ಒಟ್ಟು 149 ಕಡೆಗಳಲ್ಲಿ , 44 ದಾಸರು , 140 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.ಶ್ರೀನಿವಾಸ ನಿನ್ನ ಭಕ್ತಿ ಮಾಡದ ಅಘವಂತನೆಂದುಹೀನ ಜನರ್ಪಾಳಕಿಟ್ಟರೇನ ಹೇಳಲೊನೀನು ಪಾಲಿಪ ರಾಜ್ಯದಲ್ಲಜ್ಞಾನಿ ದೇಶಿಗನೊಬ್ಬ ಕೆಡಲುಹಾನಿ ಹೆಚ್ಚಳ ನಿನ್ನದಲ್ಲೆ ದೀನದಯಾಳು 1ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು ಕಂಡ ಕಡೆಗೆಸುತ್ತುತಿದೆ ತನ್ನ ದಳವ ಕೂಡಿ ರಂಗಯ್ಯಕರ್ತನಿನ್ನ ಪಾದದೆಡೆಯೆ ಒತ್ತಿ ನೀನಿದನಾಳಬೇಕುಹೆತ್ತ ತಾಯಿ ನೀನೆ ಗಡಾನೆತ್ತಿಕೊಳ್ಳಯ್ಯ 2ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ ಕಾಣೆನಳಿನನೇತ್ರ ನೀನೆ ಕಾಯೊ ಸುಲಭರೊಡೆಯನೆಲೆಯ ತೋರಾತಂಕಹಾರಿ ಒಲಿದು ವರಾಭಯವ ಬೀರಿಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ 3
--------------
ಪ್ರಸನ್ನವೆಂಕಟದಾಸರು
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದಭವಜಲದೊಳು ಮುಳುಗುವೆಪ.ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ 1ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ 2ಬುದ್ಧಿ ತಪ್ಪಿದವಗೆ ಅಬದ್ಧ ನಡೆವವಗೆಶುದ್ಧ ಕಾರಣ ದಿವ್ಯನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ 3
--------------
ಪ್ರಸನ್ನವೆಂಕಟದಾಸರು
ಕಾಯೋ ಕೃಷ್ಣಭವತೋಯದಿ ಮುಳುಗಿ ಉ- |ಪಾಯವ ಕಾಣದೆ ಬಾಯ ಬಿಡುವೆನೋ ಕಾಯೋ ಕಾಯೋ ಪಭಾಗವತರ ಪ್ರಿಯ ನಾಗಭೂಷಣಸಖ|ನೀಗಿಭಯವಕರಬೇಗನೆ ಪಿಡಿಯೊ 1ಇಂದಿರೆಯರಸ ಮುಕುಂದ ಯಶೋದೆಯ |ನಂದನ ಕರುಣಿಸೊ ಇಂದೀವರಾಕ್ಷ2ಸಿಂಧುಶಯನ ಪೊರೆಯೆಂದು ಕರೆಯಕರಿ|ಬಂದು ಸಲಹಿದೆಯೋಮಂದದಯಾಳು3ಕುರುಪ ಪಿಡಿಯಲುದ್ಧರಿಸಿದೆ ತರುಣಿಯ |ನರಕಹ ನಿನಗೆ ನಾ ಪರಕೀಯನಲ್ಲೋ 4ಜಾನಕೀವಲ್ಲಭನೀನೇ ಮರೆದುಬಿಡೆ |ಕಾಣೆನೊ ಒಬ್ಬರ ನಾನವನಿಯೊಳು5ಭಕುತರಿಗೋಸುಗ ಹತ್ತವತಾರವ |ಅರ್ತಿಂದಲಿ ಕೊಂಡುತ್ತಮ ಶ್ಲೋಕ6ದ್ವೇಷಿಗಳೆನ್ನನು ಘಾಸಿಸದಂದದಿ |ಪೋಷಿಸುವುದು ಪ್ರಾಣೇಶ ವಿಠ್ಠಲನೇ 7
--------------
ಪ್ರಾಣೇಶದಾಸರು
ಕೆಡಗೊಡದಿರು ಎನ್ನ ಚಿತ್ತಗತಿಯ ಸುರರೊಡೆಯ ತವಾಂಘ್ರಿ ಹೊಂದಿದ ಮತಿಯ ಪ.ಒಂದು ಗುರಿಗಿಟ್ಟರೆ ತಪ್ಪುತಿದೆ ಮತ್ತೊಂದಕಿಡದೆ ತಾ ತಗಲುತಿದೆಹೊಂದಲೊಲ್ಲದು ತ್ವನಿಷ್ಠೆಯನು ಒಣದಂದುಗಗೊಳುತಿದೆಹರಿನೀನು1ಮುಂದಿಟ್ಟ ಷಡ್ರಸಾನ್ನವನುಣ್ಣದು ದೂರಿಂದ ನಿಸ್ಸಾರಕ್ಹೆಣಗುವುದುನಂದಿಸಲೊಲ್ಲದು ನೆಳಲ್ವಿಡಿದು ಕಿಚ್ಚೆಂದಂಜದೋಡಿ ಧುಮುಕುತದಿದು 2ಪ್ರದೇಶ ಅಂಗುಟ ಮಾತ್ರವ ಕಾಣದೆ ತಾಭೂದಿವಿ ಪಾತಾಳಕೈದುತಿದೆಮಾಧವಪ್ರಸನ್ನವೆಂಕಟ ದಯಾಳು ನಿನ್ನಪಾದದಲ್ಲಿಡು ಇದರುಲುಹು ಬಲು 3
--------------
ಪ್ರಸನ್ನವೆಂಕಟದಾಸರು
ಕೆಡಿಸುವನಲ್ಲೊ ನೀ ಬಲು ಕರುಣಿ ನನ್ನಕಿಡಿಗೇಡಿತನ ಉಣಿಸಿತು ಭವಣಿ ಪ.ಹುಸಿಯ ನುಡಿದು ದೆಸೆಗೆಟ್ಟವ ನಾ ನನ್ನಕುಶಲ ಕಲ್ಯಾಣದೊಳಿಟ್ಟ ಕರುಣಿ ನೀಅಸಮ ಚಂಚಲ ಚಿತ್ತವುಳ್ಳವ ನಾ ದುವ್ರ್ಯಸನವಿದಾರಿ ಉದಾರಿಯು ನೀ 1ಹಗಲರಿತ ಕುಳಿಯೊಳ್ಬಿದ್ದವ ನಾ ಎನ್ನನೆಗಹಿ ನೆಗಹಿ ನೆಲೆಗೊಟ್ಟವ ನೀಬಗೆ ಬಗೆ ದೋಷಾಚರಣ್ಯೆವ ನಾ ಮತ್ತಘ ಸಂಚಿತವನೋಡಿಸುವೆ ನೀ 2ವಿಷಯದ ಬಯಕೆಲಿ ನವೆದವ ನಾ ಶುದ್ಧಭೇಷಜನಾಗಿಹೆ ಭವರೋಗಕೆ ನೀವಿಷವನುಂಡು ಕಳೆಗೆಡುವವ ನಾ ಪೀಯೂಷವನೆರೆವ ದಯಾವಾರಿಧಿ ನೀ 3ಅಹಂಕಾರದಲಿ ಬೆರೆತಿದ್ದವ ನಾಶುಭವಹ ನಾಮವನಿತ್ತು ತಿದ್ದುವೆ ನೀಮಹಿಯೊಳಗಮಿತಘ ಸಾಧಕ ನಾ ಎನ್ನಬಹುಕಲುಷವನ ದಾಹಕ ನೀ 4ಕೆಡಿಸಬೇಕಾದರೆ ತಿರ್ಯಗ್ಯೋನಿಯ ನೀಬಿಡಿಸಿ ವೈಷ್ಣವ ಜನ್ಮಕೆ ತಹೆಯಾಒಡೆಯ ಪ್ರಸನ್ವೆಂಕಟ ದಯಾಳು ನಿನ್ನಒಡಲ ಹೊಕ್ಕವನೆಂದು ನಂಬಿನೆಚ್ಚಲು 5
--------------
ಪ್ರಸನ್ನವೆಂಕಟದಾಸರು
ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರಪಾಳಿಕೆ ಭಕುತಿಯಿಂದಾಳಾಗಿ ಎಲೆ ಮನುಜ ಪ.ಖೂಳರೊಳು ಮಾತಾಡದೇಳು ಹರಿಭಟರಡಿಗೆಬೀಳು ಭಗವಜ್ಜನರ ಮ್ಯಾಳದೆದುರಿನಲಿಹೇಳು ಕೀರ್ತನೆ ನಾಮದೋಳಿಗಳ ತನುಮನದಿಊಳಿಗಮಾಡುಬಿಡದಾಳು ಕರಣಗಳ1ಕೂಳು ಕಾಸಿನ ಸವಿಗೆ ಕೀಳು ಮಾನಿಸರ ಹೊಗಳಿಕೋಳು ಬಂಧನ ಹೋಗದಿರು ಮನದಾಳಿಗೊಳಗಾಗಿಏಳೆರಡು ಭುವನಗಳ ಆಳುವ ಪಿತನಗುಣದೇಳಿಗೆಗೆ ಹರುಷವಂ ತಾಳು ಅನ್ಯವ ಮರೆದು 2ಗಾಳಿಯಸೊಡರುದೇಹ ನಾಳೆಗೆನ್ನದೆ ಸುಧೆಯಮೇಳೈಸಿಕೊಂಡು ಭವವೇಳಿಲಿಸು ನೀಜಾಳು ಭಾಷ್ಯಗಳಗತಿಹಾಳೆಂದು ಗುರುಮಧ್ವಹೇಳಿದಂತಿರುತಲಿ ದಯಾಳು ಪ್ರಸನ್ವೆಂಕಟನ 3
--------------
ಪ್ರಸನ್ನವೆಂಕಟದಾಸರು
ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ ಬ್ರಹ್ಮಾದಿಗಳು ಪೊಗಳೆ ಪಉಮೆಯರಸ ನಿನ್ನ ಚರಣಮಹಿಮೆ ತನ್ನತರುಣಿಯೊಡನೆ ಹಗಲಿರುಳು ಪೇಳುವ ದಿವ್ಯ ಅ.ಪಅರಿಯದೆ ಅಜಮಿಳತರಳನಾರಗನೆಂದುಮರಣ ಕಾಲದಿ ಒದರೆಸರಸೀಜಾಕ್ಷನು ತನ್ನ ಪರಿವಾರದವರೆಂದುಸಿರಿದೇವಿಯೊಳು ಪೇಳಿ ತ್ವರಿತದಿ ರಕ್ಷಿಸಿದ 1ನಕ್ರನ ಬಾಧೆಗೆ ಸಿಕ್ಕಿದ ಗಜರಾಜಚಕ್ರಪಾಣಿಯ ಭಜಿಸೆಆ ಕ್ಷಣದಿ ತನ್ನ ಚಕ್ರಕಾಙÉÕಯ ಮಾಡಿಲಕ್ಷ್ಮೀದೇವಿಗ್ಹೇಳದೆ ಪಕ್ಷಿ ಹೆಗಲೇರಿ ಬಂದ 2ಹಿರಣ್ಯಕಶ್ಯಪು ತನ್ನತರಳಪ್ರಹ್ಲಾದನಿಗೆಪರಿಪರಿ ಬಾಧೆ ಪಡಿಸೆಹರಿಯ ತೋರೆಂದು ಆರ್ಭಟಿಸಿ ನುಡಿಯೆ ದೈತ್ಯನರಮೃಗರೂಪನಾಗಿ ಭರದಿ ಕಂಬದಿ ಬಂದ3ಪತಿಗಳೈವರು ಲಕ್ಷ್ಮೀಪತಿಯ ಧ್ಯಾನದೊಳಿರೆಮತಿಹೀನನೆಳೆತರಲುಗತಿನೀನಲ್ಲದೆ ಮತ್ತೆ ಹಿತರೊಬ್ಬರಿಲ್ಲವೆನೆಅತಿಬೇಗದಿಂದ ಧರ್ಮಸತಿಗೆ ಅಕ್ಷಯವಿತ್ತ 4ಇದರಂತೆ ತರಳಧ್ರÀುವ ಒದಗಿದ ತಾಪದಿಂದಪದುಮನಾಭನÀ ಭಜಿಸೆಮುದದಿಂದಾತಗೆ ಧ್ರುವಪದವಿಯನಿತ್ತು ಕಾಯ್ದೆಪದುಮನಾಭನೆ ನಿನಗೆದುರುಂಟೆ ತ್ರಿಜಗದಿ 5ಘಣಿಶಾಯಿ ನಿನ್ನಗುಣಮಹಿಮೆಯ ಪೊಗಳಲುಅಹಿಭೂಷಣನಿಗಳವೆಕ್ಷಣ ಬಿಡದಲೆ ನಿನ್ನ ಚರಣಸೇವೆಯ ಮಾಳ್ಪಸಿರಿದೇವಿ ಅರಿಯೆನೆಂದೆನಲು ನಿನ್ನಯಗುಣ6ಕರುಣಾಸಾಗರ ದೇವ ವಿಮಲಸ್ವರೂಪನೆ ಕಮಲನಾಭ ವಿಠ್ಠಲಶರಣಜನರ ಬಹುತ್ವರದಿಂದ ಬಂದು ಕಾಯ್ದಪರಮದಯಾಳೊ ನಿನ್ನ ಚರಣಕ್ಕೆ ನಮೋ ಎಂಬೆ7
--------------
ನಿಡಗುರುಕಿ ಜೀವೂಬಾಯಿ
ಗುರುರಾಯಾ ಗುರುರಾಯಾ |ತರಣಿಪ್ರಕಾಶ ಯತಿಪ ವರದೇಂದ್ರ ಪಬೆಂದೆನೋ ಭವದೊಳು | ತಂದೆ ನೀ ಬಹು ತ್ವರೆ ||ಯಿಂದ ಕರಪಿಡಿಯೋ |ಮಂದದಯಾಳೋ 1ಆರೆನು ಮನುಜರು | ದೂರುವ ಮಾತನು ||ಆರಿಗುಸಿರಲಿ ನಿ | ವಾರಿಸೋ ಸ್ವಾಮಿ2ನೀನೊಲಿಯಲು ಭಯ | ಕಾಣಿಸಿಕೊಂಬುದೆ ||ಹೀನ ಮತಾಟವಿ ಕೃ | ಶಾನು ಮಹಾತ್ಮ 3ಮೇದಿನಿಪರು ಬೆರ | ಗಾದರು ದಾನಕೆ ||ಮೋದಮುನಿಮತ ಮ | ಹೋದಧಿ ಚಂದ್ರ 4ಕಾಷಾಯ ವಸನಿ |ದೇಶಿಕವರಪ್ರಾ ||ಣೇಶ ವಿಠಲನವ | ರಾ ಸಲಹುವದೋ 5
--------------
ಪ್ರಾಣೇಶದಾಸರು
ಗುರುವೇ ಶ್ರೀ ವಸುಧೇಂದ್ರ ಕರಜಾತ ಸದ್ಗುಣಸಾಂದ್ರ |ವರದೇಂದ್ರರಾಯ ಜಿತೇಂದ್ರ | ಮರುತ ಮತಾಬ್ಧಿ ಚಂದ್ರ ||ಶರಣು ನಿನ್ನಯ ಪದಸರಸಿಜಯುಗಗಳಿಗೆ |ಎರವುಮಾಡದೆ ಕಾಯೊಪರಮದಯಾಳು ಪದಾತಾಧರಿತ್ರೀ ಸುತೀನಾಥ ಶ್ರೀರಘುಪತಿ |ದೂತ ಭುವನದೋಳ್ ಖ್ಯಾತಿಯೋ ತವ ಸತ್ಕೀರುತಿ ||ಭೂತ ಭಯ ರೋಗವಾ ತಂದಟ್ಟುವಾ |ನಾಥ ರಕ್ಷಕ ಜಲಜಾತಾಂಬಕನೇ 1ದೋಷರಹಿತ ಯನ್ನಕ್ಲೇಶಹಿಂಗಿಸೊ ಸಂ |ನ್ಯಾಸಶಿರೋಮಣಿಯೆ ಮುನ್ನಾ ಆಶೆ ಬಿಡಿಸಿ ನಿನ್ನ ||ದಾಸನೆನಿಸಿಕೋ ಉದಾಸಿಸದಲೆ ಬಹು |ಘಾಸಿಮಾಡದೆ ರವಿಭಾಸ ಗುಣಾಢ್ಯ 2ಏನಾದರೇನು ಕೀಳು ಮಾನವರಾಶ್ರಯ ಧರೆಯೊಳು |ನಾನಿಚ್ಛಿಸೆನೊ ಕೃಪಾಳುಮಾನನಿನ್ನದು ಕೇಳು ||ನೀನೆವೆ ಗತಿಯೆಂದು ಧ್ಯಾನ ಮಾಡುವರಿಗೆ |ಪ್ರಾಣೇಶ ವಿಠಲನ ಕಾಣಿಸಿಕೊಡುವಿ 3
--------------
ಪ್ರಾಣೇಶದಾಸರು
ತೇಲಿಸೊ ಇಲ್ಲ ಮುಳುಗಿಸೊ- ನಿನ್ನ-|ಪಾಲಿಗೆ ಬಿದ್ದೆನೊಪರಮದಯಾಳೊಪಸತಿ-ಸುತ-ಧನದಾಶೆ ಎಂತೆಂಬ ಮೋಹದಿ |ಹಿತದಿಂದ ಅತಿನೊಂದು ಬಳಲಿದೆನೊ ||ಗತಿಯನೀವರ ಕಾಣೆ ಮೊರೆಯ ಲಾಲಿಸೊ ಲಕ್ಷ್ಮೀ-|ಪತಿನಿನ್ನ ಚರಣದ ಸ್ಮರಣೆಯಿತ್ತೆನ್ನ1ಜರೆರೋಗ ದಾರಿದ್ರ್ಯ ಕಶ್ಮಲವೆಂತೆಂಬ |ಶರಧಿಯೊಳಗೆ ಬಿದ್ದು ಮುಳುಗಿದೆನೊ ||ಸ್ಥಿರವಲ್ಲ ಈ ದೇಹ ನೆರೆನಂಬಿದೆನು ನಿನ್ನ |ಕರುಣಾಭಯವನಿತ್ತು ಪಾಲಿಸೊ ಹರಿಯೆ 2ದೋಷವುಳ್ಳವ ನಾನು ಭಾಷೆಯುಳ್ಳವ ನೀನು |ಮೋಸ ಹೋದೆನೊ ಭಕ್ತಿರಸವ ಬಿಟ್ಟು ||ದಾಸರ ಸಂಗವಿತ್ತು ಪಾಲಿಸೊ ಹರಿಯೆ 3
--------------
ಪುರಂದರದಾಸರು
ದುರಿತಪರಿಹರಿಸು ರಂಗಾಪರಮಪಾತಕರು ಬಂದರು ನೆರೆದು ರಂಗಾಪ.ಪ್ರತ್ಯಕ್ಷ ಜೀವನ ಶವಕೆ ಯಮನ ಚಾರಕರುಮುತ್ತಿ ಕೊಲುವಂತೆ ಕಾಣಿಸುತದೆ ದಯಾಳುಕರ್ತನೀನಲ್ಲದಿನ್ನೊಬ್ಬ್ಬೊಡೆಯಕಾಲಮೃತ್ಯು ವಿನಯದೆಶೂಲನರಪಂಚವದನ1ನೀನರಸನೆನಗಾಗಿ ಇನ್ನೊಬ್ಬ ನೀಚರಿಗೆದೀನನಾಗುವುದುಚಿತೆ ಕರುಣಗುಣ ಖಣಿಯೆಮಾನನಿನ್ನದು ಅವಮಾನ ನಿನ್ನದು ಪಾಂಡವಮಾನಿನಿಯ ಸಮಯಕೊದಗಿದ ಭಕ್ತ ಬಂಧು 2ಮರೆಹೊಕ್ಕೆ ದಾಸವತ್ಸಲನೆಂಬ ಬಿರುದು ಕೇಳಿರುವೆ ತಪ್ಪಿಸಿಕೊಳಲುಬೇಡ ಭುವನೇಶಉರಗಗಿರಿವಾಸ ಪ್ರಸನ್ವೆಂಕಟೇಶ ಸಂಹರಿಸು ಅಪಕಾರಿಗಳ ಸಲಹು ಸಜ್ಜನರ 3
--------------
ಪ್ರಸನ್ನವೆಂಕಟದಾಸರು
ನೀ ಸಾಕದಿದ್ದರೆ ಸಾಕುವರಾರೊದಾಸಾಭಿಮಾನಿ ನೀನಲ್ಲದಾರೊ ಕೃಷ್ಣಾ ಪ.ನಿನ್ನವರನು ಬಾಧಿಸ ಬಂದ ಮೂರ್ಖರುಮುನ್ನೆ ದುರ್ಭಾಗ್ಯರಾಗಿ ಹೋದರುಕುನ್ನಿ ಕಚ್ಚಿದರಾನೆ ಅಳುಕುವುದೆ ರಂಗಎನ್ನ ನಂಬಿಕೆಯ ಮೂರುತಿ ಶ್ರೀನಿವಾಸ 1ಹಸಿದು ಮಳಲ ಮೆದ್ದವನಂತೆ ಕಂಗೆಟ್ಟುತೃಷೆಯಾಗಿ ಬಿಸಿಲ್ದೊರೆಗೋಡುವನಂತೆವಿಷಮ ಮಾನಿಸರನುಸರಿಸುವುದುಚಿತಲ್ಲಬಿಸಜದೇವಿಯರಸ ಸುದಾಮಘಭಂಗ2ಬಂಟರ ಮಾತ ಕೇಳದೆಭಾರತಾಳದೇನುಂಟು ಕಾರ್ಯವು ನಿನಗೆಲೆ ದಯಾಳುಕಂಟಕಜನಕಪಕಾರಿ ದೀನೇಶ ವೈಕುಂಠವಲ್ಲಭ ಪ್ರಸನ್ವೆಂಕಟ ಬಂಧು 3
--------------
ಪ್ರಸನ್ನವೆಂಕಟದಾಸರು
ನೀನೇ ದಯಾಳು ನಿರ್ಮಲಚಿತ್ತ ಗೋವಿಂದನಿಗಮಗೋಚರ ಮುಕುಂದಪಜ್ಞಾನಿಗಳರಸು ನೀನಲ್ಲದೆ ಜಗಕಿನ್ನುಮಾನದಿಂದಲಿಕಾವದೊರೆಗಳ ನಾ ಕಾಣೆಅ.ಪಬಗೆಬಗೆಯಲಿ ನಿನ್ನ ಸ್ತುತಿಪೆನೊನಗಧರಖಗಪತಿವಾಹನನೆ ||ಮಗುವಿನ ಮಾತೆಂದು ನಗುತ ಕೇಳುತ ನೀನುಬೇಗದಿಂದಲಿ ಕಾಯೋ ಸಾಗರಶಯನನೆ 1ದಾನವಾಂತಕ ದೀನ ಜನ ಮಂದಾರನೆಧ್ಯಾನಿಪರ ಮನದೊಳು ಸಂಚರನೆ ||ಮೌನನಾದೆನು ನಿನ್ನ ಧ್ಯಾನಾನಂದದಿ ಈಗಸಾನುರಾಗದಿ ಕಾಯೊ ಸನಕಾದಿ ವಂದ್ಯನೆ 2ಮಂದರೋದ್ಧರ ಅರವಿಂದ ಲೋಚನ ನಿನ್ನ ||ಕಂದನೆಂದೆನಿಸೂ ಎನ್ನ ||ಸಂದೇಹವೇತಕೆ ಸ್ವಾಮಿ ಮುಕುಂದನೆಬಂದೆನ್ನ ಕಾಯೊ ಶ್ರೀಪುರಂದರವಿಠಲನೆ3
--------------
ಪುರಂದರದಾಸರು
ಪಾಲಿಸಂಬುಧಿಶಾಯಿ ವ್ಯಾಳಕಶಿಪುಶಾಯಿಪಾಲಿಸು ವಾರಿಧಿüಕೂಲದಿ ದರ್ಭಶಾಯಿ ಮೂಲ ವಟಪತ್ರಶಾಯಿ ಪ.ವೇದೋದ್ಧಾರ ದಯಾಳು ಭೂಧರಧರ ದಯಾಳುಮೇದಿನಿಅಂತರ್ಮಾಲಾದಂಡಶುಭಕುಠಾರಧಾರಿಯೆ ದಯಾಳುಕೋದಂಡಧರ ದಯಾಳುಸ್ವಾದವೇಣುಧರ ದಯಾಳು ಸಮಾಧಿ ವ್ರತಧರ ಧರ್ಮಾಧರ ವಿಶ್ವಾಧರಮಾಧವನಿತ್ಯದÀಯಾಳು1ಪಂಚಜನನವೈರಿವಂಚಕಾಸುರವೈರಿಕಾಂಚನನೇತ್ರಕ ಯದುಪತಿ ಬಲಿಮದಚಂಚಲ ಖಳವೈರಿಪಂಚದ್ವಯಾಸ್ಯನವೈರಿಪಂಚಪಾರ್ಥಾರಿತವೈರಿಪಂಚಬಾಣಾರಿವೈರಿ ಪಂಚಪಾತಕವೈರಿ ಸಂಚಿತಘಕೆವೈರಿ2ಸರನಿಕೇತನಿವಾಸ ಗಿರಿತಳ ಸನ್ನಿವಾಸ ವರಸ್ವಾಮಿಪುಷ್ಕರಸಿರಿಅಹೋಬಲ ನೃಪಾಗರ ತ್ರಿಜಗನಿವಾಸಸರಯೂತೀರ ನಿವಾಸ ಶರಧಿಮಂದಿರವಾಸಸುರವಿರೋಧಿಸದನಪರಮಶಂಬಲವಾಸ ಪರಸನ್ನವೆಂಕಟವಾಸ3
--------------
ಪ್ರಸನ್ನವೆಂಕಟದಾಸರು