ಒಟ್ಟು 149 ಕಡೆಗಳಲ್ಲಿ , 54 ದಾಸರು , 142 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸಿ ಬದುಕಿ ಸಾರ್ಥಕೆನಿಸಿ | ವ್ಯರ್ಥ ಆಯು ಕಳೆಯದಂತೆಕರುಣಿಯಿಂದ ಶರಣರನ್ನ | ಪೊರೆವ ಹರಿಯನು ಪ ಪಾದ | ದ್ವಿಜ ಸುಧಾಮಗೊಲಿದ ಪಾದಭಜನೆ ಮಾಳ್ಪ ಸಾಧು ಜನರ | ನಿಜದಿ ಪೊರೆಯುವಾ 1 ಭೂಮಿಯಳೆದು ಬಲಿಯ ತುಳಿದ | ಸುಮನದಿಂದ ಬಾಗಿಲಕಾಯ್ದಭೂಮಿರಮಣನಾದ ಹರಿಯ | ಭೂಮಗುಣನ ಭವ್ಯ ಪಾದವಾ 2 ಸತಿ ಪಾದ | ವನ್ನೂ ಬಿಡದೆ ಸತತಾ 3 ರಕ್ಕಸಾರ ಸೊಕ್ಕ ಮುರಿದ | ತರ್ಕಕೆ ಗೋಚರಿಸಲೊಲ್ಲಪಕ್ಷಿವಾಹ ಪನ್ನಗಶಯನ | ಮಕ್ಕಳ ಮಾಣಿಕ್ಯ ಪಾದವ 4 ಸುರರು ತಮ್ಮ ಹೃದಯದಲ್ಲಿಹರುಷದಿಂದ ಪೂಜಿಪಾ | ಗುರು ಗೋವಿಂದ ವಿಠಲನಾ 5
--------------
ಗುರುಗೋವಿಂದವಿಠಲರು
ಸ್ಮಾರ್ತರ ನಿಂದನೆ ಮಾಡುವ ಕೆಟ್ಟ ಧೂರ್ತನ ಬಾಯ ಮೇಲೆ ಹೊಡೀ ಹೊಡೀ ಪ ಕರ್ತಾರ ಸ್ವರ ಸಮನೆನಿಸುವವರ ಪುರು- ಷಾರ್ಥಯುತ ಶೃತಿ ಶಾಸ್ತ್ರ ಪ್ರವರ್ತರ ಅ.ಪ ಪ್ರಮಾಣವನುಸರಿಸುವರ ವಿಹಿತವಾಗಿ ತಮ್ಮಂತೆ ಸರ್ವರನು ವಿಶೇಷದಿಂದರ್ಚಿಸುವವರ ಪ್ರಕಾಶಿಸುವವರ ಕರ್ಮ ಸಮ್ಯಜ್ಞಾನವಸಂಪಾದಿಸುವರ 1 ವೇದಾಭ್ಯಾಸದಿ ಕಾಲವ ಕಳೆಯುತ ವಿಹಿತರಿವರೆನಿಸಿಕೊಳ್ಳುವರ ಭೇದಾಭೇದಗಳರಿಯುತಲೀ ಬ್ರಹ್ಮವಾದದಲಿ ಸಂತೋಷಿಪರ ಪ್ರೀತಿಯ ಮಾಡುವರ ಹೃದ್ಗುಹೆಯಲಿ ನೋಳ್ಪರ 2 ನಂಬಿರುವವರ ವಿಧಿ ಪರೇಶನಲ್ಲಿಸಮನ್ವಯಿಸುವರ ಭಕ್ತಿಯಲಿ ಪೂಜಿಪರಾ ಸಂಪಾದಿಸೆ ಪಾತ್ರರಾದವರ 3
--------------
ಗುರುರಾಮವಿಠಲ
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ
ಹೆಜ್ಜೆ ತೋರೆ ಕಾಲಗೆಜ್ಜೆ ತೋರೆ ಸಾರಥಿ ಪಟ್ಟದ ರಾಣಿ ಹೆಜ್ಜೆ ತೋರೆ ಪ ಕಾಲಲಂದಿಗೆ ನೂಪುರವಿಟ್ಟ ಹೆಜ್ಜೆ ತೋರೆ ಕಾಳಿಮರ್ದನ ಕೃಷ್ಣನರಸಿಯೆ ಹೆಜ್ಜೆ ತೋರೆ ಕಾಲಸರವು ಪಾಡಗನಿಟ್ಟ ಹೆಜ್ಜೆ ತೋರೆ ಕಾಳಿಂದಿ ರಮಣನ ಸತಿಯೆ ಹೆಜ್ಜೆ ತೋರೆ 1 ಬಡವರ ಮನೆಗೆ ನಡದು ಬರುವ ಹೆಜ್ಜೆ ತೋರೆ ಬಡನಡು ಬಳುಕುತ ನಡೆಯುವ ಪುಟ್ಟ ಹೆಜ್ಜೆ ತೋರೆ ಸಡಗರದಲಿ ಹರಿಯೊಡನೆ ಬರುವ ಹೆಜ್ಜೆ ತೋರೆ ಪೊಡವಿಗೊಡೆಯ ಶ್ರೀ ಕೃಷ್ಣನರಸಿಯೆ ಹೆಜ್ಜೆ ತೋರೆ2 ಲುಲ್ಲುರುಳಿ ಪೈಜನಗಳು ಹೊಳೆವ ಹೆಜ್ಜೆ ತೋರೆ ಉಲ್ಲಾಸದಿ ಸುರರೆಲ್ಲರು ಸ್ತುತಿಪ ಹೆಜ್ಜೆ ತೋರೆ ಫುಲ್ಲಾಕ್ಷನ ಒಡಗೂಡುತ ಬರುವ ಹೆಜ್ಜೆ ತೋರೆ3 ಪದ್ಮ ರೇಖೆಗಳಿಂದ ಶೋಭಿಪ ಹೆಜ್ಜೆ ತೋರೆ ಪದ್ಮನಾಭನ ಕೂಡಿ ಬರುವ ಹೆಜ್ಜೆ ತೋರೆ ಪದ್ಮದೊಳು ಪುಟ್ಟಿರುವ ಪುಟ್ಟ ಹೆಜ್ಜೆ ತೋರೆ ಪದ್ಮಮುಖಿಯೆ ಶ್ರದ್ಧೆಲಿ ಭಜಿಪರು ಹೆಜ್ಜೆ ತೋರೆ4 ವಿರೋಧಿಕೃತ ಸಂವತ್ಸರ ಬರುತಿರೆ ಹೆಜ್ಜೆ ತೋರೆ ವಿರೋಧಿಗಳ ದೂರೋಡಿಪ ದಿವ್ಯ ಹೆಜ್ಜೆ ತೋರೆ ಸರೋಜದಳದೊಳು ಶೋಭಿಪ ದಿವ್ಯ ಹೆಜ್ಜೆ ತೋರೆ ಸುರರೆಲ್ಲರು ಕೊಂಡಾಡುತ ಸ್ತುತಿಪ ಹೆಜ್ಜೆ ತೋರೆ5 ನಿಗಮವೇದ್ಯಳೆ ನಿನ್ನ ಪೊಗಳುವೆ ಹೆಜ್ಜೆ ತೋರೆ ಅಗಣಿತ ಮಹಿಮನ ಗುಣಗಳ ಪೊಗಳುವೆ ಹೆಜ್ಜೆ ತೋರೆ ಬಗೆ ಬಗೆ ಭಕುತರು ಪೂಜಿಪ ನಿನ್ನ ಹೆಜ್ಜೆ ತೋರೆ ಖಗವಾಹನನೊಡಗೂಡುತ ಬರುವ ಹೆಜ್ಜೆ ತೋರೆ6 ಕಮಲ ಮುಖಿಯೆ ಕರುಣವ ಮಾಡಿ ಹೆಜ್ಜೆ ತೋರೆ ಕಮಲನಾಭ ವಿಠ್ಠಲನ್ನ ರಾಣಿ ಹೆಜ್ಜೆ ತೋರೆ ಕಮಲಾಕ್ಷಿಯರಿಂದ ಪೂಜೆಗೊಳ್ಳುವ ಹೆಜ್ಜೆ ತೋರೆ ಸುಮನಸವಂದ್ಯನ ಸತಿಯೆ ನಮಿಪೆ ಹೆಜ್ಜೆ ತೋರೆ7
--------------
ನಿಡಗುರುಕಿ ಜೀವೂಬಾಯಿ
4 ಲೋಕನೀತಿ294ಅಂದೇನಿಂದೇನಯ್ಯ ಶ್ರೀಅರವಿಂದನಾಭನ ಹಗೆಯವ ಅಸುರಎಂದಿಗೆ ಮತಿ ಕವಲಿಲ್ಲದೆ ಹರಿಪದಹೊಂದಿದಗೆ ಮುಕ್ತಿಯವಸರ ಪ.ಅಂದಿಗೆ ಹರಿಮಹಿಮೆಗಳನ್ನು ಆನಂದದಿಂದ ಕೇಳದವ ದ್ವೇಷಿಇಂದಿಗೆ ಹರಿಕಥೆ ತಾತ್ವಿಕ ಜನರನುನಿಂದಿಸುವವನೆ ನಿಜದ್ವೇಷಿ 1ಸರ್ವಹ ಕೃಷ್ಣಾಕೃತಿಗೆ ವೈರ್ಯಾಗಿ ಬಹುಗರ್ವಿಪ ಕಂಸನು ಅತಿತಾಮಸಉರ್ವಿಲಿ ನರಹರಿ ಚರಣವರ್ಚಿಸದೆಶರ್ವಸರ್ವೋತ್ತಮನೆಂಬವತಾಮಸ2ವಾಸುದೇವನ ಪಾಶದಿ ಬಿಗಿಸುವೆನೆಂದುಆಶಿಸಿ ಕೆಟ್ಟ ಕೌರವ ಕುಮತಿದೋಷ ಧರ್ಮವನೆಲ್ಲ ಸರಿಮಾಡಿ ಶಾಕ್ತನಾಗ್ಯಾಸುರಿ[ಯ] ಪೂಜಿಪ ಹೊಲೆ ಕುಮತಿ 3ರುಕ್ಮಿಣಿ ದೇವಿಯೆ ಲಕ್ಷ್ಮಿಯೆಂದು ತಿಳಿಯದರುಕ್ಮನು ಮದಸೊಕ್ಕಿದ ಪಾಪಿಲೆಕ್ಕವರಿಯದೆ ಜೀವೇಶರು ಸಮರೆಂದುಲೆಕ್ಕಿಸುವವ ನರರೊಳು ಪಾಪಿ 4ಕೃತಕ ಹಕ್ಕಿಯನೇರಿ ತಾ ವಾಸುದೇವನೆಂದುಅತಿಕ್ಲೇಶವುಂಡ ಪೌಂಡ್ರಕ ಕಲಿಯುಸಕಳ ಜಗದೊಡೆಯ ಪ್ರಸನ್ವೆಂಕಟೇಶನಭೃತ್ಯನಾಗದೆಯೆ ನಾನೆಂದವ ಕಲಿಯು 5
--------------
ಪ್ರಸನ್ನವೆಂಕಟದಾಸರು
ಎಚ್ಚರದಲಿ ನಡೆ ಮನವೆ - ನಡೆಮನವೆ - ಮುದ್ದುಅಚ್ಯುತನ ದಾಸರ ಒಡಗೂಡಿ ಬರುವೆ ಪ.ಧರ್ಮವ ಮಾಡುವುದಿಲ್ಲಿ - ಇನ್ನುಬ್ರಹ್ಮನ ಸಭೆಯ ತೋರುವರು ಮುಂದಲ್ಲಿಕರ್ಮಯೋಜನೆಗಳು ಇಲ್ಲಿ - ಬೆನ್ನಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ 1ಅನ್ನದಾನವ ಮಾಳ್ಪುದಿಲ್ಲಿ - ಮೃಷ್ಟಾನ್ನವ ತಂದು ಮುಂದಿಡುವರು ಅಲ್ಲಿಅನ್ಯಾಯ ನುಡಿಯುವುದಿಲ್ಲಿ - ಭಿನ್ನಭಿನ್ನವ ಮಾಡಿ ತಿನ್ನಿಸುವರು ಅಲ್ಲಿ 2ಮೋಸವ ಮಾಡುವದಿಲ್ಲಿ - ಸೀಸಕಾಸಿ ಬಾಯೊಳಗೆ ಹೊಯ್ಯುವರಲ್ಲಿದಾಸರ ಪೂಜಿಪುದಿಲ್ಲಿ - ಉರ್ವೀಶಾಧಿಪತಿ ಬಂದನೆಂಬರು ಅಲ್ಲಿ 3ವಂಚನೆ ಮಾಡುವದಿಲ್ಲಿ - ಕಾದಹಂಚಿನ ಪುಡಿಯ ತಿನ್ನಿಸುವರು ಅಲ್ಲಿಪಂಚಾಮೃತದ ಪೂಜೆ ಇಲ್ಲಿ ನಿನಗೆಕಂಚು - ಕಾಳಾಂಜಿಯ ಪಿಡಿದಿಹರಲ್ಲಿ 4ಚಾಡಿಯ ನುಕಿವುದು ಇಲ್ಲಿ ಅದ -ನಾಡಿದ ನಾಲಗೆ ಸೀಳುವರಲ್ಲಿಬೇಡಬಂದರೆ ಬಯ್ವುದಿಲ್ಲಿ ನಿನ್ನ -ಓಡಾಡುವ ಕಾಲು ಕತ್ತರಿಪರಲ್ಲಿ 5ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು -ಹದ್ದು ಕಾಗೆಗಳಿಗೆ ಈಯುವರಲ್ಲಿಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ -ಗುದ್ದಲಿ ಬೆನ್ನೊಳು ಎಳೆಯುವರಲ್ಲಿ 6ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ -ಕಟ್ಟಿ ಈಟಿಯಿಂದ ಇರಿಯುವರಲ್ಲಿಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲುಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ 7ಆಲಯದಾನವು ಇಲ್ಲಿ ವಿ -ಶಾಲ ವೈಕುಂಠನ ಮಂದಿರವಲ್ಲಿಆಲಯ ಮುರಿಯುವುದಿಲ್ಲಿ ನಿನ್ನ -ಶೂಲದ ಮೇಲೇರಿಸಿ ಕೊಲುವರಲ್ಲಿ 8ತಂದೆ ಮಾತನು ಮೀರುವುದಿಲ್ಲಿ ಹುಲ್ಲು -ದೊಂದೆಯಕಟ್ಟಿ ಸುಡಿಸುವರಲ್ಲಿತಂದೆ ತಾಯ್ಗಳ ಪೂಜೆ ಇಲ್ಲಿ ದೇ -ವೇಂದ್ರನ ಸಭೆಯ ತೋರುವರು ಮುಂದಲ್ಲಿ 9ಗಂಡನ ಬೈಯ್ಯುವುದಿಲ್ಲಿ ಬೆಂಕೆಕೆಂಡವ ತಂದು ಬಾಯಲಿ ತುಂಬುವರಲ್ಲಿಕೊಂಡೆಯ ನಡಿಸುವುದಿಲ್ಲಿ ಬೆಂಕೆಕುಂಡವ ತಂದು ತಲೆಯಲಿಡುವರಲ್ಲಿ 10ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನಕಣ್ಣಿಗೆ ಸುಣ್ಣವ ತುಂಬುವರಲ್ಲಿಕನ್ಯಾದಾನವ ಮಾಳ್ಪುದಿಲ್ಲಿ ನಮ್ಮಚಿನ್ನಪುರಂದರವಿಠಲನೊಲಿವನು ಅಲ್ಲಿ11
--------------
ಪುರಂದರದಾಸರು
ಎಷ್ಟೋಹರಿಮರುತರ ಕೃಪಿ ನಿನ್ನಲ್ಲಿ |ಕೆಟ್ಟುದೇ ಭೂಷಣವಾಗಿಹುದೋ ಪಾರ್ವತೀ ರಮಣ ಪವಿಷವನ್ನೆ ಭೋಜನ ಮಾಡಿ ಜೀರ್ಣಿಸಿಕೊಂಡಿ |ವಸನಬಿಟ್ಟು ಜಿನಸ್ಥಿ ಭಸ್ಮ ಧರಿಸಿ ||ವೃಷಭವಾಹನನಾಗಿ ಭೂತ ಪ್ರೇತಗಳೊಳು ಸ್ಮ |ರಿಸದ ಭೂಮಿಯೊಳಿರಲು ಪೂಜಿಪರು ಸುರರೆಲ್ಲ 1ತಂದೆ ತಲೆ ಕಡಿದುದಕೆಕುಂದುಹೊಂದದಲಿದ್ದೆ |ನಿಂದಿತನ ಶಿರದ ಮೇಲಿರಿಸಿಯಿದ್ದೆ ||ಒಂದೊಂದೆ ನೀನೆ ಪರದೈವ ಎಂದು ಪೇಳ್ದೆ | ಗೋವಿಂದನಿಂದರ್ಚನೆಯ ಕೊಂಡೆ ಭಳಿ ಭಳಿರೆ ಶಿವ 2ಗುರುವೆನಿಸಿಕೊಂಬೆ ಪ್ರಾಣೇಶ ವಿಠಲನೊಳು | ಮತ್ಸರಿಸುತಿಹ ಖಳರಿಗೆ ಇದಲ್ಪವೇನೊ ||ಸರಿವಬ್ಬರಿಗೆ ಆಹೆನೆಂಬುವನು ಕೆಡುವ ನೀ |ಉರುಗನಂತಾಗಬೇಕೆಂದಾಗಿ ಮೆರೆದೆಲವೊ3
--------------
ಪ್ರಾಣೇಶದಾಸರು
ಕಂಡೆನು ಪಾರ್ವತಿಯಾ | ಮೈಸೂರ |ಚಾಮುಂಡೇಶ್ವರಿಯಾ ಪಕಂಡೆನು ಕರುಣದಿ ಭಕ್ತರ ಪಾಲಿಪ |ಚಂಡಿಕರಾಳಿಯ ಪುಂಡರೀಕಾಕ್ಷಿಯ ಅಸುತ್ತಲು ಜ್ಯೋತಿಗಳ | ಹೊಳೆಯುವ |ಮುತ್ತಿನ ಕಾಂತಿಗಳೂ ಚಕೆತ್ತಿದ ನವಮಣಿರತ್ನದಿ ಶೋಭಿಪ |ಉತ್ತಮ ಕನಕಾಭರಣ ಭವಾನಿಂiÀi 1ಸಹಸ್ರಾಯುಧಭರಿತೇ | ನೀಕ್ಷಿಸೆ |ಸಹಸ್ರ ಹಸ್ತದಾತೇ |ಸಹಸ್ರರೂಪದಿ ಜಗವನು ಪಾಲಿಪ |ಸಹಸ್ರನಾಮದ್ವಯ ಸಹಸ್ರಲೋಚನೆಯ 2ಸಂಭ್ರಮದಲಿ ಚಂಡಾಮುಂಡರು |ಡೊಂಬಿಯೊಳ್ ಪ್ರಚಂಡಾ- |ರೆಂಬಾ ದೈತ್ಯಕದಂಬವ ಖಂಡಿಸಿ |ಕುಂಭಿüüನಿಗಿಳುಹಿದ ಶಾಂಭವೆ ಶಕ್ತಿಯ 3ರಾಜ ಕುಲಕೆ ದೀಪಾ | ಮೈಸೂರ್ |ರಾಜ ಕೃಷ್ಣ ಭೂಪಾ |ರಾಜನು ದಿನ ದಿನ ಪೂಜಿಸಿ ನಮಿಸುವ |ರಾಜ ರಾಜಗಿರಿರಾಜಕುಮಾರಿಯ 4ಚಂದ್ರಕೋಟಿವದನೇ | ಶೋಭಿಪ |ನಂದಕುಂದರದನೇ |ಮಂದಗಮನೆ ಗೋವಿಂದನ ಪೂಜಿಪಚಂದಿರಧರನರ್ಧಾಂಗಿಯ ಚರಣವ ||ಕಂಡೆನು||
--------------
ಗೋವಿಂದದಾಸ
ಧರ್ಮಕ್ಕೆ ಕೈಬಾರದೀಕಾಲ - ಪಾಪ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕರ್ಮಕ್ಕೆ ಮನ ಬಾಹುದೀ ಕಲಿಕಾಲ ಪ.ದಂಡದೋಷಕೆ ಉಂಟು ಪುಂಡುಪೋಕರಿಗುಂಟು |ಹೆಂಡಿರು - ಮಕ್ಕಳಿಗಿಲ್ಲವೀ ಕಲಿಗಾಲ ||ಭಂಡೆಯರಿಗುಂಟು ದಿಂಡೆಯರಿಗುಂಟು - ಬೇಡಿ - |ಕೊಂಡಿವರಿಗಿಲ್ಲವು ಈ ಕಲಿಕಾಲ 1ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು |ಹೆತ್ತತಾಯಿಗಿಲ್ಲ ಈ ಕಲಿಕಾಲ ||ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ |ಉತ್ತಮರಿಗೆ ಇಲ್ಲವೀ ಕಲಿಕಾಲ 2ಹುಸಿದಿಟವಾಯಿತು ರಸ - ಕಸವಾಯಿತು |ಮಸಿ ಮಾಣಿಕವಾಯಿತೀಕಾಲ ||ವಸುಧೆಯೊಳಗೆ ನಮ್ಮ ಪುರಂದರವಿಠಲನ |ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ 3
--------------
ಪುರಂದರದಾಸರು
ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ ಬೇಡುತಿರ್ಪೆವು ಪಸಾರಸಾಕ್ಷಿಯೆ ಸರ್ಪವೇಣಿಯೆನಾರಿಯೆ ವೈಯ್ಯಾರಿಯೆ ಶ್ರೀಹರಿ ಸಹಿತದಿ ಅ.ಪಯಜÕನಾಮಕ ಹರಿಯ ರಾಣಿಯಜÕ ಇಂದಿರಾಹಿರಣ್ಯಹರಿಣಿಸುಜÕರಾದ ಜನರ ಪೊರೆವೆಸತ್ಯಾಶ್ರಿ ನಿತ್ಯಾಶ್ರೀ ಸುಗಂಧಿ ಸುಂದರಿ 1ಪ್ರಾಜÕಸುಖಾ ಸುಗಂಧಿ ಸುಂದರಿವಿದ್ಯಾ ಶ್ರೀ ಸುಶೀಲದೇವಿಸುಜÕರಾದ ಜನರೊಳಿರಿಸುತಕ್ಷಣ ಈಕ್ಷಿಸು ಸುಲಕ್ಷಣ ದೇವಿಯೆ 2ಶಾಂತಿಮಾಯೆಕೃತಿಯೆಇಂದಿರೆಶಾಂತಚಿತ್ತದಿ ಧ್ಯಾನಿಸುವರಾ ನಿ-ರಂತರದಿ ಪೊರೆವೆ ಜಯಮಂಗಳೆ ಉತ್ತುಂಗಳೆ ಶೃಂಗಾರ ರೂಪಳೆ 3ನಗುತ ನಗುತ ಬಾರೆ ಬೇಗನಗಧರನ ಸನ್ನಿಧಿಗೆ ಈಗಖಗವಾಹನನ ಮಡದಿ ನಿನ್ನಅಡಿಗಳ ಪೂಜಿಪೆ ಸಡಗರದಿಂದಲಿ 4ಪರಿಮಳೋದಕದಿಂದ ನಿನ್ನಚರಣಗಳನು ತೊಳೆದು ದಿವ್ಯವರಮಣಿಯ ಪೀಠದಲಿ ಕೂಡಿಸಿಪರಿಪರಿ ಪುಷ್ಪದಿ ಪೂಜಿಸಿ ನಲಿಯುವೆ 5ಹರಿಯರಾಣಿ ನಿನಗೆ ದಿವ್ಯಹರಿದ್ರಾಕುಂಕುಮಾಕ್ಷತೆಗಳಿಂದವರಕಲ್ಹಾರಪೂವ್ಗಳಿಂದಲಿಸುರಗಿ ಶಾವಂತಿಗಿ ತುರುಬಿಗೆ ಮುಡಿಸುವೆ 6ಎಣ್ಣೂರಿಗೆ ಹೋಳಿಗೆಯು ಕಡಬುಸಣ್ಣನಕ್ಕಿ ಶಾಲ್ಯನ್ನಗಳುಇನ್ನು ಬಗೆ ಬಗೆಯ ಭಕ್ಷಂಗಳನೂಸ್ವರ್ಣ ಪಾತ್ರೆಗಳಲ್ಲಿ ಇರಿಸುತ ನಲಿವರು 7ಕ್ಷೀರಘೃತದಧ್ಯಾನ್ನ ಮಂಡಿಗೆಶಾವಿಗೆ ಪರಮಾನ್ನಗಳನುಶ್ರೀರಮೇಶನಿಗರ್ಪಿಸೆನುತಬೇಡುವೆ ಪಾಡುವೆ ಕೊಂಡಾಡುತ ನಲಿಯುವೆ 8ಮುದ್ದು ಮಹಾಲಕ್ಷ್ಮಿ ನಿನಗೆಇಡಲಿ ದೋಸೆಗಳ ಸಹಿತಪದ್ಮನಾಭನಿಗರ್ಪಿಸೆನುತಶ್ರದ್ಧೆಯಿಂ ನಮಿಸುತ್ತಾ ಬೇಡುತಲಿರುವರು 9ಗಂಗಾಜನಕನರಸಿ ನಿನಗೆಮಂಗಳಾರುತಿಗಳ ಮಾಡಿಹಿಂಗಿಸುವೆ ಪಾಪಗಳೆನುತಾವಂದಿಸಿ ಸಾಷ್ಟಾಂಗದಿಂ ಚಂದದಿ ಪ್ರಾರ್ಥಿಪೆ 10ಕರ್ಪೂರದ ಅಡಿಕೆ ವೀಳ್ಯಅರ್ಪಿಸುತಲಿ ನಿನ್ನ ಪೂಜಿಸಿಮುಪ್ಪುರಾಂತಕ ಕಮಲನಾಭವಿಠ್ಠಲ ವಿಠ್ಠಲ ವಿಠ್ಠಲನರಸಿಯೆ 11
--------------
ನಿಡಗುರುಕಿ ಜೀವೂಬಾಯಿ
ಭುವನವನಾ ಯಂಧ್ಯಾಗಿದ್ದರೆಕರ|ಸುವದು ನಿರಂತರ ಲೋಕದಲೀ ||ಅವಿದಿತ ನಾನು ಅದನ್ನ ಆಪನಿತು |ವಿವರಿಸುವೆನು ಕಲಿಗಳು ಕೇಳೀ ಪರವಿಮೂಡವ ಮುಂಚೇಳುತ ಶ್ರೀಮಾ |ಧವನ ಸ್ಮರಿಸುತಿರಲದೆ ಭವನಾ ||ಯುವತಿಯರಾ ವ್ಯಾಳ್ಯದಲಿ ಮೊಸರು ಮಥ |ನವ ಮಾಡುತಿಹರು ಅದೆ ಭವನಾ 1ಶಂಖ ಚಕ್ರ ಮೊದಲಾಯುಧ ಧರಿಸದೆ |ಮಂಕುಗಳಿರುತಿಹರದೇ ವನಾ ||ಸಂಕಟ ಚೌತೀ ಶಿವನಿಸಿ ಭೂತ ಶ |ಶಾಂಕನ ಪೂಜಿಪರದೇ ವನಾ 2ಅಂಗನಿಯರು ತಿಲಕಾಯುಧ ಕುಂಕುಮ |ಶ್ರಿಂಗರವಾಗಿ ಹರದೆ ಭವನಾ ||ಅಂಗಣದಲಿ ವೃಂದಾವನ ಗೋವ್ಗಳು |ರಂಗವಲಿಕ್ಕುವರದೆ ಭವನಾ 3ಸರುವರು ಸರ್ವದ ದುಷ್ಟ ಶಬ್ದ ಉ |ಚ್ಚರಿಸುತಲಿಪ್ಪರು ಅದೇ ವನಾ ||ಹರಿಗತಿ ಪ್ರಿಯಕರ ತುಲಸಿಲ್ಲದ ಮಂ |ದಿರವೆ ನಿಶ್ಚಯವಾಗಿ ವನಾ 4ರಾಮಾರ್ಪಿತದನ್ನವ ಹೋಮಿಸಿದ |ಧೂಮ ವ್ಯಾಪಿಸಿಹದದೆ ಭವನಾ ||ಭಾಮಿನಿಯರು ಕೆಲಸವ ಮಾಡುತಖಳ|ಭೀಮನ ಸ್ಮರಿಸುವರದೆ ಭವನಾ 5ದೇವಪೂಜೆ ನೈವೇದ್ಯವು ವೈಶ್ವ |ದೇವ ಯಂಬದಿಲ್ಲದೇ ವನಾ ||ಆವ ಕಾಲಕೂ ವೇದ ವೇದ್ಯ ಭೂ |ದೇವರು ಬರದಿಹದದೇ ವನಾ6ವೇದ ಪುರಾಣದ ಘೋಷವು ಸರ್ವದ |ಭೂ ದಿವಿಜರ ಸಂದಣೆ ಭವನಾ ||ವಾದಿಗಳ ಹಳಿದು ಮಧ್ವರಾಯರಾ |ರಾಧನೆ ಮಾಡುವರದೆ ಭವನಾ 7ಹಿಕ್ಕದೆ ತಲಿ ಕಚ್ಚಿಲ್ಲದೆ ತಿರುಗುತ |ಮಕ್ಕಳನಳಿಸುವರದೇ ವನಾ ||ಸೊಕ್ಕಿಲಿ ಗಂಡತ್ತಿಗಳಿಗೆ ಬೈತಿಹ |ರಕ್ಕಸಿ ಹೆಂಗಸಿಹದೇ ವನಾ 8ತಂಬೂರಿ ತಾಳಂಗಳ ಸುಸ್ವರ |ತುಂಬಹದೆಂದೆಂದು ಭವನಾ ||ಉಂಬುವಾಗಪ್ರತಿಪ್ರತಿ ತುತ್ತಿಗೆ | ಪೀತಾಂಬರನ ಸ್ಮರಿಪರದೆ ಭವನಾ 9ರೌಚ ದಂತ ಧಾವನ ಮೊದಲಾದ ಸ |ದಾಚಾರಿಲ್ಲಲ್ಲದೇ ವನಾ ||ಯಾಚಕರಿಗೆ ತುತ್ತನ್ನವಿಲ್ಲ ಮ |ತ್ತ್ಯೋಚನಿ ಯಾತಕೆ ಅದೇ ವನಾ 10ಹರಿದಿನದಲಿ ಸರ್ವರು ನಿರ್ಜಲ ಜಾ |ಗರವನು ಮಾಡುವರದೇ ಭವನಾ ||ಮರುದಿನ ಭೋಜನ ಸೂರ್ಯೋದಯ ಕಂ |ತರಿಸದೆ ಮಾಡುವರದೆ ಭವನಾ 11ಉದಯಾಗಿ ತಾಸಾದರನ್ನನರ|ಸುದತಿಯರೇಳದ ಮನೇ ವನಾ ||ಪದುಮನಾಭ ನಾಮೋಚ್ಚಾರಣೆ ಯಂ |ಬದು ಎಂದೆಂದಿಲ್ಲದೇ ವನಾ 12ಪ್ರತಿದಿನ ಧರ್ಮಕೆ ಪ್ರತಿಕೂಲಾಗದ |ಸತಿಸುತರಿದ್ದರೆ ಅದೆ ಭವನಾ ||ವೃತಗಳು ಸದ್ದಾನಗಳು ತಿಳಿದನವ |ಕತ ಮಾಡುತಿಹ್ಯರದೆ ಭವನಾ 13ರೊಕ್ಕವಿದ್ದು ಸದ್ವ್ಯಯವಾಗದ ಯಳಿ |ಮಕ್ಕಳಿಲ್ಲದಿಹ ಸದನೇ ವನಾ ||ಮುಕ್ಕುಂದನ ದಾಸರ ನಿಂದಿಸುತಿಹ್ಯ |ಚಿಕ್ಕ ಮತಿಗಳೀಹದೇ ವನಾ 14ಮಾರುತ ಮತವನುಸರಿಸುತಲೀ ವ್ಯವ |ಹಾರ ಮಾಡುವದೆ ಭವನಾ ||ಮಾರುತಿ ಸುತ ಪ್ರಾಣೇಶ ವಿಠ್ಠಲನ ಪ |ದಾರಾಧನೆ ಮಾಡುವರದೆ ಭವನಾ 15
--------------
ಪ್ರಾಣೇಶದಾಸರು
ಮರೆಯದೆ ಮನದಲಿ ಸಿರಿವರನ ಚರಣವನುಸ್ಮರಿಸಿದಂಥವರನ್ನು ನರರೆನ್ನಬಹುದೆ ? ಪ.ಮುರಹರನಿಗೆರಗುವ ಶಿರವು ದ್ವಾರಕಾಪುರವುಹರಿಕಥೆ ಕೇಳುವಕರ್ಣ ಗೋಕರ್ಣವುಬಿರುದು ಪೊಗಳುವಜಿಹ್ವೆ ಸ್ಥಿರದಿ ಕ್ಷೀರಾರ್ಣವವರದನ ಪೂಜಿಪ ಕರವು ರಾಮೇಶ್ವರವು 1ಸೃಷ್ಟೀಶ ನಿರ್ಮಾಲ್ಯ ಗೃಹಣನಾಸಿಕ ಕಾಶಿಕೃಷ್ಣನ ನೋಡುವ ದೃಷ್ಟಿ ಶ್ರೀ ಮುಷ್ಣವುಅಷ್ಟಮದಗಳ ಜರೆದ ಮುಖ ಮಥುರಾಪುರವಿಷ್ಣುವನು ಪಾಡುವ ಕಂಠ ಭೂ ವೈಕುಂಠ 2ಪರಕೆ ನಡೆಸುವಜಂಘೆ ಹರಿವ ಗಂಗೆಯು ಈಪರಿಯಲೊಪ್ಪುವ ಅಂಗ ಶ್ರೀರಂಗವುಧರೆಯೊಳುಪುರಂದರ ವಿಠಲರಾಯನಪರಮಭಾಗವತರ ಉದರವೆ ಬದರಿ3
--------------
ಪುರಂದರದಾಸರು
ಮರೆಹೋಗಿ ಬುಧರೀ ತಾತನ್ನ ವರಗುರು ಸತ್ಯನಾಥನ್ನ ಪ.ಇಂದ್ರಿಯಜಿತ ಸುಜನೌಘ ಚಕೋರಕೆ ಚಂದ್ರನ್ನಮುದಸಾಂದ್ರನ್ನಮಂದರಧರಜಾನಕಿಪತಿ ರಾಮಚಂದ್ರನ ಪ್ರಿಯ ಮುನೀಂದ್ರನ್ನ1ಅಮಲಸುಖತೀರ್ಥ ಪ್ರಮೇಯಸಾಕಲ್ಯನಿರ್ಣಯ ಬಲ್ಲನ್ನಎಲ್ಲಾ ಬಲ್ಲೆಂಬೋ ಮಾಯಿಮತದಲ್ಲಣನ ಪಟುಮಲ್ಲನ 2ರುಕ್ಷಮಾಯಿಗಳ ಶಿಕ್ಷಿಪನ ಸಪಕ್ಷನ್ನ ಕರುಣಾಕ್ಷನ್ನಪಕ್ಷ್ಷಿಗಮನನ ದೀಕ್ಷೆಲಿ ಪೂಜಿಪ ದಕ್ಷನ್ನ ಸುರಪಕ್ಷನ್ನ 3ಶಂಕರನ ಗರ್ವ ಮುರಿದು ಬಿರುದಾಂಕನ್ನ ನಿಶ್ಯಂಕನ್ನಕಿಂಕರಜನಸÀುರಭೂರುಹ ಸುಗುಣಗಣಾಂಕನ್ನ ಶಶಿಗಧಿಕನ್ನ 4ಮರುತಮತಾಗ್ರಣಿಗುರುಸತ್ಯಾಧಿಸುತ ವಿರತನ್ನಾಮಲ ಚರಿತನ್ನಕರ್ತಪ್ರಸನ್ನವೆಂಕಟಪತಿಪದನಿರತನ್ನ ಶುಭಕರತನ್ನ5
--------------
ಪ್ರಸನ್ನವೆಂಕಟದಾಸರು
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯಾದವ ಯದುಕುಲ ಬಾಲನೆ ಬಾರೋಮಾಧವಮದನಗೋಪಾಲನೆ ಬಾರೋ ಪಸಾಧುಗಳೊಡೆಯ ಯಶೋದೆ ನಂದನೆ ಬಾರೋಶ್ರೀಧರ ಸುಗುಣ ಶರೀರನೆ ಬಾರೋ ಅ.ಪಮನೆಮನೆಯೊಳು ಮೊಸರ ಕಡೆವರು ಬಾರೋವನಜಾಕ್ಷಿಯರು ಬೆಣ್ಣೆ ಕೊಡುವರು ಬಾರೋತನಯರೊಡನೆ ಚಂಡಿನಾಟವಾಡಲು ಬಾರೋಕೊನೆ ಬೆರಳೊಳು ಪಿಡಿದ ಕೊಳಲನೂದುತ ಬಾರೋ 1ಸುರರುನಾರದರೆಲ್ಲ ಸ್ಮರಿಸುವರ್ ಬಾರೋಕರವಮುಗಿವೆ ನಿನ್ನ ಚರಣಕ್ಕೆ ಬಾರೋನರನಸಾರಥಿಕೃಷ್ಣ ಹರುಷದಿ ಬಾರೋ 2ಪಾಂಡುಪುತ್ರರ ಪಾಲ ಪಾಹಿಯೆಂಬೆನು ಬಾರೋಕಂಡು ರಕ್ಷಿಸೋ ಎನ್ನಕಮಲನಯನ ಬಾರೋಪಂಡರೀಪುರವಾಸ ಚಂಡವಿಕ್ರಮ ಬಾರೋಅಂಡಜವಾಹನಮಾರ್ತಾಂಡನಂತಿಳಿದು ಬಾರೋ 3ಗಂಧಚಂದನ ಪುಷ್ಪದಿಂದ ಪೂಜಿಪೆ ಬಾರೋಸುಂದರ ಚಿನುಮಯ ಮೂರ್ತಿಯೆ ಬಾರೋಮಂದರಧರಮದನಜನಕನೆ ಬಾರೋಇಂದಿರೆಯರಸ ಗೋವಿಂದನೆ ಬಾರೋ 4
--------------
ಗೋವಿಂದದಾಸ