೆ ನಿತ್ಯಮುಕ್ತ ನಿಗಮವೇದ್ಯ ಸತ್ಯಸಂಕಲ್ಪ ಹರಿಗೆ 4 ಭೂಪರೈವರ ಪೊರೆದವಗೆ ತಾಪಹರನಿಗೆ ಗೋಪಾಲಕೃಷ್ಣವಿಠ್ಠಲಗೆ ಶ್ರೀಪತಿ ಶ್ರೀ ಶ್ರೀನಿವಾಸಗೆ 5
--------------
ಅಂಬಾಬಾಯಿ
ಮನವೆ ಪೇಳುವೆ ಪ ಅಂತರಂಗದಲಿ ಚಿಂತಿಪರಘಶುಲಧ್ವಾಂತ ದಿವಾಕರನಾ ಶ್ರೀವರನಾ ಅ.ಪ ಎಂತು ಸುಕೃತವೂ ಸಿರಿಕಾಂತನುಯನ್ನೊಳು ನಿಂತಿರುವನು ಎನುತ ಪರ್ವತ ಸಂತೋಷದಲಿರುವಂತೆ ತೋರುವದು ಸು- ಕಾಂತ ಶಿಖರದಿಂದ ಛಂದ 1 ವರಶಿಲೆಯೊಳಿರುವ ಹರಿಯ ಶೇವಿಸಲು ಹರುಷದಿ ಸುರನಿಕರ ಭಾಸುರ ತರುಲತೆರೂಪದಿ ಇರುತಿಹರೆನ್ನುತ ಮೆರೆವನು ಗಿರಿರಾಜಾ ಸುತೇಜಾ2 ಗಿರಿನಾಥಾ ತೋರುತ ಅರಳಿದ ಪೂವಿನ ಪರಿಮಳ ಬೀರುವ ಸುರಚಿರ ತರುವ್ರಾತಾ ಶೋಭಿತ3 ಪವನ ಶೇವಿತನು ಭುವನೋದರ ತಾ ದಿವಿಜರಿಂದ ಸಹಿತ ಸೇವಿತ ಅವನಿಧರನು ಮಾಧವನ ತೆರದಿ ತೋ ರು ವೆನೆಂಬುಗರ್ವಾದಿಂದಿರುವ 4 ಸಿದ್ಧಚಾರಣ ತಪೋವೃದ್ಧರಿದೇ ಸ್ಥಳ ಸಿದ್ಧಿದಾಯಕವೆಂದೂ ಬಂದೂ ಪದ್ಮಾಕ್ಷನ ಪದಪದ್ಮವ ಧ್ಯಾನಿಸು- ತಿದ್ದರು ಗುಹೆಗಳಲಿ ಪೂರ್ವದಲಿ5 ಮುನಿ ಮಾರ್ಕಾಂಡೇಯನು ಬಹುದಿನದಲಿ ಘನ ತಪವಾಚರಿಸಿ ಸೇವಿಸಿ ವನಜನಾಭನ ಪದವನಜ ಮಧುಪ ನೆಂ ದೆನಿಸುತಲಿರೆ ಗುಹದಿ ತಪೋನಿಧಿ6 ಗಿರಿಯ ಬಲದಿ ಅಹೋಬಲ ನರಸಿಂಹನ ದರ್ಶನವನು ಕೊಳುತ ನಿರುತ ಇರುತಿರಲೊಂದಿನ ಬರಲಾಷಾಢದ ಹರಿವಾಸರ ವೃತವಾ ಚರಿಸುವ 7 ದ್ವಾದಶಿ ಸಾಧನೆ ಬರಲು ಪ್ರತಿದಿನದಿ ಶ್ರೀದನ ದರ್ಶನದಾ ನೇಮದ ಸಾಧನೆ ವಿಷಯದಿ ಯೋಚಿಸುತಿರೆ ಹರಿ ಮೋದದಿ ಮುನಿಗೊಲಿದಾ ಸೂಚಿಸಿದಾ 8 ಅರುಣೋದಯದಲಿ ಸುರಗಂಗೆಯು ತಾ ವರ ಪುಷ್ಕರಣಿಯೊಳು ಬರುವಳು ತರುರೂಪದಿ ನಾ ಬರುವೆನು ಬಿಡದಿರು ಮರುದಿನದಾ ಚರಣೆ ಪಾರಣೆ9 ಎಂತು ಕರುಣವೊ ನಿರಂತರ ಭಜಿಪರ ಚಿಂತಿತ ಫಲವೀವ ಕೇಶವ ಇಂತು ಹರಿಯ ಗುಣ ಚಿಂತಿಸುತಿರಲು ನಿ ಶಾಂತದಿ ಸರೋವರದಿ ವೇಗದಿ10 ಭಾಗೀರಥಿ ಜಲದಾಗಮ ವೀಕ್ಷಿಸಿ ರಾಗದಿ ವಂದಿಸಿದ ತುತಿಸಿದ ಯೋಗಿವರನುತ ಸ್ನಾನವಮಾಡಿ ಬರುವಾಗಲೆ ಧ್ಯಾನಿಸಿದ ಹರಿಪದ11 ಆ ತರುವಾಯದಿ ಪಾರಿಜಾತ ತರು ವ್ರಾತವ ನೋಡಿದನು ವಂದಿಸಿದನು ಈತನೆ ನರಮೃಗನಾಥನೆನುತ ಮುನಿ ಪ್ರಾತ:ಪಾರಣವ ಮಾಡಿದ ಜವ12 ಮೀಸಲು ಮನದಲಿ ಶೇಷಶಯನಗಾ- ವಾಸಗಿರಿಯ ಸೇವಾ ಮಾಡುವ ಭೂಸುರ ಗಣದಭಿಲಾಷೆಗಳನು ಪೂರೈಸಿ ಪೊರೆವನೀತಾ ಪ್ರಖ್ಯಾತಾ 13 ಶ್ರೀಯುತ ಮಾರ್ಕಾಂಡೇಯರ ಚರಿತೆಯ ಗಾಯನ ಫಲವಿದನು ಪೇಳುವೆನು ಶ್ರೇಯಸ್ಸಾದನ ಕಾಯದಿ ಬಲದೀ- ಮಾನವ 14 ಸುರತರು ಕಾರ್ಪರ ಶಿರಿ ನರಸಿಂಹನೆ ಈತ ಎನ್ನುತ ನಿರುತ ಅನಂತನ ಗಿರಿಯ ಮಹಿಮೆಯನು ಸ್ಮರಿಸುವ ನರಧನ್ಯಾ ಸನ್ಮಾನ್ಯ 15
--------------
ಕಾರ್ಪರ ನರಹರಿದಾಸರು
ಮನವೇ ಮರೆವರೇನೊ ಹರಿಯಾ ಪ ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ. ವಿಷಯ ಚಿಂತನೆ ಮಾಡಸಲ್ಲ ಮೇಷ ವೃಷನನಾದನು ಹಿಂದೆ ಪೌಲೋಮಿ ನಲ್ಲ ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1 ಧನವೆ ಜೀವನವೆಂಬಿ ನಿನಗೆ ಸುಯೋ ಧನ ನೋಡು ಧನದಿಂದ ಏನಾದ ಕೊನೆಗೆ ಅನಿರುದ್ಧ ದೇವನ ಮನೆಗೆ ಪೋಪ ಘನ ವಿಜ್ಞಾನವನೆ ಸಂಪಾದಿಸು ಕೊನೆಗೆ 2 ಹರಿದಾಸನಾಗಿ ಬಾಳೋ ಗುರು ಹಿರಿಯರ ಪಾದಕಮಲಕೆ ನೀ ಬೀಳೋ ನರರ ನಿಂದಾಸ್ತುತಿ ತಾಳೋ ದೇಹ ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3 ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ ಮಲ ಪೋಯಿತಲ್ಲದೆ ನಿರ್ಮಲ ಜ್ಞಾನ ಫಲಿಸದೆಂದಿಗು ಹೀನ ಬುದ್ಧಿ ಕಳೆದು ಸೇವಿಸು ಸಾಧುಗಳನನುದಿನ 4 ಜಿತವಾಗಿ ಪೇಳುವೆ ಸೊಲ್ಲಾ ಹರಿ ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5 ಜ್ಞಾನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ ದಾನಂದ ಪಡು ಬಯಸದಿರುಭಯವಾ ಸಾನುರಾಗದಿ ಬೇಡು ದಯವಾ ನೀ ಮ ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6 ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ ಆವಾಗ ಚಿಂತಿಸು ಭೂಮ್ಯಾದಿ ಭೂತಾ ಜೀವಿಗಳೊಳು ಜಗನ್ನಾಥ ವಿಠಲ ಗಾವಾಸ ಯೋಗ್ಯವೆಂದರಿಯೋ ಸಂತತಾ 7
--------------
ಜಗನ್ನಾಥದಾಸರು