ಒಟ್ಟು 154 ಕಡೆಗಳಲ್ಲಿ , 48 ದಾಸರು , 148 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕಾರತಿಯನೆತ್ತುವ ಬನ್ನಿ ನಮ್ಮಲೋಕನಾಥನಸಿರಿಪಾದವ ಬೆಳಗುವಪ.ತುಪ್ಪದೊಳ್ಬೆರಸಿದ ಮೂರು ಬತ್ತಿಯನಿಟ್ಟುಒಪ್ಪುವ ದೀಪಕ್ಕೆ ದೀಪಹಚ್ಚಿ ||ತಪ್ಪದೆ ಸಕಲ ಪಾಪಂಗಳ ಹರಿಸುವಅಪ್ಪ ವಿಠಲನ ಪದಾಬ್ಜವ ಬೆಳಗುವ 1ಹರುಷದಿ ಏಕಾರತಿ ಬೆಳಗಿದ ಫಲನರಕದಿಂದುದ್ಧಾರ ಮಾಡುವುದು ||ಪರಮ ಭಕುತಿಯಿಂದ ಬೆಳಗುವ ನರರನುಹರಿತನ್ನ ಹೃದಯದಿ ಧರಿಸುವನಯ್ಯ2ಅನ್ಯ ಚಿಂತೆ ಮಾಡದೆ ಅನ್ಯರ ಭಜಿಸದೆ ಮತ್ತನ್ಯ ದೇವರನು ಸ್ಮರಿಸದೆ ಅ ||ನನ್ಯವಾಗಿ ಶ್ರೀ ಪುರಂದರವಿಠಲನಪುಣ್ಯನಾಮಗಳ ಧ್ಯಾನಿಸುತ 3
--------------
ಪುರಂದರದಾಸರು
ಏಳು ವಾರಿಜನೇತ್ರ ಏಳು ಚಿನ್ಮಯಗಾತ್ರಏಳು ಪಾಂಡವಪಾಲ ಏಳುಸಿರಿಭೂಲೋಲಏಳು ಪಾವನಚರಿತ ಏಳೆರಡು ಜಗಭರಿತಏಳು ಯದುಕುಲಲಲಾಮಾ ಪ.ಮೂಡುತಿವೆಅರುಣಕಿರಣೋಡುತಿವೆ ತಮದ ಕುಲಬಾಡುತಿವೆ ತಾರಿನನ ಬೇಡುತಿವೆ ಚಕ್ರವಾಕಾಡುತಿವೆಕೀರಬಲು ಪಾಡುತಿವೆತುಂಬಿನಲಿದಾಡುತಿವೆಖಗಸಮೂಹರೂಢಿಯೊಳು ಮುನಿಜನರು ನೋಡಿ ರವಿಗತ ಹರಿಯಷೋಡಶುಪಚಾರಾರ್ಚನೆ ಮಾಡಿ ಮನದಣಿಯೆ ಕೊಂಡಾಡಿ ಕುಣಿದಾಡಿ ಭವಕಾಡನೀಡಾಡಿವರಬೇಡುತೈದಾರೆ ಗಡ ಹರಿಯೆ 1ವಿಷ್ಣುಪದೆ ವೃದ್ಧನದಿ ಕೃಷ್ಣವೇಣ್ಯಖಿಳ ಸಂಹೃಷ್ಟಿಪ್ರದೆ ಕಾವೇರಿ ಇಷ್ಟದಾ ಯಮುನೆಅಘನಷ್ಟಕಾರಣೆ ಭೀಮೆ ಶಿಷ್ಟಾಂಗೆ ತುಂಗೆವರತುಷ್ಟಿದಾಯಕ ನದಿಗಳುಕೃಷ್ಣ ನಿನ್ನಡಿಯುಗಳ ಸ್ಪøಷ್ಟರಾಗುತಲಿ ಉತ್ಕøಷ್ಟ ಪದ ಪಡೆವೆವೆಂದಷ್ಟ ದಿಗತಟದಿಂದಚೇಷ್ಟಿತ ತರಂಗದಿಂ ಸ್ಪಷ್ಟ ಬಂದಿರೆ ಕರುಣದೃಷ್ಟಿಯಿಂದವರ ನೋಡೈ ಹರಿಯೆ 2ಕೇಶನಾಕೇಶ ಕಕುಭೇಶಾದಿ ಅಮರರಾಕಾಶದಲಿ ದುಂದುಭಿಯ ಘೋಷ ಮೊಳಗಿಸಿದರನಿಮೇಷ ಮುನಿ ವೀಣೆಯುಲ್ಲಾಸದಿಂ ಮಿಡಿಮಿಡಿದು ಧನಶ್ರೀ ಭೂಪಾಳಿಯಿಂದಶೇಷಶಯನಖಿಳ ನಿರ್ದೋಷಗುಣಪೂರ್ಣಸರ್ವೇಶ ಮುಕುಂದ ಭಟಕೋಶನೆಂದವರು ನಿನ್ನಬೇಸರದೆ ಪಾಡುತಿಹರು ಶ್ರೀಶ ಪ್ರಸನ್ವೆಂಕಟೇಶನೆ ಒಲಿದುಪ್ಪವಡಿಸೊ ಹರಿಯೆ 3
--------------
ಪ್ರಸನ್ನವೆಂಕಟದಾಸರು
ಕೃಷ್ಣ ನಿಮ್ಮೆಲ್ಲರ ಬಿಟ್ಟನೆಒಬ್ಬ ಶ್ರೇಷ್ಠ ನಾರಿಯಮೇಲೆ ಮನಸಿಟ್ಟನೆ ಪ.ಸತ್ಯ ಸುಶೀಲಳು ಅವಳಮ್ಮಜನಕೆ ತತ್ವ ಬೋಧಿಸುವಳು ಇವಳಮ್ಮ 1ಕಾಂತೆ ಕೋಮಲ ಹೃದಯದವಳಮ್ಮಬುದ್ಧಿ ಭ್ರಾಂತಿ ಗೈಸುವವಳಿವಳಮ್ಮ 2ತಪ್ಪದೆ ಸಲಹುವಳವಳಮ್ಮಜನಕೆ ಒಪ್ಪುವ ಗುಣವ ತೋರುವಳಿವಳಮ್ಮ 3ಶ್ರೀಶನ ಬಿಡದಿಹಳವಳಮ್ಮಅತಿ ಮೋಸಗಾರುತಿಯು ಇವಳಮ್ಮ 4ಉತ್ತಮಳು ರಮಾ ಅವಳಮ್ಮಅತಿ ಕೀರ್ತಿಯ ಪಡೆದಿಹಳಿವಳಮ್ಮ 5
--------------
ಗಲಗಲಿಅವ್ವನವರು
ಗಿಳಿಯು ಪಂಜರದೊಳಿಲ್ಲ - ಶ್ರೀ ರಾಮ ರಾಮ |ಗಿಳಿಯು ಪಂಜರದೊಳಿಲ್ಲ ಪ.ಅಕ್ಕ ಕೇಳೆ ಎನ್ನ ಮಾತು ||ಚಿಕ್ಕದೊಂದು ಗಿಳಿಯ ಸಾಕಿದೆ ||ಅಕ್ಕ ನಾನಿಲ್ಲದ ವೇಳೆ |ಬೆಕ್ಕು ಕೊಂಡು ಹೋಯಿತಯ್ಯೋ 1ಅರ್ತಿಗೊಂದು ಗಿಳಿಯ ಸಾಕಿದೆ |ಮುತ್ತಿನ ಹಾರವನು ಹಾಕಿದೆ ||ಮುತ್ತಿನಂಥ ಗಿಳಿಯು ತಾನು |ಎತ್ತ ಹಾರಿ ಹೋಯಿತಯ್ಯೋ 2ಹಸಿರು ಬಣ್ಣದ ಗಿಳಿಯು |ಹಸಗುಂದಿ ಗಿಳಿಯು ತಾ |ಮೋಸ ಮಾಡಿ ಹೋಯಿತಯ್ಯೋ 3ಮುಪ್ಪಾಗದ ಬೆಣ್ಣೆಯ |ತಪ್ಪದೆ ಹಾಕಿದೆ ಹಾಲು ||ಒಪ್ಪದಿಂದ ಕುಡಿದು ತಾನು |ಗಪ್ಪನೆ ಹಾರಿ ಹೋಯಿತಯ್ಯೋ 4ಒಂಬತ್ತ ಬಾಗಿಲ ಮನೆಯು |ತುಂಬಿದ ಸಂರ್ದಶಿ ಇರಲು ||ಕಂಬ ಮುರಿದುಡಿಂಬ ಬಿದ್ದು |ಅಂಬರಕಡರಿ ಹೋಯಿತಯ್ಯೋ 5ರಾಮ ರಾಮ ಎಂಬ ಗಿಳಿಯು |ಕೋಮಲ ಕಾಯದ ಗಿಳಿಯು ||ಸಾಮಜಪೋಷಕ ತಾನು |ಪ್ರೇಮದಿ ಸಾಕಿದ ಗಿಳಿಯು 6ಅಂಗೈಯಲಾಡುವ ಗಿಳಿಯು |ಮುಂಗೈಯ ಮೇಲಿನ ಗಿಳಿಯು ||ರಂಗ ಪುರಂದರವಿಠಲನಂತ |ರಂಗದೊಳಿಹ ಗಿಳಿಯು 7
--------------
ಪುರಂದರದಾಸರು
ಚಂಚಲಿಸದಿರು ನೀನು ಚತುರನಾಗುವಂಚಿಸದೆ ಸಕಲವೊಪ್ಪಿಸು ಹರಿಗೆ ಮನವೆ ಪ.ಆರು ನಿನ್ನವರೆಂಬೆ ಅವರಗಲಿದರು ಕಡೆಗೆಭೂರಿಸಂಚಿತ ಸಂಪದೆರವಾಯಿತುಜಾರುತಿವೆ ಕ್ಷಣಲವಗಳೀಗಾಗೆ ತಿಳಿಯದುನಾರಸಿಂಹನ ನಂಬು ನಿಷ್ಠೆಯಲಿ ಮನವೆ 1ಅಲ್ಪಸುಖಕಾಗಿ ನೀ ಅನೇಕ ಸುಖ ಮರೆವರೆಕಲ್ಪಕಲ್ಪಕೆ ನಿರಯವುಣಲಿಬಹುದೆಅಲ್ಪರುಪದೇಶದಲಿ ಭ್ರಾಂತನಾಗದೆಶೇಷತಲ್ಪನ್ನ ಮರೆಹೋಗು ತಡೆಯದಲೆ ಮನವೆ 2ನಿನ್ನಿಂದಭವಬಂಧನವು ಮೋಚನವುನೋಡುನಿನ್ನಿಂದ ಪ್ರಸನ್ವೆಂಕಟೇಶನೊಲುಮೆಇನ್ನೆನ್ನ ದಣಿಸದಿರು ಇದರಿಂದ ಮೀರಿದರೆಘನ್ನಗುರು ಮಧ್ವೇಶನಾಣೆ ನಿನಗೆ 3
--------------
ಪ್ರಸನ್ನವೆಂಕಟದಾಸರು
ಜಯಜನನೀ ಶಾರದೆ ಜನನಮೃತಿಭಯಭಿದೆ ಪ.ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ.ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ 1ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ 2ಅನಘಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದಸನಕನುತೆ ಸನ್ನುತೆ ಘನಪಾಪಾಪಹ್ನುತೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯಮಂಗಳಂ ಮಹಾ ಶುಭಮಂಗಳಂಮಂಗಳಂಮದನಜನಕಂಗೆನಿತ್ಯಪ.ಶಂಕಾಸುರನ ಸೀಳಿ ಶ್ರುತಿಯ ತಂದವನಿಗೆಬಿಂಕದಿಂ ಮಂದರಕೆ ಬೆನ್ನಾಂತಗೆಪಂಕಜಾಸನಗೊಲಿದು ಪ್ರತ್ಯಕ್ಷನಾದವಗೆಶಂಕೆಯನು ಬಿಡಿಸಿ ಶಿಶುವನು ಹೊರೆದಗೆ 1ವಿತರಣಕೆ ಬಂದು ಬಲಿವಿಭವನಪಹರಿಸಿದಗೆಪತಿತ ಕ್ಷತ್ರಿಯರ ಸಂಹರಿಸಿದವಗೆಸತಿಯ ಕದ್ದವನ ದಶಶಿರಶತಖಂಡಿಸಿದಗೆಪಿತ ಮಾತೆ ಬಂಧನವ ಪರಿಹರಕಗೆ 2ಮುಪ್ಪುರದ ನಾರಿಯರ ಮನವ ಗೆದ್ದವಗೆತಪ್ಪದೆ ಕಲಿಬಲವ ತರಿದಾತಗೆಸರ್ಪಗಿರಿಯಲಿ ನಿಂತು ನಿತ್ಯಸುಖದಾತನಿಗೆಶ್ರೀಪ್ರಸನ್ವೆಂಕಟೊಡೆಯನೆನಿಪಗೆ 3
--------------
ಪ್ರಸನ್ನವೆಂಕಟದಾಸರು
ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ಪಕಲ್ಲ ಕಂಬದಿ ಮೈದೋರಲು ನರಹರಿಪ್ರಹ್ಲಾದನು ತಾಪತ್ರಯ ಬರೆದನೇ ಅ.ಪತರಳಧ್ರುವನು ವನದೀ ಸ್ವಾಮಿಗೆಚರರನು ಕಳುಹಿದನೇಕರಿರಾಜನು ತಾನ್ ಕರೆಯಲು ಪೋದನೆಹರಿಗೆ ರುಕ್ಮಾಂಗದ ವೀಳ್ಯವಿತ್ತಿಹನೇ 1ಅಂಬರೀಷನು ಹರಿಗೆ ದ್ರವ್ಯವತುಂಬಿಕಳುಹಿಸಿದನೇಅಂಬುಜನಾಭನು ಅಹಲ್ಯೆಗೆ ತಾತನೆಅಂಬರದಿಂ ಶೀರೆ ಇಳಿವುದೇ ದ್ರುಪದೆಗೆ 2ಅಣು ಮಹತ್ತೆನಿಸಿರುವಾ ಶ್ರೀಹರಿಬಣಗುಜನರ ಮುರಿವಾಗಣನೆಯಿಲ್ಲದೆ ಪ್ರಾಣಿಗಳನು ಸಲಹುವತ್ರಿನಯನ ಸಖನುತಾ ಮಣಿವರ ಮರೆವನೆ 3ಅನ್ಯ ಚಿಂತೆಗಳನ್ನು ಬಿಟ್ಟುಪನ್ನಗಶಯನನೂಘನ್ನ ಭಕ್ತಿಯೊಳುರೆ ಇನ್ನಾದರೂ ನೆನೆಮನ್ನಿಸದಿರೆ ಗೋವಿಂದನು ದಾಸರ 4
--------------
ಗೋವಿಂದದಾಸ
ನಲಿದಾಡಿದಳ್ ನಳಿನಾಂಬಕಿಒಲಿದೆಮ್ಮನು ಸಲಹಲೋಸುಗ ಪ.ಸುಲಲಿತ ವೀಣಾಪಾಣಿಜಲಜೋದ್ಭವರಮಣಿಸುಗುಣಿಅ.ಪ.ಕೃತೀಶಸುತೆ ಕೃಪಾನ್ವಿತೆಶ್ರುತಿಸಮ್ಮತಗೀತೆಪ್ರತಿರಹಿತೆ ಸತಿಪೂಜಿತೆರತಿಯಾಮಿತ ಶೋಭಿತಳೆ ಧೃತಿ ಸಂಭೃತೆ ಮತಿದಾಯಕಿ 1ಇಭೇಂದ್ರಗಮೆ ವಿಧುಮಂಡಲ-ನಿಭಮುಖಿ ಶಿಖಿಯಾನೆಅಭಯಪ್ರದೆ ಅಖಿಳೇಶ್ವರಿಸುಭಜೆ ಶುಭದೆ ವಿಬುಧೆ ಅಭವೆ ಸದ್‍ವಿಭವಾಸ್ಪದೆ 2ಪರಾಂಬರಿಸು ಪದಾಶ್ರಿತನಪ್ರಭಾಕರಶತಾಭೆಹರಿಲಕ್ಷ್ಮೀನಾರಾಯಣ-ಶರಣೆ ರತುನಾಭರಣೆ ಕರುಣಾರಸವರುಣಾಲಯೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಾರಾಯಣ ಎನ್ನಬಾರದೆ - ನಿಮ್ಮ |ನಾಲಿಗೆಯೊಳು ಮುಳ್ಳು ಮುರಿದಿಹುದೇ ? ಪ.ವಾರಣಾಸಿಗೆ ಪೋಗಿ ದೂರ ಬಳಲಲೇಕೆ |ನೀರ ಕಾವಡಿಯನು ಪೊತ್ತು ತಿರುಗಲೇಕೆ ||ಊರುರು ತಪ್ಪದೆ ದೇಶಾಂತರವೇಕೆ |ದಾರಿಗೆ ಸಾಧನವಲ್ಲವೆ ಹರಿನಾಮ ? 1ನಿತ್ಯ ಉಪವಾಸವಿದ್ದು ಹಸಿದು ಬಳಲಲೇಕೆ |ಮತ್ತೆ ಚಳಿಯೊಳು ಗಂಗೆ ಮುಳಗಲೇಕೆ ||ಹಸ್ತವ ಪಿಡಿದು ಮಾಡುವ ಜಪ - ತಪವೇಕೆಮುಕ್ತಿಗೆ ಸಾಧನವಲ್ಲವೇ ಹರಿನಾಮ ? 2ಸತಿ - ಸುತರನು ಬಿಟ್ಟು ಯತಿಗಳಾಶ್ರಮವೇಕೆವ್ರತ - ಕೃಚ್ಛ್ರ ನೇಮ - ನಿಷ್ಟೆಗಳೇತಕೆ ||ಪೃಥಿವಿಯೊಳಗೆ ನಮ್ಮ ಪುರಂದರವಿಠಲನ |ಅತಿ ಭಕುತಿಯಿಂದೊಮ್ಮೆ ನೆನೆದರೆ ಸಾಲದೆ 3
--------------
ಪುರಂದರದಾಸರು
ನೀನೆ ಕರುಣಿ ಗುರುವಾಸದೀನಬಂಧು ಭಕುತಪೋಷ ಪನೆರೆದು ಭಕುತಜನರುಸ್ಮರಿಪ ವರವ ನಡೆಸಿದರುಶನಿತ್ತು ದುರಿತರಾಸಿ ಪರಿಹರಿಸಿಪೊರೆವೆ ಸತತಪರಮಚರಿತ1ಒಪ್ಪಿ ಕಾಸುರುವ್ವಿಬಿಡದೆತಪ್ಪದೆ ಮೂರುಲೋಕದವರಿಂಕಪ್ಪಕೊಳ್ಳುವಿ ಅಸಮಲೀಲಅಪ್ಪ ತಿರುಪತಿತಿಮ್ಮಪ್ಪ2ಮಾರನಯ್ಯ ಮರಣದೂರಮೂರಜಗದ ಸಾರ್ವಭೌಮಧೀರ ಶ್ರೀರಾಮ ನಿಮ್ಮಪಾದವಾರಿಜದಾಸನೆನಿಸು ಎನ್ನ 3
--------------
ರಾಮದಾಸರು
ಪೋ ಪೋಗೆÀಲೋ ಸಾ ಸಾರೆಲೊನಗೆಗಿಂತೆನಲು ಮುನಿದು ಪೋದನೆಮನುಮಥನಯ್ಯ ಕಾಣೆ ಪ.ಎನ್ನ ಪೆಸರು ಮಾಧವನೆಂದೆಂಬರುಅನ್ಯರನೊಲ್ಲದೆ ನಿನ್ನೊಳು ಮನವಿಟ್ಟೆವನವ ತಿರುಗುವ ವಸಂತ ನೀನಾದರೆಮನೆಗ್ಯಾತಕೆ ಬಂದೆ 1ವಕ್ರದ ನುಡಿಗಳ ನುಡಿಯದಿರೆನ್ನನುಚಕ್ರಧರನೆಂದೆಂಬರು ಎನ್ನನುರೊಕ್ಕಕ್ಕೆ ಮಡಕೆಯ ಮಾರುವ ಕುಂಬಾರಒಕ್ಕಲ ಮನೆಗೆ ಪೋಗೋ 2ಹಿರಿಯರು ಹರಿಯೆಂದೆಂಬರು ಎನ್ನನುತರಳೆ ನೀನೇನಾದರೆ ಎಂದೆನದಿರುತರುಗಳೇರಿ ಕುಣಿದಾಡುವ ಕಪಿಗಳತೆರದೊಳಾಡು ಪೋಗು 3ಸರ್ಪನÀ ಮಸ್ತಕದಲಿ ನಲಿದಾಡುವೆಅಲ್ಪಕನೆಂದು ನೀ ಬಗೆಯದಿರೆನ್ನನುತಪ್ಪದೆ ಗಗನದೊಳಿಪ್ಪ ಗರುಡನುಬಪ್ಪನೆ ಪುರದೊಳಗೆ 4ಎನ್ನ ಮಹಂತರನಂತನೆಂದೆಂಬರುಮನ್ನ ಬಂದಂತೆ ನೀ ಮಾತುಗಳಾಡದಿರುಪನ್ನಂಗನಾದರೆ ಪಾತಾಳಕ್ಕೆ ಪೋಗುನಿನ್ನ ಸಂಗಕ್ಕೆ ಅಂಜುವೆ 5ಕಡಲೊಳಗಿಪ್ಪನೆಂದೆಂಬರು ಎನ್ನನುಮಡದಿಯೇನಾದರು ಎಂದೆನ್ನದಿರುಮಡಿದು ಮಡಿದು ಹೋಹ ಮೀನು ಮೊಸಳೆಗಳಗಡಣವ ಕೂಡು ಪೋಗು 6ಸಚರಾಚರಂಗಳ ಸೃಜಿಸಬಲ್ಲವನೆಂದುಸುಚರಿತ್ರ ದೇವತೆಯೆಂದೆಂಬರುಉಚಿತವೆ ಹೆಣ್ಣುಮಗಳ ಕೂಡೆ ಮೋಹದವಚನವು ನಿನಗೆ ರಂಗ ಪೋಗು 7ಆಲದೆಲೆಯಮೇಲೆ ಮಲಗಿಪ್ಪ ವಸ್ತು ನಾನುಪಾಲಮಾರುವವರಿಗೆ ಪರತತ್ವನೆಂಬರುಕಾಲಬೆರಳ ಚುಂಬಿಸುವಗ್ಯಾತಕೆ ಗೋಪಾಲಬಾಲೆಯರಾಟ 8ಮೈಯೊಳು ಸಾವಿರ ಕಣ್ಣುಗಳುಳ್ಳವನಯ್ಯನೆಂದು ದೇವತೆಗ-ಳ್ದಿವ್ಯಚಾರಿತ್ರ ದೇವತೆಯೆಂತೆಂಬರುಅಯ್ಯ ನೀನಾದರೆ ಅಹಲ್ಯಾದೇವಿಯಕಯ್ಯ ಪಿಡಿದ ಕಳ್ಳನೆ ಪೋಗು 9ಕಂಗಳ ಕುಡಿನೋಟಗಳಿಂದ ತ್ರಿಜ-ಗಂಗಳನೆಲ್ಲವ ಸಂಹರಿಸುವೆÀ ನಾನುರಂಗ ನೀನಾದರೆ ಕೊಲೆಗಡುಕನು ನ-ಮ್ಮಂಗಳಕ್ಕೆ ಬರಬೇಡವೊ 10ಸ್ವರ್ಗಕ್ಕೆ ಹೋದರೆ ನಿನ್ನವಗುಣವಿದುಅಗ್ಗಳಿಯದ ಹೊನ್ನನ್ಗೆ(?) ಬಗ್ಗುವಳಲ್ಲ ನೀಒಗ್ಗುವೆ ನಾ ನಿನಗಯ್ಯ ಸ್ವರ್ಗಾಪ-ವರ್ಗವ ಕೊಡುವವನೆ ಪೋ ಪೋ 11ಒಲಿದು ನಾ ನಿನ್ನ ಮನೆಗಾಗಿ ಬಂದರೆಕಲಹದ ಮಾತುಗಳಾಡದಿರು ಎನ್ನಲಲನೆಉರದÀಲ್ಲಿದ್ದು ನಾಭಿಕಮಲದಿಂದಛಲದಿ ಮಗನ ಪಡೆದೆ 12ಮುನಿಗಳರ್ಚಿಸುವ ಶ್ರೀಹಯವದನನು ನಾನುವನಿತೆಯೆನ್ನಿರವನು ಬಲ್ಲವರೆ ಬಲ್ಲರುಉಣಲೀಸೆ ಉಡಲೀಸೆ ತಲೆಯೂರಿ ತಪವನುವನದೊಳು ಮಾಡಿಸುವೆ 13
--------------
ವಾದಿರಾಜ
ಪ್ರತಿಪದೆಯ ದಿನರಂಭೆ : ಓಹೊ ಬಲ್ ಬಲ್ ಬಲ್ ಶ್ಯಾಣೆ ಜಾಣೆ ಪ.ಈ ದಿವಸದಿ ನಿನ್ನೆಯ ದಿನದವನನ್ನುಆದರಿಸಲು ಕಾರ್ಯೋದಯವೇನೆಓಹೋ ಬಲ್ ಬಲ್ ಶಾಣೆ ಜಾಣೆ ಅ.ಪ.ಊರ್ವಶಿ : ಚಿತ್ತಜರೂಪೆ ಸರ್ವೋತ್ತಮ ಭಾಷೆಯನಿತ್ತಿಹ ಕಾರಣದಿಉತ್ತಮ ಶ್ರೀಪಾದ ಎತ್ತಲು ಬೇಕೆಂದುಒತ್ತಾಯಗೈದ ಮೋದಿ 1ಮತ್ತೊಂದು ಕಾರಣ ಉಂಟು ಶ್ರೀಹರಿಗಿವನಿತ್ಯವಾಹನ ಕಾಣೆಲೆಇತ್ತ ಪಯಣಗೈವೊಡತ್ತಬೇಕಾದರೆಭೃತ್ಯನಿವನು ಹೇ ಬಾಲೆ 2ಆದಕಾರಣದಿಂದ ನಾದಿನಿ ಕೇಳೆ ಪ-ಕ್ಷಾದಿಯೊಳಿವನ ಮ್ಯಾಲೆಪಾದವ ನೀಡಿ ವಯೋದಯದಿಂದ ಶ್ರೀಮಾಧವಬರುವ ಕಾಣೆ3ಕೇರಿಕೇರಿಯ ಮನೆಯಾರತಿಗಳನೆಲ್ಲಶ್ರೀರಮಾಧವ ಕೊಳ್ಳುತಭೂರಿವಾದ್ಯಗಳ ಮಹಾರವದಿಂದಲಿಸಾರಿ ಬರುವನು ಸುತ್ತ 4ಭಾವೆನೀ ಕೇಳೆ ನಾನಾ ವಿಧದಿಂದಲಿಸೇವಕರಿಗೆ ದಯದಿಪಾವನಗೈದು ಮಹಾವಿನೋದೇಕಾಂತಸೇವೆಯ ಗೊಂಡ ಕಾಣೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರಗಮನನೆಅಗಣಿತಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿಅ.ಪಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ 1ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ 2ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ | 3ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ | 4ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ | 5ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | 6ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ 7ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ 8ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ 9ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ | 10ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ 11ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ 12ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ 13ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ 14ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ | 15ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ | 16ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ 17ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ | 18ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ 19ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | 20ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ 21
--------------
ಪುರಂದರದಾಸರು
ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
--------------
ಪ್ರಸನ್ನವೆಂಕಟದಾಸರು