ಒಟ್ಟು 436 ಕಡೆಗಳಲ್ಲಿ , 74 ದಾಸರು , 330 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗೆ ಅಂಜುವನಲ್ಲ ನೀರಜಾಕ್ಷ ಪ ಮನವಚನ ಕಾಯದಿಂ ನಿನ್ನವರಿಗಂಜುವೆನುಅ ರಾಗದಿಂದಲಿ ಇಂದ್ರದ್ಯುಮ್ನ ಭೂಪಾಲಕನು ಯೋಗ ಮಾರ್ಗದಿ ನಿನ್ನ ಭಜಿಸುತಿರಲು ಯೋಗ ಕುಂಭೋದ್ಭವನು ಬಂದು ಶಾಪವೆ ಕೊಡಲು ಆಗ ಮೌನದಲವನನೊಪ್ಪಿಸಿದ ಬಗೆ ಬಲ್ಲೆ 1 ಗುಣವಂತರೀರ್ವರು ಜಯವಿಜಯರು ನಿನ್ನ ಅನುಗಾಲ ಬಾಗಿಲನು ಕಾಯುತಿರಲು ಸನಕಾದಿಗಳು ಬಂದು ಶಪಿಸಲಾಕ್ಷಣದಲ್ಲಿ ಸನುಮತದಲವರ ನೀನೊಪ್ಪಿಸಿದ ಬಗೆಬಲ್ಲೆ 2 ನೃಗರಾಯ ಪುಣ್ಯ ಬರಬೇಕೆನುತ ವಿಪ್ರರಿಗೆ ನಿಗಮೋಕ್ತಿಯಿಂದ ಗೋದಾನ ಕೊಡಲು ಜಗಳ ಪುಟ್ಟಿತು ನೋಡು ಅನ್ಯೋನ್ಯರೊಡಗೂಡಿ ಮಿಗೆ ಶಾಪ ಕೊಡಲವನನೊಪ್ಪಿಸಿದ ಬಗೆ ಬಲ್ಲೆ 3 ಉಣಲಿತ್ತರೆ ಉಂಡು ಪೋಗಲೊಲ್ಲದೆ ಒಂದು ತೃಣದಲ್ಲಿ ಗೋವನ್ನೆ ರಚಿಸಿ ನಿಲಿಸಿ ಮುನಿಪ ಗೌತಮನಿಗೆ ಗೋಹತ್ಯವನು ಹೊರಿಸಿ ಕ್ಷಣದೊಳಗೆ ಅವನ ನೀನೊಪ್ಪಿಸಿದ ಬಗೆ ಬಲ್ಲೆ 4 ಅನಪರಾಧಿಗಳಿಗೆ ಇನಿತಾಯಿತೋ ದೇವ ಎನಗೆ ತನಗೆಂಬುವರಿಗಾವ ಗತಿಯೊ ಮಣಿದು ಬೇಡಿಕೊಂಬೆ ವಿಜಯವಿಠ್ಠಲರೇಯ ನಿನಗಿಂತ ಭಕುತಿ ನಿನ್ನವರಲ್ಲಿ ಕೊಡು ಎನಗೆ 5
--------------
ವಿಜಯದಾಸ
ನಿನ್ನ ಮಗನ ಲೀಲೆಯ ತಾಳಲಾರೆವೆ ನಾವುತರಳನ ದುಡುಕು ಹೇಳಬಾರದೆ ಗೋಪಾಲಕೃಷ್ಣಗೆಬುದ್ಧಿ ಅಮ್ಮ ಪ ಇಂದು ಚೆನ್ನಾಯಿತು ತಿಳಿದವನಲ್ಲವೆನೀ ಕೇಳೇ ಯಶೋದೆ ಅ.ಪ. ಬಾಲಕನೆಂದು ಲಾಲಿಸಿ ಕರೆದರೆಮೂಲೆ ಮನೆಯೊಳಗೆ ಪೊಕ್ಕು ಪಾಲು ಬೆಣ್ಣೆ ಮೊಸರೆಲ್ಲವ ಮೆದ್ದುಕೋಲಲ್ಲಿ ನೀರ ಕೊಡವ ಒಡೆದನೇಅಸಲ ವರ್ಣನವ ದಿಟ್ಟ ನಿತ್ಯಾ ಇವನ ಹೋರಾಟಹೆಬ್ಬಾಲೆಯರಲ್ಲಿ ನೋಟ ಬಹಳ ಬಗೆಯಲಿಪಿಡಿದೇವೆಂದರೆ ಮೇಲಿಯಂಜಲುಗಳವೋಡಿದಾಅಮ್ಮ ಇದು ಚೆನ್ನಾಯಿತು 1 ಮತ್ತೆ ಭಾಮಿನಿಯರೆಲ್ಲರು ಕೂಡಿಮಡುವಿನಲಿ ಜಲಕ್ರೀಡೆಯಾಡಲುಚಿತ್ತಚೋರ ಸೀರೆಗಳನೆಲ್ಲವ-ನೆತ್ತಿಕೊಂಡು ಮರವನೇರಿದನವ್ವಾಬೆತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲಈ ಯುಕ್ತಿಗಳೇ ಬಹುಬಲ್ಲಹತ್ತಿಲಿ ಬಂದು ಕರವೆತ್ತಿ ಮುಗಿದರೆವಸ್ತ್ರಗಳೆಲ್ಲವ ಕೊಡುವೆನೆಂದನೇ ಅಮ್ಮ 2 ಜಾರ ನೀನೆಂದರೆಪರಿಹಾಸ್ಯವ ಮಾಡಿದ ರಂಗವಿಠಲನ ಅಮ್ಮ3
--------------
ಶ್ರೀಪಾದರಾಜರು
ನಿಮ್ಮ ನುಡಿಗಳ ಕೇಳಲೆನಗೆ ಹೊತ್ತೆಲ್ಲಿಯದುನಮ್ಮ ಗೃಹಕೃತ್ಯಗಳು ಬಹಳವಾಗಿಹವೊ ಪನಮ್ಮಯ್ಯನೊಂದು ಗ್ರಾಮವನೇಕಸ್ವಾಮ್ಯದಲಿತಮ್ಮ ದಂಪತಿಗಳುಪಭೋಗಕೆಂದುತಮ್ಮಲ್ಲಿ ತಾವೆ ಸಂವಾದಿಸಿದರವರಲ್ಲಿಹಮ್ಮು ಕಡೆಯಾದ ಹದಿಮೂವರುದಿಸಿದರೂ 1 ಕ್ಲೇಶ ಬಡಿಸುವರು 2ಸ್ತ್ರೀ ಕಾಮನೆ ರಾಗ ಪ್ರತಿಕೂಲದಿಂ ದ್ವೇಷ ಬೇಕೆಂಬದನೆಕಾದುನುಳಿಯೆ ಕ್ರೋಧಾಆಕ್ರಮಿಸಿ ಸಕಲವನು ಬಚ್ಚಿಡುವನವ ಲೋಭಸಾಕು ಗುರುಹಿರಿಯರೆಂಬವರರಿಯೆ ಮೋಹಾ 3ನಿತ್ಯವಲ್ಲದ ಸಿರಿಯ ನಂಬಿ ಬೆರೆತಿಹಮದನುಉತ್ತಮರ ಕೂಡೆ ಸೆಣೆಸುವನು ಮತ್ಸರನುಮತ್ತೆ ಈಷ್ರ್ಯನು ದುಃಖನನ್ಯರಿಗೆ ಬಗೆಯುತಿಹವ್ಯರ್ಥದಿಂ ಬಸವಳಿಯುತಿಹನಸೂಯಕನು 4ದಂಭವನೆಂಬವನಲ್ಲಿ ಪುರುಷಾರ್ಥವಿಸಿಕಿಲ್ಲಹಂಬಲಿಸುತಿಹ ದರ್ಪಕೊಬ್ಬಿ ಬರಿದೆಉಂಬರೊಬ್ಬರಿಗಿಲ್ಲ ಸಕಲವೂ ನನಗೆಂದುದೊಂಬಿಯಲಿ ನಾ ಸಿಕ್ಕಿ ಬಳಲುತಿಹೆನಾಗಿ 5ವೃತ್ತಿಯೆರಡದರಲ್ಲಿ ಫಲವೆರಡು ಜನ್ಮಕ್ಕೆಬಿತ್ತಿ ಬೆಳೆವರೆ ಚೌಳು ಜಲವ ಕಾಣೆಒತ್ತರಿಸಿ ಬರುತಿರುವ ಜ್ಞಾತಿಗಳ ಬೆಂಕಿಯಲಿಹೊತ್ತು ಹೊತ್ತಿಗೆ ಬರಿದೆ ದಹಿಸುತಿಹೆನಾಗೀ 6ಬರಿಯ ಭ್ರಾಂತಿನ ಬಲೆಯ ಬೀಸಿ ನೋಡುತ್ತಿರುವತಿರುಪತಿಯ ವೆಂಕಟನ ಚರಣಗಳನುಕರಗಳಲಿ ಬಿಗಿಯಪ್ಪಿ ಶಿರವೆರಗಿ ಗುರುಮುಖದಿಅರುಪಿದುದ ನಿಲಿಸೆಂದು ಬೇಡಿಕೊಳುತಿಹೆನು 7ಕಂ||ತನುವಿನೊಳಭಿಮಾನವಿರಲೀಘನತರ ಸಂಸಾರ ದುಃಖ ತೊಲಗದು ಸತ್ಯತನು ನಿತ್ಯತೆದೋರ್ದಕಾರಣಮನದೊಡನಿಂತೆಂದು ಜೀವನನು ವಾದಿಸಿದಂ
--------------
ತಿಮ್ಮಪ್ಪದಾಸರು
ನೀಡುವರು ಮತ್ಯಾರಿಲ್ಲ ಪ ಬೇಡದಿರುವ ಸಜ್ಜನರಡಿಗಳ ಕೊಂ- ಡಾಡುತಲಿರು ನೀ ಹಗಲೆಲ್ಲ ಅ.ಪ ಕಾಸಾದರು ಹಿಡಿಕಾಳಾದರು ಹರಿ- ದಾಸರಿಗೋಸುಗ ಕೊಡಲಿಲ್ಲ ಲೇಸು ದೊರೆವುದೆಂದ್ಹಾರಾಡಿದರಾ- ಯಾಸವಲ್ಲದೆ ಫಲವಿಲ್ಲ 1 ನಿನ್ನಂತೆಯೆ ಪರರನು ನೋಡಿ ದಯೆ- ಯನ್ನು ಅವರಲ್ಲಿ ಇಡಲಿಲ್ಲ ಮುನ್ನಿನ ಕರ್ಮವು ಬಿಡದಲ್ಲ 2 ತಿಳಿವಳಿಕೆಯು ಸ್ವಪ್ನದಲಿಲ್ಲ ನೆಲದೊಳು ಬಚ್ಚಿಟ್ಟಿರುತಿಹ ದ್ರವ್ಯವು ಎಲೊ ನಿನಗದು ಸ್ವಾಧೀನವಲ್ಲ 3 ವ್ಯಾಪ್ತವಾಗಿ ಹೆಚ್ಚುವದೆಲ್ಲ ಆಪ್ತರು ದಾರಾ ಪುತ್ರಾದ್ಯರು ನಿ- ನ್ನಾದರಿಸುವರೊಬ್ಬರು ಇಲ್ಲ 4 ಕಾಮಕ್ರೋಧದೊಳಗೆ ಮುಳುಗಿ ನೀ ಕಂಡ ಕಂಡದು ಕೋರುವೆಯಲ್ಲ ಕ್ಷಣವಾದರು ನೆನೆ ಭಯವಿಲ್ಲ 5
--------------
ಗುರುರಾಮವಿಠಲ
ನೀನುಳಿಯೆ ರಕ್ಷಕರ ಕಾಣೆನೀ ಜಗದೊಳಗೆ ಶ್ರೀನಿವಾಸ ಜಗನ್ನಿವಾಸ ಪ ದೀನರಕ್ಷಕ ನಿಖಿಲ ಮಾನವರ ಮಾನಾಭಿ ಮಾನದೊಡೆಯನು ನೀನೆಯಲ್ಲದಿಲ್ಲಾ ಅ.ಪ ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ ಚಕ್ರವರ್ತಿಯು ಶರಣುಹೊಕ್ಕೆನೆನಲು ಚಕ್ರವನು ಪಿಡಿದು ನೀನಕ್ಕರೆಯೊಳೈತಂದು ನಕ್ರವದನವ ಸೀಳಿ ರಕ್ಷಿಸಿದೆ ಗಜವಾ ದೇವಾ 1 ಹಿಂದೆ ನಾನಾ ನಗರಿಯಿಂದ ಬಹದಾರಿಯೊಳು ಸಂದುಗಳೀಚಲು ಭಂಡಿ ಸಂಜೆಯೊಳಗೆ ಮುಂದಾಗ ಜೊತೆಯೊಳಗೆ ಬಂಧುಜನದಲ್ಲಿ ನೀ ಬಂದು ಬೆಳಕನು ತೋರಿ ಮುಂದೆಗೂಡಿದೆ ಕೃಷ್ಣಾ 2 ಇಂದು ನಿಜಸತಿಯು ನೊಂದಳುಬ್ಬಸರೋಗ ದಿಂದ ಗಾಳಿಯದೀಪದಂದಮಾಗಿ ನಂದಿ ಪೋಗದ ಮುನ್ನ ಬಂದು ನೀಮರೆಯಾಗು ಎಂದು ಮೊರೆಯಿಡಲಾಗ ಬಂದು ಸಲಹಿದೆ ತಂದೆ 3 ಗುರುಸುತನ ಸಂಯಮದೀ ಪುರದಿಂದ ತಂದಿತ್ತೆ ತುರುಗಾಯ್ವರಸುಗಳನು ಮರಳಿ ಪಡೆದೆ ನರಪೌತ್ರನ ಬಾಣದುರಿಯಿಂದ ರಕ್ಷಿಸಿದೆ ಸರಿಯಾರು ನಿನಗೆ ಸುರನರಭುಜಂಗರಲ್ಲಿ 4 ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಕರು ವರವಿಭೀಷಣ ತಾಪಸರನು ಪೊರೆದೆ ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರ ಗಿರಿಯೊಳಗೆ ನೆಲೆಸಿರುವ ವರದವಿಠಲರಾಯ 5
--------------
ವೆಂಕಟವರದಾರ್ಯರು
ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ ಮಚ್ಚುಗೊಳಿಸುವುದು ವಿಷಯದಲಿ ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ- ಅಚ್ಯುತನ ಪಾದವನು ನಂಬೊ ಪ್ರಾಣಿ ಪ ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ ಕೆಂಪು ಬಿಳಿದಿನ ವರ್ಣ ಮಿಳಿತ ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ- ಗಂಪು ನಾರುವುದು ಅದ ತೊಳೆಯದೆ ಇರಲು 1 ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ ಜನನಿ ಜನಕರು ಸುಖಿಸುತಿಹರು ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ ಕೊನೆಗೆ ಏನಾಗುವುದೊ ಪ್ರಾಣಿ 2 ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ ಭಳಿರೆ ಇವ ಮಹಾತ್ಮನೆಂದು ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ ಹಳಿದು ಹಲ್ತೆರೆದು ಅಣಕಿಪರೋ-ಪ್ರಾಣಿ 3 ಹುಬ್ಬಿನಿಂದಲೆ ಹೊಡೆದು ಹೃದಯದ ಕಗ್ಗಂಟು ಕಬ್ಬು ಕಾರ್ಮುಕನಿಂದ ಬಿಡಿಸಿ ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ ಉಬ್ಬಸವ ಬಡಿಸುವಳೊ ನಾರಿ ಪ್ರಾಣಿ 4 ಯೌವನವೊದಗಿದಾಗ ಏನೆಂದರೂ ಅಪ್ಪ ಅವ್ವಣ್ಣನೆಂದು ನಸುನಗುತ ಗವ್ವಳಿಕೆ ವೃದ್ಧಾಪ್ಯ ಬಂದೊದಗಲು ಇವನ ಬವ್ವನ ತೆರೆದಲಾಡಿಪರೋ-ಪ್ರಾಣಿ 5 ನಿಷ್ಠಕ್ಕೆ ದೇಹವನು ಮಾಡಿಕೊಂಡಂತೆ ನೀ ದುಷ್ಕರ್ಮಕೊಳಗಾಗದಿರೆಲೋ ನಿಷ್ಕಂಟಕವಾದ ಮಾರ್ಗದಲಿ ನರಹರಿಯ ನಿಷ್ಕಾಮದಲಿ ಭಜಿಸೊ ಮನವೆ ಪ್ರಾಣಿ 6 ಅಂ¨ಲಿಗೆ ಗೃಹಪಾಲ ಮನೆ ಮುಂದೆ ಹಗಲಿರುಳು ಹಂಬಲಿಸಿ ಬಿದ್ದಂತೆ ನೀನು ಕವಿ ಜೋತು ಬಿದ್ದು ಈ ಡಿಂಬವನು ಪೋಷಿಸದಿರೆಲವೊ-ಪ್ರಾಣಿ 7 ದೇಹಕ್ಕೆ ಬಲವಾಗಬೇಕೆಂದು ಎಲ್ಲರೊಳು ಕಂಡಲ್ಲಿ ಸ್ನೇಹಭಾವವನ್ನು ಬಯಸಿ ಕಾಯ ಪುಷ್ಟಿಯಿಂದ ಮೋಹಕ್ಕೆ ಒಳಗಾದೆಯಲ್ಲೋ-ಪ್ರಾಣಿ8 ಸ್ವಲ್ಪ ದಿನವುಳಿಯಿತು ಒಂದು ಸಾಧನ ಕಾಣೆ ಕಲ್ಪಾಯು ನಿನಗಿಲ್ಲವಲ್ಲೊ ಬಲ್ಪಂಥಗಳ ಮಾಡಿ ಭೋಗಪಡದಿರು ನಾಗ- ತಲ್ಪನ್ನ ಮೊರೆಹೋಗಲೋ-ಪ್ರಾಣಿ9 ದೇಶ ದೇಶವ ತಿರುಗಿ ಬಳಲಿ ಬಾಯಾರಿ ನೀ ಕ್ಲೇಶಕೊಳಗಾಗಿ ಹೊನ್ನುಗಳ ಏಸೇಸು ತಂದದ್ದು ಏನಾಯಿತೋ ಒಂದು- ಕಾಸು ನಾಳೆಗೆ ಕಾಣೆಯೋ-ಪ್ರಾಣಿ10 ಎಂದಿಗಾದರೋ ಇದೇ ಸಂಸಾರ ವಿಸ್ತಾರ ಒಂದಕ್ಕೆ ಒಂದೊಂದು ಅಧಿಕ ಬಂಧನವಲ್ಲದಲೆ ಲೇಶ ನಿರ್ಮಲ ಕಾಣೆ ಪೊಂದು ಸಜ್ಜನರಲ್ಲಿ ಮಂದ-ಪ್ರಾಣಿ11 ನಿತ್ಯ ಗಂಡಾಂತರದಿ ಬಿದ್ದು ಸಕಲಕ್ಕೆ ಕರ್ತೃ ನಾನೆಂದು ಕೂಗುವಿಯಲೊ ಮೃತ್ಯು ನಗುವುದು ನಿನ್ನ ಹೆಡತಲೆಯಲಿ ನಿಂದು ಚಿತ್ತದಲ್ಲಿ ತಿಳಿದು ತಲೆ ಬಾಗೊ-ಪ್ರಾಣಿ 12 ದೊಡ್ಡವನು ನಾನು ಎನಗೆಲ್ಲ ಜನರು ಬಂದು ಅಡ್ಡಬೀಳುವರೆಂಬ ಮಾತು ಹೆಡ್ಡತನ ತಾಳದಿರು ಕೊನೆಗೆ ಅನುಭವಕ್ಕು ಕಡ್ಡಿಯಂದದಿ ಮಾಳ್ಪರೋ-ಪ್ರಾಣಿ 13 ಕೋಟಿಯಾದರು ಕೇಳು ಅವರೋಕ್ಷಿಗಾದರೂ ಕೋಟಲೆಯೊಳಿರದೆ ಗತಿಯಿಲ್ಲ ತಾಟತೂಟಕ ಮಾಡಿ ಅವರಂತೆ ನುಡಿದು ಭವ ದಾಟಬೇಕೋ ಬೇಗ ಜಾಣ-ಪ್ರಾಣಿ14 ಆದರಿಸಿ ಸತಿಸುತರು ಬಂಧು ಬಳಗಕ್ಕೆ ಸಂ ಪಾದಿಸಿ ಧನ ಧಾನ್ಯ ತಂದು ಮೋದಪಡಿಸುವೆನೆಂದು ವಾದಿಸುವ ಮನುಜನ್ನ ಪಾದಕ್ಕೆ ಶರಣು ಸಾರೆಲವೋ-ಪ್ರಾಣಿ 15 ವನಧಿಯೊಳು ಸಪ್ತದ್ವೀಪದ ಮೃತ್ತಿಕೆ ಹಾಕೆ ದಣುವಿಕ್ಯಲ್ಲದೆ ಪೂರ್ಣವಹುದೆ ಇನಿತು ತಿಳಿಯೆಲ್ಲೆಲ್ಲಿ ತಂದ ಧನದಿಂದ ಭವ- ವನಧಿ ತುಂಬದು ಕಾಣೊ ಮರುಳೆ-ಪ್ರಾಣಿ 16 ನಿತ್ಯ ಬರೆದ ಲೆಖ್ಖವು ದಿವಾ ರಾತ್ರಿ ನೋಡುತಲಿದ್ದು ನಿನ್ನ ಪತ್ರ ಕರದಲಿ ಪಿಡಿದು ಈ ಮೂರ್ಖ ನರಮಹಿಷ- ಪುತ್ರನೆಂದು ನಸುನಗುವರಲ್ಲೋ-ಪ್ರಾಣಿ 17 ಎನಗೆ ತನಗೆಂದು ಯಮಭಟರು ಕರಗಳ ಹೊಯಿದು ಕಣಿದು ಭುಜ ಚಪ್ಪರುಸುತಿಹರೊ ಅನಿತರೊಳಗೆಚ್ಚರಿಕೆ ಎಚ್ಚತ್ತು ಹರಿಚರಣ ವನಜ ಧಾನ್ಯವ ಒಲವು ಮಾಡೊ-ಪ್ರಾಣಿ 18 ಶ್ರುತಿಗೆ ಅಪ್ರಾಮಾಣ್ಯ ಬಾರದಂತೆ ಮಧ್ವ ಮತಕೆ ವಿರೋಧವಾಗದಂತೆ ಕ್ಷಿತಿಯೊಳಗೆ ಸುಜನರಿಗೆ ಹಿತವಾಗುವಂತೆ ಶ್ರೀ- ಪತಿಯ ಸೇವಿಸಿ ಸುಗತಿ ಪಡೆಯೋ-ಪ್ರಾಣಿ 19 ಅರ್ಥಬಾರದು ನಿನ್ನ ಸಂಗಾತ ಕೇಳ್ ಕೊನೆಗೆ ವ್ಯರ್ಥಧಾವತಿ ಪ್ರಾಪ್ತಕರ್ಮ ತೀರ್ಥಯಾತ್ರೆಯ ಮಾಡಿ ನಿಸ್ಸಂಗನಾಗು ಯ_ ಥಾರ್ಥಾ ಜ್ಞಾನದಿಂದ ಬಾಳೊ ಪ್ರಾಣಿ20 ಶಿಥಿಲವಾಗಿ ಪೋಪ ದೇಹಕೆ ಮಮತಿಂದ ಮಿಥುನ ಭಾವಗಳನ್ನೆ ಬಯಸಿ ವ್ಯಥೆಪಟ್ಟು ಪಥತಪ್ಪಿ ನಡೆದು ನರಹರಿ ಸುಗಣ ಕಥೆಗೆ ವಿಮುಖನಾಗದಿರೆಲೊ-ಪ್ರಾಣಿ 21 ವನಗಿರೀ ನದಿ ಮೆದೆ ಹೊದರು ಗಹ್ವರ ಹುತ್ತ ವನರಾಶಿ ದ್ವೀಪ ಪಾತಾಳ ತನು ಮತ್ರ್ಯ ಸುರಲೋಕ ಜನನಿ ಜಠರದೊಳಿರಲು ಅಣು ಮಾತ್ರ ತಪ್ಪುವುದೆ ಬರಹ ಪ್ರಾಣಿ 22 ಹಲವು ಹಂಬಲ ಸಲ್ಲ ಆದ್ಯಂತಕಾಲದಲಿ ಗಳಿಸಿಕೋ ಪೂರ್ಣಾಯು ವಾಯು ಒಲಿಯದಲೆ ನಿನ್ನೊಳಗೆ ವಿಜಯವಿಠ್ಠಲರೇಯ ಸುಳಿಯ ಜಾಗ್ರತನಾ ಗೆಲೋ ಪ್ರಾಣಿ 23
--------------
ವಿಜಯದಾಸ
ನೈವೇದ್ಯವಿದು ಭುಂಜಿಸಲು ಯೋಗ್ಯವಾಗಿದೆಕೈವಲ್ಯದಾಯಕ ನೀನಾರೋಗಣೆ ಮಾಡು ಪಆದಿತ್ಯ ವಸು ರುದ್ರ ಬ್ರಹ್ಮಾದಿ ಸಕಲ ದೇವರ್ಕಳು ಮಂಡಲದೊಳಗಿಹರುಆದಿಯೊಳ್ ಭೂಮಿಯ ಪ್ರೋಕ್ಷಿಸಿ ಮತ್ತಲ್ಲಿಸಾಧಿಸಿ ಮಂಡಲವದು ರಂಜಿಸುತಲಿದೆ 1ಭೋಗ್ಯ ಭೋಕ್ತøಗಳೆಂದು ಬಗೆಯರಡಾಗಿದೆಭೋಗ್ಯವು ಜಗವಿದು ಭೋಕ್ತø ನೀನುಪ್ರಾಜ್ಞ ರೂಪದಿ ಸುಪ್ತಿ ಸುಖಸಾಕ್ಷಿರೂಪನೆಸಾಘ್ರ್ಯಪಾದ್ಯಗಳಿಂದ ಸತ್ಕರಿಸುವೆನೀಗ 2ಜಡಪ್ರಕೃತಿಯೆ ಪಾದವೆಂಟರ ಪೀಠವುಜಡವಿರಹಿತವಾದ ಪ್ರಕೃತಿ ತಾ ಮಣೆಯುದೃಢ ವಿವೇಕವೆ ದಿವ್ಯ ಹರಿವಾಣವದರಲ್ಲಿಒಡಗೂಡುವನುಭವವೆಂಬನ್ನ ಬಡಿಸಿದೆ 3ಇಪ್ಪತ್ತುನಾಲ್ಕು ತತ್ವಂಗಳೆ ಶಾಕಂಗಳೊಪ್ಪುವ ಬಹು ವಿಷಯಗಳೆ ವ್ಯಂಜನವುತಪ್ಪದೆ ಮಾಡುವ ಭಕ್ತಿ ತಾ ರಸವುತುಪ್ಪವು ಜೀವನ ಬೆರಸುವ ಗುಣವು 4ಪರಮನೊಳೈಕ್ಯವಾದನುಭವ ಕ್ಷೀರವುನೆÀರೆ ಪುಟ್ಟಿದಾನಂದ ತಾನೆ ಸಖ್ಖರೆಯುತಿರುಪತಿ ನಿಲಯ ಶ್ರೀ ವೆಂಕಟರಮಣನೆಕರುಣಕಟಾಕ್ಷದಿಂದಾರೋಗಣೆ ಮಾಡು5ಓಂ ನವನೀತವಿಲಿಪ್ತಾಂಗಾಯ ನಮಃ
--------------
ತಿಮ್ಮಪ್ಪದಾಸರು
ನೋಡಿದ್ಯ ರಂಗೈಯನ ನೋಡಿದ್ಯ ಪ ನೋಡಿದ್ಯ ಮನವೆ ನೀನಿಂದು ಕೊಂ- ಡಾಡಿದ್ಯ ಎದುರಲ್ಲಿ ನಿಂದು ಆಹ ಮಾ- ತಾಡಿದ್ಯ ವರಗಳ ಬೇಡಿದ್ಯ ನಿನ್ನೊಳು ಕೂಡಿ ನಲಿನಲಿದಾಡುವ ಶ್ರೀ ರೂಪ ಅ.ಪ. ಚರಣತಳದಲ್ಲಿ ಕೆಂಪು- ಶುದ್ದ ಅರವಿಂದ ಧ್ವಜ ವಜ್ರಸೊಂಪು- ಸ್ತುತಿ ಪÀರಿಗೆ ಸುರಂಘ್ರಿಪ ತಂಪು- ನೋಡ- ಲರಸಿ ಕಾಣದೊ ವೇದಗುಂಪು, ಆಹ ಹರಡಿ ಹಿಂಬಳೆ ಸಾಲ್ಬೆರಳೈದರ ಮೇಲೆ ಸುರುಚಿರ ರೇಖೆ ಚಂದ್ರಮನ ಸೋಲಿಪ ನಖ1 ಸರಸ ನೂಪುರ ಗೆಜ್ಜೆ ಪೆಂಡ್ಯ - ಹೊನ್ನ ಸರಪಳಿ ಪಾಡಗ ಕಂಡ್ಯ - ಹಿಂದೆ ಧರೆಗೆ ಮುಟ್ಟಿದ ಜಡೆಗೊಂಡ್ಯ - ಇದು ತರುಣಿ ಎನ್ನದಿರು ಕಂಡ್ಯ - ಆಹ ಬೆರಳಲ್ಲಿ ಇಟ್ಟ ಸುಂದರ ಪಿಲ್ಲಿಮೆಂಟಿಕೆ ಕಿರಿಪಿಲ್ಲಿ ಅಡಿಮೆಟ್ಟು ಮೆರೆವ ಕಾಲುಂಗರ2 ಝಣ ಝಣ ಗೆಜ್ಜೆನಾದ - ವನ್ನು ಎಣಿಸಲಾರದು ನೋಡಿ ವೇದಾ - ನಂತ - ಮೋದ - ಇದು ಅಣುರೇಣು ತೃಣಕಾಷ್ಠ ಭೇದ, ಆಹ ಪ್ರಣತಾರ್ತಿ ಹರವಾದ ಮಿನುಗುವ ಜಾನುದ - ರ್ಪಣ ನಾಚಿಪ ಜಂಘೆ ಎಣೆಗಾಣೆ ಸ್ತ್ರೀರೂಪ 3 ಊರುದ್ವಯಂಗಳು ರಂಭಾ - ಸ್ತಂಭ ಚಾರು ಪೊಕ್ಕುಳ ಸುಳಿಗುಂಭ - ತಂತ್ರಾ - ಸಾರೋಕ್ತದಿ ಪೂಜೆಗೊಂಬ - ವಿ ಸ್ತಾರ ಮಹಿಮೆ ಗುಣತುಂಬ, ಆಹ ನಾರಿ ಲಾವಣ್ಯದ ಪಾರ ಮೀರಿದ ಕಾಂತಿ ಆರಾರ ಮನಸಿಗೆ ತೋರದ ಪೆಣ್ಣಿನ4 ಉದಯರಾಗದ ದಿವ್ಯವಸನ - ಮೇಲೆ ಉದರ ತ್ರಿವಳಿ ಬಂದಿ ಹಸನ - ಕೇಳು ಮುದದಿಂದ ವಡ್ಯಾಣ ಬೆಸನ - ನೋಡು ಯದುಕುಲ ಜಾತ ಮಾನಿಸನ, ಆಹ ಮದಕರಿಯಂದದಿ ವಲಿದೊಲಿದಾಡಲು ಮದನಾರಿ ಮರುಳಾದ ಅದುಭುತ ಚರಿಯನ್ನ 5 ದೋರ್ಯ ಹರಡಿ ಕೈಕಟ್ಟು - ಚೂಡ್ಯ ಈರೈದುಂಗುರವುಳ್ಳ ಬೆಟ್ಟು - ಬಂ - ಗೀರು ಗಂಧವು ಗಂಬೂರ ಕರ್ಪೂರ ಕ- ಸ್ತೂರಿ ಲೇಪನ ಶೃಂಗಾರ ತ್ರಿವಳಿಯ 6 ತಾಯಿತು ಮುತ್ತ ಕಟ್ಟಾಣಿ - ತೋಳ ಮಣಿ - ವಂಕಿ ಕೇಯೂರ ಪಲ್ಲವ ಪಾಣಿ - ಉ ಪಾಯದಲ್ಲಿ ಘಟ್ಟಿ ಕಾಣಿ, ಆಹ ನೋಯದೆ ಸುರರಿಗೆ ಪೀಯೂಷ ವುಣಿಸಿ ದೈ- ತೇಯರ ಮಡುಹಿದ ಮಾಯದ ಕನ್ನಿಕೆ 7 ಸರಿಗೆ ಮುತ್ತಿನ ಚಿಂತಾಕ - ಕುಚ- ಕಂಚುಕ - ತೊಟ್ಟ ಭರದಿ ತೂಗುವ ಪಚ್ಚೆಪದಕ - ಕೆಳಗೆ ಹರಿ ನಡುಕಿಂಕಿಣಿ ಕನಕ, ಆಹ ಹರಳು ಕೆತ್ತಿದ ಚಿತ್ತರ ಮಾಟ ಕಟಿಸೂತ್ರ ಧರೆಗೆ ಶೋಭಿಪ ಸೀರೆ ನೆರೆಯ ವೈಭವವನು 8 ರನ್ನ ಪವಳ ಸರ ಥಳಕು - ಜೋಡು ಕನ್ನಡಿ ಹಾಕಿದ ಮಲಕು - ನೋಡು ಅನ್ನಂತ ಸೂರ್ಯರ ಝಳಕು - ಲೋಕ ಚನ್ನಾಗಿ ತುಂಬಿದ ಬೆಳಕು ಹೇಮ ಸಣ್ಣ ಮುತ್ತಿನ ಮೋ ಹನ್ನ ಏಕಾವಳಿ ಚಿನ್ನದ ಸರಗಳು 9 ಸಿರಿವತ್ಸ ಕೌಸ್ತಭ ಹಾರ-ವೊಪ್ಪೆ ವೈಜಯಂತಿ ಮಂದಾರ - ಮೇಲೆ ತರುಣ ತುಲಸಿ ಜನಿವಾರ - ಇಟ್ಟು ವರಭುಜಕೀರ್ತಿ ಕುಂಜರ, ಆಹ ಕರದಂತೆರಡು ತೋಳು ಎರಡೊಂದಾರು ಸಾ- ವಿರ ರೂಪನಾಗಿ ಶರೀರದೊಳಿಪ್ಪನ 10 ಕೂರ್ಮ ಕದಪು - ಕಣ್ಣಿ- ಗಿಕ್ಕಿದ ಸೊಬಗಿನ ಕಪ್ಪು - ತಲೆ - ಹಿಕ್ಕಿ ಬಾಚಿದ ಕೇಶ ಥಳಪು - ಸರ್ವ ಲಕ್ಕುಮಿ ದೇವಿಯ ಲೆಕ್ಕಿಸದೇ ಮಗನ ಪೊಕ್ಕುಳಿಂದಲಿ ವೆತ್ತ ಅಕ್ಕಜದಬಲೆಯ11 ಸೂಸುವ ದಾಡಿಯ ದಂತ - ಪಙÂ್ತ- ನಾಸ ಮೂಗುತಿಯಿಟ್ಟ ಶಾಂತ - ಸುಖ ಲೇಸು ಹಾಸ ಜಗದಂತ - ರಂಗ ಭಾಸ ಮಿಗಿಲು ಚಂದ್ರಕಾಂತ, ಆಹ ಸುಷುಪ್ತಿಯಲ್ಲಿ ಭೂಶ್ವಾಸ ಬಿಡುವರನ್ನು ಲೇಸಾಗಿ ಸಲಹುವ ದೋಷನಾಶನ ರೂಪ12 ಎಸೆವ ಪಂಜರದೋಲೆ ಕಿವಿಯ-ಹೊನ್ನ ಕುಸುಮ ಕೂಡಿದ ಬಾವಲಿಯ - ತಿದ್ದಿ ಕುಸುರಿಯಿಕ್ಕಿದ ಸರಪಣಿಯ - ಚಿನ್ನ ಸೋಸಲು ಕುಂಕುಮ ರ್ಯಾಕಟೆಯ, ಆಹ ಎಸಳು ಕೇದಿಗೆ ಬಹು ಕುಸುಮವ ಮುಡಿದದ್ದು ವಶವಲ್ಲ ಚೌರಿ ಅರಸಿನ ಪೂಸಿದ ಹೆಣ್ಣ13 ಕಪೋಲ - ಪೊಸ- ಮೌಳಿ ಕೈಯಲ್ಲಿ ಕಡೆÀಗೋಲ - ನೇಣು ಪಾಲಯ ಪಿಡಿದ ಸುಶೀಲ - ಧರೆಯ - ಶೂಲಿಯ ನೆಲೆಸಿದ ಖೂಳನ ಸದೆದು ಹಿ- ಯ್ಯಾಳಿಸಿ ಮೆರೆದ ಗೋಪಾಲನೆಂಬ ಹೆಣ್ಣ14 ರಜತ ಪೀಠ ಪುರಾಧೀಶ - ನಂದ ವ್ರಜದೊಳಾಡಿದ ಸರ್ವೇಶ - ನಮ್ಮ ವಿಜಯವಿಠ್ಠಲ ನಾರಿವೇಷ - ತನ್ನ ನಿಜಭಕ್ತ ಮಧ್ವಮುನೀಶ, ಆಹ ತ್ರಿಜಗ ಮಧ್ಯದಲಿ ನಿಜ ಪದವಿಯನಿತ್ತು ಸುಜನರಿಗೊಲಿದನ್ನ15
--------------
ವಿಜಯದಾಸ
ನೋಡೊ ಮನ ಕೊಂಡಾಡೊ ಮರೆಯದಲೆ ಮನ ಚಿಂತÀ ಲ್ರೇವ ಲೇಶನ ? ಪಾಡುತಿರೆ ಕೃಷ್ಣಾತೀರದ್ವಾಸನ ಮಾಡೊ ಮಹಾತ್ಮರೆಂದೆನಿಸೊ ದಾಸರ ಜೋಡು ಪಾದಂಗಳಿಗೆ ವಂದನೆ ಪ ಅಂಜನೆಯಲ್ಲುದಿಸಿ ಕೌಸಲ್ಯಾ- ಕಂದನಂಘ್ರಿಕಮಲ ಸೇವೆಗೆ ಅಂಗದ ಮೊದಲಾದ ಕಪಿಗಳ ಸಂಗ ಬಿಟ್ವಾರಿಧಿಯನ್ಹಾರುತ ಭಂಗ ಬಡಿಸುತ ರಾವಣನ ಪುರ ಮಂಗಳಾರತಿ ಮಾಡಿ ಜಾನಕಿ ಗುಂಗುರವನಿಟ್ಟೆರಗಿ ರಾಮರಿ ಗಂಗನೆಯ ವಾರ್ತೆಗಳನರುಹಿದೆ1 ಕುಂತಿಸುತನಾಗ್ಯುದಿಸಿ ಬ್ಯಾಗನೆ ಪಂಥಮಾಡುತ ಕೌರವರ ಕುಲ- ಕಂತಕನು ನಾನೆಂದು ರಣದೊಳು ನಿಂತು ಗದೆ ಹಾಕವರ ಸವರುತ ಅಂತರಂಗದಿ ಹರಿಯ ದಿವ್ಯಾ- ನಂತ ಗುಣಗಳ ತಿಳಿದು ದ್ರೌಪದೀ- ಕಾಂತನೆನಿಸಿ ತಾ ಕರುಣನಿಧಿಗೇ- ಕಾಂತ ಭಕ್ತನೆಂದಿನಿಸಿದಾತನು 2 ಮಧ್ಯಗೇಹಭಟ್ಟರಲ್ಲಿ ಮಗನಾ- ಗಿದ್ದ ಸುಜನರಭೀಷ್ಟದಾಯಕ ಗೆದ್ದು ಮಾಯಾವಾದಿಗಳನೆ ಪ್ರ ಸಿದ್ಧಿನೆನಿಸಿದೆ ಸರ್ವಲೋಕದಿ ಶುದ್ಧ ಜ್ಞಾನಾನಂದತೀರ್ಥರು ಮಧ್ವಮತದ ಬಿರುದನೆತ್ತಿದ ಪದ್ಮಪತಿ ಭೀಮೇಶಕೃಷ್ಣಗೆ ಪರಮಭಕ್ತನೆಂದೆನಿಸಿದಾತನು 3
--------------
ಹರಪನಹಳ್ಳಿಭೀಮವ್ವ
ಪಕ್ಷಿವಾಹನ ಸತ್ಯಭಾಮೆ ಸದನದ್ವಾರದಿ ನಿಂತು ಸದನದ್ವಾರದಿ ಮಿತ್ರೆ ಎನಗೆ ಕದವ ತೆಗೆಯೆ ಬರುವೆ ತೀವ್ರದಿ 1 ಸಾಕೊ ಸಾಕೊ ನಿನ್ನ ಸಂಗ ಯಾಕೊ ಕೃಷ್ಣನೆ ನಮಗಿನ್ಯಾಕೊ ಕೃಷ್ಣನೆ ಅ- ನೇಕ ಸ್ತ್ರೀಯರಿಂದ ರಮಿಸ್ಹೋಗಾದಿ ಪುರುಷನೆ 2 ವಾಕು ವಾಕು ತಿಳಿಯದೊ ವಿ- ವೇಕದಿಂದ ನಿಂತು ಪೇಳೆ ಮಾತುಯೆನ್ನೊಳು 3 ಎನ್ನ ಬಿಟ್ಟು ಅನ್ಯಸ್ತ್ರೀಯರ ಮನೆಗೆ ಪೋಗುವಿ ಸ್ತ್ರೀಯರ ಮನೆಗೆ ಪೋಗುವಿ ಘನ್ನ ಘಾತಕತನದಿಂದಿಲ್ಲಿಗಿನ್ನು ಬರುವರೆ 4 ನಿನ್ನ ಸರಿಯಸವತೇರೆನಗೆ ಸತಿಯರಲ್ಲವೆ 5 ಅತ್ತಸಾಗೊ ರುಕ್ಮಿಣಿ ಒಲವು ಚಿತ್ತವ್ಹಿಡಿಯದೆ ಆಕೆ ಚಿತ್ತವ್ಹಿಡಿಯದೆ ಲೆತ್ತಪಗಡೆನಾಡದ್ಹೀಗೆ ಇತ್ತ ಬರುವರೆ6 ಕಾಳಕತ್ತಲು ಪ್ರಳಯಜಲದಿ ಕಾದುಕೊಂಡೆನ್ನ ಇರುವೋಳು ಕಾದುಕೊಂಡೆನ್ನ ಆದಿಲಕ್ಷ್ಮಿ ಮುನಿದರೆನಗಿನ್ನಾ ್ಹ್ಯಗೆ ಭಾಮಿನಿ 7 ಜಾಂಬುವಂತೇರ್ಹಂಬಲಬಿಟ್ಟು ಬಂದ ಕಾರಣ ನೀನು ಬಂದ ಕಾರಣ ಆ- ನಂದ ಬಡಿಸುತವರ ಗೃಹದಲ್ ಹೊಂದಿಕೊಂಡಿರು 8 ಜಾಂಬುವಂತೇರಿಂದ ಬಂದ ನಿಂದ್ಯ ಕಳೆದನೆ ನಾ ಅಪನಿಂದ್ಯ ಕಳೆದೆನೆ ತಂದು ರತ್ನತೋರಿ ನಿನ್ನ ತಂದೆ ಭಾಮಿನಿ 9 ಕಮಲನಾಭ ಕಾಳಿಂದಿ ಕಳವಳಿಸುವಳೊ ಕಾಣದೆ ಕಳವಳಿಸುವಳೊ ಕಾಣದೆ ಕಾಲಕಳೆಯೊದ್ಯಾ ್ಹಗಿನ್ನಾಕೆ ಆಲಯಕೆ ಪೋಗೊ 10 ಭಾಳ ತಪಸಿಲ್ವಲಿಸಿ ಭಾರ್ಯಳಾದ ಬಗೆ ನೀ ಅರಿಯದೆ 11 ನೀಲವರ್ಣ ನೀಲಾದೇವಿ ನಿನ್ನ ಕಾಣದೆ ಇರುವಳು ನಿನ್ನ ಕಾಣದೆ ಗಮನ ನಿಲ್ಲದೆ ನೀ ಪೋಗೊ 12 ಸಪ್ತಗೂಳಿ ಕಟ್ಟಿ ನಾ ಸಮರ್ಥನೆನಿಸಿದೆ ಬಲು ಸಮರ್ಥನೆನಿಸಿದೆ ನೀಲ ನನಗೆ ಶ್ರೇಷ್ಠಳಲ್ಲವೆ 13 ಎದ್ದು ಪೋಗಾಕಿದ್ದಸ್ಥಳಕಿಲ್ಲಿರಲು ಸಲ್ಲವೊ 14 ಅರಸರಾಕೆ ಅಗ್ರಜರೈವರು ಕರೆಸಿ ಕೇಳೋರೆ ಎನ್ನ ಕರೆಸಿ ಕೇಳೋರೆ ಹೋಗಿ ಹರುಷ ಬಡಿಸದಿರಲು ಆಕೆನ್ನರಸಿ ಅಲ್ಲವೆ 15 ಆಕೆ ಸಿಟ್ಟಿಲಿಂದ ದೃಷ್ಟಿತೆಗೆದು ಎನ್ನ ನೋಡಳೆ 16 ನಿನಗೆ ಇಷ್ಟು ಕ್ರೋಧ ನಿಷ್ಠೂರ್ವಚನ ಬ್ಯಾಡೆ ಭಾಮಿನಿ 17 ಲಕ್ಷಣ ದೇವೇರಲ್ಲಿ ಭಾಳಾಪೇಕ್ಷವಲ್ಲವೆ18 ನಾನು ಲಕ್ಷಣೆಯನೆ ತಂದೆ ಕೇಳೆ ಸತ್ಯಭಾಮೆ ನೀ 19 ಹತ್ತು ಆರು ಸಾವಿರ-ಶತ ಪತ್ನೇರಿಲ್ಲವೆ ನಿನಗೆ ಪತ್ನೇರಿಲ್ಲವೆ ತಿರುಗಿ ಸುತ್ತಿ ಸುತ್ತಿ ಹಾದಿ ಹೀಗೆ ತಪ್ಪಿಬರುವರೆ 20 ದಾರಮನೆಗೆ ಹೋಗಲೆನ್ನ ದೂರು ಮಾಡೋರೇ ಹೀಗೆ ದೂರು ಮಾಡೋರೇ ಸ್ವಾಮಿ ಪಾರಿಜಾತಕೊಟ್ಟ ಸತಿಯಲ್ಲೊ ್ಹೀಗಿರೆಂಬರೆ 21 ಸರಸವಾಡದಿರೊ ಶ್ರೀರಮಣ ಅರಸೇರ್ಯಾತಕೊ ನಿನಗೆ ಅರಸೇರ್ಯಾತಕೊ ಹರುಷದಿಂದ ಎರಗದೆನ್ನ ಶಿರಸಿದ್ಯಾತಕೊ 22 ಶ್ರೀಶ ಎನ್ನ ಮನದಲಿರೊ ಭೀಮೇಶಕೃಷ್ಣನೆ ಇರೊ ಭೀಮೇಶಕೃಷ್ಣನೆ ನಿನ್ನ ವಿಲಾಸ ಬಯಸದಿರುವರ್ಯಾರೊ ಇಂದಿರೇಶನೆ 23
--------------
ಹರಪನಹಳ್ಳಿಭೀಮವ್ವ
ಪದ್ಮನಾಭ ವಾಕು ತಾನೂ ಮೊದಲುನಾದರೂಪದಿ ತೋರಿ ನಾಲ್ಕು ವಿಧದಿಪಾದವೆರಡು ಪರಾ ಪಶ್ಯಂತಿಯೆಂದುಭೇದದಿ ಮಧ್ಯಮ ವೈಖರಿಯೆರಡಿಂ ಪಾದೀ ಸರಿಗಮಪದನಿ ಯದೆನಿಪ 1ಶ್ರುತಿಗಳ ಸಂಜ್ಞೆುಂದ ಸಾರಾವಾದಾ ಸ್ವರದತತಿಯಾಗಿ ಸೋಪಾನವ ತಾನು ಸೇರುತಗತಿುಂದಲೇರುತಿಳಿದು ಗುಣಗಳಿಂದಲೆಸತತವು ಷಡ್ಜಗಳೇಳನು ಸೂಚಿಸಿ ಮತದಲಿ ನಿನ್ನಯ ಮಹಿಮೆಯ ಪೇಳ್ವ 2 Éೂೀಕವೀರೇಳರಲ್ಲಿ ಲೀಲೆುಂದ ನೀನುಸೋಕಿ ಸೋಕದ ಹಾಗೆ ಸಂಚರಿಪುದವಾಕೊಂದೆ ಬಹಳ ಶಬ್ದವೆನಿಸಿಕೊಳುತಏಕನು ತಿರುಪತಿಯೊಡೆಯನನೇಕದಿ ಸಾಕುವ ವೆಂಕಟಸ್ವಾಮಿಯುಯೆನುವಾ 3ಓಂ ಉತ್ತಾಳೋತ್ತಾಳ ಭೇತ್ತ್ರೆ ನಮಃ
--------------
ತಿಮ್ಮಪ್ಪದಾಸರು
ಪದ್ಮಾಪತಿ ವಿಠಲ ನೀನಿವಳ ಸಲಹ ಬೇಕೋ ಪ ಪದ್ಮ ಸಂಭವ ಜನಕ ಪದ್ಮದಳ ನೇತೃ ಹೃತ್ಪದ್ಮ ದೋಷಗಳ ತಿದ್ದಿ ಕಾಪಾಡೊ ಹರಿಯೇ ಅ.ಪ. ಜನ್ಮಜನ್ಮಾಂತರದ ಪುಣ್ಯ ಸಂಚಯದಿ ಶ್ರೀಮನ್ಮಧ್ವಮತದಲಿ ಜನ್ಮ ತಾಳಿಹಳೋ |ಕರ್ಮನಾಮನೆ ಅನಾದ್ವವಿದ್ಯಾಕಾಮಕರ್ಮಗಳನೆ ಕಳೆವ ಸನ್ಮಾರ್ಗವನೆ ತೋರೊ 1 ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರವನೆ ತಿಳಿಸಿ ಸಂಸಾರನಿಧಿ ದಾಟಿಸೋಕಾರುಣ್ಯ ನಿಧಿ ಮೂಲ ಕಾರಣನು ನೀನೆಂದುಸಾರಿಬೇಡುವೆ ನಿನ್ನ ಪಾರು ಮಾಡಿವಳಾ 2 ಪತಿಸುತರು ಹಿತರಲ್ಲಿ | ಮತಿಮತಾಂವರಲ್ಲಿಕೃತಿಪತಿಯ ವ್ಯಾಪ್ತಿ ಸನ್ಮತಿಯನೇ ಕೊಡುತಹಿತದಿ ಸೇವೆಯಗೈಸು ಕೃತಕಾರ್ಯಳೆಂದೆನಿಸುಗತಿ ವಿಹೀನರಿಗೆಲ್ಲ ಗತಿಪ್ರದನೆ ಸ್ವಾಮೀ 3 ನಿನ್ನ ಸ್ಮøತಿಗಿಂದಧಿಕ ಅನ್ಯಸಾಧನ ಕಾಣೆಘನ್ನ ಈ ಕಲಿಯುಗದಿ ಪ್ರಾಣಾಂತರಾತ್ಮ |ಪುಣ್ಯ ಫಲದಾತ ಪ್ರಪನ್ನ ಪರಿಪಾಲಕನೆನಿನ್ನ ಸಂಕೀರ್ತನವ ಸರ್ವದಾ ಕೊಡು ಹರಿಯೇ 4 ಭಾರ ನಿನ್ನದೊಸ್ವಾಮಿಮಧ್ವಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪರಬೊಮ್ಮನ ಧ್ಯಾನಿಸು ಕಂಡ್ಯಾ ಸೋಹಂ ಎನುತಿರಕಂಡ್ಯಾ ಪ ಒಂದು ನಿಮಿಷ ಸುಖವಿಲ್ಲ ವಿಧಿ ಏಳೇಳೆಂದು ಎಳೆವರಲ್ಲ ಗೋವಿಂದನೆ ತಾ ಬಲ್ಲ 1 ಯೋನಿಯೊಳಗೆ ಜನಿಸಿ ನಾನದನೆಲ್ಲವ ನುಳಿದು ಈಗಳು ನರಮಾನವನೆಂದೆನಿಸಿ ಏನೋ ಪುಣ್ಯದಿ ಪುಟ್ಟಿದೆ ನಿಲ್ಲಿ ನಿಧಾನದಿ ಸಂಚರಿಸಿ ಆನಂದ ಮಯನೆನಿಸಿ 2 ಎಲ್ಲಾ ಜನ್ಮದೊಳ್ಳಿತು ನೀನಿದರಲ್ಲಿ ಸಾಧಿಸುಗತಿಯಾ ಹೊಲ್ಲದ ತನುವಿದ ನಂಬಿ ನೀ ಕೆಡದಿರು ಪೊಳ್ಳೆ ನಿನಗೆ ತಿಳಿಯ ಬಲ್ಲಡೆ ಜಿಹ್ವೆಯೊಳಗೆ ನೀ ನಿರಂತರ ಸೊಲ್ಲಿಸು ಶ್ರೀಹರಿಯ ಲಕ್ಷ್ಮೀನಲ್ಲನ ಪೋಗು ಮರೆಯ 3
--------------
ಕವಿ ಪರಮದೇವದಾಸರು
ಪಾಂಡವಪಕ್ಷ ಪಾರ್ಥಸಾರಥಿಗೆ ಆಂಡಾಳ್ ಮಾಲೆಯ ಧರಿಸಿದಳು ಪ ಸೃಷ್ಟಿಜಾತೆಯು ಶೃಂಗಾರವಾಗಿ ಬಂದು ಕೃಷ್ಣಮೂರುತಿಯೆದುರಲ್ಲಿ ನಿಂದು ಅಷ್ಟವಿಧದ ಪುಷ್ಟಮಾಲೆಗಳನ್ನು ತೆಗೆದು ತಟ್ಟೆಯೊಳಗೆ ಇಟ್ಟು ಕಳುಹಿದಳು 1 ಆದಿಮೂರುತಿ ಮಂಟಪದಲ್ಲಿ ಕುಳಿತಿರೆ ಶ್ರೀದೇವಿ ಭೂದೇವಿ ಸಹಿತವಾಗಿ ವೇದಮೂರುತಿಯನು ನೋಡಿ ಸಂತೋಷದಿ ಗೋದಾದೇವಿಯು ಮಾಲೆ ಧರಿಸಿದಳು 2 ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ ಇರುವಂತಿಗೆ ಪಚ್ಚೆ ಮುಡಿದಾಳ ಪರಿಪರಿ ಪುಪ್ಪದ ಸರಗಳ ಪಿಡಿದು ಧರಣಿದೇವಿಗೆ ಸ್ವಾಮಿ ಧರಿಸಿದಳು 3 ತಾಳೆ ಚಂಪಕ ವಕುಳಮಾಲೆ ಮಂದಾರಪುಷ್ಪ ಕಮಲ ಸುಗಂಧರಾಜ ನೀಲವರ್ಣನ ಮುಖ ನೋಡಿ ಸಂತೋಷದಿ ನೀಳಾದೇವಿಯು ಮಾಲೆ ಧರಿಸಿದಳು 4 ಕಮಲವ ಕರದಲ್ಲಿ ಪಿಡಿದಿಹ ಕಾಂತೆಗೆ ಕಮಲವದನೆಯೆಂದೆನಿಸಿದವಳಿಗೆ ಕಮಲಾಕ್ಷಿಗೆ ಶ್ರೀವೆಂಕಟಕೃಷ್ಣನು ಕಮಲನಾಭನು ಮಾಲೆ ಧರಿಸಿದನು 5
--------------
ಯದುಗಿರಿಯಮ್ಮ
ಪಾದ ನಿತ್ಯ ನಿತ್ಯ ಸುಖವೇ ಸುಖವು 1ಜ್ಞಾನ ಗಂಗಾ ನದಿಯು ವೈರಾಗ್ಯ ಯಮುನೆಯು ಸದ್ಭಕ್ತಿ ಸರಸ್ವತೀ ಈ ಬಗೆಯ ತ್ರಿವೇಣಿಸಂಗಮವು ಇವರಲ್ಲಿ ಎದ್ದು ಕಾಣುವದು ನಿತ್ಯ 'ಜಯರಾಯರ ನೆರಳಿನಿಂದಲಿ ಸರ್ವದಾ ಅವರಲ್ಲಿ ಇವರವಾಸಗುರುಭಕ್ತಿಯಲಿ ಇವರ ಸರಿ'ುಗಿಲು ಯಾರಿಲ್ಲಭಾಗಣ್ಣದಾಸರಿವರೇ ಅವರು 2ಪಂಢರಾಪುರದ ಶ್ರೀ ಪಾಂಡುರಂಗನು ಇವರ ಭಕ್ತಿಭಾವಕೆ ಮೆಚ್ಚಿದಾಬಹುದಿವಸ ತನ್ನದರುಷನಕೆ ಬರಲಿಲ್ಲೆಂದು ಕಳವಳದಿ ಪಾಂಡುರಂಗಾಕುದುರೆಯನು ಏರಿ ತಾನೆ ಅವರಬಳಿ ಪೋಗಿ 'ಆಲೆ ನಾ'' ಎಂದು ಕರೆದಾಮರುದಿನವೆ ಪಂಢರಿಗೆ ತ್ವರದಿ ಓಡುತ ಹೋಗಿಭೂಪತಿ'ಠ್ಠಲನ ಬಿಗಿದೊಪ್ಪಿಕೊಂಡಾ 3
--------------
ಭೂಪತಿ ವಿಠಲರು