ಒಟ್ಟು 1888 ಕಡೆಗಳಲ್ಲಿ , 110 ದಾಸರು , 1462 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣನೆಂಬ ನಾಮವ ನೇಮದಿ ನೆನೆಯುತಿರೆಚ್ಚರಿಕೆ |ನೀರ ಮೇಲಿನ ಗುಳ್ಳೆ ನಡೆಯೆಂಬ ಡಿಂಭವ ನಂಬದಿರೆಚ್ಚರಿಕೆ ಪ.ಪರರು ಮಾಡಿದ ಪಾತಕವ ನಾಲಿಗೆಯೊಳುಚ್ಚರಿಸದಿರೆಚ್ಚರಿಕೆಗುರು ಹಿರಿಯರ ಸೇವೆ ಮಾಡದೆ ಉದರವ ಪೊರೆಯದಿರೆಚ್ಚರಿಕೆ ||ಹರಿದಿನದುಪವಾಸ ಇರುಳ ಜಾಗರವ ನೀ ಮರೆಯದಿರೆಚ್ಚರಿಕೆನರಹರಿಯಂಘ್ರಿಯ ಸ್ಮರಿಸದೆ ನರಸ್ತುತಿ ತರವಲ್ಲ ಎಚ್ಚರಿಕೆ 1ಹೀನ ಮಾನನಿಯರ ಧ್ಯಾನಕಾನನದೊಳಿಳಿಯದಿರೆಚ್ಚರಿಕೆನಾನೆಂಬ ಅಹಂಕಾರ ಮಾಡಿ ನರಕದೊಳು ನರಳದಿರೆಚ್ಚರಿಕೆ ||ಜಾಹ್ನವಿ ಸ್ನಾನಸಂಧ್ಯಾನ ಧಾನ್ಯವ ಸುಜಾÕನ ಮುಂದೆ ಜ್ಞಾಚ್ಚರಿಕೆಜಾನಕಿರಮಣನ ಧ್ಯಾನವೆ ಧರ್ಮ ಸಂತಾನ ಮುಂದೆಚ್ಚರಿಕೆ 2ಮಡದಿ ಮಕ್ಕಳೆಂಬ ಕಡುಮೋಹಕೆ ಸಿಲುಕಿ ಕೆಡಬೇಡವೆಚ್ಚರಿಕೆನಡೆವಾಗ ನುಡಿವಾಗ ಗಿಡವೆಲ್ಲ ನೆಂಟರು ಕಡೆಗಿಲ್ಲ ಎಚ್ಚರಿಕೆ ||ಕೊಡುಗೈಯ ಮಾಡದೆ ಮಡುಗಿದ ಧನ ಸಂಗಡ ಬಾರದೆಚ್ಚರಿಕೆ |ಒಡೆಯ ಶ್ರೀ ಪುರಂದರವಿಠಲನ ನೆನೆದು ನೀ ಕಡೆ
--------------
ಪುರಂದರದಾಸರು
ನಿಂದಕರಿರಬೇಕಿರಬೇಕುಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೇ ಪ.ಅಂದಂದು ಮಾಡಿದ ಪಾಪವೆಂಬ ಮಲತಿಂದು ಹೋಗುವರಯ್ಯ ನಿಂದಕರುವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮಪೊಂದಿಗ ಪುಣ್ಯವನ್ನೆಯ್ಯುವರಯ್ಯ 1ದುಷ್ಠ ಜನರು ಈ ಸೃಷ್ಟಿಯೊಳಿದ್ದರೆಶಿಷ್ಟ ಜನರಿಗೆಲ್ಲ ಕೀರ್ತಿಗಳೂಇಷ್ಟಪ್ರದ ಶ್ರೀ ಕೃಷ್ಣನೆ ನಿನ್ನೊಳುಇಷ್ಟೇ ವರವನು ಬೇಡುವೆನಯ್ಯ 2ದುರುಳ ಜನಂಗಳು ಚಿರಕಾಲ ಇರುವಂತೆಕರವ ಮುಗಿದುವರ ಬೇಡುವೆನುಪರಿಪರಿ ತಮಾಸಿಗೆ ಗುರಿಯಿಲ್ಲದೆಪರಮದಯಾನಿಧಿ ಪುರಂದರವಿಠಲ3
--------------
ಪುರಂದರದಾಸರು
ನಿನ್ನ ಧ್ಯಾನ ಶುಭಮೂಹೂರ್ತ ನಿನ್ನ ಭಜನ ಶುಭದಿನವು ಪನಿನ್ನ ನಾಮ ಜಯಕಾರವು ನಿನ್ನ ಸ್ಮರಣ ಶುಭತಿಥಿಯುನಿನ್ನ ಸ್ತುತಿಯೆ ಶುಭಕಾಲ ಅನ್ಯ ಎಲ್ಲಪುಸಿಮಾಧವದೇವಅಪನಿತ್ಯನಿರುಪಮ ನಿನ್ನ ನಿತ್ಯದಲ್ಲಿ ಪೊಗಳುವುದೆಉತ್ತಮ ಶುಭವಾರವುಚಿತ್ತಜಪಿತ ನಿನ್ನ ಚಿತ್ತದಲಿ ನೆನೆಯುವುದೆಅತ್ಯಧಿಕ ಪಕ್ಷಮಾಸವುಮೃತ್ಯುದೂರನೆ ನಿನ್ನ ಸತ್ಕಥೆಯನಾಲಿಪುದೆ ನಕ್ಷತ್ರ ಶುಭಕರಣವುಭಕ್ತವತ್ಸಲ ನಿನ್ನ ಭಕ್ತಿಯಿಂ ಪಾಡುವುದೆನಿತ್ಯಅಮೃತಯೋಗವು ನಿಜವು1ದಿವನಿಶೆಯ ಇಡದೊಂದೆಸವನೆ ನಿನ್ನರಸುವುದೆರವಿಚಂದ್ರ ಭೌಮ್ಯ ಒಲವುಭವಪರಿಹರ ಸಿರಿಧವ ನಿನ್ನ ಸಚ್ಚರಿತಕವಿಗುರುಸೌಮ್ಯ ಬಲವುಬುವಿಯರಸ ನಿನ್ನಸಮ ಸುವಿಲಾಸ ಲೀಲೆ ಕೇಳಾವುದಮಿತ ಶನಿಬಲವುಭುವಿಜಪತಿ ಭಕ್ತಿಯ ಭವಭವದಿ ರಾಹುಕೇತುನವಗ್ರಹಂಗಳ ಬಲವು ಗೆಲವು 2ಕರಿಧ್ರುವರ ಪೊರೆದ ತವಪರಮ ಬಿರುದುಗಳನ್ನುಸ್ಮರಿಸುವುದೆ ಭವದೂರವುಹರದಿಗಕ್ಷಯವಿತ್ತ ವರದ ನಿನ್ನಡಿ ದೃಢವುಸ್ಥಿರಶಾಂತಿ ಸುಖಸಾರವುಸುರಗಣಕೆ ಸೌಖ್ಯವನು ಕರುಣಿಸಿದ ನಿಮ್ಮ ಮೊರೆಪರಲೋಕ ನಿಜಸ್ವಾದವುವರದ ಶ್ರೀರಾಮ ನಿಮ್ಮ ಚರಣದಾಸತ್ವದೆವರಮುಕ್ತಿ ಕೈಸಾಧ್ಯವು ಸ್ಥಿರವು 3
--------------
ರಾಮದಾಸರು
ನಿನ್ನ ಮಹಿಮೆಯನಾರು ಬಲ್ಲರುಚಿನ್ಮಯಾತ್ಮಕನಂತರೂಪನೆಮುನ್ನೆ ಕಮಲಜ ನಿನ್ನ ನಾಭಿಯೊಳುನ್ನತೋನ್ನತದಿಘನ್ನ ತಪವಂಗೈದು ಕಾಣನುಇನ್ನು ಶ್ರುತಿಸ್ಮøತಿ ಅರಸಿ ಅರಿಯವುಪನ್ನಗೇಂದ್ರನು ಪೊಗಳಲರಿಯ ಪ್ರಸನ್ವೆಂಕಟನೆ 1ಹರಿಯೆ ತ್ರಿದಶರ ದೊರೆಯೆ ಭಕುತರಸಿರಿಯೆ ದಿತಿಜರರಿಯೆಅನವರತಮರೆಯದಿಹ ಅಜಹರಯತೀಶ್ವರರರಿಯರಿನ್ನುಳಿದಇರವು ಮನುಜ ನಾನರಿಯಲಾಪೆನೆಪೊರೆಯೊ ಬಿಡದೆ ಪ್ರಸನ್ವೆಂಕಟಗಿರಿಯರಸ ಜಗದೆರೆಯ ಸುರವರವರಿಯ ಮಾಸಹನೆ 2ನಾಗರಿಪುಗಮನಾಗಭೃತಶುಭನಾಗಪಾಕ್ಷಘನಾಗಮನಿಗಮನಾಗಪತಿ ವದನೈಕಸ್ತುತ ಸುಗುಣ ಗುಣಾರ್ಣವನೆನಾಗಹರಸಖ ನಾಗಘನಮಣಿನಾಗಗ್ರಸಿತಭಾ ನಾಗದ್ವಿಟಮುಖನಾಗಧರನುತ ನಾಗಮದಹ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ನಿನ್ನನಾಶ್ರಯಿಸುವೆ - ನಿಗಮಗೋಚರನಿತ್ಯಬೆನ್ನ ಬಿಡದಲೆ ಕಾಯೊ ಮನದಿಷ್ಟವೀಯೋ ಪಕುಂದಣದ ಆಶ್ರಯವು ನವರತ್ನಗಳಿಗೆಲ್ಲಚಂದಿರನ ಆಶ್ರಯ ಚಕೋರಗಳಿಗೆ ||ಕಂದರ್ಪನಾಶ್ರಯ ವಸಂತ ಕಾಲಕ್ಕೆ ಗೋವಿಂದ ನಿನ್ನಾಶ್ರಯವು ಮರಣಕಾಲದೊಳು 1ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವುಪುಣ್ಯನದಿಗಳು ಋಷಿಗಳಿಂಗೆ ಆಶ್ರಯವು ||ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವುಎನ್ನಿಷ್ಟ ಪಡೆಯುವರೆ ನಿನ್ನ ಆಶ್ರಯವು 2ಪತಿವ್ರತಾವನಿತೆಗೆ ಪತಿಯೊಂದೆ ಆಶ್ರಯವುಯತಿಗಳಿಗನುಶ್ರುತದಿ ಪ್ರಣವದಾಶ್ರಯವು ||ಮತಿವಂತನಿಗೆಹರಿಸ್ತುತಿಗಳೇ ಆಶ್ರಯವುಹಿತವಹುದು ಪುರಂದರವಿಠಲನಾಶ್ರಯವು 3
--------------
ಪುರಂದರದಾಸರು
ನಿರ್ವೈಷಮ್ಯ ಯಾಚನೆ ಸ್ತೋತ್ರ(ತ್ರಿವಿಕ್ರಮ ದೇವರ ಸ್ತೋತ್ರ)17ವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖ ವಂದ್ಯ ಕರಣ ಸೌಭಾಗ್ಯದನೆಬ್ರಹ್ಮಾಂಡ ಬಹಿರಂತ ವ್ರ್ಯಾಪ್ತ ಸರ್ವೇಶ ಪವಾಮನನು ವಿಶ್ವರೂಪ ಪ್ರಕಟಿಸಿ ದಾನ ವಸ್ತುಭೂಮಿ ದಿವಿಯ ಈರಡಿಯಲಿ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳ್ದ ಮಾಯಾಜಾಲವು ಅಲ್ಲವಿಷಮ ವಂಚನ ದೋಷಕಿಂಚಿತ್ತು ಇಲ್ಲ 1ಪ್ರಥಮವಾಗಿ ಶ್ರೀ ವಿಷ್ಣುರೂಪ ಒಂದೊಂದಲ್ಲೂಅನಂತರೂಪ ಬಲ ಸುಖಜ್ಞÕನಾದಿ ಪೂರ್ಣವಾಗಿಶಶ್ವಧೇಶ ಪ್ರಕಾರ ಇಹುದೆಂದು ಶಾಸ್ತ್ರ ಸಾರುತಿದೆಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವಇಚ್ಛೆಯಿಂ ಆಗಾಗ2ಅಣೋರಣೀಯಾನ್ ಮಹಿತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೆ ವ್ಯಕ್ತ ಮಾಡಿದನು ವಿಷ್ಣು ವ್ಯಾಪನ ಶೀಲಗುಣರೂಪಅಭಿನ್ನ ಅವ್ಯಯನು3ಮತ್ತು ಬಲಿರಾಜನಿಗೆ ಶುಕ್ರಾಚಾರ್ಯರುಮೊದಲೇವೆ ಹೇಳಿಹರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿಪರ್ವದ ಎರಡು ಪಾದದಿಂ ಅಳೆವನೆಂದು4ಈ ರೀತಿ ಬಲಿರಾಜ ದಾನ ಕೊಡುವ ಪೂರ್ವದಲೆಹರಿವ್ಯಾಪನ ಶೀಲ ಅವ್ಯಯನೆ ವಾಮನ ಎಂದುಅರಿತೇವೆ ಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರಿ ವಿಷಮ ವಂಚನೆಗೆ ಸಿಲುಕಿ ಅಲ್ಲ 5ಮೋಸಕ್ಕೆ ಓಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಶ್ರೀ ಶಾರ್ಪಣ ಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿಹರು ದೇವಗಾಯಕರು 6ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿ ನಾನೇನ ಕೃತಂ ಸುದುಷ್ಕರಂವಿದ್ವಾದದಾದ್ ಯದ್‍ರಿಪವೇ ಜಗತ್ರಯಂಏಕೋನವಿಂ ಶದ ಧ್ಯಾಯ ಶ್ಲೋಕ ಇಪ್ಪತ್ತು 7ಬಲಿರಾಜನೂ ರಾಣಿ ವಿಂದ್ಯಾವಳಿಯೂಅಲ್ಲಿ ಬಂದ ಪ್ರಹ್ಲಾದ ಮಹಾರಾಜನೂಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾನುಗ್ರಹ ಮಾಡ್ಡನೆಂದು ತಿಳಿದಿಹರು 8ಮಧ್ವಸ್ತ ಸರ್ವಸ್ಥ ಮಸ್ತ ವಿಧಿತಾತಜ್ಯೊತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುತ ಪ್ರಸನ್ನಶ್ರೀನಿವಾಸಮುದಜ್ಞಾನ ಧನ ಆಯುರ್ ಭಾಗ್ಯದನೆ ಶರಣು 9|| ಶ್ರೀ ಮಧ್ವೆಶಾರ್ಪಣಮಸ್ತುಃ ||
--------------
ಪ್ರಸನ್ನ ಶ್ರೀನಿವಾಸದಾಸರು
ನೀನಾರವ ಪೇಳೆನ್ನ ಕಣ್ಣ ಮುಚ್ಚುವೆ |ಮೌನಗೊಂಡರಿಯದಂತಿಪ್ಪ ಮಗುವೆ ಪಅತಿ ಚೆಲುವಿಗೆ ರತಿಪತಿಪಿತನೊ-ನೀ |ಶ್ರುತಿಸಕಲಾನ್ವುಯ ಸನ್ನುತನೊ ||ಚತುರ್ದಶ ಭುವನವನಾಳಿದನೋ-ನೀ |ಶತತಪ್ಪುಗಳನೆಣಿಸಿದವನೊ?1ವರಗೋಕುಲಕೊಪ್ಪವ ದೊರೆಯೊ-ನೀ |ಕರಿವೈರಿಯ ಮದಪರಿಹಾರಿಯೊ ||ಗಿರಿಯನುದ್ಧರಿಸಿದ ನಖರುಚಿಯೊ-ನೀ |ಮುರದೈತ್ಯನ ಮಡುಹಿದ ಸಿರಿಯೊ? 2ಮಂಗಳ ಶೋಭನ ಮಣಿಖಣಿಯೊ-ನೀ |ಹಿಂಗದೆ ಸ್ತುತಿಪರ ಗತಿದಾನಿಯೊ-ಗೋ-||ಪಾಂಗನೆಯರ ಪ್ರಾಣದ ಧನಿಯೊ-ನೀ |ಸಿಂಗರ ಸೊಬಗಿನ ಶ್ರೀಪತಿಯೊ 3ಆಪತ್ತಿಗೆ ನೆನೆವರ ಗೋಚರನೊ-ನೀ |ಪಾಪಸಂಹಾರ ಪುರುಷೋತ್ತಮನೊ ||ಚಾಪದಿಂದಸುರರ ಗೆಲಿದವನೊ-ಸಾಂ-|ದೀಪನ ಮಗನ ತಂದಿತ್ತವನೊ? 4ಬೆಸಗೊಂಡಳುಗೋಪಿನಸುನಗುತ-ಆಗ |ಯಶೋದೆಗೆ ಚತುರ್ಭುಜ ತೋರಿಸುತ ||ಅಸುರಾರಿಯ ಕಂಡು ಮುದ್ದಿಸುತ ನೀ ||ಶಿಶುವಲ್ಲ ಪುರಂದರವಿಠಲೆನುತ 5
--------------
ಪುರಂದರದಾಸರು
ನೀನೆ ದಯಾಸಂಪನ್ನನೊ - ಕಾವೇರಿ ರಂಗನೀನೆ ಬ್ರಹ್ಮಾದಿವಂದ್ಯನೊ ಪಬಂಧುಗಳೆಲ್ಲರ ಮುಂದಾ ದ್ರುಪದನನಂದನೆಯೆಳತಂದು ಸೀರೆಯ ಸೆಳೆಯಲು ||ನೊಂದು ಕೃಷ್ಣ ಸಲಹೆಂದರೆಅಕ್ಷಯಕುಂದದಲಿತ್ತ ಮುಕುಂದನು ನೀನೇ 1ನಿಂದಿತ ಕರ್ಮಗಳೊಂದು ಬಿಡದೆ ಬೇ-ಕೆಂದು ಮಾಡಿದನಂದಜಮಿಳನು ||ಕಂದಗೆ ನಾರಗನೆಂದರೆ ಮುಕುತಿಯಕುಂದದಲಿತ್ತ ಮುಕುಂದನು ನೀನೇ 2ಮತ್ತಗಜವನೆಗಳೊತ್ತಿ ಪಿಡಿಯೆ ಬಲುಒತ್ತಿ ರಭಸದಿ ಬಿತ್ತರಿಸಲುಗುಣ||ಭೃತ್ಯವರದ ಶ್ರೀ ಪುರಂದರವಿಠಲಹಸ್ತಿಗೊಲಿದ ಪರವಸ್ತುವು ನೀನೇ 3
--------------
ಪುರಂದರದಾಸರು
ನೀನೇ ದಯಾಳು ನಿರ್ಮಲಚಿತ್ತ ಗೋವಿಂದನಿಗಮಗೋಚರ ಮುಕುಂದಪಜ್ಞಾನಿಗಳರಸು ನೀನಲ್ಲದೆ ಜಗಕಿನ್ನುಮಾನದಿಂದಲಿಕಾವದೊರೆಗಳ ನಾ ಕಾಣೆಅ.ಪಬಗೆಬಗೆಯಲಿ ನಿನ್ನ ಸ್ತುತಿಪೆನೊನಗಧರಖಗಪತಿವಾಹನನೆ ||ಮಗುವಿನ ಮಾತೆಂದು ನಗುತ ಕೇಳುತ ನೀನುಬೇಗದಿಂದಲಿ ಕಾಯೋ ಸಾಗರಶಯನನೆ 1ದಾನವಾಂತಕ ದೀನ ಜನ ಮಂದಾರನೆಧ್ಯಾನಿಪರ ಮನದೊಳು ಸಂಚರನೆ ||ಮೌನನಾದೆನು ನಿನ್ನ ಧ್ಯಾನಾನಂದದಿ ಈಗಸಾನುರಾಗದಿ ಕಾಯೊ ಸನಕಾದಿ ವಂದ್ಯನೆ 2ಮಂದರೋದ್ಧರ ಅರವಿಂದ ಲೋಚನ ನಿನ್ನ ||ಕಂದನೆಂದೆನಿಸೂ ಎನ್ನ ||ಸಂದೇಹವೇತಕೆ ಸ್ವಾಮಿ ಮುಕುಂದನೆಬಂದೆನ್ನ ಕಾಯೊ ಶ್ರೀಪುರಂದರವಿಠಲನೆ3
--------------
ಪುರಂದರದಾಸರು
ನೋಡಿದೆ ಮನದಣಿಯೆ ಶ್ರೀನಿವಾಸನನೋಡಿದೆ ಮನದಣಿಯೆ ಪ.ನೋಡಿದೆನು ಶೇಷಾದ್ರಿಯಿಂದೊಡ-ಗೂಡಿ ಭಕ್ತರ ಬೀಡಿನೊಳು ನಲಿದಾಡಿ ಮೆರೆವ ಸಗಾಢ ದೈತ್ಯವಿಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.ಶರಣರಪೇಕ್ಷೆಯನು ಕೊಟ್ಟುಳುಹಲುಕರುಣಾಳು ನಿಜದಿ ತಾನುಸ್ಥಿರತೆಯೊಳು ಸ್ವಪ್ನದಲಿ ತಾ ಗೋಚರಿಸಿ ಭರವಸೆಯಿತ್ತು ವೆಂಕಟಗಿರಿಯವೋಲ್ ಸಾನ್ನಿಧ್ಯ ವದನಾಂ-ಬುರುಹದಲಿ ಮೆರೆದಿಹನ ಚರಣವ 1ಲಲನೆಲಕ್ಷ್ಮಿಯು ಬಲದಿ ಶೋಭಿಪ ವಾಮದೊಳಗೆ ಗಣಪ ಮುದದಿಒಲವಿನಿಂ ಗರುಡಾಂಕ ಮೃದುಪದನಳಿನದಾಶ್ರಯದಿಂದ ವಾಯುಜಬಳಗ ಚಾತುರ್ದೇವತೆಯರಿಂ-ದೊಳಗೆ ಪೂಜೆಯಗೊಂಬ ದೇವನ 2ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-ಕೊಂಡು ಪಟ್ಟಣಕೆ ಬಹಕೆಂಡದಂದದೊಳುರಿವ ಶತಮಾ-ರ್ತಾಂಡದೀಪ್ತಾ ಮುಖಂಡ ಭೃತ್ಯನಕೊಂಡುಯಿದಿರಲಿ ಮಂಡಿಸಿದನಖಿಳಾಂಡಕೋಟಿ ಬ್ರಹ್ಮಾಂಡನಾಥನ 3ನೀಲಮೇಘಶ್ಯಾಮಲ ಕೌಸ್ತುಭವನಮಾಲಕಂಧರಶೋಭನನೀಲಮಾಣಿಕವಜ್ರಮುತ್ತಿಸಾಲ ಸರ ಪೂಮಾಲೆಗಳ ಸುಖಲೀಲೆಯಿಂದೊಪ್ಪಿರುವ ಭಕ್ತರಕೇಳಿಯಲಿ ನಲಿದಾಡುತಿಹನನು 4ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-ಕ್ಷ್ಮೀನಾರಾಯಣ ಹರಿಯಕಾಣಿಕೆಯ ಕಪ್ಪಗಳ ತರಿಸುತಮಾನಿಸುತ ಭಕ್ತಾಭಿಮತವನುತಾನೆ ಪಾಲಿಸಿ ಮೆರೆವ ಕಾರ್ಕಳಶ್ರೀನಿವಾಸ ಮಹಾನುಭಾವನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಂಚಮಿಯ ದಿನರಂಭೆs :ಏನಿದು ಇಂದಿನವಿಭವನಮ್ಮಶ್ರೀನಿವಾಸನ ಮಹಾತ್ಮವಮಾನಿನಿರನ್ನೆ ನೀ ಪೇಳೆ ಭಕ್ತಾ-ಧೀನದ ಚರಣದ ಲೀಲೆಭಾನುಉದಯದಲಿ ವೀಣಾದಿ ಸು-ಗಾನ ವಾದ್ಯ ನಾನಾವಿಧ ರಭಸದಿ 1ಎತ್ತಲು ನೋಡಿದಡತ್ತ ಜನ-ಮೊತ್ತವಿಲಾಸವಿದೆತ್ತಚಿತ್ತದಿ ನಲಿನಲಿದಾಡಿ ತೋಷ-ವೆತ್ತಿರುವನು ಒಟ್ಟುಗೂಡಿಸುತ್ತುಮುತ್ತು ಒತ್ತೊತ್ತಿಲಿಹರು ವಿ-ಪ್ರೋತ್ತಮ ಶ್ರೀಹರಿಭಕ್ತರ ಮಯವಿದು 2ಚಾಮರ ಛತ್ರ ಸಿಗುರಿಯು ಜನ-ಸ್ತೋಮಪತಾಕೆ ತೋರಣವುಹೇಮದ ಕಂಚುಕಿ ಈಟಿ ಗುಣ-ಧಾಮನ ಬಿರುದುಗಳ್ ಕೋಟಿಆ ಮಹಾಭೇರಿ ಪಟಹ ನಿಸ್ಸಾಳಕಸಾಮಗಾನ ಸಾಮ್ರಾಜ್ಯವೋಲಿಹುದು 3ಬಾಲರು ವೃದ್ಧ ಯೌವನರು\ಜನ-ಜಾಲವೆಲ್ಲರು ಕೂಡಿಹರುಲೋಲಸ್ರೀಮುಂದ್ರಾಂಕಿತದಿ ಬಹು ವಿ-ಶಾಲ ದ್ವಾದಶನಾಮ ಮುದದಿಆಲಯದೊಳಗಿಹ ಬಾಲಕಿಯರು ಸಹಸಾಲಂಕೃತ ಸಮ್ಮೇಳದಿ ನಲಿವರು 4ಒಂದು ಭಾಗದಿ ವೇದಘೋಷ ಮ-ತ್ತೊಂದು ಭಾಗದಿ ಜನಘೋಷಇಂದಿನ ದಿನದತಿಚೋದ್ಯ ಏ-ನೆಂದು ವರ್ಣಿಸುವದಸಾಧ್ಯಚಂದಿರಮುಖಿ ಯಾರೆಂದೆನಗುಸುರೆಲೆಮಂದರಧರಗೋವಿಂದನ ಮಹಿಮೆಯ5ಪೇಳಲೇನದಾ ಮೂರ್ಲೋಕದೊಳಗೀ ವಿ-ಶಾಲವ ನಾ ಕಾಣೆ ಪ.ಸೋಜಿಗಸೌಭಾಗ್ಯ ಸಂಪದಕಿದು ಬೀಜ ಕಾಣೆಲೆರಾಜೀವನಾಭನ ಪೂಜಾವಿನೋದದಿರಾಜವದನೆ ವನಭೋಜನದಿಂದಿನ 1ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು 2ಇಂದಿನ ದಿನದಂದವನೂತನವೆಂದು ನೀ ಪೇಳುವಿಚಂದಿರ ಮುಖಿ ಜನಸಂದಣಿಗಳು ಮಹಾಮಂದಿ ಓಲೈಸುವರಿಂದು ಮುಕುಂದನ 3ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆ ಪ.ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆಕಾಣುವ ಯೋಗಭೋಗ 1ಎನಗತಿ ಮನವು ನಿನಗತಿ ಛಲವುಜನುಮಾಂತರ ಪುಣ್ಯವೈಸೆ ನೀ 2ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾ ಪ.ಅನವರತದಿಂದ ಬರುವ ಪುರುಷನಲ್ಲಮೀನಕೇತನ ಶತರೂಪ ಕಾಣೆ 1ನೂತನ ಪುರುಷನಿವನ್ಯಾರೆಂದರಿಯೆನಮ್ಮಾಶಾತಕುಂಭದ ಮಂಟಪವೇರಿ ಬರುವನಮ್ಮಾ 2ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾತರತರ ರತ್ನವರದ ಬಾಯೊಳಿರುವದಮ್ಮಾ 3ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾಪರಮಪುರುಷನಂತೆ ತೋರುವನು ಅಮ್ಮಾ4ಬಾಲಾರ್ಕನಂತೆ ಮುಖ ಪ್ರಜ್ವಲಿಪುದುನೀಲಮಾಣಿಕ್ಯ ಕಾಂತಿಯ ಸೋಲಿಪುದು 5ಮೂರ್ಲೋಕದೊಳಗೆ ಸರಿಯುಪಮೆತೋರಲರಿಯೆಕಾಲಿಗೆರಗುವೆನು ಪೇಳಬೇಕು ಸಖಿಯೆ 6ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾಬೆರಳೊಳು ವಜ್ರದುಂಗುರವನಿಟ್ಟವನಮ್ಮಾ 7ವರರತ್ನಖಚಿತದಾಭರಣದಿಂದ ಮೆರೆವಚರಣಸರೋಜದೊಳು ರೇಖೆಯಿಂ ಶೋಭಿಸುವ8ವಲ್ಲಭೆಯರ ಸಹಿತುಲ್ಲಾಸದಿ ಬರುವಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ 9ಬಲ್ಲಿದಪುರುಷನಿವನೆಲ್ಲಿಂದ ಬಂದಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ 10ಊರ್ವಶಿ :ನೋಡುನಿತ್ಯಾನಂದಕರನಮೂಡಗಿರಿಯಿಂದೋಡಿ ಬಂದನ ನೋಡೆ ಪ.ಛಪ್ಪನ್ನೈವತ್ತಾರು ದೇಶಕಪ್ಪಕಾಣಿಕೆಗೊಂಬ ತೋಷಸರ್ಪಶೈಲ ರಾಜವಾಸಚಪ್ಪರ ಶ್ರೀ ಶ್ರೀನಿವಾಸ 1ತಿರುಗುತ್ತಿಪ್ಪಾ ತಿರುಮಲೇಶಶರಣ ರಾಮನ ಭಕ್ತಿಪಾಶದುರುಳಿನಲಿ ನಿಂದಿರ್ಪಶ್ರೀಶತರಿಸುವನುಕಾಣಿಕೆವಿಲಾಸ2ಪಟ್ಟದರಸನಾದ ದೇವಸೃಷ್ಟಿಯಾಳುವಜಾನುಭಾವದೃಷ್ಟಿಗೋಚರವಾಗಿ ಕಾಯ್ವಇಷ್ಟವೆಲ್ಲವ ಸಲಿಸಿ ಕೊಡುವ 3ವೃಂದ ನೆರಹಿ ವನಕೆಅಂದಣವೇರಿ ಮುಕುಂದನೊಲವಿನಲಿಕುಂದಣಮಂಟಪವೇರಿ ಮತ್ತೊಬ್ಬನುಸಂದರುಶನವಂ ನೀಡುತ ಯಿಬ್ಬರುಒಂದಾಗುತ್ತಾನಂದವ ಬೀರುತ್ತ 1ಅಕ್ಕ ನೀನೋಡುಬಹುಮಾನದಿಸಿಕ್ಕಿದಿ ಬಿರುದು ಪೊತ್ತಾತೆಕ್ಕೆಪಕ್ಕೆಯ ವಿಲಾಸ ಮನಸಿನೊಳುಉಕ್ಕುವದತಿ ತೋಷಇಕ್ಕೆಲದಲಿ ಬೀಸುವ ಚಾಮರಗಳ ವಕ್ಕಣಿಸುವಸ್ತುತಿಪಾಠಕ ಜನಗಳಮಿಕ್ಕಿ ನೊಡುವ ನೋಟಕೆ ಮನಸಿನೊಳುಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2ಛತ್ರ ಚಾಮರ ತೋರಣ ಪತಾಕೆಪವಿತ್ರ ನಿಶಾನಿಧಾರಣಾಸುತ್ರಾಮಾರ್ಚಿತ ಚರಣಭಕ್ತರನುಪವಿತ್ರಗೈಯುವ ಕಾರಣಮಿತ್ರಮಂಡಳವನು ಮೀರಿ ಪೊಳೆವುತಿಹರತ್ನಖಚಿತ ಮಂಟಪದಲಿ ಮಂಡಿಸಿಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವಕೀರ್ತಿಯ ಧರಿಸಿ ಜಗತ್ರಯಪಾವನ 3ವಾಲಗಶ್ರುತಿಭೇರಿಡಿಂಡಿಮನಿಸ್ಸಾಳ ಪಟಹಭೂರಿತಾಳ ಮೃದಂಗ ರವದಿಂದಜನಜಾಲಕೂಡಿರುವಮೇಳವಿಸುತ್ತನುಕೂಲಿಸಿ ಬಹು ಬಿರುದಾಳಿಗೆ ಸಂಭ್ರಮದೇಳಿಗೆಯಿಂದಲಿಕೋಲು ಪಿಡಿದು ಓಹೋಯೆಂಬಂಥ ವಿ-ಶಾಲ ಭಕ್ತರ ಮೇಲು ಸಂತೋಷದಿ 4ದೇಶದೇಶದ ಜನರು ನಾನಾ ವಿಧಭಾಷೆ ಪ್ರವರ್ತಕರುಆಶಾಪಾಶರು ಪಾತಕಮಾನಸ-ರೀ ಸಮಯದಿ ಶ್ರೀನಿವಾಸನೆ ಎಮ್ಮಯದೋಷಗಳೆಲ್ಲವ ನಾಸಿಸು ಯೆನುತಭಿ-ಲಾಷೆಯ ಜನಗಳ ಪೈಸರದಿಂದಲಿ 5ವೇದಶಾಸ್ತ್ರಪೌರಾಣಪ್ರಜÕರು ತರ್ಕವಾದಿಪಾಠಕ ಜಾಣಸಾಧು ಕುಶಲದಿ ವಿದ್ಯಾಪ್ರವೀಣವಿನೋದ ಸಿದ್ಧ-ಸಾಧ್ಯ ಸಾದರದಿಂದ ಸರಸಕವಿ ವಾಗೀಂ-ದ್ರಾದಿಗೀರ್ವಾಣಸಮುದಾಯದಿಂದ ಕೃ-ಪೋದಯ ತೋರುತ್ತಾದಿಮೂರುತಿ ಜಯ-ನಾದದಿ ಭಕ್ತರಮೋದಪಡಿಸುತ್ತಾ6ರಂಭೆ : ನಾರಿ ಕೇಳೆ ಶ್ರೀರಮಾಧವಸ್ವಾರಿ ಪೊರಟ ಕಾರಣ ಪೇಳೆ 1ಯಾವ ರಾಜ್ಯದಿ ಪ್ರಭುದೇವಸ್ವಾರಿಯಠೀವಿಯ ಕಾಣೆ ಅಂತರ್ಭಾವವೇನೆ 2ಭೂರಿದೇಶವ ಸಂತತಪ .ವೀರವೈಷ್ಣವ ಭಕ್ತರು ಸದ್ಭಕ್ತಿಯಸಾರದಿ ನಿಲಿಸಿದರುಮಾರಜನಕನಿಗೆ ಮನನಿಲ್ಲದೆ ಸಂ-ಚಾರಕೆ ತಾ ಮೈದೋರಲು ಬೇಕೆಂ-ಬೀ ರೀತಿಗೆ ತಾ ಪೂರ್ವಸ್ಥಾನ ವಿ-ಚಾರಕೆ ಬಂದಿಹ ಕಾರಣವೀಗಲೆ 1ರಾಜ ಬಂದನೆ ಅಮ್ಮಾ ಆಶ್ರಿತಸುರ-ಭೂಜಬಂದನೆ ಅಮ್ಮಾಓಜೆಯಿಂದಲಿ ಕಾಣಿಕೆಯನ್ನು ಒಪ್ಪಿಸಿರಾಜಕದಿವ್ಯಾರತಿಯನು ಎತ್ತುತರಾಜೀವನಾಭನೆ ರಕ್ಷಿಸೆನುತ್ತಲಿಸೋಜಿಗಪಟ್ಟೆಲ್ಲಾಜನವಿರ್ದುದು 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನಪಾದಕಂಡು ಪಾವನಾದೆನು ಪಪಾದಕಂಡು ಪಾವನಾದೆನುಮಾಧವನ ಪ್ರಸಾದ ಪಡೆದೆನುಹಾದಿಗಾಣದೆಪರಮದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇದಿನಿಯೊಳು ಜನುಮ ತಾಳಿಭೇದಮತದ ಹಾದಿಬಿಟ್ಟು ಅ.ಪನೀಲಬಣ್ಣದೊಪ್ಪುವ ಸುಂದರ ಶುಭಕಾಯಇಂದಿರೆಲೋಲತ್ರಿಜಗಮೋಹನಾಕಾರ ಕೊರಳಪದಕಮಾಲಕೌಸ್ತುಭಮುಕುಟಮಣಿಹಾರ ರತ್ನದುಂಗುರಕಾಲೊಳ್ಹೊಳೆಯುವ ಗೆಜ್ಜೆಸರಪಳಿಶೀಲವೈಷ್ಣವ ನಾಮ ಪಣೆಯಲಿಕಾಳರಕ್ಕಸಕುಲಸಂಹಾರನಪಾಲಸಾಗರಕನ್ನೆವರನಪಾಲಮೂಲೋಕಸಾರ್ವಭೌಮನಮೇಲು ಭೂವೈಕುಂಠದಲ್ಲಿ 1ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣಪಟ್ಟ ರತ್ನದ ನಡುವಿಗುಡಿದಾರ ವರ್ಣಿಸುವರಾರುಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರಬಿಟ್ಟು ವೈಕುಂಠ ಇಹ್ಯಕೆ ಸಾಗಿಬೆಟ್ಟದ ಮೇಲೆ ವಾಸನಾಗಿಕೊಟ್ಟು ವರಗಳ ಮೂರು ಜಗಕೆಶೆಟ್ಟಿಯಂದದಿ ಕಾಸುಕೊಳ್ಳುವದುಷ್ಟಭ್ರಷ್ಟ ಶಿಷ್ಟರೆಲ್ಲರಇಷ್ಟದಾಯಕದಿಟ್ಟ ದೇವನ 2ಒಂದೆ ಮನದಲಿ ಸಕಲ ಸೇವಕರು ಭಯಭಕುತಿಯಿಂದಬಂದು ಹರಕೆಯ ತಂದು ನೀಡುವರು ತುಂಬರನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರುಹೊಂದಿ ಭಜಿಸುತ ಸಪ್ತಋಷಿಗಣಬಂದು ಇಳಿವರು ಬಿಡದೆಅನುದಿನವಂದ್ಯ ನಿಗಮಾದಿಬಂಧು ಭಜಿಪರಕಂದುಗೊರಳಾದಿ ಬ್ರಹ್ಮಸುರರಿಂಗಂಧಪರಿಮಳಕುಸುಮದ್ರವ್ಯಗಳಿಂದ ಸೇವೆಯ ಗೊಂಬದೇವನ 3ಉದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿಮುದುಕನಾಗಿ ಕಾಂಬ ಮನೋಹರ ಬಹುಮಹಿಮಗಾರಪದುಮವದನ ಮದನನಯ್ಯಪದುಮವತಿಯ ಪ್ರಾಣಪ್ರಿಯಒದಗಿಬಂದ ಭಕುತಜನರನುಸುದಯದಿಂದ ಕರೆದು ಪ್ರಸಾದಮುದದಿ ನೀಡುತ ಕೃಪೆಯದೋರಿಸದಮಲಸಂಪದವನೀವನ 4ತೀರದೀತನ ಲೋಕಶೃಂಗಾರ ಏರಿ ನೋಡಲುಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲುದಾರಿಯಲಿಕೊಳ್ಳಏಳು ವಿಸ್ತಾರ ಪರಮಪರತರತೋರುವ ಮಹ ಗುಡಿಯು ಗೋಪುರದ್ವಾರ ಚಿನ್ನದ ಕಳಸ ಬಂಗಾರಗಾರುಮಾಡದೆ ದಾಸಜನರನುತಾರತಮ್ಯದಿ ಪೊರೆಯಲೋಸುಗುಸೇರಿಧಾರುಣಿ ವೈಕುಂಠವೆನಿಸಿದಧೀರವೆಂಕಟ ಶ್ರೀಶ ರಾಮನ 5
--------------
ರಾಮದಾಸರು
ಪಾಲಿಸು ಪರಮಪಾವನ ಪದ್ಮಾವತೀರಮಣಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.ನೀಲನಿಭಾಂಗನಿಖಿಲಸುರ ಮುನಿಜನಜಾಲಪಾಲಪಾಹಿಪಾರ್ಥಸಾರಥಿ ಅ.ಪ.ಮದನಜನಕ ಮಹಿಮಾಂಬುಧಿ ನಿನ್ನಪದಕಮಲವ ನಾ ಸ್ಮರಿಸದೆ ಎನ್ನಮದಮುಖತನವನು ಒದರುವದೆನ್ನಪದುಮನಾಭ ರಕ್ಷಿಸು ನೀ ಮುನ್ನಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧಉದುಭವಿಸುವುದು ನಿಜವೇ ಭಕ್ತವಾತ್ಸಲ್ಯಇದಕೆ ನೀ ಊನ ತರುವೆ ಸಾಕು ಈ ಮರವೆಒದಗಿಸು ಸರ್ವಮನಸಿನೊಳ್ ಪುದು-ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತಮಧುಸೂದನ ಮಂದರಗಿರಿಧರ ನೀ-ರದ ನಿಭ ನಿರ್ಮಲ ನಿಜರೂಪಗುಣಸದನಾಚ್ಯುತ ರವಿಕುಲದೀಪ ನಿರ-ವಧಿ ಆನಂದ ರಸಾಲಾಪಬುಧಜನೋಪಲಾಲಿತ ಲೀಲಾಯತಉದಧಿಶಾಯಿ ಮಾನದ ಮಧುಸೂದನ 1ನಾಮಸ್ಮರಣೆಯೆ ನರಕೋದ್ಧಾರನೇಮವಿಲ್ಲೆಂಬುದು ನಿನ್ನ ವಿಚಾರಸಾಮಾರ್ಥದ ಗುಣಕೆಲ್ಲನುಸಾರಪಾಮರಮನಕಿದು ಈ ಗುಣಭಾರಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊಸಾಮಗಾನಲೋಲಸುಜನಸ್ತೋಮಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬತಾಮಸಪರಿಹರಿಸಿ ಜ್ಞಾನೋದಯದ ಸದಾನಂದಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆನೀ ಮಾಡುವುದೆಲ್ಲವು ಸಹಜಗುಣಧಾಮಾಶ್ರಿತ ನಿರ್ಜರಭೂಜಸುಜನಸ್ತೋಮಾರ್ಕಾಮಿತ ವಿಭ್ರಾಜಶ್ರೀಮಚ್ಛೇಷಾಚಲ ಮಂದಿರ ಸು-ತ್ರಾಮಾರ್ಚಿತ ಸದ್ರಾಮ ಶ್ರೀರಾಮ 2ಉಡುವ ಸೀರೆಯ ಸೆಳೆಯಲು ದ್ರುಪಜೆಯಕೊಡಲಿಲ್ಲವೆ ಬಹುವಸನ ಸಂತತಿಯಹಿಡಿಯವಲಕ್ಕಿಗೆ ದ್ವಾರಕ ಪತಿಯಕಡು ಸರಾಗವಾಯ್ತಿಂದಿನ ಪರಿಯಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟಕೊಡು ದಯವಿಟ್ಟು ಮುದದಿ ಕರುಣಾವುದಧಿಕಡುಲೋಭಿತನ ಬಿಡು ಮಹರಾಯಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತಕರ್ಮವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯಒಡೆಯ ಶ್ರೀ ಲಕ್ಷ್ಮೀನಾರಾಯಣನಡುನೀರೊಳು ಕೈಬಿಡುವೆಯ ನೀತೊಡಕೊಂಡ ಬಿರುದೇನಯ್ಯ ಈಕಡು ಕೃಪಣತನ ಸಾಕಯ್ಯಪೊಡವಿಯೊಳಗೆ ಪಡುತಿರುಪತಿಯೆಂಬದೃಢಕಾರ್ಕಳದೊಡೆಯ ಶ್ರೀನಿವಾಸನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸೆನ್ನ ಮಂದಬಾಲಿಶನ್ನಪಾಲಗಡಲೊಡೆಯ ಸಿರಿಲೋಲ ಪ.ಅಂಬುರುಹಸಂಭವ ತ್ರಿಯಂಬಕ ಶೇಷಾಂಬರಗದಂಭೋಳಿಸಂಭೃತನುತಾಂಘ್ರಿ 1ಅಷ್ಟಕೃತ್ಯ ಅಷ್ಟವಿಭವ ಅಷ್ಟ ಭೋಗ್ಯಥೇಷ್ಟ ಶಕ್ತಅಷ್ಟಹರಿತ ಶ್ರೇಷ್ಠವರ್ಯ ಶ್ರೇಷ್ಠ 2ದ್ಯುಗ ಶಶಿಭಾಯುಗನಯನ ಜಗಜಠರಘಹರಾಹಿನಗನಿಲಯ ಜಘನಕಟಿಪಾಣಿ 3ಕಿರೀಟ ಕುಂಡಲರಿದರಕೇಯೂರಕೌಸ್ತುಭಸಿರಿವತ್ಸವರಾಂಬರ ಮನೋಹರ ಮೇಖಲಧಾರಿ 4ದ್ರೌಪದಿ ಮುನಿವಧು ಬಾಲಧ್ರುವ ಪ್ರಹ್ಲಾದ ವಿಭೀಷಣೋದ್ಧವಾಕ್ರೂರ ಮುಖ್ಯವಮಾನಹಾರಿ 5ಋಗ್ಯಜುಸಾಮನಿಗಮಧರವಗೋಚರ ಮುನಿಗಣ ಸುಮನಗೇಹನಂತ ಸುಗುಣಾನಂದ ಪೂರ್ಣ 6ಮಧು ಕೈಟಭ ಮದನೇಮಿ ಜಲಂಧರಕಂಬುಸದನಖಳಾಬುಧಿ ಕುಲಾಂತಕ ದ್ವಿಜೋಪಕಾರಿ 7ಋಷಿ ಹನುಮ ರಸಗಾಯನ ತೋಷಭರಿತ ಹಾಸವದನಪ್ರಸನ್ನ ವೆಂಕಟೇಶ ನಮೋ ಸ್ವಾಮಿ 8
--------------
ಪ್ರಸನ್ನವೆಂಕಟದಾಸರು
ಪಾಲಿಸೆಮ್ಮ ಮುದ್ದು ಶಾರದೆ-ಎನ್ನ-ನಾಲಗೆಯಲಿ ನಿಲ್ಲಬಾರದೆ ಪಲೋಲಲೋಚನೆ ತಾಯೆ | ನಿರುತ ನಂಬಿದೆ ನಿನ್ನ ಅ.ಪಅಕ್ಷರಕ್ಷರ ವಿವೇಕವ-ನಿಮ್ಮ ಕುಕ್ಷಿಯೊಳೀರೇಳು ಲೋಕವ |ಸಾಕ್ಷಾದ್ರೂಪದಿಂದ ಒಳಿದು ರಕ್ಷಿಸು ತಾಯೆ 1ಶೃಂಗಾರಪುರ ನೆಲೆವಾಸಿನಿ-ದೇವಿ-ಸಂಗೀತ ಗಾನ ವಿಲಾಸಿನಿ |ಭೃಂಗಕುಂತಳೆ ತಾಯೆ-ಭಳಿರೇ ಬ್ರಹ್ಮನ ರಾಣಿ 2ಸರ್ವಾಲಂಕಾರಮಯ ಮೂರುತಿ-ನಿನ್ನಚರಣವ ಸ್ತುತಿಸುವೆ ಕೀರುತಿ |ವರದಪುರಂದರವಿಠಲನ ಸ್ತುತಿಸುತ3
--------------
ಪುರಂದರದಾಸರು