ಒಟ್ಟು 298 ಕಡೆಗಳಲ್ಲಿ , 69 ದಾಸರು , 275 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಚರಣಾಂಬುಜವೇ ಶರಣವೆನಗೆ ನಿತ್ಯ ಕರ್ಮವೆನಗೇ ಪ ನಿನ್ನ ಮಹಿಮೆಯ ಪೇಳ್ವ ಕಾರ್ಯವೇ ಭೋಜನ ನಿನ್ನ ಚರಿತೆಯ ಕೇಳ್ವುದೆನಗೆ ಪಾನಅ.ಪ ಗೋವಿಂದ ಗೋಪಾಲ ದೇವ ವನಮಾಲಾ ಗೋವರ್ಧನೋದ್ಧಾರ ಕರುಣಾಕರ ಶ್ರೀವಾಸುದೇವ ಹರಿ ಚಕ್ರೀ ಮುರಾರಿ ದೇವ ದೇವೋತ್ತುಂಗ ಮಾಂಗಿರಿಯ ರಂಗ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ಅಪರಾಧಕಾಕರಾದವನು ಪ. ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದುಪೊರೆವ ನಿನ್ನಡಿಯ ಮರೆದುದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದುಮರಿಯಾದೆಗೆಟ್ಟು ತಿರಿದುಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ 1 ಜಟ್ಟಿಗಳ ಮನೆಯ ನಾಯಂತೆ ಒಳ್ಳೆಬಟ್ಟೆಗಳತೊಟ್ಟವರ ಹಿಂದೆ ತಿರುಗಿಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರುಕೆಟ್ಟು ಮುರಿದುದನು ಪೇಳಿಉಟ್ಟ ಅರಿವೆಯ[ಕೋರಿ] ಹೊಟ್ಟೆ ಬಾಯನೆ ತೋರಿಕೊಟ್ಟುದಕೆÉ ತೃಪ್ತನಾಗದೆ ಅವರ ಬಯ್ವವನು 2 ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-ಕೃತ್ಯ ಶತಗಳನು ಮಾಡಿಸತ್ಯ ಶೌಚಂಗಳ ಬಿಟ್ಟು ಶ್ರವಣ ಮನನಾದಿ ಪ್ರ-ಸಕ್ತಿಗಳ ಹೋಗಲಾಡಿಉತ್ತಮರು ತಾಯಿತಂದೆ ಗುರುಹಿರಿಯರುಗಳಅರ್ಥಗಳನಪಹರಿಸಿ ಅವರ ನಿಂದಿಸುವನು 3 ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿಸರ್ವವಿಹಿತಗಳ ಮೀರಿಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನನಿರ್ವಾಹಗಳನೆ ತೋರಿದುರ್ವಿಚಾರದಿ ಸ್ವಲ್ಪಧನಕಾಗಿ ಎನ್ನೊಳಿಹಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ 4 ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯಕುಲಸತಿಯ ಕೂಡೆ ಕಲಹಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-ಗಳ ಮುರಿವ ಪಾಪಚಿಂತೆಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿಸುಲಭ ಹಯವದನನ್ನ ಮರೆತ್ಹಾಳುಹರಟೆಯವ 5
--------------
ವಾದಿರಾಜ
ನಿನ್ನ ಬಗೆ ಬಗೆ ರೂಪಗಳ ಉರಗ ಶಯ್ಯ ರಂಗಯ್ಯಾ ಪ ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ ಶತಧೃತಿ ತಲೆವಾಗಿ ಚತುರತೆÉಯಿಂದಲಿ ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು ರಿತ ಪುಂಜದಾನವನ ತರಿದೊಟ್ಟಿ ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ 1 ಕೃತು ಭುಕು ದೇವಾರಿತತಿ ಸಂಗತಿಯಿಂದ ಮತಿ ಏಕರಾಗಿ ಸಂಮತದಿಂದ ನಡೆದು ಪ ರ್ವತವ ಕಿತ್ತಿ ತಂದು ಉ ನ್ನತವಾದ ಕ್ಷೀರೋದ ಪತಿಯೊಳಗಿಟ್ಟು ಅತಿಬಲದಿಂದ ನಗುತ ಮಥಿಸಲು ಮಹಾ ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ2 ಗತಮಂದ ಮಾರೀಚ ಸುತ ಹೇಮನೇತುರಾ ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧÀರ ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ 3 ಚತುರ ಮೊಗನವರನುತಿಸಿ ಪಡೆದು ಪ್ರಾಗ ರ್ವಿತನಾಗಿ ನೀಲಲೋಹಿತನ ಭಕುತಿಯಿಂದ ತತುವೇಶಜನರ ಶಕುತಿ ಕುಂದಿಸಿ ತಾನೆ ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ ಗತಿಯೆಂದು ವಂದಿಸಲೆ ಕಂಭದಿ ಬಂದು ಸುರರು ಪೂಮಳೆ ಚೆಲ್ಲೆ 4 ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ ಕೃತಕಾರ್ಯನಾಗಿರೆ ರಿತಮದದಲಿ ತಾ ನುತಿಸಲಾದಿತಿಯ ಗರ್ಭದಲ್ಲಿ ಜ ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ ತತಿ ವಿಕ್ರಮತೀರಿತವಾದ ದಯಾಸಿಂಧು 5 ಸೂನು ಪೂಜಿತನಾಗಿ ಮುನಿಯಿಂದ ಪಿತನಗೋಸುಗ ಉಗ ಳುತ ರೋಷ ಕಿಡಿಗಳಾದ ಈರೈದು ಬಾಹೋ ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ ರುತ ಸತ್ಯವತಿ ನಂದನಕುವರ ಪರುಶ ಪಾಣಿ ಮೃತ ಜೀವಿಗಳ ಬದುಕಿಸಿದ ಮಹಾಧೀರಾ 6 ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ ಅನುಜ ಸಹಿತ ಪೋಗಿ ಮುನಿಯ ವಾ ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ ಪುರವಸಾರಿ ಪಿತನಾಜ್ಞ ತಿಳಿದು ಮಾ ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ ಹಿತದಿಂದ ಭಕ್ತಗೆ ಪಟ್ಟಗಟ್ಟಿದÀ ನೋಡಿ 7 ಶತ್ರಪತ್ರಾರುಣ ದಳಾಯುತ ನಯನಾದೇವ| ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ | ಭಂಗ ಬಲಾ | ಚರಿತಪೂರ್ಣ ಕಂಸಾರಿ ಯುತ ಷೋಡಶಾಖ್ಯ ಯುವತಿಯರ ತಂದ ಅ| ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ | ಸಾರಥಿ ಎನಿಸಿ ಕಾಳಗದೊಳು | ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ | ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ 8 ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ | ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು | ಅಪ್ರಾಕೃತ ಕಾಯ ಶಿಶುವಾಗಿ || ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ | ಚಿತ ಮಾರ್ಗದ ಬಿಡಿಸಿ ನಿ | ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ 9 ವಿಹಿತ ಧರ್ಮ ಮರೆದು | ಮಮತೆ ಜಾತಿ ಸಂಕರ | ವ್ರತದಲ್ಲಿ ನಾನಾ ದುಷ್ಕøತ ತುಂಬಿರಲು ದೇವತೆಗಳು ಮರುಗಿ ಅ | ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ | ಸಿತ ಖಡ್ಗಧರಿಸಿ ರಾ ಶೌರಿ | ಸುಕೃತ ನೆನೆವವರಿಗೆ ಭವಸಾಗರ ತಾರಿ10 ಶ್ರುತಿ ಶೀರ್ಷ ಶ್ರುತಿ ಉಪ | ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ | ವತ ಮೂಲ ರಹಸ್ಯ | ತತುವಾದಿನಾಮನು | ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ | ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ ಪ್ಪುತ ಕೊಂಡಾಡುವರು ನಿಂದು | ಭಕುತಪೂ ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು11
--------------
ವಿಜಯದಾಸ
ನಿನ್ನವನೆನಿಸಿದಾ ಮಾನವನಿಂಗೆ ಇನ್ನು ಭವಭಯ ಉಂಟೇ ಭಕುತ ವತ್ಸಲ ಕೃಷ್ಣಾ ಪ ಶ್ರವಣ ದರಹು ಇಲ್ಲಾ ನವವಿಧ ಭಜನಿಲ್ಲಾ ಕವಿತದನುಡಿಯ ಚಾತುಯ್ರ್ಯವಿಲ್ಲಾ ತವಚರಣವನಂಬಿ ಅವನಿಯೋಳಗನಿಶಿ ದಿವಸದಿ ಅಚ್ಯುತಾನಂತ ಗೋವಿಂದ ಯನುತಲಿ 1 ಘನ್ನ ವಿರಕ್ತಿಯಿಲ್ಲಾ ಮನ್ನಣೆಯ ತಪವಿಲ್ಲಾ ಉನ್ನತ ದ ವ್ಯತಶೀಲ ಕರ್ಮವಿಲ್ಲಾ ಅನ್ಯದೈವ ಕೆರಗದೆ ನಿನ್ನ ನಾಮ ನಿನ್ನ ಮುದ್ರೆ ನಿನ್ನವರಪರಿಚಾರ ತನದಲ್ಲಿ ರಮಿಸುತಾ 2 ಮರೆದೊಮ್ಮೆನೆನೆದರೆ ಸರಿವದಘರಾಶಿ ಅರಿದೊಮ್ಮೆನೆನೆಯಲು ಗತಿಸಂಪದಾ ದೊರೆವುದೆನುತಶೃತಿ ನಿರುತ ಸಾರುತಲಿದೆ ಗುರುಮಹಿಪತಿ ಪ್ರಭು ಎನ್ನನುದ್ದರಿಸುದೈಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವರ ಧರ್ಮ ವಿಹಿತವಾಗುವುದು ಮ ತ್ತನ್ಯರಾಚರಿಸಿದ ಧರ್ಮ ಅಧರ್ಮ ಪ ಕಡಲ ಮಥನದಲಿ ಕಪರ್ದಿ ಕಾಳಕೂಟ ಕುಡಿಯಲು ಕಂಠಭೂಷಣವಾಯಿತು ಒಡನೆ ರಾಹು ಕೇತು ಸುಧೆಯ ಪಾನದಿಂದ ಮಡಿದರೆಂದು ಮೂರ್ಲೋಕವೇ ಅರಿಯೆ 1 ಬಲಿನಿನ್ನ ಮುಕುಟ ಕದ್ದೊಯ್ಯ ಪಾತಾಳಕೆ ಸಲೆ ಭಕ್ತನೆಂದು ಬಾಗಿಲ ಕಾಯ್ದೆ ಇಳೆಯೊಳು ಸುರರಿಗೆ ಗೋ ಭೂ ಹಿರಣ್ಯವಿತ್ತಾ ಖಳ ಜರಾಸಂಧನ ಕೊಲಿಸಿದೆ ಹೋಗಿ 2 ಪತಿವ್ರತ ಧರ್ಮದಿ ಮೃತರಾದ ತ್ರಿಪುರರ ಸತಿಯರು ಶಿವನಿಂದ ಹತರಾದರು ಸತಿ ಉಡುಪ ಪತಿಯಿಂದಲಿ ನಿತ್ಯ ಸೇವೆಯೊಳಿರುವಳು 3 ಮೇದಿನಿಯೊಳು ಪ್ರಾಣಿ ಹಿಂಸಕನೆನಿಸಿದಾ ವ್ಯಾಧನ ಯಮಿಕುಲೇಶನ ಮಾಡಿದೆ ವೇದೋಕ್ತ ಕರ್ಮವಾಚರಿಸಿದ ಜಿನನೊಳ್ ಪ್ರಾದುರ್ಭೂತನಾಗಿ ಕೆಡಹಿದೆ ತಮಕೆ 4 ಪರಾಶರನು ಸತ್ಯವತಿಯ ಸಂಬಂಧಿಸೆ ಶ್ರೀರಮಣ ನೀನವತರಿಸಿದಲ್ಲಿ ಭವ ಸರೋಜ ಕನ್ನಿಕೆಯಸಾರಲು ಬಿಡುವ ಜಗನ್ನಾಥ ವಿಠಲ 5
--------------
ಜಗನ್ನಾಥದಾಸರು
ನಿರವದ್ಯ ಪ ಸದ್ಗುಣಪೂರ್ಣ ನೀನೇನೊ ಮೂಢ ಅ.ಪ ಬ್ರಹ್ಮಜಿಜ್ಞಾಸದ ಕ್ರಮವ | ನಿರ- ಸಮ್ಯಕ್ ಶೋಧಿಸದೇ ಅಹಂ ಬ್ರಹ್ಮಾಸ್ಮಿ ಎಂಬುವ ಆಮ್ನಾಯ ವಾಕ್ಯಕೆ ಅರ್ಥವ ತಿಳಿಯದೆ 1 ಕಾಕುಮಾಡುತಲರ್ಥ ಪೇಳ್ವುದಧರ್ಮ ಏಕವಾವುದು ಇನ್ನು ಏಕವಾವುದು ಎಂದು ನೀಕಳವಳಿಸುತ ನಿಜತತ್ವವರಿಯದೆ 2 ಆತ್ಮನಾತ್ಮಗಳೆಂದರೇನೊ | ಪರ- ಮಾತ್ಮ ಜೀವಾತ್ಮರೊ ಜೀವದೇಹಗಳೊ ಸ್ವಾತ್ಮಾನುಸಂಧಾನದಿಂದಲಿ ನೋಡ- ಧ್ಯಾತ್ಮ ವಿದ್ಯಾಭ್ಯಾಸ ಮಾಡದೆ ಬಾಯೊಳು 3 ರವಿ ಗಣಪತಿ ಶಿವ ಶಕ್ತಿ | ಭೈ- ರವ ವಿಷ್ಣು ಎಂಬುವ ಷಣ್ಮತಯುಕ್ತಿ ಎವೆ ಮಾತ್ರ ಸ್ವಾತಂತ್ರ್ಯವಿಲ್ಲ ಕೇಳ್ ಸರ್ವಶ- ಬ್ದವುಯಾವನಲ್ಲಿ ಸಮನ್ವಯವರಿಯದೆ 4 ಜೀವ ಜೀವರಿಗೆಲ್ಲ ಭೇದ | ವಿದುಸ್ವ ಭಾವವಾಗಿರುವುದು ಯಾತಕೀವಾದ ಜೀವರೂಪದಿ ಸರ್ವಜೀವರೊಳಗಿದ್ದು ದೇವಸಕಲ ಕರ್ಮಗಳ ಮಾಡಿಸುವನು 5 ಕರ್ಮವೆಂಬುದು ಅವನಿಗೆ ಲೋಪವಿಲ್ಲ ನಿರ್ಮಲ ಸಚ್ಚಿದಾನಂದ ಬ್ರಹ್ಮ ಎಂದು ನೀನೆ ಪೇಳುವೆಯಲ್ಲ ನಿನಗೆ ನಿಜವಿಲ್ಲ 6 ಸೂರ್ಯ | ಚಂದ್ರ ಕಿನ್ನರ ಸಿದ್ಧ ಸಾಧ್ಯ ನರತಿರ್ಯಕ್ ಪಶುಪಕ್ಷಿ ಕೀಟಾದಿ ನಾಮಗಳು ಪರಮಾತ್ಮನಲಿ ಸಮನ್ವಯವರಿಯದೆ 7 ಮಾಯಾ ಪ್ರಪಂಚವಿದೆನ್ನುತ | ನಿ- ಮಾಯೆಯಧಿಷ್ಠಾನದೊಳನಂತ ಜೀವನಿ- ಕಾಯವು ಗುಣಗಳಿರುವ ಮರ್ಮವರಿಯದೆ 8 ಸಾರ ಭೇದವಬದ್ಧ ಅಭೇದ ನಿಶ್ಚಯವೆಂದು ವಾದಿಸುವುದಕೇನಾಧಾರ ನಿನಗುಂಟೊ 9 ಜೀವಬ್ರಹ್ಮೈಕ್ಯವೆ ಮುಕ್ತಿ | ವೇ- ದಾವಳಿಗಳ ಪರಮಾರ್ಥದ ಉಕ್ತಿ ಜೀವನಿಂದೇನಾಗುವುದೆಂಬುದರಿಯದೆ 10 ದ್ವಾಸುಪರ್ಣವೆಂಬುವುದಕೆ | ವಿಷ- ಯಾಸಕ್ತ ಜೀವ ಆತ್ಮನು ಸಾಕ್ಷಿಯದಕೆ ನೀಸರ್ವೋತ್ತಮನಾದರೆ ಇನ್ನು ಮಹದಾದಿ ಈ ಸೃಷ್ಟಿ ಸ್ಥಿತಿಲಯವೇತಕೆ ತಿಳಿ ಜೋಕೆ 11 ಅಂಧ ಪರಂಪರವಾದ | ಬಿಟ್ಟು ಚಂದಾಗಿ ಪರಿಶೋಧಿಸು ಭÉೀದಾಭÉೀದ ತಂದೆತಾಯಿಗು ಮಗನಿಗೂ ಎಷ್ಟು ಭÉೀದ ಆ- ಪರಿ ತಿಳಿದರೆ ನಿರ್ವಾದ 12 ಪೂರ್ವೋತ್ತರ ವಿರೋಧವಿಲ್ಲ | ದಂತೆ ಸರ್ವಶೃತಿಗಳರ್ಥ ತಿಳಿದು ನುಡಿಸೊಲ್ಲ ಗರ್ವವೇತಕೆ ನಿನಗಿದರೊಳೇನಿಲ್ಲ ನೀ ಸರ್ವಜ್ಞನೊ ಕಿಂಚಜ್ಞನೊ ನೋಡು ದೃಢಮಾಡು 13 ಯೋಗ ಒದಗಿದಾಗ ಒಂದೆ ಎಂಬುವರೆ ಈಗೇನು ಆಗೇನು ಇಲ್ಲೇನು ಉಂಟೆ ನಾ- ವಾಗಲು ಜೀವರಿಗೆ ಹರಿಕರ್ತನಾಗಿರೆ 14 ಕಾಲಕರ್ಮ ಸ್ವಭಾವ ಜೀವ | ಹರಿಯ ಆಲಸ್ಯ ಬಿಟ್ಟು ಅವನಿಗೆ ದಾಸನಾಗದೆ 15 ಆಲೋಚಿಸಿದರರ್ಥ ನಿಜವಾಗಿ ತಿಳಿಯದೆ 16 ಜ್ಞಾನವೆ ನಾನು ಕರ್ಮವೆ ಮಿಥ್ಯವೆಂದು ನೀನಾಡುವುದಕೇನು ನೆಲೆ ಮೂಲ ಯಾವುದು ಸ್ವಾನುಭವವೋ ಶಾಸ್ತ್ರವೊ ಮನಕೆ ತೋರಿದ್ದೊ 17 ಹೋಮ ಜಪವು ಸ್ನಾನ ದಾನ | ನಿತ್ಯ ಭೃತ್ಯ ನ್ಯಾಯವರಿಯದವನು ಶುದ್ಧ ತತ್ವಾರ್ಥಿ ಎನಿಸುವನೆ 18 ಕರ್ತನು ನೀನೆಂದು ಭೃತ್ಯನು ನಾನೆಂದು ತೀರ್ಥಪಾದನ ದಿನದಿನದಿ ಸಂಸ್ತುತಿಸದೆ 19 ಪಾದ ವನಜಕೊಪ್ಪಿಸಿ ಸಂಸಾರದ ಕರಕರೆಯ ಮನದಿ ಲೆಕ್ಕಿಸದೆ ಚಿಂತನಗೈದು ಸರ್ವತ್ರ ಘನಮಹಿಮನ ದಿವ್ಯಗುಣರಾಶಿ ಪೊಗಳದೆ 20 ಹೊರಗಣ್ಣ ಮುಚ್ಚಿ ಮೋದದಲಿ | ಒಳ- ಗಿರುವಾಧಾರಾದಿ ಚಕ್ರಗಳ ಸ್ಥಾನದಲಿ ಸರಸಿಜಭವ ಶಂಕರಾದಿ ಸುರರ ನೋಡಿ ತರತಮವಾಗಿ ಮುಂದಿನ ಪರಿಯ ತಿಳಿಯದೆ 21 ಮಂಗಳ ಮೂರ್ತಿಯ ನೋಡಿ ಕೊಂಡಾಡಿ ಅ- ನಂಗಗೆ ಸಿಲುಕದೆ ಅರ್ಥಿಯ ಪೊಂದದೆ 22 ಎಪ್ಪತ್ತೆರಡು ಸಹಸ್ರನಾಡಿ | ಗಳೊ- ಳೊಪ್ಪುವ ಭಗವದ್ರೂಪಗಳನು ನೋಡಿ ಅಪ್ಪ ನೀನೆಂದು ಭಕ್ತಿಯಲಿ ಕೊಂಡಾಡಿ ಪುನ- ರಾವರ್ತಿರಹಿತ ಶಾಶ್ವತ ಸುಖಿಯಾಗನೆ 23 ವಿಪರೀತ ಮತಿಪುಟ್ಟದಂತೆ | ಧ್ಯಾನ- ಗುಪಿತವಾಗಿರುತ ಜನರಿಗೆ ಹುಚ್ಚನಂತೆ ಅಪವರ್ಗಾಪೇಕ್ಷಯಿಂ ನಿಷ್ಕಾಮಿಯಾಗದೆ24 ಆಪಾದಮಸ್ತಕ ದೇಹ | ದಿಸು ರಾಪದಜನಕ ಶ್ರೀಗುರುರಾಮವಿಠಲ ವ್ಯಾಪಾರವೆಲ್ಲ ಮಾಡಿಸುವನೆಂದರಿತರೆ ಸಾಫಲ್ಯನಾಗಿ ಜೀವನು ಧನ್ಯನಾಗುವ 25
--------------
ಗುರುರಾಮವಿಠಲ
ನೀಡುವರು ಮತ್ಯಾರಿಲ್ಲ ಪ ಬೇಡದಿರುವ ಸಜ್ಜನರಡಿಗಳ ಕೊಂ- ಡಾಡುತಲಿರು ನೀ ಹಗಲೆಲ್ಲ ಅ.ಪ ಕಾಸಾದರು ಹಿಡಿಕಾಳಾದರು ಹರಿ- ದಾಸರಿಗೋಸುಗ ಕೊಡಲಿಲ್ಲ ಲೇಸು ದೊರೆವುದೆಂದ್ಹಾರಾಡಿದರಾ- ಯಾಸವಲ್ಲದೆ ಫಲವಿಲ್ಲ 1 ನಿನ್ನಂತೆಯೆ ಪರರನು ನೋಡಿ ದಯೆ- ಯನ್ನು ಅವರಲ್ಲಿ ಇಡಲಿಲ್ಲ ಮುನ್ನಿನ ಕರ್ಮವು ಬಿಡದಲ್ಲ 2 ತಿಳಿವಳಿಕೆಯು ಸ್ವಪ್ನದಲಿಲ್ಲ ನೆಲದೊಳು ಬಚ್ಚಿಟ್ಟಿರುತಿಹ ದ್ರವ್ಯವು ಎಲೊ ನಿನಗದು ಸ್ವಾಧೀನವಲ್ಲ 3 ವ್ಯಾಪ್ತವಾಗಿ ಹೆಚ್ಚುವದೆಲ್ಲ ಆಪ್ತರು ದಾರಾ ಪುತ್ರಾದ್ಯರು ನಿ- ನ್ನಾದರಿಸುವರೊಬ್ಬರು ಇಲ್ಲ 4 ಕಾಮಕ್ರೋಧದೊಳಗೆ ಮುಳುಗಿ ನೀ ಕಂಡ ಕಂಡದು ಕೋರುವೆಯಲ್ಲ ಕ್ಷಣವಾದರು ನೆನೆ ಭಯವಿಲ್ಲ 5
--------------
ಗುರುರಾಮವಿಠಲ
ನೀನೇನ ಮಾಡಲಾಪಿಯೋ ಲಕುಮೀಶಾ | ನಾನೀಗ ಪಡೆದದ್ದು ಉಣದಲೆ ಪೋಗುವದೆ | ಪ ಲೋಕದೊಳಗೆ ನಿನ್ನ ಕೊಂಡಾಡಿ ಪ್ರತಿದಿನ ಏಕ ಭಕುತಿಲಿ ಸರ್ವೋತ್ತಮನೆಂದು ಏಕಾಂತ ಭಜಿಪÀ ಮನುಜಗಾದರು ಬರೆದ ವಾಕು ತಪ್ಪುವದೇನೋ ಅಜನು ನಿರ್ನೈಸಿದ1 ಮುಂದೆ ಕೊಡುವ ಫಲಕೆ ಕರ್ತ ನೀನಲ್ಲದೆ ಹಿಂದಣಿಂದಲಿ ಬರುವ ಕಾಲಾಖ್ಯಕೆ ಒಂದು ಬಿಂದು ಮಾತ್ರ ತೊಲಗಿಪ ನಡತಿ ಕಾಣೆ ಅಂದಲ್ಲಿ ಏನು ಫಲ ಎನ್ನ ಕರ್ಮವಷ್ಟೇ 2 ಇದ್ದದೊಂದು ಮರಿ ಅಡಗಾಣಿಸಿ ಬಂದು ಹದ್ದು ತಾ ವೈಯಲು ಆ ಕುರುಬ ಯೆಲ್ಲಿ ಇದ್ದರೇನು ಭಯ ವಿಜಯವಿಠ್ಠಲ ನಿನ್ನ ಪೊದ್ದಿದವಗಾದರು ಅನುಭವಿಸದೆ ಬಿಡದು3
--------------
ವಿಜಯದಾಸ
ನೇತ್ರಾವತಿಯ ವಾಸಾ | ಪ್ರಮಥ ಪೋಷಾಸೂತ್ರತನಯನೆ ಕಾಯೊ | ಭಕ್ತ ಜನ ಪೋಷಾ ಪ ಲೌಕಿಕ ಕುಕರ್ಮಗಳ | ನಾಚರಿಸಿ ಬಲು ವಿಧಧಿಕಾಕು ಜನರಾ ಸಂಗ | ಬಳಸಿ ಭವದೀ |ಏಕಮೇವನ ಚರಣ | ತೋಕನೆಂದೆನಿಸದಲೆನೂಕಿ ಎನ್ನಾಯುಗಳ | ವ್ಯರ್ಥ ಕಳೆವೇ 1 ಕೃತ ತ್ರೇತ ದ್ವಾಪರದಿ | ವ್ಯಕ್ತನಾಗುತ ನೀನುಚತುರದೊಳಗೇ ಮಂಜು | ನಾಥನೆನಿಸೀ |ಕೃತಿಪತಿಯ ಸಚ್ಚರಣ | ಶತಪತ್ರ ಭಜಿಪರಿಗೆಗತಿ ತೋರಿ ಸನ್ಮುಕುತಿ | ಪಥಕೆ ಕೊಂಡೊಯ್ವೇ 2 ಯತಿವಾದರಾಜರಿಂ | ಹಿತದಿ ಕದರೀಯಿಂದಪೃಥುಕು ನೃಹರಿಯ ಶಿಲೆಯು | ಸ್ಥಿತ ಧರ್ಮಸ್ಥಳದೀಕೃತವು ವೈಷ್ಣವ ಪೂಜೆ | ಚತುರಯುಗ ಮೂರುತಿಯೆವಿತತ ಮಹಿಮನ ತೋರ್ವ | ಮತಿಮಾಡೊ ಶರ್ವಾ3 ವೈಕಾರಿಕಾದಿ | ಸಾಕಾರಿ ಮಹದೇವಕೈಕೊಳುತ ಮನ್ಮಾತ | ನೋಕರಿಸದೇ |ಪ್ರಾಕ್ಕು ಕರ್ಮವ ಕಳೆದು | ನೀ ಕೊಡುವುಧ್ಹರಿ ಭಕುತಿನಾಕಪತಿ ವಂದ್ಯ ಸ | ನ್ನಾಕನದಿ ಧರನೇ 4 ಗುಣ ಪೂರ್ಣನಾದ ಗುರು | ಗೋವಿಂದ ವಿಠಲ ಪದವನಜ ಬೇಡುವೆ ಮನದಿ | ಕರುಣಾನಿಧೇ |ಅನಲಾಕ್ಷ ನಿನ್ನೊಲಿಮೆ | ಇಲ್ಲನಕ ಗತಿಯಿಲ್ಲಬೆನಕ ಪಿತ ಮನಮಾನಿ | ಎನಗೊಲಿಯೊ ಶಿವನೇ5
--------------
ಗುರುಗೋವಿಂದವಿಠಲರು
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ನೋಡಿದೇ ಶ್ರೀ ವಿಠಲನ ನೋಡಿದೆ ಪ ಕುಂಡಲ ಧರನ ಅ.ಪ. ದಾಸರಂದದಿ ಕಾವಿ ವಸನ | ಹೊದ್ದುಭಾಸೀಸುತಿಹ ಸಿರಿವರನ | ವಸನಮೀಸಲನವನು ತೆಗೆಯಲದನ | ಕಂಡೆಲೇಸಾದ ಶಾಲು ಹೊದ್ದವನ | ಆಹಕಾಶಮೀರದ ಶಾಲು | ಭಾಸುರ ಜರೆ ಖಚಿತಭೂಷಿತ ಹರಿ ಕುಳಿತು | ತೋಷಿಪ ಭಕುತರನ 1 ಸುತ್ತಿಹ ಪಾವಡೆ ಶಿರಕೇ | ಬಲುಸುತ್ತು ಸುತ್ತಿರುವುದು ಅದಕೆ | ಹರಿಮಸ್ತಕ ಛಂದ ಕಾಂಬುದಕೆ | ನೋಡಿಭಕ್ತ ಸಂದಣಿಯ ತೋಷಕ್ಕೆ | ಆಹಸುತ್ತಿಹುದನು ಬಿಚ್ಚೆ | ತುತ್ತಿಸುತಿರಲಾಗಕೃತ್ತಿವಾಸನ ತಾತ | ನೆತ್ತಿ ನೈಜವ ಕಂಡೆ 2 ಪೂಜಾರಿ ತೆಗೆಯಲು ಜರಿಯ | ಶಾಲುಮಾಜಾದೆ ವಿಠಲನ ಪರಿಯ | ಕಂಡೆನೈಜದ ಶ್ರೀವರನ ದ್ವಯ | ಹಸ್ತಯೋಚಿಸಿ ಕಟಿಲಿಹ ಪರಿಯ | ಆಹಸೋಜಿಗತನರೂಪ | ನೈಜದಿ ತೋರುತಪೂಜಾದಿ ಸ್ವೀಕಾರ | ವ್ಯಾಜಾವ ಕಂಡೆನು 3 ನಿರ್ಮಲಾಕೃತಿ ಪೊದ್ದ ಹಾರ | ತುಳಸಿಕಮ್ಮಲ ರ್ಸೂಸುವಧಾರಾ | ಕಾರಒಮ್ಮೇಲಿ ತೆಗೆದರಪಾರ | ದಯಸುಮ್ಮನ ಸರಿಗೀವ ಪೋರ | ಆಹಆಮ್ಮಹ ದೈವನ | ಇಮ್ಮಡಿ ಪ್ರಭೆ ಕಂಡನಿರ್ಮಾಲ್ಯ ತೆಗೆಯುವ | ಕರ್ಮಾಚರಿಸೂವಲ್ಲಿ 4 ಪಾದ | ಸ್ವೀಕರಿಸುವ ಭಕ್ತತೋಕನ ಬಿಂಬೋದ | ಶ್ರೀಕರ ದಳ ತುಳಸಿ 5 ನಾಕ್ಹತ್ತು ಭುವನಗಳ್ಜೋತಿ | ಮತ್ತನೇಕಾನೇಕಾಕಾರ ಜ್ಯೋತಿ | ಗಳೊಪ್ರಕಾಶ ಪ್ರದ ಪರಂಜ್ಯೋತಿ | ಮುಕ್ತಿಪ್ರಕಾರ ದೊಳಗಿವನೆ ಜ್ಯೋತಿ | ಆಹಏಕಮೇವ ಹರಿಗೆ | ಕಾಕಡಾರುತಿ ಮಾಳ್ಪಲೋಕರ ಪೂಜೆಯ | ಸ್ವೀಕರಿಪುದ ಕಂಡೆ 6 ಪಂಚ ಮೋಕ್ಷ ಪ್ರದ ಹರಿಗೆ | ಆಯ್ತುಪಂಚ ವಿಧಭಿಷೇಕ ಆವಗೆ | ಶೇಷಮಂಚಿಕೆ ಕ್ಷೀರಾಬ್ದಿಶಯಗೆ | ಮಧುಸಂಚನ ಮಧ್ವಿದ್ಯ ಹರಿಗೆ | ಆಹಪಂಚಾಮೃತಭಿಷೇಕ | ಸಂಚಿಂತಿಸುವನೀಗೆಸಂಚಿತ ಕರ್ಮವ | ಕೊಂಚವ ಮಾಡುವ 7 ಮಂಗಳ ಮಹಿಮಗ ಸ್ನಾನಾ | ಅವಗಂಗಾ ಪಿತನೆಂಬುದೆ ಮಾನ | ಹಾಗೂಅಂಗಜನಯ್ಯಗೆ ಸ್ನಾನಾ | ಆಯ್ತುಹಿಂಗದೆ ಲೋಕ ವಿಧಾನಾ | ಆಹಸಂಗೀತಲೋಲ ಸ | ತ್ಸಂಗವು ತುತಿಸಲುಸ್ವಾಂಗಾಯನಾಮ ಶು | ಭಾಂಗನು ಮೆರೆದನು 8 ಕಾಯ ವರೆಸಿ | ಬಹುಶಾಸ್ತ್ರೋಕ್ತಿ ಉಡಿಗೆಯ ಉಡಿಸಿ | ಮತ್ತೆರತ್ನಧ್ಯಾಭರಣವ ತೊಡಿಸಿ | ಚೆಲ್ವಕಸ್ತೂರಿ ತಿಲಕವನಿರಿಸಿ | ಆಹವಿಸ್ತøತೀಪರಿಯಲಿ | ಸತ್ಯ ಷೋಡಶ ಪೂಜೆಚತ್ತುರ ಮೊಗನಿಂದ | ಕೃತ್ಯಾನು ಸಂಧಾನ 9 ವೇದ ಘೋಷ ಪೂಜಾ ಮಂತ್ರ | ಬಹುನಾದ ವಿಠಲ ನಾಮ ಮಂತ್ರ | ತುಂಬಿಮೋದ ಪೂರೈಸಿತು ತಂತ್ರ | ಘಂಟೆನಾದದಿಂದಾರುತಿ ಕೃತ | ಆಹಆದರದಿಂದ ಪ್ರ | ಸಾದವು ಸ್ವೀಕೃತಮೋದದಿ ವಿಠಲನ | ಪಾದಾಲಿಂಗಾಂತ್ಯವ 10 ಉತ್ಕøಷ್ಟ ಸುಕೃತದ ಭೋಗ | ಹರಿಇತ್ತನು ಅನುಗ್ರಹ ಯೋಗ | ಸ್ವಂತಹಸ್ತದಿ ಪೂಜಾದಿ ಯೋಗ | ಮಾಳ್ಪಕೃತ್ಯ ಸಂಧಿಸಿದನು ಈಗ | ಆಹಚಿತ್ತಜ ಪಿತ ವಿಠಲ | ಭಕ್ತವತ್ಸಲ ದೇವನಿತ್ತಕಾರುಣ್ಯವ | ತುತ್ತಿಸಲೆನಗಳವೇ 11 ಪಿತೃ ಸೇವಕ ಪುಂಡಲೀಕ | ತನ್ನಕೃತ್ಯದೊಳಿರೆ ನಿರ್ವಲ್ಕೀಕ | ಹರಿವ್ಯಕ್ತ ತನ್ಭಕ್ತ ಪರೀಕ್ಷಕ | ನಾಗೆಭಕ್ತನು ಮನ ಸ್ಥೈರ್ಯಾಲೋಕ | ಆಹಇತ್ತ ಇಟ್ಟಿಗೆ ಪೀಠ | ಮೆಟ್ಟಿ ನಿಂತಿಹ ದೇವಕೃತ್ತಿ ವಾಸಾದ್ಯರಿಂ | ಸ್ತುತ್ಯ ಶ್ರೀ ವಿಠಲನ 12 ದಾಸೀಗೆ ಕಂಕಣವಿತ್ತು | ಹರಿದಾಸರ ರೂಪೀಲಿ ನಕ್ತ | ಕಳೆದಾಶು ದಾಸರ ಶಿಕ್ಷಕರ್ತ | ಮತ್ತೆದಾಸರ ನಿರ್ದೋಷ ವಾರ್ತ | ಆಹದಾಸನೋರ್ವಾ ವೇಶ | ಭೂಷಣ ಕೇಳುತ್ತವಾಸುಕಿ ಶಯನೊಲಿದ | ದಾಸ ಪುರಂದರಗೆ 13 ಮುಯ್ಯಕೆ ಮುಯ್ಯ ತೀರಿತು | ಜಗದಯ್ಯ ವಿಠಲನ್ನ ಕುರಿತು | ಪೇಳಿಕಯ್ಯನೆ ಮುಗಿದರು ತ್ವರಿತು | ದಾಸಮೈಯ್ಯ ಬಿಗಿದ ಕಂಬ ಒಳಿತು | ಆಹತ್ರಯ್ಯ ಲೋಕದಿ ದಾಸ | ಅಯ್ಯನ ಪೆಸರಾಯ್ತುತ್ರಯ್ಯ ಗೋಚರ ಹರಿ | ಪ್ರೀಯ್ಯನಿಗೊಲಿದಂಥಾ 14 ಅಂಡ ಬ್ರಹ್ಮಾಂಡಗಳೊಡೆಯ | ಭಕ್ತಪುಂಡಲೀಕನಿಗೊಲಿದ ಭಿಡೆಯ | ರಹಿತಚಂಡ ಕಿರಣಾನಂತ ಪ್ರಭೆಯ | ಹರಿಮಂಡಿತಿಂದು ಭಾಗ ತಡಿಯ | ಆಹಹಿಂಡು ದೈವರ ಗಂಡ | ಪುಂಡರೀಕ್ಷಾಕನೆಪಿಂಡಾಂಡದೊಳಗಿಹ | ಗಂಡನೆಂದೆನಿಸಿಹಗೆ 15 ಪುರಂದರ ವಿಜಯ ಭಾಗಣ್ಣ | ಮತ್ತೆವರ ಜಗನ್ನಾಥವರ್ಯ | ಬಹುಪರಿಠವಿಸಿತ್ತೆ ಮೃಷ್ಠಾನ್ನ | ದಾಸವರರ ಸೇವಕ ಸೇವಕನ್ನ | ಆಹಪುರಂದರದಾಸರ ದಿನ | ದರುಶನ ವಿತ್ತಿಹೆಅರಿದಾಯ್ತೆನ್ನಯ ಕುಲ | ಪರಮ ಧನ್ಯವೆಂದು 16 ಇಂದು ಭಾಗದಿ ವಾಸ ಜಯ | ಸಿರಿಇಂದಿರೆ ಲೋಲನೆ ಜಯ | ದಾಸಮಂದಗಭೀಷ್ಟದ ಜಯ | ಎನ್ನತಂದೆ ತಾಯಿ ಬಂದು ಜಯ | ಆಹ ಸುಂದರ ಗುರು ಗೋವಿಂದ ವಿಠಲ ಹೃ-ನ್ಮಂದಿರದೊಳು ತೋರಿ | ಬಂಧನ ಬಿಡಿಸುವ 17
--------------
ಗುರುಗೋವಿಂದವಿಠಲರು
ಪಾಪ ಕರ್ಮವ ಮಾಡಬ್ಯಾಡಾ ನರಕಕೂಪದೊಳಗೆ ಬಿದ್ದು ಹೊರಳಾಡಬ್ಯಾಡಕಾಕಪುರುಷರ ಸಂಗ ಕೇಡಾ ನಮ್ಮಶ್ರೀಪತಿಯ ಸ್ಮರಣೆ ಮಾಡದೆ ಬಿಡಬ್ಯಾಡಾ 6 ವಿಹೀತ ಕರ್ಮಗಳನ್ನು ಮಾಡೋ ನೀನುಅಹಿತಲ್ಪನೊಲಿಸಿ ಸದ್ಗತಿಯನ್ನು ಬೇಡೊಅಹಿತ ವಿಷಯ ಸುಖ ದೂಡೋ ಲೋಕ ದಹಿತನ ಸೇವೆಗೆಯುತಲಿ ಕೊಂಡಾಡೊ 7 ಸತ್ಯವಚನದಿಂದ ಬಾಳೊ ಬಲುಭಕ್ತಿಪೂರ್ವಕದಿ ಸಚ್ಛಾಸ್ತ್ರ ಕೇಳೊಚಿತ್ತದಿ ಶಾಂತಿಯ ತಾಳೊ ದುಷ್ಟ_ರುಕ್ತಿ ಕೇಳದೆ ನಿನ್ನ ಕಿವಿ ಮುಚ್ಚಿಕೊಳ್ಳೊ 8 ಪಂಚಭೇದ ಪ್ರಪಂಚವು ನಿಜವೆನ್ನೊ ಮೂಢಾ 9 ಜೀವೇಶಾರೊಂದೆಂಬೊ ಹೊಲಿಯಾ ಪರಿಭಾವಿಸೂ ದ್ವಾಸುಪರ್ಣವೆಂಬೊ ಶ್ರುತಿಯಾಕಾವನಯ್ಯನೆ ಜಗದೊಡೆಯಾ ನಮ್ಮಜೀವಾತ್ಮ ಭೃತ್ಯನೊ ಖರಿಯಾ 10 ಅದ್ವೈತರೊಡನಾಟ ಬ್ಯಾಡ ನಮ್ಮಮಧ್ವಮತದ ಪದ್ಧತಿ ಬಿಡಬ್ಯಾಡಾಖದ್ಯೋತಸುತಗಂಜಬ್ಯಾಡಾ ನೀನುಪೊಂದು ಐಹೊಳಿಯ ವೆಂಕಟನಂಘ್ರಿಗಾಢಾ 11
--------------
ಐಹೊಳೆ ವೆಂಕಟೇಶ
ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ಪ ನೀಲಮೇಘಶ್ಯಾಮ ಬೇಲಾಪುರಾಧೀಶ ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ ಪರಮಪದನಾಥ ಇಂದಿರೆಯರಸ ಸಕಲ ನಿ ರ್ಜರರು ಪೂಜಿಸುವಂಘ್ರಿಯಾ [ವರ]ನೇಮದಿಂ ಪಾಡೀ ಆಡೀ ದುರಿತಭವ ಶರಧಿಯಾ ಪಿರಿದು ದಾಟುವೆನೆಂದು ಭರದೊಳೈದಿದವಗಾ ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1 ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು ದಿಂದು ಊನನಲ್ಲಾ ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ ನಂದವಳಿದುಬ್ಬಸದೊಳು ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ ವೃಂದಗಳು ನಿಂದಿರುವವೆ ಸ್ವಾಮಿ 2 ಮನುಜ ಮಾಡಿದ ಪಾತಕಗಳನು ಎಣಿಸುವಡೆ ಘಣಿರಾಜಗಳವಡುವುದೇ ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ ರಣಜನರೊಳೇಂಪುರುಳಿರುವುದೇ ಚಿನುಮಯನೆ ಭಕ್ತವತ್ಸಲನೆ ಅಚ್ಚುತz ಸನವಗುಣಗಳನೀ ಮರೆದು ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ ಧನ್ಯನೆಲೊ ವೈಕುಂಠರಮಣಾ 3
--------------
ಬೇಲೂರು ವೈಕುಂಠದಾಸರು
ಪಾಲಿಸೆನ್ನನು ಪಾಹಿ ಪಾರ್ವತೀಶ ಈಶ ಕಾಲಕರ್ಮವಿದೂರಪಾಪನಾಶ ಪ ಪರಮ ಪುರುಷ ಪರೇಶ ಪರಮಾತ್ಮ ಪರಿಪೂರ್ಣ ವರ ಪರಂಜ್ಯೋತಿ ರೂಪಾತ್ಮನೇ ಕರಿ ಚರ್ಮಧರ ಭಸ್ಮ ಭೂಷಣ ದಿಗಂಬರನೇ ಶರಣು ಜನಸುರಧೇನು ನಿಸ್ಸಂಗನೇ 1 ಉಮೆಯರಸ ಪಂಚವದನ ನಿರ್ಮಲನೆ ವಿಮಲತರ ಗಂಗಾಜೂಟಧರನೇ ಅಮಿತಬಲ ವೃಷಭವಾಹನನೆ ಶಾಶ್ವತನೆ ಕಮಲ ಪಿತ ಸುತ ಹರನೇ ಶಿವರೂಪನೇ 2 ವರವ್ಯಾಘ್ರ ಚರ್ಮಧರ ಇಂದುಶೇಖರ ಹರನೆ ಕರದಿ ಡಮರುಗಧರನೇ ಶೂಲ ಪಾಣಿ ಮೆರೆವ ನಾಗಾಭರಣ ಗಿರಿಜೆವರ ಯೋಗೀಶ ಮೂರ್ತಿ ಶ್ರೀ ಶಂಭು ಶಂಕರನೆ 3
--------------
ಕವಿ ಪರಮದೇವದಾಸರು
ಪಾಲಿಸೊ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ಮೋಹನ್ನಾ -ಆಹಾ ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಪ ಬಂದೆನೊ ನಿನ್ನ ಹಂಬಲಿಸಿ ನಾನು ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ ಮುಂದಣ ನೆಲೆಗಾಣೆ ಗುಣಿಸಿ ಏನೇ ನೆಂದು ಪೇಳಲೊ ವಿಸ್ತರಿಸಿ -ಆಹಾ ಮಂದರಧರ ನಿನ್ನ ಮಂದಿರದ ದಾಸಿ ಕಂದನು ನಾನೆಲೊ ಕಣ್ತೆರೆದು ನೋಡೊ 1 ಪೊಂದಿದೆ ಭಾರವವೊಹಿಸು ಪ್ರತಿ ಬಂಧಕವ ಪರಿಹರಿಸು ನಿನ ಗೊಂದಿಸುವೆ ಕೊಡು ಲೇಸು ಅತ್ಯಾ ನಂದದಲ್ಲಿ ಚಿತ್ತವಿಡಿಸು -ಆಹಾ ಇಂದಿರಾ ಮಂದಿರಾ ಸುಂದರ ಯೋಜನ ಗಂಧಿಯ ಬಸುರಿಲಿ ಬಂದ ಭವದೂರಾ 2 ನಿಂದ್ಯ ಕರ್ಮವು ಮಾಡಿದವನ ದೂತ ರಿಂದ ತರಿಸಿದೆ ತ್ರಿಭುವನಾ ಜಯ ವೆಂದು ಕೊಂಡಾಡಲು ಜವನಾ ಭೀತಿ ಯಿಂದ ಮಾಡಿದ ನಿನ್ನ ಸ್ತವನಾ -ಆಹ ಒಂದಾನಂತವಾಗಿ ದ್ವಂದ್ವಪಾಪಗಳಿಗೆ ನಿಂದಿರಬಲ್ಲವೆ ಸಂದರುಶನವಾಗೆ 3 ಕಂದುಕ ಪುಟಿ ಸೂತ ಬಳುಕಿ ದೈತ್ಯ ವೃಂದ ಮೋಹಕವಾಗಿ ಸಿಲುಕಿ ಸುರ ಸಂದೋಹಕೆ ನೀನೆ ಘಳಿಕಿ ನಿಜ ವೆಂದು ಮಾನವರಿಗೆ ಬಳಿಕಿ -ಆಹಾ ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ 4 ಹಂದಿ ನಾಯಿ ನರಿ ರಾಸಾ ಜನ್ಮ ಬಂದರೆ ಎನಗದು ಹರುಷಾ ಬಹು ಮುಂದುಂಟು ರಹಸ್ಯಾ ಮನಸಾಪೇಕ್ಷಾ ಸಂದೇಹ ಮಾಡಿಸೊ ಶ್ರೀಶಾ -ಆಹಾ ಯೋನಿ ಸಂದೀದ ಕಾಲಕ್ಕು ಒಂದು ವಿಂಶತಿ ಮತ ಹೊಂದಿಸದಿರು ಹರಿ5 ಅಂಧಃಕಾರದೊಳೆನ್ನ ತಂದೆ ಇದ ರಿಂದ ನಿನಗೇನೊ ಮುಂದೆ ಲಾಭ ಬಂದಾದರೂ ಇಲ್ಲಾ ಇಂದೆ ಸುಖ ಸಾಂದ್ರ ಕಡಿಮೆನೊ ಮುಂದೆ -ಆಹಾ 6 ಇಂದಿರಾವರ ರಾಮ ಶಾಮಾ ರಾಮ ಚಂದ್ರ ಚತುರ ಸಾರ್ವಭೌಮಾ ದಿವ್ಯ ಸಿರಿ ಉರಪ್ರೇಮಾ ಮುಚ ಕುಂದ ಪಾಲಕ ನಿಸ್ಸೀಮಾ -ಆಹಾ ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ 7 ದುಂದುಭಿ ಭೇರಿಯ ರಭಸಾ ಮಹಾ ಬಂಧುರಾ ನೆರೆದ ವಿಶೇಷಾ ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ ಕುಂದಗೊಡದೆ ಬೊಮ್ಮನಂದದಿ ಪಥತೋರಿ8 ಹಿಂದಣ ಬಲವನ್ನು ಕಾಣೆ ನಾನು ಅಂದು ನುಡಿದದ್ದು ಮಾಣೆ ಅನು ಬಂಧಗಳಿಗೆ ಕಾಮಧೇನೆ ಸತ್ಯ ಪತಿ ನೀನೆ -ಆಹಾ ನಂದನ ಮನೋಹಂಸಾ 9 ಸಂದಣೆ ತೊಲಗದೆಂಬಿಯಾ ಆಹಾ ಬಂದರೆ ಬರಲಿ ಎಂಬಿಯಾ ಇದೇ ಸಂದಲಿ ಅನುಗಾಲ ನ್ಯಾಯಾ ಅನು ಸಂಧಾನ ನಿನ್ನಲಿ ಪ್ರೀಯಾ -ಆಹಾ ಇಂಧನದೊಳು ವಾಯು ವ್ಯಾಪಿಸಿದದ ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ 10 ಕಂದರ್ಪ ಕೋಟಿ ಲಾವಣ್ಯ ಅರ ವಿಂದ ನಯನ ಗುಣ ಗಣ್ಯ ದೀನ ಮಂದಾರ ಸತತ ತಾರುಣ್ಯ ಸರಿ ಬಂದಂತೆ ಮಾಡೊ ಕಾರುಣ್ಯ -ಆಹಾ ವಂದೆದೈವವು ನಾನೆಂದ ಮುರಾರಿಯ ಕೊಂದು ಬಿಸುಟಾಧೀರ ನಂದಕುಮಾರಕ11 ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ ಕುಂದಣ ಪುಟದಂತೆ ವರಣಾ ಕಂಬು ಕಂಧರ ಪೊಳಿಯಲಿ ವಚನಾ -ಆಹಾ ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ ವೊಂದಿಬರಲಿ ಮುಕುಂದಾ ಮುದ್ದುರಂಗಾ12 ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ ಯೆಂದು ಕುಣಿಯೊ ಎನ್ನ ಧೊರಿಯೆ ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ ವೃಂದಾರಕ ಪುಷ್ಪಗರಿಯೆ -ಆಹಾ ಇಂದಿನ ಉತ್ಸಾಹ ಇಂದ್ರಾದ್ಯರು ಪೂತು ರೆಂದು ಪೊಗಳೆ ನಗೆಯಿಂದ ನೋಡುವದೆ 13 ಮಧ್ವರಮಣ ಪಾಪಿ ಭಕ್ತಿ ಜ್ಞಾನ ಸದ್ಧರ್ಮ ವೈರಾಗ್ಯಯುಕ್ತಿ ಕೊಡು ಭುಕ್ತಿ ಇತ್ತು ಮುದ್ರಧಾರನಾ ಮಾಡಿ ಮುಕ್ತಿ -ಆಹಾ ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ ಪತಿ 14 ಬಂಧೂರ ಕೀರ್ತಿ ಸಂಪನ್ನಾ ಕರಿ ಬಂಧ ವಿಮೋಚನ್ನ ನಾ ರಂದ ವರದ ಸುಪ್ರಸನ್ನಾ ಶತಾ ನಂದ ಕಾನನವಾಸಾ ಘನ್ನಾ -ಆಹಾ ಸಿಂಧುಜನಕನೆ ಪರಂಧಾಮತ್ರಯ ಸತ್ಯ ಸಂಧ ವಿಜಯವಿಠ್ಠಲೆಂದು ವದನ ಎನ್ನಾ15
--------------
ವಿಜಯದಾಸ