ಒಟ್ಟು 520 ಕಡೆಗಳಲ್ಲಿ , 75 ದಾಸರು , 424 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಉತ್ಸವಗೀತೆ ಕೋಲುವ ನೋಡುವ ಬನ್ನಿ ಶ್ರೀರಂಗನಾಯಕಿಯ ಕೋಲುವ ನೋಡುವ ಬನ್ನಿರೆಲ್ಲ ಪ ಚಪ್ಪರವನು ಶÀೃಂಗರಿಸಿ ಪಟ್ಟುಪೀತಾಂಬರದ ಮೇಲೆ ಕಟ್ಟುಗಳಿಂದ ವಿಸ್ತರಿಸಿ ಕದಳಿಯಕೊನೆ ಕಬ್ಬು ತೆಂಗಿನ ಫಲಗಳ ವಿಧವಿಧವಾಗಿ ಶೃಂಗಾರ ಮಾಡಿದರು 1 ಭಾದ್ರಪದ ಕನ್ಯಾಮಾಸದಲ್ಲಿ ಶುದ್ಧಪಾಡ್ಯದಲ್ಲಿ ಭದ್ರೆ ಶ್ರೀರಂಗನಾಯಕಿಯು ಬಂದು ಮಜ್ಜನವನು ಮಾಡಬೇಕೆನುತಲೆ ಮೂದ್ರ್ವಾರಮಧ್ಯದಲಿ ತಾ ನಿಂದಳು 2 ತಂದು ಹರವಿದರು ಬತ್ತವ ವಿಸ್ತಾರವಾಗಿ ತಂದಿಟ್ಟು ಕರ್ಪೂರಬಟ್ಟಲುಗಳು ತುಂಬಿ ಕಲ್ಪೋಕ್ತ ದಿಂದಲೆ ಪೂಜೆಯ ಮಾಡಿದರು 3 ಎಂಭತ್ತೊಂಬತ್ತು ಬಟ್ಟಲಲ್ಲಿ ಇರುವ ಉದಕವನು ರಂಭೆಗಭಿಷೇಕವ ಮಾಡೆ ಗಂಧವ ಅಂಬೆ ಶಿರದೊಳು ಧರಿಸಿ ಪೂಮಾಲೆಯ [ಸಂಭ್ರಮದಿ]ಧರಿಸಿ ನಿಂದಳು ದೇವಿ 4 ಸುಖನಿಧಿ ಪದ್ಮಾನಿಧಿಗೆ ಹಣ್ಣಿನ ಹರಿವಾಣವ ಶಂಕೆ ಇಲ್ಲದೆ ಭಕ್ತರು ಪಿಡಿದು [ನಿಂತಿರುವ] ಶಂಖನಾದವು ತಾಳಮೇಳ ವಾದ್ಯಗಳಿಂದ ಪಂಕಜಮುಖಿಗಭಿಷೇಕವ ಮಾಡಿದರು 5 ಪುಷ್ಪದ ಮಂಟಪದಲ್ಲಿ ಪುರುಷೋತ್ತಮನ ಒಪ್ಪವಾದ ಅಶ್ವವ ತಂದಿರಿಸಿದರು ಆನಂದದಿ ಕಲ್ಪೋಕ್ತದಿಂದಲೆ ಪೂಜೆ ನೈವೇದ್ಯವ ಮಾಡಿ ಒಪ್ಪುವ ಕಂಕಣವನು ಕಟ್ಟಿದರಾಗ 6 ರತ್ನದ ಕಿರೀಟವಿಟ್ಟು ಲಲಾಟದಲ್ಲಿ ಮತ್ತೆ ತಿದ್ದಿದ ಕಸ್ತೂರಿಬಟ್ಟು ರತ್ನದ ಪದಕವು ಇಟ್ಟು ಕೊರಳೊಳು ಇಂದಿರೆ ವಂದಾಳು 7 ಮಧ್ಯದ ಕೊಟ್ಟಿಗೆಯಲ್ಲಿ ವಿಪ್ರರು ಕೈಕಟ್ಟಿ ನಿಂದು ಸೇವೆಯ ಮಾಡುತಿರಲು ಅರ್ತಿ ಯಿಂದಲೆ ಧೂಪದೀಪ ನೈವೇದ್ಯದಿ ಲಕ್ಷ್ಮೀ ದೇವಿಗೆ ಪೂಜೆಯ ಮಾಡಿದರು 8 ಭೇರಿ ದುಂದುಭಿ ವಾದ್ಯಗಳಿಂದ ತಾಳಮೇಳವು [ನಾರಿಯರ] ರ ಸಾಲುಗಳಿಂದ ಬಾಣ ಬಿರುಸು ಮತಾಪು ಅಗರುಬತ್ತಿ [ಗಳ ನಡುವೆ] ನಾರಾಯಣನರಾಣಿ ಕೋಲುವಿನಲ್ಲಿ 9 ಛತ್ರಿಚಾಮರ ಸೂರೆಪಾನ ಪಿಡಿಯೆ ಮದ ಹಸ್ತಿಗಳು ಮಾಡುವ ಸಲಾಮು ಸುತ್ತಿ ದೀವಟಿಗೆಯು ತುತ್ತೂರಿ ನಾದವು ಮತ್ತಧಿಕಾರಿಗಳು ಮಂಟಪದಲಿ 10 ಆರುದಿವಸದಲ್ಲೊರೆಗೊಂಡು ಪಾನುಪಟ್ಟಿಯು ಸೂರ್ಯಚಂದ್ರರು ಮುತ್ತಿನಬಟ್ಟು [ಆ]ರಾಗಟೆಹೆರಳು ಭಂಗಾರಗೊಂಡೆಗಳಿಟ್ಟು ವ ಯ್ಯಾರದಿಂದಲೆ ಬಂದಳು ಮಂಟಪಕೆ 11 ಸಪ್ತದಿನದಲಿ ಲಕ್ಷ್ಮೀದೇವಿಗೆ ಉತ್ರಾಜಿಮಾಲೆ ಹಸ್ತವಡಗೆ ಹರಡಿವಂಕಿ ದಕ್ಷಿಣ ಹಸ್ತದಿ ರತ್ನದಹಂಸವು ವಾಮ ಹಸ್ತವ ಮೊಣಕಾಲಿನೊಳಿಟ್ಟಳು 12 ಅಂದುಗೆ ಗೆಜ್ಜೆ ಮುಂಗೈಮುರಾರಿ ಉಂಗುರವು ಕುಂದಣದ ಪಾಗಡವಿಟ್ಟು ಹಿಂದಿನತೋಳಿಗೆ ಬಂದಿ ತಾಯಿತನಿಟ್ಟು ಕುಂದಣದ ಮಂಟಪದಲಿ ಕುಳಿತಳು 13 ಅಷ್ಟಮ ದಿವಸದಲ್ಲಂದು ಸೃಷ್ಟಿಗಿರೀಶ್ವರಿಗೆ ಕಟ್ಟಿದರು ಕಲ್ಕೀತುರಾಯಿ ದೃಷ್ಟಿಯಬಟ್ಟು ರತ್ನದ ಕುಂಡಲ [ಇಟ್ಟು] ಮತ್ತರಗಿಣಿಯನು ಮಾತಾಡಿಸುತ 14 ಮುಕ್ತಿದಾಯಕಿಗೆ ಮೂರು ಪಾವಡೆಯನುಡಿಸಿ ಮತ್ತೆ ವಡ್ಯಾಣವನಿ[ಡಲು] ರತ್ನದ ಹಸ್ತದಿ ಅಭಯವ ಕೊಡುತ [ನಿಂತಳು] ಮೊರ್ನೋಮಿಯ ಮಂಟಪದಲ್ಲಿ 15 ಮುಂದೊಂಭತ್ತು ದಿನದಲ್ಲಿ ರಂಭೆರಂಗನಾಯಕಿಯು ಮಿಂದು ಮಡಿಗಳ ತಾನುಟ್ಟು ಚಂದದಿ ನೈವೇದ್ಯವ ಭಕ್ತರಿಗಿತ್ತು ಬಂದು ಆಸ್ಥಾನದಿ ನಿಂದಳು ದೇವಿ 16
--------------
ಯದುಗಿರಿಯಮ್ಮ
ಕೋಲು ಕೋಲು ಕೋಲು ಕೋಲೇಕೋಲೇ ಕೋಲನ್ನ ಪ ಆಧಾರವನೆ ಮೆಟ್ಟಿ ಚಕ್ರಾರ ಭೇದಿಸಿನಾದದ ನಾದ ಸುನಾದವ ಕೇಳಿಶೋಧಿಸಿ ಸುಷುಮ್ನ ಮಾರ್ಗ ಮನೆಯ ಪೊಕ್ಕುಮೋದಿ ಬೆಳಗಿನೊಳ ಬೆಳಕು ತಾನಹುದೆ ಹಟ1 ಪ್ರಾಣಾಪಾನವು ಕೂಡಿ ಸರ್ಪವನೆಬ್ಬಿಸಿಜಾಣತನದ ನಾಗ ಸ್ವರವನೂದಿಮಾಣದೆ ಮುತ್ತುಗಳುದುರುವ ಬಯಲಲಿಕೇಣವಿಲ್ಲದೆ ಆಡಿಪುದೆ ಕುಂಡಲಿಯೋಗ 2 ಪೀಕುತ ನಾಲಗೆ ಕ್ಷೀರಾಹಾರದೊಳಿದ್ದುನೂಕುತಂಗಲದೊಳು ರಸನವನುತೇಕ ನಿಲ್ಲಿಸಿ ನಾಲಗೆಯಲಮೃತವನ್ನುಂಡುಮೂಕ ಸಕ್ಕರೆ ತಿಂದ ತೆರದಲಂಬಿಕ ಯೋಗ 3 ಷಣ್ಮುದ್ರೆ ಹಿಡಿದು ಷಡಂಗುಲದಲಿ ಒತ್ತಿಕಣ್ಣ ಅಂತರ್ಯದಿ ದೃಷ್ಟಿಯಿಟ್ಟುಹುಣ್ಣಿಮೆ ಚಂದ್ರನ ಕಳೆಯ ಬೆಳಗಿನೊಳುಥಣ್ಣಗೆ ಥಳ ಥಳಿಸುವುದದು ಹಟ ರಾಜ4 ವಾಯುವ ಸಮನಿಸಿ ರೇಚಕ ಪೂರಕದಿಂದಸಾಯಾಸದಲಿ ಕುಂಭಕವ ನಿಲ್ಲಿಸಿಬಾಯಿ ಮಾಡುವ ಸುನಾದವ ಲಕ್ಷಿಸಿಹಾಯಿ ಎಂದೆನಿಪ ಸುಖಹೊಂದೆ ಲಯಯೋಗ 5 ದೃಷ್ಟಿಯರ್ಧವನೀಗ ಮುಚ್ಚಿ ಸದ್ಗುರುವಾಗಿದೃಷ್ಟಿಸಿ ತನ್ನನೆ ನೋಡುತಿರೆಸುಟ್ಟು ಜೀವತ್ವವ ದೇಹಭಾವವ ಮರೆತುಮುಟ್ಟಿ ಬ್ರಹ್ಮಾದುದೆ ಅದುವೆ ಸದ್ಗುರು ಮಾರ್ಗ6 ಹೊರಗೊಂದು ಆಗದೆ ಒಳಗೊಂದು ಆಗದೆಹೊರಗೆ ಒಳಗೆ ತಾನೆ ತಾನೆಯಾಗಿಗುರು ಚಿದಾನಂದನು ಸಹಜ ತೋರುತ ಸರ್ವಪರಮ ಮಂಗಳ ಸಾಕ್ಷಿಯದು ರಾಜಯೋಗ7
--------------
ಚಿದಾನಂದ ಅವಧೂತರು
ಕ್ಷಮಾ ಪ್ರಾರ್ಥನೆ ಗುರುಹಿರಿಯರೆಡೆಯಲ್ಲಿ ಶಿರಬಾಗಿಸಿನಯದಲಿ ಎರೆವೆನೀಪರಿಯಲ್ಲಿ ಕರವಮುಗಿದು ಯತಿನಿಯಮ ಛಂದಸ್ಸು ಗತಿತಾಳಲಯಬಂಧ ನುತಶಬ್ದ ತತ್ವಾರ್ಥ ಸಂಗತಿಯನು ವರಕವಿಗಳೊರೆದಿರ್ಪ ತರತರದ ಪ್ರಾಸಗಳ ವರಲಕ್ಯಣಲಂಕಾರ ಮೆಂಬ ಪರಿಕರಂಗಳನರಿದು ಪರಿಪರೀಸಿಂಗರಿಸ ಲರಿಯೆ ಕವಿತಾಮಣಿಯ ಪರಿಯನರಿಯೆ ಸರಿಸದೋಳ್‍ನಿಂದೆ ನೆಂದರಿಯ ಬೇಡಿ ಅರಿಯದಾತರಳೆ ರಚಿಸಿದುದನುನೋಡಿ ಹಿರಿಯರೊಳುಗರುವತೋರಿದೆನೆನ್ನ ಬೇಡಿ ಸರಿದೋರಿದಂತೆಸಿಗೆ ಕೃಪೆಮಾಡಿ ಸಮರ್ಪಣೆ ತ್ವದ್ದತ್ತವಾಚಾ ತವಕಿಂಕರೇಣ ತ್ಪತ್ಪ್ರೀತಿ ಕಾಮೇನ ಮಯಾಕೃತೇನ | ಸ್ತೋತ್ರೇಣ ಲಕ್ಷ್ಮೀನೃಹರೇ ಸವಿಷ್ಣುಃ ಪ್ರೀತೋಭವತ್ಪಂ ಕರುಣಾದ್ರ್ರದೃಷ್ಟಿಃ ||
--------------
ನಂಜನಗೂಡು ತಿರುಮಲಾಂಬಾ
ಖಳರನು ತರಿವಾ ಬಗಳಾಂಬೆಗೆಕಮಲದಾರತಿ ಬೆಳಗಿರೆ ಪ ಅರಿ ಎಂಬ ಶಬ್ಧವು ಕಿವಿಗೆ ಬೀಳಲುಸರಿದವು ಸರಿದವು ಖಡ್ಗದಿಂ ಕೆಂಗಿಡಿಭರದಿಂದರಿಯನೆ ತುಡುಕಿಯೆ ಮುಂದಲೆತರಿದಳಾಗಲೆ ತಲೆಯ ಬಗಳಾಂಬೆಮುರಿದಳಾಗಲೆ ತಲೆಯ ಬಗಳಾಂಬೆ1 ಕಡಿಯುತ ಅವುಡನು ಅರಿಯನು ದೃಷ್ಟಿಸಿಝಡಿಯುತ ಮುದ್ಗರ ಹಿಡಿದು ನಾಲಗೆಮೃಡಹರಿ ಬ್ರಹ್ಮರು ಅಹುದಹುದೆನೆಹೊಡೆದಳಾಗಲೆ ಅರಿಯ ಬಗಳಾಂಬಪುಡಿಯ ಮಾಡಿದಳರಿಯ ಬಗಳಾಂಬ 2 ಕಾಲಲಂದುಗೆ ಗೆಜ್ಜೆ ಕಂಠಾಭರಣವುಮೇಲೆ ಸರಿಗೆವೋಲೆ ಮೂಗುತಿ ಹೊಳೆಯಲುಲೋಲ ಚಿದಾನಂದ ರೂಪಿಣಿ ಬಗಳೆಯುಪಾಲಿಸಿದಳು ಭಕ್ತರ ಬಗಳಾಂಬಲಾಲಿಸಿದಳು ಭಕ್ತರ ಬಗಳಾಂಬ 3
--------------
ಚಿದಾನಂದ ಅವಧೂತರು
ಗುಣವಾರಿಧಿಯೆ ಪ ದಾರಾ ಕೃತಿಯನೀ ತೊರಿಸೆನೆಗೆ 1 ದೃಷ್ಟಿಸುವೆನೊ ಶ್ರೀಕೃಷ್ಣನಿನ್ನನು 2 ಚೆನ್ನಾಗಿ ತೊಳೆಯುವೆ ನಿನ್ನಡಿಗಳ 3 ದಿಂದಾಲಂಕರಿಸುವೆ ಸುಂದರಾಂಗನೆ 4 ಮೂಜಗದೊಡೆಯನನು ಪೂಜಿಸುವೆನೊ5 ದೀಪಂಗಳನು ಬಹುದೀಪಿಸುವೆನು 6 ಘೃತ ಮೇಳೈಸುವೆನು ಶ್ರೀಲೋಲನಿಗೆ 7 ಕರ್ಪೂರದಾರತಿಗಳರ್ಪಿಸುವೆನು 8 ಮನದಣಿಯುವಂದದಿನಾ ಕುಣಿದಾಡುವೆ 9 ಸದನದೊಳಿಂಬಿಟ್ಟು ಮುದಹೊಂದುವೆ 10 ಪುಲಿ-ಗಿರಿ ಧಾಮನೆ 11
--------------
ಸರಗೂರು ವೆಂಕಟವರದಾರ್ಯರು
ಗುರುರಾಘವೇಂದ್ರ ಶರಣರ ಸುರ ತರುವೆ ಕರುಣಸಾಂದ್ರ ಪ ಧರೆಯೊಳು ನಿನ್ನ ಶ್ರೀ ಚರಣಕಮಲ ಪ್ರಭೆ ಪರಿ ಉದ್ಧರಿಸು ಈ ಶರಣನ್ನ ಅ.ಪ. ಸುಕೃತ ಸ್ವರೂಪ ದರುಶನ ಮಾತ್ರದಿ ಭವ ಶ್ರಮ ಹರಿಸುವ ಪ್ರತಾಪ ರಮೆ ಅರಸನ ಗುಣ ಸಮುದಾಯದೊಳು ಮಗ್ನ ಭ್ರಮೆರಹಿತ ಸ್ಥಿರಚಿತ್ತ ನಮೋ ನಮೋ ನಿನಗೆ ಅಮಿತ ಮತಿಯ ಕರುಣ ಕವಚವ ಅಮಿತಕಾಲದಿ ಕೊಟ್ಟು ಮೆರೆಯುವ ಅಮಿತ ಮಂಗಳದಾಯಿ ತತ್ವದ ಕಮಲ ವೈಭವ ಸಲಹಲೆನ್ನನು 1 ಪಾವನ ಸುಯತಿ ರನ್ನ ಲಾಲಿಸು ವಾಕು ಸಾವಧಾನದಿ ಘನ್ನ ಭವ ಭವಣೆ ದಾವಾಗ್ನಿಯೊಳು ನೊಂದೆ ಶ್ರೀ ವರನ ದಾಸ ಕಾವ ದೃಷ್ಟಿಯಲಿ ನೋಡೊ ನಿತ್ಯ ಮಂಗಳ ಭಾವರೂಪ ಗುಣತ್ರಯಗಳ ಆವ ಕಾಲಕು ಬಿಡದೆ ನೋಡುವ ಭೂವಿ ಬುಧಮಣಿ ಪಾಲಿಸೆನ್ನನು 2 ತುಂಗಾತೀರ ನಿವಾಸ ರಾಘವೇಂದ್ರ ಗುರು ತುಂಗ ಮಹಿಮ ನಿರ್ದೋಷ ಮಂಗಳಾಸಮಹರಿ ಗಂಗಾಪಿತನ ಕೂಡಿ ತುಂಗಪೂಜೆಯ ಕೊಂಡ್ವರಂಗಳ ಬೀರುವ ಪಾದ ತೀರ್ಥದಿ ಭವ ಭಂಗ ಬಗೆಯನು ಬಲ್ಲ ಮಹಾತ್ಮ ರಂಗ ಜಯೇಶವಿಠಲ ದೇವನ ಸಂಗ ನೀಡುವ ಕೃಪೆಯ ಮಾಳ್ಪ 3
--------------
ಜಯೇಶವಿಠಲ
ಗುರುರಾಜ | ನಮಿಪರ ಸುರಭೋಜ ಗುರುರಾಜ ಪ. ವರತಂದೆ ಮುದ್ದುಮೋಹನರೆಂದೆನಿಸುತ ಮೆರೆಯುತ ಜಗದೊಳು ಪೊರೆಯುವ ಕರುಣಿ 1 ಅಜ್ಞತೆ ತೊಲಗಿಸಿ ಸುಜ್ಞತೆ ಕೊಡುತಲಿ ವಿಘ್ನವ ತರಿಯುವ ಪ್ರಾಜ್ಞ ಮೂರುತಿಯೆ 2 ಸರಸಿಜಾಕ್ಷನ ಪದ ಹರುಷದಿ ಭಜಿಸುವ ಪರಮಪ್ರಿಯರು ಎಂದು ಬಿರುದು ಪೊತ್ತಿಹರೆ 3 ನಾಗಶಯನನಿಗೆ ಭೋಗವಪಡಿಸುವ ಆಗಮಜ್ಞರೆ ನಿಮಗೆ ಬಾಗುವೆ ಸತತ 4 ಸಾಸಿರ ಫಣೆಯಿಂದ ಸೂಸುವ ಕಾಂತಿಯೊಳ್ ವಾಸವ ವಿನುತ 5 ದೇವತಾಂಶದ ಗುರು ಪವಮಾನಿಗೆ ಪ್ರಿಯ ಭಾವಿಸಿ ಭಜಿಪರ ಕಾವ ಕರುಣಾಳು 6 ಶಾಂತಚಿತ್ತದಿ ಬಹು ಸಂತೋಷಪಡುತಲಿ ಅಂತರಂಗದಿ ಹರಿಯ ಚಿಂತಿಸುತಿರುವ 7 ಉದ್ಭವಿಸಿ ಜಗದಿ ಅಧ್ಭುತ ಮಹಿಮೆಯ ಒಬ್ಬೊಬ್ಬರಿಗೆ ತೋರಿ ಹಬ್ಬಿಪೆ ಹರುಷ 8 ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನನು ದೃಷ್ಟಿಗೆ ತೋರಿಸಿ ಕಷ್ಟ ಬಿಡಿಸಿರಿ 9
--------------
ಅಂಬಾಬಾಯಿ
ಗುರುರಾಯ ಪಾಲಿಸುವುದು ನೀ ಎನ್ನ ಪ ಅನ್ಯರೊಬ್ಬರನಾ ನಾ ಕಾಣೆ ಮನ್ನಿಸಿ ಸಲಹುವರನಾ ನಿನ್ನವನೊ ನಾನು ಅನುದಿನದಲಿ ನಿನ್ನ ನೆನೆದು ನೆನೆದು ಇಂದಿನವರೆಗೆ ನಾ ದಿನಗಳೆದೆನೋ ಅ.ಪ. ಇಷ್ಟುದಿನ ಪಟ್ಟ ಕಷ್ಟವು ಸಾಕೋ ಇಷ್ಟಕೆ ನೀ ದಯಾದೃಷ್ಟಿ ಇಟ್ಟು ಜ್ಞಾನವ ಕೊಡಬೇಕೊ ಕಪಟ ಬುದ್ಧಿಯನಷ್ಟು ಕಳೆದಿಷ್ಟವ ಪೂರೈಸಬೇಕೊ ಬಿಟ್ಟವನಲೊ ್ಲನಾ ಕೊಟ್ಟವರು ಪರಿಕರ ಬಿಟ್ಟವರು ಸರಿ ನಾ ಕಟ್ಟಿಕೊಳ್ವೆ ತವ ಚರಣವ ಕೊರಳಿಗೆ 1 ಅಷ್ಟದಿಕ್ಕುಗಳಿಗೆ ಪರಿಹರಿಸಿಹುದೊ ಇಷ್ಟೆಲ್ಲ ಕೇಳಿ ನಾ ಇಟ್ಟೆ ಮನವನು ತವ ಪಾದದಿ ತಿಳಿದು ಸಂತುಷ್ಟನೆ ಎನ್ನ ಬಿಟ್ಟರೆ ಮುಂದಿನ ಬಟ್ಟೆಯ ಕಾಣದೇ ಕೆಟ್ಟು ನಾ ಮೂರಾಬಟ್ಟೆಯಾಗುವೆನೋ 2 ತವ ಪಾದದಿ ತುಳಿದು ಮೆಟ್ಟಿ ಎನ್ನ ಶಿರ ಥಟ್ಟನೆ ಭೂಮಿಯಲಿ ಕೆಡಹುವುದು ಹುಟ್ಟಿದರೆ ದಯವು ಅಟ್ಟಿ ಅಜ್ಞಾನವ ಕಟ್ಟಿ ಸುಜ್ಞಾನವ ಘಟ್ಟಿ ಭಕುತಿಯನು ಕೊಟ್ಟು ನೀ ಪಾಲಿಸೊ 3
--------------
ಹನುಮೇಶವಿಠಲ
ಗುರುವಿನ ಚರಣವ ನೆನೆವುತಲನುದಿನ ಪರದೊಳು ದೈವದ ನೆಲೆ ನೋಡು ಪ ಗುರುವಿನ ಕರುಣಕಟಾಕ್ಷವದಲ್ಲದೆ ನರರಿಗೆ ದೊರಕದು ಪರಸುಖವು ಹಿರಿಯರ ಅಭಿಮತವಿಲ್ಲದ ಗೃಹದೊಳು ಕರೆಕರೆಯಾಗಿದೆ ಕೌತುಕವು 1 ಸ್ಥಿರವಾಗಿ ನಿಲ್ಲದ ಮನವು ಭ್ರಮೆಯೊಳು ನೆರೆವುದು ತನ್ನೊಳು ಘಾತಕವು ಸೆರೆವಿಡಿಯಲು ಹರಿವಿಡಿದಿಹನಾತನ ತೊರೆವುದು ಭವಭಯ ಸೂತಕವು 2 ಯೋಗಿಯ ಹೃದಯದಿ ಸಕಲಾಗಮ ಸಮ ನಾಗಿಯೆ ತೋರ್ಪುದು ಧೃಢವಾಗಿ ಸಾಗರ ಸುತ್ತಿದ ಭೂಭಾಗದ ಸರಿ ಯೋಗಿಯ ದೃಷ್ಟಿಯೆ ಘನವಾಗಿ 3 ಬಾಗಿದ ಕಬ್ಬಿನ ಕೋಲೊಳು ರುಚಿಕರ ವಾಗಿಯೆ ತೋರುವ ಪರಿಯಾಗಿ ರಾಗಿಯ ಶಿಲೆ ತಾ ಬಳಲಿದೆನೆನುತಲೆ ಭಾಗೆಯ ಕೊಂಬುದೆ ಸಮವಾಗಿ 4 ನಂಬದಿರಂಬರ ವಾದಿಯ ಅಂಶಕ ತುಂಬಿದ ಕುಂಭ ದೃಢದಿಂದ ಅಂಬರದೊಳಗಣ ಮೇಘಕೆ ವಾಯುವು ಬೆಂಬಲವಾಗಿಹ ದಯದಿಂದ 5 ಸಂಭ್ರಮದಿಂದಲಿ ಗರ್ಜಿಸಿ ನಾಲ್ದೆಸೆ ಅಂಬಿಸಿ ಪೋಗುವ ಪರಿಯಿಂದ ಅಂಬುಜಭವ ಬರೆದಕ್ಷರ ಮಾಸಲು ಅಂಬರ ಬಯಲಹ ತೆರದಿಂದ 6 ಶುದ್ಧವಶುದ್ಧವು ಆಗಿಹ ಪೃಥಿವಿಯ ಬದ್ಧವಾಗಿಯೆ ತೊಳೆದವರಾರು ಅಬ್ಧಿಯ ಮಧ್ಯದಿ ಎದ್ದ ವಾರಿಗಳನು ತಿದ್ದಿಯೆ ಪಸರಿಸುವವರಾರು 7 ಇದ್ದರೆ ಸರ್ವರ ಭವನದೊಳಗ್ನಿಯ ಮೆದ್ದವ ಶುದ್ದವೆಂಬವರಾರು ಹೊದ್ದಿದ ಮೂರುತಿ ನಾಲ್ದೆಸೆಯೊಳಗಿರೆ ಬದ್ಧವಾಗಿಯೆ ಕಟ್ಟಿಕೊಳಲ್ಯಾರು 8 ಬಯಲೊಳಗಿರುತಿಹ ಬಹು ಝೇಂಕಾರವ ನಯದೊಳು ನೋಡಿದರೇನುಂಟು ಬಯಲೊಳು ಮೂರಕ್ಷರವನೆ ಬಿತ್ತಲು ಮೈಲಿಗೆ ತಳಿಸುವ ಬೆಳೆಯುಂಟು 9 ಸಿರಿ ಸೊಬಗನು ಜಯಿಸುವ ಹಯವನು ಏರುವ ಬಗೆಯುಂಟು ದಯದೊಳು ಶ್ರೀ ಗುರು ವಿರಚಿಸಿಯಿತ್ತರೆ ಕ್ರಮವಿಕ್ರಯದೊಳು ಫಲವುಂಟು 10 ಬೇಡನು ಸಲಹಿದ ಆಡು ತಾ ಯಾಗಕೆ ಬೇಡವೆಂಬವರಾರು ಶಾಸ್ತ್ರದಲಿ ಕಾಡಿನೊಳಿರುತಿಹ ಮೃಗವಾಲದ ಸಿರಿ ನೋಡು ನೀ ನಿತ್ಯದಿರಾಸ್ತ್ರದಲಿ 11 ಕೋಡಗನಾದರು ನೋಡಿಯೆ ಭಜಿಸಲು ಕೂಡುಗು ಹರಿಯ ಪರತ್ರದಲಿ ಕೂಡಿಕೊಂಡರೆ ಪರಬೊಮ್ಮನ ಮನದಲಿ ಆಡದು ಮಾಯದ ಸೂತ್ರದಲಿ 12 ಮೃಗ ಗೋರೋಚನ ಸಹ ಉತ್ತಮವಾಗಿಹ ಮುತ್ತುಗಳು ನಿತ್ಯದಿ ಕ್ರಯಗಟ್ಟಿ ಉಣ್ಣದೆ ಹುಲ್ಲನು ಕಿತ್ತು ಮೆದ್ದಾಡುವ ಅವಸ್ಥೆಗಳು13 ಮೃತ್ಯುವ ಕಾಣದೆ ಬೊಮ್ಮವನಡಗಿಸಿ ಎತ್ತಲಾದರು ಪೋದ ವಸ್ತುಗಳು ಭಕ್ತರಿಗಲ್ಲದೆ ಮನವಪರೋಕ್ಷದ ವಸ್ತುವ ಕಾಣದು ನಿತ್ಯದೊಳು 14 ಜ್ಯೋತಿರ್ಮಯವಾಗಿಹ ವಸ್ತುವಿನೊಳು ಸೂತಕ ಹೊದ್ದುವುದೇನುಂಟು ಜಾತಿವಿಜಾತಿಯೊಳೊಲಿದಿಹ ಶಿವನವ ದೂತರ ನಂ[ಬ]1ದರಾರುಂಟು 15 ಓತು ಆಶುದ್ದವನುಂಡರು ಕವಿಲೆಯೊ ಳ್ಮಾತಿನ ವಾಸಿಯದೇನುಂಟು ನೀತಿ ವಿಹೀನರೊಳುದಿಸಿದ ಲವಣದ ಧಾತು ಕೂಡದೆ ಸವಿಯೇನುಂಟು 16 ಧಾರುಣಿ ಭಾರವ ಮಿತಿಗಟ್ಟಿ ತಕ್ಕಡಿ ಗೇರಿಸಿ ತೂಗಲು ಬಹುದೀಗ ವಾರಿಧಿಯನು ಮುಕ್ಕುಳಿಸಿಯೆ ಬತ್ತಿಸಿ ತೋರಿಸಲಪ್ಪುದು ಬಹು ಬೇಗ 17 ಧಾರುಣಿಯೊಳು ಗುರುಕರುಣದ ಅಳತೆ ಮು ರಾರಿಗು ಸಿಲುಕದು ಅದು ಈಗ ತೋರಿತು ಅಲ್ಲಿ ವರಾಹತಿಮ್ಮಪ್ಪ ಕು ಮಾರರು ವಾಜಿಯ ತಡೆದಾಗ 18
--------------
ವರಹತಿಮ್ಮಪ್ಪ
ಗುರುವು ಗುರುವು ಎಂದು ಜಗದೊಳಗಿಹರುಗುರುವು ಅದ್ಯಾತರ ಗುರುವುನರನನು ತಿಳುಹಿಯೆ ಹರನನು ಮಾಡುವಗುರುವು ಆತನೆ ಸದ್ಗುರುವು ಪ ಜ್ಞಾನವನರುಹಿ ಅಜ್ಞಾನವ ಹರಿಸುವಜ್ಞಾನಿಯಾದವ ಗುರುವುಏನೇನೋ ಭ್ರಾಂತಿಯದೆಲ್ಲವ ನೀಗಿ ನಿ-ಧಾನ ಮಾಡಿದನಾತ ಗುರುವುನೀನೀಗ ನಾನೆಂದು ಸಂಶಯ ಬಿಡಿಸಿಸನ್ಮಾನ ಮಾಡಿದನಾತ ಗುರುವು 1 ಯಮ ನಿಯಮಾಸನ ಎಲ್ಲವನರುಹಿಯೆಎಚ್ಚರಿಸಿದಾತನೆ ಗುರುವುಸಮರಸವಾಯು ಮನವ ಮಾಡಿಕುಂಭಕಕಮರಿಸಿದಾತನೆ ಗುರುವುಘುಮು ಘುಮು ಘುಮು ಎಂಬ ಘಂಟಾಘೋಷವನ್ನೆಬ್ಬಿಸಿ ಅನುವುಮಾಡಿದವ ಗುರುವುದ್ಯುಮಣಿಕೋಟಿ ಕಳೆದೃಷ್ಟಿಗೆ ತುಂಬಿಸಿದೃಢವ ಮಾಡಿದನಾತನೆ ಗುರುವು 2 ದೃಷ್ಟಿಯ ನಿಟ್ಟು ಖೇಚರಿ ಮುದ್ರೆ ನಿಲಿಸಿದಯ ಮಾಡಿದಾತನೆ ಗುರುವುಕಟ್ಟಳಿಲ್ಲದ ತೇಜ ಖವಖವ ನಗಿಸಿಯೆದಿಟ್ಟ ಮಾಡಿದನಾತ ಗುರುವುಮುಟ್ಟಿ ತುಂಬಿದ ಬೆಳದಿಂಗಳ ಖಂಡದಿಮುಳಿಗಿಸಿದಾತನೆ ಗುರುವುಶಿಷ್ಟ ಚಿದಾನಂದ ಸದ್ಗುರುವನಮಾಡಿಸಾಕ್ಷಿ ಮಾಡಿದನಾತ ಗುರುವು 3
--------------
ಚಿದಾನಂದ ಅವಧೂತರು
ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು ನಲ್ಲೆಯರು ಬಂದು ಮೆಚ್ಚುಮದ್ದು ಮಾಡಿ ಹೋದರಮ್ಮ ಪ. ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮ ಹೆಂಗಳ ನೋಡುತಲೆ ಚಟ್ಟಿಕ್ಕಿದನಮ್ಮ ತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮ ಭಂಗಪಡಿಸುತ ಬಾಯ ತೆರೆದನಮ್ಮ 1 ನೀನು ಮೈಯ ನೋಡಮ್ಮ ತನುವು ಕಿರಿದಾಯಿತಮ್ಮ ಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮ ಅನ್ನವ ಕೊಳಲೊಲ್ಲನಮ್ಮ ಅತಿಭೀತನಾದ ದೈತ್ಯ ಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ 2 ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮ ಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮ ಬೊಮ್ಮಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲವಾಯಿತಮ್ಮ ನಮ್ಮ ಹಯವದನಗಿನ್ನು ಅಂಜಿಕಿಲ್ಲಮ್ಮ 3
--------------
ವಾದಿರಾಜ
ಗೋಪಗೋಪನೆಂಬಾ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ಪ . ಕೆಂಗಾವಳೆಯಾಲೆದಲಿ (?) ಪಾಂಡುರಂಗಮಂಗಳ ಮೂರುತಿಪ್ಪಶೃಂಗಾರವಾದ ಸುರತರುವಿನ ನೆರಳೊಳುರಂಗನಾಥನ ಕಂಡರೆ ಬರಹೇಳೆ ಕೋಗಿಲೆ 1 ಮಧುಮಾಸದಲಿ ಮಾಧವನಿರಲುಚದುರೆ ಗೋಪಿಯರಸ ಮೇಳದಲ್ಲಿಮುದದಿ ವನಂತರನಾಡುವ ಭರದಿಂದಪದುಮನಾಭನ ಕಂಡರೆ ನೀ ಬರಹೇಳೆ 2 ಅಟ್ಟಿ ಅರಸುವ ಶ್ರ್ರುತಿಗಳಿಂದ ಸುಖಬಿಟ್ಟೆವೆಂದರವ ಪರಬ್ರಹ್ಮಸೃಷ್ಟಿಯೊಳು ಉಡುಪಿನ ಹಯವದನ ಸ್ವಾಮಿಯದೃಷ್ಟಿಲಿ ಕಂಡರೆ ಬರಹೇಳೆ ಕೋಗಿಲೆ3
--------------
ವಾದಿರಾಜ
ಙÁ್ಞನವಿಲ್ಲದೆ ಬಾಳೂದೊಂದು ಸಾಧನವೆ ಗಾಣದೆತ್ತಿನಂತೆ ಕಾಣದಿಹ್ಯದೊಂದು ಗುಣವೆ ಧ್ರುವ ತನ್ನ ನÀರಿಯಲಿಲ್ಲ ಬನ್ನವಳಿಯಲಿಲ್ಲ ಕಣ್ಣದೆರೆದು ಖೂನಗಾಣಲಿಲ್ಲ ಸಣ್ಣದೊಡ್ಡರೋಳೆನೆಂದು ತಿಳಿಯಲಿಲ್ಲ ಬಣ್ಣ ಬಣ್ಣದ ಶ್ರಮ ಬಿಡುವದುಚಿತವಲ್ಲ 1 ಶಮದಮಗೊಳ್ಳಲಿಲ್ಲ ಕ್ಷಮೆಯು ಪಡೆಯಲಿಲ್ಲ ಸಮದೃಷ್ಟಿಯಲಿ ಜನವರಿಯಲಿಲ್ಲ ಸಮರಸವಾಗಿ ಸದ್ಛನವ ನೋಡಲಿಲ್ಲ ಭ್ರಮೆ ಅಳಿದು ಸದ್ಗುರುಪಾದಕೆರಗಲಿಲ್ಲ2 ಗುರು ಕೃಪೆ ಇಲ್ಲದೆ ಗುರುತಾಗುವದಲ್ಲ ಗುರುತಿಟ್ಟು ನೋಡಿಕೊಂಡವನೇ ಬಲ್ಲ ಗುರು ಭಾನುಕೋಟಿ ತೇಜನಂಘ್ರಿ ಕಂಡವನೆಬಲ್ಲ ತರಳ ಮಹಿಪತಿ ಸ್ವಾಮಿ ಸುಖ ಸೋರ್ಯಾಡುವದೆಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಚರಣಯುಗವ ತೋರೋ ಪ ಶರಣರ ಪೊರೆಯುವ ಕರುಣಿಗಳರಸನೆ ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ ದಿಕ್ಕು ನೀನೆ ಎಂದು ನಂಬಿದೆನಕ್ಕರಿಂದ ಬಂದು ತಕ್ಕುದೇನು ಘನ ರಕ್ಕಸವೈರಿಯೆ 1 ಇಷ್ಟದೇವನಾರೋ ಮನಸಾಭೀಷ್ಟವ ಕೊಡುಬಾರೋ ಕೃಷ್ಣಮೂರ್ತಿ ನೀಂ ದೃಷ್ಟಿಸು ನಮ್ಮನು2 ಕೇಣವ್ಯಾಕೋ ಹರಿಯೆ ಕಣ್ಣಲಿ ಕಾಣು ಬಾರೋ ದೊರೆಯೇ ಕಾಣೆನಿನಗೆ ಸರಿ ಜಾಣತನದಿ ಹರಿ 3 ವಾರಿಧಿಕೃತಶಯನ ವಿಕಸಿತ ವಾರಿಜದಳನಯನ ಕ್ಷೀರದೊಳದ್ದುನೀ ನೀರೊಳಗದ್ದು ಕಂ ಸಾರಿ ನಿನ್ನನೆ ಸಾರಿದೆ ನರಹರಿ 4 ಧರೆಯೊಳಧಿಕವಾದ ಶ್ರೀ ಪುಲಿಗಿರಿಯೊಳು ನೆಲೆಯಾದ ವರದವಿಠಲ ದೊರೆ ದಯಾನಿಧೆ 5
--------------
ವೆಂಕಟವರದಾರ್ಯರು
ಚಿಂತೆ ಪರಿಹರ ಮಾಡೋ ಎನ್ನಯ್ಯ ಸಜ್ಜನರ ಪ್ರಿಯ ಪ ಚಿಂತೆ ಪರಿಹರ ಮಾಡೊ ಎನ್ನಯ ಚಿಂತೆ ಪರಿಹರ ಮಾಡಿ ಎನ್ನ ಅಂತರಂಗದಿ ನಿಮ್ಮ ನಿರ್ಮ ಲಂತ:ಕರುಣದ ಚರಣವಿರಿಸಿ ಸಂತಸದಿ ಪೊರೆ ಸಂತರೊಡೆಯ ಅ.ಪ ನಿಮ್ಮ ಪಾದವ ನಂಬಿಕೊಂಡಿರುವ ಈ ಬಡವನನ್ನು ಕಮ್ಮಿ ದೃಷ್ಟಿಯಿಂ ನೋಡದಿರು ದೇವ ನಿನ್ನ ಬಿಟ್ಟೆನ ಗ್ಹಿಮ್ಮತನ್ಯರದಿಲ್ಲ ಜಗಜೀವ ಭಜಕಜನ ಕಾವ ಮೂಡಿಮುಳುಗುತಿಹ್ಯದೈ ಸಮ್ಮತದಿ ಸಲಹೆನ್ನ ದಯಾನಿಧಿ ಬ್ರಹ್ಮಬ್ರಹ್ಮಾದಿಗಳ ವಂದ್ಯನೇ 1 ಆರುಮೂರರಿಕ್ಕಟ್ಟಿನೊಳು ಗೆಲಿಸೋ ಘನಪಿಂಡಾಕಾರ ಆರು ಎರಡರ ಸಂಗ ತಪ್ಪಿಸೋ ಮಹಬಂಧ ಬಡಿಪ ಘೋರ ಸಪ್ತಶರಧಿ ದಾಂಟಿಸೋ ತವದಾಸನೆನಿಸೊ ಗಾರುಮಾಡಿ ಕೊಲ್ಲುತಿರ್ಪ ದೂರಮಾಡೆನ್ನ ದುರಿತದುರ್ಗುಣ ಸೇರಿಸು ತ್ವರ ದಾಸಸಂಗದಿ ನಾರಸಿಂಹ ನಾರದವಿನುತ 2 ಪಾಮರತ್ವ ತಾಮಸವ ಬಿಡಿಸೋ ವಿಷಯಲಂಪಟ ಪ್ರೇಮ ಮೋಹ ಕಾಮ ಖಂಡ್ರಿಸೋ ಹರಲಿರುಳು ನಿಮ್ಮ ಭಜನಾನಂದ ಕರುಣಿಸೊ ಸುಚಿಂತದಿರಿಸೊ ಕಾಮಿತಜನಕಾಮಪೂರಿತ ನಾಮರೂಪರಹಿತಮಹಿಮ ಸ್ವಾಮಿ ಅಮಿತಲೀಲ ವರ ಶ್ರೀರಾಮ ಪ್ರಭು ತ್ರಿಜಗದ ಮೋಹ 3
--------------
ರಾಮದಾಸರು