ಒಟ್ಟು 462 ಕಡೆಗಳಲ್ಲಿ , 76 ದಾಸರು , 411 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಜಾನಕಿ ಜೊ ಚಂದಿರ ಮುಖಿ ಮಾಂಗಲ್ಯದಾಯಕಿ ಮಾಡೇ ನಿದ್ರೆ ಜೋ ಜೋ 1 ಆದಿಮಾಯಳೆ ವೇದವೇದ್ಯಳೆ ಆದಿತೇಯನುತೆ ಭೂಮಿಜಾತೆ 2 ಮೃಗಮದಗಂಧಿನಿ ಮಾಧುರ್ಯಭಾಷಿಣಿ ಮಗಳೆ ಜಾನಕಿಯೆ ಕಂಬುಕಂಧರಿಯೇ 3 ಕಂಜಲೋಚನಿ ಕಂಜಭವಜನನಿ ಕುಂಜರಗಮನಿ ಸಂಜೀವನಿ 4 ವಾರಿಜನೇತ್ರೆ ವಾಸುವಸ್ತೋತ್ರೆ ಮಾರಜನನಿ ಲಕ್ಷ್ಮೀನಾರಾಯಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಜೋ ಜೋ ಜೋ ಜೋ ಸಹ್ಲಾದರಾಜ ಜೋ ಜೋ ಜೋ ಜೋ ಪ್ರಹ್ಲಾದನನುಜ ಜೋ ಜೋ ಜೋ ಜೋ ಜಾತರೂಪ ಶಯ್ಯಜ ಜೋ ಜೋ ಜೋ ಜೋ ಭಕ್ತಸುರ ಕಲ್ಪಭೂಜ ಪ ಮನುಜ ಮೃಗಾರ್ಯರ ಸುತನೆನಿಸಿಸುತ ಅಣುಗ್ರಾಮ ಬ್ಯಾಗವಾಟದಿ ಜನಿಸುತ ಮುನಿ ವರದೇಂದ್ರತೀರ್ಥರ ಸೇವಿಸುತ ಅನಿಲ ಸುಶಾಸ್ತ್ರವನರಿತ ಸುದಾತ 1 ಗುರುಧೇನುಪಾಲ ದಾಸಾರ್ಯರ ಮಮತ ಪರಿಪೂರ್ಣದಿಂದ ನೀ ಪರಮ ಪುನೀತ ಸಿರಿಜಗನ್ನಾಥವಿಠಲಾಂಕಿತ ಶರಧಿಜ ಭಾಗದಿ ಪಡೆದ ಪ್ರಖ್ಯಾತ 2 ಸರಸಿಜ ತುಲಸಿ ಸುಮಾಲೆ ಶೋಭಿತ ವರದಿ ಸ್ವಾದಿ ರಾಜೇಂದ್ರಾರ್ಯರ ಪ್ರೀತ ಹರಿಕಥಾಮೃತ ಗ್ರಂಥ ವಿರಚಿತ ಪುರುಹೂತರಾರ್ಯರ ಪ್ರೇಮದ ಪೋತ 3 ಗುಣನಿಧಿ ದ್ವಾಪರದಲ್ಲಿ ಪುಟ್ಟುತ ಫಣಿವರ ಕೇತನ ಮೊರೆ ಲಾಲಿಸುತ ದಿನಮಣಿ ಜಾತನ ದಿವ್ಯ ವರೂಥ ಮಾನಿತ ಮಾನವಿ ಕ್ಷೇತ್ರ ನಿವಾಸ4 ಶ್ರೀ ನಿಧಿ ಶಾಮಸುಂದರ ದಾಸ ದುರಿತ ವಿನಾಶ ಹೀನ ಮತಾಖ್ಯ ಪನ್ನಗಕುಲವೀಶ 5
--------------
ಶಾಮಸುಂದರ ವಿಠಲ
ಜೋ ಜೋ ವ್ಯಾಸ ತತ್ವಜ್ಞ ಮುನೀಂದ್ರ ಜೋ ಜೋ ಮಧ್ವ ಮತಾಂಬುಧಿ ಚಂದ್ರ ಜೋ ಜೋ ಮಾಯಿ ಮತ್ಯೇಭ ಮೃಗೇಂದ್ರ ಜೋ ಜೋ ಭಕ್ತ್ಯಾದಿ ಸದ್ಗುಣ ಸಾಂದ್ರ ಜೋ ಜೋ 1 ವೇಣುಗೋಪಾಲ ಪದಾಂಬುಜ ಭೃಂಗ ವೇಣಿ ಸೋಮಪುರ ಸುಧಾಮಶುಭಾಂಗ ಆ ನತಜನ ಸುರಧೇನು ಕೃಪಾಂಗ ಮಾನಿತ ಸದ್ವಿಜಯಯತಿ ಕÀುಲೋತ್ತುಂಗ 2 ಭೂಮಿ ಸುರಸ್ತುತ ಪಾವನ ಚರಿತ ಸೌಮಿಭಕ್ತ ಕಾಮಿತದಾತ ಸ್ವಾಮಿ ಶ್ರೀಕಾರ್ಪರ ನರಮೃಗನಾಥ ಭವ ಜ್ಞಾನ ಪ್ರದಾತ 3
--------------
ಕಾರ್ಪರ ನರಹರಿದಾಸರು
ಜೋ ಜೋ ಶ್ರೀಗುರು ಪ್ರಹ್ಲಾದರಾಜ ಜೋಜೋ ಭಜಕರ ಕಲ್ಪಮ ಹೀಜ ಸ್ತಂಭ ದರ್ಶಿತ ನರಮೃಗರಾಜ ಜೋಜೋ ಭಂಗಾರಕÀಶಿಪುತನುಜ ಜೋ ಜೋ 1 ಚಂದ್ರಿಕಾದಿ ಸದ್ಗ್ರಂಥತ್ರಯದಿಂದಾ ನಂದಿತ ಭೂಮಿ ವೃಂದಾರಕ ವೃಂದಾ ವಂದಿಪರಘಕುಲ ಪನ್ನಗವೀಂದ್ರ ವಂದಿಸುವೆನು ಗುರು ವ್ಯಾಸಯತೀಂದ್ರ2 ಜೋ ಜೋ ಮಧ್ವಮತಾಂಬುಧಿ ಚಂದ್ರ ಜೋ ಜೋ ಮಾಯಿ ಮತ್ತೇಭ ಮೃಗೇಂದ್ರ ಜೋ ಜೋ ಜ್ಞಾನಾದಿ ಸದ್ಗುಣ ಸಾಂದ್ರ ರಾಜಾಧಿರಾಜ ಶ್ರೀ ಗುರು ರಾಘವೇಂದ್ರ 3 ಮಂತ್ರಮಂದಿರದಿ ನಿಂತು ಶೇವಕರ ಚಿಂತಿಪ ಫಲಗಳ ಕೊಡುವ ಉದಾರ ಎಂತು ತುತಿಸಲಿ ತನ್ಮಹಿಮೆ ಅಪಾರ ಮುಕ್ತಿ ಪಂಥವ ತೋರಿಸಿ ಮಾಡೊ ಉದ್ಧಾರ 4 ಶುಭ ಚರಿಯ ನಿರುತಸ್ಮರಿಪರಘ ತಿಮಿರಕೆ ಸೂರ್ಯ ಧರಿಸುರ ಶೇವಿತ ಪರಿಮಳಾಚಾರ್ಯ ಶಿರಿ ಕಾರ್ಪರನರಹರಿ ಗತಿ ಪ್ರಿಯ5
--------------
ಕಾರ್ಪರ ನರಹರಿದಾಸರು
ಜ್ಜನನಿ ಪೊರೆಯೆ ರುದ್ರಾಣಿ ಪ. ಅಘಸಂಹಾರಿಣಿ | ಮೃಗಪತಿವಾಹಿನಿ || ಅಗಣಿತಗುಣಮಣಿ | ಭಗವತಿ ಶ್ರೀ ಜಗ ಅ.ಪ. ಸಿರಿ ಕಾತ್ಯಾಯಿನಿ | ಗೌರಿ ಭವಾನಿ || ಪರಮಪಾವನೆ | ಪರಮೇಶ್ವರಿ ಜಗ 1 ಶುಂಭಧ್ವಂಸಿ | ನಿಶುಂಭನಿಷೂದಿನಿ || ಅಂಬುಜಮುಖಿ ಮೂ | ಕಾಂಬಿಕೆ ಶ್ರೀ ಜಗ 2 ಗಾನವಿನೋದಿನಿ | ದಾನವ ಮಥಿನಿ || ದೀನಜನಾವಳಿ | ಪಾಲಿನಿ ಶ್ರೀ ಜಗ 3 ಜಟಾಮುಕುಟಸುರ|ತಟನೀಧರಸತಿ || ನಿಟಿಲಾಂಬಕಿ ಶ್ರೀ | ಕಟಿಲೇಶ್ವರಿ ಜಗ 4
--------------
ವೆಂಕಟ್‍ರಾವ್
ಡಂಭ ತೋರಿದರೆ ಬಂತೆ ಇಂಬವಾಗದ ಗುಂಭಗುರುತ ಪಥ 1 ಶಬ್ದ ಜ್ಞಾನದಿಂದ ನಿಗಗೇನು ಲಬ್ಧ ಲಬ್ಧಾ ಲಬ್ಧ ತಿಳಿಯಗೊಡುದು ನಿನ್ನ ಪ್ರಾರಬ್ಧ ಧ್ರುವ ನೀರ ಕಡಿದರೆ ಬಂತೆ ಸಾರಸದ ನವನೀತ ಮಾರಪೀತನಂಘ್ರಿ ಗುರುತಾಗುದೇ ಹಿತ 2 ಹರಿವ ಮೃಗಜಲವಾಯಿತೆ ಅರಿತುಕೊಂಬಗೆ ಗಂಗಾಮೃತ ಅಮೃತ ಹಸ್ತ 3 ಮಣಿ ಆದೀತೆ ರಾಜಿಸುವ ನವರತ್ನ ನಿಜತತ್ವ ತಿಳಿಯುದೊಂದೇ ವಾಜಿಯ ಯತ್ನ 4 ಹೊಂದಿ ಬದುಕಿರೊ ಮಹಿಪತಿ ತಂದೆಯ ಗುರುಪಾದ ಬೋಧ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತÉೂೀರೆ ಬೇಗನೆ ತೋಯಜನಯನೆಮದವಾರಣ ಗಮನೆ ಪ ಮಾರನ ತಾಪವ ಸೈರಿಸಲಾರೆನೆನೀರೆ ನಿನಗೆ ಮುತ್ತಿನ್ಹಾರವ ಕೊಡುವೆನೆ ಅ.ಪ ನೀರೊಳು ಮುಳು ಮುಳುಗಾಡುತ ಬಂದುಮಥಿಸಿದ ಪಯ ಸಿಂಧುಧಾರುಣಿ ಚಿಮ್ಮುತ ಮೇಲಕೆ ತಂದುದನುಜನ್ನ ಕೊಂದುಮೂರುಪಾದವ ಬೇಡುತ ನಿಂದುಮುನಿಕುಲದಲಿ ಬಂದುನಾರಿಬಿಟ್ಟು ಪರನಾರಿಯರಾಳಿದತೋರೆರಮಣಿ ಹಯವೇರಿ ಮೆರೆದನ 1 ಕತ್ತಲೆ(ತಾಮಸ ದೈತ್ಯ)ನೊಡನೆ ಕಾದಿದನು ಧೀರಕಡೆದನು ಕೂಪಾರಕುತ್ತಿ ಮಣ್ಣಗಿದು ಮೆದ್ದನು ಬೇರದಾನವ ಸಂಹಾರ ಒತ್ತಿ ಬಲಿಯನು ಕಾಯ್ದನು ಶೂರಕುಜನ ಕುಠಾರ ಹತ್ತು ಶಿರನ ಕತ್ತರಿಸಿ ಗೋಕುಲದೊಳುಬತ್ತಲೆ ರಾಹುತನಾಗಿ ಮೆರೆದನ 2 ನಿಗಮ ಕದ್ದವನ ನೀಗಿದ ಧಿಟ್ಟನೆಗಹಿದ ಬೆಟ್ಟಅಗಿದು ಮಣ್ಣನೆ ಜಠರದಲ್ಲಿಟ್ಟಘುಡಿ ಘುಡಿಸುವಸಿಟ್ಟಜಗಕೆಲ್ಲ ನೋಡೆ ಎರಡಡಿಯಿಟ್ಟಕೊಡಲಿಯ ಪೆಟ್ಟಮೃಗವ ಕೆಡಹಿ ಕುಂತಿಮಗಗೆ ಸಾರಥಿಯಾಗಿಜಗವ ಮೋಹಿಸಿ ಹಯವೇರ್ದ ಶ್ರೀಕೃಷ್ಣನ 3
--------------
ವ್ಯಾಸರಾಯರು
ತಂದು ತೋರೆ ಮಂದಹಾಸನ | ಕಾಮಿನಿ | ತಂದು ತೋರೆ ಮಂದಹಾಸ | ನಂದ ಕಂದ ಶ್ರೀಮುಕುಂದ | ವಂದಿತಾಮರೇಂದ್ರ ವಂದ್ಯನ | ಕಾಮಿನಿ ಪ ಉರವನಿತ್ತಗುರುಮೊಮ್ಮನುದರಲಿ ಬಂದ ಮಾತೆ ಮಗನ | ಶರದ ಭರಕೆ ಫಣಿಲಿ ತಾಳ್ದಾನಾ | ಕಾಮಿನಿ 1 ಸರಳದಿಂದ ಪ್ರಾಣ ತೊರಿದನಾ | ಪ್ರೀತಿಯಾ | ಸರಳಕಾದು ಅಳಿದನಯ್ಯನ | ಸರಳಗದೆಯ ಕೈಯ್ಯಲಿಂದ | ಸರಳತ್ರಯನ ಕೊಲಿಸಿದಾತನ | ಕಾಮಿನಿ 2 ಶತಕಮೃಗನ ಭೋಜ್ಯವಾಹನ | ಸಖಉರಭಕಾಗಿ ನಿಲ್ಲದೇ | ಅಖಿಲದೋಳಗೆನುಸಲುತಿಹನಾ | ರಾಶಿಯ | ಪಕವನಳಿದನರಿಯಸುತನ | ರಕ್ಷಕಮಹೀಪತಿನಂದನ| ಮುಖದಿ ತನ್ನ ಚರಿತೆನುಡಿಪನ ಕಾಮಿನಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ಧ್ರುವ ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು 1 ತರಳಗುಂಟೆ ಭಯವು ಘಟಸರ್ಪದ ಎರಳೆಗುಂಟೆ ಖೂನ ಮೃಗಜಲವೆಂಬುವದ ಸೋರೆಗುಂಟೆ ಮಾತು ಚಾರ್ತುಯದ 2 ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ ಮನದಿಚ್ಛೆಯಿದ್ದವಗೆ ಎಲ್ಲಿ ಧ್ಯಾನ ದೀನಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳದೆ ಜನ್ಮಕೆ ಬಂದಿದೇನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತರಣಿ ಪಾವಕ ಶಶಿ ನೇತ್ರಗಳುಪರಶುಮೃಗಂಗಳ ಧರಿಸಿರೆ ಕರಗಳು ವರದಾಭಯಗಳಲೊಪ್ಪಿರಲು 1ವಾಮವ ಗೌರಿಗೆ ಕೊಟ್ಟಿರಲು ಸಾಮಜಕೃತ್ತಿಯ ಹೊದ್ದಿರಲುಭೀಮನು ಮೂರ್ತಿಯ ಬೇಡಲು ಕೊಡಲು ಕಾಮನ ನೋಟದಿ ಕೆಡಹಿರಲು 2ಧರೆಯೊಳು ದಕ್ಷಿಣ ಕಾಶಿಯಲಿ ುರೆ ಗಂಗಾಧರ ರೂಪಿನಲಿತಿರುಪತಿ ವೆಂಕಟ ವರ ನಾಮದಲಿ ಮೆರೆವೆ ಮಹೇಶ್ವರ ಮಹಿಮೆಯಲಿ 3ಓಂ ಕೋಟಿಸೂರ್ಯಸಮಪ್ರಭಾಯ ನಮಃ
--------------
ತಿಮ್ಮಪ್ಪದಾಸರು
ತಲ್ಲಣಿಸದಿರು ಕಂಡ್ಯ ತಾಳು ಮನವೆ ಪ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅ ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೊಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲುಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ 1 ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ 2 ನವಿಲಿಗೆ ಚಿತ್ರ ಬರೆದವರು ಯಾರುಪವಳದ ಲತೆಗೆ ಕೆಂಪಿಟ್ಟವರು ಯಾರುಸವಿಮಾತಿನರಗಿಳಿಗೆ ಹಸುರು ಬರೆದವರು ಯಾರುಅವನೆ ಸಲಹುವನು ಇದಕೆ ಸಂಶಯವಿಲ್ಲ3 ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲಅಲ್ಲಲ್ಲಿಗಾಹಾರ ತಂದೀವರಾರುಬಲ್ಲಿದನು ಕಾಗಿನೆಲೆಯಾದಿಕೇಶವರಾಯಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ 4
--------------
ಕನಕದಾಸ
ತಾತ್ವಿಕ ಹಿನ್ನೆಲೆ ಕರ್ತನೆಂಬೋದು ಖರೆ ಖರೆ ಪ ಇಪ್ಪನೆಂಬೋದು ಖರೆ ಖರೆ 1 ಜಗವು ಇಪ್ಪದೆಂಬೋದು ಖರೆ ಮೃಗ ಖರೆ 2 ಇಂಬಾಗಿಹನೆಂಬೋದು ಖರೆ ತುಂಬಿ ಇಪ್ಪನೆಂಬೋದು ಖರೆ3 ಸ್ಥಳ ಇಲ್ಲೆಂಬೋದು ಖರೆ ಖರೆ 4 ಇಲ್ಲೆಂಬೋದು ಖರೆ ವಿಲ್ಲವೆಂಬೋದುಖರೆ 5 ವೇದತಂದು ವೇದನಿಗಿತ್ತಾತನೆ ಭೂಧರನೆಂಬೋದು ಖರೆ ಖರೆ 6 ಬದ್ಧರೂಪನೆಂಬೋದು ಖರೆ ಖರೆ 7 ಮಾಳ್ಪನೆಂಬೋದು ಖರೆ ಖರೆ 8 ಎನಿಸಿದನೆಂಬೋದು ಖರೆ ಖರೆ 9 ಪೊರೆವನೆಂಬೋದು ಖರೆ ಖರೆ 10 ತಲಿಹ ವೆಂಬೋದು ಖರೆ ಖರೆ 11 ಯಂಬೋದು ಖರೆ ಭವ ಖರೆ 12 ಹುದೆಂಬೋದು ಖರೆ ಖರೆ 13 ಮಗನೆಂಬೋದು ಖರೆ ಖರೆ 14 ಕೇಳ್ವನೆಂಬೋದು ಖರೆ ಖರೆ 15 ಬಂದನೆಂಬೋದು ಖರೆ ಖರೆ 16 ಪರಿಶುದ್ಧವಾದುದೆಂಬೋದು ಖರೆ ಖರೆ 17 ಹರಿನಾಮಕೆ ಹರಿಯದ ಪಾಪಿಗಳೀಧರೆಯೊಳಿ- ಲ್ಲವೆಂಬೋದು ಖರೆ ಖರೆ 18 ಕರ್ಮ ಹರಿಸೇವೆಯನಿಪವೆಂಬೋದು ಖರೆ ಖರೆ 19 ನಿಜದ್ವಿಜರಹುದೆಂಬೋದು ಖರೆ ಖರೆ 20 ಬುಧರಿಗಿಲ್ಲವೆಂಬೋದು ಖರೆ ಖರೆ 21 ವರವೆಂಬೋದು ಖರೆ ಯುಕ್ತಿಯ ವಚನಗಳಲ್ಲವು ಇವು ವೇದೋಕ್ತಿಗಳ- ಖರೆ 22 ಸದ್ಗುರುವರಬೇಕೆಂಬೋದು ಖರೆ ಪರಮಸೌಖ್ಯವೆಂಬೋದುಖರೆ 23 ಖರೆ ಖರೆ ಖರೆ ಖರೆ 24 ಖರೆ ಖರೆ ಖರೆ 25
--------------
ಅಸ್ಕಿಹಾಳ ಗೋವಿಂದ
ತಾರಮ್ಮಯ್ಯಾ ರಘುಕುಲ ರಾಮಚಂದಿರನ ಪ ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ ಅ.ಪ. ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ 1 ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ 2 ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ 3 ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ ||ತರು ಪುರ ಗೋಪುರ ಉರುಹಿ ಚೂಡಾಮಣಿಹರಿಗೆ ಸಮರ್ಪಿಸಿ ಹರುಷದಲಿಹನಂತೆ 4 ಸೇತುವಿಯನೆ ಕಟ್ಟಿ ಖಳಕುಲನಾಥನ ತರಿದೊಟ್ಟೀ ||ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-ನ್ನಾಥ ಹೊರಟನಂತೇ ಕಾಂತೇ 5
--------------
ಮೋಹನದಾಸರು
ತಾರೆ ಆರುತಿ ಸಾರಸಾಂಬಕಿ ಭಾರತೀವರಗೆ ಬೆಳಗುವೆನು ಪ ನರಸಿಂಹಾರ್ಯ ಶೇವಿತಗೆ ಅ.ಪ ನೂರುಯೋಜನ ವಾರಿನಿಧಿಯನು ಹಾರಿ ಜಾನಕಿಗೆ ಚಾರು ಮುದ್ರಿಕೆಯನಿತ್ತು ಪುರದಿಭಯ ತೋರಿರಾಕ್ಷಸಗೆ ನಾರಿಮಣಿಯ ಶುಭವಾರುತಿಯ ರಘುವೀರಗರುಹಿದ ಮಾರುತಾತ್ಮಜಗೆ 1 ಇಂದು ಕುಲದಲಿ ಬಂದು ಕುಂತಿಯ ಕಂದನೆಂದೆನಿಸಿ ನಿಂದು ರಣದಿ ಖಳವೃಂದ ಸಹಿತ ಕುರುವೃಂದವನು ಮಥಿಸಿ ಛಂದದಲಿ ಪಡೆದಂಥ ಭೀಮಗೆ 2 ಭೂತಳದಿ ಸುಖತೀರ್ಥರೆನಿಸಿ ಸಚ್ಛಾಸ್ತ್ರವನು ರಚಿಸಿ ಭೀತಿ ಪುಟ್ಟಿಸುತ ಖ್ಯಾತಮಾಯ್ಗಳ ವ್ರಾತವನು ಜಯಿಸಿ ಪೂತ ಕಾರ್ಪರ ಕ್ಷೇತ್ರ ನರ ಮೃಗನಾಥನ ಪರಮಪ್ರೀತಿ ಪಾತ್ರನಿಗೆ 3
--------------
ಕಾರ್ಪರ ನರಹರಿದಾಸರು
ತಾರೆ ಮುಕ್ತಕದಾರತಿ ಹರಿಗೆ ಕಮಲ ಮುಖಿ ಗಿರಿಧರಗೆ ಪ ಕ್ರೋಢ ನರಮೃಗಗೆ ಮಾಣವಕನಿಗೆ ವೀರಭಾರ್ಗವಗೆ ಸ್ಥಾಣು ಬಾಣವ ತುರಗವಾಹನಗೆ 1 ಮಂದರೋದ್ಧರ ಮಾತುಳಾಂತಕಗೆ ಶಿಂಧು ಮಂದಿರ ಸಾರಸಾಂಬಕಗೆ ವಂದಿಸುತ ಗೋವೃಂದ ಗೋಪಾಲಗೆ 2 ಸಾಮಗಾನವಿಲೋಲ ರಂಗನಿಗೆ ಶ್ರೀಮಹಿ ರಮಣ ವೆಂಕಟಗೆ ಕಾಮಿತಾರ್ಥವ ಕೊಡುವ ಕೋಮಲಾಂಗಗೆ ಶ್ರೀ ಶಾಮಸುಂದರವಿಠಲ ಮೂರುತಿಗೆ 3
--------------
ಶಾಮಸುಂದರ ವಿಠಲ