ಒಟ್ಟು 881 ಕಡೆಗಳಲ್ಲಿ , 89 ದಾಸರು , 645 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದನೆಂದೆನಿಸಿದ ಕೌಸಲ್ಯದೇವಿಗೆ ರಾಮ ಎನಬಾರದೆ ಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ 1 ಶಿಶುವಾಗಿ ಅವತಾರ ಮಾಡಿದ ದಶರಥನಲಿ ರಾಮ ಎನಬಾರದೆ ಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ 2 ಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ 3 ಪಾದನಖವು ಸೋಕಿ ಪಾದನಾಶನವಾಗೆ ರಾಮ ಎನಬಾರದೆ ಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ 4 ಸಕಲ ಸದ್ಗುಣ ಪೋಗಿ ಮಿಥಿಲಾ ಪಟ್ಟಣದಿ ರಾಮ ಎನಬಾರದೆ ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ರಾಮ ಎನಬಾರದೆ 5 ಚೆಲ್ವೆ ಜಾನಕಿ ಮಲ್ಲಿಗೆಯ ವನಮಾಲೆಯು ರಾಮ ಎನಬಾರದೆ ವಲ್ಲಭಗ್ಹಾಕಲು ಫುಲ್ಲಲೋಚನೆ ಸೀತಾರಾಮ ಎನಬಾರದೆ 6 ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ ರಾಮ ಎನಬಾರದೆ ಮಾಂಗಲ್ಯ ಬಂಧನ ಮಾಡಿದ ಮಹಾತ್ಮನು ರಾಮ ಎನಬಾರದೆ 7 ಜಗದೇಕ ಸುಂದರಿ ಜಾನಕಿಯನೆ ಗೆದ್ದ ರಾಮ ಎನಬಾರದೆ ಜಗದೀಶ ಜನಕಗೆ ಜಾಮಾತನೆನಿಸಿದೆ ರಾಮ ಎನಬಾರದೆ 8 ಮುದ್ದು ಜಾನಕಿ ಕೂಡಿ ಅಯೋಧ್ಯಕೆ ಬರುತಿರೆ ರಾಮ ಎನಬಾರದೆ ಮಧ್ಯ ಮಾರ್ಗದಿ ಬಂದಿದ್ದನು ಭಾರ್ಗವ ರಾಮ ಎನಬಾರದೆ 9 ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದಿ ರಾಮ ಎನಬಾರದೆ ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ ರಾಮ ಎನಬಾರದೆ 10 ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ ರಾಮ ಎನಬಾರದೆ ದುಷ್ಟ ಕೈಕೆಯ ನಿಷ್ಠೂರ್ವೊಚನವ ಕೇಳಿದ ರಾಮ ಎನಬಾರದೆ 11 ಆ ಲಕ್ಷುಮಿಯ ಮಾತಲಕ್ಷ್ಯವ ಮಾಡದೆ ರಾಮ ಎನಬಾರದೆ ಲಕ್ಷ್ಮಣ ಲಕ್ಷ್ಮಿ ಕೂಡ್ವನವಾಸ ತಿರುಗಿದ ರಾಮ ಎನಬಾರದೆ 12 ಸತಿ ಆದೇನೆಂದಸುರೆಯ ರಾಮ ಎನಬಾರದೆ ನಾಶÀರಹಿತ ಕಿವಿ ನಾಸಿಕನಳಿಸಿದ ಶ್ರೀ ರಾಮ ಎನಬಾರದೆ 13 ದಂಡಕಾರಣ್ಯದಿ ಕಂಡು ಮಾರೀಚನ್ನ ರಾಮ ಎನಬಾರದೆ ಹಿಂದ್ಹೋಗೆ ರಾಘವ ಬಂದ ರಾವಣನಲ್ಲೆ ರಾಮ ಎನಬಾರದೆ 14 ಘಾತಕ ರಾವಣ ಜಗನ್ಮಾತೆನೊಯ್ಯಲು ರಾಮ ಎನಬಾರದೆ ಸೋತು ಜಟಾಯು ಯುದ್ಧವ ಮಾಡಿ ತಾ ಬೀಳಲು ರಾಮ ಎನಬಾರದೆ 15 ಒಲಿದು ಸುಗ್ರೀವಗೆ ವಾಲಿ ವಧೆಯ ಮಾಡಿ ರಾಮ ಎನಬಾರದೆ ವಾನರಗಳ ಕೂಡಿ ವಾರಿಧಿಕಟ್ಟಿದ ಶ್ರೀರಾಮ ಎನಬಾರದೆ16 ಲೋಕ ಮಾತೆಯ ಲಂಕಾನಾಥ ತಾ ಒಯ್ದಾಗ ರಾಮ ಎನಬಾರದೆ ಸೀತಾಕೃತಿಯನಿಟ್ಟಶೋಕ ವನದೊಳು ರಾಮ ಎನಬಾರದೆ 17 ಮಂಡೋದರಿಯ ಗಂಡನ್ನ ದಶಶಿರಗಳ ರಾಮ ಎನಬಾರದೆ ಚೆಂಡನಾಡಿದ ಕೋದಂಡ ಪಾಣಿಯ ಶ್ರೀರಾಮ ಎನಬಾರದೆ 18 ಪ್ರೀತಿಂದ್ವಿಭೀಷಣಗೆ ಪಟ್ಟವಗಟ್ಟಿ ರಾಮ ಎನಬಾರದೆ ಸಿಂಧು ದಾಟಿದ ರಾಮ ಎನಬಾರದೆ 19 ಆದಿ ಲಕ್ಷುಮಿ ಕೂಡಿ ಹೋದನಯೋಧ್ಯಕೆ ರಾಮ ಎನಬಾರದೆ ಶ್ರೀದೇವಿ ಸಹಿತ ಪಟ್ಟಣ ಹೊಕ್ಕ ಪಟ್ಟಾಭಿರಾಮ ಎನಬಾರದೆ20 ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ ರಾಮ ಎನಬಾರದೆ ಮುಕ್ತಿದಾಯಕ ಮುಂದೆ ಬಿಡದೆ ಕಾಪಾಡುವ ರಾಮ ಎನಬಾರದೆ21 ಪತ್ನಿ ವಾರ್ತೆಯ ತಂದ ಪವನಸುತಗೆ ಒಲಿದ ರಾಮ ಎನಬಾರದೆ ಸತ್ಯ ಲೋಕದ ಆಧಿಪತ್ಯವ ಕೊಟ್ಟ ಶ್ರೀ ರಾಮ ಎನಬಾರದೆ22 ರಾಮ ರಾಮನು ಎಂದು ಕÀರೆಯೆ ಭಕ್ತಿಯ ನೋಡಿ ರಾಮ ಎನಬಾರದೆ ಪ್ರೇಮದಿ ತನ್ನ ನಿಜಧಾಮವ ಕೊಡುವೋನು ರಾಮ ಎನಬಾರದೆ 23 ಅರಸಾಗಯೋಧ್ಯವನಾಳಿ ಯದುಕುಲದಲಿ ರಾಮ ಎನಬಾರದೆ ಹರುಷದಿ ಭೀಮೇಶ ಕೃಷ್ಣನಾಗ್ಯುದಿಸಿದ ರಾಮ ಎನಬಾರದೆ 24
--------------
ಹರಪನಹಳ್ಳಿಭೀಮವ್ವ
ಕದವನಿಕ್ಕಿದ ಕಾರಣೇನೆ ಮುದದಿ ಕೇಳೆ ಮೋಹನಾಂಗಿ ಸದನಕ್ಕಾಗಿ ಬಂದೆ ನಾನು ಸರಸವ್ಯಾತಕೆ ಸುಂದರಾಗಿ ಪ ಇಂದು ನಾನು ಬಂದೆ ದ್ರೌಪದಿ ಬಂದು ಬಾಗಿಲನ್ಹಾಕುವೋದು ಚೆಂದವೇನೆ ಚಂದ್ರಮುಖಿಯೆ ಬಂದು ಬಾಗಿಲು ತೆಗೆಯೆ ನೀನು 1 ಅಂಧಕಾರ ರಾತ್ರಿಯಲಿ ಬಂದವರ್ಯಾರೆಂದು ಅರಿಯೆ ನಿಂದು ಗುರುತೇನೆಂದು ಪೇಳಲು ಬಂದು ಬಾಗಿಲು ತೆಗೆವೆ ನಾನು 2 ಕಂಡರಿಯೆ ಎನ್ನ ಪರಾಕ್ರಮ ಖಾಂಡವವನವ ದಹಿಸಿದೆನೆ ಗಾಂಡೀವಾರ್ಜುನರಾಯ ನಾನು 3 ಗಾಂಡೀವಾರ್ಜುನರಾಯನಾದರೆ ದುಂಡು ಬಳೆ ಕಂಕಣಗಳಿಟ್ಟು ಗೊಂಡ್ಯ ರಾಗಟೆ ಹೆರಳಲ್ಹಾಕಿ ನೀ ಷÀಂಡರೂಪವ ಧರಿಸ್ಹೋಗೊ 4 ಕ್ಷೀರಸಾಗರದಲ್ಲೆ ತಾ ಮಂ- ದರ ಪೊತ್ತಮೃತವನೆ ತಂದ ಧೀರ ಕೂರ್ಮಗೆ ಮೈದುನಾದಂಥ ಶೂರ ಫಲ್ಗುಣರಾಯ ನಾನೆ 5 ಫಲ್ಗುಣರಾಯನಾದರೇನೊ ಸದ್ಗುಣ ಸಂಪನ್ನ ಬಿರುದು ಭದ್ರದೇವಿಯ ಕದ್ದು ತರುವಾಗ ಬುದ್ಧಿ ದಾರಲ್ಲಿಟ್ಟೆದ್ದಿರ್ಹೇಳೊ 6 ಪರಮೇಶ್ವರನ ಒಲಿಸಿಕೊಂಡು ಪಾಶುಪತಾಸ್ತ್ರ ಪಡೆದೆ ನಾನು ಪರಮ ಆಪ್ತ ವರಾಹನ ಕರುಣಕ್ಕೆ ಪಾತ್ರನಾದಂಥ ಪಾರ್ಥರಾಯನೆ 7 ಪಾಶುಪತಾಸ್ತ್ರ ಪಡೆದರೇನು ದೇಶ- ದೇಶ್ಯಾತ್ರೆತೀರ್ಥ ಚರಿಸಿ ಆಸೆ ಬಿಡದೆ ಸನ್ಯಾಸಿಯಾದಂಥ ಮೋಸಗಾರನೆ ಮನೆಗೆ ಪೋಗು 8 ಕೋಟಿ ದೈತ್ಯರ ಕೊಂದೆ ಎನ್ನಸರಿ- ಸಾಟಿಯಾರೀ ಲೋಕದೊಳಗೆ ಆ- ರ್ಭಟದವತಾರ ನಾರಸಿಂಹನೆ ನೀಟಾದಭಕ್ತ ಕಿರೀಟಿಯಲ್ಲವೆ 9 ಕೋಟಿ ದೈತ್ಯರ ಕೊಂದು ಜೂಜಿ- ನಾಟ ಸೋತ್ವನ ತೋಟ ತಿರುಗಿ ಪಾಟುಬಟ್ಟು ವಿರಾಟನಲ್ಲೆ ನಾ(ನ?)ಟರಾಟಕೆ ನಿಂತಿರ್ಯಾಕೊ 10 ಮಾತಿಗೆ ಮಾತಾಡೋರೇನೆ ಅ- ಭೂತಳವ ಬೇಡಿದ್ವಾಮನಗೆ ದೂತ ನಾ ಶ್ವೇತೂವಾಹನನೆ 11 ಶ್ವೇತೂವಾಹನ ನಿಮ್ಮ ಸತಿಗೆ ನಾಥರಿದ್ದೂ ಅನಾಥಳಂತೆ ಅ- ಜ್ಞಾತದಲ್ಲಿ ಸುದೇಷ್ಣೆ ಸೇವೆಗೆ ದೂತಿಯಾದ ಪ್ರಖ್ಯಾತಿ ದಾರದೊ 12 ಹೆತ್ತತಾಯಿ ಶಿರವನಳಿದ ಕ್ಷತ್ರೇ- ರಂತಕ ಭಾರ್ಗವಗೆ ನಿತ್ಯದಲಿ ನಿಜಸೇವಕ ಭೀ- ಭತ್ಸುರಾಯ ನಾನಲ್ಲವೇನೆ 13 ಧೀರ ಭೀಭತ್ಸುರಾಯ ನಿನ್ನ ನಾರಿಯ ಸಭೆಗೆಳೆದು ತಂದು ಸೀರೆ ಸೆಳೆವಾಗ ಶೂರರಾದರೆ ದಾರದಾರಂತೆ ನೋಡಿರ್ಯಾಕೊ 14 ಕಾಮ ಮೋಹಗಳಿಂದ ನಿನ್ನಲ್ಲೆ ಪ್ರೇಮದಿ ನಾ ಬಂದೆನೀಗ ರಾಮರಾಜÉ್ಞಗೆ ನಿಜ ಸೇವಕ- ನಾದ ವಿಜಯರಾಯ ನಾನೆ 15 ವಿಜಯರಾಯ ನೀನ್ಹೌದೊ ತೇಜಿದಿ- ಗ್ವಿಜಯಕೆನುತದರ್ಹಿಂದೆ ಪೋಗಿ ಮಗನ ಕೈಯಿಂದ ವಧೆಯು ನೀತವೆ ಮೊದಲೆ ಪರಾಜಿತನಾದಿರ್ಯಾಕೊ 16 ಶ್ರೇಷ್ಠರೊಳು ಮಹಾಶ್ರೇಷ್ಠ ನಾನೆ ಅಸ್ತ್ರವಿದ್ಯದಲ್ಲಧಿಕನೆಂದು ಕೃಷ್ಣಮೂರುತಿ ಒಲಿಸಿಕೊಂಡಂಥ ಕೃಷ್ಣೆ ನಲ್ಲನೆ ಕೃಷ್ಣೆ ಕೇಳೆ 17 ಸಾರಥಿ ಆದ್ದರಿಂದ ಹಸ್ತಿನಾವತಿ ಪಟ್ಟಣಾಳ್ವುದು ಇಷ್ಟು ದಾರ ದಯದಿಂದ್ಹೇಳೊ 18 ಅಂಗನಾಮಣಿ ನಿನ್ನ ಅಂಗ- ಸಂಗ ಬಯಸಿ ನಾ ಬಂದೆನೀಗ ಅಂಗದ್ವಸ್ತ್ರವಬಿಟ್ಟ ಬೌದ್ಧಗೆ ಸಖನು ನಾ ಸವ್ಯಸಾಚಿ ಅಲ್ಲವೆ 19 ಭುಜ ಪರಾಕ್ರಮಿ ಸವ್ಯಸಾಚಿ ನಿನ್ನೆರಡು ಕೈದಡ್ಡಿನ್ಯಾತಕೇಳೊ ದ್ವಿಜರ ಸುತರ ತಂದುಕೊಡದೆ ಮೊದಲೆ ಮಾಡಿದ ಪ್ರತಿಜ್ಞವೇನೊ 20 ಅಂಜೋನಲ್ಲ ನಾನರಿಗಳಿಗೆ ಕಲಿ- ಭಂಜನ ಕಲ್ಕ್ಯಾವತಾರಗೆ ಕಂಜಚರಣಕ್ಕೆ ವಂದಿಸುವೆ ಧ- ನಂಜಯ ನಾನಲ್ಲವೇನೆ 21 ಸೈಯೊ ನೀ ಧನಂಜಯರೇಯ ಸುರಪತಿಗೆ ಪತ್ರವನೆ ಬರೆದು ಶರದ ಪಂಜರ ಕಟ್ಟಿ ನೀ ಕುಂ- ಜರವನಿಳಿಸಿದ ಕಾರಣೇನೊ 22 ನಿನ್ನ ಸರಿ ಮಾತಾಡುವೋರ ಧನ್ಯರ ನಾ ಕಾಣೆನೆಲ್ಲು ಳನ್ನು ಕೇಳಿದಿನ್ಯಾಕೆ ತಡೆವೆ 23 ದಶ ನಾಮಗಳ ಕೇಳಿ ದ್ರೌಪದಿ <ಈಔಓಖಿ ಜಿಚಿ
--------------
ಹರಪನಹಳ್ಳಿಭೀಮವ್ವ
ಕರವ ಮುಗಿದು ಗುರುವಿನ ನೀ ಅರಿಯೊ ಸುಹಿತಾರ್ಥಿಯ ನೆರೆಯೊ ದೀರ್ಘದಂಡಹಾಕಿ ತರಣೋಪಾಯ ಮೂರ್ತಿಯ ಬೆರಿಯೋ ಕುರುವ್ಹ ತಿಳಿವ ಪರಮಭಕ್ತಿ ಮನೆಮೂರ್ತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 1 ಕರೆವ ಮಳೆಯು ಕರುಣಿಸಿನ್ನು ಪರಮದಯ ವೃತ್ತಿಯ ಶರಣ್ಹೋಕ್ಕಾಶ್ರೈಸೊ ನೀನು ತ್ವರಿತ ಶ್ರೀಪತಿಯ ಮರಿಯದೆ ಕೊಂಡಾಡಬೇಕು ಧರೆಯೊಳಿದೆ ಕೀರ್ತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣ ಗುರುಮೂರ್ತಿಯ 2 ಯರಕವಾಗಿ ಸರಕನಿನ್ನು ನೀನು ಕರಕೊ ದೃಢಭಕ್ತಿಯಾ ಅರಕಕೋಟಿ ತೇಜನಂಘ್ರಿ ಹರಿಕಿಸೊ ನೀ ಪೂರ್ತಿಯಾ ಗರಕನೆವೆ ಅರಿಕೆಮಾಡಿಕೊಂಡು ಸುಸಂಗತಿಯ ತರಕೈಸಿಕೊಳ್ಳು ಶ್ರೀಪಾದ ಪೂರ್ಣಗುರುಮೂರ್ತಿಯ 3 ಏರು ಅರು ಚಕ್ರ ನೋಡಿ ತಾರಿಸುವ ಸ್ಥಿತಿಯ ಅರವೆ ಅರವೆ ಆಗಿ ದೋರುತದೆ ಸುಜಾಗ್ರತಿಯ ಎರಗಿ ಹರುಷದಿಂದ ಪಡೆಯೊ ಪರಮ ವಿಶ್ರಾಂತಿಯ ಸ್ಮರಿಸೊಮನವೆ ಚರಣಕಮಲ ಪೂರ್ಣ ಗುರುಮೂರ್ತಿಯ 4 ಸುರರ ವಂದ್ಯ ಪರಮಭೇದ್ಯ ಅರಿಯಾ ಪರಗತಿಯ ಸಾರತಿಹ ಶ್ರುತಿವಾಕ್ಯ ಕೇಳೊ ಇಟ್ಟು ಪ್ರೀತಿಯ ತ್ಯರನೆ ತಿಳುಹಿಸಿಕೊಟ್ಟ ಗುರುವಿಗೆ ನಿತ್ಯಪ್ರತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 5 ಗುರುಮೂತ್ರ್ಯಾಭೇದ್ಯವೆಂಬ ಗುರುತಕೇಳೋ ಅರ್ಥಿಯ ಕುರಹು ದೋರಿಕೊಟ್ಟ ಗುರುವಿಗೆ ನೀ ಮಾಡೊ ಸ್ತುತಿಯ ಮರೆದುಬಿಡೊ ತರಳತನದ ಹರುವಾ ನಿನ್ನಭ್ರಾಂತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ6 ತರತರದಿ ಸಾಂದ್ರವಾಗಿ ದೋರುತಿಹ ದೀಪ್ತಿಯ ಪ್ರಾರ್ಥಿಸಬೇಕೊಂದೆ ಸರ್ವಕಾಲ ವಸ್ತುಗತಿಯ ಪರಿಪರಿಸುಖ ದೋರುವ ಕರುಣಾನಂದ ಯತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 7 ಸರ್ವಸುಖದೋರ್ವದೊಂದೆ ಸರ್ವಫÀಲ ಶ್ರುತಿಯ ಸರ್ವದಾವೆಂಬುವದು ನವರತ್ನಮಾಲೆ ಸ್ತುತಿಯ ಪೂರ್ವಕರ್ಮ ಹರಿಸುವ ಸದ್ಗುರು ಸಾಮಥ್ರ್ಯಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 8 ಶರಣಜನರಾಭರಣವಿದೆ ಅರಿಯಬೇಕೀವಾರ್ತೆಯ ತರಳ ಮಹಿಪತಿ ನೀ ಮಾಡೊ ಇರುಳ ಹಗಲ ಆರ್ಥಿಯ ಕರವ ಪಿಡಿದು ಪಾರಗೆಲಿಸುವ ನಿನ್ನ ಸಾರ್ಥಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾದಿ ಪಿಡಿ ಕರವಾ ದೇವರ ದೇವ ಪ ಕರುಣಾದಿ ಪಿಡಿಕರ ಸರಸಿಜಾಂಬಕ ಎನ್ನ ಗುರು ರಘುಪತಿ ಪಾಲಾ ಮರುತಾಂತರಿಯಾಮಿ ಅ.ಪ ಗತಶೋಕ ಜಿತಮಾಯ ಪತಿತ ಪಾವನವೇದ್ಯ ಪ್ರತಿಪಾದ್ಯ ಕ್ಷಿತಿಪ ಭಾರತಿ ಕಾಂತ ವಂದ್ಯಾ ಆ ನತರ ಪಾಲಕ ದುಷ್ಟದಿತಿಜಾರಿ ತವಪಾದ ಶತಪತ್ರ ಬಿಡದೆ ಸಂತತ ಭಕುತಿಯಲಿಂದ ಸ್ತುತಿಪಾರ ಮಿತ ಅಘವಾ ಕಳೆದು ಮತ್ತೆ ಹಿತದಿ ಸದ್ಗತಿ ಕೊಡುವಾ ನಿನ್ನಯ ದಿವ್ಯಾಚ್ಯುತವಾದ ಘನದಯವಾ ಪೊಗಳು ವಂಥ ಮತಿವಂತರನು ಕಾಣೆ ಶತಮುಖಜಜ ಮಾವಾ 1 ಅನಿಮಿತ್ಯ ಬಂಧುವೆ ವನಚಾರಿ ಕೂರ್ಮನೆ ಕನಕ ನೇತ್ರಾರಿ ಪಾವನತರ ನರ ಪಂಚ ನಾನಾ ರೂಪದಿಂದ ಬಾಲನಾ ಕಾಯ್ದೊನರ ಹರಿಬಲಿ ನಿತ್ಯ ಅನಘಾತ್ಮ ಜನನೀಯ ಕೊಂದಾನೆ ಜನಕ ಜಾಪತಿಯ ರು ಕ್ಮಿಣಿ ಮನೋಹರನೆ ವಸನದೂರ ಹಯರೂಢ ಜನನ ರಹಿತ ವಿಖ್ಯಾತಾ ನಮಿಸುವೆ ಅನಿಮಿಷಪಜನ ಸುತಾ ಬೇಡಿಕೊಂಬೆ ಅನುದಿನದಲಿ ಮಮತಾ ಕನಕೋದರನ ತಾತಾ 2 ಸರಿವೀರ ಹಿತ ಬಲಿಸರಸಿ ಜಾಂಬಕ ಮುರ ಹರ ಹರ ವಂದಿತ ಹರಿಮುಖ ಹರಿನುತ ಪಾದ್ಯ ಹರಸು ಎನ್ನಯ ಅಘ ನಿರುತ ನಿನ್ನ ಡಿಂಗರರ ನೀಕರದಿತ್ತು ಗುರುವಿನ ಚರಣಾದಿ ಸ್ಥಿರ ಭಕುತಿಯ ಕೊಟ್ಟು ವರ ಶಿರಿಗೋವಿಂದ ವಿಠಲನೆ ನೀ ಯನ್ನ ಮರಿಯದೆ ಮಮತೆಯಿಂದಾ ನಿತ್ಯ ಗರಿಯುತಲಿರು ಆನಂದಾ ನಿನ್ನಯ ಪಾದಾದಿರಲಿ ಮನಸು ಮುಕುಂದಾ ದುರುಳ ಭವದ ಬಂಧ 3
--------------
ಅಸ್ಕಿಹಾಳ ಗೋವಿಂದ
ಕರುಣಿಸುವ ಹರಿ ನಿರಂತರವು ಮನವೆ ಪಾದ ಸ್ಮರಣಿಯನು ನೆರೆನಂಬು ಪ ಕಂದ ಪ್ರಹ್ಲಾದನ ತಂದೆ ಭಾಧಿಸಲು ಗೋ ವಿಂದ ಘನ ಸ್ತಂಭದೊಳ್ ಬಂದು ತಾಮುದದಿ ಮಂದ ದನುಜನ ಬಿಡದೆ ಕೊಂದ ಶ್ರೀವರ ಮುಚು ಕುಂದ ವರದ ಯೆಂದು ನೀ ಭಜಿಸು 1 ಛಲದಿಂದ ಮಲತಾಯಿ ಸಲೆ ಧ್ರುವನ ಕಾನನಕೆ ಕಳುಹಲಾಕ್ಷಣವೆ ಶ್ರೀ ನಳಿನನಾಭ ಒಲಿದು ಪೊರಿದನು ಮಹಾಒಳಿತೆಂದು ಅವಗೆ ನಿಶ್ಚಲ ಪದವಿಯನು ಇತ್ತ ಜಲನಿಧಿಶಯನ 2 ಅರಸು ಮುನಿಶಾಪದಲಿ ಕರಿಯಾಗಿ ಜನಿಸಿ ಮ- ಕರ ಬಾಧೆಗೆ ಶಿಲ್ಕಿ ಮೊರೆಯನಿಡಲು ತ್ವರದಿ ಪೊರದಂಥ ಹೆನ್ನೆಪುರ ಲಕ್ಷ್ಮೀನರಶಿಂಹ ಸಿರಿ ಕೃಷ್ಣಾ 3
--------------
ಹೆನ್ನೆರಂಗದಾಸರು
ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ಕರ್ಕಿ ಚೆನ್ನಕೇಶವ ಸ್ತುತಿ ಅನ್ಯರನು ಬೇಡೆನು ಚನ್ನಕೇಶವನೇ ಸೇವ್ಯ ಸರ್ವಾತ್ಮನೇ ಪ ತರಳ ಧೃವನನು ಕಾಯ್ದು ಧರಣಿಯನ್ನವಗಿತ್ತ ಸುರಸೇವ್ಯನಾಕೇಶವಂದ್ಯ ಹರಿ ಜೊರತು 1 ದುರುಳ ಕುರುಪತಿಯನುರೆಜೆ ಭಾಮೆ ದ್ರೌಪದಿಮಾನ ತರಿಯತಿಣಿಸಲ್ಕವಳ ಕಾಯ್ದ ಹೊರತು 2 ದುಷ್ಟ ಕಂಸನ ಬಾಧೆಯಿಂ ಲೋಕ ತತ್ತರಿಸೆ ಭ್ರಷ್ಟನನು ಕೊಂದ ಜಗ ಪೊರೆದ ಹರಿ ಹೊರತು 3
--------------
ಕರ್ಕಿ ಕೇಶವದಾಸ
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಕಾಮವೈರಿಜಾಯೆ ಪಾಹಿ ಕೋಮಲಾಂಗಿಯೇ ಶಿವೆ ಪ ಹೇಮಕನಕ ದಾಮಭೂಷೆ ಕಾಮಿನೀಪ್ರಿಯೆ ಶಿವೆ ಅ.ಪ. ಅಷ್ಟಬಾಹು ಶೋಭಿತಾಂಗಿ ದುಷ್ಟನಾಶಿನಿ ಶಿವೆ ಅಷ್ಟಮೂರ್ತಿ ವಾಮರೂಪೆ ಇಷ್ಟದಾಯಕಿ ಶಿವೆ1 ಬಾಲಚಂದ್ರ ಭಾಸಮಾನ ಫಾಲಶೋಭಿತೆ ಶಿವೆ ನೀಲವೇಣಿ ವಿಮಲವಾಣಿ ಕಾಲರೂಪಿಣಿ ಶಿವೆ 2 ಚಕ್ರರಾಜ ಮಧ್ಯವರ್ತಿ ಶಕ್ತಿಕಾರಿಣಿ ಶಿವೆ ವಕ್ರಕೇಶಿ ಮುಖ್ಯದನುಜ ಶಕ್ತಿಹಾರಿಣಿ ಶಿವೆ3 ಕರುಣಿಸಿಂದು ವರವ ದೇವಿ ಚರಣಕೊಂದಿಪೆ ಶಿವೆ ಸುರನರಾದಿ ಗೀಯಮಾನ ಪಾದಪಲ್ಲವೆ ಶಿವೆ 4 ನಾಗವೇಣಿ ಧೇನುನಗರ ಸರ್ವಮಂಗಳ ಶಿವೆ ಭೋಗ ಭಾಗ್ಯ ಸುಖಗಳಿತ್ತು ಪೊರೆಯೆ ಪಾರ್ವತಿ ಶಿವೆ 5
--------------
ಬೇಟೆರಾಯ ದೀಕ್ಷಿತರು
ಕಾಯೋ ಪರಮಾನಂದಾ ನಾರಾಯಣಾ | ತೋಯಜಾದಳ ನಯನ ಗರುಡ ಗಮನಾ ಪ ಕರವರಗ ದುಷ್ಟ ಜಲಚರ ಬಂದು ಪಿಡಿಯಲ್ಕೆ | ಭರದಿಂದ ನಿನ್ನ ಸ್ಮರಣೆಯಾ ಮಾಡಲು | ತ್ವರಿತದಿಂದಲಿ ದೇವ ಬಂದು ಆತನ ಮಹಾ | ದುರಿತವನು ಪರಿಹರಿಸಿ ಕಾಯಿದೆ ಹರಿಯೇ1 ಅರಗಿನಾ ಮನಿಯೊಳುಪಾಂಡವರುಸಿಲುಕಿರಲು | ಹರಿ ನೀನೇ ಗತಿಯೆಂದು ಸುಮ್ಮನಿರಲು | ಸಿರಿಲೋಲ ಅದುಕೊಂದು ಪಾಯವನು ರಚಿಸಿದಾ | ವರಕಡಿಗೆ ಪೊರಮಡಿಸಿಕಾಯಿದೆ ಹರಿಯೇ2 ಶರಣ ಪ್ರಲ್ಹಾದಂಗ ದನುಜ ಪೀಡಿಸುತಿರಲು | ಕರುಣ ಸಾಗರ ನಿಮ್ಮ ಧ್ಯಾನಿಸಲ್ಕೆ | ಕರುಳ ಬಗೆದುಕಾಯಿದೆ ಹರಿಯೇ | ನರಹರಿಯ ರೂಪದಿಂದ ಸ್ಥಂಬದೊಳಗುದ್ಭವಿಸಿ3 ದ್ರುಪದ ತನು ಸಂಭವಿಯ ಸೀರೆಯನ್ನು ಸೆಳೆಯಲ್ಕೆ | ತ್ರಿಪುರಾರಿ ಸಖ ನಿಮಗೆ ಮೊರೆಯಿಡಲು | ಕಪಟನಾಟಕ ದಯಾನಂದ ಹರಿಯೆ 4 ಈ ರೀತಿಯಲ್ಲಿ ಬಹು ಭಕ್ತರನು ಕಾಯಿದೆ | ಮುರಹರಿ ಧ್ಯಾನ ಸ್ಮರಣೆ ಯಂಬನದನು | ದಾರಿಯನು ಅರಿಯದ ಅಜ್ಞಾನಿಯ ಪರಾಧವನು ಸೈ ರಿಸುದು ಮಹಿಪತಿ ಸುತ ಪ್ರಿಯನೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾರುಣ್ಯ ಮೂರುತಿ ಕರುಣಾಸಾಗರ ಪ ಘೋರದುರಿತ ಸಂಹಾರ ಜಗತ್ಕರ್ತ ಮಾರ ಜನಕ ಶ್ರೀ ಮನೋಹರನ ವಾರಿಜಾಂಬಕ ಕೃಷ್ಣ ವಾರಧಿ ಶಯನನ ಪಾರಿಮಾರ್ಥಿಕ ನರಿತು ಪರಮ ಹರುಷದಿಂದ 1 ಕುಂಭಿನೀ ಪತಿರಾಮ ಕೋದಂಡಧರ ಗುಣ ಗಂಭೀರ ಪುರುಷ ಶ್ರೀ ಘನ ಮಹಿಮನ ಶಂಬರಾರಿಯ ಕೊಂದ ಶಿವನ ರಕ್ಷಿಸಿದಂಥ ಕಂಬು ಕಂಧರ ಕನಕಾಂಬರ ಭೂಷಣನಾ 2 ಅಗಣಿತ ಚರಿತ ಅನಂತ ಅವತಾರನ ನಿಗಮಗೋಚರ ವಿಷ್ಣು ನಿಜ ನಾಮವು ಬಗೆ ಬಗೆಯಲಿ ಅತಿ ಭಕುತಿಯಿಂದಲಿ ಜಯ ಜಗದೊಡೆಯ ಹೆನ್ನ ವಿಠ್ಠಲನ ಜಿವ್ಹದಿ 3
--------------
ಹೆನ್ನೆರಂಗದಾಸರು
ಕಾಲ ಬಂದಿತೋ ಬಂದ ಭವದೊಳು ಚಿಂತೆಯೊಳಗೆ ದಿನ ಸಂದಿತು ಪ ತುಪ್ಪ ಪಣಕೆ ಸೇರು ಉಪ್ಪೆಂಟು ಸಿದ್ದೆಯು ಮುಪ್ಪಾಗ ಕೊಂದೆ ಕೊಳಗಬತ್ತ ಸೊಪ್ಪ ಪಣಕೆ ಮಾರುವುದು ಅಚ್ಚೇರು 1 ವ್ಯಾಪಾರ ಸಾಪಾರ ತುಟ್ಟಿಸಿದರು ಕೊಳ್ಳ ಲಾಪರೆ ಫಣವೊಂದೆ ಕಟ್ಟಿಲ್ಲ ರೂಪಾಯಿ ಕೊಡೆ ಪುಲಿಚರಮ ಪಾಪವು ಸುಲತಾಗಿ ಪಣವ ಕೊಡೆಂಬರು 2 ದುಡ್ಡು ಕೊಡಲು ಬೇಡ ಬೈಯುತ ಆನೆ ಗೂಡಿನ (ಆನೆಗೊಂದಿ) ದುಡ್ಡತಾರೆಂಬರು ದೊಡ್ಡ ಮೊಳೆ ಪಣವಿದು ಸಣ್ಣ ಮೊಳೆಯಿಂಗಿ ? ಹೆಡ್ಡ ಹೋಗೆಂದದ್ದ ಬಿಸುಟರು ಫಣವ 3 ತಪ್ಪಿ ಹೇಳುವೆನೆ ನಮ್ಮಪ್ಪ ದುರ್ಭಿಕ್ಷವು ಎಪ್ಪತ್ತು ವರುಷ ಕೊದಗಿ ಬಂತು ಇಪ್ಪತ್ತು ವರುಷಕೀಕಾಲ ಬಂದಿದ್ದರೆ ಕನಿಷ್ಟಕ್ಕೆ ಗಣಿಸಿ ಸುಕ್ಷಾಮವ ಮರೆವೆನು 4 ಧಾರಣೆ ಪಾರಣೆ ಶಿವರಾತ್ರಿ ಹರಿದಿನ ಓರಂತೆ ಬಡವಗೆ ನೆಲೆಯಾಯಿತು ಕ್ಷೀರಾಬ್ದಿ ಶಯನ ಲಕ್ಷ್ಮೀನಾರಾಯಣನು ತನ್ನ ಸೇರಿದ ಜನರ ಕಣ್ಣಲಿ ನೋಡುತೊಲಿದ 5
--------------
ಕವಿ ಪರಮದೇವದಾಸರು
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ 1 ರಾವಣನ ಕೊಂದ ಪಾಪವ ಕಳೆಯಬೇಕೆಂದು ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ ದಾವಘದೊಳು ಪೊರಳುವನ ದಾವಾತ ಭಜಿಸುವನು ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ 2 ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ3 ಶ್ರುತಿಯಿವ ಕರ್ಮಣಾನೋಕನೀಯ ಎಂದು ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ ಸೇತುಪತಿಯ ಪಾವನನೆನಲು ಅವನ ಕೊಂದವನ ಪತಿತಪಾವನನೆಂಬುದೆ ಕುಚಿತ್ತಯುಕುತಿಯು ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ 4 ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ- ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ- ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು ಹೊಂದಿಸಿ ಸಮನೆಂದು ತೂಗಿ ತೋರು ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ 5 ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ- ಸುಕೃತ ಸೇತುಮುಖದಿಂದ ಸೀತೆಯರಸನು ಶಿವನ ನಿಲ್ಲಿಸಿ ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ 6 ರಾಮ ಶ್ರೀರಾಮರಾಮೇತಿ ರಮೆಯೆಂಬ ಆ ಮಹಾದೇವ ಭಗವದ್ಭಕ್ತನಲ್ಲವೆ ಸ್ವಾಮಿ ತನ್ನ ಭಕ್ತರÀನು ಪ್ರತಿಷ್ಠಿಸಿದ ನಿ- ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ 7 ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ ವಾಸುದೇವನೆ ಜಗಕೆ ಪರದೈವ ಕಾಣಿರೊ ಈ ಸುತತ್ವÀವ ಪೇಳ್ವ ಹರಗೆ ನಮ್ಮ ಹಯವದನ ಏಸುಮನ್ನಣೆ ಮಾಡಿದರುಚಿತ ಕಾಣಿರೊ 8 ಕರವ ಶಿರದ ಮೇಲೆ ಇರಿಸಬಂದ ಖಳಗಂಜಿ ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು ಪÀರಿಣಾಮವನು ಪೊರೆದ ಗಡಾ ಶರಣರಕ್ಷಕನೆಂಬ ಬಿರುದುಳ್ಳ ಹಯವದನ ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ 9 ರೋಮಕೋಟಿಲಿಂಗನೆನಿಸಿದ ಹನುಮನೊಂದು ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ ಸ್ವಾಮಿ ಹಯವದನ ವೇದವ ತಂದು ಕಮಲಜನ ಕಾಮಿತವನಿತ್ತನಾಗಿ ಅವನೆ ಜಗದೊಡೆಯ 10 ನೂರು ರುದ್ರರು ಪೇಳೆ ಕಾರ್ಯವಾದರೇನವರು ಈರೇಳು ಜಗವ ಸಂಹರಿಸಲರಿಯರು ಗಡಾ ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ ಬರಿದೆ ಹಲವು ಹಂಬಲಿಸದೆ ಶ್ರೀರಮಣ ಹಯವದನನೊಡಂಬಟ್ಟನಿ ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು 11 ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ 12 ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು- ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ ಕಂದನ ಸೃಜಿಸಿದ ಹಯವದನ ಚತುರನಲ್ಲವೆ 13 ಸುರರು ದ್ವಾರಕಾಪುರ ಯಾತ್ರೆಯಲಿ ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ- ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ 14 ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ ಪುರಾಣಗಳ ಮ್ಯಾಲೆ ಮಾಡುವ ಪರಮಾದÀರ ಸಲ್ಲದಯ್ಯ ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ ಸಿರಿ ಹಯವದನನಾರುಪುರಾಣಗಳ ನೋಡಿರೊ 15 ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ- ತೆಂದು ಶ್ರುತಿಸ್ಕಂಧÀ ಚೇತವೆಲ್ಲ ಗ್ರಂಥ[ಆ]ಸ್ಯ ದಿಂದ [ಒರೆಯೆ] ಹರಿಜಡನೋ ಹರಜಡನೋ ಮಂದಹಾಸದಿಂದ ಜಡರು ಮನುಮುನಿಗಳೆಲ್ಲ ಇಂಥ ಶಿವನ ವಹಿಸಿಕೊಂಡು ವಾದಿಸುವರು ಹಿಂದು ಮುಂದರಿಯರೆಂದು ಹಯವದನ ನಗನೆ 16 ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ- ವೆಂಬ ವೇದ ಬೋಧಿಸಿತಾಗಿ ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ ಹೊಂದಿಬದುಕು ಹಯವದನನ ಚರಣವ ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ 17
--------------
ವಾದಿರಾಜ
ಕೀಳಬಾರದೇ ಹಲ್ಲ | ಆಳುವಾಡತಿನ್ನುಮತವ ಏಳಲ ಮಾಡುವವರ ಪ ಮೂರು ಮೂರ್ತಿಗಳನೆ ಕರೆದು | ಸಾಯದಂಥ ದನುಜರನ್ನು | ತಾಯಿ ನೀನೆ ಕೊಂದು ಸುರ ನಿ- | ಕಾಯವನ್ನು ಕಾಯಲಿಲ್ಲ 1 ಇಂದು 2 ಇಂದು ನೀನು ಸುಮ್ಮನಿರಲು | ಮುಂದೆ ದಾರಿಗುಸುರಲಿನ್ನು |ತಂದೆ ಭವತಾರಕನ | ನಿಂದೆ ಮಾಡುವವರ ಹಲ್ಲ 3
--------------
ಭಾವತರಕರು
ಕುತ್ಸ್ಸಿತರೊಲ್ಲದ ಮತ್ಸರವಿಲ್ಲದ ಸತ್ಸಭೆ ಕೇಳಲೀ ಕೃತಿಯ ಪ. ಈ ಯುಗದವರಿಗೆ ಕಲಹ ಮಂಡಿಸಿದಗೆ ಆ ಯುಗದವರುಕ್ತಿ ಬೇಕು ನ್ಯಾಯದವರ ಕೇಳು ಪೂರ್ವಶಾಸನ ಸಾಕ್ಷಿ ಹೇಯವೆಂದಾರು ಪೇಳುವರು1 ನಿಮ್ಮವರಾಗಮ ನಮ್ಮವರಿಗೆ ಸಲ್ಲ ನಮ್ಮೋಕ್ತಿ ನಿಮಗೆ ಮೆಚ್ಚಲ್ಲ ಇಮ್ಮನದವರಿಗೆ ಇನ್ನೊಬ್ಬ ಹಿರಿಯರ ಸಮ್ಮತಿ ಬೇಕು ನಿರ್ಣಯಕೆ2 ಯುಕ್ತಿ ಮಾತ್ರವ ನಂಬಿ ನಡೆವುದುಚಿತವಲ್ಲ ಯುಕ್ತಿ ಸರ್ವತ್ರ ಬಂದಿಹುದು ಕುತ್ಸಿತ ದೇಹಬಂಧವ ಬಿಡಿಸುವ ನರ- ರುತ್ತಮರೆಂದರೇನೆಂಬೆ 3 ಹಿಂಸೆ ಸಲ್ಲದು ಗಡ ಕರದ ಚಿಮುಟಿಯಿಂದ ಏಸು ಕೂದಲ ಕೀಳುತಿರಲು ಏಸೋ ಜೀವಗೆ ನೋವು ಅದು ಹಿಂಸೆ ದೋಷದ ಒಂದಂಶಕ್ಕೆ ಸರಿ ಬಂದಿಹುದೆ 4 ಕೇಶ ಆಚ್ಛಾದನ ಸಂಕಟದಿಂದೆಂದ ಕ್ಲೇಶ ಸೂಸುವ ನಯನಾಂಬುಧಾರೆ ಆ ಸಮಯದಿ ಪರಮಸುಖವೆಂಬ ಮಾತು ಸತ್ಯವ್ರತಕೆ ಎಂತೊಪ್ಪಿಹುದೊ 5 ವೇದಶಾಸ್ತ್ರವ ಬಲ್ಲ ಹಾರವನಲ್ಲ ಹು- ಟ್ಟಿದ ದಿವಸ ಮೊದಲಾಗಿ ಪಾತಕಿ ತಮ್ಮೊ - ಳಾದನೆಂಬುದು ಬಲು ಚೋದ್ಯ6 ಪಾಪ ಸಲ್ಲದು ಗಡ ಪರನಿಂದೆಯಿಂದಾದ ಪಾಪವೆ ತಾವು ಶುದ್ಧರೆಂಬ ಪರಿ ಆತ್ಮಸ್ತುತಿಯಿಂದೊಂದಾ ಪಾಪ ಲೇಪಿಸದಿಹುದೆ ತಮ್ಮವರ 7 ಸ್ಥಾವರಜೀವರ ಸಾವಿರ ಕೋಟಿಯ ಆವಾಗ ಕೊಂದು ತತ್ತನುವ ಜೀವಿಪೆನೆಂದು ಬೇಯಿಸಿ ತಿಂಬ ಪಾಪವ ಆವ ನಿಮಗೆ ಅಹುದೆಂದ 8 ಇಂದ್ರಿಯಹತ್ತಿಲ್ಲದವರ ಕೊಲ್ಲುವುದಕ್ಕೂ ಹಾ- ಗೆಂದ ಗುರುವ ನಾನೇನೆಂಬೆ ಅಂದಚೆಂದಗಳ ಮೂಕರ ಪಕ್ಷ್ಷಿಯಂಡದ ನಿಂದ್ಯ ಹಿಂಸೆಯ ಸಲಿಸುವರೆ 9 ಸಂಗೀತಶ್ರವಣದಿ ಧೂಪಾಘ್ರಾಣದಿ ಮೂಲ ಹಿಂಗೂಡಿದುದಕ ಸ್ವಾದನಾದಿ ಅಂಗನೆ ಈಕ್ಷಣ ಸ್ಪರ್ಶನದಿಂ ಸ್ಥಾವ- ರಂಗಳು ಜಂಗಮದಂತೆ 10 ತಮ್ಮ ಕರ್ಮದಿ ತಾವೆ ಸಾವರೆಂಬ ಮತದಿ ಕಮ್ಮಿಯಾದ ವ್ರಣಕ್ಕೆ ಮದ್ದನಿಕ್ಕಲು ನಿರ್ಮಾಯನದೊಳಗೇಸೊ ಹಿಂಸೆ 11 ಅಕ್ಕಿಯ ಕುಟ್ಟಲು ಬಕ್ಕು ಜೀವರ ಹಿಂಸೆ ಮಕ್ಕಳುಂಬುದು ಮಾಂಸ ಪ್ರಿಯಳ ಚೆಂದುಟಿ ಮಾಂಸ ಇಕ್ಕು ಬಾಯೊಳು ದಂತದೆಲುವೆ 12 ಕರದ ತುಂಬವಿದೇನು ಕೊರಳ ಹಾರವಿದೇನು ಚರಣದ ನಖಪಂಕ್ತಿಯಿದೇನು ಖರ ಭೂತಪಂಚಕ ಅನ್ನ ಮಾಂಸಗಳೊಳು ಬರಿದೆ ನಿಂದಿಸಲೇಕೆ ಪರರ 13 ಉಪ್ಪಿನೊಳಗೆ ತೋರ್ಪ ಚಿಪ್ಪ ನೋಡದೆ ಪರ- ರಲ್ಪ ದೋಷಗಳರಸುವರೆ ಒಪ್ಪುವುದೆಂತೊ ಶತ್ರುಗಳ ನಿಂದನೆ ಕೊಲು- ತಿಪ್ಪ ನೃಪಗೆ ಜಿನಮಾರ್ಗ 14 ಬಸ್ತಿಯ ಕಟ್ಟಲು ಭೂಸ್ಥ ಜೀವರ ಹಿಂಸೆ ಸುತ್ತ ಯಾತ್ರೆಯ ಮಾಡಲೇಸೊ ತತ್ತಜ್ಜೀವರ ಹಿಂಸೆ ತೈಲಸ್ನಾನದಿ ಹಿಂಸೆ ವಸ್ತ್ರ ಒಗೆಯಲೇಸೋ ಹಿಂಸೆ 15 ಸಲ್ಲದ ಹಿಂಸೆಯ ಸಲಿಸಿದರೆಂಬರ ಬಲ್ಲವಿಕೆಯ ನಾನೇನೆಂಬೆ ಬಲ್ಲಿದ ಹಿಂಸೆಗೆ ಒಳಗಾದರು ಎಲ್ಲ ತಾ- ಕೈವಲ್ಯ ಸಾಧಕರು 16 **** ತೊಳೆಯದ ಬಲುಹಿರಿಯರ ನಾತಕ್ಕೆ ಸೋತು ಬೆಂಬಿಡದೆ ಆತುರದಿಂ ಬಪ್ಪನೊಣಗಳ ಗೀತವ- ನೋತು ಕೇಳುವ ಶಿಷ್ಯ ಧನ್ಯ 17 ಮೂತ್ರ ದ್ವಾರದ ಮಲ ಶ್ರೋತ್ರನೇತ್ರದ ಮಲ ಗಾತ್ರ ನಾಸಿಕದ ಮಲ ಯಾತ್ರೆಯ ಮಾಡುವರಕ್ಷಿಗೆ ಕೌತುಕ ಪಾತ್ರವಾಯಿತು ಬಲು ಚಿತ್ರ 18 ******************* 19 ಏಕ ಭಾಗದೊಳು ಸ್ತ್ರೀ ವಾಸ ಏಕಾಂತದಿಪ್ಪುದು ಲೋಕಸಲ್ಲದೆಂಬರ ಈ ಕಾಮನೆಂತು ಬಿಟ್ಟಿಹನು 20 ಬಸ್ತಿಯ ಪ್ರತಿಮೆಯಲಿಪ್ಪ ದೇವನದಾರು ಮುಕ್ತರಿಗೀಭೋಗ ಸಲ್ಲ ಮುಕ್ತರÀಲ್ಲದ ಜೀವ ದೇವರೆಂತಹರೆಂದು ವ್ಯರ್ಥವಾಯಿತು ನಿನ್ನುತ್ಸಾಹ 21 ನೋಡುವ ನಯನಕ್ಕೆ ಮಾಡುವ ಪೂಜೆಗೆ ಕೂಡಿದ ಬಹುವಿತ್ತ ವ್ಯಯಕ್ಕೆ ಈಡಾಯಿತಂಶ ಕೇವಲ ಬೊಂಬೆ ಶಿವಶಿವ ಆಡುವ ಶಿಶುಗಳ್ಪೇಳಿದರೆ 22 ಹೆಂಡಿರೆ ಸಂಸಾರವಾದರೆ ಹಸಿತೃಷೆ ಉಂಡು ಮಲಗುವುದು ಮುಕ್ತರಿಗೆ ಮಂಡೆಯ ಬೋಳಿಸಿ ದೇಹದಂಡನೆ ಮಾಡಿ ಕೈ- ಕೊಂಡ ಮಾತ್ರದಿ ಮುಕ್ತರಹರೆ 23 ಮತ್ರ್ಯ ದೇಹವಿರಲು ಮುಕ್ತರೊಬ್ಬರು ಅಲ್ಲ ಸತ್ತಮೇಲೇನಾದರೆಂತೊ ಅತ್ತು ಕಾಡುವ ಶಿಷ್ಯರೆಂತರು ಕಾಂಬರು ಸರ್ವ- ಕರ್ತೃ ಶ್ರೀಹರಿ ತಾನೆ ಬಲ್ಲ 24 ದುಃಖವೆ ಸಂಸಾರ ದುಃಖವಿಲ್ಲದ ಸುಖ ಮುಕ್ತಿಯೆಂಬುದು ಬುಧರ್ಗೆ ಮಾತ್ರ ಮಿಕ್ಕದೆ ದುಃಖವಿತ್ತರೆ ಭವವೆನಿಪುದು ದುಃಖವೆ ದೂರ ಮುಕ್ತರಿಗೆ 25 ಪುನರ್ಭವವೆÉನ್ನೆ ಶ್ರುತಿ ಅಮೃತವುಂಡರೆ ಮೋಕ್ಷ ಜನನ ಮರಣವಿಲ್ಲದಖಿಳ ಜನರ ದುಃಖವನವತರಿಸಿ ಕಳೆವ ನಾರಾ- ಯಣನೆ ನಿರ್ದೋಷ ನಿತ್ಯಸುಖಿ 26 ಪಾತಕ ವ್ರತವ ಕೈಗೊಂಡ ಸ್ತ್ರೀ- ಜಾತಿಯ ಮುಟ್ಟಲ್ಲೆಂಬುವನು ಖ್ಯಾತ ಶ್ರೀಹರಿಗೆ ಪಾತಕಮುಟ್ಟದೆಂಬರ ಮಾತನದೇಕೆ ಮನ್ನಿಸನು 27 ಕೆಸರ ತೊಳೆದ ನೀರು ಕೆಸರ ಬಾಧಿಪುದೆ ತಾ- ವೈರಿ ಸೂರ್ಯನೊಳು ತಮವೆ ವಿಷಹರ ಗರುಡಗೆ ವಿಷ ಲೇಪಿಸುವುದೆ ಕ- ಲುಷ ಮುಟ್ಟುವುದೆ ಪಾಪಾಂತಕನ 28 ಸುಡುವಗ್ನಿ ಕಡಿವಸ್ತ್ರ ಕಡುಕೋಪಿ ಸರ್ಪನ ತಡೆಯಬಲ್ಲರೆ ತುಡುಕುವರೆ ಬಿಡು ಮನಭ್ರಾಂತಿಯ ಹಯವದನನೆ ಜಗ- ದೊಡೆಯ ಸರ್ವತ್ರ ನಿರ್ದೊಷ 29
--------------
ವಾದಿರಾಜ