ಒಟ್ಟು 267 ಕಡೆಗಳಲ್ಲಿ , 72 ದಾಸರು , 238 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ಮನುಜಾ ಜಡದಭಿಮಾನ ಪಡೆ ಗುರುವಿನಲಿ ಸ್ವಾತ್ಮದ ಜ್ಞಾನಾ ಪ ಈ ಸುಖದುಃಖದ ಬಡಿದಾಟದಲಿ ಗಾಸಿಯಾಗುತಲಿ ಸಾಯುವದೇ ದಿಟ ಕ್ಲೇಶವ ನೀಗುವಿ ನಿನ್ನ ನೀ ತಿಳಿವೊಡೆ 1 ಮರಳಿ ದೇಹ ಪಡೆಯದ ದಿವ್ಯ ಬೋಧ ಪರಮಶಾಂತಿ ದೊರಕಿಸುವ ಪ್ರಮೋದ ದುರುಳಸಂಸ್ಕøತಿಯ ಪಾಶದ ಛೇದ ಮರೆಯದೆ ಮಾಳ್ಪುದು ಸ್ವಾತ್ಮದ ಶೋಧ 2 ಘಟ ಮರಣಕೆ ಶಿಲುಕಿದಾದರೂ ಈ ಘಟದಲಿ ನೀ ಅಮರನೆ ಇರುವೀ ಬೇಗನೆ ಜೀವನ್ಮುಕುತಿಯ ಪಡೆಯೈ ಯೋಗಿ ಶಂಕರನ ಸದ್ಬೋಧದಲಿ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬಿನ್ನೈಪೆ ನಿನಗಾನು ಭಕ್ತ ಬಂಧು ನಿನ್ನ ವಿಸ್ಮøತಿ ದೋಷ ಕೊಡದಿರೆಂದೆಂದು ಪ ಭಾರ ತಾಳುವಾಗಲಿ ಎಡಹಿ ಕಾಲ ಕಾಲಗಳಲ್ಲಿ ಕಾಲನಾಮಕ ನಿನ್ನ ಲೀಲೆಗಳ ಮರೆಯದೆ ನಾಲಿಗ್ಗೆ ಬರುವಂತೆ 1 ನಿಲ್ಲುವಾಗ ಕುಳಿತು ಮೈದೊಳೆವಾಗ ಅನ್ನಗಳ ಮೆಲುವಾಗ ವಿದ್ಯೆಗಳ ಕಲಿವಾಗ ಮಲಗಿ ಸುಖದಿಂದ ನಲಿವಾಗ ಭಕ್ತವ ತ್ಸಲ ನಿನ್ನ ಮಹಿಮೆಗಳ ತಿಳಿವಂತೆ ಮಾಡಯ್ಯ 2 ಖೇದ ಮೋದಗಳು ಸಂತೋಷ ಸಂಪಾದಿಸಿದ ವೈದೀಕವೈದಿಕಗಳು ಸ್ತ್ರೀ ಧನಗಳೆಲ್ಲ ಶ್ರೀಧವನ ಆರಾಧನೆಗೆ ನಿ ವೇದಿಪುದ ತಿಳಿಸೆಂದು 3 ಮೃಗ ಚೋರ ಮುಂತಾದ ಭಯಗಳಲಿ ಭ್ರಾಂತಿಗೊಳಿಸುವ ವಿಷಯ ಸಂತತಿಯಲಿ ಪ್ರಾತಃ ಕಾಲದಿ ರಮಾರಮಣ ನಿನ್ನ ಮೂರ್ತಿ ಚಿಂತನೆಗೆ ಬರಲೆಂದು ಸಂತೋಷದಾತ 4 ಶ್ವಾನ ಸೂಕರ ಜನ್ಮ ಬರಲಿ ಯಮ ದಂಡ ದೂತರ ಪಾಶಕಂಜೆ ನಾನು ಪಾಂಡವ ಪ್ರಿಯ ಜಗನ್ನಾಥ ವಿಠಲನೆ ಪಾ ಷಂಡಿ ಮತಗಳಲಿ ಚೆನ್ನ ಕೊಡದಿರೆಂದು 5
--------------
ಜಗನ್ನಾಥದಾಸರು
ಬೇಡಿಕೊಂಬೆನೊ ಗೋಪಾಲ ನಿನ್ನ ಬೇಡಿಕೊಂಬೆ ಕರಗಳೆರೆಡ ಪ ಜೋಡಿಸಿ ನಿನ್ನೊಳು ಸುದೃಢ ಭಕುತಿ ಮಾಡಿ ಸತತ ಭಜಿಸುವಂಥ ರೂಢಿ ಎನಗೆ ಕೊಡು ನೀನೆಂದು ಅ.ಪ ಕ್ಲೇಶಪಡಿಸದೆ ಸಲಹೆನ್ನ ಜಗಂಗಧೀಶ ಮರೆಯದೆ ಬಾರದ್ಯಾಕೊ ಕರುಣ ಲೇಶಗುಣನಿಧೆ ಆಶಾಪಾಶ ಬದ್ಧನಾಗಿ ದೇಶ ದೇಶ ತಿರುಗಿ ಕರುಣ ದುರುಳ ವಸುಮತೀಶರೊಳ್ ಬೇಡಿಸದಂತೆ 1 ಇಂದುವzನÀನೆ ಮುನಿವರ್ಯಹೃದರ ವಿಂದಸದನೆ ವರಗೋಪಯುವತಿ ಬೃಂದಮದನನೆ ಇಂದಿರೇಶ ನಿನ್ನ ಪಾದಾರವೃಂದಗಳನು ಹೃದಯವೆಂಬೊ ಮಂದಿರದೊಳಗೆ ನಿಲ್ಲಿಸಿ ಚಿದಾ- ನಂದಮೂರ್ತಿಯ ಪೂಜಿಪೆನೆಂದು 2 ಧೀರ ಚರಣನೆ ಮುರಾರಿ ಧರಣಿ ಭಾರಹರಣನೆ ಭುಜಗೇಶಫಣಿ ವಿದಾರಿ ಚರಣನೆ ಮಾರಜನಕ ನೀರಜಾಕ್ಷ ನಾರಸಿಹ್ಮ ನಾಮಗಿರೀಶ ಸಾರ ಎನಗೆ ತಿಳಿಬೇಕೆಂದು 3
--------------
ವಿದ್ಯಾರತ್ನಾಕರತೀರ್ಥರು
ಬೇಡುವೆನೊಂದು ಬೇಡತಕ್ಕುದು ಎಂದು ಬೇಡ ವರಗಳೆನಗೆ ನೀಡು ಅದನೊಂದ ಪ ಬೇಡ ಸುಖವು ಕೃಷ್ಣ ಬೇಡ ಫಲವಿಫಲ ಬೇಡ ಮಾನಾಪಮಾನ ಬೇಡ ಜಯಾಪಜಯ ಅ.ಪ ನಿದ್ರೆಸುಖವು ಬೇಡ ಭದ್ರಭೋಜನ ಬೇಡ ತಿದ್ದಿದ ವಾಸ್ತುವುಬೇಡ ಮಧುರವು ಬೇಡ ಸದನ ವಿತ್ತವು ಬೇಡ ಹೃದಯದಿ ರಾಮನಾಮ ಪರಿಹರಿಸಲು ಬೇಡ 1 ನರಕ ಬಾಧೆಯ ಪರಿಹರಿಸಲು ಬೇಡ ದುರಿತ ಸಂತತಿಗಳ ತೊರೆಯಿಸ ಬೇಡ ಸುರಲೋಕ ಸಾಮ್ರಾಜ್ಯ ವರವನೀಯಲು ಬೇಡ ನಿರುತ ನಿನ್ನಯ ಪದ್ಮ | ಚರಣವ ತೋರೆಂದು2 ಮಾವಿನಕೆರೆರಂಗ ಶ್ರೀವನಿತಾ ಸಂಗ ಭಾವಜಪಿತರಂಗ ಗರುಡ ತುರಂಗ ಭಾವನೆಗೈದು ಯೆನ್ನ ಸರ್ವಜನ್ಮದೆ ನಿನ್ನ ದಿವ್ಯನಾಮವ ಭಜನೆಗೈವ ಬುದ್ಧಿಯು ಮಾತ್ರ 3 ನೀ ಮರೆಯದಿರಯ್ಯ ನಾಮರೆಯುವನಯ್ಯ ಕಾಮಿತವೊಂದಿದ ನೀಡೊ ಮುಕುಂದ ಸೋಮಧರ ವಂದಿತ ರಾಮದಾಸಾರ್ಚಿತ ಭೀಮವಿಕ್ರಮರೂಪ ಅಮಿತಕಲಾಪಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಕುತರಿಗಾಶೀರ್ವಾದಗಳು ಕುಶಲಕೆ ಬರೆಯುತಲಿರಿ ಎನಗೆ ಪ ಯುಕುತಿಗಳನು ಬರೆದಿಹೆನಿಲ್ಲ ಅ.ಪ ಬೆರೆಯಬೇಡಿ ಈ ಜಗದ ರಗಳೆಯಲಿ ಮರೆಯಬೇಡಿ ಎನ್ನನು ಕ್ಷಣವು ಬೆರೆಯದೆ ಮರೆಯದೆ ಇರುವ ಧೀರರನು ಪೊರೆಯುವುದೇ ಎನ್ನಯ ಗುರಿಯು 1 ನಾಳೆಗೆ ಅಣಿಮಾಡಲು ಕೈಲಾಗದೆ ಗೋಳೇತಕೆ ನಾನೊದಗಿಸುವೆ ಕಾಲು ಕೈಗಳೊದ್ದಾಡುವತನಕ ಮೇಲೆತ್ತುವುದಳವೇ ಎನಗೆ 2 ಬಿಸಿಲು ಗಾಳಿ ಮಳೆಗಳು ಸಿದ್ಧೌಷಧ ಹಸನ ಮುಖವೆ ನಿಮ್ಮಯ ಪಥ್ಯ ರಸ ಕವಳವು ಬೇಕಾದರೆ ಕೊಳೆಯುವ ರಸವನು ತಿನ್ನಲು ಬಯಸದಿರಿ 3 ಕತ್ತಲಿನಲಿ ಓಡÀುತಲಿರುವಿರಿ ಸತ್ತಿರುವುದೆ ನಿಮ್ಮಯ ಬಲವು ಅತ್ತರೇನು ಫಲ ಎತ್ತಿನೋಡಿ ತಲೆ ಹತ್ತಿರದಿ ನಾನಿಹೆ ಸತತ 4 ಭಯವೇತಕೆ ದಾರಿದ್ರ್ಯದಲಿ ಭಯವೇತಕೆ ಜನರನು ಬಿಡಲು ಭಯವೇತಕೆ ಲೌಕಿಕವಿರದಿರಲು ಅಭಯ ಪ್ರಸನ್ನನಿರೆ ಹೃದಯದಲಿ 5 ಬೊಗಳುವರಿರುವರು ಹೊಗಳುವರಿರುವರು ಹಗರಣವೇತಕೆ ಮಾನಸದಿ ಒಗೆಯಿರಿ ಹಗೆತನ ನಗುತ ನಗುತಲಿರಿ ಜಗವೆ ಹೊಸ ಮೊಗ ತೋರುವುದು6
--------------
ವಿದ್ಯಾಪ್ರಸನ್ನತೀರ್ಥರು
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ
ಭರ್ತø ಭವನದಿ ಮಗಳೆ ಚಿರಕಾಲ ಸುಖಿಸೌ ಕರ್ತ ಶ್ರೀಹರಿ ಪದವನರ್ಥಿಯಿಂ ಭಜಿಸೌ ಪ ಪತಿಯೆ ಸಿರಿವರನೆಂದು ಅತಿಶಯದಿ ಭಾವಿಸುತ ಸತತ ಸೇವೆಯ ಮಾಡಿ ಗತಿಯೆ ನೀನೆನುತ ಸತಿಶಿರೋಮಣಿಯಾಗಿ ಮಿಗಿಲು ಮೋದವ ಪಡೆದು ಕ್ಷಿತಿಯೊಳಗೆ ನೀ ಬಾಳು ಮತಿವಂತೆಯಾಗಿ1 ಅತ್ತೆಮಾವಂದಿರನು ತಾಯಿತಂದೆಗಳಂತೆ ಅತ್ತಿಗೆ ನಾದಿನಿಯ ಅಕ್ಕತಂಗಿಯರೋಲ್ ಉತ್ತಮಳೆ ಭಾವನಂ ಮೈದುನನ ಸಹಜರೆಂ ದರ್ಥಿಯಿಂದರಿಯುತ್ತ ಉಪಚರಿಸುತಿರು ನೀಂ 2 ಬಂಧುಗಳ ನೀ ಬಹಳ ಪ್ರೇಮದಿಂ ಕಾಣುತ್ತ ವಂದಿಸುವುದೌ ಪರಮಭಾಗವತರಡಿಗೇ ಇಂದಿರಾದೇವಿಯೆಂದೈದೆಯ ಪೂಜಿಸೌ ಸುಂದರ ವಿದ್ವರ ಸುತರಕೂಡ 3 ಸರ್ವತ್ರದಲಿನೀನು ಹಿತವಚನ ಮಾಡುತ್ತ ನಿತ್ಯ ಪಡೆಯುತ್ತ ಗರ್ವವರ್ಜಿತೆಯಾಗಿ ಗುಣಮುಖಿಯು ಎಂದೆನಿಸಿ ಸರ್ವಕಾಲವು ಗೌರವ ಕೀರ್ತಿಯನು ಬೀರೌ 4 ಜಾಜಿಕೇಶವ ನಿನ್ನ ಸೌಭಾಗ್ಯವತಿಯಾಗಿ ಸಾಜದಿಂ ಸಲಹುವನು ಸುಜನವಂದಿತನು ಪೂಜಿಪರ ಮರೆಯದಿಹ ಶ್ರೀಹರಿಯ ಕರುಣದಿಂ ಈ ಜಗದಿ ರಾಜಿಸೌ ಪರಮಮಂಗಳೆಯೇ 5
--------------
ಶಾಮಶರ್ಮರು
ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ಭಾರತೀದೇವಿ ಭಾರತಾದೇವಿಯರ ಪಾದ ಚಾರು ಚರಣಕೆರಗುವೆ ಪ ವಾರಿಜಾಕ್ಷಿ ನಿನ್ನ ಮಹಿಮೆ ಬಾರಿ ಬಾರಿ ಪೊಗಳುವೆ ಅ.ಪ ಸುಂದರಾಂಗಿ ಶುಭಕರಾಂಗಿ ಬಂದು ಎನ್ನ ಪಾಲಿಸು ಇಂದಿರೇಶನನ್ನು ಸದಾ ಆ- ನಂದದಿಂದ ಭಜಿಸಲು 1 ಬಾರಿ ಬಾರಿ ನಿನ್ನ ಸ್ತುತಿಪೆ ಮಾರುತನರ್ಧಾಂಗಿಯೆ ಸಾರಿ ಸಾರಿ ಶ್ರೀರಮಣನ ಸಾರ ಕೃಪೆಯ ಕರುಣಿಸು2 ಕರುಣಿಸಮ್ಮ ನಿನ್ನ ಪತಿಯ ಸ್ಮರಣೆ ನಿರುತ ಮರೆಯದೆ ಕರುಣಾಕರನೆ ಕಮಲನಾಭ ವಿಠಲನಂಘ್ರಿ ಧ್ಯಾನವೀಯೆ 3
--------------
ನಿಡಗುರುಕಿ ಜೀವೂಬಾಯಿ
ಮಂಗಳಾರತಿಯ ತಂದೆತ್ತಿರೆ ಶುಭಮಂಗಳ ಜಗದಾದಿದೇವಿಗೆ ಪ ಮಧುಕೈಟಭಾಸುರ ಮರ್ದನ ದೇವಿಗೆಮದನ ಕೋಟಿ ರೂಪ ಮಹಾದೇವಿಗೆಸದಮಲ ಬ್ರಹ್ಮರ ಹೃದಯದ ಆತ್ಮಗೆಮದನಾರಿ ಭೂತೆಗೆ ಆರತಿ ಎತ್ತಿರೆ 1 ಭಾನು ಸಾಸಿರ ಕೋಟಿ ತೇಜ ಮಹಾತ್ಮಳಿಗೆದಾನವಾಂತಕಳಾದ ದಯಾಶೀಲಗೆಮಾನನಿಧಿ ಭಕ್ತರನು ಮರೆಯದೇ ರಕ್ಷಿಪಬಾಣಾರಿ ಜನನಿಗೆ ಆರತಿಯನೆತ್ತಿರೆ 2 ರಕ್ಷಬೀಜಾರಿಗೆ ರಾಕ್ಷಸಧ್ವಂಸಿಗೆಭಕ್ತರ ಸಲಹುವ ಬಗಳಾಂಬೆಗೆಮುಕ್ತಿ ಸದ್ಗುರು ಚಿದಾನಂದವಧೂತಗೆಮುತ್ತಿನಾರತಿಯನೆತ್ತಿರೆ3
--------------
ಚಿದಾನಂದ ಅವಧೂತರು
ಮರೆಯದ ಭಾವಗೋಚರವಾುತಯ್ಯಾಕರುಣಿ ವೆಂಕಟದಾಸವರ್ಯ ಸದ್ಗುರುವೆ ಪಸನ್ನಿಕರ್ಷವನಾದರಣ ಹೇತು ಮಾನವರಿಗೆನ್ನುತಾನಂದ ರಸರುಚಿ ದೋರಿಸಿನಿನ್ನನೆ ತೊಳಲಿ ಬಳಲುತ ನಿನ್ನೊಳೆರಗುವಂತುನ್ನತರ ಮಾಡಲಂತರ್ಧಾನವಡೆವೆ 1ಗೋಪಿನಾರಿಯರಿಗಾನಂದ ರೂಪವ ತೋರಿತಾಪಬಡುವಂತಗಲಿ ುದ್ಧವರ ಮುಖದಿಸೋಪಾಯವಚನದಿಂ ತಿಳು'ದರ್ಥವ ನೆನೆಯಲೀ ಪರಿಯ ತೋರಿತೆನಗೆಲೆ ದಯಾನಿಧಿಯೆ 2ನೆರೆಧನ್ಯರಾದೆವಾ'ಲ್ಲ ಸಂದೇಹ ಗುರುವರ ವಾಸುದೇವಾರ್ಯ ಚಿಕನಾಗಪುರದೀಪರತತ್ವವರುಪಿ ವೆಂಕಟದಾಸ ವೇಷದಿಂಮರಳಿ ನಿಜದೊಳು ನಿಂದೆ ಕರುಣಾಸಮುದ್ರಾ 3
--------------
ತಿಮ್ಮಪ್ಪದಾಸರು
ಮರೆಯದಿರು ಪದಾಂಬುಜ ಮರೆಯದೋಳು ಪದವಾ ಪ ಧಾರುಣಿಯನೆ ಅಳೆದೀರಡಿ ಮಾಡಿದ ಘನಪದವಾ ಮುಕಾರಿಯು ತಳ್ತ ವಾರಿಯ ಪಡದನುಪಮ ಪದವಾ 1 ಕಾಲಿಡುತಲೆ ಕಲ್ಲನು ಬಾಲೆ ಮಾಡಿದ ಪದವಾ ಕಾಳುರಗನ ಪೆಡೆಯಲಿ ಲೀಲೆಯಾಡಿದತುಳ ಪದವಾ 2 ವರಶರಣರ ನಾಲಿಗೆ ನಿರುತದಿ ನುತಿಸುವ ಪದವಾ ಉರೆ ದುರಿತವದುರಿಪ ನರಸಿಂಹವಿಠ್ಠಲನ ಪದವಾ 3
--------------
ನರಸಿಂಹವಿಠಲರು
ಮರೆಯದಿರು ಭವಶರಧಿ ಕೊನೆದೋರದು ಹರಿಯ ಮರೆತರೆ ಮನವೆ ಗತಿಯೇನು ಇಹುದು ಪ ಪಿಂತೆ ಧೃತರಾಷ್ಟ್ರ ನಿಶ್ಚಿಂತೆಯಲಿ ಸುತರಿಂದ ಎಂಥ ಸಿರಿವಂತನೆಂದೆನಿಸಿ ಮೆರೆದಾ ಕಂತುಪಿತನನು ಸುತರು ಪಂಥದಲಿ ನೆನೆಯದಿರೆ ಎಂಥವನ ಪಾಡಾದುದರಿಯೆ ನೀ ಮರುಳೇ 1 ತಾನೆ ಪರಬ್ರಹ್ಮನೆಂದರಿದಾ ಹಿರಣ್ಯಕಶು- ಪಾನೆಯೆಂದರಿದು ಮೆರೆಯೆ ಹರಿವೈರದಿ ಸೂನು ಪ್ರಲ್ಹಾದನಾನತನಾಗಿ ಮೊರೆವೋಗಲು ಹೀನ ರಕ್ಕಸನ ಪರಿಸರಿ ಏನಾಯಿತು 2 ಸತಿಸುತರ ಮುದದಿಂದ ಹಿತವಂತ ಬಳಿಗದಿಂ- ದತಿ ತೃಪ್ತವಾಗಿ ನಾನಿರುತಿರಲು ನಿನ್ನ ಧೃತಿಗುಂದಿ ಪವಡಿಸಿರೆ ಗೆಜ್ಜೆಪಾದವ ಕಂಡು ನುತಿಸುವೆನನವರತ ನರಸಿಂಹವಿಠಲರಾಯಾ 3
--------------
ನರಸಿಂಹವಿಠಲರು
ಮರೆಯದಿರು ಮರೆಯದಿರು ಮನುಜಾನಾರಾಯಣನ ಸ್ಮರಣೆಯನು ಮಾಡು ಮನುಜಾ ಪ ಸತಿ ಬಣಗು ಹೆಣ್ಣುಗಳೇಕೆಮಂಗಳಾತ್ಮಕನಿರಲಿಕ್ಕೆ ಪರದೈವವೇಕೆ 1 ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆಮೇಲು ನಾಮವಿರಲಿಕ್ಕೆ ಕಟುಕು ಇನ್ನೇಕೆಬಾಲ ಹನುಮನಿರಲಿಕ್ಕೆ ಹುಲು ಕಪಿಗಳೇಕೆಒಳ್ಳೆ ತುಳಸಿ ಇರಲಿಕ್ಕೆ ಕಗ್ಗೊರಲೆಯೇಕೆ 2 ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆರನ್ನ ಮಾಣಿಕವಿರಲಿಕ್ಕೆ ಕಾಜಿನ ಹರಳೇಕೆಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ3
--------------
ಕನಕದಾಸ
ಮರೆಯದಿರು ಮರೆಯದಿರು ಹರಿಯನು ಪಾಪಿ ಪ ಮರೆಯದಿರೆ ನೀ ಮೈಕುಂಠಕೆ ಪೋಪಿಅ.ಪ. ಮೂರು ದಿನ ಬಾಳ್ವ ಸಂಸಾರವ ನೋಡಿ ಬಾರಿ ಹರುಷಿಸದಿರು ನೀನೆಲೊ ಖೋಡಿ 1 ಮತಿವಂತನಾದರೆ ಹರಿಪುರಕೆ ಪೋದಿ ಸತಿಸುತರ ನಂಬೆ ನಿನ ಬಾಯಲಿ ಬೂದಿ 2 ಸಿರಿಯ ನಂಬಿದ ದುರ್ಯೋಧನ ಬಿದ್ದ ಹರಿಯ ನಂಬಿದ ಭೀಮಸೇನನು ಗೆದ್ದ 3 ಆನೆ ಕುದುರೆ ರಥ ಭಂಡಾರವು ನಿಂದೆ ಪ್ರಾಣ ಹೋಗುವಾಗವು ಬಾರವು ಹಿಂದೆ 4 ರಂಗೇಶವಿಠಲನ ನಂಬಿದವ ಜಾಣ ಅಂಗನೆಯರ ನಂಬಿದ ಮನುಜನೆ ಕೋಣ 5
--------------
ರಂಗೇಶವಿಠಲದಾಸರು